POLICE BHAVAN KALABURAGI

POLICE BHAVAN KALABURAGI

28 March 2012

GULBARGA DIST REPORTED CRIMES

ಅಪಘಾತ ಪ್ರಕರಣ:

ಸೇಡಂ ಪೊಲೀಸ ಠಾಣೆ: ಶ್ರೀ. ಶಿವಾನಂದ ತಂದೆ ಸಾಯಬಣ್ಣ ಹೊಸಮನಿ ಸಾ:ಕಲಕಂಬ ಗ್ರಾಮ, ತಾ:ಸೇಡಂ ರವರು ನಾವು ಮೂರು ಜನ ಅಣ್ಣ-ತಮ್ಮಂದಿರಿದ್ದು, ನನ್ನ ತಮ್ಮನಾದ ಲಿಂಗಾನಂದ @ ವಿಜಯಕುಮಾರ ತಂದೆ ಸಾಬಣ್ಣ ಹೊಸಮನಿ ವಯ:33 ವರ್ಷ, ದಿನಾಂಕ:27-03-2012 ರಂದು ಬೆಳಿಗ್ಗೆ 8-00 ಗಂಟೆಗೆ ವಿ.ಸಿ.ಎಫ್. ಫ್ಯಾಕ್ಟರಿ ಕೆಲಸಕ್ಕೆ ಮೋಟಾರ ಸೈಕಲ ನಂಬರ ಕೆಎ-26.ಜೆ-6740 ನೇದ್ದರ ಮೇಲೆ ಹೋಗಿರುತ್ತಾನೆ. ದಿನಾಂಕ:28-03-2012 ರಂದು ಬೆಳಿಗ್ಗೆ 7-30 ಗಂಟೆಯ ಸುಮಾರಿಗೆ ನನ್ನ ತಮ್ಮ ದೇವಾನಂದ ಹೊಸಮನಿ ಮತ್ತು ಊರಿನ ಜನರು ಒಂದು ಆಟೋ ಟಂಟಂ ದಲ್ಲಿ ಕುಳಿತುಕೊಂಡು ಸೇಡಂಕ್ಕೆ ಹೋಗುವಾಗ ಸೇಡಂ-ಯಾದಗಿರಿ ಮುಖ್ಯ ರಸ್ತೆಯ ಮೇಲೆ ರಾಮಲಿಂಗ್ ಕುರಬುರ ರವರ ಹೊಲದ ಬಾಂದಾರಿಯಲ್ಲಿ ರಸ್ತೆಯ ಎಡಗಡೆ ನಮ್ಮ ಮೋಟಾರು ಸೈಕಲ್ ನೋಡಿ ಗುರುತಿಸಿ ಅಲ್ಲಿಬಿದ್ದ ವ್ಯಕ್ತಿಗೆ ನೋಡಲಾಗಿ ಅವನು ನನ್ನ ತಮ್ಮ ಲಿಂಗಾನಂದ @ ವಿಜಯಕುಮಾರ ಇವನ ತಲೆಯ ಬಲಗಡೆ ಹಾಗೂ ಬಲಗಾಲ ಮೊಳಕಾಲಿಗೆ ಭಾರಿ ರಕ್ತಗಾಯವಾಗಿ ರಸ್ತೆ ಅಪಘಾತ ಹೊಂದಿ ಸ್ಥಳದಲ್ಲಿ ಮೃತಪಟ್ಟು ಬಿದ್ದಿದ್ದು. ಯಾರೋ ತಮ್ಮ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿ ನನ್ನ ತಮ್ಮನ ಮೋಟಾರ ಸೈಕಲ್ ಗೆ ಡಿಕ್ಕಿ ಪಡಿಸಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:67/2012 ಕಲಂ. 279, 304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ. ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ವರದಕ್ಷಿಣೆ ಕಿರುಕುಳ ಪ್ರಕರಣ:

ಮಹಿಳಾ ಪೊಲೀಸ ಠಾಣೆ:ಶ್ರೀಮತಿ ರೀಜವಾನ ಬೇಗಂ ಗಂಡ ಸಲೀಮ್ @ ಜವೀದ ವ: 20 ವರ್ಷ ಉ: ಎಕ್ಬಾಲ ಕಾಲೋನಿ ಎಮ್.ಎಸ್.ಕೆ ಮಿಲ್ ಗುಲಬರ್ಗಾರವರು ನನ್ನ ಮದುವೆಯು ಸಲಿಂ @ ಜಾವೀದ ವ: 30 ವರ್ಷ ಉ: ಆಟೋ ಚಾಲಕ ಸಾ||ಯಕಬಾಲ ಕಾಲೋನಿ ಗುಲಬರ್ಗಾ ಇತನ ಜೋತೆ ಧರ್ಮ ಸಂಪ್ರದಾಯದಂತೆ ಮದುವೆಯಾಗಿದ್ದು, ಮದುವೆಯಾದಾಗಿನಿಂದ ನನ್ನ ಗಂಡನು ಕುಡಿದು ಬಂದು ಹೊಡೆ ಬಡೆ ಮಾಡಿ ತವರು ಮನೆಯಿಂದ ಬಂಗಾರ ತೆಗೆದುಕೊಂಡು ಬಾ ಅಂತಾ ಹಿಂಸೆ ನೀಡುತ್ತಿರುತ್ತಾನೆ, ದಿನಾಂಕ:07.03.2012 ರಂದು ಸಾಯಂಕಾಲ 6-00 ಗಂಟೆಯ ಸುಮಾರಿಗೆ ನನ್ನ ಗಂಡ , ಅತ್ತೆಯಾದ ಅಮೀರಾಬಿ. ಮಾವನಾದ, ಬಾಸುಮಿಯಾ, ಮೈದುನರಾದ ವಾಜೀದ, ಸಾಜೀದ, ನಾದಿನಿಯರಾದ ರೇಷ್ಮಾ , ಆಸ್ಮಾ ಇವರೆಲ್ಲರೂ ಸೇರಿ ಹೊಡೆ ಬಡೆ ಮಾಡಿ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 28/2012 ಕಲಂ. 498(ಎ), 506, ಸಂ. 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. .

GULBARGA DIST

ಆರು (6) ಜನ ಸರಗಳ್ಳರ ಬಂಧನ, ಸುಮಾರು 10 ಲಕ್ಷ ರೂ ಮೌಲ್ಯದ ಬಂಗಾರದ ಆಭರಣಗಳು, ಹಾಗೂ ಮೋಟಾರ ಸೈಕಲಗಳ ವಶ .
ಗುಲಬರ್ಗಾ ನಗರದಲ್ಲಿ ಘಟಿಸಿದ ಸ್ವತ್ತಿನ ಪ್ರಕರಣಗಳಲ್ಲಿನ ಆರೋಪಿತ ಪತ್ತೆ ಕುರಿತು ಮಾನ್ಯ ಶ್ರೀ ಮಹಮ್ಮದ ವಜೀರ ಅಹ್ಮದ ಐ.ಪಿ.ಎಸ್ ಐ.ಜಿ.ಪಿ ಸಾಹೇಬರು ಈಶಾನ್ಯ ವಲಯ ಗುಲಬರ್ಗಾ ಹಾಗೂ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ. ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಶ್ರೀ ಭೂಷಣ ಭೋರಸೆ ಐಪಿಎಸ್ ಎ.ಎಸ್.ಪಿ ಗುಲಬರ್ಗಾ, ಶ್ರೀ ಎ.ಡಿ ಬಸಣ್ಣನವರ ಡಿ.ಎಸ್.