POLICE BHAVAN KALABURAGI

POLICE BHAVAN KALABURAGI

30 November 2012

GULBARGA DISTRICT REPORTED CRIMES


ನಗರದ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿದ 7 ದ್ವಿ-ಚಕ್ರ ವಾಹನಗಳು ಜಪ್ತಿ, ಎರಡು ಜನ ಆರೋಪಿತರ ಬಂಧನ.
ನಗರದಲ್ಲಿ ನಡೆಯುತ್ತಿರುವ ದ್ವಿ-ಚಕ್ರ ವಾಹನಗಳ ಕಳ್ಳತನದ ಪತ್ತೆ ಕುರಿತು ಮಾನ್ಯ ಶ್ರೀ.ಕಾಶಿನಾಥ ಹೆಚ್ಚುವರಿ ಎಸ್.ಪಿ ಗುಲಬರ್ಗಾ, ಶ್ರೀ.ಭೂಷಣ ಜಿ ಬೋರಸೆ ಐ.ಪಿ.ಎಸ್., ಸಹಾಯಕ ಪೊಲೀಸ ಅಧೀಕ್ಷಕರು (ಎ) ಉಪ-ವಿಭಾಗ ಗುಲಬರ್ಗಾ, ಶ್ರೀ.ಹೆಚ್. ತಿಮ್ಮಪ್ಪ ಡಿ.ವೈಎಸ್.ಪಿ ಗ್ರಾಮಾಂತರ ಉಪ-ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಬ್ರಹ್ಮಪೂರ ಪೊಲೀಸ ಠಾಣೆಯ ಶ್ರೀ.ಶರಣಬಸವೇಶ್ವರ ಭಜಂತ್ರಿ ಪೊಲೀಸ್ ಇನ್ಸಪೇಕ್ಟರ, ಶ್ರೀ.ಸತ್ಯನಾರಾಯಣ ಪಿ.ಎಸ್.ಐ,,ಮಾರುತಿ ಎ.ಎಸ್.ಐ., ಪ್ರಕಾಶ, ಮಹಾಂತೇಶ, ಅಶೋಕ ಹಾಗೂ (ಎ) ಉಪ-ವಿಬಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರಾದ ಮಹ್ಮದ ರಫೀಕ, ರಾಮು ಪವಾರಶಿವಪ್ರಕಾಶ, ದೇವಿಂದ್ರ ರವರು ರಾಜಕುಮಾರ@ಚನ್ನಪ್ಪ ತಂದೆ ವಕೀಲರಾಯ ಮಾಲಿ ಬಿರಾದಾರ@ಆಲೂರೆ, ವಯ|| 26 ವರ್ಷ, || ಖಾಸಗಿ ಕೆಲಸ, ಸಾ|| ತೋರಿವಾಡಿ@ವಳವಂಡವಾಡಿ ತಾ||ಆಳಂದ, ಹಾ||||ಲಾಲ ಹನುಮಾನ ಗುಡಿಯ ಹತ್ತಿರ ಶಹಾಬಜಾರ. ಸಂತೋಷಕುಮಾರ ತಂದೆ ಸುಬಾಶ್ಚಂದ್ರ ರಂಗೋಜಿ, ವಯ|| 32 ವರ್ಷ, || ಟ್ರ್ಯಾಕ್ಟರ ಡ್ರೈವ್ಹರ, ಸಾ|| ದೇಗಾಂವ ತಾ|| ಆಳಂದ, ಹಾ|||| ಮಲಂಗ ಹೊಟೇಲ ಶಿವಾಜಿ ಖಾನಾವಳಿ ಮನೆಯ ಹತ್ತಿರ ಶಹಾಬಜಾರ ಗುಲಬರ್ಗಾ,ರವರನ್ನು ಬಂಧಿಸಿ ಅವರಿಂದ ನಗರದ ಸಂಗಮ ಥೇಟರದಿಂದ, ಕೋಠಾರಿ ಭವನದಿಂದ, ಸರಾಫ ಬಜಾರದಿಂದ, ಸುಪರ ಮಾರ್ಕೆಟದಿಂದ ಕಳ್ಳತನ ಮಾಡಿದ ವಿವಿಧ ಏಳು (7) ಮೋಟರ ಸೈಕಲಗಳು ಅ||ಕಿ||2,35,000/- ರೂಪಾಯಿಗಳ ಬೆಲೆಬಾಳುವದ್ದು ಜಪ್ತ ಮಾಡಿಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ:ಶ್ರೀಮತಿ ಶಾಹೀನ ಅಂಜುಮ್  ಗಂಡ ತೌಸೀಫ್ ಅಹ್ಮದ ಸಾ: ಬಾಂಬೆ ಹೋಟೆಲ್ ಬಿಲಾಲಾಬಾದ ಬ್ಯಾಂಕ ಕಾಲೋನಿ ಗುಲಬರ್ಗಾರವರು ಮಾನ್ಯ 2 ನೇ ಅಪರ ಜೆ.ಎಮ್.ಎಫ್.ಸಿ ನ್ಯಾಯಾಲಯದ ಆದೇಶದಂತೆ ಕಲಂ 156(3) ಸಿ.ಆರ್.ಪಿ.ಸಿ ಪ್ರಕಾರ ತನಿಖೆ ಕೈಕೊಳ್ಳುವಂತೆ ಆದೇಶಿದ ಪ್ರಕಾರ ಮತ್ತು ಅದರ ಸಾರಂಶವೇನೆಂದರೆ, ಶಾಹೀನ ಅಂಜುಮ್ ಲಗ್ನವು ದಿನಾಂಕ:06.10.2008 ರಂದು ತೌಸೀಫ್ ಅಹ್ಮದ ದಿ|| ಹಾಜಿ ಅಬ್ದಲ್ ರಸೂಲ್ ಬಾಂಬೆ ಇತನೊಂದಿಗೆ ಆಗಿದ್ದು. ಮದುವೆ ಕಾಲಕ್ಕೆ  2 ½  ತೊಲೆ ಬಂಗಾರ ಕೊಟ್ಟಿದ್ದು.ಮದುವೆಯಾದ ನಂತರ ನನ್ನ ಗಂಡನ ಮನೆಯಾದ ಬಾಂಬೆಗೆ ಹೋಗಿದ್ದು ತನ್ನ ಗಂಡ, ತೌಸೀಫ್ ಅತ್ತೆ ಅಬೇದಾ, ಮೈದುನ  ರೀಜ್ವಾನ, ನಾದಿನಿ ಶಾಹಜೀಯಾ  ಇವರು 3 ಲಕ್ಷ ರೂಪಾಯಿ ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲವಾದರೇ ನಿನಗೆ ತಲಾಖ್ ಕೊಡುತ್ತೇವೆ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟಿದ್ದು ನನ್ನ ತಂದೆ ತಾಯಿಯವರು ಬಡವರಿದ್ದಾರೆ ಅಂತಾ ತನ್ನ ಗಂಡ , ಅತ್ತೆ, ಮೈದುನ, ಮತ್ತು ನಾದಿನಿ ಇವರಿಗೆ ಹಣ ಕೊಡುವುದು ಆಗುವುದಿಲ್ಲಾ ಅಂತಾ ಹೇಳಿದರು ಕೂಡ ಎಲ್ಲರು ಕೂಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟು ಹೊಡೆ ಬಡೆ ಮಾಡಿ 3 ತಿಂಗಳ ನಂತರ ನನ್ನ ತವರು ಮನೆಯಾದ ಗುಲಬರ್ಗಾಕ್ಕೆ ತಂದು ಬಿಟ್ಟಿರುತ್ತಾರೆ.2010 ರಲ್ಲಿ  ನನ್ನ ಗಂಡ ,ಅತ್ತೆ, ಮೈದುನ, ನಾದಿನಿ ಇವರೆಲ್ಲರು ಕೂಡಿ ಗುಲಬರ್ಗಾದ ಮೋಮಿನಪೂರಕ್ಕೆ ಬಂದಾಗ ನಾನು ಮತ್ತು ನನ್ನ ತಂದೆ ಕೂಡಿ ಆ ನಾಲ್ಕು ಜನರಿಗೆ  ನಮ್ಮಗೆ 3 ಲಕ್ಷ ರೂಪಾಯಿ ಕೊಡುವುದು ಆಗುವುದಿಲ್ಲಾ. ಅಂತಾ ವಿನಂತಿಸಿಕೊಂಡರು ಕೂಡ ನನಗೆ ಕರೆದುಕೊಂಡು ಹೋಗದೇ ಇಲ್ಲೇ ಬಿಟ್ಟು ಹೋಗಿರುತ್ತಾರೆ. ಮತ್ತೆ ಸ್ವಲ್ಪ ದಿವಸದ ನಂತರ ನನ್ನ ತಂದೆ ನನಗೆ ಗಂಡನ ಮನೆಯಾದ ಬಾಂಬೆಯಲ್ಲಿ ಬಿಟ್ಟು ಬಂದರು ಮತ್ತೇ ನಾಲ್ಕು ತಿಂಗಳ ನಂತರ 3 ಲಕ್ಷ  ರೂಪಾಯಿ ತಂದ್ದರೇ ಮಾತ್ರ ನಮ್ಮ ಮನೆಯಲ್ಲಿ ಇರು ಅಂತಾ  ಹೊಡೆ ಬಡೆ ಮಾಡಿ  ಮನೆಯಿಂದ ಹೊರ ಹಾಕಿದ್ದು. ಬಾಂಬೆಯಲ್ಲಿ ಪಂಚಾಯಿತ ಮಾಡಿದರು ಕೂಡ ಯಾರ ಮಾತು ಕೇಳದೇ ಹೊಡೆ ಬಡೆ ಮಾಡುತ್ತಿದ್ದರಿಂದ. ನನ್ನ ತವರು ಮನೆಗೆ ಬಂದು ಉಳಿದುಕೊಂಡಿರುತ್ತೇನೆ.