POLICE BHAVAN KALABURAGI

POLICE BHAVAN KALABURAGI

27 February 2013

GULBARGA DISTRICT REPORTED CRIME


ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ ಶೇಖ್ ಖಾಜಾಮೀಯಾ ಹುಸೇನ ತಂದೆ ಶೇಖ್ ಮಗ್ದುಮ್ ಹುಸೆನ ಮೀಣಜಗಿ ಸಾಮದಿನಾ ಕಾಲೊನಿ ಎಮ್‌ಎಸ್‌ಕೆ ಮಿಲ್  ಜಿಲಾನಾಬಾದ ಗುಲಬರ್ಗಾರವರು ನನ್ನ ಮೂರನೆಯ ಮಗನಾದ ಶೇಖ್‌ ವಾಸೀಂ ಹುಸೇನ್‌ ಇತನು ಫಿರೋಜಾಬಾದದಲ್ಲಿರುವ ಮಹಿಬೂಬ ಪಾಷಾ ತಂದೆ ಸುಲೈಮಾನಸಾಬ ಹೆರವಾಲೆ ಸಾ|| ಫಿರೋಜಾಬಾದ ಇವರ ಹತ್ತಿರ ಹೋಗಿ ಬಹಳ ದಿವಸವಾಯಿತು ನಾನು ಹೋಗಿ ಬರುತ್ತೆನೆ ಅಂತಾ ದಿನಾಂಕ:25-02-2013 ರಂದು 7-00 ಪಿ.ಎಮ ಸುಮಾರಿಗೆ ತನ್ನ ಹೀರೋ ಹೊಂಡಾ ಸಿಡಿ-100 ಮೋಟರ ಸೈಕಲ್‌ ನಂ. ಕೆಎ-32 ಆರ್-2942 ನೇದ್ದರ ಮೇಲೆ ಹೋಗಿದ್ದು, ರಾತ್ರಿ 9-00  ಗಂಟೆಯ ನನ್ನ ಎರಡನೆಯ ಮಗನಾದ ಶೇಖ್‌ ಹಾಬಿದ ಹುಸೇನ್‌ ಇತನು ಅಣ್ಣನಾದ ಶೇಖ್ ವಾಸೀಂ ಹುಸೇನ ಇತನ ಮೋಬೈಲ್‌ ಫೊನ್‌ನಿಂದ ಯಾರೋ ಪೊನ್ ಮಾಡಿ ಸರಡಗಿ ಕ್ರಾಸ್‌ ಸಮೀಪ ಯಾವೂದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ಮೋಟರ್‌ ಸೈಕಲ್‌ ನಂ:ಕೆಎ-32 ಆರ್- 2942 ನೇದ್ದಕ್ಕೆ ಡಿಕ್ಕಿ ಪಡಿಸಿ ನಿಲ್ಲಿದೆ ಹಾಗೆಯೆ ಓಡಿಸಿಕೊಂಡು ಹೋಗಿರುತ್ತಾರೆ. ಆತನಿಗೆ ಭಾರಿಗಾಯಗಳಾಗಿದ್ದರಿಂದ ಉಪಚಾರ ಕುರಿತು 108 ಅಂಬ್ಯುಲೆನ್ಸನಲ್ಲಿ  ಗುಲಬರ್ಗಾಕ್ಕೆ ಕಳಿಸುತಿದ್ದೆವೆ ಅಂತಾ ತಿಳಿಸಿದ ಮೇರೆಗೆ ನಾವು ಹೋಗಿ ನೋಡಲಾಗಿ ದೇಹದ ಹಲವು ಕಡೆ ಭಾರಿ ರಕ್ತಗಾಯವಾಗಿ ಮಾತನಾಡುತ್ತಿಲ್ಲ. ನನ್ನ ಮಗ ಶೇಖ್‌ ವಾಸೀಂ ಹುಸೇನ್‌ ಇತನ ಮೋಟರ ಸೈಕಲ್‌ ಕ್ಕೆ ಡಿಕ್ಕಿ ಪಡಿಸಿದ ಚಾಲಕ ಮತ್ತು ವಾಹನವನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಶೇಖ್ ಖಾಜಾಮೀಯಾ ಹುಸೇನ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 25/2013 ಕಲಂ,279,338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

26 February 2013

GULBARGA DISTRICT


ಅಪ್ರಾಪ್ತ ವಯಸ್ಸಿನ ಹುಡಗರಿಂದ ಹಣ ಮತ್ತು ಮೊಬಾಯಿಲ್ ದರೋಡೆ:
ಅಶೋಕ ನಗರ ಪೊಲೀಸ ಠಾಣೆ:ದಿನಾಂಕ:26/11/2012 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಗೋದುತಾಯಿ ನಗರದ ರೈಲ್ವೆ ಹಳೆಯ ಹತ್ತಿರ ಶ್ರೀ ಚೇತನ ತಂದೆ ಗುಂಡಪ್ಪ ಕೊಟಗಿ ಮತ್ತು ಶಫೀಮುಲ್ಲಾ ಇಬ್ಬರು ವಿದ್ಯಾರ್ಥಿಗಳು ನಿಸರ್ಗಾ ಕಾಲೇಜದಲ್ಲಿ ಟಿವಿಶನ್ ಮುಗಿಸಿಕೊಂಡು ರೈಲ್ವೆ ಹಳೆಯ ದಾಟಿ ಬರುತ್ತಿರುವಾಗ ಇಬ್ಬರು ಅಪರಿಚಿತ ಹುಡುಗರು ಬಂದು ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ಗಂಭೀರ ಸ್ವರೂಪದ ಗಾಯಗೊಳಿಸಿ ಮೊಬೈಲ ಮತ್ತು ಹಣ ಕಸಿಕುಕೊಂಡು ಹೋಗಿರುತ್ತಾರೆ ಅಂತಾ ಚೇತನ ತಂದೆ ಗುಂಡಪ್ಪ ಕೊಟಗಿ ಸಾ||ಗೋದುತಾಯಿ ನಗರ ಗುಲಬರ್ಗಾ ರವರು ದೂರು ನೀಡಿದ್ದರಿಂದ ಅಶೋಕ ನಗರ ಪೊಲೀಸ್ ಠಾಣೆ ಗುನ್ನೆ ನಂ: 107/2012 ಕಲಂ 397 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ಕೈಕೊಂಡ  ಶ್ರೀ ಟಿ.ಹೆಚ್. ಕರೀಕಲ್ ಪಿ.ಐ ಅಶೋಕ ನಗರ ಪೊಲೀಸ್ ಠಾಣೆ ರವರು ಮತ್ತು ಸಿಬ್ಬಂದಿಯವರಾದ ಸುರೇಶ, ರಫೀಕ, ಬಸವರಾಜ, ಉಮ್ಮಣ್ಣ ಪಿ.ಸಿ ರವರು ವೈಜ್ಞಾನಿಕ ತಂತ್ರಾಂಶದಿಂದ ಹಣ ಮತ್ತು ಮೊಬೈಲ ಕಸಿದುಕೊಂಡು ಹೋಗಿದ್ದ ಅಪ್ರಾಪ್ತ ವಯಸ್ಸಿನ ಆಪಾಧಿತರಾದ ಸಮೀರ ತಂದೆ ಸೈಯದ ಮಹೆಬೂಬ ಸಾ|| ವಿದ್ಯಾನಗರ ಗುಲಬರ್ಗಾ, ಶಫೀ @ ಮಹ್ಮದ ಶಫೀಯೊದ್ದಿನ್ ತಂದೆ ಮಹ್ಮದ ಇಮ್ತಿಯಾಜ ಸಾ|| ಶಾಂತಿನಗರ ಗುಲಬರ್ಗಾ ಇವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಟ್ಟಿರುತ್ತಾರೆ. 

