POLICE BHAVAN KALABURAGI

POLICE BHAVAN KALABURAGI

16 September 2014

Gulbarga District Reported Crimes

ದರೋಡೆ ಮಾಡಲು ಹೊಂಚು ಹಾಕಿ ಕುಳಿತಿರುವವರನ್ನು  ಬಂಧಿಸಿ ಮಾರಕಾಸ್ತ್ರಗಳ ವಶ :
ಅಫಜಲಪೂರ ಠಾಣೆ : ದಿನಾಂಕ 16-09-2014 ರಂದು ಪಿ.ಎಸ್.. ಅಫಜಲಪೂರ ಹಾಗು ಸಿಬ್ಬಂದಿಯವರಾದ ಶ್ರೀ ಜಗನ್ನಾಥ ಪಿಸಿ-530, ಶ್ರೀ ಆನಂದ ಪಿಸಿ-1258, ಶ್ರೀ ಚಂದ್ರಶಾ ಪಿಸಿ-903, ಶ್ರೀ ನಾಗರಾಜ ಪಿಸಿ-816, ಶ್ರೀ ಸುರೇಶ ಪಿಸಿ-801, ಶ್ರೀ ಚಿದಾನಂದ ಪಿಸಿ-1225, ಶ್ರೀ ನಿಂಗಣ್ಣ ಪಿಸಿ-894, ಶ್ರೀ ತಸ್ಲೀಮ್ ಪಿಸಿ-775 ರವರನ್ನು ಸಂಗಡ ಕರೆದುಕೊಂಡು ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿ ಇದ್ದಾಗ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಅಫಜಲಪೂರ-ಕರಜಗಿ ರೋಡಿಗೆ ಇರುವ ಡಿಗ್ಗಿ ಕ್ರಾಸ ಹತ್ತಿರ 5-6 ಜನರು ಡಕಾಯಿತಿ ಮಾಡಲು ಹೊಂಚುಹಾಕಿ ಕುಳಿತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಂಚರೊಂದಿಗೆ ಮಾನ್ಯ ಸಿ.ಪಿ. ಸಾಹೇಬರಾದ ಶ್ರೀ ಪಿ.ವ್ಹಿ.ಸಾಲಿಮಠ ಸಾಹೇಬರ ಮಾರ್ಗದರ್ಶನದಂತೆ ಸ್ಥಳಕ್ಕೆ ಹೋಗಿ ಡಿಗ್ಗಿ ಕ್ರಾಸ ಹತ್ತಿರ ಸುಮಾರು 4-5 ಜನರು ಇದ್ದು, ಅದರಲ್ಲಿ 2 ಜನರು ರೊಡಿನ ಆಚೆಗೆ ಒಬ್ಬ ಮತ್ತು ಇಚೇಗೆ ಒಬ್ಬ ನಿಂತುಕೊಂಡು ಹಗ್ಗವನ್ನು ರೋಡಿಗೆ ಅಡ್ಡಲಾಗಿ ಹಿಡಿದುಕೊಂಡಿದ್ದರು. ಇನ್ನೂ 3 ಜನರು ಅಲ್ಲೆ ಇರುವ ಒಂದು ಗಿಡದ ಮರೆಯಲ್ಲಿ ಆಯುಧಗಳನ್ನು ಹಿಡಿದುಕೊಂಡು ನಿಂತಿದ್ದರು, ಆಗ ನಾವು ನಮ್ಮ ವಾಹನವನ್ನು ನಿಲ್ಲಿಸಿ, ವಾಹನದಿಂದ ಕೆಳಗೆ ಇಳಿಯುವಾಗ ಸಮವಸ್ತ್ರದಲ್ಲಿ ಇದ್ದ ನಮ್ಮನ್ನು ನೋಡಿ ಎಲ್ಲರೂ ಓಡಹತ್ತಿದರು, ಆಗ ನಾನು ಮತ್ತು ನಮ್ಮ ಸಿಬ್ಬಂದಿಯವರು ಪಂಚರ ಸಮಕ್ಷಮ ಬೆನ್ನು ಹತ್ತಿದಾಗ 04 ಜನರು ಸಿಕ್ಕಿದ್ದು, ಒಬ್ಬನು ನಮ್ಮಿಂದ ತಪ್ಪಿಸಿಕೊಂಡು ಓಡಿ ಹೋದನು, ಸಿಕ್ಕ 4 ಜನರ ಹೆಸರು ವಿಳಾಸ ವಿಚಾರಿಸಲಾಗಿ ಅವರು ತಡವರಿಸುತ್ತಾ 1) ಗಿರೀಶ ತಂದೆ ಶಿವಾನಂದ ಸಾಸನೇಕರ ಸಾ|| ರೇವಣಸಿದ್ದೇಶ್ವರ ಕಾಲೋನಿ ಅಫಜಲಪೂರ 2) ಪ್ರಕಾಶ ತಂದೆ ಕುಪ್ಪಣ್ಣ ಭೂತಿ ಸಾ|| ರೇವಣಸಿದ್ದೇಶ್ವರ ಕಾಲೋನಿ ಅಫಜಲಪೂರ 3) ಶರಣಯ್ಯ ತಂದೆ ಪಾಲಯ್ಯಸ್ವಾಮಿ ಮಠಪತಿ ಸಾ|| ಬಸವೇಶ್ವರ ಕಾಲೋನಿ ಅಫಜಲಪೂರ 4) ಶರಣಪ್ಪ ತಂದೆ ಬಸಣ್ಣ ನಿಂಬರ್ಗಿ ಸಾ|| ಗೌರ (ಬಿ) ಗ್ರಾಮ ಅಂತಾ ತಿಳಿಸಿದರು, ಓಡಿ ಹೋದವನ ಹೆಸರು ವಿಳಾಸ ವಿಚಾರಿಸಲು ಪ್ರಬು ಜಮಾದಾರ ಸಾ|| ದುದ್ದಣಗಿ ಅಂತಾ ತಿಳಿಸಿದ್ದು, ಸದರಿಯವರ ಅಂಗ ಶೋಧನೆ ಮಾಡಲಾಗಿ ಗಿರೀಶ ಸಾಸನೇಕರ ಈತನ ಹತ್ತಿರ ಒಂದು ನಾಡ ಪಿಸ್ತೂಲು ಮತ್ತು ಒಂದು ಬಟನ್ ಚಾಕು ದೊರೆತಿದ್ದು, ಪ್ರಕಾಶ ಭೂತಿ ಈತನ ಹತ್ತಿರ ಒಂದು ನಾಡ ಪಿಸ್ತೂಲು, ಶರಣಯ್ಯ ಮಠಪತಿ ಈತನ ಹತ್ತಿರ ಒಂದು ತಲವಾರ ಮತ್ತು ಒಂದು ಪ್ಲಾಸ್ಟಿಕ ಚೀಲದಲ್ಲಿರುವ ಖಾರದ ಪುಡಿ ದೊರೆತಿದ್ದು. ಶರಣಪ್ಪ ನಿಂಬರ್ಗಿ ಈತನ ಹತ್ತಿರ ಒಂದು ನಾಡ ಪಿಸ್ತೂಲು ಮತ್ತು 18 ಜಿವಂತ ಗುಂಡುಗಳು ದೊರೆತವು, ಸದರಿಯವರಿಗೆ ತಮ್ಮ ಬಳಿ ಇದ್ದ ಪಿಸ್ತೂಲಗಳ ಪರವಾನಿಗೆ ಬಗ್ಗೆ ವಿಚಾರಿಸಲಾಗಿ, ಸದರಿಯವರು ತಡವರಿಸುತ್ತಾ ಇವು ನಾಡ ಪಿಸ್ತೂಲ ಇದ್ದು, ಯಾವುದೆ ಪರವಾನಿಗೆ ಇಲ್ಲ ಅಂತಾ ತಿಳಿಸಿದರು, ಸದರಿಯವರು ಹೊಂಚುಹಾಕಿ ಕುಳಿತುಕೊಂಡು ರೋಡಿಗೆ ಹೋಗಿ ಬರುವ ವಾಹನಗಳನ್ನು