POLICE BHAVAN KALABURAGI

POLICE BHAVAN KALABURAGI

31 March 2014

Gulbarga District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ದೇವಲ ಗಾಣಗಾಪೂರ ಠಾಣೆ : ದಿನಾಂಕ:30-04-2014 ರಂದು ಚವಡಾಪುರ ಗ್ರಾಮದ ಲಕ್ಷ್ಮೀ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದಾರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ಮತ್ತು ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್ರ.ಐ. ಗಾಣಗಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲಾಗಿ  1. ಬಸವಂತರಾಯ ತಂದೆ ಸಿದ್ದಪ್ಪ ಗೋಪಣೆ  2. ಶ್ರೀಕಾಂತ ತಂದೆ ಯಲ್ಲಪ್ಪ ಆಲಕುಂಟೆ  3. ಶಿವಾನಂದ ತಂದೆ ಶಂಕರ ಬನಪಟ್ಟಿ 4. ಬೀಮಾಶಂಕರ ತಂದೆ ಬಾಬು ಆಲಕುಂಟೆ 5. ನಾಗೇಶ ತಂದೆ ಬಸವರಾಜ ಇಟಕಲ್   ಸಾ||ಎಲ್ಲರೂ ಚವಡಾಪೂರ  ರವರನ್ನು ಹಿಡಿದು ಸದರಿಯವರಿಂದ  ಒಟ್ಟು 3040=00 ರೂ ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತಿಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ದೇವಲ ಗಾಣಗಾಪೂರ ಠಾಣೆ : ದಿನಾಂಕ:30-04-2014 ರಂದು ಚಿನಮಳ್ಳಿ ಗ್ರಾಮದ ಪ್ರಾಥಮಿಕ ಶಾಲೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ ಎಲೆಗಳ ಸಹಾಯದಿಂದ ಅಂದಾರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಆಳಂದ ಮತ್ತು ಸಿಪಿಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್ರ.ಐ. ಗಾಣಗಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲಾಗಿ 1. ಸಂಗಪ್ಪ ತಂದೆ ಶೇಖಪ್ಪ ತಳವಾರ  2.ಗುರಣ್ಣ ತಂದೆ ಅಮೋಘಿ ಪೂಜಾರಿ 3.ರಾಜಶೇಖರ ತಂದೆ ಗುರುಶಾಂತ ಕೌದಿವ: 4.ಮಲ್ಕಪ್ಪ ತಂದೆ ಸೋಮರಾಯ ಮಾಂಗ ಸಾ|| ಎಲ್ಲರೂ ಚಿನಮಳ್ಳಿ  ರವರನ್ನು ಹಿಡಿದು ಸದರಿಯವರಿಂದ  ಒಟ್ಟು 2190-00 ರೂ ಮತ್ತು 52 ಇಸ್ಪೇಟ ಎಲೆಗಳುನ್ನು ಜಪ್ತಿಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಕಳವು ಪ್ರಕರಣ :