ದಿನಾಂಕ: 18.03.2012 ರಂದು ನನ್ನ ಗಂಡ ಗುಲಬರ್ಗಾದ  ಬಡಿ ಮಜೀದ  ಹತ್ತಿರವಿರುವ ಮನೆಗೆ ಬಂದಾಗ ನಾನು ಮತ್ತು ನನ್ನ ತಂದೆ ಹೋಗಿ ಸರಿಯಾಗಿ ಇಟ್ಟುಕೊಳ್ಳು ಬಾಂಬೆಗೆ ಕರೆದುಕೊಂಡು ಹೋಗು ಅಂತಾ ವಿನಂತಿಸಿಕೊಂಡರು ಕೂಡ ತವರು ಮನೆಯಲ್ಲಿಯೇ ಬೀಟ್ಟು  ಹೋಗಿರುತ್ತೇನೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:83/2012 ಕಲಂ 498(ಎ) ಐ.ಪಿ.ಸಿ 3&4 ಡಿ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ, ದೇವಿಂದ್ರ ತಂದೆ ಶಿವಪ್ಪ ಸಿನ್ನೂರ ರವರು ನಾನು ದಿನಾಂಕ 29/11/2012 ರಂದು ಸಾಯಂಕಾಲ 4-00  ಗಂಟೆ ಸುಮಾರಿಗೆ ನನ್ನ ಅಣ್ಣನ ಹೆಂಡತಿಯಾದ ಕೊಮಲ ಗಂಡ ರಾಜೇಂದ್ರ ಸಿನ್ನೂರ ಇವರು ಸಂಜಯಕುಮಾರ ತಂದೆ ಅಂಬಾಜಿ ಅಟ್ಟೂರ ಇವರ ಮನೆಯ ಹತ್ತಿರ ಹೋಗಿ ನನ್ನ ಮಗಳಾದ ಪೂಜಾ ಇವಳ ಮೋಬೈಲ ನೇದ್ದಕ್ಕೆ ನಿನ್ನ ಮೋ.ನಂಬರಿನಿಂದ ಯಾಕೆ ಕಾಲ್ ಮಾಡುತ್ತಿದ್ದಿ ಅಂತಾ ಕೇಳಿದಕ್ಕೆ ಸಂಜುಕುಮಾರನ ಅಕ್ಕ ಜಯಶ್ರೀ ಇವಳು ಪೋನ ಬಂದಿರಬೇಕು, ಮಾತಾಡಿರಬೇಕು ಈಗ ಏನ್ ಮಾಡುತ್ತಿ ಅಂತಾ ಅವಾಚ್ಯ ಶಬ್ದಗಳಿಂದ  ಬೈಯುತ್ತಿದ್ದು ಆ ವೇಳೆಗೆ ರಮಾಬಾಯಿ, ರತ್ನಾಬಾಯಿ, ಸಂಜುಕುಮಾರ ಮತ್ತು ವಿಜಯಕುಮಾರ ಮನೆಯಿಂದ ಬಂದು ನನಗೆ ಹೊಡೆಯ ಹತ್ತಿದರು. ನನ್ನ ಅತ್ತಿಗೆ ಚಿರಾಡುತ್ತಿದ್ದಾಗ ನಾನು ಮತ್ತು ನನ್ನ ಅಣ್ಣನ ಮಕ್ಕಳಾದ ಶಿವರಾಜ, ಆಕಾಶ, ಮೂರು ಜನ ಕೂಡಿ ಯಾಕೆ ಹೊಡೆಯುತಿದ್ದರಿ ಅಂತಾ ಕೇಳುತ್ತಿದ್ದಾಗ ನೀವು ಬಂದ್ರಿ ಸೂಳಿ ಮಕ್ಕಳೆ ಅಂತಾ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ . ಕಾರಣ ಸಂಜುಕುಮಾರ ತಂದೆ ಅಂಬಾಜಿ ಅಟ್ಟೂರ,ವಿಜಯಕುಮಾರ ತಂದೆ ಅಂಬಾಜಿ ಅಟ್ಟೂರ,ಜಯಶ್ರೀ ಗಂಡ ಶಾಮರಾವ, ರಮಾಬಾಯಿ ಗಂಡ ಮನೋಹರ ಕಂಠಿ,ರತ್ನಾಬಾಯಿ ಗಂಡ ಅಂಬಾಜಿ ಇವರೆಲ್ಲರೂ ಕೂಡಿ ಕೈಯಿಂದ ಹೊಡೆದು ಗುಪ್ತಗಾಯ ಮಾಡಿ ಹೆಣ್ಣು ಮಕ್ಕಳಿಗೆ ಕೈಹಿಡಿದು ಜಗ್ಗಾಡಿ ಅವಮಾನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.111/2012 ಕಲಂ. 147, 323, 354, 504 ಸಂ. 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ: 29-11-2012 ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಪಿ.ಎಸ.ಐ ಆನಂದರಾವ ರವರು ಬೇಲೂರ (ಜೆ) ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಹೋಗುತ್ತಿದ್ದಾಗ ಕತ್ತಲಿನಲ್ಲಿ  ಮೇಲಾರಿ ತಂದೆ ಚಿಂತಾಮಣಿ ಬುಳ್ಳಾ ಸಾ|| ಆದರ್ಶ ನಗರ ಗುಲಬರ್ಗಾ, ಅಬ್ದುಲ ನಸೀರ ತಂದೆ ಹಬೀಬಸಾಬ ಅಂಡೆನವರ ಸಾ|| ಎಸ.ಎಮ್. ಕೃಷ್ಣಾ ಕಾಲೋನಿ ಗುಲಬರ್ಗಾ, ಮಾಣಿಕ ತಂದೆ ಜೆಟೆಪ್ಪಾ ಮಾವಿನಕರ ಸಾ|| ಪೀಲ್ಟರಬೇಡ ಆಶ್ರಯ ಕಾಲೋನಿ ಗುಲಬರ್ಗಾ ಇವರು ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದು ಅವರ ಇವರುವಿಕೆ ಬಗ್ಗೆ ವಿಚಾರಿಸಲಾಗಿ ಸರಿಯಾದ ಉತ್ತರ ಕೊಡಲಿಲ್ಲ . ಸದರಿಯವರನ್ನು ಹಾಗೇ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿನ ಅಪರಾದ ಮಾಡಬಹುದೆಂಬ ಬಲವಾದ ಸಂಶಯದಿಂದ ಠಾಣೆ ಗುನ್ನೆ ನಂ: 395/2012 ಕಲಂ 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಮೋಟಾರ ಸೈಕಲ ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಠಾಣೆ: ಶ್ರೀ ಗೋಪಾಲರಾವ ತಂದೆ ಚಂದಪ್ಪಾ ಬಿಳಂಕರ ಸಾ:ಮನೆ ನಂ:8-1545:81 ಡಿ, ಶಿವಾಜಿ ನಗರ, ಗುಲಬರ್ಗಾ ನಾನು ದಿನಾಂಕಃ16.11.2012 ರಂದು  ಕೆಲಸದ ನಿಮಿತ್ಯ ಹಿರೋಹೊಂಡಾ ಕೆಎ 32 ಎಲ್ 3496 ನೇದ್ದನ್ನು ಮಧ್ಯಾಹ್ನ 3-30 ಗಂಟೆಗೆ ಸುಮಾರಿಗೆ ನಿಲ್ಲಿಸಿ ಕಿರಾಣಬಜಾರದಲ್ಲಿ ಹೋಗಿರುತ್ತೆನೆ. ಕೆಲಸ ಮುಗಿಸಿಕೊಂಡು ಪುನಃ 4.30 ಗಂಟೆಗೆ ಬಂದು ನನ್ನ ವಾಹನ ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲಾಗಿ ಅಲ್ಲಿ ನಾನು ನಿಲ್ಲಿಸಿದ ವಾಹನ ಇರಲಿಲ್ಲ ಹಾಗೂ ಅಲ್ಲಿ ಅಕ್ಕಪಕ್ಕದವರಿಗೆ ವಿಚಾರಿಸಲಾಗಿ ದ್ವಿ-ಚಕ್ರ ವಾಹನದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ಕಾರಣ ಯಾರೋ ಕಳ್ಳರು ನಮ್ಮ ಮೋಟಾರ ಸೈಕಲ್ ನಂ:ಕೆಎ 32 ಎಲ್ 3496 ಹಿರೋಹೊಂಡಾ ಸ್ಪೆಲೆಂಡರ್ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:199/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ. 