ಪಿ ರವರ ಮಾರ್ಗದರ್ಶನದಲ್ಲಿ ನಿನ್ನೆ ದಿನಾಂಕ 27/3/2012 ರಂದು ಮದ್ಯಾಹ್ನ ವಿಶೇಷ ತನಿಖಾ ತಂಡದ ಆಧಿಕಾರಿಗಳಾದ ಶ್ರೀ ಚಂದ್ರಶೇಖರ ಬಿ.ಪಿ, ಡಿಜಿ ರಾಜಣ್ಣ, ಜೆ.ಹೆಚ್. ಇನಾಮದಾರ, ವಿಜಯ ಅಂಚಿ, ಟಿ.ಹೆಚ್. ಕರಿಕಲ್, ಪಂಡಿತ ಸಗರ, ಸಂಜೀವಕುಮಾರ, ಪ್ರದೀಪ ಕೊಳ್ಳಾ , ಮಾಣಿಕಸಿಂಗ ರಾಠೋಡ ಹಾಗೂ ಸಿಬ್ಬಂದಿ ಜನರು ಖಚಿತ ಭಾತ್ಮಿ ಮೇರೆಗೆ ನಗರದ ವಿರೇಂದ್ರ ಪಾಟೀಲ ಬಡಾವಣೆ ಜಿಡಿಎ ಕಾಲೋನಿ ಹತ್ತಿರ ಸಂಶಯಾಸ್ಪದವಾಗಿ ಮೋಟಾರ ಸೈಕಲಗಳ ಮೇಲೆ ತಿರುಗಾಡುತ್ತಿದ್ದವರ ಮೇಲೆ ಮಿಂಚಿನ ದಾಳಿ ಮಾಡಿ ಕುಖ್ಯಾತ ಸರಗಳ್ಳತನ ಮಾಡುವ ಜನರಾದ ಅರುಣ ತಂದೆ ಮೊಹನ ಆಡೆ ವಃ 24 ವರ್ಷ ಸಾ ಪಿಲ್ಟರ ಬೇಡ್ ತಾಂಡಾ ಗುಲಬರ್ಗಾ, ಲಕ್ಷ್ಮಿಕಾಂತ @ ಚಿನ್ಯಾ ತಂದೆ ರಮೇಶ ಕೌರವ ವಃ 20 ವರ್ಷ ಸಾ ಗಾಜಿಪುರ ಗುಲಬರ್ಗಾ, ಶರಣು ತಂದೆ ಶ್ರೀಮಂತ ತಳವಾಡ ವಃ 21 ವರ್ಷ ಸಾ ಮಕ್ತಮಪುರ ಗುಲಬರ್ಗಾ, ಮಲ್ಲು ತಂದೆ ಶಿವಶರಣಪ್ಪಾ ಉಪ್ಪಾರ ವಃ 18 ವರ್ಷ ಉಃ ವಿದ್ಯಾರ್ಥಿ ಸಾ ಗಾಜಿಪುರ ಗುಲಬರ್ಗಾ, ವಿಕ್ರಮ ತಂದೆ ಬಾನು ಪ್ರತಾಪಸಿಂಗ ವಃ 22 ವರ್ಷ ಸಾ ಗಾಜಿಪುರ ಗುಲಬರ್ಗಾ, ಚೇತನ್ ತಂದೆ ಮರಳಿಸಿದ್ದ ಜೇವರಗಿ ವಃ 19 ವರ್ಷ ಸಾ ಗಾಜಿಪುರ ಗುಲಬರ್ಗಾರವರನ್ನು ಬಂಧಿಸಿ ತನಿಖೆಗೆ ಒಳಪಡಿಸಿದಾಗ ಸದರಿಯವರು ಈಗ ಸುಮಾರು ಒಂದು ವರ್ಷದಿಂದ ಗುಲಬರ್ಗಾ ನಗರದ ಜಿಡಿಎ ಕಾಲೋನಿ, ಜಯ ನಗರ, ಕುಸನೂರ, ವೆಂಕಟೇಶ ನಗರ, ಜಗಜೀವನರಾಮ ನಗರ, ಬನಶಂಕರಿ ಕಾಲೋನಿ, ಕೊತಂಬರಿ ಲೇಔಟ, ರಾಘವೇಂದ್ರ ನಗರ, ವಿವೇಕಾನಂದ ನಗರ, ಮುಂತಾದ ಕಡೆ ಸರಗಳ್ಳತನ ಮತ್ತು ಸುಲಿಗೆ ಮಾಡಿರುವ ಬಗ್ಗೆ ತನಿಖೆ ಕಾಲಕ್ಕೆ ಒಪ್ಪಿಕೊಂಡಿರುತ್ತಾರೆ. ಆರೋಪಿತರ ವಶದಿಂದ ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳು, ಮೊಬಾಯಿಲ್ ಫೋನಗಳು, ಮತ್ತು ಸರಗಳ್ಳತನ ಮಾಡಲು ಬಳಸುತ್ತಿದ್ದ 3 ಮೂರು ಮೊಟಾರ ಸೈಕಲಗಳು ( 2 ಬಜಾಜ ಪಲ್ಸರ & ಒಂದು ಎಪ್.