POLICE BHAVAN KALABURAGI

POLICE BHAVAN KALABURAGI

31 March 2017

Kalaburagi District Reported Crimes

ಕಳವು ಪ್ರಕರಣ :
ಜೇವರಗಿ ಠಾಣೆ : ಡಾ : ರಾಜಶೇಖರ ತಂದೆ ಚಂದ್ರಶೇಖರ ಸುಲೇಪೆಟಕರ್ ಸಾಃ (ರವಿ ಕುಂಜ) ಮೊಹನ ನಗರ ಹಳೆ ಜೇವರಗಿ ರಸ್ತೆ ಕಲಬುರಗಿ ಹಾಃವಃ ಬಸವೇಶ್ವರ ನಗರ ಜೇವರಗಿ ] ಮತ್ತು ನನ್ನ ಹೆಂಡತಿ ಸ್ವಪ್ನಾ ಸುಲೇಪೇಟಕರ್ ಇಬ್ಬರೂ ಡಾಕ್ಟರ್ ಕೆಲಸ ಮಾಡಿಕೊಂಡಿರುತ್ತೇವೆ. ನಮ್ಮದೊಂದು ಜೇವರಗಿ ಪಟ್ಟಣದ ಹೊಸ ಬಸ್ ನಿಲ್ದಾಣ ಹತ್ತಿರ ನಿರ್ಮಲಾ ದೇವಿ ಚೈಲ್ಡ್ & ಮೇಟರನೇಟಿ ಆಸ್ಪತ್ರೆ ಇರುತ್ತದೆ. ಅಸ್ಪತ್ರೆಯಲ್ಲಿ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೆಲಸ ಮಾಡುತ್ತೇವೆ ಅಲ್ಲದೇ ನಮ್ಮ ಮನೆ ಜೇವರಗಿ ಪಟ್ಟಣದ ಬಸವೇಶ್ವರ ನಗರದಲ್ಲಿರುವ ಮಲ್ಲಣಗೌಡ ತಂದೆ ಭೀಮರಾಯಗೌಡ ಪಾಟೀಲ ಸಾಃ ನೇದಲಗಿ ಇವರ ಮನೆಯಲ್ಲಿ ಬಾಡಿಗೆಯಿಂದ ಇರುತ್ತೇವೆ. ದಿನಾಂಕ 30.03.2017 ರಂದು ಮುಂಜಾನೆ 10.00 ಗಂಟೆಯ ಸುಮಾರಿಗೆ ನಾನು ಮನೆಯಿಂದ ಆಸ್ಪತ್ರೆಗೆ ಹೋದೆನು. ನಂತರ ಮುಂಜಾನೆ 11.00 ಗಂಟೆಯ ಸುಮಾರಿಗೆ ನನ್ನ ಹೆಂಡತಿ ಡಾಃ ಸ್ವಪ್ನಾ ಇವಳು ನಮ್ಮ ಮನೆಯ ಬಾಗಿಲ  ಕೀಲಿ ಹಾಕಿ ಆಸ್ಪತ್ರೆಗೆ ಬಂದಿರುತ್ತಾಳೆ. ಮದ್ಯಾಹ್ನ  3.00 ಗಂಟೆಯ ಸುಮಾರಿಗೆ ನಾನು ಮತ್ತು ನನ್ನ ಹೆಂಡತಿ ಇಬ್ಬರೂ ಆಸ್ಪತ್ರೆಯಿಂದ ಮರಳಿ ನಮ್ಮ ಮನೆಗೆ ಬಂದು ನೋಡಲು ನಮ್ಮ ಮನೆಯ ಬಾಗೀಲ ಕೀಲಿ ಮುರಿದು ಬಾಗಿಲು ಕೊಂಡಿ ಹಾಕಿದ್ದು ಇತ್ತು. ನಂತರ ನಾವಿಬ್ಬರೂ ಮನೆಯೊಳಗೆ ಹೋಗಿ ನೋಡಲಾಗಿ ಮನೆಯಲ್ಲಿನ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ಅಲ್ಲದೇ ಅಲಮಾರಿ ಬಾಗಿಲ ತೆರೆದಿತ್ತು. ನೋಡಲಾಗಿ ಅದರಲ್ಲಿ ಇಟ್ಟ ಒಟ್ಟು ಇಪ್ಪತ್ತೈದುವರೆ ತೊಲೆ ಬಂಗಾರ & ಡೈಮಂಡ್ ಆಭರಣಗಳು ಒಟ್ಟು .ಕಿ. 7,42,500/-ರೂ  ನೇದ್ದವುಗಳು ಯಾರೊ ಕಳ್ಳರು ದಿನಾಂಕ 30.03.2017 ಮುಂಜಾನೆ 11.30 ಗಂಟೆಯಿಂದ ಮದ್ಯಾಹ್ನ 3.00 ಗಂಟೆಯ ಮದ್ಯದ ಅವದಿಯಲ್ಲಿ ನಮ್ಮ ಮನೆಯ ಬಾಗಿಲ ಕೀಲಿ ಮುರಿದು ಬಾಗಿಲ ತೆರೆದು ಮನೆಯಲ್ಲಿನ ಕಬ್ಬಿಣದ ಅಲಮಾರದಲ್ಲಿ ಇಟ್ಟ  ಬಂಗಾರ  & ಡೈಮಂಡ್ ಆಭರಣಗಳುನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಸ್ವಾಭಾವಿಕ ಸಾವು ಪ್ರಕರಣ :
ಫರತಾಬಾದ ಠಾಣೆ : ದಿನಾಂಕ 30/03/2017 ರಂದು  ಸಾಯಂಕಾಲ ಸರಡಗಿ ಗ್ರಾಮದ ಹತ್ತೀರ ಭೀಮಾ ನದಿಯಲ್ಲಿ ಒಬ್ಬ ಅಪರಿಚಿತ ಗಂಡು ಮನುಷ್ಯ ವಯಸ್ಕ  ಸುಮಾರು 35 ರಿಂದ 40 ವರ್ಷ ಇತನ ಶವ ಇದ್ದು ಇತನ ಸಾವಿನಲ್ಲಿ ಸಂಶಯ ಇರುತ್ತದೆ ಮುಂದಿನ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀ ಬಸವರಾಜ ಡೆಂಗಿ ಸಾ : ಫರಹತಾಬಾದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