GULBARGA DISTRICT REPORTED CRIMES


:: ಗುಲಬರ್ಗಾ ಜಿಲ್ಲಾ ಪೊಲೀಸರ ಕಾರ್ಯಚರಣೆ ::
5 ಜನ ದರೋಡೆಕೋರರ ಬಂಧನ. ಬಂಧಿತರಿಂದ ನಗದು ಹಣ 2.41 ಲಕ್ಷ ರೂಪಾಯಿಗಳು, 2 ಮೋಟಾರ ಸೈಕಲ್ ಗಳು  ಹಾಗು ಮಾರಕಾಸ್ತ್ರ ಜಪ್ತಿ.
ಗುಲಬರ್ಗಾ ನಗರದ ಎಂ.ಬಿ.ನಗರ ವೃತ್ತ ವ್ಯಾಪ್ತಿಯಲ್ಲಿ ಬರುವ ವಿಶ್ವವಿದ್ಯಾಲಯದ ಪೊಲೀಸ ಠಾಣೆ ಸರಹದ್ದಿನ ಭಾಗ್ಯನಗರ ಕ್ರಾಸ್ ಹತ್ತಿರ ಇರುವ ಪೆಟ್ರೋಲ್ ಪಂಪ್ ಮಾಲಿಕರು ದಿನಾಂಕ:23-02-2013 ರಂದು ರಾತ್ರಿ 11-00  ಗಂಟೆಗೆ ವೇಳೆಗೆ ಮನೆಗೆ ಹೋಗುತ್ತಿರುವಾಗ ದರೋಡೆಕೋರರು ಹೊಂಚು ಹಾಕಿ ಪೆಟ್ರೋಲ್ ಪಂಪ್ ಮಾಲಿಕರಿಗೆ ಹೆದರಿಸಿ ಲಾಂಗ್ ಮತ್ತು ಮಚ್ಚುನಿಂದ ತಲೆಗೆ ಇತರೆ ಕಡೆ ಹೊಡೆದು ಭಾರಿ ರಕ್ತಗಾಯ ಪಡಿಸಿ ಅವರಿಂದ 2.41 ಲಕ್ಷ ರೂಪಾಯಿಗಳನ್ನು ದರೋಡೆ ಮಾಡಿರುವ ಆರೋಪಿತರನ್ನು ಪತ್ತೆ ಮಾಡಲು ಮಾನ್ಯ ಶ್ರೀ ಎನ್. ಸತೀಶಕುಮಾರ್. ಐ.ಪಿ.ಎಸ್.. ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಮಾನ್ಯ ಶ್ರೀ ಕಾಶಿನಾಥ ತಳಕೇರಿ ಅಪರ ಪೊಲೀಸ್ ಅಧೀಕ್ಷಕರು, ಗುಲಬರ್ಗಾ, ಹಾಗು ಶ್ರೀ ತಿಮ್ಮಪ್ಪಾ ಡಿ.ಎಸ್.ಪಿ ಗ್ರಾಮೀಣ ಉಪ-ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಶ್ರೀ,ಎಸ್.ಅಸ್ಲಾಂಬಾಷ ಪ್ರಭಾರಿ ಸಿ.ಪಿ.ಐ ಎಂ.ಬಿ ನಗರ ವೃತ್ತ,  ಶ್ರೀಮಂತ ಇಲ್ಲಾಳ ಪಿ.ಎಸ್.ಐ ಎಂ.ಬಿ.ನಗರ ಠಾಣೆ, ಗೋಪಾಲ ರಾಠೋಡ ಪಿ.ಎಸ್.ಐ, ಪ್ರದೀಪ.ಎಸ್.ಭಿಸೆ ಪಿ.ಎಸ್.ಐ (ಅ.ವಿ), ತಿಮ್ಮಣ್ಣ ಎಸ್. ಚಾಮನೂರ (ಅ.ವಿ) ಹಾಗು ಸಿಬ್ಬಂದಿಯವರಾದ ವೇದರತ್ನಂ, ವೀರಶೆಟ್ಟಿ, ರವೀಂದ್ರ, ಶ್ರೀನಿವಾಸರೆಡ್ಡಿ, ಸಂಜೀವಕುಮಾರ, ಶಾಮಪ್ರಸಾದ ಕುಲಕರ್ಣಿ,ಪ್ರಭಾಕರ, ಮನೋಹರ, ಅಜರೋದ್ದಿನ, ಶಾಂತಮಲ್ಲಪ್ಪ, ಮಲ್ಲಿನಾಥ, ಯಲ್ಲಪ್ಪಾ, ದೇವಪ್ಪ, ಶ್ರೀಶೈಲ, ಬಸವರಾಜ, ಪ್ರಕಾಶ, ಗುರುಶರಣ,ಶಿವಪ್ಪ ಕಮಾಂಡೋ ಹಾಗು ಅಶೋಕ ರವರ ತಂಡವು ದರೋಡೆಕೋರರಾದ 1) ಸಿದ್ದು @ ಸಿದ್ದಪ್ಪಾ ತಂದೆ ರಾವಪ್ಪಾ  ಆನೂರ ವಯಾ||22, ಜಾತಿಃಲಿಂಗಾಯತ ಉಃ ಶಿವಂ ಸರ್ವಿಸ್ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಸಾ|| ಸರ್ವೋದಯ ನಗರ ಅಂಬೇಡ್ಕರ ಹಾಸ್ಟಲ್ ಹತ್ತಿರ ಶಹಾಬಾದ ರೋಡ್ ಗುಲಬರ್ಗಾ. 2) ಜಗದೀಶ ತಂದೆ ಅಮೃತಪ್ಪ ಪೂಜಾರಿ ವಯಾ|| 20,ಜಾತಿಃ ಕುರುಬ ಉಃಲಕ್ಷ್ಮಿ ವೆಂಕಟೇಶ್ವರ ಐ.ಟಿ.ಐ ಕಾಲೇಜ್ ನಲ್ಲಿ ದ್ವಿತಿಯ ಎಲೆಕ್ಟ್ರೀಷಿಯನರ್ ವಿದ್ಯಾರ್ಥಿ ಸಾಃ ಕೃಷ್ಣಾ ಕಾಲೋನಿ ರಾಣೇಶ ಪೀರ್ ದರ್ಗಾ ಹತ್ತಿರ ಆಳಂದ ರೋಡ್ ಗುಲಬರ್ಗಾ. 3) ಸುಭಾಶ ತಂದೆ ಸಿದ್ದಪ್ಪ ಪೂಜಾರಿ ವಯಾ||25, ಜಾತಿಃ ಕುರುಬ ಉಃ ಚಂದ್ರಕಾಂತ್ ಪಾಟೀಲ ಸ್ಕೂಲ್ ಬಸ್ಸಿನ ಕ್ಲೀನರ್ ಕುಸನೂರ ರೋಡ್ ಸಾಃವಸಂತ ಸ್ಕೂಲ್ ಹತ್ತಿರ ರಾಜಾಪೂರ ಗುಲಬರ್ಗಾ. 4) ಭೀಮ ತಂದೆ ಬಾಬುರಾವ್ ಪೂಜಾರಿ ವಯಾ|| 18 ಉಃ ಸ್ಯಾಮ್ ವಿಜ್ಞಾನ ಕಾಲೇಜಿನ 2 ನೇ ವರ್ಷದ ವಿದ್ಯಾರ್ಥಿ, ಕೆ.ಇ.ಬಿ ಆಫೀಸ್ ಹಿಂದುಗಡೆ ಸಾಃ ಕ್ಯೂನಿಕ್ ಕಂಪ್ಯೂಟರ್ ಅಂಗಡಿ ಹತ್ತಿರ ಬಡೆಪೂರ ಕಾಲೋನಿ ಗುಲಬರ್ಗಾ. ಮತ್ತು 5) ಶಿವಶರಣ ತಂದೆ ವೀರಣ್ಣಾ ಪೊದ್ದಾರ ವಯಾ||18 ಜಾತಿಃ ವಿಶ್ವಕರ್ಮ ಉಃಚಂದ್ರಕಾಂತ್ ಪಾಟೀಲ ಪಿ.ಯು.ಸಿ 2 ನೇ ವರ್ಷದ ವಿಜ್ಞಾನ ವಿದ್ಯಾರ್ಥಿ, ಸೇಡಂ ರೋಡ್ ಸಾಃ ಸರಸ್ವತಿ ವಿದ್ಯಾ ಮಂದಿರ ಸ್ಕೂಲ್ ಹತ್ತಿರ ಪ್ರಶಾಂತ ನಗರ (ಎ) ರಾಜಾಪೂರ ಗುಲಬರ್ಗಾ ರವರನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಲು ಈ ದರೋಡೆಕೋರರ ಪೈಕಿ ಸಿದ್ದು @ ಸಿದ್ದಪ್ಪ ಎನ್ನುವವನು ಈ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಾ ಇದ್ದು, ದಿನನಿತ್ಯದ ಪೆಟ್ರೋಲ್ ಪಂಪದಲ್ಲಿ ಸಂಗ್ರಹವಾದ ಹಣವನ್ನು ಮಾಲಿಕರಾದ ಶ್ರೀ ಮೋಹನರೆಡ್ಡಿ ಇವರು ತೆಗೆದುಕೊಂಡು ಹೋಗುವಾಗ ಸಮಯವನ್ನು ಕಾಯುತ್ತಾ ಮೇಲ್ಕಂಡವರನ್ನು ಆಯೋಜಿಸಿಕೊಂಡು ದರೋಡೆಕೊರರ ಗುಂಪನ್ನು ರಚಿಸಿ ದರೋಡೆ ಮಾಡಿರುತ್ತಾರೆ. ಬಂಧಿತ ಆರೋಪಿಗಳಿಂದ ನಗದು ಹಣ 2,41,000/- ರೂಪಾಯಿಗಳು, ಈ ಕೃತ್ಯಕ್ಕೆ ಉಪಯೋಗಿಸಿದ 01 ಮಚ್ಚು ಹಾಗು 02  ಮೋಟಾರ ಸೈಕಲಗಳನ್ನು ಅಃಕಿಃ50,000/- ರೂಪಾಯಿಗಳು ಹೀಗೆ ಒಟ್ಟು 2,91,000/- ರೂಪಾಯಿಗಳನೇದ್ದುವುಗಳು ಜಪ್ತಿಪಡಿಸಿಕೊಳ್ಳಲಾಗಿದೆ.  
       ಐದು (5) ಜನ ದರೋಡೆಕೋರರನ್ನು ಪತ್ತೆ ಹಚ್ಚಿದ ಅಧಿಕಾರಿಗಳ ಮತ್ತು ಸಿಬ್ಬಂದಿಯವರ ತಂಡಕ್ಕೆ ಮಾನ್ಯ ಶ್ರೀ ಎನ್. ಸತೀಷಕುಮಾರ  ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು ಶ್ಲಾಘಿಸಿರುತ್ತಾರೆ. 

