POLICE BHAVAN KALABURAGI

POLICE BHAVAN KALABURAGI

30 April 2017

KALABURAGI DISTRICT REPORTED CRIMES

ಕಿರುಕುಳ ಪ್ರಕರಣ:

ಮಹಿಳಾ ಪೊಲೀಸ ಠಾಣೆ : ದಿನಾಂಕ: 29/04/17 ರಂದು ಶ್ರೀಮತಿ ಅಶ್ವಿತಾ ಗಂಡ ಅಮೀತ ಕುಮಾರ ಸಾ: ನವಜೀವನ ನಗರ ಪಿ.&.ಟಿ ಕ್ವಾರ್ಟಸ ಕಲಬುರಗಿ ಇವರು ಠಾಣೆಗೆ ಹಾಜರಾಗಿ ತನಗೆ 2 ವರ್ಷದ ಹಿಂದೆ ಕಲಬುರಗಿಯ ಅಮೀತ ಕುಮಾರ ಇತನೊಂದಿಗೆ ಮದುವೆಯಾಗಿದ್ದು ಮದುವೆ ವರನಿಗೆ ಮದುವೆಯಲ್ಲಿ 15 ಲಕ್ಷ ರೂಪಾಯಿ 20 ತೊಲೆ ಬಂಗಾರ 1 ಕೆ.ಜಿ ಬೆಳ್ಳಿ ಕೊಟ್ಟಿದ್ದು. ಸದ್ಯ ನನಗೆ ಈಗ ಒಂದು ಗಂಡು ಮಗುವಿದ್ದು.  ನನ್ನ ಗಂಡ ಅಮೀತ ಕುಮಾರ ಫೈನಾನ್ಸ ವ್ಯವಹಾರ ಮಾಡಿಕೊಂಡಿದ್ದು ಮದುವೆಯಾದ 1 ತಿಂಗಳ ನಂತರ ನನ್ನ ಗಂಡ ಅಮಿತಕುಮಾರ , ಅತ್ತೆ ಜಯಶ್ರೀ,  ನಾದಿನಿ ಅಮೃತಾ ಇವರು ನನಗೆ ಇನ್ನು 5 ಲಕ್ಷ ರೂಪಾಯಿ 10 ತೊಲೆ ಬಂಗಾರ ನಿನ್ನ ತವರು ಮನೆಯಿಂದ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಡುತ್ತಾ ಸಣ್ಣ ಪುಣ್ಣ ವಿಷಯಕ್ಕೆ ಜಗಳ ತೆಗೆದು ಹೊಡೆ ಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡುತ್ತಿದ್ದು ಈ ವಿಷಯವನ್ನು ನಾನು ನಮ್ಮ ತಂದೆ ತಾಯಿಗೆ ತಿಳಿಸಿದಾಗ ಅವರು ಅನುಕೂಲವಾದಾಗ ಉಳಿದ ವರದಕ್ಷಿಣೆ ಹಣ ಬಂಗಾರ ತಂದು ಕೊಡುತ್ತೇವೆ ಅಂತಾ ಹೇಳಿರುತ್ತಾರೆ ಆದರೋ ನನ್ನ ಗಂಡ ಅತ್ತೆ , ನಾದಿ ಇವರು ನನಗೆ ಒಂದು ಗತಿ ಕಾಣುಸುತ್ತೇವೆ ನಿನ್ನ ಜೀವ ತೆಗೆದು ಇನ್ನೊಂದು ಮದುವೆ ಮಾಡುತ್ತೆವೆ ಅಂತಾ ಹೆದರಿಸಿರುತ್ತಾ. ದಿನಾಂಕ: 28/04/2017 ರಂದು  ನನ್ನ ಗಂಡ, ಅತ್ತೆ, ನಾದಿನಿ ಜಗಳ ಮಾಡಿ ಕೈಯಿಂದ ಹೊಡೆ ಬಡೆ ಮಾಡಿ ಊಟ ಕೊಡದೆ ಮನೆಯಿಂದ ಹೊರಗೆ ಹಾಕಿದ್ದು ನಾನು ಈ ಬಗ್ಗೆ ನಮ್ಮ ತಂದೆ ತಾಯಿಗೆ ತಿಳಿಸಲು ಅವರು ದಿನಾಂಕ: 29/04/2017 ರಂದು ನಮ್ಮ ಮನೆಗೆ ಬಂದು ನನ್ನ ಗಂಡ ಅತ್ತೆ ನಾದಿನಿಯವರಿಗೆ ಅನುಕೂಲವಾದಾಗ ನಿಮ್ಮ ವರದಕ್ಷಿಣೆ ಹಣ ತಂದು ಕೊಡುತ್ತೇವೆ ಅಂತಾ ಹೇಳಲು ಹೊದಾಗ ಈ ಮೂರು ಜನರು ಕೂಡಿ ನಮ್ಮ ತಂದೆ ತಾಯಿಯವರಿಗೆ ಹೊಡೆ ಬಡೆ ಮಾಡಿ ಕಾಲಿನಿಂದ ಒದ್ದು ಗುಪ್ತ ಪೆಟ್ಟುಪಡಿಸಿರುತ್ತಾರೆ ನಮ್ಮ ತಂದೆ ತಾಯಿಯೊಂದಿಗೆ ಬಂದವರು ಜಗಳವನ್ನು ಬಿಡಿಸಿರುತ್ತಾರೆ. ವರದಕ್ಷಿಣೆ ಹಣ ಬಂಗಾರ ಕೊಟ್ಟರೆ ಸರಿ ಇಲ್ಲವಾದರೆ ನಿಮ್ಮ ಮಗಳಿಗೆ ಕರೆದುಕೊಂಡು ಹೋಗಿ ಇಲ್ಲದ್ದಿದರೆ ಕೊಲೆ ಮಾಡುವುದಾಗ ಜೀವದ ಬೆದರಿಕೆ ಹಾಕರಿತ್ತಾರೆ. ಕಾರಣ ನನ್ನ ತವರು ಮನೆಯಿಂದ ವರದಕ್ಷಿಣೆ ಹಣ ತರುವಂತೆ ಹೊಡೆ ಬಡೆ ಮಾಡಿ ಕಿರುಕುಳ ನೀಡುತ್ತಿರುವರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ

29 April 2017

KALABURAGI DIST REPORTED CRIMES.


