POLICE BHAVAN KALABURAGI

POLICE BHAVAN KALABURAGI

08 March 2014

GULBARGA DIST REPORTED CRIMES

ಅಪಘಾತ ಪ್ರಕರಣಗಳು:
ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ: ದಿನಾಂಕ07/03/2014 ರಂದು ಶ್ರೀಮತಿ ನಾಗಮ್ಮಾ ಗಂಡ ಕಲ್ಯಾಣಿ ಕೋಗನೂರ ಸಾ:ಸ್ಟೇಶನ ಗಣಗಾಪೂರ ಹಾ:ವ: ಗುಲಬರ್ಗಾ ಮತ್ತು ಅವರ ಮಕ್ಕಳಾದ ಶರಣಬಸು ಮತ್ತು ಮಲ್ಲಿಕಾರ್ಜುನ ರವರುಗಳು ವೆಂಕವ್ವ ಮಾರ್ಕೇಟ ದಿಂದ ಚಾಣುಕ್ಯಾ ಬಾರ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ಬರುತ್ತಿದ್ದ ಮೋ/ಸೈಕಲ್ ನಂ: ಕೆಎ 01 ಡಬ್ಲೂ 8986 ನೆದ್ದರ ಸವಾರ ನಾಗರಾಜನು ಮೋ.ಸೈಕಲನ್ನ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಶ್ರೀಮತಿ ನಾಗಮ್ಮಾರವರಿಗೆ ಅಪಘಾತಪಡಿಸಿ ಗಾಯಗೊಳಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಸಂಚಾರಿ ಪೊಲೀಸ ಠಾಣೆ ಗುಲಬರ್ಗಾ : ದಿನಾಂಕ 06-03-2014 ರಂದು ಅಟೋರಿಕ್ಞಾ ನಂ. ಕೆ.ಎ 32 9929 ನೇದ್ದರ ಚಾಲಕ ಜಾಫರ ತಂದೆ ಮಹಿಬೂಬಖಾನ ಜಿ.ಜಿ.ಎಚ್ ಕಡೆಯಿಂದ ಸೇಡಂ ರಿಂಗ ರೋಡ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಎದರುಗಡೆಯಿಂದ ಬರುತ್ತಿದ್ದ  ಹೊಸ ಮೋಟಾರ ಸೈಕಲ ನಂ. ಕೆ.ಎ 38 ಟಿ.ಆರ್ 2083 ನೇದ್ದರ ಚಾಲಕ ಸೇಡಂ ರಿಂಗ ರೋಡ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಟೋರಿಕ್ಷಾಕ್ಕೆ ಎದರುಗಡೆಯಿಂದ ಡಿಕ್ಕಿ ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಪಘಾದದಿಂದ ಮಹಿಬೂಬಖಾನ ರವರಿಗೆ ಗಾಯವಾದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳ್ಳತನದ 16 ಮೋಬಾಯಿಲ್ ಗಳ ಪತ್ತೆ :
ಅಶೋಕ ನಗರ ಪೊಲೀಸ್ ಠಾಣೆ:     ¢£ÁAPÀ:03/03/2014 gÀAzÀÄ C±ÉÆÃPÀ£ÀUÀgÀ ¥ÉÆ°¸À oÁuÉ¥ÀæPÀgÀtzÀ ತನಿಖೆ ವೇಳೆಯಲ್ಲಿ ದಸ್ತಗೀರ ಮಾಡಿದ ಆಪಾದಿತನಿಂದ 16 ªÉƨÉÊ®UÀ¼À£ÀÄß ªÀ±À¥Àr¹PÉÆArzÀÄÝ ªÉƨÉÊ®UÀ¼À «ªÀgÀ F PɼÀV£ÀAwದ್ದು.