29 November 2012

GULBARGA DISTRICT


ಅಫಜಲಪೂರ ಪೊಲೀಸ್ ರ ಕಾರ್ಯಚರಣೆ.
ಒಂದು ತಿಂಗಳ ಹಿಂದೆ ಕೊಲೆಯಾದ ಅಪರಿಚಿತ ಹೆಣ್ಣುಮಗಳ ಕೊಲೆ
ಪ್ರಕರಣದ ಆರೋಪಿಗಳ ಬಂದನ.
               ದಿನಾಂಕ:-26-10-2012 ರಂದು ಶ್ರೀ ರಾಜಶೇಖರ ತಂದೆ ಬೀರಣ್ಣಾ ಬಂಡಗಾರ ಸಾ|| ಉಡಚಣ ಹಟ್ಟಿ ಇವರು ದಿನಾಂಕ 26-10-2012 ರಂದು ಬೆಳಿಗ್ಗೆ 9-30 ಗಂಟೆಯ ಸುಮಾರಿಗೆ ನಮ್ಮ ಗ್ರಾಮದಲ್ಲಿ ಜನರು ಮಾತಾಡುವುದನ್ನು ಕೇಳಿ ಹಿರಿಯಾಳ ರೋಡಿಗೆ ಹಿರಿಗೆಪ್ಪ ತಂದೆ ಕನ್ನಪ್ಪ ಪೂಜಾರಿ ಇತನ ಹೊಲದ ಹತ್ತಿರ ನೀರು ಹರಿಯುವ ಪೈಪಿನ ಪಕ್ಕದಲ್ಲಿ ಒಬ್ಬಳು ಹೆಣ್ಣು ಮಗಳ ಶವ ಬಿದ್ದಿದೆ ಅವಳ ಮೈ ಮೇಲೆ ಬಾಳೆಯ ಎಲೆಗಳು ಹಾಕಿರುತ್ತಾರೆ ಎಂದು  ತಿಳಿದು ಬಂದ ಮೇರೆಗೆ ನಾನು ಸ್ಥಳಕ್ಕೆ ಬಂದು ನೋಡಲಾಗಿ ರೋಡಿನ ಪಕ್ಕದಲ್ಲಿ ತಗ್ಗು ಬಿದ್ದಿರುವ ಸ್ಥಳದಲ್ಲಿ ಸಿಮೆಂಟ ಫೈಪಿನ ಪಕ್ಕಕ್ಕೆ ಒಬ್ಬಳು ಹೆಣ್ಣು ಮಗಳ ಶವ ಬೋರಲಾಗಿ ಬಿದ್ದಿದ್ದು ಶವದ ಮೇಲೆ ಬಾಳೆ ಗಿಡದ ಎಲೆಗಳು ಹಾಕಿ ಮುಚ್ಚಿದ್ದು ಇರುತ್ತದೆ. ಮೃತಳು ಎಲ್ಲಿಯವಳು ಏನು, ಆಕೆಯ ಹೆಸರು ವಿಳಾಸ ಗೊತ್ತಾಗಿರುವುದಿಲ್ಲಾ. ಅವಳನ್ನು ಯಾರೋ ದುಷ್ಕರ್ಮಿಗಳು ಯಾವುದೋ ಹರಿತವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿ ಯಾವುದೋ ವಾಹನದಲ್ಲಿ ಶವ ಹಾಕಿಕೊಂಡು ಬಂದು ಸದರಿ ಸ್ಥಳದಲ್ಲಿ  ಹಾಕಿ ಶವದ ಮೇಲೆ ಬಾಳೆ ಗಿಡದ ಎಲೆಗಳು ಹಾಕಿರುತ್ತಾರೆ. ಸದರಿಯವಳ ಕೊಲೆ ದಿನಾಂಕ 25-10-2012 ರಂದು ಮಾಡಿರುವದಾಗಿ ಕಂಡು ಬಂದಿದ್ದು ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಪಿಐ ಅಫಜಲಪೂರರವರು ಕೇಸಿನ ತನಿಖೆ ಕೈಕೊಂಡಿರುತ್ತಾರೆ. 
          ನಂತರ ಗುಲಬರ್ಗಾ ಜಿಲ್ಲೆಯ ಮಾನ್ಯ ಪ್ರಭಾರಿ ಎಸ್.ಪಿ.ಸಾಹೇಬರವರಾದ ಶ್ರೀ ಕಾಶಿನಾಥ ತಳಕೇರಿ ಮತ್ತು ಮಾನ್ಯ ಡಿ.ಎಸ್.ಪಿ.ಸಾಹೇಬರು ಆಳಂದ ಶ್ರೀ ಎಸ್.ಬಿ.ಸಂಬಾ ರವರ ಮಾರ್ಗದರ್ಶನದಲ್ಲಿ ಒಂದು ತಂಡವನ್ನು ರಚಿಸಿಕೊಂಡು ಅಫಜಲಪೂರ ವೃತ್ತ ನಿರೀಕ್ಷಕರಾದ ಕೆ.ರಾಜೇಂದ್ರ, ಪಿ.ಎಸ್.ಐ.ಮಂಜುನಾಥ ಮತ್ತು ಸಿಬ್ಬಂದಿಯವರಾದ ಚಂದ್ರಕಾಂತ,ರಾಮಚಂದ್ರ, ಪಿಸಿ. ರಾಜಶೇಖರ, ತುಳಜಪ್ಪ, ಚಂದ್ರಕಾಂತ, ಶಿವಾನಂದ, ಅರವಿಂದ, ವಾಹನ ಚಾಲಕ ಭೀಮಾಶಂಕರರವರನ್ನಳಗೊಂಡ ತಂಡ ದಿನಾಂಕ:-27-11-2012 ರಂದು ವಿಜಯಕುಮಾರ ತಂದೆ ದೇವಿಂದ್ರ ಡೊಂಗ್ರಾಜೆ, ರಮೇಶ ತಂದೆ ಹಣಮಂತ ಡೊಂಗ್ರಾಜೆ ಇಬ್ಬರು ಸಾ|| ಸಲಗರ (ಎಮ್) ಇವರನ್ನು ದುಧನಿ ರೈಲ್ವೆ ನಿಲ್ದಾಣದ ಹತ್ತಿರ ದಸ್ತಗಿರಿ ಮಾಡಿರುತ್ತಾರೆ. ಈ ಕೊಲೆಯ ಉದ್ದೇಶ ಮೃತ ಸುರೇಖಾ ಗಂಡ ಸಿದ್ದರಾಮ ಹೊರಪೇಟ ಇವಳ ಮೈ ಮೇಲಿನ ಬಂಗಾರದ ಒಡವೆಗಳನ್ನು ದೋಚಿಕೊಳ್ಳುವ ಉದ್ದೇಶದಿಂದ ಅವಳನ್ನು ದಿ;25-10-2012 ರಂದು ಅಫಜಲಪೂರದಲ್ಲಿನ ಪೈನಾನ್ಸಗಳಲ್ಲಿ ಮಾರಾಟಕ್ಕಿರುವ ಕ್ರೋಷರ ವಾಹನಗಳನ್ನು ನೋಡಿಕೊಂಡು ಬರೋಣ ಅಂತ ಆಸೆ ಹುಟ್ಟಿಸಿ ಅವಳನ್ನು ಆರೋಪಿ ವಿಜಯಕುಮಾರನ ಪಿಕಪ್ ನಂ;ಎಮ್.ಹೆಚ್.13 ಆರ್.9635 ನೇದ್ದರಲ್ಲಿ ಅಕ್ಕಲಕೋಟದಿಂದ ಅಫಜಲಪೂರಕ್ಕೆ ಕರೆದುಕೊಂಡು ಬಂದು ಮರಳಿ ತಮ್ಮ ಊರಿಗೆ ಹೋಗುವಾಗ ರಾತ್ರಿ ದುಧನಿ ಗ್ರಾಮ ದಾಟಿದ ನಂತರ ಶಾಂಭವಿ ಹೊಟೇಲ ಮುಂದುಗಡೆಯಿಂದ  ರುದ್ದೆವಾಡಿ ಗ್ರಾಮದ ಕಡೆಗೆ ಹೋಗುವ ರೋಡಿಗೆ ಕರೆದುಕೊಂಡು ಹೋಗಿ ರೈಲ್ವೆ ಓವರ್ ಬ್ರಿಡ್ಜ ಸಮೀಪದಲ್ಲಿ ಪಿಕಪ್ ವಾಹನ ನಿಲ್ಲಿಸಿ ಡಿಸೆಲ್ ಆಗಿದೆ ಅಂತ ಸುಳ್ಳು ಹೇಳಿದಾಗ ಮೃತಳು ರಾತ್ರಿ ಹೊತ್ತಿನಲ್ಲಿ ಮೈಮೇಲಿದ್ದ ಬಂಗಾರದ ಆಭರಣಗಳನ್ನು ಯಾರಾದರು ಹೊಡೆದು ಕಸಿದುಕೊಳ್ಳಬಹುದು ಅಂತ ಅವುಗಳನ್ನು ತೆಗೆದು ತನ್ನಲ್ಲಿರುವ ಸಣ್ಣ ಚೀಲದಲ್ಲಿ ಹಾಕಿಕೊಂಡು ಪಿಕಪ್ ವಾಹನದ ಹಿಂದುಗಡೆ ರೋಡಿನ ಮೇಲೆ ಕುಳಿತಿದ್ದಾಗ ವಿಜಯಕುಮಾರ ಮತ್ತು ರಮೇಶ ಇಬ್ಬರು ಕತ್ತಲಲ್ಲಿ ಅವಳ ಹಿಂದಿನಿಂದ ಹೋಗಿ ಮೃತಳಿಗೆ ತಲವಾರದಿಂದ ಹೊಡೆದು ಕೊಲೆ ಮಾಡಿ ಶವವನ್ನು ತಮ್ಮ ಪಿಕಪ್ ವಾಹನದಲ್ಲಿ ಹಾಕಿಕೊಂಡು ಉಡಚಣ ಹಟ್ಟಿಯಿಂದ ಹಿರಿಯಾಳ ಗ್ರಾಮದ ಕಡೆಗೆ ಹೋಗುವ ರೋಡಿನ ಪಕ್ಕದಲ್ಲಿರುವ ತೆಗ್ಗಿನಲ್ಲಿ ಹಾಕಿ ಮೃತಳ ಮೈಮೇಲಿನ ಬಂಗಾರದ ಆಭರಣಗಳನ್ನು ತೆಗೆದುಕೊಂಡು ಹೋಗಿರುವದಾಗಿ ಒಪ್ಪಿಕೊಂಡಿರುತ್ತಾರೆ. ಸದರಿ ಆರೋಪಿತರಿಂದ ಮೃತಳ ಮೈಮೇಲಿನ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತು ಆರೋಪಿತರು ಮೃತಳ ಶವ ಸಾಗಿಸಲು ಉಪಯೋಗಿಸಿದ ಪಿಕಪ್ ವಾಹನ ನಂ;ಎಮ್.ಹೆಚ್.13 ಆರ್. 9635 ನೇದ್ದು  ಒಟ್ಟು ಅ||ಕಿ|| 2,55,000=00 ರೂ ನೇದ್ದನ್ನು ವಶಪಡಿಸಿಕೊಳ್ಳಲಾಗಿರುತ್ತದೆ.        ಈ ಪತ್ತೆ ಕಾರ್ಯಕ್ಕೆ ಮಾನ್ಯ ಪ್ರಭಾರಿ ಎಸ್.ಪಿ.ಸಾಹೇಬರಾದ ಶ್ರೀ ಕಾಶಿನಾಥ ತಳಕೇರಿ ರವರು ಅಫಜಲಪೂರ ವೃತ್ತ ಮತ್ತು ಠಾಣೆಯ ಪೊಲೀಸರ ಪತ್ತೆ ಕಾರ್ಯವನ್ನು ಪ್ರಶಂಶಿಸಿರುತ್ತಾರೆ. 