ಸೇಡಂ ಪೊಲೀಸ್ ಠಾಣೆ: ದಿನಾಂಕ:29-04-2017 ರಂದು ಮುಂಜಾನೆ 0430 ಎ.ಎಮ್.ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಯಲ್ಲಿ ಮಾನ್ಯ ಪಿ.ಎಸ್.ಐ ಸಾಹೇಬರು ಪಡೆದುಕೊಂಡ ಫಿರ್ಯಾದಿ ಹೇಳಿಕೆಯನ್ನು ಮುಂದಿನ ಕ್ರಮಕ್ಕಾಗಿ ಹೆಚ್.ಜಿ-567 ಶಿವಾನಂದ ಇವರು ಠಾಣೆಗೆ ತಂದು ನನ್ನ ಮುಂದೆ ಹಾಜರುಪಡಿಸಿದ್ದು, ಫಿರ್ಯಾದಿ, ಶ್ರೀ. ಸುಭಾಸ ತಂದೆ ಲಕ್ಷ್ಮಣ ಮದ್ದೂರ, ವಯ:30 ವರ್ಷ, ಜಾತಿ:ಮಾದಿಗ, ಉ:ಒಕ್ಕಲುತನ, ಸಾ:ಹಾಬಾಳ(ಟಿ), ತಾ:ಸೇಡಂ ಇವರ ಹೇಳಿಕೆ ಸಾರಂಶವೇನೆಂದರೆ, ಇಂದು ದಿನಾಂಕ:28-04-2017 ರಂದು ಮದ್ಯಾಹ್ನ ನನ್ನ ಅಣ್ಣನಾದ ಸಿದ್ದಾರ್ಥ ಮತ್ತು ನಮ್ಮ ಅಣ್ಣ-ತಮ್ಮಕಿಯ ಅಣ್ಣನಾದ ಉದಯ ಇಬ್ಬರೂ ಕೂಡಿಕೊಂಡು ಖಾಸಗಿ ಕೆಲಸಕ್ಕೆಂದು ಮೊಟಾರು ಸೈಕಲ್ ನಂ-KA32EM9777 ನೇದ್ದರ ಮೇಲೆ ಕಲಬುರಗಿಗೆ ಹೋಗಿದ್ದರು. ರಾತ್ರಿ 09-30 ಗಂಟೆಗೆ ಯಾರೋ ನನಗೆ ಫೋನ ಮಾಡಿ ತಿಳಿಸಿದ್ದೇನೆಂದರೆ, ಸಿದ್ದಾರ್ಥ ಮತ್ತು ಉದಯ ಇವರು ಕಲಬುರಗಿಯಿಂದ ಸೇಡಂಕ್ಕೆ ಬರುವಾಗ ಕೊಂಕನಳ್ಳಿ ಗೇಟ್ ದಾಟಿದ ನಂತರ ರಸ್ತೆ ಅಪಘಾತವಾಗಿ ಭಾರಿ ಗಾಯಗಳಾಗಿವೆ ಅಂತ ತಿಳಿಸಿದಾಗ ನಾನು ಮತ್ತು ನಮ್ಮೂರ ಜನರು ಕೂಡಿಕೊಂಡು ಖಾಸಗಿ ವಾಹನ ಮಾಡಿಕೊಂಡು ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ಬಂದೇವು ಅಲ್ಲಿ ನೋಡಲಾಗಿ ಗಾಯಗೊಂಡ ಉದಯ ಹೇಳಿದ್ದೇನೆಂದರೆ, ನಾವು ಇಬ್ಬರೂ ಡಿವೂ KA32EM9777 ಮೊಟಾರು ಸೈಕಲ್ ಮೇಲೆ ಸೇಡಂಕ್ಕೆ ಬರುವಾಗ ಕೊಂಕನಳ್ಳಿ ಗೇಟ್ ದಾಟಿದ ನಂತರ ರಾತ್ರಿ 09-00 ಗಂಟೆಗೆ ನಮ್ಮ ಹಿಂದಿನಿಂದ ಲಾರಿ ನಂ-MH-25-U-3387 ನೇದ್ದರ ಚಾಲಕನು ಲಾರಿಯನ್ನು ಅತೀವೇಗದಿಂದ ಮತ್ತು ಅಲಕ್ಷ್ಯತನದಿಂದ ನಡೆಸುತ್ತಾ ಬಂದು ನಮ್ಮ ಮೊಟಾರು ಸೈಕಲಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದನು. ಆಗ ನಾವು ರೋಡಿನಲ್ಲಿ ಬಿದ್ದೇವು. ನನಗೆ ಬಲಗಾಗಲಿನ ಮೊಳಕಾಲಿನ ಕೆಳಗೆ ಕಾಲು ಮುರಿದು ಭಾರಿ ರಕ್ತಗಾಯವಾಯಿತು. ಸಿದ್ದಾರ್ಥ ಈತನಿಗೆ ಎದೆಗೆ ಹಾಗೂ ಬಲಗಾಲು ತೊಡೆಯಲ್ಲಿ ಕಾಲು ಮುರಿದು ಭಾರಿ ರಕ್ತಗಾಯವಾಯಿತು, ನಾವು ಏಳುವಷ್ಟರಲ್ಲಿ ಲಾರಿ ಚಾಲಕನು ಲಾರಿ ಬಿಟ್ಟು ಓಡಿ ಹೋದನು. ನಂತರ ನಾವು ಅಂಬುಲೇನ್ಸದಲ್ಲಿ ಬಂದು ಬಸವೇಶ್ವರ ಆಸ್ಪತ್ರೆಗೆ ಬಂದಿರುತ್ತೇವೆ ಅಂತ ತಿಳಿಸಿದನು ನನ್ನ ಅಣ್ಣ ಸಿದ್ದಾರ್ಥ ಇತನಿಗೆ ನೋಡಲಾಗಿ ಆತ ಮೃತಪಟ್ಟಿದ್ದನು.  ಅಪಘಾತ ಪಡಿಸಿ ಓಡಿ ಹೋದ ಲಾರಿ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ದೂರು ಅರ್ಜಿಯ ಸಾರಾಂಶದ ಮೇಲಿಂದ ನಾನು ಲಿಂಗಣ್ಣ ಹೆಚ್.ಸಿ-374 ಸೇಡಂ ಪೊಲೀಸ್ ಠಾಣೆ ಗುನ್ನೆ ನಂ-122/2017 ಕಲಂ 279, 338, 304() .ಪಿ.ಸಿ & 187 .ಎಮ್.ವಿ ಆಕ್ಟ್ ನೆದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು   ಬಗ್ಗೆ ವರದಿ.