ಆಳಂದ ಠಾಣೆ : ದಿನಾಂಕ 29-03-2014 ರಂದು ರಾತ್ರಿ ಸಮಯದಲ್ಲಿ  ಯಾರೋ ಕಳ್ಳರು ಶ್ರೀ ಮಾರ್ಕಂಡೇಯ ದೇವಸ್ಥಾನದ ದಾನ ಪೆಟ್ಟಿಗೆ & ಶ್ರೀ ಗಣೇಶ ದೇವರ ದಾನ ಪೆಟ್ಟಿಗೆ ಒಡೆದು ಅದರಲ್ಲಿದ್ದ ಅಂದಾಜು 3000 ರೂಪಾಯಿ ಹಾಗೂ ಏಕಾಂತ ರಾಮಯ್ಯಾ ದೇವರ ದಾನಪೆಟ್ಟಿಗೆ ಒಡೆದು ಅದರಲ್ಲಿದ್ದ ಅಂದಾಜು 5000 ರೂಪಾಯಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಭಾರತ ತಂದೆ ಲೋಕಪ್ಪಾ ಸಂಗಾ ತನ ಸಾ|| ಚಕ್ರಿಕಟ್ಟಾ ಹತ್ತಿರ ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಕನಿರಾಮ ತಂದೆ ದೇವಲಾ ಚವ್ಹಾಣ  ಸಾ:ಗೋಗಿ(ಕೆ) ತಾಂಡಾ ತಾ:ಜಿ: ಗುಲಬರ್ಗಾ ರವರು ದಿನಾಂಕ; 29-03-14 ರಂದು ರಾತ್ರಿ 7-00 ಗಂಟೆ ಸುಮಾರಿಗೆ ನಾನು ಹೊಲದಿಂದ ಬಂದು ನಮ್ಮಮನೆಯ ಮುಂದಿನ ಕಟ್ಟೆಯ ಮೇಲೆ ಊಟ ಮಾಡುತ್ತಾ ಕುಳಿತುಕೊಂಡಾಗ ನಮ್ಮ ತಾಂಡಾದ 1) ಉಮಲಾಬಾಯಿ ಗಂಡ ಮನ್ನು ರಾಠೋಡ 2) ಮನ್ನು ತಂದೆ ಪುರು ರಾಠೋಡ 3) ಜೈರಾಮ ತಂದೆಮನ್ನು ರಾಠೋಡ 4) ಮಾರುತಿ ತಂದೆ ಮನ್ನು ರಾಠೋಡ 5) ವೆಂಕಟ ತಂದೆ ಚಂದ್ರು ಚವ್ಹಾಣ ಎಲ್ಲರೂ ಕೂಡಿಕೊಂಡು ಬಂದವರೇ ನಮ್ಮ ಮನೆಯ ಮುಂದಿನ ರಸ್ತೆಯಲ್ಲಿ ನಿಂತುಕೊಂಡು ನಮ್ಮ ಲಂಬಾಣಿ ಭಾಷೆಯಲ್ಲಿ ನಮ್ಮ ಮನೆಯ ಮುಂದಿನ ಕಸ ರಸ್ತೆಯಲ್ಲಿ ಹಾಕಿದರೆ. ತಕರಾರು ಮಾಡುತ್ತಿ ಅಂತಾಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಅಲ್ಲಿಗೆ ಹೋಗಿ ಯಾಕೆ ನನಗೆ ಬೈಯುತ್ತಿದ್ದಿರಿ, ನಿಮ್ಮ ಮನೆಯ ಕಸವನ್ನು ನಿಮ್ಮ ಮನೆಯ ಮುಂದೆ ಹಾಕಿಕೊಳ್ಳಿರಿ ನಮ್ಮ ಮನೆಯ ಮುಂದೆ ತಂದು ಯಾಕೆ ಹಾಕುತ್ತಿದ್ದಿರಿ. ಅಂತಾ ಹೇಳಿ ಮರಳಿ ನನ್ನ ಮನೆ ಕಡೆಗೆ ಹೋಗುತ್ತಿರುವಾಗ ಎಲ್ಲರು ಕುಡಿಕೊಂಡು ಹೊಡೆಬಡೆ ಮಾಡಿ ಬಡಿಗೆಯಿಂದ ಕಲ್ಲಿನಿಂದ ಹೊಡೆದು ರಕ್ತಗಾಯ ಗುಪ್ತಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಜಯಕುಮಾರ ತಂದೆ ಮಲ್ಲಿಕಾರ್ಜುನ ಮಡಕಿ ಸಾ: ಕುರಿಕೋಟಾ  ರವರು ದಿನಾಂಕ 29-03-14 ರಂದು 10-25 ಗಂಟೆ ಸುಮಾರಿಗೆ  ರಾತ್ರಿ ಮೋಟಾರ ಸೈಕಲ ನಂ ಕೆಎ 28 ಎಸ್ 7890 ನೇದ್ದರ ಹಿಂದೆ ತನ್ನ ಗೆಳೆಯ ಅಶೋಕ ಕೂಡಿಸಿಕೊಂಡು ಮಾಹಾಗಾಂವ ಕ್ರಾಸದಲ್ಲಿದ್ದ ದೋಸ್ತಿ ದಾಬಾದಲ್ಲಿ ಊಟ ಮಾಡಿ ಮನೆ ಕಡೆ ರೋಡ ಎಡ ಬದಿಯಿಂದ ಹೊರಟಾಗ ಹಿಂದಿನಿಂದ ಯಾವುದೋ ವಾಹನ ಚಾಲಕ ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ನನ್ನ  ಮೋಟಾರ ಸೈಕಲಿಗೆ ಡಿಕ್ಕಿ ಹೊಡೆದು ಹಾಗೇ ಓಡಿಸಿಕೊಂಡು ಹೋಗಿದ್ದು, ಇದರಿಂದಾಗಿ ನನಗೆ ಮತ್ತು ಅಶೋಕ ಇಬ್ಬರಿಗೂ ಬಲಗಾಲ ಮೊಳಕಾಲ ಕೆಳೆಗೆ ಕಾಲು ಮುರಿದಿದ್ದಲ್ಲದೇ ಮೈಮೇಲೆ ಅಲ್ಲಿಲ್ಲಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

29 March 2014

Gulbarga District Reported Crimes

ವರದಕ್ಷಣಿ ಕಿರುಕಳ ಪ್ರಕರಣ :
ಕಮಲಾಪೂರ ಠಾಣೆ : ಶ್ರೀಮತಿ ಖ್ಯಾದಮ್ಮಾ ಗಂಡ ಶರಣಬಸಪ್ಪಾ ರಾಮನೋರ  ಸಾ: ಮರಗಮ್ಮನ ಗುಡಿ ಹತ್ತಿರ ರಟಕಲ್ ತಾ:ಚಿಂಚೋಳಿ ಜಿ: ಗುಲಬರ್ಗಾ ಹಾಃವಃ ಭೂಂಯಾರ ಇವರನ್ನು  3 ವರ್ಷಗಳ ಹಿಂದೆ ನನ್ನ ತಂದೆ ತಾಯಿಯವರು ರಟಕಲ್ ಗ್ರಾಮದಲ್ಲಿ ಗಂಡನ ಮನೆ ಮುಂದೆ ಅವರು ಕೇಳಿದಂತೆ 5 ತೊಲೆ ಬಂಗಾರದಲ್ಲಿ 4 ತೊಲೆ ಬಂಗಾರ,  51,000-00 ರೂ. ನಗದು ಹಣ ಹಾಗು ಬಟ್ಟೆಗೆ 15100-00 ರೂ. ಪಲಂಗ ಅಲಮಾರ ಮತ್ತು ಎಲ್ಲಾ ಮನೆ ಬಳಕೆ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿರುತ್ತಾರೆ. ಮದುವೆಯಲ್ಲಿ 2,50,000-00 ಲಕ್ಷ ರೂಪಾಯಿ ಖರ್ಚು ಮಾಡಿರುತ್ತಾರೆ. ಕೇವಲ 1 ತೊಲೆ ಬಂಗಾರಕೊಟ್ಟಿಲ್ಲಾ ಎನ್ನುವ ಕಾರಣಕ್ಕೆ ಮದವೆಯಾದಾಗಿನಿಂದ ಇಲ್ಲಿಯವರೆಗೆ ನನ್ನ ಗಂಡ ಶರಣಬಸಪ್ಪಾ ಅತ್ತೆ, ಕಮಲಾಬಾಯಿ ಮಾವ  ಅರ್ಜುನ, ಮೈದುನ  ರವಿ, ನಾದಿನಿ . ಭೀಮಬಾಯಿ, ಇವರುಗಳು ಸೇರಿ ನನಗೆ ಮಾನಸಿಕವಾಗಿ ಹಾಗು ದೈಹಿಕವಾಗಿ ತೊಂದರೆ ನೀಡುತ್ತಾ ಬಂದಿರುತ್ತಾರೆ. ಈಗ 4 ತಿಂಗಳ ಹಿಂದೆ ನನ್ನನ್ನು ವರದಕ್ಷಿಣೆ  ಹಣ ಮತ್ತು ಬಂಗಾರ ತೆಗೆದುಕೊಂಡು ಬಂದರೆ ಮಾತ್ರ ನಿನ್ನನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ ಎಂದು ಹೊರಗೆ ಹಾಕಿರುತ್ತಾರೆ. ನನ್ನ ಮೇಲೆ ಮಾಡಿದ ಭಾನಾಮತಿಯಿಂದ ನನ್ನ ಆರೋಗ್ಯ ಸ್ಥೀತಿ ಸರಿಯಾಗಿ ಇಲ್ಲದ ಕಾರಣ ನನ್ನಅಕ್ಕನಿಗೆ ಮದುವೆ ಮಾಡಿಕೊಟ್ಟ ಭೂಂಯಾರನಲ್ಲಿ ನಾನು, ನನ್ನ ಗಂಡ ಬಂದು ವಾಸವಾಗಿದ್ದೇವು. ಅಲ್ಲದೇ ನನ್ನ ಗಂಡನು ಹೊಡೆಬಡೆ ಮಾಡುತ್ತಿರುತ್ತಾನೆ. ಹೀಗಿದ್ದು. ದಿನಾಂಕ: 28-03-14 ರಂದು ಬೆಳಿಗ್ಗೆ 7-00 ಗಂಟೆ ಸುಮಾರಿಗೆ ನನ್ನ ಗಂಡನ ಮನೆಯವರು ನೀನು ಬಂಗಾರ ಹಣ ತೆಗೆದುಕೊಂಡು ಬಾ ಅಂತಾ ನನ್ನ ಕೂದಲು ಹಿಡಿದು ಹೊಡೆದಿರುತ್ತಾರೆ. ಮತ್ತು ಜೀವದ ಬೆದರಿಕೆ ಮಾಡಿರುತ್ತಾರೆ. ನನಗೆ ಒಳ ಪೆಟ್ಟುಮಾಡಿರುತ್ತಾರೆ. ನಾವು ಹೇಳಿದ ವರದಕ್ಷಿಣೆ ಹಣ ಬಂಗಾರ ತರದಿದ್ದರೆ ನಿನ್ನ ಗಂಡನಿಗೆ ಬೇರೆ ಮದುವೆ ಮಾಡುತ್ತೇವೆ ಎಂದು ಹೇಳಿ ಹೋಗಿದ್ದಾರೆ. ಅಲ್ಲದೇ ನನ್ನ ಅತ್ತೆ ತಮ್ಮನಾದ ಲಾಲಪ್ಪಾ ಗುಪ್ತಾ ಉಪನ್ಯಾಸಕರು(ಕಾಳಗಿ)ಮಾತು ಕೇಳಿ ನನಗೆ ಮೇಲೆ ಹೇಳಿದ ರೀತಿಯಲ್ಲಿ ತೊಂದರೆ ಕೊಡುತ್ತಿದ್ದಾರೆ. ನನ್ನ ಗಂಡನಿಗೆ ಲಾಲಪ್ಪಾ ಗುಪ್ತ ಉಪನ್ಯಾಸಕರು ನನ್ನ ಗಂಡನಿಗೆ ಇನ್ನೊಂದು ಹೆಣ್ಣು ತೆಗೆದು ಬೇರೆ ಮದುವೆ ಮಾಡುತ್ತೇನೆ ಎಂದು ಸುಮಾರು ದಿವಸಗಳಿಂದ ಕುಮ್ಮಕ್ಕು ನೀಡುತ್ತಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.           
ಅಪಹರಣ ಪ್ರಕರಣ :
