POLICE BHAVAN KALABURAGI

POLICE BHAVAN KALABURAGI

22 July 2014

Gulbarga District Reported Crimes

ಹಲ್ಲೆ ಪ್ರಕರಣ:
ಕಮಲಾಪೂರ ಠಾಣೆ : ಶ್ರೀ ಅಂಬರಾಯ ತಂದೆ ಗುರುಣ್ಣ ಗಂಡೂರೆ ಸಾ; ನವನಿಹಾಳ ಇವರು ದಿನಾಂಕ 20-07-2014 ರಂದು ಸಾಯಂಕಾಲ 07-30 ಗಂಟೆಯ ಸುಮಾರಿಗೆ ಪಿರ್ಯಾದಿ  ಮತ್ತು ಪಿರ್ಯಾದಿಯ ಅಣ್ಣ ಅಣವೀರಪ್ಪಾ ಇವರು ಮನೆಯಲ್ಲಿ ಇದ್ದಾಗ ಶಿವಾಜಿ ಜಗದಾಳೆ,ವಿಠಲ ತಂದೆ ಸಿದ್ಧಭಾ, ಅಪ್ಪಣ್ಣ ತಂದೆಸಿದ್ದಭಾ, ಪಿಂಟು ತಂದೆ ಅಪ್ಪಣ್ಣ, ಅಶೋಕ ತಂದೆ ಶಿವಾಜಿ,  ಇವರು ಪಿರ್ಯದಿ ಮನೆಗೆ ಬಂದು ಪಿರ್ಯಾದಿಯ ಅಣ್ಣನಿಗೆ ಅವಾಚ್ಯ ಶಭ್ದಗಳಿಂದ ಬೈದ್ದು, ತಡೆದು ನಿಲ್ಲಿಸಿ, ಬಡಿಗೆಯಿಂದ,ಕಲ್ಲಿನಿಂದ ಕೈಯಿಂದ ಹೊಡೆ ಬಡೆ ಮಾಡಿ ,ಹೊಟ್ಟೆಯ ಮೇಲೆ ಒದ್ದು, ರಕ್ತಗಾಯಮತ್ತು ಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿ  ಮೊಸ ಮಾಡಿದ ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ನಾಗಪ್ಪ ತಂದೆ ಮಾಳಪ್ಪ ಪೂಜಾರಿ  ಆರ್.ಪಿ.ಎಫ್. ನಲ್ಲಿ ಎ.ಎಸ್.ಐ ಸಾ:ಅಂಬಿಕಾ ನಗರ ಗುಲಬರ್ಗಾ ರವರು ಪುಂಡಲೀಕ ಎಸ್. ಸಡಕಿನ್ ಇವರನ್ನು ತಂದು ಹಾಜರುಪಡಿ ಸಿದ್ದು ಶ್ರೀ ಭಾಸ್ಕರರಾವ ಎ.ಸಿ.ಎಮ್/ಎಸ್.ಯು.ಆರ್. ಗುಲಬರ್ಗಾ ರವರು ಒಬ್ಬ ಮನುಷ್ಯ ಪುಂಡಲೀಕ ಎಸ್. ಸಡಕಿನ್ ಶೀರಸ್ತೆದಾರ ಪರಮನೆಂಟ್ ಲೋಕ ಅದಾಲತ ಗುಲಬರ್ಗಾ ಇವನು ಸ್ಪೇಷಲ್ ಜುಡಿಷಿಯ ಲ್ ಮ್ಯಾಜಿಸ್ಟ್ರೇಟ್ ರೈಲ್ವೇ ಗುಲಬರ್ಗಾ ಇವರ ರೌಂಡ್ ಸೀಲ್ ಮತ್ತು ಪರ್ಸನಲ್ ಸೀಲ್ ದುರುಪಯೋಗ ಮಾಡಿ ಅಥಾರೈಸ್ ರೈಲ್ವೇ ಟೀಕೆಟನ್ನು ಎಮರ್ಜೆನ್ಸಿ ಖೋಟಾ (ವಿ.ಐ.ಪಿ ಖೋಟಾ) ದಿಂದ ಬೇರೆಯವರ ಹೆಸರಿನ ಮೇಲೆ ಮ್ಯಾಜಿಸ್ಟ್ರೇಟ್ ಅಂತಾ ಖೋಟ್ಟಿ ದಾಖಲೆಗಳನ್ನು ಸೃಷ್ಟಿಸಿ ರಿಜರ್ವೆಷನ್ ಮಾಡಿಸಿಕೊಂಡು ದುರುಪಯೋಗ ಮಾಡಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.