ಜೆಡ್) ಜಪ್ತು ಪಡಿಸಿಕೊಂಡು ವೈಜ್ಞಾನಿಕ ರೀತಿಯಲ್ಲಿ ತನಿಖೆ ಮುಂದುವರಿಸಿರುತ್ತಾರೆ. ಆರೋಪಿತರು ನಗರದ ಬೇರೆ ಬೇರೆ ಸ್ಥಳಗಳಲ್ಲಿ ಇನ್ನೂ ಸುಲಿಗೆ ಮಾಡಿರಬಹುದಾದ ಸಂಶಯ ಮೇರೆಗೆ ತನಿಖೆ ಮುಂದುವರೆದಿರುತ್ತದೆ. ಪರಾರಿಯಾಗಿರುವ ಇನ್ನೂ ಕೇಲವು ಆರೋಪಿತರ ತಪಾಸಣೆ ಕಾರ್ಯ ಮುಂದುವರೆದಿದೆ, ಮಹತ್ವದ ಸರಗಳ್ಳತನದ ಪ್ರಕರಣಗಳನ್ನು ಭೇಧಿಸಿದ ವಿಶೇಷ ತನಿಖಾ ತಂಡದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಿ ಇಲಾಖಾ ವತಿಯಿಂದ ಸೂಕ್ತ ಬಹುಮಾನವನ್ನು ಘೋಷಿಸಲಾಗಿದೆ.

Gulbarga Dist Reported Crimes

ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಅಮರನಾಥ ತಂದೆ ಗೋಪಾಲರಾವ್ ಸಾ: ಅಂಬೇಡ್ಕರ್ ಚೌಕ ಹತ್ತಿರ ಚಿಂಚೊಳ್ಳಿ ಹಾವ ಆರ್. ಎಸ್. ಪಪ್ಪು ವಕೀಲರ ಮನೆಯಲ್ಲಿ ಬಾಡಿಗೆ ನಾವು ಯುಗಾದಿ ಹಬ್ಬದ ಪ್ರಯುಕ್ತ ದಿ: 22/03/2012 ರಂದು ರೂಮಿನ ಕೀಲಿ ಹಾಕಿಕೊಂಡು ಊರಿಗೆ ಹೋಗಿದ್ದು, ನನ್ನ ಹಾಗೇಯೇ ನನ್ನ ಪಕ್ಕದ ರೂಮಿನಲ್ಲಿ ವಾಸವಾಗಿರುವ ಅವಿನಾಶ ತಂದೆ ಅಶೋಕ ಹೊಸಮನಿ ಇವರು ಸಹ ತಮ್ಮ ರೂಮಿಗೆ ಕೀಲಿ ಹಾಕಿಕೊಂಡು ದಿ : 22/03/2012 ರಂದು ರೂಮಿಗೆ ಕೀಲಿ ಹಾಕಿಕೊಂಡು ಊರಿಗೆ ಹೋಗಿದ್ದು ದಿ: 27/03/2012 ರಂದು ಮರಳಿ ಬಂದು ನೋಡಲಾಗಿ, ರೂಮಿನಲ್ಲಿದ್ದ ತೂಷಿಬಾ ಕಂಪನಿಯ ಲ್ಯಾಪಟಾಪ್ ಮತ್ತು ಸ್ಯಾಮಸಂಗ್ ಕ್ಯಾಮರಾ ಅ.ಕಿ. 