25 February 2013

GULBARGA DISTRICT REPORTED CRIMES


ಅತ್ಯಾಚಾರ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ನನ್ನ ತಂದೆ-ತಾಯಿಯವರು ಕೂಲಿ ಕೆಲಸ ಹೋದ ವೇಳೆಯಲ್ಲಿ  ನಾನೋಬ್ಬಳೆ  ಮನೆಯಲ್ಲಿರುತ್ತಿರುವಾಗ ನನ್ನ ತಂದೆಯ ಸಹೋದರ ಮಾವನ ಮಗನಾದ ಶಿವಲಿಂಗ ತಂದೆ ದೇವಂದ್ರಪ್ಪ ಜುಮ್ಮಾನೋರ ಸಾ|| ಧೋಟಿಕೋಳ ಇತನು ನಮ್ಮ ಮನೆಗೆ ಬಂದು ನನಗೆ (ಹೆಸರು ಸೂಚಿಸಿರುವದಿಲ್ಲ) ಎರಡು (2) ತಿಂಗಳುಗಳಿಂದ ಜಬರ ದಸ್ತಿಯಿಂದ ಸಂಭೋಗ ಮಾಡುತ್ತಾ ಬಂದಿರುತ್ತಾನೆ. ಈ ವಿಷಯ ನನ್ನ ತಂದೆ-ತಾಯಿಯವರಿಗೆ ಹೇಳಿದರೆ ಬೈಯ್ಯುತ್ತಾರೆ ಅಂತಾ ತಿಳಿದು ಯಾರ ಹತ್ತಿರವು ಹೇಳಿರುವುದಿಲ್ಲ. ದಿನಾಂಕ:15-02-2013 ರಂದು ಮಧ್ಯಾಹ್ನ 3.00 ಗಂಟೆಗೆ ಮತ್ತೆ ನಾನೋಬ್ಬಳೇ  ಮನೆಯಲ್ಲಿದ್ದಾಗ ಶಿವಲಿಂಗ ಇತನು ತನ್ನ ಅಣ್ಣನ ಮನೆಗೆ ನನಗೆ ಕರೆದುಕೊಂಡು ಹೋಗಿ ನಾನು ಬೇಡ ಅಂದರು ಜಬರ ದಸ್ತಿಯಿಂದ ಸಂಭೋಗ ಮಾಡಿದನು. ದಿನಾಂಕ:23.02.2013 ರಂದು ಬೆಳೆಗ್ಗೆ ಸಮಯದಲ್ಲಿ ವಾಂತಿಯಾಗುತ್ತಿರುವದರಿಂದ ನನ್ನ ತಾಯಿಯೊಂದಿಗೆ ಆಸ್ಪತ್ರೆಗೆ ಹೋದಾಗ ವೈಧ್ಯಾಧಿಕಾರಿಗಳು ಗರ್ಭಿಣಿಯಿರುವ ಬಗ್ಗೆ ತಿಳಿಸಿರುತ್ತಾರೆ. ಈ ವಿಷಯ ಗುರು ಹಿರಿಯರಲ್ಲಿ ವಿಚಾರಿಸಿ ದೂರು ಕೊಡಲು ತಡವಾಗಿರುತ್ತದೆ ಅಂತಾ ನೊಂದ ಯುವತಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ:32/2013 ಕಲಂ,448,376 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಠಾಣೆ:ದಿನಾಂಕ:25.02.2013 ರಂದು ಮಧ್ಯಾಹ್ನ 12;50 ಗಂಟೆಯ ಸಮಯಕ್ಕೆ  ಕಾರ್ಪೊರೇಷನ್ ಬ್ಯಾಂಕಿನಿಂದ 9,50,000=00 ರೂಪಾಯಿಗಳು ಡ್ರಾ ಮಾಡಿಕೊಂಡು ಸರಾಫ ಬಜಾರದಲ್ಲಿ ತನ್ನ  ಸುಜಕಿ ಎಕ್ಸಸ್ ಮೊಟಾರ ಸೈಕಲ ಡಿಕ್ಕಿಯೊಳಗಡೆ ಇಟ್ಟು ಸರಾಫ ಬಜಾರದಲ್ಲಿರುವ ನನ್ನ ಸ್ನೇಹಿತನಾದ ನಾಗೇಂದ್ರ ಪಾಟೀಲ ಇವರ ಸಂಗಡ ಮಾತನಾಡಿ ಮರಳಿ ಬಂದು ನೋಡಲಾಗಿ ಡಿಕ್ಕಿಯೊಳಗಡೆ ಇಟ್ಟಿರುವ ಹಣ ಇರಲ್ಲಿಲ ಯಾರೋ ಕಳ್ಳರು ನನ್ನ ಸುಜಕಿ ಎಕ್ಸಸ ಡಿಕ್ಕಿಯೊಳಗಿನ 9 ಲಕ್ಷ 50 ಸಾವಿರ ರೂಪಾಯಿಗಳು ಹಾಗೂ ಅದರ ಜೋತೆಗಿದ್ದ ನಾಲ್ಕು ಚೆಕ್ಕ ಬುಕ್ಕ ಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಬಸವರಾಜ ತಂದೆ ರೇವಪ್ಪಾ ಏರಿ ವಯಾ||45 ಉ|| ದಾಲ್ ಮಿಲ್ ವ್ಯಾಪಾರ್ ಸಾ|| ಬ್ಯಾಂಕ್ ಕಾಲೋನಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:52/2013 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀಮತಿ ದೊಂಡಬಾಯಿ ಗಂಡ ಅಶೋಕ ಹೌಶೆಟ್ಟಿ ಸಾ:ದುದ್ದನಿ ತಾ:ಅಕ್ಕಲಕೋಟ ಜಿಲ್ಲಾ:ಸೋಲಾಪೂರ ರವರು ನನ್ನ ಗಂಡ ಅಶೋಕ ತಂದೆ ಸಾದಾಶಿವ ಹೌಶೆಟ್ಟಿ ಇವರು ತನ್ನ ಮೋಟರ್ ಸೈಕಲ್ ನಂ:ಎಮ್.ಹೆಚ್.15 ಎಟಿ-9700 ನೇದ್ದರ ಮೇಲೆ ತನ್ನ ಅಣ್ಣನ ಮಗನಾದ ಸೂರ್ಯಕಾಂತ ಇತನಿಗೆ ಕಾಮಣಿ ಔಷಧ ಹಾಕಿಕೊಂಡು ಬರಲು ದಿನಾಂಕ:24/02/2013 ರಂದು ಬೆಳಿಗ್ಗೆ ಹೋಗುತ್ತಿರುವಾಗ ಚಲಗೇರಾ ರಸ್ತೆಯಲ್ಲಿ ಅತೀವೇಗದಿಂದ ನಡೆಯಿಸಿ ನಿಂಬಾಳ ಕೆರೆಯ ಹತ್ತಿರ ತೆಗ್ಗಿನಲ್ಲಿ ಮೋಟರ್ ಸೈಕಲ್ ಸಮೇತ ಬಿದ್ದು ಅಫಘಾತವಾಗಿ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ. ಜೋತೆಗಿದ್ದ ಸೂರ್ಯಕಾಂತನಿಗೆ ಎಡಗೈಗೆ ಭಾರಿ ಪೆಟ್ಟಾಗಿರುತ್ತದೆ. ರಸ್ತೆಯಲ್ಲಿ ಬ್ರಿಡ್ಜ್ ಕೆಲಸ ಮಾಡಿಸುತ್ತಿದ್ದ ಗುತ್ತಿಗೆದಾರ ಮತ್ತು ಇಂಜಿನಿಯರ ರವರು ಯಾವದೇ ಮುನ್ನೆಚ್ಛರಿಕೆಯ ಸೂಚನೆಯ ಫಲಕಗಳು ಹಾಕದೆ ಇರುವುದರಿಂದ ಅಫಘಾತ ಸಂಭವಿಸಿರುತ್ತದೆ ಅಂತಾ ಶ್ರೀಮತಿ ದೊಂಡಭಾಯಿ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:22/2013 ಕಲಂ: 279, 338, 304(ಎ) ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ:24-02-2013 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ಬೀಮ್ಮಳ್ಳಿ ಗ್ರಾಮದ ಸೀಮಾಂತರದಲ್ಲಿ ಬರುವ ವಿಠಲ ಜಮಾದಾರ ಇವರ ಹೊಲದಲ್ಲಿ ಜೂಜಾಟ ಆಡುತ್ತಿರುವ ಮಾಹಿತಿ ಬಂದ ಮೇರೆಗೆ  ಡಿಎಸ್‌ಪಿ ಗ್ರಾಮೀಣ ಉಪ-ವಿಭಾಗ ಮತ್ತು ಸಿಪಿಐ ಗ್ರಾಮೀಣ  ವೃತ್ತ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಪಿ.ಎಸ.ಐ ಶ್ರೀ ಆನಂದರಾವ ರವರು ತಮ್ಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ ಮಹ್ಮದ ಶಫೀ ತಂದೆ ಚಾಂದಸಾಬ ಮಡಕಿ ಸಾ||ಭೀಮಳ್ಳಿ, ಸಂತೋಷ ತಂದೆ ಕಾಶಿನಾಥ ಪಾಟೀಲ ಸಾ: ಭೀಮಳ್ಳಿ, ಬಸವರಾಜ ತಂದೆ ರಾಜೇಂದ್ರ ಗುತ್ತೆದಾರ ಸಾ: ಭೀಮಳ್ಳಿ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 6150/- ರೂಪಾಯಿಗಳು ಮತ್ತು ಜೂಜಾಟದ ಎಲೆಗಳು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ: 109/2013 ಕಲಂ, 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ. 

24 February 2013

GULBARGA DISTRICT REPORTED CRIMES


ಬಂಗಾರದ ಆಭರಣ ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ:22/02/2013 ರಂದು ಮಧ್ಯಾಹ್ನ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗುವ ಕುರಿತು ನನ್ನ ತಾಯಿಯವರು ತಯ್ಯಾರಾಗುವ ಕುರಿತು ಬಂಗಾರದ ಆಭರಗಣಗಳು  ಟೇಬಲ್ ಮೇಲಿಟ್ಟಿದ್ದು, ನಮ್ಮ ಮನೆಯಲ್ಲಿ ಕೆಲಸ ಮಾಡುವ ಪಾರ್ವತಿ ಗಂಡ ರೇವಣಸಿದ್ದಪ್ಪಾ ಇವಳ ಮಗಳಾದ ಸಿದ್ದಮ್ಮಾ  ಇವರು ಮನೆಗೆ ಬಂದಿದ್ದಳು. ನನ್ನ ತಾಯಿಯವರದ ಬಂಗಾರದ ಮಂಗಳಸೂತ್ರ  7.5 ತೊಲೆ ಅ:ಕಿ: 2,25,000/-  ರೂ., ಒಂದು ಉಂಗುರ 0.5 ತೊಲೆ ಅ:ಕಿ: 15000/- ರೂ. ಒಂದು ಹರಳಿನ ಉಂಗುರ 0.5 ತೊಲೆ ಅ:ಕಿ: 15,000/- ರೂ. ಮತ್ತು ನಗದು ಹಣ 1700/- ರೂಪಾ ಇರುವ ಪಾಕೇಟ ಹೀಗೆ ಒಟ್ಟು 2,56,700/- ರೂಪಾ ಮೌಲ್ಯದ ಬಂಗಾರದ ಆಭರಣಗಳು ಮತ್ತು ಟೇಬಲ್ ಮೇಲಿಟ್ಟಿರುವವು  ಕಳ್ಳತನವಾಗಿರುತ್ತವೆ. ಮನೆ ಕೆಲಸದವಳಾದ ಪಾರ್ವತಿ ಗಂಡ ರೇವಣಸಿದ್ದಪ್ಪಾ ಮತ್ತು ಅವಳ ಮಗಳಾದ ಸಿದ್ದಮ್ಮಾ ರವರ ಮೇಲೆ ಸಂಶಯ ಇರುತ್ತದೆ. ನಾವು ಅವರಿಗೆ ವಿಚಾರಣೆ ಮಾಡಿದಾಗ ಕಲ್ಲಿನಲ್ಲಿ ಮುಚ್ಚಿಟ್ಟಿರುವುದಾಗಿ ತಿಳಿಸಿದ್ದರಿಂದ ನಾವು ಅವರಿಗೆ ಕರೆದುಕೊಂಡು ಹುಡುಕಿದರು ಸಹ ಸಿಕ್ಕಿರುವುದಿಲ್ಲಾ ಅಂತಾ ಶ್ರೀ, ಸೊಮನಾಥ ತಂದೆ ಬಾಬುರಾವ ಮಾಲಿ ಪಾಟೀಲ ಉ: ಉಪನ್ಯಾಸಕ ಸಾ:ನೇತಾಜಿ ನಗರ ನವಣೆ ಲೇಔಟ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.28/2013 ಕಲಂ 381 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ಶ್ರೀಮತಿ ಖೈರೂನಾ ತಿಜ್ವಾನ ಗಂಡ ಸೈಯದ್ ಅಯೂಬ್ ಸಾ: ಧಖನ ಮಹೊಲ್ಲಾ  ಶೋರಾಪೂರ ಹಾ:ವ:ಮಿಜಗುರಿ ರೋಜಾ ಗುಲಬರ್ಗಾ ರವರು ನಮ್ಮ ಸ್ವಂತ ಊರು ಸುರಪೂರ ಪಟ್ಟಣವಾಗಿದ್ದು ನನ್ನ ಗಂಡನಾದ ಸೈಯದ್ ಅಯೂಬ್ ಇತನು ಸುರಪೂರದ ತಾಲೂಕಾ ಮುನ್ಸಿಪಾಲ ಕಛೇರಿಯಲ್ಲಿ ಫೀಟರ ಅಂತಾ ಕೆಲಸ ಮಾಡುತ್ತಿದ್ದು, ದಿನಾಂಕ:23/2/2013 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನನ್ನ ಗಂಡನ ಮೊಬೈಯಲ್‌‌ದಿಂದ ಯಾರೋ ಪೋನ ಮಾಡಿ ಈ ಪೋನ ಯಾರದು ಎಂದು ಕೇಳಿದಾಗ ಇದು ನನ್ನ ಗಂಡ ಸೈಯದ್ ಅಯೂಬ್ ಇತನದು ಇದ್ದು, ಇವನು ಸುರಪೂರದಲ್ಲಿ ಮುನ್ಸಿಪಾಲ ಕಛೆರಿಯಲ್ಲಿ ಕೆಲಸ ಮಾಡುತ್ತಾನೆ ಏನಾಗಿದೆ ಅಂತಾ ಕೇಳಿದಾಗ ಅವರು ಹಿರೋಹೊಂಡಾ ನಂಬರ ಕೆಎ-33 ಜೆ-571 ನೇದ್ದರ ಮೇಲೆ ಫಿರೋಜಾಬಾದ ದರ್ಗಾದ ಹತ್ತಿರ ಜೇವರ್ಗಿ ಕಡೆಯಿಂದ ಅತಿವೇಗ ಹಾಗೂ ನಿಷ್ಕಾಳಿಜಿತನದಿಂದ ನಡೆಯಿಸಿಕೊಂಡು ಎದುರಿಗೆ ಬರುತ್ತಿದ್ದ ಎತ್ತಿನ ಬಂಡಿಗೆ ಡಿಕ್ಕಿ ಪಡಿಸಿ ಕೆಳಗೆ ಬಿದ್ದಿದರಿಂದ ತಲೆಗೆ ಹಾಗೂ ಮೆಲಿಕಿನ ಹತ್ತಿರ ಭಾರಿ ಪೆಟ್ಟಾಗಿದ್ದು, ಉಪಚಾರ ಕುರಿತು 108  ವಾಹನದಲ್ಲಿ ಉಪಚಾರಕ್ಕೆ ತೆಗೆದುಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ್ದರಿಂದ ನಾನು ಗಾಬರಿಗೊಂಡು ನನ್ನ ಭಾವ ಸೈಯದ ಯೂನಸ ಹಾಗೂ ಇತರರು ಕೂಡಿಕೊಂಡು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ನೋಡಲಾಗಿ ನನ್ನ ಗಂಡ ಸೈಯದ ಅಯೂಬ್ ಇತನಿಗೆ ಪರೀಕ್ಷಿಸಿದ ವೈಧ್ಯಾಧಿಕಾರಿಗಳು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ನನ್ನ ಗಂಡನಿಗೆ ಬಲಭಾಗದ ಮೆಲಕಿನ ಹತ್ತಿರ ಹಣೆಗೆ ತೆರಚಿದ ಗಾಯವಾಗಿದ್ದು ಎದೆಯ ಮಧ್ಯ ಭಾಗದಲ್ಲಿ ಭಾರಿ ಗುಪ್ತಗಾಯವಾಗಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಖೈರೂನಾ ತಿಜ್ವಾನ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:24/2013 ಕಲಂ, 279, 304 (ಎ) ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಸಂಜೀವಕುಮಾರ ತಂದೆ ಅಪ್ಪಾರಾವ ಚಾಮನಳ್ಳಿ ಸಾ:ದೇವನತೆಗನೂರ ರವರು ನಾನು ನನ್ನ ಡಿಸ್ಕವರಿ ಮೋಟಾರ ಸೈಕಲ ನಂ.ಕೆಎ-32/ವಾಯ-7736 ನೇದ್ದರ ಮೇಲೆ ನನ್ನ ಗೆಳೆಯನಾದ ಮಲ್ಲಿಕಾರ್ಜುನ ಕೂಡಿಕೊಂಡು ಗುಲಬರ್ಗಾಕ್ಕೆ ಹೋಗುವ ಸಲುವಾಗಿ ಹೋರಟಾಗ ದೇವನ ತೆಗನೂರ ಸಮೀಪ ಹೋಗುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಲಾರಿ ನಂ.ಎಮ್‌ಹೆಚ್‌-25/ಯು-1671 ನೇದ್ದರ ಚಾಲಕನಾದ ದತ್ತಾತ್ರಯ ತಂದೆ ಪಾರಪ್ಪಾ ಸಾ:ಕಸಗಿ ತಾ:ಉರ್ಮಗಾ ಇತನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ರಕ್ತಗಾಯವಾಗಿದೆ ಮತ್ತು ಮಲ್ಲಿಕಾರ್ಜುನನಿಗೆ ಭಾರಿ ಒಳಪೆಟ್ಟಾಗಿರುತ್ತದೆ ಅಂತಾ ಸಂಜೀವಕುಮಾರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:26/2013 ಕಲಂ:279,337,338 ಐಪಿಸಿ ಸಂ;187 ಐಎಮ್‌ವಿ ಆಕ್ಟ್‌  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಆಸ್ತಿಗಾಗಿ ಕೊಲೆಗೆ ಪ್ರಯತ್ನ :
ಮಹಾಗಾಂವ ಪೊಲೀಸ್ ಠಾಣೆ: ಶಿವಲಾಲ ತಂದೆ ಕಲ್ಯಾಣಸಿಂಗ ಠಾಕೂರ ವ|| 75 ಸಾ|| ಚೆಟ್ನಳಿ ತಾ||ಜಿ|| ಬೀದರ ರವರು ಶಿರಗಾಪೂರ ಗ್ರಾಮದಲ್ಲಿರುವ ನನ್ನ ಮಗಳಾದ ಚಂದ್ರಕಲಾ ಇವಳಿಗೆ ಅವಳ ಅತ್ತೆ ಸುಂದರಬಾಯಿ ನಾದನಿ ಲಲಿತಾ ಮೈದುನ ರಾಜು @ ರಾಜೇಂದ್ರ ಇವರು ಅಸ್ತಿ ವಿಷಯದ ಸಂಬಂ ಕೊಲೆ ಕೋಲೆ ಮಾಡುವ ಉದ್ದೇಶದಿಂದ ದಿ||22/02/13 ರಂದು ಸಾಯಂಕಾಲ 4-30 ಗಂಟೆಗೆ ಮೈಮೇಲೆ ಸೀಮೆ ಎಣ್ಣಿ ಸುರಿದು ಬೆಂಕಿ ಹಚ್ಚಿದರಿಂದ ಅವಳ ಹೊಟ್ಟೆ,ಎದೆ, ಬೆನ್ನು ಕೈಕಾಲುಗಳು ಸುಟ್ಟು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆಯಾಗಿರುತ್ತಾಳೆ. ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:25/2013 ಕಲಂ, 307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