ಮಹಿಳಾ ಠಾಣೆ : ದಿನಾಂಕ:21.02.2014 ರಂದು ಶ್ರೀ ಸಿದ್ದಾರಾಮ ತಂದೆ ಹಣಮಂತರಾಯ ಹೀರೆಗೌಡರ  ಸಾ; ಜಿ.ಡಿ.ಎ ಲೇಔಟ ಶಹಾಬಜಾರ ಗುಲಬರ್ಗಾ ರವರ ಹೆಂಡತಿಯಾದ ರೇಣುಕಾ ಇವಳಿಗೆ  ಔರಾದ ಗ್ರಾಮದಿಂದ ಕರೆದುಕೊಂಡು ಅಪಹರಿಸಿಕೊಂಡು ಹೋಗಿದ್ದು ಇರುತ್ತದೆ. ಆಗಾಗ ನಮಗೆ ಪೋನ ಮಾಡಿ ಮಹ್ಮದ ರಫೀಕ ಇತನು ನೀವು ಪೊಲೀಸ ಠಾಣೆಗೆ ಹೋಗಿ ಕೇಸು ಮಾಡಿದರೆ ನಾನು ರೇಣುಕಾ ಇವಳಿಗೆ ಖಲಾಸ ಮಾಡಿ ಬಿಡುತ್ತೇನೆ ಅಂತಾ ಹೆದರಿಸುತ್ತಿದ್ದರಿಂದ ನಾವು ಕೇಸು ಮಾಡಿರುವದಿಲ್ಲಾ. ದಿನಾಂಕ: 19.03.2014 ರಂದು ನನ್ನ ಹೆಂಡತಿಯಾದ ರೇಣುಕಾ ಇವಳು ತನ್ನ ತಂದೆ ತಾಯಿಗೆ ಫೋನ ಮಾಡಿ ನಾನು ಸೋಲಾಪೂರದಲ್ಲಿರುತ್ತೇನೆ. ನನಗೆ ಕರೆದುಕೊಂಡು  ಹೋಗಿ ಎಂದು ಫೋನ ಮಾಡಿದ್ದು.ಆಗ ನನ್ನ ಅತ್ತೆ  ಮಾವ ಸೋಲಾಪೂರ ಹೋಗಿ  ನನ್ನ ಹೆಂಡತಿಗೆ ಕರೆದುಕೊಂಡು ಬಂದಿದು ಇರುತ್ತದೆ. ನಿನ್ನೆ ದಿನಾಂಕ 28.03.2014 ರಂದು ನಾನು ನನ್ನ ಹೆಂಡತಿ ರೇಣುಕಾ ಅತ್ತೆ ಲಕ್ಷ್ಮೀಬಾಯಿ ನನ್ನ ಮಗ ಹರ್ಷವರ್ದನ ಇತನೊಂದಿಗೆ ಘತ್ತರಗಿ ಭಾಗ್ಯವಂತಿ ದೇವಸ್ಥಾನಕ್ಕೆ ಹೋಗಬೇಕು ಅಂತಾ ಔರಾದ ಗ್ರಾಮದಿಂದ ನಾನು ನನ್ನ ಹೆಂಡತಿ ಮೋಟಾರ ಸೈಕಲ ಮೇಲೆ ಬಂದಿದ್ದು, ನಮ್ಮ ಅತ್ತೆ ಲಕ್ಷ್ಮೀಬಾಯಿ ಆಟೋದಲ್ಲಿ ಬಂದಿದ್ದು ಇರುತ್ತದೆ. ನಾನು ನನ್ನ ಸ್ನೇಹಿತನ ಮೋಟಾರ ಸೈಕಲ ಕೊಟ್ಟು ಬರಬೇಕು ಅಂತಾ ನನ್ನ ಹೆಂಡತಿ ರೇಣುಕಾ ಮತ್ತು ಅತ್ತೆ ಲಕ್ಷ್ಮೀಬಾಯಿ  ಮಗ ಹರ್ಷವರ್ದನ ಇವರಿಗೆ ಕೇಂದ್ರ ಬಸ ನಿಲ್ದಾಣದಲ್ಲಿ ಕೂಡಿಸಿ ಹೊರಗಡೆ ಬಂದಾಗ ಮದ್ಯಾಹ್ನ 1.30 ಗಂಟೆಯ ಸುಮಾರಿಗೆ  ಮಹ್ಮದ ರಫೀಕ ಇತನು ಅಲ್ಲಿಗೆ ಬಂದು ನನ್ನ ಹೆಂಡತಿಯಾದ  ರೇಣುಕಾ ಇವಳಿಗೆ ಜಬರದಸ್ತಿಯಿಂದ ಅಪಹರಣ ಮಾಡಿಕೊಂಡು ಹೋಗಿದ್ದು ಅಲ್ಲದೇ ನನಗೆ ಪೋನ ಮಾಡಿ ಈಗ ನಾನು ನಿನ್ನ ಹೆಂಡತಿ ರೇಣುಕಾ ಇವಳಿಗೆ ಕರೆದುಕೊಂಡು ಹೋಗುತ್ತಿದ್ದೆನೆ. ನೀನು ಏನು ಮಾಡಿಕೊಳ್ಳುತ್ತಿ ಮಾಡಿಕೋ ಅಂತಾ ಹೇಳಿದನು. ಕಾರಣ ಜಬರದಸ್ತಿಯಿಂದ ನನ್ನ ಹೆಂಡತಿಯಾದ ರೇಣುಕಾ ಇವಳಿಗೆ ಅಪಹರಣ ಮಾಡಿಕೊಂಡು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಇಸ್ಪೀಟ ಜೂಜಾಟದ ದಲ್ಲಿ ನಿರತ ವ್ಯಕ್ತಿಗಳ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 28-03-2014 ರಂದು ರೈಲ್ವೆ ಸ್ಟೇಷನ ಹತ್ತಿರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಗುಂಪಾಗಿ ಕುಳಿತುಕೊಂಡು ಇಸ್ಪೆಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಶ್ರೀ ಸವಿಶಂಕರ ನಾಯ್ಕ ಡಿ.ಎಸ್.ಪಿ ಸಾಹೇಬರು ಉಪ ವಿಭಾಗ ಗುಲಬರ್ಗಾರವರ ನೇತೃತ್ವದಲ್ಲಿ  ಪಿಐ ಸ್ಟೇಷನ ಬಜಾರ ಠಾಣೆ ಹಾಗು ಸಿಬ್ಬಂದಿಯವರು ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ  ಮರೆಯಲ್ಲಿ ನಿಂತು ನೋಡಲು ರೈಲ್ವೆ ಸ್ಟೇಷನ ಹತ್ತಿರ ಖುಲ್ಲಾ ಜಾಗೆಯಲ್ಲಿ 5 ಜನರು ಗುಂಪಾಗಿ ಕುಳಿತು ಇಸ್ಪೆಟ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ ಬಹಾರ ಎಂಬ ದೈವಲಿಲೆ ಇಸ್ಪೆಟ್ ಜೂಜಾಟ ಆಡುತ್ತಿದ್ದದ್ದು ಖಚಿತಪಡಿಸಿಕೊಂಡು ದಾಳಿ ಮಾಡಿ  ಹಿಡಿದು ಅವರನ್ನು ವಿಚಾರಿಸಲು ತಮ್ಮ ಹೆಸರು 1. ಪರಮೇಶ್ವರ ತಂದೆ ಶರಣಪ್ಪ ಶಂಕದ ಸಾಃ ಸಂಜೀವ ನಗರ ಗುಲಬರ್ಗಾ 2. ಮಲ್ಲಪ್ಪ ತಂದೆ ಗುರುಪಾದಪ್ಪ ಮಾಗಡಿ  ಸಾಃ ಜಗತ ಗುಲಬರ್ಗಾ 3. ಸಂಗಪ್ಪ ತಂದೆ ಚನ್ನಬಸಪ್ಪ ಪಾಟೀಲ ಸಾಃ ಜಗತ ಗುಲಬರ್ಗಾ 4.ಬಸವರಾಜ ತಂದೆ ಶಿವಣ್ಣ ಪಂಗರಗಿ ಸಾಃ ನ್ಯೂ ರಾಘವೇಂದ್ರ ನಗರ ಕಾಲೋನಿ ಗುಲಬರ್ಗಾ  ಹೀಗೆ ಒಟ್ಟು. 23,090/- ರೂ ಮತ್ತು 52 ಇಸ್ಪೆಟ್ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಅಪಘಾತ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀ ಧನಶೆಟ್ಟಿ ತಂದೆ ಚಂದ್ರಶಾ ಪೂಜಾರಿ ಸಾಕುದಮೂಡ ತಾಆಳಂದ ಜಿಗುಲಬರ್ಗಾ  ರವರು ದಿನಾಂಕ 27-03-2014 ರಂದು ಮಧ್ಹಾನದ ಸಮಯ ತನ್ನ ಮೋಟಾರ್ ಸೈಕಲ್ ಕೆಎ-32-ಇಬಿ-1725 ನೇದರಲ್ಲಿ ಸಂಗಡ ಮಲ್ಲಿಕಾರ್ಜುನ ತಂದೆ ಭಾಗಪ್ಪ ಪೂಜಾರಿಯವರಿಗೆ ಕರೆದುಕೊಂಡು ಜೀವಣಗಿಗೆ ಬಾಕಿ ಹಣ ತರಲು ಹೋಗಿದ್ದನುಜೀವಣಗಿಯಿಂದ ಸಾಯಾಂಕಾಲ 7-30 ಗಂಟೆಯ ಸುಮಾರಿಗೆ ಮೋಟಾರ ಸೈಕಲ್ ಹಿಂದೆ ಮಲ್ಲಿಕಾರ್ಜುನ ನನಗೆ ಕುಡಿಸಿಕೊಂಡು  ಮೋಟಾರ ಸೈಕಲ್ ನಡೆಯಿಸಿಕೊಂಡು ಮರಳಿ ಕಮಲಾಪೂರ ಕಡೆಗೆ ಹೊರಟೆವು,ಬೇಳುರ ಭೂಯಾಂರ ಕ್ರಾಸ ದಾಟಿ ಹೊರಟಿರುವಾಗ ಎದುರಗಡೆಯಿಂದ ಒಂದು ಟಂ.