GULBARGA DISTRICT REPORTED CRIMES


ಮಹಿಳಾ ಪೊಲೀಸ್ ಪೇದೆ ಆತ್ಮಹತ್ಯೆ, ಯು.ಡಿ.ಅರ್. ಪ್ರಕರಣ ದಾಖಲು:
ಚಿತ್ತಾಪೂರ ಪೊಲೀಸ್ ಠಾಣೆ: ಶ್ರೀ ಮಲ್ಲಪ್ಪ ತಂದೆ ಬಸಪ್ಪ ಕಲಶೆಟ್ಟಿ ಪ್ರಾದೇಶಿಕ ಭೂ-ಮಾಪನ ತರಬೇತಿ ಸಂಸ್ಥೆಯಲ್ಲಿ ಭೋದಕ ಸಾ|| ಕೆರಕನಳ್ಳಿ ತಾ|| ಅಫಜಲಪುರ ಹಾ||ವ|| ಮಾತಾ ಮಾಣಿಕೇಶ್ವರಿ ಕಾಲೋನಿ ಗುಲಬರ್ಗಾ ರವರು ನನ್ನ ಮೂರನೆ ಮಗಳು ಕುಮಾರಿ ರೇಷ್ಮಾ ಇವಳು ಪೊಲಿಸ್ ಇಲಾಖೆಯಲ್ಲಿ ಪೊಲೀಸ್ ಪೇದೆ ಅಂತ ಭರ್ತಿಯಾಗಿ ಚಿತ್ತಾಪೂರ ಠಾಣೆಯಲ್ಲಿ ಮಹಿಳಾ ಪೇದೆ ಅಂತ ಕರ್ತವ್ಯ ನಿರ್ವಹಿಸುತ್ತಿದ್ದಳು. ದಿನಾಂಕ:23/11/2012 ರಂದು ನಾನು ಕರ್ತವ್ಯದ ನಿಮಿತ್ಯ ಮೈಸೂರಿಗೆ ಹೋರಟಾಗ ನನ್ನ ಮಗಳಾದ ರೇಷ್ಮಾ ಇವಳು ರಜೆಯ ಮೇಲೆ ಬಂದು ಮನೆಯಲ್ಲಿ ಇದ್ದಳು. ಸದರಿಯವಳಿಗೆ ವಿಚಾರಿಸಲಾಗಿ ದಿನಾಂಕ:26/11/2012 ರವರೆಗೆ ರಜೆ ತೆಗೆದುಕೊಂಡು ಬಂದಿರುತ್ತೇನೆ ಅಂತ ಹೇಳಿದಳು. ನಾನು ಮರಳಿ ರೈಲು ಮುಖಾಂತರ  ಗುಲಬರ್ಗಾಕ್ಕೆ ಬರುತ್ತಿರುವಾಗ ನನ್ನ ಮಗನಾದ ಪ್ರವೀಣ ಇತನು ನನಗೆ ಫೋನ ಮುಖಾಂತರ ಅಕ್ಕಾ ಚಿತ್ತಾಪುರದಲ್ಲಿ ಮರಣ ಹೊಂದಿರುತ್ತಾಳೆ ನೀನು ನೇರವಾಗಿ ಚಿತ್ತಾಪುರಕ್ಕೆ  ಬಾ ಅಂತ ತಿಳಿಸಿದ ಮೇರೆಗೆ ನಾನು ಚಿತ್ತಾಪೂರದ ಪೊಲೀಸ್ ವಸತಿ ಗೃಹಕ್ಕೆ ಬಂದು ನೋಡಲಾಗಿ ನನ್ನ ಮಗಳು ಮೃತಪಟ್ಟಿದ್ದು ಇರುತ್ತದೆ. ನನ್ನ ಮಗಳಾದ ರೇಷ್ಮಾ  ಇವಳು ತನ್ನ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ಔಷಧದ ಗುಳಿಗೆ ನುಂಗಿ ಮೃತಪಟ್ಟಿದ್ದು ನನ್ನ ಮಗಳ ಸಾವಿನಲ್ಲಿ ಯಾರ ಮೇಲೂ  ಯಾವುದೇ ಸಂಶಯ ವಗೈರೆ ಇರುವದಿಲ್ಲಾ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಯು.,ಡಿ.ಆರ್ ನಂ:20/2012 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವರದಕ್ಷಿಣೆ ಕಿರಕುಳು ಪ್ರಕರಣ:
ಮಹಿಳಾ ಪೋಲಿಸ ಠಾಣೆ:ಮಾನ್ಯ 2 ನೇ ಅಪರ ಜೇ. ಎಮ್.ಎಫ್.ಸಿ ನ್ಯಾಯಾಲಯ ಪತ್ರ ನಂಬರ 607/12 ದಿನಾಂಕ: 27.11.2012 ನೇದ್ದಆದೇಶ ಕಲಂ 156(3) ಸಿ.ಆರ್.ಪಿ.ಸಿ ಪ್ರಕಾರ ತನಿಖೆ ಕೈಕೊಳ್ಳವುದಂತೆ ಆದೇಶದ ಪ್ರಕಾರ ರುಬೀನಾ ಬೇಗಂ  ಇವಳ ಮದುವೆಯು ದಿನಾಂಕ:17.06.2011 ರಂದು ವಸೀಮ್ ಅಕ್ರಮ್  ಇತನೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಕಾಲಕ್ಕೆ ವರದಕ್ಷಿಣೆ ರೂಪದಲ್ಲಿ 5 ತೊಲೆ ಬಂಗಾರ ಒಂದು ಹೀರೊಹೊಂಡಾ ಮೋಟಾರ ಸೈಕಲ್ ಮತ್ತು ಗೃಹ ಬಳಿಕೆ ಸಾಮಾನುಗಳು ಕೊಟ್ಟಿದ್ದು. ವಸೀಮ್ ಅಕ್ರಮ್ ಇತನು ಬೆಂಗಳೂರಿನಲ್ಲಿ ಖಾಸಗಿ ಕೆಲಸ ಮಾಡಿಕೊಂಡು ಇರುತ್ತಾನೆ . ಮದುವೆಯಾದ ನಂತರ ಗಂಡನ  ಮನೆಯಾದ ಬೆಂಗಳೂರಿಗೆ ಹೋಗಿದ್ದು  ಅಲ್ಲಿ ಸ್ವಲ್ಪ ದಿವಸದ ನಂತರ ಗಂಡ  ಹಾಗೂ ಮನೆಯವರು  ಕೂಡಿ ನೀನು ವರದಕ್ಷಣೆ ಕಡಿಮೆ ತಂದಿದಿಯಾ ನಿನಗೆ ಅಡಿಗೆ ಮಾಡಲು ಬರುವುದಿಲ್ಲಾ ಅಂತಾ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ಕೊಡಲು ಪ್ರಾರಂಬಿಸಿದರು.  ನನ್ನ ತಾಯಿ  ಫ್ರೀಜ್ , ಕೂಲರ್, ವಾಶಿಂಗ್ ಮಶೀನ್ , ಗ್ಯಾಸ ಸ್ಟ್ಯೋ, ಸಿಲಿಂಡರ್ , ಫ್ಯಾನ್ ಕೂಡ ತಂದು ಕೊಟ್ಟಿದ್ದು ಇರುತ್ತದೆ. ಇಷ್ಟ ಎಲ್ಲಾ ತಂದು ಕೊಟ್ಟರು ಕೂಡ ಅವರು ನನಗೆ ಹಿಂಸೆ ಕೊಡುತ್ತಾ ಬಂದಿರುತ್ತಾರೆ. ಇವತ್ತಿಲ್ಲಾ ನಾಳೆ ಸರಿ ಹೋಗ ಬಹುದು ಅಂತಾ ಸಹಿಸಿಕೊಂಡು ಬಂದಿರುತ್ತೇನೆ  ಮೂರು ತಿಂಗಳ ನಂತರ ನನ್ನ ಗಂಡ  ನನ್ನ ತವರು ಮನೆಯವರು ಕೊಟ್ಟ ಸಾಮಾನುಗಳು ಮಾರಿ ತಾವು ಒತ್ತಿ ಹಾಕಿದ ಮನೆ ಬಿಡಿಸಿಕೊಂಡಿರುತ್ತಾರೆ. ಇಷ್ಟೆಲ್ಲಾ ಮಾಡಿದ್ದು ಅಲ್ಲದೇ ಇನ್ನೊಂದು ಮೋಟಾರ ಸೈಕಲ್ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಟ್ಟಾಗ ನನ್ನ ತವರು ಮನೆಯವರು ಇನ್ನೊಂದು ಮೋಟಾರ ಸೈಕಲ್ ಕೊಡಿಸಿದರು. ನಂತರ ನನಗೆ ಸಾಯಿಸಬೇಕು ಅಂತಾ ಸಿಲೇಡಂರ್  ಓಪನ್ ಮಾಡಿ ಮನೆ ಬಾಗಿಲು ಮುಚ್ಚಿಕೊಂಡು ಹೋಗಿರುತ್ತಾರೆ.ನಿನ್ನ ತವರು ಮನೆಯಿಂದ ನೀನು 10 ಲಕ್ಷ ರೂಪಾಯಿ ತರದೇ ಇದ್ದರೇ ತಲಾಖ್ ಕೊಡುತ್ತೇವೆ ಅಂತಾ ರಂಜಾನ ತಿಂಗಳಲ್ಲಿಯೇ ಊಟಕ್ಕೆ ಕೊಡದೇ ಉಪವಾಸ ಹಾಕಿದ್ದು ಇರುತ್ತದೆ.ಈ ವಿಷಯವನ್ನು  ನಾನು ನನ್ನ ತಮ್ಮನಿಗೆ ತಿಳಿಸಿದಾಗ ನನ್ನ ತಮ್ಮ ನನಗೆ  ಗುಲಬರ್ಗಾಕ್ಕೆ ಕರೆದುಕೊಂಡು ಬಂದಿದ್ದು ದಿನಾಂಕ: 02.09.2012 ರಂದು ನನ್ನ ಗಂಡನಾದ ವಸೀಮ್ ಅಕ್ರಮ್ ನನ್ನ ತವರು ಮನೆಗೆ ಬಂದು  ನನಗೆ 10 ಲಕ್ಷ ರೂಪಾಯಿ ಕೊಡು ಇಲ್ಲದ್ದಿದರೆ ತಲಾಖ ಕೊಡು ಅಂತಾ ಜಗಳ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 82/2012 ಕಲಂ 498(ಎ), ಐ.ಪಿ.ಸಿ ಮತ್ತು  3&4 ಡಿ.ಪಿ.ಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಜೂಜಾಟ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ದಿನಾಂಕ 28-11-2012 ರಂದು ರಾತ್ರಿ 9-00 ಗಂಟೆಗೆ ಶ್ರೀ ಎಸ್.ಎಸ್. ಹುಲ್ಲೂರ್ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ ರವರು ತಮ್ಮ ಸಿಬ್ಬಂದಿಯೊಂದಿಗೆ ಹಾಗು ನಮ್ಮ ಠಾಣೆಯ ಅಧಿಕಾರಿ ಹಾಗು ಸಿಬ್ಬಂದಿ ಸಹಾಯದೊಂದಿಗೆ ಠಾಣಾ ವ್ಯಾಪ್ತಿಯಲ್ಲಿರುವ ವಿವೇಕಾನಂದ ನಗರದಲ್ಲಿ ಮಟಕಾ ಜೂಜಾಟ ನಡೆಯುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಪಡೆದುಕೊಂಡು  ದಾಳಿ ಮಾಡಿ  ಅನಿಲಕುಮಾರ ತಂದೆ ರಾಮಣ್ಣ ಗಣೇರ ಇತನಿಗೆ ವಶಕ್ಕೆ ತೆಗೆದುಕೊಂಡು ಮಟಕಾ ನಂಬರ ಬರೆದ ಚೀಟಿ, ನಗದು ಹಣ 1150/-ರೂಪಾಯಿಗಳು, ಪೆನ್ ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣಾ ಗುನ್ನೆ ನಂ:89/2012 ಕಲಂ 420 ಐಪಿಸಿ ಸಂಗಡ 78 (3) ಕರ್ನಾಟಕ ಪೊಲೀಸ್ ಕಾಯ್ದೆ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಸುಧೀರ ತಂದೆ ಶರಣಪ್ಪ @ ಶಿವಶರಣಪ್ಪ ತಳಕೇರಿ ಸಾ: ಕೆರೆಬೋಸಗಾ ತಾ: ಜಿ: ಗುಲಬರ್ಗಾ ರವರು ನಾನು ದಿನಾಂಕ:28/11/2012 ರಂದು  ಕೆರೆಬೋಸಗಾ ಗ್ರಾಮದಲ್ಲಿ ನಮ್ಮ ಸಂಬಂಧಿಕರಲ್ಲಿ ಜವಳ ಕಾರ್ಯಕ್ರಮದ ಪ್ರಯುಕ್ತ ಆಟೋ ನಂ ಕೆಎ 32 ಬಿ 0188 ನೇದ್ದರಲ್ಲಿ ಕುಳಿತು ಹೋರಟಾಗ  ಆಳಂದ ಚೆಕ್ಕ ಪೋಸ್ಟ್‌ ರಾಣೇಶ ಪೀರ ದರ್ಗಾದ ಹತ್ತಿರ ರೋಡಿನ  ಹತ್ತಿರ  ಹಿಂದಿನಿಂದ ಒಂದು ಕಾರ ಆಟೋಕ್ಕೆ ಓವರ ಟೇಕ ಮಾಡಿ ಯಾವುದೇ ಮುನ್ಸೂಚನೆ ನೀಡಿದೆ ಒಮ್ಮಿಂದ ಒಮ್ಮೇಲೆ ಬಲಕ್ಕೆ ತಿರುಗಿಸಿ ಬ್ರೇಕ ಹಾಕಿ ನಿಲ್ಲಿಸಿದ್ದರಿಂದ  ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದರಿಂದ ಆಟೋದ ಗ್ಲಾಸ ಒಡೆದು ಅದರ ಚೂರುಗಳು ಹಣೆ ಮೇಲೆ & ಎರಡು ಕಣ್ಣೀನ  ಹುಬ್ಬಿನ ಮೇಲೆ ಬಡಿದು ರಕ್ತಗಾಯವಾಗಿದ್ದು . ಕಾರಿನ ಚಾಲಕ ಕಾರನ್ನು ಬಿಟ್ಟು ಓಡಿ ಹೋಗಿರುತ್ತಾನೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 393/2012 ಕಲಂ, 279,337 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