23 February 2013

Reported Crime


ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ:22/02/2013 ರಂದು 11-30 ಎ.ಎಮ್.ದಿಂದ ಸಾಯಂಕಾಲ  5-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೊ ಕಳ್ಳರು ನಾವು ಮನೆಯಲ್ಲಿರಲಾರದ ಸಮಯ ಸಾಧಿಸಿಕೊಂಡು  ಬಾಗಿಲ ಕೀಲಿ ಮುರಿದು ಮನೆಯಲ್ಲಿಟ್ಟಿದ ಬಂಗಾರದ ಆಭರಣಗಳು ಅ||ಕಿ|| 24,000/- ಮೌಲ್ಯದ್ದು ಕಳ್ಳತನ ಮಾಡಿರುತ್ತಾರೆ ಅಂತಾ ಶ್ರೀ.ಮತಿ ಪಾರ್ವತಿ ಗಂಡ ಶರಣಪ್ಪ ಮೇತ್ರೆ ಸಾ|| ಮಾದನ ಹಿಪ್ಪರಗಾ  ತಾ|| ಆಳಂದರವರು ದೂರು ಸಲ್ಲಿಸಿದ ಮೇರೆಗೆ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ:21/2013 ಕಲಂ: 454, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ. 

22 February 2013

GULBARGA DISTRICT REPORTED CRIME


ಅಪಘಾತ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ:ನಾನು ಮತ್ತು ನನ್ನ ಹೆಂಡತಿ ಅನೀತಾ, ನನ್ನ ಅಣ್ಣ ರಾಜೇಂದ್ರ, ಅತ್ತಿಗೆಯಾದ ಅಶ್ವಿನಿ ನಾಲ್ಕು ಜನರು ಹಾಗೂ ಹೋಳಿ ಗ್ರಾಮದ ಇತರ 5 ಜನರು ಹಾಗೂ ನಮ್ಮ  ಗ್ರಾಮದ ರಂಜಿತ್ ಮತ್ತು ಗಣೇಶ ಎಲ್ಲರೂ ಕೂಡಿಕೊಂಡು ನಮ್ಮ ಗ್ರಾಮದಿಂದ ನಾಗರಳ್ಳಿ ಸಕ್ಕರೆ ಕಾರ್ಖಾನೆಗೆ ಕಬ್ಬು ಕಡೆಯಲು 3 ತಿಂಗಳ ಹಿಂದೆ ಮುರಗಾನೂರ ಗ್ರಾಮಕ್ಕೆ ಬಂದು ಕೆಲಸ ಮಾಡುತ್ತಿದ್ದೆವು ದಿನಾಂಕ:21-02-2013 ರಂದು ಮುರಗಾನೂರ ಗ್ರಾಮದ ಶಿವಪೂಜೇಪ್ಪ ಒಡೆಯರ ಇವರ ಹೊಲದಲ್ಲಿಯ ಕಬ್ಬು ಕಡೆದು ಟ್ರ್ಯಾಕ್ಟರನಲ್ಲಿ ತುಂಬಲು ಟ್ರ್ಯಾಕ್ಟರ ನಂ ಕೆಎ-32/ಟಿ-995 ನೇದ್ದರಲ್ಲಿ ನನ್ನ ಅಳಿಯ ಗಣೇಶ, ರಂಜಿತ್ ಇವರಿಬ್ಬರು ನನ್ನ ಮಗನನ್ನು ತಗೆದುಕೊಂಡು ಟ್ರ್ಯಾಕ್ಟರ ನಲ್ಲಿ ಕುಳಿತುಕೊಂಡು ಶಿವಪೂಜೇಪ್ಪ ಒಡೆಯರರವರ ಹೊಲಕ್ಕೆ ಹೋರಟಿದ್ದು, ಟ್ರ್ಯಾಕರ್ ಚಾಲಕ ಸಿದ್ದಪ್ಪ ತಂದೆ ಶಂಕ್ರಪ್ಪ ಇತನು ಚಲಾಯಿಸುತ್ತಿದ್ದು, ಚಾಲಕನು ತನ್ನ ಟ್ರ್ಯಾಕ್ಟರ ಅತೀವೇಗ ಹಾಗೂ ಅಲಕ್ಷತನದಿಂದ ನಡೆಸುತ್ತಾ ಹೋಗಿ ಮುಗಾನೂರದ ಶಿವಲಿಂಗಪ್ಪ ಕಾಳಗಿ ಇವರ ಹೊಲದ ಕೆನಾಲನಲ್ಲಿ ಪಲ್ಟಿ ಮಾಡಿದನು. ನನ್ನ ಮಗ ಕೃಷ್ಣಾ ಇತನ ಹೊಟ್ಟೆಗೆ ಬಡೆದಿದ್ದು, ರಂಜಿತ್ ಮತ್ತು ಗಣೇಶನಿಗೆ ಭಾರಿಗಾಯವಾಗಿರುತ್ತದೆ.  ಉಪಚಾರ ಕುರಿತು ಜೇವರ್ಗಿ ಸರಕಾರಿ ಆಸ್ಪತ್ರೆಗೆ ಸಾಗಿಸುವಾಗ ನನ್ನ ಮಗನು ಮೃತಪಟ್ಟನು ಗಾಯ ಹೊಂದಿದ ರಂಜಿತ್ ಮತ್ತು ಗಣೇಶನಿಗೆ ಜೇವರ್ಗಿಯಲ್ಲಿ ಉಪಚರಿಸಿ ಹೆಚ್ಚಿನ ಉಪಚಾರಕ್ಕಾಗಿ ಗುಲಬರ್ಗಾದ ಯುನಾಯಿಟೆಡ್ ಹಾಸ್ಪಟೇಲ್ ಗೆ ಸೇರಿಕೆ ಮಾಡಿರುತ್ತಾರೆ ಅಂತಾ ಶ್ರೀ ಸಂಜಯ ತಂದೆ  ಭೀಮರಾಯ ಪವಾರ ಸಾ:ಅಸ್ಟಾ ತಾ||ಲೋಹಾರ ಜಿ:ಓಸ್ಮಾನಾಬಾದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:35/2013  ಕಲಂ 279,337, 338,304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRCIT REPORTED CRIME


ದರೋಡೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ವಿದ್ಯಾದರ ತಂದೆ ಕೃಷ್ಣ ಭಟ್ ಸಾ|| ನಂದ ಗೋಕುಲ್  ಎನ್ ವಿ ಲೇಔಟ್ ಗುಲಬರ್ಗಾರವರು ನಾನು ಮತ್ತು ಸತ್ಯನಾಥ ಶೆಟ್ಟಿ ಹಾಗು ಅರುಣಾಚಲ್ ಭಟ್ ಕೂಡಿಕೊಂಡು ಪಾರ್ಟನರ್ ಶಿಪ್ ನಲ್ಲಿ ರಾಮ ಮಂದಿರ ಹತ್ತಿರ ಶ್ರೀ ಕಲ್ಯಾಣ ಅಸೋಸಿಯಟ್ಸ ಬಜಾಜ ಅಟೋ ಶೋ ರೂಮ್ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೇವೆ. ದಿನಾಂಕ:20/02/2013 ರಂದು ರಾತ್ರಿ 8:00 ಗಂಟೆಯವರೆಗೆ ಶೋರೂಮ್ ನಲ್ಲಿದ್ದು ಕೆಲಸ ಮುಗಿಸಿಕೊಂಡು ಕೀಲಿ ಹಾಕಿಕೊಂಡು ಯಶ್ವಂತ ಹೊಸಮನಿ ವಾಚಮನಗೆ ಶೋರೋಮ ಚನ್ನಾಗಿ ನೋಡಿಕೋಳ್ಳುವಂತೆ ತಿಳಿಸಿ ಹೋಗಿರುತ್ತೆವೆ. ದಿನಾಂಕ:21/02/2013 ರಂದು ಬೆಳಗ್ಗೆ 5:30 ಗಂಟೆಗೆ ಹೊಸಮನಿ ವಾಚಮನ ನನಗೆ ಪೋನ ಮಾಡಿ ಯಾರೋ ಆರು ಜನ ಅಪರಿಚಿತರು ನಮ್ಮ ಶೋರೂಮ್ ಗೆ ಬಂದು ನನಗೆ ಹೊಡೆ ಬಡೆ ಮಾಡಿ ಶೆಟರ ಮುರಿದು 90,000/- ರೂಪಾಯಿಗಳು ದೋಚಿಕೊಂಡು ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ಶೊರೂಮ್ ಗೆ ಬಂದು ನೋಡಲಾಗಿ ನಮ್ಮ ಶೋರೂಮ್ ಮುಂದಿನ ಶೆಟರ  ಮುರಿದು 90,000/- ರೂಪಾಯಿಗಳು ತೆಗೆದುಕೊಂಡು ಹೋಗಿದ್ದು ನಿಜವಿರುತ್ತದೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:36/2013 ಕಲಂ, 395 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

21 February 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣೆ: ಶ್ರೀ ಸೂರ್ಯಕಾಂತ ತಂದೆ ಮಲ್ಲಪ್ಪ ಮದಾನೆ ವ:40 ವರ್ಷ ಉ: ಬಿ.ಇ.ಓ. ಬೀದರ ಜಾ: ಲಿಂಗಾಯತ ಸಾ: ಜವಳಿ (ಡಿ) ಗ್ರಾಮ ತಾ: ಆಳಂದ ಹಾ||ವ|| ನ್ಯೂ ರಾಘವೇಂದ್ರ ನಗರ ಗುಲಬರ್ಗಾ ರವರು ನನ್ನ ಆಧೀನದಲ್ಲಿ ಕರ್ತವ್ಯ ಮಾಡುವ ವೆಂಕಟ್ ತಂದೆ ಅಂಬಾರಾವ ಕುಲಕರ್ಣಿ :59 ವರ್ಷ : .ಸಿ.. ಬಿ... ಆಫೀಸ ಸಾ:ಎಲ್..ಜಿ. ಕಾಲನಿ ಬೀದರ ರವರು 15 ದಿವಸಗಳ ಹಿಂದೆ ನನ್ನ ಹೆಂಡತಿ ನಿರ್ಮಲಾ ಇವರಿಗೆ ಕುತ್ತಿಗೆ ಹತ್ತಿರ ಗಡ್ಡೆ ಆಗಿದ್ದರಿಂದ ಗುಲಬರ್ಗಾ ನಗರದ ಡಾ|| ಅರುಣ ಬಡಶೇಷಿವರ ಹತ್ತಿರ ಅಪರೇಶನ ಮಾಡಿಸಿರುತ್ತೆನೆ. ಅವರಿಗೆ ಕರೆದುಕೊಂಡು ಬರುವ ಕುರಿತು ವೆಂಕಟ ಕುಲಕರ್ಣಿ ಇವರ ಮಾರುತಿ ಅಲ್ಟೋ ಕೆಎ-05 ಎಂಜೆ-5068 ನೇದ್ದರಲ್ಲಿ  ಹೊರಟಾಗ ಮಧ್ಯಾಹ್ನ 4-30 ಗಂಟೆ ಹೊರಟಿದ್ದು, ಕಾರ ವೆಂಕಟ್ ಇವರು ನಡೆಸುತ್ತಿದ್ದವರು. ವೆಂಕಟ್  ಕುಲಕರ್ಣಿ ಇವರು ತಮ್ಮ ಕಾರು ಅತಿವೇಗ ಮತ್ತು ನಿಷ್ಕಾಳಿಜಿತ ನದಿಂದ ರೋಡಿನ ಮಧ್ಯದಲ್ಲಿ  ನಡೆಸುತ್ತಾ ಉಪಳಾಂವ ಕ್ರಾಸ ನಂತರ ಭವಾನಿ ಗುಡಿ ಎದುರಿನ ರೋಡಿನ ಮೇಲೆ ಬರುತ್ತಿರುವಾಗ ಬಿಳಿ ಬಣ್ಣದ ಟಾಟಾ ಇಂಡಿಕಾ ಕಾರ ಚಾಲಕನು ಕೂಡಾ ತನ್ನ ಕಾರನ್ನು ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ರೋಡಿನ ಮಧ್ಯದಲ್ಲಿ  ನಡೆಸುತ್ತಾ ಹೊರಟಿದ್ದು ಇಬ್ಬರು ವಾಹನ ಚಾಲಕರು ಮುಖಾಮುಖಿ ಡಿಕ್ಕಿ ಹೊಡೆದರು. ಇದರಿಂದಾಗಿ  ನನಗೆ  ನನ್ನ ಬಲಗಾಲ ಮತ್ತು ಎಡಗಾಲ ಮೊಳಕಾಲ ಮೇಲೆ ಭಾರಿ ಗುಪ್ತಗಾಯವಾಗಿದ್ದು, ವೆಂಕಟ್  ಕುಲಕರ್ಣಿ ಇವರಿಗೆ ನೋಡಲಾಗಿ ಅವರು ಎಡ ಹಣೆಯ ಮೇಲೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿದ್ದರು. ನಮಗೆ ಡಿಕ್ಕಿ ಪಡಿಸಿದ ಕಾರ ನಂಬರ ನೋಡಲಾಗಿ ಕೆಎ-33 -5000 ನೇದ್ದರಲ್ಲಿರುವ ಜಮೀಲಖಾನ ಗುಲಬರ್ಗಾ ಇವರಿಗೆ ಮತ್ತು ಅವರ ಕಾರಿನಲ್ಲಿ ಕುಳಿತ ಇತರರಿಗೆ ಗುಪ್ತಗಾಯವಾಗಿರುತ್ತವೆ. ಟಾಟಾ ಇಂಡಿಕಾ ಕಾರ ಚಾಲಕ  ಹುಸೇನ  ಸಾ:ಸೀತನೂರ  ಹಾ::ಮುಸ್ಲಿಂ ಸಂಘ ಗುಲಬರ್ಗಾ ಇತನಿಗೆ ಬಾಯಿ ತುಟಿಗೆ ರಕ್ತಗಾಯವಾಗಿರುತ್ತವೆ. ಈ ಘಟನೆಗೆ ಇಬ್ಬರ ಕಾರ ಚಾಲಕರು ಕಾರಣವಾಗಿದ್ದರಿಂದ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:100/2013 ಕಲಂ 279, 338 304 (ಎ) ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ: ಶ್ರೀ ಹರೀಶ್ಚಂದ್ರ ತಂದೆ ಸೋಮಲಾ ರಾಠೋಡ ಉ|| ತಾಜ ಸುಲ್ತಾನಪೂರದಲ್ಲಿ ಪ್ರಭಾರಿ ಪಿ.ಡಿ.ಓ ಸಾ:ಸಣ್ಣೂರ ಗ್ರಾಮ ಹಾ||ವ|| ಭಾಗ್ಯ ನಗರ ಗುಲಬರ್ಗಾ ರವರು ನಾನು ಮತ್ತು ನನ್ನ ಹೆಂಡತಿ ಮಕ್ಕಳು ಕೂಡಿಕೊಂಡು ನಮ್ಮೂರ ತಾಂಡಾದಲ್ಲಿ ದೇವರ ಕಾರ್ಯಕ್ರಮ ಇದ್ದುದ್ದರಿಂದ ದಿನಾಂಕ:19-02-2013 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಭಾಗ್ಯ ನಗರದ ಬಾಡಿಗೆ ಮನೆಗೆ ಕೀಲಿ  ಹಾಕಿಕೊಂಡು ಸಣ್ಣೂರ ತಾಂಡಾಕ್ಕೆ ಹೋಗಿರುತ್ತೇವೆ. ಮರಳಿ ದಿನಾಂಕ:20-02-2013 ರಂದು 10-00 ಗಂಟೆಗೆ ಮನೆಗೆ  ಬಂದಾಗ,  ನಮ್ಮ ಮನೆಯ ಮುಖ್ಯ್ಯ ದ್ವಾರದ ಬಾಗಿಲು ಕೀಲಿ ಮುರಿದು ಆಲಮಾರಿಟ್ಟಿದ್ದ  ಬಂಗಾರದ ಆಭರಣ ಹಾಗೂ ನಗದು ಹಣ 20,000/-  ರೂಪಾಯಿಗಳು ಮತ್ತು ಒಂದು ಸಾಮಸಾಂಗ ಮೋಬೈಲ್ ಅ.ಕಿ-8,000/- ರೂ  ಹೀಗೆ ಒಟ್ಟು 40,000/- ರೂ ಬೆಲೆಯುಳ್ಳದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 56/2013  ಕಲಂ, 454, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