C¥sÀd®¥ÀÆgÀ ¥Éưøï oÁuÉ:   ದಿನಾಂಕ 28-04-2017 ರಂದು 4:00 ಪಿ ಎಮ್ ಕ್ಕೆ ಮಾನ್ಯ ಪಿ.ಎಸ್. ಸಾಹೇಬರು ಒಬ್ಬ ಆರೋಪಿತನನ್ನು ಹಾಜರು ಪಡಿಸಿ ವರದಿ ಕೊಟ್ಟಿದ್ದು, ಸದರ ವರದಿಯ ಸಾರಾಂಶವೇನೆಂದರೆ ನಿನ್ನೆ ದಿನಾಂಕ 27-04-2017 ರಂದು ಸಾಯಂಕಾಲ 6:00 ಪಿ ಎಮ್ ಕ್ಕೆ ನಮ್ಮ ಠಾಣಾ ವ್ಯಾಪ್ತಿಯಲ್ಲಿ ಬರುವ ಮಣೂರ ಗ್ರಾಮದಲ್ಲಿ  ಅಂಬೇಡ್ಕರ ಜಯಂತಿ ಆಚರಣೆ ಮತ್ತು ಮೇರವಣಿಗೆ ಇದ್ದು, ಸದರಿ ಮೇರವಣಿಗೆ ಸಮಯದಲ್ಲಿ ಮಣೂರ ಗ್ರಾಮದ ಓಂಕಾರ ತಂದೆ ಪ್ರಕಾಶ ಠಕ್ಕಾ ಈತನು ಕೋಮು ಸೌಹಾರ್ದತೆ ಕದಡುವ ರೀತಿ ಜನರಿಗೆ ಪ್ರಚೋದನೆ ನೀಡುತ್ತಾ ತಿರುಗಾಡುತ್ತಿದ್ದನು. ಇವನಿಂದ  ಗ್ರಾಮದಲ್ಲಿ ಉದ್ದಿಗ್ನ ವಾತಾವರಣ ವುಂಟಾಗಿರುತ್ತದೆ. ಅದರಂತೆ ಇಂದು ದಿನಾಂಕ 28-04-2017 ರಂದು ಮದ್ಯಾಹ್ನ 3:00 ಗಂಟೆ ಸುಮಾರಿಗೆ ಮಣೂರ ಗ್ರಾಮಕ್ಕೆ ಬೇಟ್ಟಿ ನೀಡಿದಾಗ ಗ್ರಾಮದ ಬಾತ್ಮಿದಾರರು ತಿಳಿಸಿದ್ದೆನೆಂದರೆ, ಗ್ರಾಮದ ಓಂಕಾರ ತಂದೆ ಪ್ರಕಾಶ ಠಕ್ಕಾ ವಯಾ|| 23 ವರ್ಷ ಜಾ|| ಲಿಂಗಾಯತ || ವಿದ್ಯಾರ್ಥಿ ಸಾ|| ಮಣೂರ ಗ್ರಾಮ ಈತನು ನಿನ್ನೆ ನಡೆದ ಅಂಬೇಡ್ಕರ ಜಯಂತಿಯ ಆಚರಣೆ ಸಮಯದಲ್ಲಿ ನಡೆದ ಘಟನೆಯ ಬಗ್ಗೆ ಜನರಿಗೆ ಪ್ರಚೋದನೆ ನೀಡುತ್ತಾ ಕೋಮು ಗಲಬೆ ಆಗುವಂತೆ ಗುಂಪುಕಟ್ಟಿಕೊಂಡು ತಿರುಗಾಡುತ್ತಿದ್ದಾನೆ ಹಾಗೂ ಸದರಿಯವನು ಮಣೂರ ಗ್ರಾಮದಲ್ಲಿ ಉದ್ದಿಗ್ನ ವಾತಾವರಣವುಂಟು ಮಾಡುವವನಾಗಿದ್ದಾನೆ, ಮತ್ತು ಸದ್ಯ ಸದರಿಯವನು ಗ್ರಾಮದಲ್ಲಿ ಪ್ರಚೋದನೆ ನೀಡುತ್ತಾ ತಿರುಗಾಡುತ್ತಿದ್ದಾನೆ ಎಂದು ಗ್ರಾಮದ ಗ್ರಾಮಸ್ತುರು ಹಾಗೂ ಬಾತ್ಮಿದಾರರು ತಿಳಿಸಿದ ಮೇರೆಗೆ ಸದರಿಯವನನ್ನು ಇಂದು ದಿನಾಂಕ 28-04-2017 ರಂದು 3:00 ಪಿ ಎಮ್ ಕ್ಕೆ ಮಣೂರ ಗ್ರಾಮದಲ್ಲಿ ದಸ್ತಗಿರಿ ಮಾಡಿಕೊಂಡು ಸದರಿಯವರೊಂದಿಗೆ 4:00 ಪಿ ಎಮ್ ಕ್ಕೆ ಠಾಣೆಗೆ ಬಂದು ಸದರಿಯವನ ವಿರುದ್ದ ಮುಂಜಾಗ್ರತಾ ಕ್ರಮ ಜರೂಗಿಸಿ, ಸದರಿಯವನನ್ನು ಮಾನ್ಯ ತಹಸಿಲ್ದಾರರು ಹಾಗೂ ತಾಲೂಕಾ ದಂಡಾಧಿಕಾರಿಗಳು ಅಫಜಲಪೂರ ರವರ ಮುಂದೆ ಹಾಜರು ಪಡಿಸುವಂತೆ ಸೂಚಿಸಿ ವರದಿ ನೀಡಿದ್ದರ ಮೇರೆಗೆ ಠಾಣೆಯ ಗುನ್ನೆ ನಂ  102/2017 ಕಲಂ 108. ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
ಕಮಲಾಪೂರ ಪೊಲೀಸ ಠಾಣೆ : ದಿನಾಂಕ 28-04-2017 ರಂದು ಬೆಳಗ್ಗೆ 8-15  ಗಂಟೆಗೆ ಜಿಲ್ಲಾ ನಿಸ್ತಂತು ಕೋಣೆಯಿಂದ  ಶ್ರೀ ವಿಕ್ರಮ ತಂದೆ ಪುಂಡಲಿಕ ಗೊಗ್ಗರೆ ಸಾ: ನಾಂದೇಡ ಇತನು ರಸ್ತೆ ಅಪಘಾತದಲ್ಲಿ ದು:ಖಾಪತ ಹೊಂದಿ ಉಪಚಾರ ಕುರಿತು ಜಿ.ಜಿ.ಹೆಚ್   ಕಲಬುರಗಿಯಲ್ಲಿ ಸೇರಿಕೆಯಾಗಿದ್ದು ಬಂದು ಮುಂದಿನ ಕ್ರಮ ಕ್ರಮ ಕುರಿತು ಎಮ್.ಎಲ್.ಸಿ ವಸೂಲಾದ ಪ್ರಯುಕ್ತ  ಜಿ.ಜಿ ಹೆಚ್ ಕ್ಕೆ ಭೆಟ್ಟಿ ನೀಡಿ ಗಾಯಾಳು ವಿಕ್ರಮ ಇತನಿಗೆ ವಿಚಾರಿಸಿ ಇತನ ಹೇಳಿಕೆ ಸಾರಾಂಶವೆನೆಂದರೆ ನಾನು ಮೇಲ್ಕಾಣಿಸಿದ ಹೆಸರು ವಿಳಾಸದವನಿದ್ದು ಲಾರಿ ಕ್ಲೀನರ ಕೆಲಸ ಮಾಡಿಕೊಂಡು ತಂದೆ ತಾಯಿಯೊಂದಿಗೆ ಉಪಜೀವನ ಸಾಗಿಸುತ್ತೆನೆ. ನಾನು ಈಗ 3-4 ತಿಂಗಳಿಂದ ನಾದೇಡ ಪಟ್ಟಣದ ಕೌರವರಜಿತ ಸಿಂಗ್ ಕೌರ ಗಂಡ ಹರ್ಜಿತ  ಸಿಂಗ್ ರಾಯ್  ಇವರ ಲಾರಿ ನಂ ಎಮ್.ಹೆಚ್ 26 ಎಡಿ 1489 ನೇದ್ದರ ಮೇಲೆ ಹಮಾಲಿ ಮತ್ತು ಕ್ಲೀನರ ಅಂತ ಕೆಲಸ ಮಾಡಿಕೊಂಡಿದ್ದು ನನ್ನಂತೆ ನಾರಾಯಣ ತಂದೆ ಮೋತಿರಾಮ ಗಡ್ಡಮವಾಡ ವಯ: 18 ವರ್ಷ ಜಾತಿ: ಕೋಳಿ ಸಾ: ಬುತ್ತೆಚವಾಡಿ ತಾ: ಕಂದಹಾರ ಜಿ: ನಾಂದೇಡ ಇತನು ಕೂಡಾ ನಮ್ಮ ಲಾರಿ ಮೇಲೆ ಹಮಾಲಿ ಮತ್ತು ಕ್ಲೀನರ ಕೆಲಸ ಮಾಡಿಕೊಂಡು ಬಂದಿದ್ದು. ನಮ್ಮ ಅಣ್ಣತಮ್ಮಕಿಯ ರಾಹುಲ ತಂದೆ ಬಾಬುರಾವ ಗೊಗರೆ ಇವರು ನಮ್ಮ ಲಾರಿ ಚಾಲಕ ಅಂತ ಕೆಲಸ ಮಾಡಿಕೊಂಡು ಬಂದಿದ್ದು ಇರುತ್ತದೆ.