34,000=00 ರೂ ಹಾಗೂ ಪಕ್ಕದ ರೂಮಿನಲ್ಲಿ ಒಂದು ಮೊಬೈಲ್ ಹಾಗೂ ಪ್ರಮೋಶನಲ್ ಮಟಿರಿಯಲ್ಸ ನೇದ್ದವುಗಳನ್ನು ರಾತ್ರಿ ವೇಳೆಯಲ್ಲಿ ಯಾರೊ ಕಳ್ಳರು ರೂಮಿಗೆ ಹಾಕಿದ ಕೀಲಿ ಮುರಿದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 35/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹುಡಗ ಮತ್ತು ಹೆಣ್ಣು ಮಗಳು ಕಾಣೆಯಾದ ಬಗ್ಗೆ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಹರಿರಾಮ ತಂದೆ ಶಂಕರು ಚವ್ಹಾಣ ಉ: ದೂರದರ್ಶನ ಕೇಂದ್ರ ಗುಲಬರ್ಗಾದಲ್ಲಿ ಸರ್ಕಾರಿ ನೌಕರ ಸಾಉದನೂರ ತಾಂಡಾ ತಾ:ಜಿ: ಗುಲಬರ್ಗಾ ಹಾ:ವ: ದೂರದರ್ಶನ ಕೇಂದ್ರ ವಸತಿ ಗೃಹ ಹುಮನಾಬಾದ ರಸ್ತೆ ಗುಲಬರ್ಗಾರವರು ನಮ್ಮ ದೂರದರ್ಶನ ಕೇಂದ್ರ ಕ್ವಾರ್ಟರ್ಸ ವಸತಿ ಗೃಹದಲ್ಲಿದ್ದ ನನ್ನ ಮಗಳು ಮೊಮ್ಮಕ್ಕಳು ಬಿಟ್ಟು ಮೈಯಲ್ಲಿ ಆರಾಮ ಇಲ್ಲದ ಕಾರಣ ಸೋಲಾಪುರಕ್ಕೆ ತೋರಿಸಿಕೊಂಡು ಬರಲು ಹೋಗಿದ್ದು, ರಾತ್ರಿ 9-30 ಗಂಟೆ ಸುಮಾರಿಗೆ ಮನೆಗೆ ಬಂದು ನೋಡಲಾಗಿ ಮನೆಯಲ್ಲಿ ಮಗಳು ವಿದ್ಯಾವತಿ ಗಂಡ ಪ್ರಕಾಶ ರಾಠೋಡ, ವ 28 ವರ್ಷ, ಗಣೇಶ ತಂದೆ ಪ್ರಕಾಶ ರಾಠೋಡ 6 ವರ್ಷ,ಕಾರ್ತಿಕ ತಂದೆ ಪ್ರಕಾಶ ರಾಠೋಡ 4 ವರ್ಷ ಸಾ: ಎಲ್ಲರೂ ಅರ್ಜುಣಗಿ ತಾ: ಆಫಜಲಪೂರ ಹಾ:ವ: ದೂರದರ್ಶನ ಕೇಂದ್ರ ವಸತಿ ಗೃಹ ಹುಮನಾಬಾದ ರಸ್ತೆ ಗುಲಬರ್ಗಾರವರು ಇರಲ್ಲಿಲ್ಲ, ಅಕ್ಕ ಪಕ್ಕ ಮತ್ತು ಸಂಬಂಧಿಕರಲ್ಲಿ ಹುಡುಕಾಡಿ ವಿಚಾರಿಸಲು ಯಾವುದೇ ಸುಳಿವು ಸಿಕ್ಕಿರುವುದಿಲ್ಲಾ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 97/2012 ಕಲಂ ಹೆಣ್ಣುಮಗಳು ಮತ್ತು ಹುಡುಗ ಕಾಣೆ ಬಗ್ಗೆ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ :
ಶ್ರೀ ಮುಫೀರ ಮಿರ್ಜಾ ತಂದೆ ಹಸೀರ ಮಿರ್ಜಾ ವಯಾ:22 ವರ್ಷ ಉ:ವಿಧ್ಯಾರ್ಥಿ ಸಾ: ಸಿಂದ್ವ ತಾ:ಸಿಂದ್ವ ಜಿಲ್ಲಾ: ಬರವಾನಿ ರಾಜ್ಯಮಧ್ಯ ಪ್ರದೇಶ ರವರು ದಿನಾಂಕ 27-03-12 ರಂದು ಸಾಯಂಕಾಲ 5=30 ಗಂಟೆಯ ಸುಮಾರಿಗೆ ಸೆಂಟರ ಕಾಮತ ದಿಂದ ಆನಂದ ಹೊಟೇಲ ಕ್ರಾಸ್ ರೋಡಿನಲ್ಲಿ ಮೇಲೆ ಮೋಟಾರ ಸೈಕಲ್ ನಂಬರ: ಕೆಎ 32 ಆರ್ 2832 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಭಾರಿಗಾಯ ಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 37/2012 ಕಲಂ 279, 338 ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮುದೋಳ ಠಾಣೆ:
ಮಹ್ಮದ ಇಬ್ರಾಹಿಂ ತಂದೆ ಬಾಸುಮಿಯಾ, ಮಹ್ಮದ ಯೂಸುಫ್ ತಂದೆ ಅಬ್ದುಲ್ ನಬಿ, ಮಹ್ಮದ ಜಿಲಾನಿ ತಂದೆ ಪೀರ ಅಹ್ಮದ, ಅಬ್ದುಲ್ ವಾಹಿದ್ ತಂದೆ ಅಬ್ದುಲ್ ಸತ್ತರ, ಮಹ್ಮದ ಅಬ್ದುಲ್ ತಂದೆ ಬಾಸುಮಿಯಾ ಮತ್ತು ನಾನು ಕೂಡಿಕೊಂಡು ದಿನಾಂಕ: 27-03-2012 ರಂದು ಸಾಯಂಕಾಲ 4-30 ಗಂಟೆಗೆ ಯಾನಾಗುಂದಿಯಿಂದ ಮೇದಕ ಗ್ರಾಮದ ಕಡೆಗೆ ಹೋಗುತ್ತಿದ್ದಾಗ ಹಿಂದಿನಿಂದ ಟಾಟಾ ಇಂಡಿಕಾ ಕಾರ ನಂ. ಎಪಿ-09, ಬಿಟಿ-7691 ನೇದ್ದರ ಚಾಲಕನಾದ ರಾಮರೆಡ್ಡಿ ತಂದೆ ಯಾದರೆಡ್ಡಿ ಈತನು ತನ್ನ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿಕೊಂಡು ಬಂದು ನಡೆದುಕೊಂಡು ಹೊರಟಿದ್ದ ಮಹ್ಮದ ಇಬ್ರಾಹಿಂ ತಂದೆ ಬಾಸುಮಿಯಾ ಈತನಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಪಡಿಸಿದ ಪರಿಣಾಂ ಮಹ್ಮದ ಇಬ್ರಾಹಿಂಗೆ ಭಾರಿ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಕಾರ ಚಾಲಕನು ಕಾರನ್ನು ನಿಲ್ಲಿಸಿ ಓಡಿಹೋಗಿರುತ್ತಾನೆ ಅಂತಾ ಮಹ್ಮದ ಇಸ್ಮಾಯಿಲ್ ತಂದೆ ಅಬ್ದುಲ್ ನಬಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 31/2012 ಕಲಂ: 279, 304(ಎ) ಐಪಿಸಿ ಸಂ. 187 ಐ.ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.