28 November 2012

GULBARGA DISTRICT REPORTED CRIMES


ದರೋಡೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಶರಣಬಸಪ್ಪಾ ತಂದೆ ಅಪ್ಪಾರಾವ ಶೇರಿಕರ ಸಾ:ಲಕ್ಷ್ಮೀಗಂಜ ಶಹಾಬಾದ ರವರು ನಾನು ಮತ್ತು ಶಿವಕುಮಾರ ತಂದೆ ಬಾಬುರಾವ ಕೊರವಾರ ಕೂಡಿಕೊಂಡು ದಿನಾಂಕ:27/11/2012 ರಂದು ಮುಂಜಾನೆ ನನ್ನ ಮೋಟಾರ ಸೈಕಲ ಟಿವಿಎಸ್‌ ಎಕ್ಸಸ ನಂ.ಕೆಎ-32 ಡಬ್ಲೂ-4897 ನೇದ್ದರ ಮೇಲೆ ಅಫಜಲಪೂರಕ್ಕೆ ಹೋಗಿ ಮರಳಿ ಶಹಾಬಾದ ಕಡೆಗೆ ಮರತೂರ ಮಾರ್ಗವಾಗಿ ಮರತೂರ ಗ್ರಾಮದ ಹತ್ತಿರ ರಾತ್ರಿ ಅಂದಾಜು 9.30 ಪಿಎಂ ಸುಮಾರಿಗೆ ಬರುತ್ತಿರುವಾಗ ಹಿಂದುಗಡೆಯಿಂದ ಮೂರು ಜನರು ಮೋಟಾರ ಸೈಕಲ ಮೇಲೆ ಬಂದು ನಮಗೆ ಸೈಡು ಹೊಡೆದು ಮುಂದೆ ಹೋಗಿ ನಿಲ್ಲಿಸಿ,ಕಣ್ಣಿಗೆ ಕಾರಪುಡಿ ಎರಚಿ ಮಚ್ಚಿನಿಂದ ಹೊಡೆದು ಗುಪ್ತಗಾಯ ಮತ್ತು ರಕ್ತಗಾಯ ಪಡಿಸಿ ನನ್ನಲ್ಲಿದ್ದ ನಗದು ಹಣ 10,000/-ರೂ ಹಾಗೂ ಒಂದು ಸ್ಯಾಮಸಂಗ ಕಂಪನಿಯ ಮೊಬೈಲ  ಅ.ಕಿ.7000/-ರೂ ಹೀಗೆ ಒಟ್ಟು 17,000/-ರೂ ಕಿಮ್ಮತ್ತಿನೇದ್ದವುಗಳನ್ನು ಕಸಿದುಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 156/2012 ಕಲಂ, 394 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ ಠಾಣೆ:ಶ್ರೀ. ರಜನಿಕಾಂತ ತಂದೆ ಕಂಠೆಪ್ಪಾ ಸಾ|| ಕಪನೂರ ತಾ||ಜಿ|| ಗುಲಬರ್ಗಾ ರವರು ನಾನು ದಿನಾಂಕ:19/11/2012 ರಂದು 14-30 ಗಂಟೆಗೆ ಸರಾಫ ಬಜಾರ ಮೈಲಾಪೂರ ಬಂಗಾರದ ಅಂಗಡಿ ಹತ್ತಿರ ಹೀರೋ ಹೊಂಡಾ ಸ್ಪೇಲೆಂಡರ್ ಪ್ಲಸ್ ಸಿಲ್ವರ್ ಬಣ್ಣದ ಮೋಟರ ಸೈಕಲ ನಂ:ಕೆಎ 32 ಎಕ್ಸ್ 1119  ||ಕಿ|| 40,000/- ನೇದ್ದನ್ನು ನಿಲ್ಲಿಸಿ ಮಾರ್ಕೆಟ ಮಾಡಲು ಹೋಗಿ, ಮರಳಿ  ಬರುವಷ್ಟರಲ್ಲಿ ಯಾರೋ ಕಳ್ಳರು ನನ್ನ ಮೋಟರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿದ್ದು ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವದಿಲ್ಲ. ಕಾರಣ ಯಾರೋ ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:124/2012 ಕಲಂ: 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಹುಡಗ ಕಾಣೆಯಾದ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀಮತಿ,ಅಂಬವ್ವ ಗಂಡ ದಶರಥ ಸನಾಗರ ವ||40,ಸಾ|| ಬೋರಾಬಾಯಿ ನಗರ ಬ್ರಹ್ಮಪುರ ಗುಲಬರ್ಗಾ ರವರು ನನ್ನ  ಮಗನಾದ ಮಂಜುನಾಥ @ಕಾಕಿ ತಂದೆ ದಶರಥ ಸನಾಗರ್ ವ||10 ವರ್ಷ, ಇತನು ದಿನಾಂಕ 02-11-2012 ರಂದು ಮದ್ಯಾಹ್ನ 3-00 ಗಂಟೆಗೆ ಮನೆಯಿಂದ ಹೊರಗೆ ಹೋದವನು ಮರಳಿ ಮನೆಗೆ ಬಂದಿರುವದಿಲ್ಲ. ಎಲ್ಲಾ ಕಡೆಗು ಹುಡುಕಾಡಿದರು ಮಗ ಪತ್ತೆ ಆಗದೇ ಇರುವದರಿಂದ, ಕಾಣೆಯಾದ ತನ್ನ ಮಗನನ್ನು ಪತ್ತೆ ಹಚ್ಚಿ ಕೊಡಬೇಕು ಅಂತ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:88/2012 ಕಲಂ ಹುಡುಗ ಕಾಣೆಯಾದ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀ. ಮಹ್ಮದ ಅಬ್ದುಲ ಖದೀರ ತಂದೆ ಮೊಹ್ಮದ ಅಬ್ದುಲ ಹಮೀದ ಸಾ|| ಮನೆ ನಂ: ಎಂ.ಐ.ಜಿ.10 ಆನಂದ ನಗರ ರಾಜಾಪೂರ ರೋಡ  ಗುಲಬರ್ಗಾ ರವರು ನಾನು ದಿನಾಂಕ:27/10/2012 ರಂದು 14-30 ಗಂಟೆಗೆ ಸುಪರ ಮಾರ್ಕೆಟ ಘಂಟೋಜಿ ಅಂಗಡಿ ಹತ್ತಿರ ನನ್ನ ಹೀರೋ ಹೊಂಡಾ ಸಿಡಿ 100 ಡಿಲಕ್ಸ್  ಕಪ್ಪು ಬಣ್ಣದ ಮೋಟರ ಸೈಕಲ ನಂ: ಕೆಎ 32 ಎಲ್4210 ||ಕಿ|| 30,000/- ನೇದ್ದನ್ನು ನಿಲ್ಲಿಸಿ ನಮಾಜ ಮುಗಿಸಿಕೊಂಡು ಬಂದು ನೋಡಲಾಗಿ ಯಾರೋ ಕಳ್ಳರು ನನ್ನ ಮೋಟರ ಸೈಕಲ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಯಾರೋ ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 123/2012 ಕಲಂ, 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿ:27-11-12 ಮದ್ಯಾಹ್ನ 2-45 ಗಂಟೆ ಸುಮಾರಿಗೆ ಸಾಗರ ದಾಬಾದ ಹಿಂದಿನ ಜಾಗದಲ್ಲಿ ವಿಠಲ ತಂದೆ ಘಾಳೆಪ್ಪ ರಂಗೋಜಿ ವ: 21 ಸಾ: ದೇಗಾಂವ ತಾ: ಆಳಂದ ಹಾ:ವ: ಸಾಗರ ಧಾಬಾ,ಮಹ್ಮದಅಲಿ ತಂದೆ ಅಬ್ದುಲ ರಶೀದ ಶೇಕ ವ: 24 ವರ್ಷ ಸಾ: ರಹೇಮತ ನಗರ ಗುಲಬರ್ಗಾ,ಬಾಬಾ ತಂದೆ ಮಲ್ಲಿಕಸಾಬ ಭಾಗವಾನ ವ: 36 ಸಾ: ಚಟ್ಟೆವಾಡಿ ರೋಜಾ ಗುಲಬರ್ಗಾ,ಮಹೇಶ ತಂದೆ ರುಕ್ಮಣ್ಣ ಚವ್ಹಾಣ ವ: 35 ವರ್ಷ  ಸಾ: ಮಕ್ತಂಪೂರ ಗುಲಬರ್ಗಾ,ಸೋಮನಾಥ ತಂದೆ ಬಾಬುರಾವ ಏವಲೇ ವ: 35 ಸಾ: ಆರ್‌ಎಸ್‌ ಕಾಲನಿ ಗುಲಬರ್ಗಾ,ನಾಶೀರ ತಂದೆ ಮಹೇಬೂಬಪಟೇಲ ವ: 36 ಸಾ: ಬುಲಂದ ಪರವೇಜ ಕಾಲನಿ ಗುಲಬರ್ಗಾ,ಸದ್ದಾಂ ತಂದೆ ಅಮಜಾದ  ಶೇಖ ವ: 20 ಸಾ: ರಹೇಮತ ನಗರ ಗುಲ್ಬರ್ಗಾ,ಸೈಬಣ್ಣ ತಂದೆ ಮಲ್ಲಪ್ಪ ತೋಟ್ನಳ್ಳಿ ಸಾ:ಹೊಸಳ್ಳಿ ತಾ:ಸೇಡಂ ಹಾ:ವ:ಸಾಗರದಾಬಾ ಗುಲ್ಬರ್ಗಾ,ದತ್ತಾತ್ರೇಯ  ತಂದೆ ಕಾಶೀನಾಥ ಪಾಟಳ ವ: 35 ವರ್ಷ ಸಾ: ಸ್ಟೇಷನ ಗಾಣಗಾಪೂರ,ಓಂ ಪ್ರಕಾಶ ತಂದೆ ರಾಮಚಂದ್ರಪ್ಪ ಬಿರಾದಾರ ವ: 27 ವರ್ಷ ಸಾ: ಶಿವಾಜಿನಗರ ಗುಲಬರ್ಗಾ  ರವರು  ದುಂಡಾಗಿ ಕುಳಿತುಕೊಂಡು ಅಂದರ ಬಾಹರ ಇಸ್ಪೀಟ ಜೂಜಾಟ ಆಡುತ್ತಿದ್ದಾಗ ಪಿ.ಎಸ.ಐ ಆನಂದರಾವ ಮತ್ತು ಸಿಬ್ಬಂದಿಯವರು ಮಾನ್ಯ ಡಿ.ಎಸ್.ಪಿ. (ಗ್ರಾ) ಉಪವಿಭಾಗ ಗುಲಬರ್ಗಾ ಮಾರ್ಗದರ್ಶನ ಮತ್ತು ಮಾನ್ಯ ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ ರವರ ನೇತ್ರತ್ವದಲ್ಲಿ ದಾಳಿ ಮಾಡಿ 10 ಜನರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಸಂಬಂಧಿ ಸಿದ ನಗದು ಹಣ 10,400/- ರೂ. ಮತ್ತು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನ ನಂ: ಗುನ್ನೆ ನಂ 390/12  ಕಲಂ 87 ಕೆ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀಮತಿ ಅಂಬುಬಾಯಿ ಗಂಡ  ಮಲ್ಲೇಶಪ್ಪಾ ಅಂಬಲಗಿ ವಯ;65 ವರ್ಷ ಉ: ಮನೆಗೆಲಸ ಸಾ: ಕಪನೂರ ತಾ: ಜಿ: ಗುಲಬರ್ಗಾರವರು ನಾನು ದಿನಾಂಕ:27/11/2012 ರಂದು ಹೊಲದಿಂದ ಮನೆಗೆ ರಸ್ತೆಯ ಪಕ್ಕದಿಂದ ನಡೆದುಕೊಂಡು ಬರುತ್ತಿರುವಾಗ ಸಾಯಂಕಾಲ 6:30 ಗಂಟೆಯ ಸುಮಾರಿಗೆ ಹುಮನಾಬಾದ ರಿಂಗ ರೋಡ ಕಡೆಯಿಂದ ಹಿಂದಿನಿಂದ ಯಾವುದೋ ಒಂದು ಮೋಟಾರ ಸೈಕಲ  ಸವಾರನು ನನಗೆ ಡಿಕ್ಕಿ ಹೊಡೆದು ಗಾಯಗೊಳಿಸಿ ತನ್ನ ಮೋಟಾರ ಸೈಕಲ್ಲನ್ನು ಹಾಗೇ ಒಡಿಸಿಕೊಂಡು ಓಡಿ ಹೋಗಿರುತ್ತಾನೆ ಅಂತಯಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:391/2012  ಕಲಂ 279 337 ಐಪಿಸಿ ಸಂಗಡ 187 ಐಎಂವಿ ಆಕ್ಟ್‌‌  ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀಮತಿ ಜಗದೇವಿ ಗಂಡ ಶರಣಪ್ಪ ಉಪ್ಪಾರ ವ: 30 ಉ: ಗೌಂಡಿಕೆಲಸ ಜಾ;ಲಿಂಗಾಯತ ಸಾ:ಮೋತಕಪಳ್ಳಿ ತಾ: ಚಿಂಚೋಳಿ ಹಾ: ವ: ಬೇಲೂರ (ಜೆ) ತಾ: ಜಿ: ಗುಲಬರ್ಗಾರವರು ನಾನು ನನ್ನ ಗಂಡ ದಿನಾಂಕ:27/11/2012 ರಂದು ಸಾಯಂಕಾಲ ಮೋಟಾರ ಸೈಕಲ ಮೇಲೆ ಕುಮಸಿ ಗ್ರಾಮದಿಂದ ಬೇಲೂರ (ಜೆ) ಗ್ರಾಮಕ್ಕೆ ನಮ್ಮ ಬಜಾಜ ಡಿಸ್ಕವರಿ ಮೋಟಾರ ಸೈಕಲ ನಂ:ಕೆಎ-32 ಇಎ-6238 ನೇದ್ದರ ಮೇಲೆ ಹೋರಟಿದ್ದು,ನನ್ನ  ಪತಿಯವರು ಅವರಾದ (ಬಿ) ಗ್ರಾಮ ದಾಟಿ ಸ್ವಾಮಿ ಸರ್ಮಥ ಆಶ್ರಮದ ಎದುರಿನ ರಸ್ತೆಯ ಮೇಲೆ ಅತಿವೇಗದಿಂದ ನಡೆಸುತ್ತಾ ಹೋರಟಾಗ ಎದರುನಿಂದ ಯಾವುದೋ ಭಾರಿ ವಾಹನ ಬರಲು ಅದರ ಲೈಟಿನ ಬೆಳಕು ಒಮ್ಮೇಲೆ ಮುಖದ ಮೇಲೆ ಬಿದಿದ್ದರಿಂದ ವೇಗದಲ್ಲಿ ಮೋಟಾರ ಸೈಕಲ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ನನಗೆ ಮತ್ತು ನನ್ನ ಗಂಡನಿಗೆ ತಲೆಗೆ ಹಣೆಗೆ ಅಲಲ್ಲಿ ರಕ್ತಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:392/12 ಕಲಂ 279,337 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