ಅಡ್ಡಗಟ್ಟಿ ನಿಲ್ಲಿಸಿ. ವಾಹನದಲ್ಲಿ ಓಡಾಡುವ ಜನರ ಹತ್ತಿರ ಇರುವ ಹಣ ಒಡವೆಗಳನ್ನು ಕಿತ್ತುಕೊಂಡು ದರೋಡೆ ಮಾಡಲು ಹೊಂಚುಹಾಕಿ ಕಾಯುತ್ತಿರುವುದು ಖಚಿತವಾಗಿದ್ದು ಇರುತ್ತದೆ. ಸದರಿಯವರ ಹತ್ತಿರ ದೊರೆತ 1) ಒಟ್ಟು 03 (ಮೂರು) ನಾಡ ಪಿಸ್ತೂಲುಗಳನ್ನು ಅಕಿ-30,000 ರೂ 2) 18 ಜಿವಂತ ಗುಂಡುಗಳನ್ನು ಅಕಿ-1800/- ರೂ 3) ಒಂದು ಉದ್ದನೇಯ ತಲವಾರ ಅಕಿ - 500/-ರೂ 4) ಪ್ಲಾಸ್ಟಿಕ ಚೀಲದಲ್ಲಿರುವ ಖಾರದ ಪುಡಿಯನ್ನು ಅಕಿ-00-00 5) ವಾಹನವನ್ನು ನಿಲ್ಲಿಸಲು ತಂದಿದ್ದ ಸ್ಥಳದಲ್ಲಿಯೆ ಬಿದ್ದಿದ್ದ ಒಂದು ಅಂದಾಜು 20 ಪೀಟ ಉದ್ದವಾದ ನೂಲಿನ ಹಗ್ಗವನ್ನು ಅಕಿ- 50/- ರೂ 6) ಒಂದು ಬಟನ್ ಚಾಕು ಅಕಿ- 500/- ರೂ ಇವುಗಳನ್ನು ಸದರಿ ಆರೋಪಿತರಿಂದ ಜಪ್ತಿ ಮಾಡಿಕೊಂಡು ಆರೋಪಿತರೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಅಯ್ಯಣ್ಣ ತಂದೆ ಶರಣಪ್ಪ ತಾಳಿಕೊಟಿ ಸಾ: ಬಿಳವಾರ ಇವರು ದಿ: 15-9-2014 ರಂದು ರಾತ್ರಿ ನಮ್ಮ ತಂದೆ ಶರಣಪ್ಪ ತಾಳಿಕೊಟ್ಟಿ ಇವರು ಜೇವರಗಿ ಬಸ್ ನಿಲ್ದಾಣದಿಂದ ಜೇವರಗಿ ಬಸ್ ಡಿಪೋ ವರೆಗೆ ಕೆ.ಎಸ್.ಆರ್.ಟಿ ಬಸ್ ನಂ ಕೆ.ಎ-35-ಎಫ್-128 ನೇದ್ದರ ಚಾಲಕ ಶಿವಕುಮಾರ ಇತನು ನಡೆಯಿಸುವ ಬಸ್ಸಿನ ಬಾಗಿಲದಲ್ಲಿ ನಿಂತು ಹೋಗುವಾಗ ರಾತ್ರಿ 8-45 ಗಂಟೆಗೆ ಜೇವರಗಿ ಪಟ್ಟಣದ ರಿಲಾಯನ್ಸ್ ಪೆಟ್ರೋಲ ಪಂಪ ಎದರು ರೊಡಿನಲ್ಲಿ  ಬಸ್ಸಿನ ಚಾಲಕನು ಬಸ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ಒಮ್ಮಲೆ ಕಟ್ ಹೊಡೆದ ಪ್ರಯುಕ್ತ ನಮ್ಮ ತಂದೆ ಶರಣಪ್ಪ ತಾಳಿಕೊಟಿ ಇವರು ಬಸ್ಸಿನಿಂದ ರೋಡಿನ ಕೆಳಗೆ ಬಿದ್ದು ತಲೆಗೆ ಭಾರಿ ರಕ್ತ ಗಾಯವಾಗಿದ್ದು ಅವನಿಗೆ ರಾತ್ರಿಯೇ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾದ ಸರಕಾರಿ ಆಸ್ಪತ್ರೆಗೆ ತಗೆದುಕೊಂಡು ಹೋಗುತ್ತಿದ್ದಾಗ, ರಾತ್ರಿಯೇ 11-15 ಗಂಟೆಗೆ ಸದರ ಆಸ್ಪತ್ರೆ ಅವರಣದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಅಪಹರಣ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಲಲಿತಾಬಾಯಿ ಗಂಡ ಜಗದೀಶ ಚವ್ಹಾಣ ಸಾ:ವಿಶಾಲ ನಗರ 6ನೇ ಕ್ರಾಸ ತಾರಫೈಲ್ ಗುಲಬರ್ಗಾ. ಇವರ ಮಗಳಾದ ಸಂಧ್ಯಾರಾಣಿ ವಯಾ:16 ವರ್ಷ ಇವಳು ಕಾಲೇಜಿನಲ್ಲಿ ಓದುತ್ತಿದ್ದು ಇತ್ತೀಚೆಗೆ ನಮ್ಮ ಓಣಿಯ ಅಜಯ ಇತನು ನನ್ನ ಮಗಳಿಗೆ ಕಾಲೇಜಿಗೆ ಹೋಗುವಾಗ ಬರುವಾಗ ನನಗೆ ಮದುವೆಯಾಗು ಅಂತಾ ಒತ್ತಾಯ ಮಾಡಿದ್ದು, ನಾನು ಇಂದಿಲ್ಲ ನಾಳೆ ಸರಿ ಹೋಗಬಹುದು ಅಂತಾ ಸುಮ್ಮನಿದ್ದೆ ಆದರೆ ಬರುಬರುತ್ತಾ ಅಜಯ ಕಾಟ ಹೆಚ್ಚಾಗ ತೊಡಗಿತು ನಿನ್ನನ್ನು ಅಪಹರಿಸಿಕೊಂಡು ಹೋಗಿ ಅತ್ಯಾಚಾರ ಮಾಡುತ್ತೇನೆ ಅಂತಾ ನನ್ನ ಮಗಳಿಗೆ ಸುಮಾರು ಸಲ ಜೀವ ಭಯ ಹಾಕಿದ್ದು, ಇರುತ್ತದೆ. ದಿನಾಂಕ 08-09-2014 ರಂದು ಮಧ್ಯಾಹ್ನ 1-30 ಗಂಟೆ ಸುಮಾರಿಗೆ ಅಜಯ ಇತನು ನನ್ನ ಮಗಳನ್ನು ಅಪಹರಿಸಿಕೊಂಡು ಹೋಗಿರುವ ಬಗ್ಗೆ ನನಗೆ ಮನವರಿಕೆಯಾಗಿರುತ್ತದೆ. ನಾವು ಒಂದು ವಾರದಿಂದ ಎಲ್ಲಾ ಕಡೆ ಹುಡುಕಾಡಿ ವಿಚಾರಿಸಿದರೂ ಯಾವುದೇ ಸುಳಿವು ಸಿಕ್ಕಿರುವುದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಬಸವರಾಜ ತಂದೆ ಭೀಮಶಾ ವಗ್ಗೆಗೋಳ ಸಾ: ಶ್ರೀನಿವಾಸ ಸರಡಗಿ ಇವರು  ದಿನಾಂಕ 14-09-2014 ರಂದು ನಿಂಬರ್ಗಾದಲ್ಲಿ ನಭೀಸಾಬ ತಂದೆ ಪಕೀರಸಾಬ ಜಮಾದಾರ ಸಾ: ಶ್ರೀನಿವಾಸ ಸರಡಗಿ ಇವರ ಸಂಬಂಧಿಕರ ಮದುವೆ ಮುಗಿಸಿಕೊಂಡು ಫೀರ್ಯಾದಿಯ ಟಂ-ಟಂ ನಂ ಕೆಎ-32-ಎ- 1293 ನೇದ್ದರಲ್ಲಿ ಮರಳಿ ಊರಿಗೆ ಹೋಗುವಾಗ ನಿಲೂರ ಕ್ರಾಸ್ ಹತ್ತಿರ ಸ್ಟೇಶನ್ ಗಾಣಗಾಪೂರದಿಂದ ಪಟ್ಟಣ್ಣದ ಕಡೆಗೆ ಹೋಗುವ ಮುಖ್ಯ ಡಾಂಬರ ರಸ್ತೆಯ ಮೇಲೆ ಮಧ್ಯಾಹ್ನ  04:00 ಗಂಟೆ ಸುಮಾರಿಗೆ ಎದುರಿನಿಂದ ಟಂ-ಟಂ ನಂ ಕೆಎ-32-ಎ-7669 ನೇದ್ದರ ಚಾಲಕನು ತನ್ನ ಟಂ-ಟಂ ನ್ನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಎದುರಿನಿಂದ ಡಿಕ್ಕಿ ಹೊಡೆಸಿ ಟಂ-ಟಂ ನಿಂದ ಕೇಳಗೆ ಇಳಿದು ಓಡಿ ಹೋಗಿರುತ್ತಾನೆ ಟಂ-ಟಂ ನಂ ಕೆಎ-32-ಎ- 1293 ನಡೆಸುತ್ತಿದ್ದ ಫೀರ್ಯಾದಿಗೆ ಹಾಗೂ ಅದರಲ್ಲಿದ್ದ ನಭೀಸಾಬ ಜಮಾದಾರ ಮತ್ತು ಆತನ ಸಂಬಂಧಿಕರಿಗೆ ಅಪಘಾತದಲ್ಲಿ ಗಂಭೀರ, ರಕ್ತಗಾಯ, ಗುಪ್ತಗಾಯ ವಾಗಿದ್ದು ಅಲ್ಲದೇ ಟಂ-ಟಂ ನಂ ಕೆಎ-32-ಎ-7669 ನೇದ್ದರಲ್ಲಿ ಚಾಲಕನ ಪಕ್ಕದ  ಶೀಟಿನಿಲ್ಲಿ ಕುಳಿತಿರುವ ರಾಹುಲ್ ಸಾ: ಸ್ಟೇಶನ ಗಾಣಗಾಪೂರ ಇವನಿಗೂ ಕೂಡಾ ಗಂಭೀರ ರಕ್ತಗಾಯ ಮತ್ತು ಗುಪ್ತಗಾಯ ವಾಗಿರುತ್ತವೆ  ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ  ಗುಲಾಮ್ ದಸ್ತಗಿರಿ ತಂದೆ ಸೈಫನ್ ಸಾಬ್ ಸಾ/ ರಹಿಮತ್ ನಗರ ಹಳೇ ಜೇವರ್ಗಿ ರೋಡ್ ಗುಲಬರ್ಗಾ ಇವರು ದಿನಾಂಕಃ 14/09/2014 ರಂದು ಮದ್ಯಾಹ್ನ 12.00 ಗಂಟೆಯ ಸುಮಾರಿಗೆ ನನ್ನ ಮಗಳಾದ ಸಾನಿಯಾ ಬೇಗಂ ಇವಳಿಗೆ ಹಲ್ಲು ನೋವಾಗುತ್ತಿದ್ದರಿಂದ ಮಹ್ಮದ್ ರಫೀ ಚೌಕ್ ರಿಂಗ್ ರೋಡ್ ಹತ್ತಿರವಿರುವ ಡಾ/ ಕರ್ನುಲ್ ದವಾಖಾನೆಗೆ ನಮ್ಮ ಟಿವಿಎಸ್ ಎಕ್ಸ್ಎಲ್ ಮೊಟಾರ್ ಸೈಕಲ್ ನಂ. ಕೆಎ.32 ಇಇ-6367 