20 February 2013

GULBARGA DISTRCIT REPORTED CRIMES


ವಾರಸುದಾರರಿಲ್ಲದ ಮೂರು ಮೋಟಾರ ಸೈಕಲಗಳು ಜಪ್ತಿ:
ನಿಂಬರ್ಗಾ ಪೊಲೀಸ್ ಠಾಣೆ:ದಿನಾಂಕ 19/02/2013 ರಂದು ಸಾಯಂಕಾಲ ಶ್ರೀ ಆರ್. ರವೀಂದ್ರನಾಥ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ರವರು ಮತ್ತು ಸಿಬ್ಬಂಧಿಯವರಾದ ಲಕ್ಷ್ಮಣ, ಭೀಮರಾಯ ಪಾಟೀಲ,ಭೀಮಾಶಂಕರ ರವರೊಂದಿಗೆ ಹಳ್ಳಿಗಳ ಭೇಟ್ಟಿ ಕುರಿತು ಭೂಸನೂರ ಕಡೆಗೆ ಹೊರಟಾಗ ಭೂಸನೂರ ಕೆನಾಲ ಬ್ರಿಡ್ಜ ಹತ್ತಿರ ಮೂರು ಮೋಟಾರ ಸೈಕಲಗಳು ನಿಂತಿರುವದು ಕಂಡು ನೋಡಲು, ಯಾರೂ ವಾಹನದ ಮಾಲಿಕರು ಇರದೆ ಇರುವದನ್ನು ಕಂಡು ಹೋಗಿ ಬರುವ ಜನರಿಗೆ ವಿಚಾರಿಸಲು ಅವರು ಸುಮಾರು 2-3 ದಿವಸಗಳಿಂದ ಈ ಮೂರು  ವಾಹನಗಳು ಇಲ್ಲೆ ಇವೆ. ಇವುಗಳು ಯಾರಿಗೆ ಸಂಭಂಧಪಟ್ಟಿರುವವು ಅಂತ ಗೊತ್ತಿಲ್ಲ ಅಂತಾ ತಿಳಿಸಿದ್ದರಿಂದ ಮೂರು ಮೋಟಾರ ಸೈಕಲಗಳಾದ ಒಂದು ಹಿರೋ ಹೊಂಡಾ ಪ್ಯಾಶನ ಪ್ಲಸ್ ಕಪ್ಪು ಕಲರ್ ನಂ: ಎಮ.ಎಚ್-25/ಎಸ್-7047, ಚೆಸ್ಸಿ ನಂ: MBLHA10EL99G00236, ಇಂಜನ್ ನಂ: No. HA10EB99F28058  ಇರುತ್ತದೆ. ಯಮಹಾ ಮೋಟಾರ ಸೈಕಲ್ ಕಪ್ಪು ಕಲರ್ ನಂ: ಕೆಎ-32 ಎಕ್ಸ್-4807 ಚೆಸ್ಸಿನ ನಂ: No.ME154B019A2005043, ಇಂಜನ್ ನಂ:54B1005014 ಇರುತ್ತದೆ. ಮತ್ತು ಒಂದು ಹಿರೋ ಹೊಂಡಾ ಸ್ಪಲೇಂಡರ್ ಮೋಟಾರ ಸೈಕಲ್ ಕಪ್ಪು ಬಣ್ಣದ್ದು  ನಂಬರ ಇರುವದಿಲ್ಲ ಚೆಸ್ಸಿ ನಂ: MBLHA10EYAHF01831,ಇಂಜನ ನಂ:HA10EFAHF05369 ಇರುತ್ತದೆ. ಅವುಗಳ ಅಂದಾಜ ಕಿಮ್ಮತ್ತು  55,000/- ರೂಪಾಯಿಗಳದ್ದು  ಯಾರೂ ವಾರಸದಾರರು ಇಲ್ಲದ ಪ್ರಯುಕ್ತ ವಶಕ್ಕೆ ತೆಗೆದುಕೊಂಡು ಪಿ.ಎಸ.ಐ ರವರು ಠಾಣೆ ಗುನ್ನೆ ನಂ: 17/2013 ಕಲಂ 41(ಡಿ) 102 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ರೇವಣಸಿದ್ದಪ್ಪಾ ತಂದೆ ಹಣಮಂತ ಕೊಚಟ್ಟಿ ವ:18 ಉ:ವಿದ್ಯಾರ್ಥಿ ಸಾ:ಕೊಳಸಾಪೈಲ ಶಹಾಬಾದ ರವರು ನಾನು ಮತ್ತು ಮತ್ತು ತಾಲುಶ್ರೀಕಾಂತ ಕೂಡಿ ಕೋಳಸಾ ಫೈಲದ ಬಾಬು ಜಗಜೀವನರಾಮ ಪಾರ್ಕದಲ್ಲಿ ದಿನಾಂಕ:19/02/2013 ರಂದು 3.30 ಪಿಎಂ ಸುಮಾರಿಗೆ ಮಾತನಾಡುತ್ತಾ ಕುಳಿತಿದ್ದಾಗ ರಾಘವೇಂದ್ರ ತಂದೆ ವೆಂಕಪ್ಪಾ ಮೇಘಪಾಲ ಇತನು ಬಂದು ನಮ್ಮ ತಾಯಿಯ ಜೊತೆ ಜಗಳ ತೆಗೆದಿದ್ದಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಬ್ಲೇಡದಿಂದ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 24/2013 ಕಲಂ, 323, 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ರಾಘವೇಂದ್ರ ತಂದೆ ವೆಂಕಪ್ಪಾ ಮೇಘಪಾಲ ವ:18  ಉ:ಕೂಲಿ ಕೆಲಸ ಸಾ:ಕೊಳಸಾಪೈಲ ಶಹಾಬಾದ ರವರು ನಾನು ದಿನಾಂಕ:19/02/2013 ರಂದು ಮಧ್ಯಾಹ್ನ 3.30 ಗಂಟೆ ಸುಮಾರಿಗೆ ಬಾಬು ಜಗಜೀವನರಾಮ ಪಾರ್ಕ ಕೋಳಸಾಫೈಲ ಹತ್ತಿರ ಹೋಗುತ್ತಿರುವಾಗ ರೇವಣಸಿದ್ದಪ್ಪ ತಂದೆ ಹಣಮಂತ,ಶ್ರೀಕಾಂತ ತಂದೆ ಭೀಮರಾಯ ಸಾಂಬಾ ರವರು ಕೂಡಿಕೊಂಡು ಬಂದು ರೇವಣಸಿದ್ದನು ಇತನು ನನಗೆ ನಿಮ್ಮ ತಾಯಿ ಅವಾಚ್ಯವಾಗಿ ಬೈದಿರುತ್ತಾಳೆ  ಅಂತಾ ಕೈ ಮುಷ್ಠಿಮಾಡಿ ಮೂಗಿಗೆ ಹೊಡೆದನು ಮತ್ತು ಶ್ರೀಕಾಂತನು ಕೂಡಾ ಅವಾಚ್ಯ ಶಬ್ದಗಳಿಂದ ಕೈಯಿಂದ ಬಲಮಗ್ಗಲಿಗೆ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:25/2013 ಕಲಂ, 323, 32,4 504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ಶ್ರೀ ವಿಶ್ವನಾಥ ತಂದೆ ಶರಣಪ್ಪಾ ಪ್ಯಾಟಿ ಸಾ:ಫೀರೋಜಾಬಾದ ರವರು ನಾನು ಮತ್ತು ನಮ್ಮೂರಿನ ಖಲಿಲ,ರಾಮಚಂದ್ರ, ಮತ್ತು ಹಾಜಿಮಿಯಾ ಕೂಡಿಕೊಂಡು ನದಿಸಿನ್ನೂರ ಗ್ರಾಮದ ಶಿವಶರಣಪ್ಪಾ ಹೂಗಾರ ಇವರ ದಾಲಮಿಲನ ಪೂಜೆ ಇರುವುದ್ದರರಿಂದ ದಿನಾಂಕ:18-02-2013 ರಂದು ಬೆಳಿಗ್ಗೆ 10-00 ಗಂಟೆಗೆ ದಾಲ ಮಿಲಿನ ಪೂಜೆಯ ನಿಮಿತ್ಯವಾಗಿ ಅಡುಗೆಯ ಸಾಮಾನುಗಳನ್ನು  ಟ್ರ್ಯಾಕ್ಟರ ನಂಬರ ಕೆಎ-32 ಟಿಎ-3677/78  ನೇದ್ದರಲ್ಲಿ ಪೂಜಾ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಬರುತ್ತಿರುವಾಗ ಟ್ಯಾಕ್ಟರ ಹಾಜಿಮಿಯಾ ತಂದೆ ಖಾಸಿಮಸಾಬ ಇತನು ಚಲಾಯಿಸುತ್ತಿದ್ದು ನದಿಸಿನ್ನೂರ ಕ್ರಾಸ ಹತ್ತಿರ ಬರುತ್ತಿರುವಾಗ ಹಿಂದಿನಿಂದ ಒಬ್ಬ ಟಿಪ್ಪರ ಕೆಎ-32 ಬಇ-5476 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾವು ಹೊಗುತ್ತಿದ್ದ ಟ್ರ್ಯಾಕ್ಟರಿಗೆ ಡಿಕ್ಕಿ ಪಡಿಸಿರುತ್ತಾನೆ. ಟ್ರ್ಯಾಕ್ಟರ ರಸ್ತೆಯ ಎಡಗಡೆಗೆ ಬೋರಲಾಗಿ ಪಲ್ಟಿಯಾಗಿದ್ದರಿಂದ ನಮ್ಮೆಲರಿಗೆ ರಕ್ತಗಾಯವಾಗಿರುತ್ತವೆ. ಟಿಪ್ಪರ ಚಾಲಕ ಕಿಶನ ಚವ್ಹಾಣ ಇತನು ಡಿಕ್ಕಿ ಪಡಿಸಿ ತನ್ನ ವಾಹನವನ್ನು ನಿಲ್ಲಿಸದೆ ಹಾಗೆಯೆ ಹೋಗಿರುತ್ತಾನೆ. ಆತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:21/2013 ಕಲಂ, 279,338, ಸಮಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ 19-02-13 ರಂದು ಮಧ್ಯಾಹ್ನ 2-30 ಗಂಟೆ ಸುಮಾರಿಗೆ  ನಮ್ಮ ಚಿಕ್ಕಪ್ಪ ಭೀಮಶ್ಯಾ ಸಾವಳಗಿ ಇವರ ಮೊಮ್ಮಗನ ಜಾವಳ ಕಾರ್ಯಕ್ರಮಕ್ಕೆ ಹಾಜರಾಗಲು ನಾನು ಮತ್ತು ನನ್ನ ಇಬ್ಬರ ಗೆಳೆಯರೊಂದಿಗೆ ಮೋಟಾರ ಸೈಕಲ ಕೆಎ-32/ವಿ-2355 ನೇದ್ದರ ಮೇಲೆ ಗೋಳಾ ಗ್ರಾಮಕ್ಕೆ ಹೋಗಿ ಜಾವಳ ಕಾರ್ಯಕ್ರಮಕ್ಕೆ ಮುಗಿಸಿಕೊಂಡು ಮರಳಿ ಬರುತ್ತಿರುವಾಗ ಸಾಯಂಕಾಲ 7-30 ಗಂಟೆ ಸುಮಾರಿಗೆ ಭೀಮಳ್ಳಿ ಕ್ರಾಸ ಹತ್ತಿರ ಎದುರುನಿಂದ ಕ್ರೋಜರ ಕೆಎ-23 ಎಂ-6474 ನೇದ್ದರ ಚಾಲಕ ಅತಿವೇಗ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಬಂದು ನಮ್ಮ ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಕ್ರೋಜರ ನಿಲ್ಲಿಸಿ ಚಾಲಕ ಓಡಿ ಹೋದನು. ನನ್ನ ಹಿಂದೆ ಮೋಟಾರ ಸೈಕಲ ಮೇಲೆ ಕುಳಿತ ಅಜಿತಕುಮಾರ ಇತನು ಸ್ಥಳದಲ್ಲಿ ಮೃತಪಟ್ಟಿದ್ದು, ನನಗೆ ಮತ್ತು ಅನಿಲ ಇಬ್ಬರಿಗೆ ಭಾರಿ ರಕ್ತಗಾಯ ಮತ್ತು ಗುಪ್ತಗಾಯವಾಗಿರುತ್ತವೆ. ಅಂತಾ ಶ್ರೀ ವಿನೋದ ತಂದೆ ಮಾಹಾಂತೇಶ ದೇಸುಣಕಿ  ಸಾ|| ಬುದ್ದ ನಗರ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 99/2013 ಕಲಂ 279, 338 304 (ಎ) ಐಪಿಸಿ ಸಂಗಡ 187 ಎಂ.ವಿ.ಆಕ್ಟ ಪ್ರಕಾರ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ. 

