POLICE BHAVAN KALABURAGI

POLICE BHAVAN KALABURAGI

27 February 2012

GULBARGA DIST REPORTED CRIMES

ಕಳ್ಳತನ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ :
ಶ್ರೀ ಕುಪ್ಪಣ್ಣಾ ತಂದೆ ರಾಯಪ್ಪಾ ಧನ್ನಾ ಸಾ:ಭಂಕೂರ ರವರು ನಾನು ದಿನಾಂಕ 26/02/12 ರಂದು ರಾತ್ರಿ 10-00 ಘಂಟೆಗೆ ನಮ್ಮ ಮನೆಗೆ ಬೀಗ್ ಹಾಕಿ ಪಕ್ಕದ ಕೋಣೆಗೆ ಮಲಗಿಕೊಂಡಾಗ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲ ಕೀಲಿ ಮುರಿದು ನಗದು ಹಣ 10,000/- ರೂ. ಬಂಗಾರ ಮತ್ತು ಬೆಳ್ಳಿಯ ಆಭರಣ ಹೀಗೆ ಒಟ್ಟು 46,400/- ರೂ ಬೆಲೆ ಬಾಳುವುದಗಳನ್ನು ಯಾರೋ ಕಳ್ಳರು ಕಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 20/2012 ಕಲಂ: 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಸುಲೆಪೇಟ ಪೊಲೀಸ್ ಠಾಣೆ :
ಶ್ರೀಮತಿ ಮಲ್ಲಮ್ಮ @ ಲಕ್ಷ್ಮೀಬಾಯಿ ಗಂಡ ಹುಸನಪ್ಪ ಅರ್ಗೆನೋರ ಸಾಃ ಜಟ್ಟೂರ ರವರು ನನಗೆ 15 ವರ್ಷಗಳ ಹಿಂದೆ ಹುಸನಪ್ಪ ತಂದೆ ಮಲ್ಲಪ್ಪ ಆರ್ಗೆನೋರ ಸಾಃ ಜಟ್ಟೂರ ಇತನೊಂದಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆಯಾಗಿ 3-4 ವರ್ಷಗಳ ನಂತರ ನನ್ನ ಗಂಡನಾದ ಹುಸನಪ್ಪನು ಆಗಾಗೆ ಜಗಳ ಮಾಡುತ್ತಾ ತವರು ಮನೆಯಿಂದ ಬಂಗಾರ ತೆಗೆದುಕೊಂಡು ಬಾ ಅಂತಾ ಹೊಡೆ ಬಡೆ ಮಾಡಿ ಮಾನಸೀಕ ಮತ್ತು ದೈಹಿಕ ಕಿರುಕುಳ ನೀಡುತ್ತಾ ಬಂದಿದ್ದು ನನ್ನ ತಾಯಿ ಮತ್ತು ಅಣ್ಣ ಇಬ್ಬರೂ ತನ್ನ ಗಂಡನಿಗೆ ಬುದ್ದಿವಾದ ಹೇಳಿದ್ದರು ದಿನಾಂಕಃ 27/02/2012 ರಂದು ಮುಂಜಾನೆ ಸುಮಾರಿಗೆ ನನ್ನ ಗಂಡನಾದ ಹುಸನಪ್ಪನು ಇತನು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ಕಡ್ಚಿಯಿಂದ ತಲೆಯ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಗೊಳಿಸಿ ಕೊಡಲಿ ಕಾವು ತೆಗೆದುಕೊಂಡು ಎಡಗೈ ಮೊಳಕೈಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 20/2012 ಕಲಂ. 498 [ಎ], 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ.

GULBARGA DIST REPORTED CRIMES

ಬಾವಿಯಲ್ಲಿ ಟ್ರಾಕ್ಟರ ನುಗ್ಗಿಸಿ ಮೃತನಾದ ಟ್ರಾಕ್ಟರ ಚಾಲಕ :

ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ: 26/02/2012 ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನನ್ನ ಗಂಡನಾದ ಶರಣಬಸಪ್ಪ ಧಲ್ಲು ಇತನು ಟ್ರ್ಯಾಕ್ಟರ ನಂ ಕೆಎ:32 ಟಿ:5922 23 ನೇದ್ದರಲ್ಲಿ ಮುರುಮ ಹೊಡೆಯಲು ಹೋಗಿದ್ದು, ಇಬ್ರಾಹಿಂಪೂರ ರೋಡಿಗೆ ಟ್ರ್ಯಾಕ್ಟರದಲ್ಲಿ ಮುರಮು ತುಂಬಿಕೊಂಡು ಹೋಗುತ್ತಿದ್ದಾಗ ನಮ್ಮ ಗ್ರಾಮದ ವರದ ಶಂಕರ ಇವರ ಹೊಲದಲ್ಲಿರುವ ಬಾವಿಯಲ್ಲಿ ಟ್ರ್ಯಾಕ್ಟರ ಸಮೇತ ನೀರಿನಲ್ಲಿ ಬಿದ್ದು ಟ್ರ್ಯಾಕ್ಟರ ಇವರ ಮೆಲೆ ಬಿದ್ದಿದ್ದರಿಂದ ಮೃತಪಟ್ಟಿರುತ್ತಾನೆ. ಶ್ರೀಮತಿ ಲಕ್ಷ್ಮೀಬಾಯಿ ಗಂಡ ಶರಣಬಸಪ್ಪಾ ಧಲ್ಲು ಸಾ:ಚಲಗೇರಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 6/2012 ಕಲಂ 279, 304(ಎ) ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕೊಲೆ ಪ್ರಯತ್ನ:

ಚೌಕ ಪೊಲೀಸ್ ಠಾಣೆ: ಶ್ರೀ ವಿಕ್ರಮ ತಂದೆ ಚಿತಂಬರಾಯ ಪಾಟೀಲ ಸಾ||ಮುದ್ದಡಗಾ ಹಾ||ವ||ಸರಾಫ ಬಜಾರ ಗುಲಬರ್ಗಾ ರವರು ನಾನು ಮತ್ತು ನನ್ನ ಗೆಳೆಯರಾದ ಕುಮಾರ, ಅಭೀಷೆಕ ಕೂಡಿಕೊಂಡು ಶಾಂತು ಅಗ್ಗಿ ರವರ ಕಾರಬಾಡಿಗೆಯಿಂದ ಪಡೆದುಕೊಂಡು ಅಬ್ಬೆತುಮಕೂರಿಗೆ ಹೋಗಿ ಮರಳಿ ಗುಲಬರ್ಗಾಕ್ಕೆ ಬಂದು, ಊಟ ಮಾಡಲು ಪಲ್ಲವಿ ಹೋಟೆಲಕ್ಕೆ ಹೋಗಿರುತ್ತೆವೆ. ಇನ್ನೂ ನನ್ನ ಗೆಳೆಯರಾದ ಯಶ್ವಂತ , ಜಗದೀಶ ರವರಿಗೆ ಊಟಕ್ಕೆ ಕರೆಯಿಸಿ ನಾನು ಹೊಟೇಲ ಮ್ಯಾನೇಜರ ಸಂಗಡ ಹೊಟೇಲ ಮುಂದೆ ಮಾತನಾಡುತ್ತ ಇದ್ದಾಗ ನಮ್ಮೂರ ಅನಿಲ ತಂದೆ ಹಣಮಂತ ಮತ್ತು ಅವನ ಗೆಳೆಯ ದತ್ತು ಪೂಜಾರಿ ಇವರು ಕೂಡಿ ಹೊಟೇಲಕ್ಕೆ ಬಂದು ನನ್ನನ್ನು ನೋಡಿ ಅವಾಚ್ಯವಾಗಿ ನಿಂದನೆ ಮಾಡಿ ಅನಿಲ ಇತನು ತನ್ನ ಹತ್ತಿರ ಇದ್ದ ಜಂಬ್ಯಾ ತೆಗೆದು ನನ್ನ ತಲೆಯ ಎಡಭಾಗಕ್ಕೆ, ಎಡಕಪಾಳಕ್ಕೆ ಹೊಡೆದು ಭಾರಿ ರಕ್ತಗಾಯ ಪಡಿಸಿ ಎಡಗೈ ಮುಂಗೈ ಮೇಲೆ ಹೊಡೆದು ರಕ್ತಗಾಯ ಪಡಿಸಿದನು, ನಾನು ಕುಸಿದು ಬಿದ್ದಾಗ ಓಡಿ ಹೋಗಿರುತ್ತಾರೆ. ನನ್ನ ಗೆಳೆಯರು ನನಗೆ ಆಸ್ಪತ್ರೆಗೆ ತೆಗೆದುಕೊಂಡು ಉಪಚಾರ ಕುರಿತು ಸೇರಿಕೆ ಮಾಡಿರುತ್ತಾರೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 26/2012 ಕಲಂ 504 307 ಸಂ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಮತಿ ಮಾಳು ಗಂಡ ಶಂಕರ ಪಾಟೀಲ ಸಾ: ಸುಂದರ ಗುಲಬರ್ಗಾ ರವರು ನಾನು ದಿನಾಂಕ 25-02-12 ರಂದು ರಾತ್ರಿ 20=00 ಗಂಟೆಯ ಸುಮಾರಿಗೆ ಆರ್.ಟಿ.ಓ.ಕ್ರಾಸ್ ದಿಂದ ಜಿ.ಜಿ.ಹೆಚ್.ಸರ್ಕಲ್ ಮೇನ ರೋಡಿನಲ್ಲಿ ಬರುವ ಗುಮ್ಮಜ ಹತ್ತಿರದ ಸುಂದರ ನಗರ ರೋಡ ಮೇಲೆ ಹೊರಟಾಗ ಮೋಟಾರ ಸೈಕಲ್ ನಂ:ಕೆಎ 32 ವಾಯ-3074 ನೆದ್ದರ ಚಾಲಕ ಬಾಪು ನಗರ ಸುಂದರ ನಗರ ರೋಡ ಕಡೆಯಿಂದ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಭಾರಿಗಾಯ ಗೊಳಿಸಿ ಮೋಟಾರ ಸೈಕಲ್ ಸಮೇತ ಹೋರಟು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 28/2012 ಕಲಂ 279, 338, ಐಪಿಸಿ ಸಂಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.