ಈಗ ಒಂದು ತಿಂಗಳಿಂದ ನಮ್ಮ ಮಾಲಿಕರು ಹೇಳಿದಂತೆ ನಾವು ಮಳಖೇಡ ದಿಂದ ಸಿಮೆಂಟ ತುಂಬಿಕೊಂಡು ನಾಂದೇಡಕ್ಕೆ ತೆಗೆದುಕೊಂಡು ಹೋಗಿ ಬರುತ್ತಿದ್ದು ಅದರಂತೆ ನಿನ್ನೆ ದಿನಾಂಕ 27.04.2017 ರಂದು ಸಾಯಂಕಾಲ 6 ಗಂಟೆಯ ಸುಮಾರಿಗೆ ಮಳಖೇಡ ರಾಜೇಶ್ರೀ ಸಿಮೆಂಟ ಕಂಪನಿಯಿಂದ ನಮ್ಮ ಲಾರಿ ನಂ ಎಮ್.ಹೆಚ್ 26 ಎಡಿ 1489 ನೇದ್ದರಲ್ಲಿ ಸಿಮೆಂಟ ತುಂಬಿಕೊಂಡು ನಾಂದೇಡ ಕಡೆಗೆ ಹೊರಟಿದ್ದು ನಾನು ಮತ್ತು ನಾರಾಯಣ ಇಬ್ಬರು ಲಾರಿಯಲ್ಲಿ ಕುಳಿತುಕೊಂಡಿದ್ದು ನಮ್ಮ ಲಾರಿ ಚಾಲಕ ರಾಹುಲ ಇತನು ಲಾರಿಯನ್ನು ನಡೆಯಿಸಿಕೊಂಡು ಬರುತ್ತಿದ್ದು ರಾತ್ರಿ 9 ಗಂಟೆಯ ಸುಮರಿಗೆ ನಾವು ಕಮಲಾಪೂರಕ್ಕೆ ಬಂದು ದಾಬಾದಲ್ಲಿ ಊಟ ಮಾಡಿ ನಂತರ ನಾಂದೇಡಕ್ಕೆ ಹೋಗುವ ಕುರಿತು ರಾತ್ರಿ 10 ಗಂಟೆಯ ಸುಮಾರಿಗೆ ಕಮಲಾಪೂರ ಬಿಟ್ಟು ಕಲಬುರಗಿ-ಹುಮನಾಬಾದ ರಾಷ್ಟ್ರಿಯ ಹೆದ್ದಾರಿ ನಂ 218 ರ ಮೇಲೆ ಹುಮನಾಬಾದ ಕಡೆಗೆ ಹೊರಟಿದ್ದು ಕಮಲಾಪೂರ ಬಿಟ್ಟ ನಂತರ ನಮ್ಮ ಲಾರಿ ಚಾಲಕ ರಾಹುಲ ಇತನು ನಮ್ಮ ಲಾರಿಯನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಹೋಗುತ್ತಿದ್ದು ಆಗ ನಾನು ಮತ್ತು ನಾರಾಯಣ ನಮ್ಮ ಲಾರಿ ಚಾಲಕನಿಗೆ ಲಾರಿಯನ್ನು ನಿಧಾನವಾಗಿ ನಡೆಯಿಸಲು ಹೇಳಿದರು ಕೂಡಾ ಸದರಿಯವನು ನಮ್ಮ ಮಾತನ್ನು ಕೇಳದೆ ಅದೇ ವೇಗದಲ್ಲಿ ಲಾರಿಯನ್ನು ನಡೆಯಿಸಿಕೊಂಡು ಹೋಗುತ್ತಿದ್ದು ರಾತ್ರಿ 10;25 ಗಂಟೆಯ ಸುಮಾರಿಗೆ ಕಿಣ್ಣಿ ಬ್ರಾರಡರ್ ಹತ್ತಿರ ಇರುವ ಬ್ರೀಜ್ಗೆ ನಮ್ಮ ಲಾರಿಚಾಲಕನು ಲಾರಿಯನ್ನು ಹಾಯಿಸಿದ್ದು ಆಗ ನಮ್ಮ ಲಾರಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಬ್ರೀಡ್ಜ್ ಕೆಳಗೆ ಬಿದಿದ್ದು ಲಾರಿ ಬಿದ್ದ ನಂತರ ನಾನು ಸಾವರಿಸಿಕೊಂಡು ಲಾರಿಯಿಂದ ಹೊರಗೆ ಬಂದು ನೋಡಲು ನನ್ನ ಎಡಭಾಗದ ಬುಜಕ್ಕೆ, ಎಡಗೈ ಮುಂಗೈ ಹತ್ತಿರ, ಎಡಗೈ ಹಸ್ತದ ಹತ್ತಿರ ರಕ್ತಗಾಯ, ಗುಪ್ತಗಾಯವಾಗಿದ್ದು ಮತ್ತು ದೇಹದ ಮೇಲೆ ಅಲಲ್ಲಿ ಗುಪ್ತಗಾಯವಾಗಿದ್ದು ಇರುತ್ತದೆ ನಂತರ ನಾನು ನಮ್ಮ ಲಾರಿ ಚಾಲಕನಾದ ರಾಹುಲ ಇತನಿಗೆ ನೋಡಲು ಅವನ ಎಡಬುಜಕ್ಕೆ ಭಾರಿ ಗುಪ್ತಗಾಯವಾಗಿದ್ದು, ಬಲಗೈ ಮುಂಗೈ ಮುಂದೆ ಹೊಟ್ಟೆಗೆ ತರಚಿದ ಗಾಯವಾಗಿದ್ದು ಇರುತ್ತದೆ ನಂತರ ನಾರಾಯಣ ಇತನಿಗೆ ನೋಡಲು ಅವನ ಎಡಭಾಗದ ತಲೆಗೆ ಭಾರಿ ರಕ್ತಗಾವಾಗಿದ್ದು, ಕಪಾಳಕ್ಕೆ, ಗದ್ದಕ್ಕೆ, ರಕ್ತಗಾಯವಾಗಿದ್ದು ಮೂಗಿನಿಂದ ರಕ್ತ ಬರುತ್ತಿದ್ದು ಮತ್ತು ಸದರಿಯವನ ಎಡಭಾಗದ ಪಕ್ಕೆಗೆ ಭಾರಿ ಗುಪ್ತಗಾಯವಾಗಿ ಪಕ್ಕೆಲಬುಗಳು ಮುರಿ ಹಾಗ ಗಂಡು ಬಂದಿದ್ದು ಸದರಿಯನು ನರಳಾಡುತ್ತಿದ್ದು ಆಗ ನಾನು ಮತ್ತು ರಾಹುಲ ಇಬ್ಬರು ಕೂಡಿಕೊಂಡು ಸದರಿಯವನಿಗೆ ಎಬ್ಬಿಸಿ ನೋಡಲು ಸದರಿ ನಾರಾಯಣ ಇತನು ಸ್ವಲ್ಪ ಸಮಯ ನರಳಾಡಿ ರಾತ್ರಿ 10:45 ಗಂಟೆಯ ಸುಮಾರಿಗೆ ಸ್ಥಳದಲ್ಲೆ ಮೃತ ಪಟ್ಟಿದ್ದು ಇರುತ್ತದೆ. ನಂತರ ಯಾರೊ 108 ಅಂಬುಲೇನ್ಸಕ್ಕೆ ಕರೆ ಮಾಡಿದ್ದು ಸ್ವಲ್ಪ ಸಮಯದಲ್ಲಿ ಅಂಬುಲೇನ್ಸ ಸ್ಥಳಕ್ಕೆ ಬಂದು ನನಗೆ ಮತ್ತು ರಾಹುಲ ಇತನಿಗೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಕಲಬುರಗಿ ಸರಕಾರಿ ಆಸ್ಪತ್ರೇಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ. ನಮ್ಮ ಲಾರಿ ಚಾಲಕ ರಾಹುಲ ಇತನು ನಮ್ಮ ಲಾರಿ ನಂ ಎಮ್.