ಟಂ ಬರುವದನ್ನು ಕಂಡು ಮೋಟಾರ್ ಸೈಕಲ್ ರೋಡಿನ ಎಡಗಡೆ ತೆಗೆದು ಕೊಂಡಾಗ ಎದುರಿನಿಂದ ಮತ್ತೊಂದು ಟಂ.ಟಂ ಓವರಟೇಕ್ ಮಾಡಿ ಎದುರಗಡೆ ಬಂದು ನಮ್ಮ ಮೋ. ಸೈಕಲಕ್ಕೆ ಡಿಕ್ಕಿ ಹೊಡೆದನು, ಅದರಿಂದಾಗಿ ನಾವಿಬ್ಬರು ಕೆಳಗಡೆ ಮೋ ಸೈಕಲ್ ಸಮೇತ ಬಿದ್ದೆವುಅದರಿಂದಾಗಿ ನಮ್ಮಿಬ್ಬರ ಬಲಕಾಲಗಳ ಮೋಣಕಾಲಗಳಲ್ಲಿ ಭಾರಿ ರಕ್ತಗಾಯಗಳಾದವು ಸದರಿ ಟಂ.ಟಂ ನಂ ನೋಡ ಬೇಕನ್ನುವಾಗ ಅದರ ಚಾಲಕನು ನಿಲ್ಲಿಸದೆಟಂ.ಟಂ ನಡೆಯಿಸಿಕೊಂಡು  ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,
ಆಳಂದ ಠಾಣೆ : ಶ್ರೀ ಉಸ್ಮನಅಲಿ ತಂದೆ ಮಶಖಸಾಬ ತಾಶೆವಾಲೆ ಮು: ನುರಾನಿ ಮೊಹಲ್ಲಾ ಆಳಂದ ರವರ ಮಗಳು ದಿನಾಂಕ 28-03-2014  ರಂದು ಬೆಳಿಗ್ಗೆ ಸಾಯಮಾ ಇವಳು ಮನೆಯಿಂದ ಹೋರಗೆ ಆಟಆಡಲು ಹೋದಾಗ ನೂರಾನಿ ಮೊಹಲದಾ ಗಲ್ಲಿ ರಸ್ತೆಯಿಂದ ಒಬ್ಬ ಟ್ರಾಕ್ಟರ ಚಾಲಕನು ತನ್ನ ವಾಹನವನ್ನು ಅತಿ ವೇಗದಿಂದ  ಹಾಗು ನಿಸ್ಕಾಳಜಿತದಿಂದ ಓಡಿಸಿಕೊಂಡು ಬಂದವನೇ ನನ್ನ ಮಗಳಿಗೆ ಹಾಯಿಸಿದಾಗ ಆಕೆ ಸಿ.ಸಿ ರೋಡಿನ ಮೇಲೆ ಬಿದ್ದಾಗ ಟ್ರಾಕ್ಟರದ ದೊಡ್ಡ ಗಾಲಿ ಆಕೆ ತೆಲೆಯ ಮೇಲೆ ಹಾದು ತಲೆ ಒಡೆದು ರಕ್ತ ಮೌಂಸ ಮೇದಳು ಹೊರ ಬಂದು ಸ್ಥಳಕ್ಕೆ ಅಂಟಿ ಮೃತಪಟ್ಟಿರುತ್ತಾಳೆ ಅಫಘಾತ ಪಡಿಸಿದ ಟ್ರಾಕ್ಟರ ಚಾಲಕನು ವಾಹನ ನಿಲ್ಲಿಸದೆ ಹಾಗೆ ಓಡಿಸಿಕೊಂಡು ಹೋಗಿದ್ದು ನಂಬರ ನೋಡಲಾಗಿ ಎಮ್ಎಚ್‌ 24 7360 ಇದ್ದು ಅದರ ಚಾಲಕನು ಮಶಾಖ ತಂದೆ ಖಾಸಿಮ ಸಾಬ ಸಾವಳ್ಳೆ ಮು: ಮಟಕಿ ರೋಡ ಆಳಂದ ಇರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀಮತಿ ಡಾ|| ಮಮತಾ @ ಮುಮತಾಜ ಗಂಡ ತುರಬಾನಅಲಿ ಸಾ|| ಮನೆ ನಂ 11-1041/34/2&3 ಶಹಜಿಲಾನಿ ದರ್ಗಾಹಿಂದುಗಡೆ ಮದಿನಾಕಾಲೋನಿ ಎಂ.