ಕ್ರ.ಸಂ
ಮೊಬೈಲ್ ಕಂಪನಿ ಹೆಸರು
ಮೊಬೈಲ್ ಐ.ಎಮ್.ಇ.ಐ ನಂಬರ
1
ಸ್ಯಾಮ್ ಸಂಗ್ ಗ್ಯಾಲಾಕ್ಸಿ
356899050496350/356900050496356
2
ಸ್ಯಾಮ್ ಸಂಗ್ ಜಿಟಿ ಬಿ 5330
352941051360708
3
ಸ್ಯಾಮ್ ಸಾಂಗ್ ಎಸ್- 7262
359717057649697 /359718057649695
4
ಸ್ಯಾಮ್ ಸಾಂಗ್ ಜಿಟಿ- ಎಸ್- 7585
351602067189330 /351603067189338
5
ಸೋನಿ ಎಕ್ಸ್ ಪೇರಿಯಾ ಸಿ-2004
358098052496421 /358098052496439
6
ಸೋನಿ ಎಕ್ಸ್ ಪೇರಿಯಾ ಸಿ-2004
358098053343788/358098053343796
7
ಮೈಕ್ರೋಮ್ಯಾಕ್ಸ್ ಎ-73
911156950370336 /911156950402303
8
ಮೈಕ್ರೋಮ್ಯಾಕ್ಸ್ ಎ-62
911302553484989/911302553484997
9
ಸ್ಯಾಮ್ ಸಂಗ್ ದ್ಯೂಸ್ ಜಿಟಿ ಎಸ್- 7582
35160206650554/351603066250552
10
ನೋಕಿಯಾ ಎಕ್ಸ್-2
354555056377307/354555056377315
11
ನೋಕಿಯಾ ಎಕ್ಸ್-202
351695058276405 /351695058276413
12
ಕಾರ್ಬನ್ ಎ- 90
911342751841184/911342751841192  
13
ಸೋನಿ ಸಿ-2104
356605053532681    
14
ಸೆಮ್ ಸಂಗ್ ಡ್ಯೂಸ್ ಜಿಟಿಎಸ್- 7562
358302050026655 /358303050026653
15
ನೋಕಿಯಾ ಲೂಮಿನಿಯಾ
356899050496350
16
ಚೈನಾ ಸೆಟ್  ಎಮ್-1
                        -

ಸರಗಳ್ಳತನ ಪ್ರಕರಣ:
C±ÉÆÃPÀ ನಗರ ಪೊಲೀಸ್ ಠಾಣೆ ಗುಲಬರ್ಗಾ: ದಿನಾಂಕ : 07/03/2014 ರಂದು ಶ್ರೀಮತಿ ಪಾರ್ವತಿ ಗಂಡ ಶಾಂತಮಲ್ಲಪ್ಪ ಶಿವಕೇರಿ ಸಾ: ಕಾಂತ ಕಾಲೋನಿ ಗುಲಬರ್ಗಾ  ರವರು ಮನೆಯಲ್ಲಿದ್ದಾಗ ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಒಬ್ಬ ಗಂಡು ಮತ್ತು ಹೆಣ್ಣು ಇಬ್ಬರೊ ಮೊಟಾರ ಸೈಕಲ ಮೇಲೆ ಬಂದು ತಮಗೆ ಬಾಡಿಗೆ ಮನೆ ಬೇಕಾಗಿದೆ ಅಂತಾ ಕೇಳಿದಾಗ ಶ್ರೀಮತಿ ಪಾರ್ವತಿ ರವರು ಅವರಿಗೆ ವಿಚಾರಿಸಲಾಗಿ ತಾವು ಹುಮನಾಬಾದ ಕಡೆಯವರಿದ್ದೆವೆ ಎಂದು ಹೇಳಿದ್ದು. ಬಾಡಿಗೆಗೆ ಇರುವ ರೂಮುಗಳನ್ನು ತೋರಿಸುವಾಗ ಬಂದಿದ್ದ ಹೆಣ್ಣು ಮಗಳು ಒಮ್ಮೆಲೆ ತಮ್ಮ ಮೈಮೇಲೆ ಬಿದ್ದು ಕೈ ಹಿಡಿದುಕೊಂಡು ಇನ್ನೊಬ್ಬ ವ್ಯಕ್ತಿ  ತನಗೆ ಚಾಕು ತೊರಿಸಿ ನೇಲಕ್ಕೆ ಕೆಡವಿ ಕೊರಳಲ್ಲಿದ್ದ ಕರಿಮಣಿಯುಳ್ಳ ಬಂಗಾರದ ಮಂಗಳಸೂತ್ರ ಅಂ.