27 November 2012

GULBARGA DISTRICT REPORTED CRIMES


ಜೂಜಾಟ ಪ್ರಕರಣ:
ಎಂ.ಬಿ.ನಗರ ಪೊಲೀಸ್ ಠಾಣೆ: ದಿನಾಂಕ: 26-11-2012 ರಂದು ಜಯನಗರದಲ್ಲಿರುವ ಅಂಬಿಕಾ ಚಾಟ್ ಅಂಗಡಿ ಎದರುಗಡೆ ಸಾರ್ವಜನಿಕರ ಸ್ಥಳದಲ್ಲಿ ಲೈಟಿನ ಬೆಳಕಿನಲ್ಲಿ ಕೆಲವು ದುಂಡಾಗಿ ಕುಳಿತು ಕೆಲವು ಜನರು ಅಂದರ ಬಾಹರ ಎಂಬ ಇಸ್ಪೀಟ ಜೂಜಾಟ ಆಡುತ್ತಿರುವ ಬಗ್ಗೆ ಮಾಹಿತಿ  ಬಂದ ಮೇರೆಗೆ ಪಿಎಸ.ಐ ಶ್ರೀಮಂತ ಇಲ್ಲಾಳ ರವರು ಮತ್ತು ಸಿಬ್ಬಂದಿ ಜನರು ಕೂಡಿಕೊಂಡು ಜೂಜುಕೋರರ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ ಭೀಮ ತಂದೆ ಅಶೋಕ ಕೊಳ್ಳೂರ,ಗುಂಡು ತಂದೆ ಸಂತೋಷ ರಾಠೋಡ,ಪ್ರಕಾಶ ತಂದೆ ಸಿದ್ದರಾಮ ಪಾಟೀಲ,ರಾಜು ತಂದೆ ಶರಣಪ್ಪ ಸಿಂಗೆ,ಶರಣು ತಂದೆ ರಾಜಶೇಖರ ಪಾಟೀಲ,ಮಹೇಶ ತಂದೆ ಬಲಭೀಮ ಪಂಚಾಳ,ಮೌನೇಶ ತಂದೆ ನರಸಪ್ಪ ಪಂಚಾಳ,ರಾಮಚಂದ್ರ ತಂದೆ ನಾಗಣ್ಣಾ ವಾರಿಕ್,ರಾಜಕುಮಾರ ತಂದೆ ವೈಜನಾಥ ಕಾಮಠಾಣ,ಸಂತೋಷ ತಂದೆ ವೈಜನಾಥ ಮಡಿವಾಳ,ಪೀರಪ್ಪಾ ತಂದೆ ಚಂದ್ರಶೇಖರ ಬಟಗೇರಿ,ಪವನ ತಂದೆ ಅಣ್ಣಾರಾವ ಬಿರಾದಾರ ಇವರುಗಳನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿದ ನಗದು ಹಣ 2,800/- ರೂ. ಹಾಗು ಇಸ್ಪೀಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ.130/2012 ಕಲಂ 87 ಕೆ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ :ಶ್ರೀ ಖಾದರ ಪಟೇಲ್ ತಂದೆ ಖಾಸೀಮ ಪಟೇಲ್ ಸಾ|| ಇಸ್ಲಾಮಬಾದ ಕಾಲೋನಿ ಗುಲಬರ್ಗಾ ದಿನಾಂಕ:26-11-2012 ಮಧ್ಯಾಹ್ನ  1-30 ಗಂಟೆ ಸುಮಾರಿಗೆ ಮೋಟಾರ ಸೈಕಲ ಮೇಲೆ  ಗಂಜಿನಿಂದ ಹುಮನಾಬಾದ ರಿಂಗ ಮಧ್ಯದಲ್ಲಿ ಬಂದು ಸೇಡಂ ರಿಂಗ ರೋಡ ಕಡೆ, ನನ್ನ ಮೋಟಾರ ಸೈಕಲ ಹೊರಳಿಸುತ್ತಿದ್ದಾಗ ಆಳಂದ ಚೆಕ್ಕ ಪೋಸ್ಟ ಕಡೆಯಿಂದ ಎಪಿ  21 ಟಿಯು 6777 ಚಾಲಕ ನರಸಪ್ಪ ತನ್ನ ಲಾರಿಯನ್ನು ಯಾವುದೇ ಮುನ್ಸೂಚನೇ ನೀಡದೇ ಹಾರ್ನ ವಗೈರೇ ಹಾಕದೇ ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ನನ್ನ  ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದಿದ್ದರಿಂದ ಎಡಗಾಲಿಗೆ ಭಾರಿ ಗುಪ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:389/2012 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ದಯಾನಂದ  ತಂದೆ ಅಮರ  ಹಿರೇಮಠ   ಸಾ: ಪ್ರಶಾಂತ ನಗರ ರಾಜಾಪೂರ   ಗುಲಬರ್ಗಾ ರವರು ನಾನು ದಿನಾಂಕ:25-11-2012  ರಂದು ರಾತ್ರಿ 8=15 ಗಂಟೆಗೆ ಜಗತ ಏರಿಯಾದಲ್ಲಿರುವ ಡ್ಯಾನ್ಸ ಶಾಲೆಯಿಂದ ಐವಾನ-ಇ-ಶಾಹಿ ಕಡೆಗೆ ನಾನು ನನ್ನ ಟಿ.ವಿ.ಎಸ್. ಮೋಟಾರ ಸೈಕಲ ನಂಬರ ಕೆಎ-32 ಎಕ್ಸ-9112 ನೇದ್ದರ ಮೇಲೆ ಹಳೆ ಡಿಪೋ ಕ್ರಾಸ್ ದಿಂದ ಲಾಹೋಟಿ ಕ್ರಾಸ್ ಕಡೆಗೆ ಹೋಗುವಾಗ ಎದುರಿನಿಂದ  ಮೋಟಾರ ಸೈಕಲ ನಂ: ಕೆಎ-32 ಯು-7488 ರ ಸವಾರ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲಗೆ ಎದುರುನಿಂದ  ಡಿಕ್ಕಿ ಪಡಿಸಿ  ಗಾಯಗೊಳಿಸಿ ಮೋಟಾರ ಸೈಕಲ ಸಮೇತ ಓಡಿ ಹೊಗಿರುತ್ತಾನೆ .ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 1165/2012 ಕಲಂ, 279,338, ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀಮತಿ ಭೀಮಬಾಯಿ ಗಂಡ ಮಲ್ಲಿಕಾರ್ಜುನ ಕವಲಗಿ  ಸಾ|| ಭೂಸನೂರ ಗ್ರಾಮ ರವರು ದಿನಾಂಕ: 26-11-2012 ರಂದು 22-00 ಗಂಟೆಗೆ ನಾನು ನನ್ನ  ಮನೆಯಲ್ಲಿ ಕುಳಿತಿರುವಾಗ ರಂಜಿತ @ ರಂಜು ತಂದೆ ಶರಣಪ್ಪ ಬೆಳಮಗಿ ಜಾ|| ಹರಿಜನ ಸಾ|| ಭೂಸನೂರ ಇತನು ಮನೆಯಲ್ಲಿ ಅತೀಕ್ರಮ ಪ್ರವೇಶ ಮಾಡಿ  ಏ ರಂಡಿ ನೀನು ನನ್ನ ಮೇಲೆ ಏಕೆ ಕೇಸು ಮಾಡಿದ್ದೀಯಾ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಾ ತನ್ನ ಕೈಯಲ್ಲಿದ್ದ ಬಡಿಗೆಯಿಂದ ಅವಳ ಹಣೆಯ ಮೇಲೆ ಹೊಡೆದು ರಕ್ತಗಾಯಪಡಿಸಿದ್ದು ಅಲ್ಲದೆ ಅವರ ಮಾನ ಭಂಗ ಮಾಡುವ ಉದ್ದೇಶದಿಂದ ಕೂದಲು ಹಿಡಿದು ಎಳೆದಾಡಿ ಮಾನ ಭಂಗಕ್ಕೆ ಪ್ರಯತ್ನಿಸಿದ್ದುನಂತರ ಕೈ ಹಿಡಿದು ಮನೆಯಿಂದ ಹೊರಗೆ ಎಳೆದುಕೊಂಡು ಬಂದು ನೆಲಕ್ಕೆ ಕೆಡವಿದ್ದು ಆಗ ಅಲ್ಲಿಯೇ ಇದ್ದ ರಂಜಿತನ ತಂದೆಯಾದ ಶರಣಪ್ಪ ಮತ್ತು ತಾಯಿಯಾದಕಮಲಾಬಾಯಿ ಇವರುಗಳು ಕೈಯಿಂದ ನನಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 98/2012 ಕಲಂ, 448, 323, 324, 354, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಚೇತನ ತಂದೆ ಗುಂಡಪ್ಪಾ ಕೊಟಗಿ ಸಾ| ಗೋಟುರ ತಾ|| ಚಿತ್ತಾಪೂರ ಹಾ||ವ|| ಗೋದುತಾಯಿ ನಗರ ರವರು ನಾನು ಕಾಲೇಜ ಮತ್ತು ಟಿವಿಷನ್ ಮುಗಿಸಿಕೊಂಡು ಇಂದು ದಿನಾಂಕ:26/11/2012 ರಂದು ಸಾಯಂಕಾಲ 7-00 ಗಂಟೆಗೆ ನನ್ನ ಗೆಳೆಯನಾದ ಶಫಿ ಇತನು ನಮ್ಮ ಮನೆಯ ಮುಂದೆ ಬಂದು ನಿಂತು ಕರೆದಾಗ ನಾನು ಹೊರಗೆ ಬಂದು ಇಬ್ಬರೂ ಕೂಡಿಕೊಂಡು ನಮ್ಮ ಮನೆಯಿಂದ ರೇಲ್ವೆ ಹಳಿ ದಾಟಿ ಮಾಕಾ ಲೇಔಟದಲ್ಲಿರುವ ಶಫಿ ಮುಲ್ಲಾ ರವರ ಮನೆಗೆ ಹೋರಟಾಗ ಗೋದುತಾಯಿ ಕಾಲೋನಿಗೆ ಹತ್ತಿಕೊಂಡಿರುವ ಕಂಪೌಂಡ ದಾಟಿ ರೇಲ್ವೆ ಹಳಿ ಹತ್ತಿರ ಇಬ್ಬರೂ ಯಾರೋ ಅಪರಿಚಿತರು ಅಂದಾಜು ಸುಮಾರು 18 ರಿಂದ 22 ವಯಸ್ಸಿನ ಇಬ್ಬರು ಹುಡುಗರು ಎದುರುಗಡೆ ಬಂದು ನನಗೆ ನಿಲ್ಲಿಸಿ ನನ್ನ ಕೈಯಲ್ಲಿದ್ದ ನೋಕಿಯಾ ಮೋಬೈಲನ್ನು ಕಸಿದುಕೊಂಡು ನನಗೆ  ಹೊಡೆಯುತ್ತಿದ್ದಾಗ ನನ್ನ ಗೆಳೆಯ ಶಫಿ ಅಂಜಿ ಓಡಿಹೋದನು ನನಗೆ ಅವರಿಬ್ಬರು ಕೈಗೆ ಮತ್ತು ಕೈಯಲ್ಲಿ ಕಲ್ಲು ತೆಗೆದುಕೊಂಡು ತೊಡೆಗೆ ಹೊಡೆದರು ನನ್ನ ಕಿಸೆಯನ್ನು ಚೆಕ್ಕ ಮಾಡಿದಾಗ ಎನು ಸಿಗಲಾರದಕ್ಕೆ ಹೋಗುವಾಗ ಅವರ ಕೈಯಲ್ಲಿದ್ದ ಕಬ್ಬಿಣದ ರಾಡಿನಿಂದ ತಲೆಯ ಹಿಂಭಾಗಕ್ಕೆ ಬಲವಾಗಿ ಹೊಡೆದು ಭಾರಿ ರಕ್ತಗಾಯ ಪಡಿಸಿದ್ದು ನಾನು ಚಿರಾಡುತ್ತಿರುವಾಗ ಅವರ ಬಿಟ್ಟು ಓಡಿಹೋದರು ಆಗ ನನ್ನ ಗೆಳೆಯ ಶಫಿ 100 ಕ್ಕೆ ಪೋನ ಮಾಡಿ ತಿಳಿಸಿದ ನಂತರ ಪೊಲೀಸರು ಬಂದು ನನಗೆ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ. ನನ್ನ ಮೋಬೈಲ್ ನಂ.8553802336 ಇದ್ದು ಅದರ ಕಿಮ್ಮತ್ತು  1000/- ರೂ ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:107/2012 ಕಲಂ. 397 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