ಹೆಚ್ 26 ಎಡಿ 1489 ನೇದ್ದರ ಅತಿವೇಗವಾಗಿ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಕಿಣ್ಣಿ ಗ್ರಾಮದ ಹತ್ತಿರ ಇರುವ ಬ್ರೀಜ್ಡ್ಕೆ ಡಿಕ್ಕಿ ಕೊಟ್ಟು ಅಪಘಾತ ಪಡಿಸಿ ನನಗೆ ದು:ಖಾಪತ ಗೊಳಿಸಿದ್ದು ಮತ್ತು ನಾರಾಯಣ ಇತನ ಸಾವಿಗೆ ಕಾರಣನಾಗಿದ್ದು ಕಾರಣ ಸದರಿ ಚಾಲಕ ವಿರುದ್ದ ಕಾನೂನು ಕ್ರಮ ಕೈಖೊಳ್ಳಬೇಕು ಅಂತ ಹೇಳಿ ಬರೆಯಿಸಿದ ಹೇಳಿಕೆ ಪಡೆದುಕೊಂಡು  ಮರಳಿ ಇಂದೆ 11-00 ಗಂಟೆಗೆ ಠಾಣೆಗೆ ಹಾಜರಾಗಿ ಪಿರ್ಯಾದಿಯ  ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ  ನಂ  54/2017 ಕಲಂ. 279, 337, 304(ಎ)  ಐಪಿಸಿ ಅಡಿಯಲ್ಲಿ ಗುನ್ನೆ  ದಾಖಲಿಸಿಕೊಂಡು ತನಿಖೆ  ಕೈಕೊಂಡ ಬಗ್ಗೆ ವರದಿ.
ಗ್ರಾಮೀಣ ಪೊಲೀಸ ಠಾಣೆ ಕಲಬುರಗಿ : ದಿನಾಂಕ 27/04/17 ರಂದು ಫಿರ್ಯಾದಿ ತನ್ನ ಸಡಕ ವಿಠಲ ತಂದೆ ಹಣಮಂತರಾಯ ಗುಂಡದ  ಇತನ ಹಿರೋ ಸ್ಪೆಂಡರ ಪ್ಲಸ ಕೆಎ 32 ಇಡಿ 6025 ನೇದ್ದರ ಹಿಂದೆ ಕುಳಿತುಕೊಂಡು ಸುಂಟನೂರ ಗ್ರಾಮದ ಅಪ್ಪಾಪೀರ ಜಾತ್ರೆಗೆ ಹೋಗಿ ವಾಪಸ್ಸ ಕಲಬುರಗಿ ಕಡೆ ಹೊರಟಿದ್ದು, ಫಿರ್ಯಾದಿ ವಿಠಲ ಇತನಿಗೆ ಸಾವಾಕಾಶವಾಗಿ ನಡೆಯಿಸು ನಡೆಯಿಸು ಅಂತಾ ಹೇಳಿದರೂ ನನ್ನ ಮಾತಿಗೆ ಲಕ್ಷ ಕೊಡದೇ ಅತಿವೇಗದಿಂದ ಮೋಟಾರ ಸೈಕಲ ನಡೆಸುತ್ತಾ ಹೊರಟಾಗ ರಾತ್ರಿ 10-00 ಗಂಟೆ ಸುಮಾರಿಗೆ ಆಳಂದ-ಕಲಬುರಗಿ ರೋಡಿನ ಪಟ್ಟಣ ಸೀಮಾಂತರದಲ್ಲಿ ಬರುವ ಜವಳಿ ದಾಬಾದ ಎದುರುಗಡೆ ಬಂದಾಗ ಯಾವುದೋ ಲಾರಿ ಮೈಮೇಲೆ ಬಂದತಾಗಲು ವಿಠಲ ಇತನು ಮೋಟಾರ ಸೈಕಲ ಅತಿವೇಗದಿಂದ ಮತ್ತು ಅಡ್ಡಾತಿಡ್ಡಿಯಾಗಿ ನಡೆಸುತ್ತಿದ್ದ ಮೋಟಾರ ಸೈಕಲ ಒಮ್ಮಿಂದ ಒಮ್ಮೇಲೆ ಬಲ ರೋಡ ಬದಿಯಲ್ಲಿ ತೆಗೆದುಕೊಂಡಾಗ ವೇಗದ ನಿಯಂತ್ರಣ ತಪ್ಪಿ ಬಲ ರೋಡ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಒಬ್ಬ ವಯಸ್ಸಾದ ಅಪರಿಚಿತ ಮನುಷ್ಯ 55 ರಿಂದ 60 ವರ್ಷ ವಯಸ್ಸಿನವನಿಗೆ ಜೋರಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ ಅವನು ನೆಲಕ್ಕೆ ಬಿದ್ದಾಗ ಅವನ ಎಡಗಣ್ಣಿನ ಹುಬ್ಬಿನ ಮೇಲೆ, ತಲೆಯ ಮಧ್ಯದಲ್ಲಿ  ಎಡ ಕಪಾಳ ಮೇಲೆ ಭಾರಿ ರಕ್ತಗಾಯುಗಳಾಗಿದ್ದು, ಎಡ ಮೆಲಕಿನ ಹತ್ತಿರ ಭಾರಿ ಗುಪ್ತಗಾಯಗಳಾಗಿದ್ದು, ಎರಡು ಕೈಗಳ ಮೇಲೆ ಮತ್ತು ಎರಡು ಕಾಲುಗಳ ಮೇಲೆ ಅಲ್ಲಿಲ್ಲಿ ತರಚಿದ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದನು. ಅದರಂತೆ ಫಿರ್ಯಾದಿ ಮತ್ತು ಮೋಟಾರ ಸೈಕಲ ಚಾಲಕ ವಿಠಲ ಇಬ್ಬರಿಗೂ ಹಣೆಗೆ, ಮುಖಕ್ಕೆ ಮತ್ತು ಮೈಮೇಲೆ ಅಲ್ಲಿಲ್ಲಿ ರಕ್ತಗಾಯಗಳಾಗಿರುತ್ತೇವೆ ಮೋಟಾರ ಸೈಕಲ ಚಾಲಕ ವಿಠಲನ ಮೇಲೆ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಮ. 164/17 ಕಲಂ 279,337, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ  ಕೈಕೊಂಡ ಬಗ್ಗೆ ವರದಿ.


