POLICE BHAVAN KALABURAGI

POLICE BHAVAN KALABURAGI

02 January 2014

Gulbarga Dist Reported Crimes

ಕೊಲೆ ಪ್ರಯತ್ನ ಪ್ರಕರಣ :
ನಿಂಬರ್ಗಾ ಪೊಲೀಸ ಠಾಣೆ :

ದಿ:- 01-01-2014 ರಂದು ರಾತ್ರಿ ಶ್ರೀ ಗುಂಡಪ್ಪಾ ತಂ. ಕರಬಸಪ್ಪ ತಳವಾರ ತನ್ನ ಮಗನಾದ ಅಶೋಕನೊಂದಿಗೆ ತಾನು ಪಾಲಿನಂತೆ ಮಾಡಿದ ಹೊಲಕ್ಕೆ ಹೋಗಿ ದಿನಾಂಕ  02-01-2014 ರಂದು ಬೆಳಿಗ್ಗೆ 06-00 ಗಂಟೆಗೆ ಮರಳಿ ಮನೆಗೆ ಬಂದಾಗ ಆತನ ಹೆಂಡತಿ ಮಹಾದೇವಿ ಅಳುತ್ತಾ  1) ಶರಣಪ್ಪ ತಂ.  ತುಕ್ಕಪ್ಪ ನಿಂಬರ್ಗಿ, 2)ಗುಂಡಪ್ಪ ತಂ. ಶರಣಪ್ಪ ನಿಂಬರ್ಗಿ, 3) ಬಸಪ್ಪಾ ತಂ. ತುಕ್ಕಪ್ಪಾ ನಿಂಬರ್ಗಿ, 4) ರಾಜಾ ತಂ. ಶಂಕಪ್ಪಾ ನಿಂಬರ್ಗಿ  ಸಾಎಲ್ಲರೂ ಬಮ್ಮನಳ್ಳಿ ಇವರು ಹಳೆಯ ದ್ವೇಶದ ವೈಷಮ್ಯದಿಂದ ತಮ್ಮ ಮಗಳಾದ ಸವಿತಾ ಹಾಗೂ ಕವಿತಾ ರವರು ಮಲಗಿಕೊಂಡ ಕೋಣೆಯಲ್ಲಿ ಅಕ್ರಮ ಪ್ರವೇಶ ಮಾಡಿ ತಾವೇ ಮಲಗಿಕೊಂಡಿರಬಹುದು ಅಂತ ತಿಳಿದು ನಿಮ್ಮನ್ನು ಕೊಲೆಮಾಡುವ ಉದ್ದೇಶದಿಂದ ಮುಖದ ತುಂಬಾ ಕೌದಿ ಹೊಚ್ಚಿಕೊಂಡು ಮಲಗಿಕೊಂಡಂತಹ ಸವಿತಾಳ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲು ಯತ್ನಿಸಿರುತ್ತಾರೆ. ಆಗ ಅವಳು ಚೀರಾಡುವ ಸಪ್ಪಳ ಕೇಳಿ ಇನ್ನೊಂದು ಕೊಣೆಯಲ್ಲಿ ಮಲಗಿರುವ ನಾನು ಎದ್ದು ಹೋಗಿ ನೋಡಲಾಗಿ ಓಡಿ ಹೋಗಿರುತ್ತಾರೆ ಮಗಳಿಗೆ ನೋಡಲಾಗಿ ಎಡಗಡೆ ಕಣ್ಣಿಗೆಎಡ ಕಿವಿಗೆ ಮತ್ತು ಕಿವಿಯ ಮೇಲ್ಭಾಗದ ತಲೆಗೆ ಭಾರಿ-ರಕ್ತಗಾಯವಾಗಿರುತ್ತದೆ. ಎಂದು ತಿಳಿಸಿದ್ದು. ಕಾರಣ ತನ್ನ ಕೊಲೆ ಮಾಡುವ ಉದ್ದೇಶದಿಂದ ಸವಿತಾಳ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭಾರಿ ರಕ್ತಗಾಯಪಡಿಸಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಅಂತ ಕೊಟ್ಟ ಫಿರ್ಯಾದಿ ಸಾರಾಂಶದ ಮೇಲಿಂದ ನಿಂಬರ್ಗಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

Gulbarga District Reported Crimes

ಅಪಾತ ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಮಹ್ಮದಶೇಖ ಇವರು ಕಮಲಾಪೂರ ಗ್ರಾಮದ ಅಯುಬಪಾಶ ತಂ ಬಸೀರ ಅಹ್ಮದ ಇತನ ಮೋಟಾರ ಸೈಕಲ ಬಜಾಜ ಡಿಸ್ಕವರಿ ನಂ ಕೆ,, 32 ಇಬಿ, 6639 ನೇದ್ದರ ಮೇಲೆ ಆತನ ಚಾಲನೆಯಲ್ಲಿ ಮಹಾಗಾಂವದಿಂದ ಕಮಲಾಪೂರಕ್ಕೆ ಹೋಗುವಾಗ ಆತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಸಿದ್ದಭಾರತಿ ಶಾಲೆಯ ಹತ್ತಿರ ಅಪಘಾತ ಪಡಿಸಿದ್ದರಿಂದ ನನ್ನ ಗಂಡನ  ಮುಖಕ್ಕೆ ಮೂಗಿಗೆ ಹಾಗೂ ಇತರೆ ಭಾಗದಲ್ಲಿ ಭಾರಿಗಾಯಗಳಾಗಿದ್ದು ಅಯುಬಪಾಶ ತಂ ಬಶೀರ ಅಹ್ಮದನಿಗು ಕೂಡಾ ಗಾಯಗಳಾಗಿರುತ್ತವೆ ಅಂತಾ ಶ್ರೀಮತಿ ಸಾಬೇರಾಬಿ ಗಂ ಮಹ್ಮದಶೇಖ  ಸಾ| ಕಮಲಾಫೂರ ಹಾ|||| ನೇಹರು ನಗರ ಕುರ್ಲಾ ಮುಂಬೈ, ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.