ಎಸ್‌.ಕೆ ಮೀಲ್‌ ಗುಲಬರ್ಗಾ ಇವರು ದಿನಾಂಕ: 27-03-2014 ರಂದು ರಾತ್ರಿ 12.00 ಗಂಟೆಗೆ ನನ್ನ ಮನೆಯ ದರೋಡೆಯಾಗಿದ್ದು, ನಾನು ಹಾಗು ನ್ನ  ಗಂಡ ತುರಬಅಲಿ ಕೂಡ ಆಯೇಶ ಪರವೀನಾ ಗಂಡ ಅಬ್ದುಲಕರೀಮ್‌ ಇವರ ಮನೆಗೆ ಹೊದಾಗ ಅಲ್ಲಿ ತುರಬಾಅಲಿ ಸಂಬಂದಿಕರಾದ ಆಯೇಶಾ ಪರವಿನರಿಗೆ ಮನೆಯ ಮಾಲಿಕರಾದ ಖಯ್ಯುಮ ವೆಲ್ಡರವರು ವಿನಾಃಕಾರಣವಾಗಿ ಜಗಳ ತೆಗೆದು ಅವಾಚ್ಯಕ ಶಬ್ದಗಳಿಂದ ಬಯ್ಯುತ್ತಿದ್ದರು. ಸದರಿ ಆಯೇಶಾ ಪರವಿನರವರ ಮನೆಗೆ ಹೊದಾಗ ಅಲ್ಲಿ ಇದರ ಬಗ್ಗೆ ಸದರಿ ಮನೆಯ ಮಾಲಿಕ ಖಯೂಮ್‌ ವೆಲ್ಡರ ಹಾಗು ಇವನ ಮೂರು ಮಕ್ಕಳು 1. ಮಹ್ಮದ್‌ ಇಬ್ರಾಹಿಂ ತಂದೆ ಖಯೂಮ್‌ 2 ಮಹ್ಮದ್‌ ಮುಸ್ತಾಫ ತಂದೆ ಖಯೂಮ್‌ ಹಾಗು ಇನ್ನೋಬ್ಬ ಮಗ ಮತ್ತು ಇನ್ನಿತರ ಖಯೂಮನ ಸ್ನೆಹಿತರು ಹಾಗು ಆತನ ಮಕ್ಕಳ ಸ್ನೆಹತರು ಕೊಚ್ಚಿದ್ದರು. ಇದರ ಬಗ್ಗೆ ಕೂಲಂಕುಶವಾಗಿ ವಿಚಾರಿಸಿದಾಗ ಅವರು ನಮ್ಮ ಮೇಲೆ ಜಗಳ ಹಾಗು ನಿಂದನೆ ಮಾಡಿದ್ದಾರೆ. ಇದಾದ ಕೇಲವೆ ಸಮಯದಲ್ಲಿ ನಾನು ನನ್ನ ಗಂಡ ಹಾಗು ಆಯೇಶಾ ಪರ್ವೆನರವರು ಕೂಡಿಕೊಂಡು ರಾಘವೇಂದ್ರನಗರ ಪೊಲೀಸ ಠಾಣೆಗೆ ಹೊದಾಗ, ಅಲ್ಲಿ ಸದರಿ ಜಗಳದ ಬಗ್ಗೆ ಮಾನ್ಯ ಸ್ಟೇಷನ ಪಿಎಸ್‌ಐರವರಿಗೆ ತಿಳಿಸಿದಾಗ ಆ ಸಂದರ್ಬದಲ್ಲಿ ಮೇಲೆ ತಿಳಿಸಿದ ಎಲ್ಲಾ ಆರೋಪಿತರು ಈ ಮೇಲಿನ ಘಟನೆಯನ್ನು ಸಾಕ್ಷಿಯಾಗಿ ನೊಡಿದವರು 1 ಎಮ್‌ಡಿ ಗೌಸ್‌ ತಂದೆ ಎಮ್‌ಡಿ ಅನ್ಸಾರಖಾನ 2. ಉದಯಕುಮಾರ ತಂದೆ ಶರಣಪ್ಪ . ನಮ್ಮ ಮನೆಗೆ ಮದಿನಾ ಕಾಲೋನಿಯಲ್ಲಿರುವ ನಮ್ಮ ಸ್ವಂತ ಮನೆಗೆ ಹೊಗಿ ಅಲ್ಲ ಮನೆಯ ಮುಖ್ಯದ್ವಾರ ಒಡೆದು ಒಳನುಗ್ಗಿ ಸದರಿ ಕೋಣೆಯಲ್ಲಿರುವ ಒಂದು ಕಂಪ್ಯೂಟರ ಸಿಪಿಯು ಸೇಟ್‌ ಮತ್ತು ಬೆಡ್‌ರೂಮ್‌ನಲ್ಲಿರುವ ಲಾಕರ್‌ ತೆಗೆದು ಅಲ್ಲಿದ್ದ 3 ಲಕ್ಷ ರೂಪಾಯಿ ಹಣವನ್ನು ತೆಗೆದುಕೊಂಡು ಹೊಗಿದ್ದಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.