ಕಿ ರೂ 50000/- ನ್ನು ಕಿತ್ತುಕೊಂಡು ಹೋಗಿದ್ದು. ಆ ಸಮಯದಲ್ಲಿ ತನ್ನ ಕೈಗೆ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ.  ತಾನು ಚಿರಾಡುತ್ತಿರುವಾಗ ಅವರಿಬ್ಬರೂ ಅವರ ಮೊಟಾರ ಸೈಕಲನ್ನು ಮನೆಮುಂದೆ ಬಿಟ್ಟು ಓಡಿ ಹೋಗಿದ್ದು. ನಮ್ಮ ಅಕ್ಕಪಕ್ಕದ ಮನೆಯವರು ಅವರನ್ನು ಬೆನ್ನತ್ತಿದರೊ ಸಿಕ್ಕಿರುವದಿಲ್ಲ ಅವರು ಬಿಟ್ಟು ಹೋದ ಹಿರೊಹೊಂಡಾ ಪ್ಯಾಶನ್ ಮೊಟಾರ ಸೈಕಲ ನಂ. ಕೆಎ32/ಎಸ್06 ಇದ್ದು. ಈ ಬಗ್ಗೆ ಶ್ರೀಮತಿ ಪಾರ್ವತಿ ಗಂಡ ಶಾಂತಮಲ್ಲಪ್ಪ ಶಿವಕೇರಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಬಕಾರಿ ದಾಳಿ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ: ದಿನಾಂಕ 06/03/2014 ರಂದು ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್.ಐ ನಿಂಬರ್ಗಾ ರವರು ಠಾಣೆಯ ಸಿಬ್ಬಂಧಿಯವರಾದ ಶ್ರೀ ಹಜರತ ಅಲಿ ಸಿಪಿಸಿ 154, ಶ್ರೀ ಅಶೋಕ ಸಿಪಿಸಿ 1143 ರವರೊಂದಿಗೆ ನಿಂಬರ್ಗಾ ಪಟ್ಟಣದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ದಂಗಾಪೂರ ಗ್ರಾಮದಲ್ಲಿಯ ಬಸ ನಿಲ್ದಾಣದ ಹತ್ತಿರ ಇರುವ ಲಚ್ಚಪ್ಪ ನಾಟೀಕಾರ ಇವರ ಹೊಟೇಲ ಮುಂದುಗಡೆ ಸಾರ್ವಜನಿಕ ರಸ್ತೆಯ ಮೇಲೆ ಮೇಲೆ ಒಬ್ಬ ವ್ಯಕ್ತಿಯು ಅಕ್ರಮವಾಗಿ ಮಧ್ಯವನ್ನು ತನ್ನ ಸ್ವಾಧೀನದಲ್ಲಿ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ದಂಗಾಪೂರ ಗ್ರಾಮಕ್ಕೆ ಹೋಗಿ ದಾಳಿ ಮಾಡಿ ಲೈಸನ್ಸ ಇಲ್ಲದೆ ಮಧ್ಯ-ಮಾರಾಟ ಮಾಡುತ್ತಿದ್ದ ಇಬ್ರಾಹಿಂ ತಂ ಬಾಷಾಸಾಬ ಕಂಟೇಕೊರ ಸಾ|| ದಂಗಾಪೂರ ಈತನನ್ನು ದಸ್ತಗೀರ ಮಾಡಿ ಆತನಿಂದ ರೂ 1,300/- ಮೈಲ್ಯದ ಮಧ್ಯ ಮಧ್ಯ ಮಾರಿದ ನಗದು ರೂ 290/- ಜಪ್ತಿ ಮಾಡಿಕೊಂಡು ಆತನ ವಿರುದ್ದ  ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಮಟಕಾ ಜೂಜಾಟ ಪ್ರಕರಣ:
ನರೋಣಾಪೊಲೀಸ ಠಾಣೆ : ದಿನಾಂಕ07/03/2014 ರಂದು ಲಾಡಚಿಂಚೋಳಿ ಗ್ರಾಮದಲ್ಲಿ ಮಟಕಾ ಜೂಜಾಟ ನಡೆಯುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ. ಬಸವರಾಜ ಎ ಎಸ್ ಐ ಡಿ ಸಿ ಐ ಬಿ ಘಟಕ ರವರು ಡಿಸಿ ಐ ಬಿ ಘಟಕ ಗುಲಬರ್ಗಾದ ಸಿಬ್ಬಂದಿಯವರಾದ ಶ್ರೀ. ಶಿವಯೋಗಿ ಹೆಚ ಸಿ 220 , ಚಂದ್ರಕಾಂತ ಹೆಚ ಸಿ 287, ಪ್ರಕಾಶ ಹೆಚ ಸಿ 370 ದಾಳಿ ಮಾಡಿ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದ  ಚಿದಾನಂದ ತಂದೆ ಬಸಣ್ಣ ಜಮಾದಾರ ಸಾ: ಧುತ್ರಗಾಂವ  ಈತನಿಗೆ ದಸ್ತಗಿರಿ ಮಾಡಿ ಆತನಿಂದ ಒಂದು ಬಾಲ್ ಪೆನ್ನು. ಮಟಕಾ ಬರೆದ ಒಂದು ಚೀಟಿ ಹಾಗೂ ನಗದು ರೂ 1,110/- ಜಪ್ತಿ ಮಾಡಿಕೊಂಡು ಆತನ ವಿರುದ್ದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ
ಕಳವು ಪ್ರಕರಣ;
ರೋಜಾ ಪೊಲೀಸ್ ಠಾಣೆ ಗುಲಬರ್ಗಾ: ದಿನಾಂಕ: 07/03/2014 ರಂದು ಶ್ರೀ ಇಕ್ಬಾಲ ಅಹ್ಮದ ತಂದೆ ಜಮೀಲ ಅಹ್ಮದ ಸಾ: ಮೋಮಿನಪೂರಾ ಗುಲಬರ್ಗಾ ಇವರು ಠಾಣೆಗೆ ತಾನು Chevolet Tavera Four vehicle bearing no. KA37-M1800 ಇದರ ಮಾಲೀಕನಾಗಿದ್ದು ಸದರಿ ವಾಹನಕ್ಕೆ ಜಹುರ ಅಹ್ಮದ ತಂದೆ ಅಬ್ದುಲ ರಶೀದ ಸಾ: ಯಾದುಲ್ಲಾ ಕಾಲೋನಿ ಗುಲಬರ್ಗಾ ಈತನಿಗೆ ಡ್ರೈವರನಾಗಿ ನೇಮಿಸಿಕೊಂಡಿದ್ದು ತನ್ನ ಮನೆಯ ಎದುರುಗಡೆ ವಾಹನ ನಿಲ್ಲಿಸಲು ಸ್ಥಳಾವಕಾಶ ಇಲ್ಲದೇ ಇರುವದರಿಂದ ನನ್ನ ಟವೆರಾ ವಾಹನವನ್ನು ಡ್ರೈವರಮನೆಯ ಮುಂದೆ ನಿಲ್ಲಿಸುತ್ತಾ ಬಂದಿದ್ದು ದಿನಾಂಕ: 21/02/2014 ರಂದು ರಾತ್ರಿ ಟವೇರಾ ವಾಹನವನ್ನು ಡ್ರೈವರಮನೆಯ ಮುಂದೆ ನಿಲ್ಲಿಸಿ ದಿನಾಂಕ: 22/02/22014 ರಂದು ಬೆಳಿಗ್ಗೆ ನೋಡಿದಾಗ ಮನೆಯ ಮುಂದೆ ನಿಲ್ಲಿಸಿದ ಟವೇರಾ ವಾಹನವನ್ನು ಯಾರೊ ಕಳವು ಮಾಡಿಕೊಂಡು ಹೋಗಿದ್ದು ಳುವಾದ ವಾಹನದ ಬಗ್ಗೆ ಎಲ್ಲಾ ಕಡೆ ಹುಡುಕಾಡಿದರೂ ಸಹ ಪತ್ತೆಯಾಗಿರುವದಿಲ್ಲಾ ಕಳುವಾದ ನನ್ನ ವಾಹನವನ್ನು ಪತ್ತೆ ಹಚ್ಚಿಕೊಡುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಆಳಂದ ಪೊಲೀಸ ಠಾಣೆ : ದಿನಾಂಕ 07/03/2014 ರಂದು ಶ್ರೀ ಸೂರ್ಯಕಾಂತ ತಂದೆ ಕಲ್ಯಾಣಿ ವಗ್ಗಾಲೆ ಉ: ಬಸ ನಿರ್ವಾಹಕ ಸಂ 101373 ಸಾ:ಮೋಘಾ (ಕೆ) ತಾ: ಆಳಂದ ರವರು ಆಳಂದ ಬಸ್ ನಿಲ್ಧಾಣದಲ್ಲಿ ಬಸ್ ಚಾಲಕ ರವೀಂದ್ರ ತಂದೆ ಅಮೃತರಾವ ರವರೊಂದಿಗೆ ಆಳಂದ ಬಸ್ ಘಟಕದ ಬಸ್ ನಂ ಕೆಎ 32 ಎಫ್ 1336 ನೇದರಲ್ಲಿ ಆಳಂದ ಬಸ್ ನಿಲ್ಧಾಣದಿಂದ ಬಾಲಖೇಡಕ್ಕೆ ಪ್ರಯಾಣಿಕರಿಗೆ ಕರೆದುಕೊಂಡು ಹೋಗುತ್ತಿರುವಾಗ ಬಂಗರಗಾ ಗ್ರಾಮದ 1) ಮಹೇಂದ್ರ ಸಿಂಗೆ 2) ಕಲ್ಯಾಣಿ ಸಿಂಗೆ ಇವರು ಕುಡಿದ ಅಮಲಿನಲ್ಲಿ ಬಸ್‌ ಒಳಗೆ ಬಂದು ನೀನು ನಮಗೆ ಹೇಳದೆ ಬಸ್ ಹೇಗೆ ಬಿಡುತ್ತಿ ಎನ್ನುತ್ತಾ ಬಸ್ನ ಚಾಲಕನ ಹಲ್ಲೆ ಮಾಡಿ, ಕೈಯಿಂದ ಹೊಡೆಬಡೆ ಮಾಡಿ ಎದೆಯ ಮೇಲಿನ ಅಂಗಿ ಹಿಡಿದು ಎಳೆದು  ಹರಿದು , ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.