26 November 2012

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಮಹ್ಮದ ಸಾಜೀದ ಅಹ್ಮದ ತಂದೆ ಅಬ್ದುಲ ಸುಕ್ಕುರ ವ|| 21 ವರ್ಷ ಉ|| ಕೂಲಿ ಕೆಲಸ ಸಾ|| ಹೊಸ ರಾಘವೇಂದ್ರ ಕಾಲೋನಿ ಬ್ರಹ್ಮಪೂರ ಗುಲಬರ್ಗಾ ನಾನು ದಿನಾಂಕ:26-11-12 ರಂದು ರಾತ್ರಿ 00-30 ಗಂಟೆ ಸುಮಾರಿಗೆ ನನ್ನ ಗೆಳೆಯನ ಜೊತೆ ದ್ವಿ-ಚಕ್ರ ವಾಹನದ ಮೇಲೆ ಹಿಂದೆ ಕುಳಿತುಕೊಂಡು ಡಾಲಫೀನ ಶಾಲೆ ಹತ್ತಿರ ಹೋರಟಾಗ ಅಲ್ಲಿ ಆರೀಪ ಇತನು ನಿಂತಿದ್ದು ನಮ್ಮನ್ನು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ತನ್ನ ಬಳಿ ಇರುವ ಚಾಕುವಿನಿಂದ ನನ್ನ ತಲೆಯ ಮೇಲೆ ಹೊಡೆದು ರಕ್ತಗಾಯ ಮಾಡಿದನು. ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:86/2012 ಕಲಂ 341, 323, 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಜೇವರಗಿ ಪೊಲೀಸ್ ಠಾಣೆ:ಶ್ರೀ ಮಾನಪ್ಪ ತಂದೆ ಈರಣ್ಣಾ ದೊಡ್ಡಮನಿ  ಸಾ: ಬಿರಾಳ ಬಿ ತಾ: ಜೇವರ್ಗಿ ನಮ್ಮೂರ ಯಲ್ಲಾಲಿಂಗ ತಂದೆ ಭೀಮರಾಯ ಟಣಕೇದಾರ ಮತ್ತು ಅವರ ಜನಾಂಗದವರು ಅಲ್ಲದೇ ಇತರೆ ಜನರೊಂದಿಗೆ ಕೂಡಿಕೊಂಡು ದಿನಾಂಕ:30-7-2012 ರಂದು ಬಿರಾಳ (ಬಿ) ಗ್ರಾಮದ ಬಸವೇಶ್ವರ ಕಟ್ಟೆಯನ್ನು ದ್ವಂಶಗೊಳಿಸಿ, ಅದೇ ವಿಷಯದಲ್ಲಿ ನಮ್ಮ ಮತ್ತು ಲಿಂಗಾಯತ ಜನರೊಂದಿಗೆ ದ್ವೇಶ ಸಾಧಿಸುತ್ತಾ ಬಂದಿದ್ದಿಲ್ಲದೇ ಒಂದಿಲ್ಲ ಒಂದು ದಿವಸ ನಮ್ಮಗೆ ಖಲಾಸ ಮಾಡಿಯೇ ಬಿಡುತ್ತೇವೆ ಅಂತ ಊರಲ್ಲಿ ಬೈದಾಡುತ್ತಾ ಬಂದಿದ್ದು, ದಿನಾಂಕ: 25-11-2012 ರಂದು ಸಾಯಂಕಾಲ 5-00 ಗಂಟೆಗೆ ಬಿರಾಳ (ಬಿ) ಗ್ರಾಮದ ಗ್ರಾಮ ಪಂಚಯತ ಎದರು ಖುಲ್ಲಾ ಜಾಗೆಯಲ್ಲಿ ಯಲ್ಲಾಲಿಂಗ ತಂದೆ ಭೀಮರಾಯ ಟಣಕೇದಾರ ಸಂಗಡ 71   ಜನರು ಸಾ:ಎಲ್ಲರೂ ಬಿರಾಳ (ಬಿ ಗ್ರಾಮದವರು ಕೊಲೆ ಮಾಡು ಉದ್ದೇಶದಿಂದ ಗುಂಪು ಕಟ್ಟಿಕೊಂಡು ತಮ್ಮ ತಮ್ಮ ಕೈಯಲ್ಲಿ )ರಾಡು, ಕೊಡಲಿ, ಕಲ್ಲು ಬಡಿಗೆ ಹಿಡಿದುಕೊಂಡು ಬಂದು ನನಗೆ ಮತ್ತು ಗ್ರಾಮದ ಇತರ ಜನರಿಗೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:175/12 ಕಲಂ 143. 147. 148. 323. 324. 336. 307 ಸಂಗಡ 147 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ಅಯ್ಯಪ್ಪ ತಂದೆ ಸಿದ್ದಪ್ಪ ನಾಗನಟಗಿ ಬೇಡರ ಸಾ:ಬಿರಾಳ (ಬಿ) ರವರು ನಮ್ಮೂರ ನಿಂಗನಗೌಡ ತಂದೆ ಅಯ್ಯನಗೌಡ  ಮತ್ತು ಅವರ ಜನಾಂಗದವರು ನಿರ್ಮಿಸಿದ ಬಸವೇಶ್ವರ ಕಟ್ಟೆಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಇತರರು ಕೂಡಿಕೊಂಡು ನ್ಯಾಯಾಲಯದ ಆದೇಶದ ಪ್ರಕಾರ ಕಾನೂನು ರೀತಿ ದಿನಾಂಕ:30/07/2012 ರಂದು ಕಟ್ಟೆಯನ್ನು ತೆರುವಗೊಳಿಸಿದ್ದು ಇರುತ್ತದೆ. ಅದೇ ವೈಶ್ಯಮ್ಯದಿಂದ ಲಿಂಗಾಯತ ಜನಾಂಗದವರು ಮತ್ತು ಇತರ ಜನಾಂಗದವರು ಕೂಡಿಕೊಂಡು ನಮ್ಮ ಸಮಾಜದ ಮೇಲೆ ಹಲ್ಲೇ ಮಾಡುತ್ತಾ ಬಂದಿದಲ್ಲದೇ ದಿನಾಂಕ:25-11-2012 ರಂದು ಸಾಯಾಂಕಾಲ 5-00 ಗಂಟೆಗೆ ಗ್ರಾಮ ಪಂಚಾಯತಿ ಕಾರ್ಯಾಲಯದ ಖುಲ್ಲಾ ಜಾಗದಲ್ಲಿ ನಿಂಗಣ್ಣಾ ಗೌಡ ತಂದೆ ಅಯ್ಯಣಗೌಡ ಮಾಲಿ ಪಾಟೀಲ ಸಂಗಡ 24 ಜನರು ಅಲ್ಲದೇ ಗ್ರಾಮದ ಇತರರು ಸಾ:ಬಿರಾಳ (ಬಿ) ಗುಂಪು ಕಟ್ಟಿಕೊಂಡು ಬಂದು ನನಗೆ ಮತ್ತು ನಮ್ಮ ಜನಾಂಗದವರಿಗೆ ಕೊಲೆ ಮಾಡುವ ಉದ್ದೇಶದಿಂದ ಅವರಲ್ಲಿಯ ಕೆಲವು ಜನರು ಕೈಯಲ್ಲಿ ಬಡಿಗೆ, ಕಲ್ಲುಗಳು ಹಿಡಿದುಕೊಂಡು,ನಾವು ಕಟ್ಟಿದ ಬಸವೇಶ್ವರ ಕಟ್ಟೆ ದ್ವಂಶ ಮಾಡಿರುತ್ತಾರೆ. ಶರಣಬಸಪ್ಪ ತಂದೆ ಕರಣಪ್ಪ ಆಂದೊಲಾ ಇತನು ತನ್ನ ಕೈಯಲ್ಲಿದ್ದ ಬಡಿಗೆಯಿಂದ  ನನ್ನ ತಲೆಗೆ ಹೊಡೆದು ರಕ್ತಗಾಯಗೊಳಿಸಿದನು. ನಿಂಗಣ್ಣಗೌಡ ತಂದೆ ಅಯ್ಯಣಗೌಡ ಪಾಟೀಲ  ಇತನು ತನ್ನ ಕೈಯಲ್ಲಿದ್ದ ಕಲ್ಲಿನಿಂದ ನನ್ನ ಬೆನ್ನಿಗೆ ಹೊಡೆದು ಗುಪ್ತಗಾಯಗೊಳಿಸಿದನು.  ಅಲ್ಲದೆ ಅವರಲ್ಲಿಯ ಕೆಲವು ಜನರು ಒಮ್ಮೇಲೆ ಅವರ ಕೈಯಲ್ಲಿದ ಬಡಿಗೆಗಳಿಂದ ನಮ್ಮ ಜನಾಂಗದವರಿಗೆ  ಕೈಯಿಂದ ಮತ್ತು ಬಡಿಗೆಯಿಂದ ಹೊಡೆದು ಗುಪ್ತಪೆಟ್ಟು ಮಾಡಿರುತ್ತಾರೆ, ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:176/12 ಕಲಂ 143.147.148.323.324.504.506.336.307 ಐ.ಪಿ.ಸಿ ಸಂ 3(1) (10) ಎಸ.ಸಿ/ಎಸ.ಟಿ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರುಯತ್ನ:
ಮುಧೋಳ ಪೊಲೀಸ್ ಠಾಣೆ:ಶ್ರೀ ಮೋಹನರಡ್ಡಿ ತಂದೆ ವೆಂಕಟರಡ್ಡಿ ನಾಯಕಿನ್ ಸಾ|| ಆಡಕಿ ಗ್ರಾಮ ತಾ|| ಸೇಡಂ ರವರು ನಮ್ಮ ಹೊಲ ಹಾಗೂ ನಮ್ಮ ಪಕ್ಕದ ಮನೆಯವರಾದ ನಮ್ಮ ಜಾತಿಯ ಸಾಯಿರಡ್ಡಿ ಇವರ ಹೊಲ ಅಕ್ಕಪಕ್ಕದಲ್ಲಿದ್ದು ನಮ್ಮ ಹೊಲಕ್ಕೆ ಹೋಗಬೇಕಾದರೆ ಸಾಯಿರಡ್ಡಿ ಇವರ ಹೊಲದಿಂದ ಹೋಗಲು ದಾರಿ ಇದ್ದು ಸಾಯಿರಡ್ಡಿ ಇತನು ನಮಗೆ ತನ್ನ ಹೊಲದಿಂದ ನಮ್ಮ ಹೊಲಕ್ಕೆ ಹೋಗದಂತೆ ಒಂದು ವರ್ಷದಿಂದ ತಕರಾರು ಮಾಡುತ್ತಿದ್ದು ನಮ್ಮ ಮೇಲೆ ವೈಮನಸ್ಸು ಹೊಂದಿರುತ್ತಾರೆ. ದಿನಾಂಕ:25-11-2012 ರಂದು ರಾತ್ರಿ 9-00 ಗಂಟೆಗೆ ನಾನು ಹಾಗೂ ನಮ್ಮ ಅಣ್ಣ-ತಮ್ಮಕಿಯವರಾದ  ಶ್ರೀನಿವಾಸರಡ್ಡಿ ತಂದೆ ಮಾಸರಡ್ಡಿ ನಾಯಕಿನ್, ಮೋಹನರಡ್ಡಿ ತಂದೆ ನರಸಿಂಹಲು ಮನ್ನೆ  ನರಸಿಂಹಲು ತಂದೆ ನಾಗಪ್ಪಾ, ಮನ್ನೆ ಕೃಷ್ಣಾ ತಂದೆ ನರಸಿಂಹಲು ಮನ್ನೆ, ಅನಿಲ ತಂದೆ ಕೃಷ್ಣಾ ಮನ್ನೆ, ಶ್ರೀಕಾಂತ ತಂದೆ ಮೋಹನರಡ್ಡಿ ಮನ್ನೆ ಎಲ್ಲರೂ ಕೂಡಿ ಮೋಹರಂ ನೋಡಿ ಮನೆಗೆ ಬರುತ್ತಿದ್ದಾಗ ದಾರಿಯಲ್ಲಿ ನೀರಿನ ಟ್ಯಾಂಕಿನ ಹತ್ತಿರ ಸಾಯಿರಡ್ಡಿ, ರಘುಪತಿರಡ್ಡಿ,ನಾಗರಡ್ಡಿ,ಲಾಲಪ್ಪಾ ತಂದೆ ಬಸಪ್ಪಾ ಮನ್ನೆ,ಶಾಣಪ್ಪಾ ತಂದೆ ಶಾಮಪ್ಪಾ ಮನ್ನೆ ಮತ್ತು ಶ್ರೀನಿವಾಸರಡ್ಡಿ ತಂದೆ ತಿಪ್ಪಣ್ಣ ಮನ್ನೆ ಸಾ|| ಎಲ್ಲರೂ ಆಡಕಿ ಗ್ರಾಮ ರವರು ಕೈಯಲ್ಲಿ ರಾಡು, ಕಲ್ಲು ಕೊಡಲಿ, ಬಡಿಗೆ ಹಿಡಿದುಕೊಂಡು ಬಂದು ನಮಗೆ ನಿಲ್ಲಿಸಿ ಅವಾಚ್ಯವಾಗಿ ಬೈದು ನೀವು ನಮ್ಮ ಹೊಲದಿಂದ ಹೋಗಬೇಡಿರಿ ಅಂದರೂ ಕೂಡಾ ಯಾಕೆ ಹೋಗುತ್ತೀರಿ ಅಂತಾ ಜಗಳ ತಗೆದು ಕೊಲೆ ಮಾಡುವ ಉದ್ಯೇಶದಿಂದ ಕೊಡಲಿಯಿಂದ .ರಾಡಿನಿಂದ ,ಬಡಿಗೆಯಿಂದ ,ಕಲ್ಲಿನಿಂದ ಹೊಡೆಬಡೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:150/2012 ಕಲಂ- 143,147,148,341, 324,307504, 506 ಸಂ. 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಅಪಹರಣ ಪ್ರಕರಣ:
ಮಹಾಗಾಂವ ಪೊಲೀಸ ಠಾಣೆ: ದಿನಾಂಕ: 24-11-2012 ರಂದು ನಾನು ಹೊರಗಡೆ ಬಂದಾಗ ಅರೀಫ ತಂದೆ ಬಾಷಾಸಾಬ  ಸಾ:ನಾಗೂರ  ಮತ್ತು ಅಂಬ್ರೀಷ ಸಾ: ತಡಕಲ್ ಇವರು  ಬಂದು 18 ವರ್ಷದ ಹುಡಗಿಯೊಂದಿಗೆ  ಅರೀಫ ತಂದೆ ಬಾಷಾಸಾಬ  ಸಾ:ನಾಗೂರ  ಹಾ:ವ: ತಡಕಲ್  ಇತನೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದು, ನನಗೆ ಮೋಟಾರ ಸೈಕಲ ಮೇಲೆ ಕರೆದುಕೊಂಡು ಅರೀಪ ಇತನ ಹೋಲದ ಕೊಂಪೆಯಲ್ಲಿ ನಿನಗೆ ಮದುವೆಯಾಗುತ್ತೆನೆ ಅಂತಾ ಪುಸಲಾಯಿಸಿ ಜಭರಿ ಸಂಭೋಗ ಮಾಡಿರುತ್ತಾನೆ. ಬೆಳಿಗ್ಗೆ 8-00 ಗಂಟೆಗೆ ನಾಗೂರ ಗ್ರಾಮದಲ್ಲಿ ತಂದು ಬಿಟ್ಟಿರುತ್ತಾನೆ ಜಬರಿ ಸಂಭೋಗ ಮಾಡಿದ ಅರೀಪ ಮತ್ತು ಇದಕ್ಕೆ ಸಹಕರಿಸಿದ ಅಂಬರೀಷ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 106/2012 ಕಲಂ, 366, 376 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.




ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ತಾಹೇರಾಬೀ ಗಂಡ ಸರದಾರಮಿಯ್ಯಾ  ವಾಡಿ ಸಾ|| ಭೀಮಳ್ಳಿ ಗ್ರಾಮ ರವರು ನಾನು ದಿನಾಂಕ 25-11-12 ರಂದು ಮೂಂಜಾನೆ 7:30 ಗಂಟೆ ಸುಮಾರಿಗೆ  ನನ್ನ ಮನೆಯ ಮುಂದಿನ ಕಟ್ಟೆಯ ಮೇಲಿನ ಕಸಗೂಡಿಸುತ್ತಾ ಇದ್ದಾಗ, ಸಲೀಮ ತಂದೆ ಬಾಬುಮಿಯ್ಯಾ ವಾಡಿ,ಮಹೆಬೂಬ ತಂದೆ ಬಾಬುಮಿಯ್ಯಾ ವಾಡಿ, ಗುಡುಮಾಬೀ, ಗಂಡ ಬಾಬುಮಿಯ್ಯಾ ವಾಡಿ ಸಾ|| ಎಲ್ಲರೂ ಬೀಮ್ಮಳ್ಳಿ ಗ್ರಾಮದವರು ಕೂಡಿಕೊಂಡು ಬಂದವರೇ ಪ್ಲಾಟದಲ್ಲಿ ನಿನಗೆ ಪಾಲು ಬೇಕು ಅಂತಾ ಕೇಳುತ್ತೀ  ಅಂತಾ ಅವಾಚ್ಯವಾಗಿ ಬೈಯುತ್ತಾ ಕೈ ಮುಷ್ಟಿ ಮಾಡಿ ಬೆನ್ನ ಮೇಲೆ ಹೊಡೆಯುತ್ತಿದ್ದಾಗ ಅಲ್ಲೇ ಇದ್ದ ನನ್ನ ಅತ್ತೆ ಗುಡುಮಾಬೀ, ಪ್ರಚೋದನೆ ಮಾಡುತ್ತಿದ್ದಳು. ಆಗ ಅಲ್ಲೇ ಇದ್ದ ಸಲೀಮ ಈತನು ಪಾಲು ಬೇಕು ಅಂತಾ ಕೇಳುತ್ತೀ ಅನ್ನುತ್ತಾ ತನ್ನ ಹತ್ತಿರ ವಿದ್ದ ಚಾಕು ತೆಗೆದು ನನ್ನ ಬಲ ರಟ್ಟೆಯ ಮೇಲೆ ಹೊಡೆದು ರಕ್ತಗಾಯಗೊಳಿಸಿದನು. ಅದೇ ಚಾಕುವಿನಿಂದ ನನ್ನ ಎಡ ಕಿವಿಯ ಹಿಂದೆ ಹೊಡೆದಿದ್ದು ಇದರಿಂದಾಗಿ ಗದ್ದದ ವರೆಗೆ ಹರಿದಂತೆ ಭಾರಿ ರಕ್ತಗಾಯವಾಗಿರುತ್ತದೆ. ಸಲೀಮ ಈತನು ತನ್ನ ಹತ್ತಿರ ಚಾಕು ತೋರಿಸಿ ಇನ್ನೊಮ್ಮೆ ಪ್ಲಾಟನಲ್ಲಿ ಪಾಲು ಕೇಳಲು ಬಂದರೆ ಇದೇ ಚಾಕುವಿನಿಂದ ಹೊಡೆದು ಖಲಾಷ ಮಾಡುತ್ತೇನೆ ಅಂತಾ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 384/2012 ಕಲಂ, 323, 324, 114, 504, 506 (2) ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.
ಅಪಘಾತ ಪ್ರರಕಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ನರಸಪ್ಪ ತಂದೆ ಲಕ್ಕಪ್ಪ ಹೊಸಮನಿ ಸಾ: ಬೋರಗಿ ತಾ:ಇಂಡಿ ಹಾ||ವ||ಘಟಗೆ ಲೇಜೌಟ ಗುಲ್ಬರ್ಗಾ ರವರು ನಾನು ದಿನಾಂಕ:25/11/2012 ರಂದು ಮುಂಜಾನೆ 6:45 ಗಂಟೆಯ ಸುಮಾರಿಗೆ ರೇಲ್ವೆ ಗೇಟ ಹತ್ತಿರದ ಚಾಹ ಕುಡಿಯಲು ಹೋಟೆಲ ಮುಂದೆ ನಿಂತಾಗ ಹೈಕೋರ್ಟ ಕಡೆಯಿಂದ ಒಂದು ಆಟೋ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಹೊಡೆದು  ಆಟೋ ನಿಲ್ಲಿಸಿದಂತೆ ಮಾಡಿ ಆಟೋವನ್ನು ಹಾಗೇ ಒಡಿಸಿಕೊಂಡು ಹೋಗಿದ್ದು ಆಟೋ ನಂ ಕೆಎ 32 8757 ನೇದ್ದು ಇರುತ್ತದೆ  ಆಟೋ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 385/2012 ಕಲಂ, 279, 337 ಐಪಿಸಿ ಸಮಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ.
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀಮತಿ ಕಾಶಿಬಾಯಿ ಗಂಡ ಗುಂಡಪ್ಪ ಕಾಂಬಳೆ ಸಾK|ಅವರಾದ(ಬಿ) ತಾ: ಜಿ: ಗುಲಬರ್ಗಾರವರು ನಾವು ದಿನಾಂ:24-11-2012 ರಂದು ರಾತ್ರಿ 9 ಗಂಟೆಗೆ  ಊಟ ಮಾಡಿ ಪಕ್ಕದ ಮನೆಯಲ್ಲಿ ಮಲಗಿದ್ದು ಬೆಳ್ಳಿಗೆ 6-00  ಗಂಟೆಗೆ ಮನೆಗೆ ಬಂದು ನೋಡಲಾಗಿ ಮನೆಯ ಬಾಗಿಲು ಕೀಲಿ ಮುರಿದಿತ್ತು, ಒಳಗೆ ಹೋಗಿ ನೋಡಲಾಗಿ ಮನೆಯಲ್ಲಿಟ್ಟಿದ್ದ  ಬಂಗಾರದ ಅಭರಣ ಹಾಗೂ ನಗದು ಹಣ 2000/- ಹೀಗೆ ಒಟ್ಟು 18500/- ಮೌಲ್ಯದ್ದು ಕಳ್ಳತನವಾಗಿದ್ದು, ಹಾಗು ನಮ್ಮ ಮನೆಯಲ್ಲಿ ಭಾಡಿಗೆಯಿಂದ ಇರುವ ಅಂಬಾರಾಯ  ತಂದೆ ಲಕ್ಷ್ಮಣ ತಳಕೇರಿ ಇವನ ಮನೆಯ ಬೀಗ ಮುರಿದು  ಕಬ್ಬಿಣದ ಪೆಟ್ಟಿಗೆಯಲ್ಲಿಟ ಬಟ್ಟೆ ಸಾಮಾನುಗಳನ್ನು  ಚಲ್ಲಾ ಪಲ್ಲೆ ಮಾಡಿ ಪೆಟ್ಟಿಗೆಯಲ್ಲಿ ಇಟ್ಟಿರುವ ನಗದು ಹಣ 1000/- ಕಳವು ಮಾಡಿಕೊಂಡು ಹೋಗಿರುತ್ತಾರೆ.ನಮ್ಮ ಓಣೆಯ  ಬಸವರಾಜ ತಂದೆ ಲಾಲಪ್ಪಾ ಖೇಳಗಿ ಕೃಷ್ಣ ತಂದೆ ಪರಮಣ್ಣ ಮದನಕರ ಹಾಗೂ ಕಲಾವತಿ ಗಂಡ ಭೀಮಾಶಂಕರ ಇವರ ಮನೆಗಳಿಗೆ ಹೋಗಿ ಬಾಗಿಲಿನ ಕೊಂಡಿ ಮುರಿದು ಕಳವು ಮಾಡಲು  ಪ್ರಯತ್ನ ಪಟ್ಟಿದ್ದು ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 386/2012 ಕಲಂ, 380, 457 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ:25/11/2012 ರಂದು ಸಾಯಂಕಾಲ ಕಪನೂರ ಗ್ರಾಮದ ಮರಗಮ್ಮ ದೇವಿ ಗುಡಿಯ ಮುಂದಿನ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಅಂದರ ಬಾಹರ ಜೂಜಾಟವಾಡುತ್ತಿದ್ದಾರೆ ಅಂತ ಬಂದ ಬಾತ್ಮಿ ಮೇರೆಗೆ ಶ್ರೀ ಆನಂದರಾವ ಎಸ್.ಎನ್. ಪಿ.ಎಸ್.ಐ. (ಕಾ.ಸು.) ಗ್ರಾಮೀಣ ಠಾಣೆ ಗುಲ್ಬರ್ಗಾ ರವರು ಮತ್ತು ಅವರ ಸಿಬ್ಭಂದಿಯವರು  ದಾಳಿ ಮಾಡಿ  6 ಜನ ಆರೋಪಿತರಾದ ವಿಜಯಕುಮಾರ ತಂದೆ ಅಣ್ಣರಾಯ ಇಟಗಾ ಸಾ|| ಕಪನೂರ,ಅನೀಲ ತಂದೆ ಅರ್ಜುನ ಇಟಗಾ ಸಾ||ಕಪನೂ,ಸುಭಾಶ ತಂದೆ ತುಳಜಪ್ಪಾ ಹಂಗರಗಿ,ಅಬ್ದುಲ ರಶೀದ ತಂದೆ ಮೀರಾಸಾಬ ಪಟ್ಟಣ,ಶರಣು @ ಶರಣಬಸ್ಸಪ್ಪಾ ತಂದೆ ಅಣ್ಣರಾಯ ನೆಲ್ಲೂರ, ನಾಗರಾಜ ತಂದೆ ಹಾಲಪ್ಪಾ ದೊಡ್ಡಮನಿ ಸಾ||ಕಪನೂರ ರವರನ್ನು ವಸಕ್ಕೆ ತೆಗೆದುಕೊಂಡು ಅವರಿಂದ ನಗದು ಹಣ 2820/- ರೂ ಮತ್ತು ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ: 387/2012 ಕಲಂ 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.