28 April 2017

KALABURAGI DIST REPORTED CRIMES

ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ 28/04/2017 ರಂದು ಶ್ರೀ ಬಾಬುರಾವ ತಂದೆ ಚೌಡಪ್ಪ ಸಾ: ಸುಂಟನೂರ ಹಾ:ವ: ರಿಂಗ ರೋಡ ಕಲಬುರಗಿ ರವರು ಫಿರ್ಯಾದಿ ಸಲ್ಲಿಸಿದ್ದೇನೆಂದರೆ ದಿನಾಂಕ 27/04/17 ರಂದು ತಮ್ಮ ಗ್ರಾಮ ಸುಂಟನೂರನಲ್ಲಿ ಜಾತ್ರೆ ಇದುದ್ದರಿಂದ ಜಾತ್ರೆಗೆ ಹೋಗುವ ಕುರಿತು ತಾನು ಮತ್ತು ವಿಠಲ ತಂದೆ ಹಣಮಂತರಾಯ ಸಾ: ರಿಂಗ ರೋಡ ಇವರೊಂದಿಗೆ ಹಿರೋ ಸ್ಪೆಂಡರ ಪ್ಲಸ ಕೆಎ 32 ಇಡಿ 6025 ಮೇಲೆ ಇಬ್ಬರು ಸುಂಟನೂರಕ್ಕೆ ಹೋಗುವಾಗ ಮೋಟಾರ ಸೈಕಲ ವಿಠಲನು ನಡೆಸುತ್ತಿದ್ದು, ರಾತ್ರಿ 09-00 ಗಂಟೆ ಸುಮಾರಿಗೆ ಸುಂಟನೂರಕ್ಕೆ ಹೋಗಿ ಜಾತ್ರೆ ಮುಗಿಸಿಕೊಂಡು ವಾಪಸ್ಸು ಕಲಬುರಗಿಗೆ ಬರುವಾಗ  ವಿಠಲನು ತನ್ನ ವಶದಲ್ಲಿದ್ದ ಹಿರೋ ಸ್ಪೆಂಡರ ಪ್ಲಸ ಕೆಎ 32 ಇಡಿ 6025 ನೇದ್ದು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾತಿಡ್ಡಿಯಾಗಿ ನಡೆಸುತ್ತಾ ಪಟ್ಟಣ ಸೀಮಾಂತರದ ಜವಳಿ ದಾಬಾದ ಎದುರುಗಡೆ ಮೋಟಾರ ಸೈಕಲ ಅತಿವೇಗದಿಂದ ಮತ್ತು ಅಡ್ಡಾತಿಡ್ಡಿಯಾಗಿ ನಡೆಸುತ್ತಾ ನಿಯಂತ್ರಣ ತಪ್ಪಿ ಬಲ ರೋಡ ಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ಒಬ್ಬ ವಯಸ್ಸಾದ ಮನುಷ್ಯನಿಗೆ ಅಪಘಾತಪಡಿಸಿದ್ದು ಆಗ ನಾವಿಬ್ಬರು ಸಹ ಮೋಟಾರ ಸೈಕಲ ಮೇಲಿಂದ ಕೆಳಗಡೆ ಬಿದ್ದಿದ್ದು ಎಲ್ಲರಿಗೊ ರಕ್ತಗಾಯಗಳಾಗಿದ್ದು. ಮೋಟಾರ ಸೈಕಲ ಕೆಎ 32 ಇಡಿ 6025 ಚಾಲಕ ವಿಠಲ ತಂದೆ ವಿಠಲ ತಂದೆ ಹಣಮಂತರಾಯ ಗುಂಡಪ್ಪ  ಸಾ: ಕಾಲನಿ ರಿಂಗ ರೋಡ ಕಲಬುರಗಿ ಇತನ ಮೇಲೆ ಕಾನೂನು ಕ್ರಮ ಜರುಗಿಸುವಂಥೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜಾಟ ಪ್ರಕರಣ:

ಫರಹತಾಬಾದ ಪೊಲೀಸ್ ಠಾಣೆ: ದಿನಾಂಕ 27-04-2017 ರಂದು ಹೊನ್ನ ಕಿರಣಗಿ ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಚೀಟಿ ಬರೆದುಕೊಳ್ಳುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ ಫರಹತಾಬಾದ ಠಾಣೆರವರು ಸಿಬ್ಬಂದಿ ಜನರೊಂದಿಗೆ ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ ಬನಶಂಕರ ತಂ. ಸಿದ್ದರಾಮಪ್ಪ ಸಿಂಪಿ ಈತನಿಗೆ ದಸ್ತಗೀರ ಮಾಟಿ ಆತನಿಂದ ಮಟಕಾ ಚೀಟಿ ಮತ್ತು ನಗದು ರೂ 1890/- ವಶಪಡಿಸಿಕೊಂಡು ಆಪಾದಿತನ ವಿರುದ್ದ ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದ.

27 April 2017

Kalaburagi District Reported Crimes

ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀಮತಿ ಮಧುಮತಿ ಗಂಡ ಬೈರವೇಶ ಮಠಪತಿ ಸಾ : ತಾಜಸುಲ್ತಾನಪೂರ ರವರು ದಿನಾಂಕ 25/04/17 ರಂದು ಮಧ್ಯಾಹ್ನ ಸಮಯದಲ್ಲಿ ಬಂಬೂ ಬಜಾರದಲ್ಲಿ ಶಿವಶರಣಪ್ಪ ಇತನು ತನಗೆ ನೋಡಿ ತನ್ನ ಮೇಲೆ ರೇಪ ಕೇಸ ಮಾಡಿಸುತ್ತೀ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ತಕರಾರು ಅರ್ಜಿ ವಿಷಯ ವಿಚಾರಿಸಿಕೊಂಡು ತಾಜ ಸುಲ್ತಾನಪೂರಕ್ಕೆ ಗ್ರಾಮಕ್ಕೆ ಮಧ್ಯಾಹ್ನ 03-30 ಗಂಟೆ ಸುಮಾರಿಗೆ ಶಿವಶರಣಪ್ಪ ತಂದೆ ಗುರುಲಿಂಗಪ್ಪ ಬೆಡಜುರ್ಗಿ ಇತನ ಮನೆಯ ಮುಂದಿನಿಂದ ಹಾಯ್ದು ಹೋಗುತ್ತಿದ್ದನ್ನು  1. ಶಿವಶರಣಪ್ಪ ತಂದೆ ಗುರುಲಿಂಗಪ್ಪ ಬೆಡಜುರ್ಗಿ, 2. ಅಣವೀರಪ್ಪ @ ಅಣ್ಣೆಪ್ಪ ತಂದೆ ಗುರುಲಿಂಗಪ್ಪ ಬೆಡಜುರ್ಗಿ 3. ನಾಗರಾಜ ತಂದೆ ಗುರುಲಿಂಗಪ್ಪ ಬೆಡಜುರ್ಗಿ 4. ಶ್ರವಣಕುಮಾರ ತಂದೆ ಗುರುಲಿಂಗಪ್ಪ ಬೆಡಜುರ್ಗಿ 5. ರೇವಣಸಿದ್ಧಪ್ಪ ತಂದೆ ಗುರುಲಿಂಗಪ್ಪ ಬೆಡಜುರ್ಗಿ 6.  ಶ್ರೀಶೈಲ ತಂದೆ ಗುರುಲಿಂಗಪ್ಪ ಬೆಡಜುರ್ಗಿ, 7. ಶಿವಮ್ಮಾ ಗಂಡ ಗುರುಲಿಂಗಪ್ಪ ಬೆಡಜುರ್ಗಿ, 8. ಲಕ್ಷ್ಮೀ ಗಂಡ ಶ್ರವಣಕುಮಾರ ಬೆಡಜುರ್ಗಿ,  9. ನಾಗಮ್ಮಾ ತಂದೆ ಗುರುಲಿಂಗಪ್ಪ ಬೆಡಜುರ್ಗಿ ಸಾ: ಎಲ್ಲರೂ ತಾಜ ಸುಲ್ತಾನಪೂರ ಗ್ರಾಮ ಕುಡಿಕೊಂಡು ಫಿರ್ಯಾದಿದಾರಳಿಗೆ ನೋಡಿ ಈ ರಂಡಿ ರೇಪ ಮಾಡಿಸಿ ಮತ್ತೆ ನಿನ್ನೆ ನಮ್ಮ ಮೇಲೆ ಚೌಕ ಪೊಲೀಸ ಠಾಣೆಯಲ್ಲಿ ಸುಳ್ಳು ಕಂಪ್ಲೇಟ ಕೊಟ್ಟಿರುತ್ತಾಳೆ ಇವತ್ತು ಇವಳಿಗೆ ಬಿಡಬೇಡರಿ ಖಲಾಷ ಮಾಡಿರಿ ಅಂತಾ ಎಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಡಿಗೆಯಿಂದ, ಬಾರಿಗೆಯಿಂದ ಕೈಯಿಂದ ಫಿರ್ಯಾದಿದಾರಳಿಗೆ ಮತ್ತು ಜಗಳಾ ಬಿಡಿಸಲು ಬಂದ ಅವಳ ತಾಯಿ ಶಂಕ್ರೆಮ್ಮಾ ತಲೆಯ ಮೇಲೆ ಮತ್ತು ಮೈಮೇಲೆ ಹೊಡೆ ಬಡಿ ಮಾಡಿ ಜೀವ ಭಯ ಹಾಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ನಾಗರಾಜ ತಂದೆ ಗುರಲಿಂಗಪ್ಪ ಬೆಡಜುರಗಿ ಸಾ : ತಾಜಸುಲ್ತಾನಪೂರ ರವರು ದಿನಾಂಕ:- 26/04/2017 ರಂದು ಮದ್ಯಾಹ್ನ ಎತ್ತುಗಳಿಗೆ ನೀರು ಕುಡಿಸುತ್ತಿದ್ದಾಗ ಅವನ ತಮ್ಮ ಶ್ರವಣಕುಮಾರನ ಹೆಂಡತಿ ಲಕ್ಷ್ಮಿ ಇವಳು ಮನೆಯ ಎದುರು ಕುಳಿತುಕೊಂಡಿದ್ದಳು ಆಗ ನಮ್ಮ ಗ್ರಾಮದ 1) ಮಲ್ಲಯ್ಯಾ ತಂದೆ ಸೋಮಯ್ಯಾ ಮಠಪತಿ, 2) ಮದುಮತಿ ಗಂಡ ಬೈರವೇಶ ಮಠಪತಿ 3) ತಾಯಿ ಶಂಕರೆಮ್ಮಾ ಗಂಡ ಸೋಮಯ್ಯಾ ಮಠಪತಿ 4) ಮಲ್ಲಯ್ಯಾನ ಅಕ್ಕನ ಮಗಳು ಅರ್ಚನಾ ಮತ್ತು 5) ಆಕೆಯ ಗೆಳತಿ ನಾಗಮ್ಮಾ ಎಲ್ಲರೂ ಕೂಡಿಕೊಂಡು ನಮ್ಮ ಮನೆಯ ಎದುರು ಬಂದ್ದಿದ್ದು ಮಲ್ಲಯ್ಯಾ ಇತನು ಕೈಯಲ್ಲಿ ತಲವಾರ ಹಿಡಿದುಕೊಂಡು ಬಂದಿದ್ದನು ಆಗ ಮದುಮತಿ ಇವಳು ಲಕ್ಷ್ಮಿ ಇವಳಿಗೆ ಮದುಮತಿ ಇವಳು ಏ ರಂಡಿ ನಿಮ್ಮ ಮೈದುನ ಎಲ್ಲಿದ್ದಾನೆ ಹೇಳ ನಾವು ಸುಳ್ಳು ಅರ್ಜಿ ಕೊಟ್ಟಿರುತ್ತೇವೆ ಅಂತಾ ಹೇಳುತ್ತಿರಿ ಇವತ್ತು ನಿಮಗೇ ಗತಿ ಕಾಣಿಸುತ್ತೇವೆ ಅಂತಾ ಬೈಯ್ಯುತ್ತಾ ಎಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಂದು ಮಲ್ಲಯ್ಯ ಕೈಯಲ್ಲಿ ತಲವಾರ ಮತ್ತು ಬಡಿಗೆ ಹಿಡಿದುಕೊಂಡು ಬಂದು ಫಿರ್ಯಾದಿಗೆ ಮತ್ತು ಅವನ ಮನೆಯವರಿಗೆ ಕೊಲೆ ಮಾಡುವ ಉದ್ದೇಶದಿಂದ ಶ್ರವಣಕುಮಾರ ಇತನ ಎಡ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿದನು ಅಲ್ಲದೇ ಜಗಳಾ ಬಿಡಿಸಲು ಬಂದ ಫಿರ್ಯಾದಿದಾರನಿಗೆ ಬಡಿಗೆಯಿಂದ ತಲೆ ಮೇಲೆ ಹೊಡೆದು ರಕ್ತಗಾಯಪಡಿಸಿ ಮಾರಣಾಂತಿಕ ಹಲ್ಲೆ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 24/04/2017 ರಂದು ಸಾಯಂಕಾಲ ಗಂಜ ಏರಿಯಾದ  ದರ್ಬಾರ ಹೊಟೇಲ್ ಕ್ರಾಸದಿಂದ ಸಂಜೀವ ನಗರ ರಸ್ತೆಯಲ್ಲಿ ಬರುವ ಪ್ರೇಮಜಿ ದಾಲಮಿಲ್ ಹತ್ತಿರ ಮಲ್ಲಿಕಾರ್ಜುನ ಈತನು ರಸ್ತೆ ಎಡಬದಿಯಿಂದ  ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಟಂ ಟಂ ವಾಹನ ನಂಬರ್ ಕೆಎ 32  ಎ-1416 ನೇದ್ದರ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮಲ್ಲಿಕಾರ್ಜುನ ಈತನಿಗೆ ಡಿಕ್ಕಿ ಪಡಿಸಿ ತಲೆಗೆ ಭಾರಿ ರಕ್ತ ಗಾಯಗೊಳಿಸಿದ್ದರಿಂದ ಮಲ್ಲಿಕಾರ್ಜುನ ಈತನಿಗೆ ಉಪಚಾರ ಕುರಿತು ಎ ಎಸ್ ಎಂ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಸದರಿಯವನಿಗೆ  ಅಘಾತದಲ್ಲಿ ಆದ ಗಾಯವನ್ನು ಕಲಬುರಗಿ ಎ ಎಸ್ ಎಂ ಆಸ್ಪತ್ರೆಯಲ್ಲಿ ವಾಸಿಯಾಗದೆ ಇದ್ದ  ಕಾರಣ ವೈಧ್ಯರ ಸಲಹೆ ಮೇರೆಗೆ ಗಾಯಾಳು  ಮಲ್ಲಿಕಾರ್ಜುನ ಈತನ ಅಣ್ಣನಾದ ಶೇಖಪ್ಪ ಈತನು ತನ್ನ ತಮ್ಮನಿಗೆ  ಹೆಚ್ಚಿನ ಉಪಚಾರ ಕುರಿತು ದಿನಾಂಕ  25/04/2017 ರಂದು ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ಮಲ್ಲಿಕಾರ್ಜುನ ಈತನಿಗೆ ಅಪಘಾತದಲ್ಲಿ ಆದ ಗಾಯವನ್ನು ವಾಸಿಯಾಗದೆ   ದಿನಾಂಕ 26/04/2017  ರಂದು ಮುಂಜಾನೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಶ್ರೀ ಶೇಖಪ್ಪ ತಂದೆ ಸೋಮಣ್ಣಾ ಗಡೇಸೂರ ಸಾ : ಸಂಜೀವ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 April 2017