18 February 2013

GULBARGA DISTRICT


ಗುಲಬರ್ಗಾ ಜಿಲ್ಲಾ ಪೊಲೀಸರ ಕಾರ್ಯಚರಣೆ

ಗುಲಬರ್ಗಾ ಜಿಲ್ಲಾ ಪೊಲೀಸರಿಂದ ಅಂತರ ರಾಜ್ಯ ಕಳ್ಳನ ಬಂಧನ,
ಬಂಧಿತ ಬಾಬು @ ಮಸ್ತಾನ ಸಾ|| ನಾಗವಾರ, ಬೆಂಗಳೂರು ಇತನಿಂದ
600 ಗ್ರಾಂ ಬಂಗಾರ ಮತ್ತು 1135 ಗ್ರಾಂ ಬೆಳ್ಳಿ ಒಟ್ಟು 19,30,000/-
(ಹತ್ತೊಂಬತ್ತು ಲಕ್ಷ ಮೂವತ್ತು ಸಾವಿರ) ರೂಪಾಯಿಗಳ ಮೌಲ್ಯದ ಆಭರಣಗಳು  ವಶ.

ಮಾನ್ಯ ಶ್ರೀ ಎನ್. ಸತೀಷಕುಮಾರ ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾ,  ಮಾನ್ಯ ಶ್ರೀ ಕಾಶಿನಾಥ ತಳಕೇರಿ ಅಪರ್ ಪೊಲೀಸ್ ಅಧೀಕ್ಷಕರು ಗುಲಬರ್ಗಾರವರ ಮಾರ್ಗದರ್ಶನದಲ್ಲಿ, ಶ್ರೀ ಭೂಷಣ ಭೊರ್ಸೆ ಹಿರಿಯ ಸಹಾಯಕ ಎಸ್.ಪಿ. ಉಪ-ವಿಭಾಗ ಗುಲಬರ್ಗಾ, ಶ್ರೀ ಎ.ಡಿ. ಬಸವಣ್ಣನವರ್ ಡಿ.ಎಸ್.ಪಿ ಬಿ ಉಪ-ವಿಭಾಗ ಗುಲಬರ್ಗಾ, ಶ್ರೀ ಹೆಚ. ತಿಮಪ್ಪಾ ಡಿ.ಎಸ.ಪಿ ಗ್ರಾಮಾಂತರ ಉಪ-ವಿಭಾಗ ಗುಲಬರ್ಗಾರವರ ನೇತ್ರತ್ವದ ತಂಡದಲ್ಲಿ ಶ್ರೀ ಎಸ್.ಎಸ್.ಹುಲ್ಲೂರ ಪೊಲೀಸ್ ಇನ್ಸಪೇಕ್ಟರ ಡಿಸಿಐಬಿ ಘಟಕ ಗುಲಬರ್ಗಾರವರು ಮತ್ತು ಸ್ಟೇಶನ ಬಜಾರ ಪೊಲೀಸ ಠಾಣೆಯ ಇನ್ಸಪೇಕ್ಟರ ಶ್ರೀ.ಜೆ.ಎಚ್.ಇನಾಮದಾರ, ಪಿ.ಎಸ.ಐ. ವಿಜಯ, ಪಿ.ಎಸ.ಐ.ಮುರಳಿ ಹಾಗೂ ಡಿಸಿಐಬಿ ಘಟಕದ ಸಿಬ್ಬಂದಿಯವರಾದ ಎ.ಎಸ.ಐ, ಬಸವರಾಜ, ದತ್ತಾತ್ರಯ, ಹೆಚ.ಸಿ.ಗಳಾದ ಅಣ್ಣರಾವ, ವಿಜಯಕುಮಾರ, ಲಕ್ಕಪ್ಪಾ, ಪ್ರಕಾಶ, ಶಿವಯೋಗಿ, ಅಣ್ಣಪ್ಪಾ, ಅಶೋಕ, ವೀರಣ್ಣಾ ಪಿಸಿ ರವರು ಹಾಗೂ ಸ್ಟೇಶನ ಬಜಾರ ಠಾಣೆಯ ಸಿಬ್ಬಂಧಿಯವರಾದ ಅಖಂಡಪ್ಪಾ ಎ.ಎಸ.ಐ, ಹುಸೇನಸಾಬ ಹೆಚ.ಸಿ ಹುಣಚಪ್ಪಾ ಪಿಸಿರವರ ತಂಡವು ಗುಲಬರ್ಗಾ ನಗರದಲ್ಲಿ 2007 ನೇ ಸಾಲಿನಿಂದ 2012 ನೇ ಸಾಲಿನವರೆಗೆ ಗುಲಬರ್ಗಾ ನಗರದ ವಿವಿಧ ಪೊಲೀಸ್ ಠಾಣೆಗಳ ಸರಹದ್ದುಗಳಲ್ಲಿ ಹಗಲು ಹೊತ್ತಿನಲ್ಲಿ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗುತ್ತಿರುವಂತಹ ಒಂಟಿ ಮನೆಗಳನ್ನು ಗುರುತಿಸಿ ಹೊಂಚು ಹಾಕಿ ಹಗಲು ಕಳ್ಳತನ ಮಾಡಿದ ಅಪರಾಧಿ ಬಾಬು @ ಮಸ್ತಾನ ಸಾ||ನಾಗವಾರ ಬೆಂಗಳೂರು ಇತನು ಗುಲಬರ್ಗಾದಲ್ಲಿ ಹಗಲು ಕಳ್ಳತನ ಮಾಡಿದ ಕೆಲವು ಮನೆಗಳಲ್ಲಿ ದೊರೆತ ಬೆರಳು ಮುದ್ರೆಯ ಆಧಾರದ ಮೇಲೆ ಗುರುತಿಸಿ ಗುಲಬರ್ಗಾ ಜಿಲ್ಲಾ ಪೊಲೀಸರು ಮತ್ತು ಬೆಂಗಳೂರು ನಗರ ಪೊಲೀಸರ ಸಹಕಾರದೊಂದಿಗೆ ಜಂಟಿಯಾಗಿ ಕಾರ್ಯಚರಣೆ ಕೈಕೊಂಡು ಆರೋಪಿತನಾದ ಬಾಬು @ ಮಸ್ತಾನ ಇತನನ್ನು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ,
            ಗುಲಬರ್ಗಾ ನಗರದ ಸ್ಟೇಷನ ಬಜಾರ ಠಾಣಾ ವ್ಯಾಪ್ತಿಯ ಪಿ & ಟಿ ಕಾಲೋನಿ, ರಹಿಮತ್ ನಗರ, ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಹತ್ತಿರದ ಬ್ಯಾಂಕ ಕಾಲೋನಿ, ಗಾಬರೆ ಲೇಔಟ್, ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಾಲಿಬ್ ಕಾಲೋನಿ, ಏಕ್ಬಾಲ ಕಾಲೋನಿ. ಗ್ರಾಮೀಣ ಪೊಲೀಸ ಠಾಣೆಯ ವ್ಯಾಪ್ತಿಯ ಎಂ.ಕೆ.ನಗರ ಹಾಗರಗಾ ರೋಡ, ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಹಮನಿ ಚೌಕ, ಗಣೇಶ ನಗರ, ಠಾಣಾ ವ್ಯಾಪ್ತಿಯಲ್ಲಿ ಹಗಲು ಹೊತ್ತಿನಲ್ಲಿ ಮನೆಗಳ್ಳತನ ಮಾಡಿದ  10 ಗುನ್ನೆಗಳಲ್ಲಿಯ 600 ಗ್ರಾಂ ಬಂಗಾರ ಮತ್ತು 1135 ಗ್ರಾಂ ಬೆಳ್ಳಿ ಇವುಗಳ ಒಟ್ಟು ಅಂದಾಜು ಮೌಲ್ಯ 19,30,000/- (ಹತ್ತೊಂಬತ್ತು ಲಕ್ಷ ಮೂವತ್ತು ಸಾವಿರ)  ರೂಪಾಯಿಗಳ ಮೌಲ್ಯದ ಬಂಗಾರದ ಮತ್ತು ಬೆಳ್ಳಿಯ ಆಭರಗಣಗಳನ್ನು ಆರೋಪಿತನಾದ ಬಾಬು @ ಮಸ್ತಾನ ಸಾ|| ನಾಗವಾರ ಬೆಂಗಳೂರು ಇತನಿಂದ ವಶಪಡಿಸಿಕೊಳ್ಳಲಾಗಿದೆ.
      ಈ  ಕಾರ್ಯಚರಣೆಯಲ್ಲಿ ಭಾಗಿಯಾದ ತಂಡದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಶ್ರೀ ಎನ್. ಸತೀಷಕುಮಾರ ಐ.ಪಿ.ಎಸ್.. ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು  ನಗದು ಬಹುಮಾನ ಘೋಷಿಸಿರುತ್ತಾರೆ.


17 February 2013

GULBARGA DISTRICT REPORTED CRIMES


ಮಂಗಳಸೂತ್ರ ದರೋಡೆ ಆದ ಬಗ್ಗೆ:
ಚೌಕ ಪೊಲೀಸ್ ಠಾಣೆ:ಶ್ರೀಮತಿ ನಿರ್ಮಲಾ ಗಂಡ ಜಗದೀಶ ಡಿಗ್ಗಾಂವಕರ ಸಾ|| ವಿರೇಂದ್ರ ಪಾಟೀಲ ಬಡಾವಣೆ ಜಿಡಿಎ ಕಾಲೋನಿ ಗುಲಬರ್ಗಾ ರವರು ನಾನು ಮತ್ತು ನನ್ನ ನಾದಿನಿ ಅಂಬಿಕಾ ಪಾಟೀಲ್ ಕೂಡಿಕೊಂಡು ದಿನಾಂಕ: 16-02-2013 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಅಟೋ ನಂ: ಕೆಎ-32-6508 ನೇದ್ದರಲ್ಲಿ ಓಂ ನಗರದಿಂದ ಶಹಾಬಜಾರದ್ಲಿರುವ ಸಂಬಂಧಿಕರಿಗೆ ಮಾತನಾಡಿಸಿಕೊಂಡು ಮರಳಿ ಮನೆಗೆ ಬರುತ್ತಿರುವಾಗ ಮಾರ್ಕೆಟ ಮಜೀದ ಹತ್ತಿರ ಒಬ್ಬ ವ್ಯಕ್ತಿ ಹಿಂದಿನಿಂದ ಬಂದು ನನ್ನ ಕೊರಳಲಿದ್ದ ಮಂಗಳ ಸೂತ್ರ 3 ತೊಲೆ 90,000/- ರೂಪಾಯಿಗಳದ್ದು ದೋಚಿಕೊಂಡು ಹೋಗಿರುತ್ತಾನೆ ಅಂತಾ ಶ್ರೀಮತಿ ನಿರ್ಮಲಾ ರವರ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 43/2013 ಕಲಂ, 392 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಎರಡು (2) ಮೋಟಾರ ಸೈಕಲುಗಳು ಜಪ್ತಿ:
ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ: ಮಹಾತ್ಮ ಬಸವೇಶ್ವರ ನಗರ ವೃತ್ತದ ಸಿಪಿಐ ರವರ ಮಾರ್ಗದರ್ಶದಲ್ಲಿ ದಿನಾಂಕ:16/02/2013 ರಂದು ಬೆಳಗ್ಗೆ 5-00 ಎ.ಎಮ ಕ್ಕೆ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಎಂ.ಬಿ ನಗರ ಪೊಲೀಸ ಠಾಣೆ ಹಾಗೂ ಸಿಬ್ಬಂದಿಯವರೊಂದಿಗೆ ಕರ್ತವ್ಯದಲ್ಲಿದ್ದಾಗ ಓಂ ನಗರ ಗೇಟ್ ಹತ್ತಿರ 3 ಜನರು ಕೂಡಿಕೊಂಡು 2 ಮೋಟಾರ ಸೈಕಲಗಳೊಂದಿಗೆ ಸಂಶಯ ರೀತಿಯಲ್ಲಿ ನಿಂತಿದ್ದು ಇನ್ನೊಬ್ಬನು ಸ್ವಲ್ಪ ದೂರದಲ್ಲಿ ನಿಂತುಕೊಂಡಿದ್ದನ್ನು ವಿಚಾರಿಸಲು ಅವರು ನಮ್ಮಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಹಿಡಿದು ಕೂಲಂಕುಶವಾಗಿ ವಿಚಾರಿಸಲು ಅವರ ಹೆಸರು ಶೇಖ್ ಇಮ್ರಾನ್ @ ಇಮ್ರಾನ್ ತಂದೆ ಅಬ್ದುಲ ಗಫಾರ ಶೇಖ್ ವಯಃ 18 ವರ್ಷ ಉಃ ಗೌಂಡಿ ಕೆಲಸ ಜಾತಿಃ ಮುಸ್ಲಿಂ ಸಾಃ ಬುಲಂದ ಪರ್ವೆಜ್ ಕಾಲೋನಿ ಗುಲಬರ್ಗಾ,ಕಾಳಪ್ಪ ತಂದೆ ಸುಭಾಷ ಹುಸುರ ವಯಃ23 ವರ್ಷ ಉಃ ಲಾರಿ ಡ್ರೈವರ ಜಾತಿಃ ಲಿಂಗಾಯತ ಸಾಃ ಕಾಳನೂರ ತಾಃಜಿಃ ಗುಲಬರ್ಗಾ,ಮೋಹಸೀನ ತಂದೆ ಇಮಾಮ್ ಪಟೇಲ ವಯಃ 18 ವರ್ಷ ಜಾತಿಃ ಮುಸ್ಲಿಂ ಉಃ ಗೌಂಡಿಕೆಲಸ ಸಾಃ ಬುಲಂದ ಪರ್ವೆಜ್ ಕಾಲೋನಿ ಗುಲಬರ್ಗಾ,ನಾಗರಾಜ ತಂದೆ ಮಲ್ಲಣ್ಣಾ ಅವುಂಟಗಿ ವಯಃ 24 ವರ್ಷ ಉಃ ರಘೋಜಿ ಫೈನಾನ್ಸದಲ್ಲಿ ಕೆಲಸ ಜಾತಿಃ ಲಿಂಗಾಯತ ಸಾಃ ಶಿವಾಜಿ ನಗರ ಮಲ್ಲಿಕಾರ್ಜುನ ಗುಡಿ ಹತ್ತಿರ ಗುಲಬರ್ಗಾ ಅಂತಾ ತಿಳಿದಿದ್ದು. ಇವರ ಹತ್ತಿರವಿದ್ದ 2 ಮೋಟಾರ ಸೈಕಲಗಳ ಕಾಗದ ಪತ್ರಗಳ ಬಗ್ಗೆ ವಿಚಾರಿಸಲು ಯಾವುದೇ ಕಾಗದ ಪತ್ರಗಳು ಹೊಂದಿರುವದಿಲ್ಲ 2 ಮೋಟಾರ ಸೈಕಲಗಳು ವಿಶ್ವವಿದ್ಯಾಲಯ ಮತ್ತು ರೋಜಾ ಪೊಲೀಸ ಠಾಣಾ ವ್ಯಾಪ್ತಿ ಕಳುವು ಮಾಡಿರುವುದಾಗಿ ಹೇಳಿದ್ದು, ಅವರ ಹತ್ತಿರವಿದ್ದ ಮೋಟಾರ ಸೈಕಲ್ Hero Honda Splender + Black Colour M/c No. KA 32 U 7285, Chassis No. MBLHA10EE89J32026, Engine No. HA10EA89J38209 H ಅಃಕಿಃ 25,000/- ರೂ. 2) Bajaj Company M/c No. KA 32 G 9065, Chassis No. MD2DDDZZZNWJ71396, Engine No. DUMBNJ27434 ಅಃಕಿಃ 25,000/- ನೇದ್ದವುಗಳನ್ನು ಜಪ್ತಿ  ಮಾಡಿಕೊಂಡು ಠಾಣೆ ಗುನ್ನೆ ನಂ: 25/2013 ಕಲಂ.41(ಡಿ), 102 ಸಿ.ಆರ್.ಪಿ.ಸಿ ಹಾಗು 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ಶ್ರಿಮತಿ ಗಂಗಮ್ಮ ಗಂಡ ತಿಪ್ಪಣ್ಣಾ ಹುಚ್ಚನ ವ: 70 ವರ್ಷ ಸಾ||ಫರಹತಾಬಾದ ರವರು ನಾನು ಮತ್ತು ನನ್ನ ಗಂಡ ದಿನಾಂಕ 15/2/2013 ರಂದು ಮದ್ಯಾಹ್ನ 2:00 ಗಂಟೆಯ ಸುಮಾರಿಗೆ ಮನೆಯಲ್ಲಿರುವಾಗ ನಮ್ಮ ಅಣ್ಣತಮ್ಮಕಿಯವರಾದ ಶಾರದಾಬಾಯಿ ಗಂಡ ಮಲಕಪ್ಪಾ ಹುಚ್ಚನ ಇವಳೊಂದಿಗೆ ನಳದ ನೀರಿನ ಸಂಬಂವಾಗಿ ಬಾಯಿ ಮಾತಿನ ಜಗಳ ವಾಗಿತ್ತು. ರಾತ್ರಿ 10:00 ಗಂಟೆಯ ಸುಮಾರಿಗೆ ಉಟ ಮಾಡಿಕೊಂಡು ಮಲಗಿಕೊಂಡಿದ್ದಾಗ ನಮ್ಮ ಮನೆಯ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾಗ ಯಾಕೆ ಬೈಯುತ್ತಿದ್ದಿರಿ ಅಂತಾ ಕೇಳಿದಕ್ಕೆ ಕಟ್ಟಿಗೆಯಿಂದ ಹೋಡೆದು ಗಾಯ ಮಾಡಿರುತ್ತಾಳೆ. ಸೋನುಬಾಯಿ ಇವಳು ಸಹ ಹೋಡೆದಿರುತ್ತಾಳೆ. ಜಗಳ ಬಿಡಿಸಲು ಬಂದ ನನ್ನ ಗಂಡನಿಗೆ ಮಲಕಪ್ಪ ಹುಚ್ಚನ ಇತನು ನೂಕಿ ಕೊಟ್ಟು ಬೇದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 20/2013 ಕಲಂ, 323, 324, 504, 506 ಸಂಗಡ 14 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಸಚಿನ ತಂದೆ ಸೋಮಣ್ಣ ಸಂಬಿನೂರ ವ|| 19 ವರ್ಷ, ಉ|| ವಿದ್ಯಾರ್ಥಿ,ಸಾ|| ವಿಜಯ ನಗರ ಕಾಲೋನಿ ಬ್ರಹ್ಮಪೂರ ಗುಲಬರ್ಗಾ ರವರು ನಾನು ದಿನಾಂಕ 16-02-2013 ರಂದು ಸಾಯಂಕಾಲ 6-30 ಗಂಟೆಗೆ ಮನೆಯ ಮುಂದೆ ಕುಳಿತಾಗ ಪ್ರಶಾಂತ ತಂದೆ ರಜನಿಕಾಂತ, ಗಜ ತಂದೆ ರಾಜಕುಮಾರ ಬಂದು ನನಗೆ ಕರೆದು ನಿನ್ನ ಮೊಬೈಲ್ ಕೊಡು ಅಂತ ಅಂದಾಗ, ನನ್ನ ಮೊಬೈಲ್ ನಿಮಗೇಕೆ ಕೊಡಬೇಕು ಅಂತ ಅಂದಾಗ ಇಬ್ಬರೂ ಕೂಡಿ ಅವಾಚ್ಯದಿಂದ ಬೈಯುತ್ತಾ ಹೊಡೆಯ ಹತ್ತಿದರು. ನಾನು ಚೀರಾಡುತ್ತಿದ್ದಾಗ, ನನ್ನ ಎಡಗೈ ತಿರುವಿ, ಓಡಿ ಹೋಗಿದ್ದರು. ರಾತ್ರಿ 8-15 ಗಂಟೆಯ ಸುಮಾರಿಗೆ ಮತ್ತೆ ಅವರಿಬ್ಬರು ಮನೆಯ ಹತ್ತಿರ ಬಂದು, ಮನೆಯ ಮೇಲೆ ಕಲ್ಲು ತೂರಾಡಿ ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ;17/2013 ಕಲಂ 341, 323, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ತಂದೆಯ ಮೇಲೆ ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಹಾಜಿ ಕರೀಮ ತಂದೆ ಅಲಿಸಾಬ ಸಾ:ಮಜೀದ ಹಿಂದುಗಡೆ ಶಾಂತನಗರ ಭಂಕೂರ ರವರು ನಾನು ದಿನಾಂಕ:15/02/2013 ರಂದು ರಾತ್ರಿ 11.00 ಗಂಟೆಯ ಸುಮಾರಿಗೆ ಮನೆಗೆ ಬರುತ್ತಿದ್ದಾಗ ನನ್ನ ಮಗನಾದ ಮಹ್ಮದ ಫಿರೋಜ ಇತನು ನೀನು ಮನೆಗೆ ಬರಬೇಡ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆದನು, ಮಹ್ಮದ ಅಮಜದ, ಫೀರೋಜ, ಶಾಹೀನ ಗಂಡ ಅಮಜದ, ಫರಜಾನ ಬೇಗಂ ಗಂಡ ಮಹ್ಮದ ಫಿರೋಜ ಇವರು ಬಂದು ನೀನು ಮನೆಗೆ ಬರುವದು ಬೇಡ ಅಂತಾ ಹೊಟ್ಟೆಗೆ ಹೊಡೆದು ಕೈಯಿಂದ ಕುತ್ತಿಗೆಗೆ ಒತ್ತಿದನು. ಆಗ  ಜಗಳ ಜಗಳದ ಸಪ್ಪಳ ಕೇಳಿ ಮಹ್ಮದ ರೀಯಾಜ, ಮಹ್ಮದ ಸಿದ್ದಿಕ ಇವರು ಬಿಡಿಸಲು ಬಂದಾಗ ಮಹ್ಮದ ರಿಯಾಜನಿಗೆ ಮಹ್ಮದ,  ಮಹ್ಮದ ಸಿದ್ದಿಕ ಇವರಿಗೆ ಬಡಿಗೆಯಿಂದ ತಲೆಗೆ ಹೊಡೆದು ಒಳಪೆಟ್ಟು ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 23/2013 ಕಲಂ:147,148,341,323,324,504,506,307 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.