ನೇದ್ದರ ಮೇಲೆ ನಾನು ನನ್ನ ಗಂಡ ಗುಲಾಮ್ ದಸ್ತಗಿರಿ, ಮಗಳಾದ ಸಾನಿಯಾ ಬೇಗಂ ಎಲ್ಲರು ಹೋಗಿ ಚಿಕಿತ್ಸೆ ಪಡೆದುಕೊಂಡು ಮರಳಿ ಮೋ/ಸೈಕಲ್ ಮೇಲೆ ಮನೆಗೆ ಬರುತ್ತಿರುವಾಗ ಬಾರಾ ಹಿಲ್ಸ್ ಹತ್ತಿರವಿರುವ ರೋಡಿನ ಮೇಲೆ, ಟಿವಿಎಸ್ ಮೋ/ಸೈಕಲ್ ನಂ. ಕೆಎ.32 ಇಇ-6367 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿದ್ದರಿಂದ ಸ್ಕಿಡ್ ಆಗಿ ಬಿದ್ದಿದ್ದು, ನನಗೆ ಮತ್ತು ನನ್ನ ಮಗಳಿಗೆ ಅಷ್ಟೇನು ಪೆಟ್ಟಾಗಿರುವುದಿಕಲ್ಲ, ನನ್ನ ಗಂಡನಿಗೆ ಬಲಗಡೆ ಮೆಲಕಿನ ಹತ್ತಿರ ತೆರಚಿದ ಗಾಯ, ಬಲಕಿವಿಯಿಂದ ರಕ್ತ ಸೋರುತ್ತಿತ್ತು, ಎರಡೂ ಕೈಗಳ ಮುಂಗೈಗಳಿಗೆ ತೆರಚಿದ ಗಾಯಗಳಾಗಿ ಬೇಹೋಷ್ ಆಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣಗಳು :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ದಿನಾಂಕಃ 14/09/2014 ರಂದು 8:30 ಪಿ.ಎಂ. ಸುಮಾರಿಗೆ ಹನ್ನು ತಂದೆ ಘನಿ, ಇಮ್ರಾನ್, ಆಖ್ರಿಬ್ ಹಾಗು ಇತರ 10-12 ಜನ ಸೇರಿ, ಫಿರ್ಯಾದಿ ಮನೆಗೆ ಬಂದು, ತಡೆದು ನಿಲ್ಲಿಸಿ, ಫಿರ್ಯಾದಿದಾರರಿಗೆ ಅಬೇ ರಾಂಡ್ಕೆ ಹಮಾರಿ ಬೆಹನ್ ಫೌಜಿಯಾಕೋ ಸೋನಾ ಲಿಯಾ ಕ್ಯಾ ಬೋಲ್ಕೋ ತೂ ಕೈಸಾ ಪೂಚಾ ಚಿನಾಲಕೆ ಅಂತಾ ಅವಾಚ್ಯ  ಶಬ್ದಗಳಿಂದ ಬೈದು, ಕೈಯಿಂದ ಮತ್ತು ಕಾಲುಗಳಿಂದ ಮನಸಿಗೆ ಬಂದ ಹಾಗೇ ಹೊಡೆ-ಬಡೆ ಮಾಡಿದ್ದು, ನನದನ ಹಣೆಯ ಎಡಭಾಗಕ್ಕೆ ಪಕ್ಕೆಲುಬು ಮತ್ತು ಹೊಟ್ಟೆಗೆ ಭಾರೀ ಗುಪ್ತಗಾಯಗಳಾಗಿರುತ್ತವೆ. ಮತ್ತು ಇವತ್ತು ನಿನಗೆ ಏನೂ ಆಗಿಲ್ಲ ಮುಂದೆ ನಿನ್ನನ್ನು ಜೀವ ಸಹಿತ ಉಳಿಸುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಶ್ರೀ ಮನೋಹರ ತಂದೆ ಶಿವಲಿಂಗಪ್ಪ ವಠಾರ ಸಾ: ತೋಟ್ನಳ್ಳಿ ತಾ: ಸೇಡಂ ಇವರು ದಿನಾಂಕ: 13-09-2014 ರಂದು 05:00 ಗಂಟೆಗೆ ಫೀರ್ಯಾದಿಯು ತನ್ನ ಹೊಲದಿಂದ ಮನೆಗೆ ಬರುವಾಗ ಹೊಲ ಸರ್ವೆ ನಂ 15/8 ಸಮೀಪ ಚಂದ್ರಕಾಂತ ತಂದೆ ಪೀರಪ್ಪ ನಂದಿಕೂರ ಸಾ: ತೊಟ್ನಳ್ಳಿ ಇತನು ಹಿಂದಿನಿಂದ ಬಂದವನೆ ಬೋಸಡಿ ಮನಗೆ ನಿನ್ನ ಸೊಕ್ಕು ಬಂದಿದೆ ಇವತ್ತು ನಿನಗೆ ಜೀವ ತೆಗೆದು ಬಿಡುವುದಿಲ್ಲಾ  ಎಂದು ಅವನ ಕೈಯಲ್ಲಿದ್ದ ಕುಡುಗೋಲಿನಿಂದ ನನ್ನ ಹೆಡಕಿನ ಮೇಲೆ ಹೊಡೆಯುದನ್ನು ನೋಡಿ ಅವನ ಹೆಂಡತಿ ಶ್ರೀಮತಿ ನಿರ್ಮಲಮ್ಮ ಅವನ ಕೈಯಿಂದ ಕುಡಗೋಲ ಕಸಿದು ಕೊಂಡಳು ಆಗ ಅಲ್ಲೆ ಇದ್ದ ಸಾಯಬಣ್ಣಾ ತಂದೆ ಪುತ್ರಪ್ಪ ಹಾಬಾಳ ಸಾ: ತೊಟ್ನಳ್ಳಿ, ಇತನು ಹೊಡೆಯುವದನ್ನು ನೋಡಿ ಬಿಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ ಭೈರುಸಿಂಗ್ ತಂದೆ ಪುರಾಣಸಿಂಗ್ ಸೂಲಂಕಿ ಸಾಃ ತಿಲಕ ನಗರ ಗುಲಬರ್ಗಾ ಇವರು ದಿನಾಂಕಃ 15/09/2014 ರಂದು ನನ್ನ ಅಂಗಡಿಗೆ ಬಂದು ನೋಡಲು ಸುರಕ್ಷಿತವಾಗಿದ್ದು ನಂತರ ಅಲ್ಲಿಂದ ನಾನು ನನ್ನ ತಮ್ಮನಿಗೆ ಕರೆದುಕೊಂಡು ಬರಲು ರೈಲ್ವೆ ಸ್ಟೇಷನಕ್ಕೆ ಹೋಗಿ ನನ್ನ ತಮ್ಮನಿಗೆ ಕರೆದುಕೊಂಡು 05:30 ಎ.ಎಂ ಸುಮಾರಿಗೆ ಅಂಗಡಿಗೆ ಬಂದು ನೋಡಲು ಅಂಗಡಿಯಲ್ಲಿದ್ದ ಲೈಟ ಇರಲಿಲ್ಲಾ ಶಟರ ಎರಡು ಕಡೆಯಿಂದ ಬೆಂಡ್ ಮಾಡಿದ್ದು ನಾನು ಮತ್ತು ನನ್ನ ತಮ್ಮ ಇಬ್ಬರೂ ಒಳಗಡೆ ಹೋಗಿ ಚೆಕ್ ಮಾಡಿ ನೋಡಲಾಗಿ ಅಂಗಡಿಯಲ್ಲಿದ್ದ ಹಾರ್ಡವೇರ್ ಸಾಮಾನುಗಳು ಹೀಗೆ ಒಟ್ಟು ಅಃಕಿಃ 23,000/- ರೂ. ಬೆಲೆ ಬಾಳುವುದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.