POLICE BHAVAN KALABURAGI

POLICE BHAVAN KALABURAGI

25 August 2012

GULBARGA DISTRICT REPORTED CRIMES


ಹೆಣ್ಣು ಮಗಳು ಕಾಣೆಯಾದ ಪ್ರಕರಣ:
ಮಹಿಳಾ ಪೊಲೀಸ ಠಾಣೆ : ಶ್ರೀ ಅಮಜದ ತಂದೆ ಮಹ್ಮದ ಖಾಸಿಂಸಾಬ ಸಾ||ಖುರೇಷಿ ಮಜೀದ ಹತ್ತಿರ ರೋಜಾ ಗುಲಬರ್ಗಾ ರವರು ನನ್ನ ಹೆಂಡತಿಯಾದ ಮಹೀರುನ್ನಿಸಾ ಇವಳು ದಿನಾಂಕ:22/08/2012 ರಂದು ರಾತ್ರಿ 1-00 ಗಂಟೆಯ ಸುಮಾರಿಗೆ ನಾವೇಲ್ಲರೂ ಮಲಗಿಕೊಂಡಾಗ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋಗಿರುತ್ತಾಳೆ ನಮ್ಮ ಸಂಬಂದಿಕರಲ್ಲಿ ಹಾಗೂ ನಮ್ಮ ಅತ್ತೆ ಮಾವನವರಿಗೆ ಪೋನ ಮಾಡಿ ವಿಷಯ ತಿಳಿಸಿರುತ್ತೆನೆ. ಕಾರಣ ಕಾಣೆಯಾದ ನನ್ನ ಹೆಂಡತಿ ಮಹರುನ್ನಿಸಾ ಇವಳಿಗೆ ಪತ್ತೆ ಮಾಡಿಕೊಡಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:61/2012 ಕಲಂ ಹೆಣ್ಣು ಮಗಳು ಕಾಣೆಯಾದ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ ಶರಣಪ್ಪ ತಂದೆ ಖತಲಪ್ಪ ಕೊಚಿ ಸಾ:ಝಳಕಿ (ಕೆ) ತಾ:ಆಳಂದ  ರವರು ನಾನು ದಿನಾಂಕ:23/08/2012 ರಂದು ಬೆಳ್ಳಿಗ್ಗೆ 9-00  ಗಂಟೆ ಸುಮಾರಿಗೆ ಕುರಿಗಳು ಮೇಯಿಸಲು ನನ್ನ ಕುರಿಗಳನ್ನು ಹೊಡೆದುಕೊಂಡು ಹೋಗಿದ್ದು, ನನ್ನ ಹೆಂಡತಿಯು ಸಹ  ಹೊಲದ ಕೆಲಸಕ್ಕೆ ಹೋಗಿರುತ್ತಾಳೆ. ನಾನು ಕುರಿಗಳು ಮೇಯಿಸಿಕೊಂಡು ಹೊಲದಿಂದ ಸಾಯಂಕಾಲ 6-00 ಗಂಟೆಯ ಸುಮಾರಿಗೆ ಮನೆಗೆ ಬಂದು, ಮನೆಯೂಳಗೆ ಹೋಗಬೇಕು ಅಂತಾ ಮನೆ ಬಾಗಿಲು ಹತ್ತಿರ ಹೋದಾಗ ಬಾಗಿಲು ಒಂದು ಫಲಕ ತೆರೆದು ಮುರಿದಿತ್ತು. ನಾನು ಮನೆಯೂಳಗೆ ಹೋಗಿ ನೋಡಲು ಬಟ್ಟೆಗಳು ,ಎಲ್.ಐ.ಸಿ ಪಾಲಸಿಗಳು ಹೊಲದ ಕಾಗದ ಪತ್ರಗಳು ಇತರೇ ಕಾಗದ ಪತ್ರಗಳು ಮನೆಯಲ್ಲಿ ಚೆಲ್ಲಾ ಪಿಲ್ಲಿಯಾಗಿ ಬಿದಿದ್ದವು ನನ್ನ ಮನೆಯಲ್ಲಿನ ಪೆಟ್ಟಿಗೆ ಮುರಿದಿದ್ದು ಅದರಲ್ಲಿದ್ದ ಬಂಗಾರದ ಆಭರಣ ಮತ್ತು ಬೆಳ್ಳಿಯ ಸಾಮಾನುಗಳು ಮತ್ತು ನಗದು 10,000/-ಸಾವಿರ ರೂಪಾಯಿಗಳು. ಹೀಗೆ ಒಟ್ಟು 1,00,150/- (ಒಂದು ಲಕ್ಷದ ಒಂದು ನೂರಾ ಐವತ್ತು ) ರೂಪಾಯಿ ಕಿಮ್ಮತ್ತಿನವುಗಳು ಕಳ್ಳತನವಾಗಿರುತ್ತದೆ. ನನ್ನ ಮನೆಯಲ್ಲಿ ಕಳ್ಳತನ ಆದ ಬಗ್ಗೆ ನಮ್ಮೂರ ಶಿವಪ್ಪ ತಾಯಿ ಗೌರಾಬಾಯಿ ಕೊಚಿ, ಗೌರಾಬಾಯಿ ತಂದೆ ಶಿವಪ್ಪ ಕೊಚಿ ಸಾ:ಝಳಕಿ(ಕೆ) ಇವರೆ ಕಳ್ಳತನ ಮಾಡಿರಬಹುದು ಅಂತಾ ಸಂಶಯ ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 44/2012 ಕಲಂ: 454,380  ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES

ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ ಮಲ್ಲಪ್ಪಾ ತಂದೆ ಬಂಡೆಪ್ಪಾ ಸಾ||ಅಂತಪನಾಳ ತಾ||ಜಿ||ಗುಲಬರ್ಗಾರವರು ನಾನು ಮತ್ತು ನನ್ನ ಹೆಂಡತಿ ಕಾಶಿಬಾಯಿ ಇಬ್ಬರು ಕೂಡಿಕೊಂಡು ದಿನಾಂಕ:23-08-2012 ರಂದು ಸಾಯಂಕಾಲ 5-45 ಗಂಟೆ ಸುಮಾರಿಗೆ ಹೊಲಕ್ಕೆ ಹೋಗಿ ಬಂದಾರಿಯಲ್ಲಿರುವ ಕಾಲುವೆಯಲ್ಲಿನ ಕಸ ತೆಗೆಯುತ್ತಿರುವಾಗ ಅಣ್ಣಪ್ಪಾ ಮತ್ತು ಆತನ ಮಗ ದಿಲೀಪ ಇಬ್ಬರು ಕೂಡಿಕೊಂಡು ಬಂದು ನಮ್ಮ ಮಧ್ಯ ಇರುವ ಬಂದಾರಿಯಲ್ಲಿ ನೀರು ಹೋಗುವದನ್ನು ಬಂದ ಮಾಡು ಅಂದರೆ ಕೇಳುತ್ತಿಲ್ಲಾ ಅಂತಾ ಮುಂದೆ ಹೋಗದಂತೆ ತೆಡೆದು ಗಟ್ಟಿಯಾಗಿ ಹಿಡಿದು ಅಲ್ಲೇ ಬಿದ್ದಿರುವ ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಮತ್ತು ಕೈ ಮುಷ್ಠಿ ಮಾಡಿ, ಬೆನ್ನಿಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 95/2012 ಕಲಂ. 341, 323, 324, 447, 504, 506 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ, ಅಣ್ಣಪ್ಪಾ ತಂದೆ ಬಂಡೆಪ್ಪಾ ಸಾ||ಅಂತಪನಾಳ ತಾ||ಜಿ||ಗುಲಬರ್ಗಾರವರು ನಾನು ಮತ್ತು ನನ್ನ ಹೆಂಡತಿ ಶಾರದಾಬಾಯಿ ಇಬ್ಬರು ಕೂಡಿಕೊಂಡು ದಿನಾಂಕ:23/08/2012 ರಂದು ಬೆಳಿಗ್ಗೆ ಹೊಲಕ್ಕೆ ಹೋಗಿ ಹೊಲದಲ್ಲಿ ಕಸ ತೆಗೆದು ನಮ್ಮ ಬಂದಾರಿಯಲ್ಲಿ ಹಾಕುತ್ತಿರುವಾಗ ಸಾಯಂಕಾಲ 5-45 ಗಂಟೆಗೆ ನನ್ನ ತಮ್ಮ ಮಲ್ಲಪ್ಪಾ ಈತನು ಬಂದು ನನಗೆ ಅವಾಚ್ಯವಾಗಿ ಬೈದು ನಮ್ಮ ನೀರಿನ ಕಾಲುವೆಯಲ್ಲಿ ಕಸ ಹಾಕಿ ನೀರು ಹೋಗುವದನ್ನು ಬಂದ ಮಾಡುತ್ತಿದ್ದಿರಿ ಅಂತಾ ಅನ್ನುತ್ತಿದ್ದಾಗ ಆಗ ನಾನು ಈ ಬಂದಾರಿ ನಮಗೆ ಸೇರಿದ್ದು. ಪ್ರತಿ ವರ್ಷ ಬಂದಾರಿ ಕೇದರಿ ಹಾಳು ಮಾಡುತ್ತಿದ್ದಿರಿ ಅಂತಾ ಅಂದಿದಕ್ಕೆ ನನಗೆ ಎದುರು ಮಾತನಾಡುತ್ತಿ ಅಂತಾ ಅವಾಚ್ಯಾವಾಗಿ ಬೈದು ಎದೆಯ ಮೇಲಿನ ಅಂಗಿ ಹಿಡಿದು ನೆಲಕ್ಕೆ ಕೆಡುವಿ ಅಲ್ಲೇ ಬಿದ್ದಿರುವ ಬಡಿಗೆ ತೆಗೆದುಕೊಂಡು ನನ್ನ ಬಲಗಡೆ ಹೊಟ್ಟೆಯ ಮೇಲೆ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 96/2012 ಕಲಂ. 341, 323, 324, 447, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.