Kalaburagi District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ 25/04/17 ರಂದು ಮೃತ ಗುಂಡಪ್ಪ ಇತನು ಹೊಂಡಾ ಸೈನ ಕೆಎ 32 ಎಸ 595 ಮೇಲೆ ಕುಳಿತುಕೊಂಡು ತಾಜ ಸುಲ್ತಾನಪೂರ ಗ್ರಾಮದಿಂದ ಕಲಬುರಗಿ ಕಡೆಗೆ ಹೊರಟಿದ್ದು, ರಾತ್ರಿ 09-30  ತಾಜ ಸುಲ್ತಾನಪೂರ ರೋಡಿನ, ಕಮಲನಗರ ಕಾಲನಿ ಪುಲಚಂದ ಇಟ್ಟಂಗಿ ಭಟ್ಟಿ ಎದುರುಗಡೆ ಬಂದಾಗ ಅದೇ ಸಮಯಕ್ಕೆ ಎದುರುನಿಂದ ಹಿರೋ ಸ್ಪೆಂಡರ ಕೆಎ 32 ಇಇ 6945 ಚಾಲಕ ಮಲ್ಲಿಕಾರ್ಜುನ ಇತನು ಹಿಂದೆ ರಾಜೇಶ ಗಿರೆಗೋಳ ಇತನಿಗೆ  ಕೂಡಿಸಿಕೊಂಡು ತನ್ನ ವಶದಲ್ಲಿದ್ದ  ಮೋಟಾರ ಸೈಕಲನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ಹಾಗೂ ಅಡ್ಡಾತಿಡ್ಡಿಯಾಗಿ ನಡೆಸುತ್ತಾ ಬಂದವನೇ ಗುಂಡಪ್ಪನ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಅಪಘಾತಪಡಿಸಿದಾಗ ಡಿಕ್ಕಿ ಹೊಡೆದ ರಭಸಕ್ಕೆ ಗುಂಡಪ್ಪ ಇತನು ಮೋಟಾರ ಸೈಕಲ ಮೇಲಿಂದ ಹಾರಿ ರೋಡಿನ ಮೇಲೆ ಬಿದ್ದಾಗ ಅದೇ ಸಮಯಕ್ಕೆ ಗುಂಡಪ್ಪನ  ಹಿಂದಿನಿಂದ ಟ್ಯಾಕ್ಟ್ರರ ಇಂಜನ ನಂಬರ ಕೆಎ  33 ಟಿಎ 3948 ಮತ್ತು ಟ್ರಾಲಿ ನಂಬರ ಕೆಎ 33 ಟಿ 9925 ಅದರ ಕೆಳಗಡೆ ಕೆಎ 29  203  ಚಾಲಕ ತನ್ನ ವಶದಲ್ಲಿದ್ದ ಟ್ಯಾಕ್ಟ್ರರನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು ರೋಡಿನ ಮೇಲೆ ಬಿದ್ದ ಗುಂಡಪ್ಪನ  ತಲೆಯ ಮೇಲಿಂದ ಹಾಯಿಸಿಕೊಂಡು ಹೋಗಿದ್ದರಿಂದ ಅವನ ತಲೆ ಚಪ್ಪಟೆಯಾಗಿ ಭಾರಿ ರಕ್ತಗಾಯವಾಗಿ ರಕ್ತ ಸ್ರಾವದಿಂದ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಟ್ಯಾಕ್ಟ್ರರ ಚಾಲಕ ಮುಂದೆ ಹೋಗಿ ಟ್ಯಾಕ್ಟ್ರರ ನಿಲ್ಲಿಸಿ ಓಡಿ ಹೋಗಿರುತ್ತಾನೆ. ಅದರಂತೆ ಮಲ್ಲಿಕಾರ್ಜುನಿನಗೆ ಸಣ್ಣ ಪುಟ್ಟಗಾಯಗಳಾಗಿದ್ದರಿಂದ ಅವನು ಅಲ್ಲಿಂದ ಓಡಿ ಹೋಗಿದ್ದು ರಾಜೇಶ  ಇತನಿಗೆ ರಕ್ತಗಾಯ ಮತ್ತು ಭಾರಿ ಗುಪ್ತಗಾಯಗಳಾಗಿದ್ದರಿಂದ ಅವನಿಗೆ ಅವನ ಗೆಳೆಯ  ಶಿವರಾಜ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುರಗಿ 108 ಅಂಬುಲೈನ್ಸ ಗಾಡಿಯಲ್ಲಿ  ತೆಗೆದುಕೊಂಡು ಹೋಗಿ ಸೇರಿಕೆ ಮಾಡಿರುತ್ತಾರೆ. ಅಂತಾ ಶ್ರೀಮತಿ ರೇಖಾ ಗಂಡ ಗುಂಡಪ್ಪ ಸುತಾರ ಸಾ : ತಾಜಸುತ್ತಾನಪೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಚೌಕ ಠಾಣೆ : ಶ್ರೀ ಬಾಬುರಾವ್ ಕಡವೆ ಸಾಃ ಬಾಲ ಹನುಮಾನ ಗುಡಿ ಹಿಂದುಗಡೆ ಲಮಾಣಿ ತಾಂಡಾ ಫಿಲ್ಟರ್ ಬೇಡ್ ಕಲಬುರಗಿ ರವರು ದಿನಾಂಕ 24.04.2017 ರಂದು ಎಂದಿನಂತೆ ನನ್ನ ಎಮ್ಮೆ, ಕೋಣಗಳನ್ನು ನನ್ನ ಮನೆಯ ಅಂಗಳದ ಮುಂದೆ ಕಟ್ಟಿ ನಾನು ಕುಡಾ ಅಲ್ಲಿಯೆ ಮಲಗಿದ್ದು, ಮಧ್ಯರಾತ್ರಿಯಲ್ಲಿ ದಿನಾಂಕ: 25.04.2017 ರಂದು ನಸುಕಿನ ಜಾವ ಅಂದಾಜು 3.00 ಗಂಟೆ ಸುಮಾರಿಗೆ ನನಗೆ ಎಚ್ಚರವಾಗಿ ನೋಡಿದಾಗ, ನಾನು ಮನೆಯ ಮುಂದೆ ಕಟ್ಟಿದ್ದ 03 ಎಮ್ಮೆ, 01 ಕೋಣಗಳು ಇರಲಿಲ್ಲಾ. ಯಾರೋ ಕಳ್ಳರು ನನ್ನ 03 ಎಮ್ಮೆ, 01 ಕೋಣಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ಸದರಿ ಕಳುವಾದ 03 ಎಮ್ಮೆಗಳ ಅಃಕಿಃ 2,00,000/- 01 ಕೋಣದ ಕಿಮ್ಮತ್ತು ಅಃಕಿಃ 50,000/- ರೂಗಳು ಹಿಗೆ ಒಟ್ಟು 2,50,000/-ರೂ ಬೆಲೆಬಾಳುವ ದನಗಗಳು ಇರುತ್ತವೆ. ನಂತರ ನಾನು & ಇತರರು ಸೇರಿ ಎಲ್ಲಾಕಡೆ ಎಮ್ಮೆ, ಕೋಣಗಳನ್ನು ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಗುರುಶಾಂತ ತಂದೆ ಮಲ್ಲಪ್ಪ ದೋಡ್ಡಮನಿ ಸಾ|| ಶಿವಪೂರ  ಗ್ರಾಮ ಇವರು ದಿನಾಂಕ 25-04-2017 ರಂದು ಸಾಯಂಕಾಲ ನನ್ನ  ಮೋಟರ ಸೈಕಲ ಮೇಲೆ ನಮ್ಮೂರಿನ ಬಸವಣ್ಣ ದೇವರ ಗುಡಿಯ ಮುಂದೆ ಹೋಗುತ್ತಿದ್ದಾಗ ಶಿವಣ್ಣ ತಂದೆ ದೌಲಪ್ಪ ಸೋನ್ನ ಇವರ ಮಗಳು ನನ್ನ ಮೋಟರ ಸೈಕಲಕ್ಕೆ ಅಡ್ಡ ಬಂದಾಗ ನಾನು ತಕ್ಷಣ ಮೋಟರ ಸೈಕಲಕ್ಕೆ ಬ್ರೇಕ್  ಹಾಕಿದೇನು, ಆಗ ಅಲ್ಲೆ ಇದ್ದ 1) ಶಿವಣ್ಣ ತಂದೆ ದೌಲಪ್ಪ ಸೋನ್ನ 2) ಜಗಪ್ಪ ತಂದೆ ದೌಲಪ್ಪ ಸೋನ್ನ 3) ಉಮ್ಮಣ್ಣ ತಂದೆ ದೌಲಪ್ಪ ಸೋನ್ನ ಸಾ|| ಎಲ್ಲರೂ ಶಿವಪೂರ ಇವರು ನನ್ನ ಹತ್ತಿರ ಬಂದು ಶಿವಣ್ಣ ಈತನು ಏನೋ ಬೋಸಡಿ ಮಗನೆ ನಮ್ಮ ಹುಡುಗಿಗೆ ಮೋಟರ ಸೈಕಲ ಹಾಯಿಸುತ್ತಿದ್ದೇ ನೋಡಿಕೊಂಡು ಹೊಡೆಯೊದಕ್ಕೆ ಬರೊದಿಲ್ಲಾ ಅಂತಾ ಬೈದನು, ಆಗ ನಾನು ನಿಮ್ಮ ಹುಡುಗಿನೆ ಮೋ/ಸೈ ಕ್ಕೆ ಅಡ್ಡ ಬಂದಿದೆ ಯಾಕ ಬೈತಿ ಅಂತಾ ಕೇಳಿದೆನು, ಅದಕ್ಕೆ ಶಿವಣ್ಣ ಈತನು ನನ್ನ ಮೇಲೆ ಇದ್ದ ಹಿಂದಿನ ಜಗಳದ ದ್ವೇಷದಿಂದ ಬೋಸಡಿ ಮಗನೆ ಮತ್ತ ನಮಗೆ ಎದರ ಮಾತಾಡ್ತಿ ಅಂತಾ ಅಲ್ಲೆ ಬಿದ್ದ ಒಂದು ಬಡಿಗೆ ತಗೆದುಕೊಂಡು ನನ್ನ ಏಡಗೈ ಹಸ್ತದ ಮೇಲೆ ಹೊಡೆದು ಮೂಗಿನ ಮೇಲೆ ಕೈಯಿಂದ ಹೊಡೆದನು. ಉಳಿದವರೆಲ್ಲರೂ ಕೂಡಿ ಕೈಯಿಂದ ಹೊಡೆಯುವುದು ಮತ್ತು ಕಾಲಿನಿಂದ ಒದೆಯುವುದು ಬೈಯುವುದು ಮಾಡಿರುತ್ತಾರೆ. ಸದರಿಯವರು ಮಗನೆ ನಿನಗೆ ಇಷ್ಟಕ್ಕೆ ಬಿಡುವುದಿಲ್ಲ ಎಂದು ಜೀವ ಬೇದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.