28 March 2017

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಫರತಾಬಾದ ಠಾಣೆ : ದಿನಾಂಕ 27/03/2017 ರಂದು  ಸಾಯಂಕಾಲ  ಫರಥಾಬಾದ ಠಾಣಾ ವ್ಯಾಪ್ತಿಯ  ಸೀತನೂರ ಗ್ರಾಮದ ಅಮೃತ ಬಂಕೂರ ಇವರ ಮನೆಚಿು ಮುಂದಿನ ಸಾರ್ವಜನಿಕ ಕಟ್ಟೆ ಮೇಲೆ ಅಂದರ -ಬಹಾರ ಎಂಬ ಇಸ್ಪೀಟ ಜೂಜಾಟವಾಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಶ್ರೀ ಪಿ.ಎಸ್. ವನಚಿಜಕರ ಪಿ.ಎಸ್.ಐ ಫರಹತಾಬಾದ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ  ದಾಳಿ ಮಾಡಿ ಅಂಬಾರಾಯ ತಂದೆ ಮಹಾದೇವಪ್ಪ ಕಣ್ಣಿ  ಸಂಗಡ ಇನ್ಮ್ನ 3 ಜನರು ಸಾ// ಸೀತನ್ರರ ,ಕಲ್ಲೂರ(ಕೆ) ಹಾಗೂ ಆಂದೋಲ ರವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ ಜೂಜಾಟಕ್ಕೆ ಬಳಸಿದ 4040/-  ರೂಪಾಯಿ  ನಗದು ಹಣ ಮತ್ತು 52 ಇಸ್ಪೀಟದ ಎಲೆಗಳು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಫರತಾಬಾದ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವೈಜನಾಥ ತಂದೆ ಮಹಾರುದ್ರಪ್ಪಾ ಕುಲಕರ್ಣೀ ಸಾ:ಸ್ವಾಮಿ ವಿವೇಕಾನಂದ ನಗರ ಮಾಳೆವಾಡಿ ಕಲಬುರಗಿ ಇವರು ದಿನಾಂಕ:23/03/2017 ರಂದು ನನ್ನ ಹೆಂಡತಿ ಕಾಂಚನಾ ಇವಳು ತನ್ನ ತವರು ಮನೆಗೆ ಹೋಗಿದ್ದು ನಾನು ದಿನಾಂಕ:25/03/2017 ರಂದು ಬೆಳಗ್ಗೆ 8.30 ಗಂಟೆಗೆ ನಮ್ಮ ಮನೆಯ ಕೀಲಿ ಹಾಕಿಕೊಂಡು ನನ್ನ ಕೆಲಸದ ನಿಮೀತ್ಯವಾಗಿ ಹೋಗಿರುತ್ತೇನೆ ನಂತರ ಇಂದು ದಿನಾಂಕ:27/03/2017 ರಂದು ಸಾಯಂಕಾಲ 5.00 ಗಂಟೆಗೆ ಮರಳಿ ನಮ್ಮ ಮನೆಗೆ ಬಂದು ನೋಡಲು ನಮ್ಮ ಮನೆಯ ಬಾಗಿಲಿನ ಕೀಲಿ ಮುರಿದು ಒಳಗೆ ಹೋಗಿ ಮನೆಯಲ್ಲಿ  ಅಲಮಾರಿಯಲ್ಲಿಟ್ಟಿದ್ದ 3 ಗ್ರಾಂ  ಬಂಗಾರದ ಒಂದು  ಉಂಗುರ .ಕಿ.10000/-ರೂ ಮತ್ತು 02 ಗ್ರಾಂ ಬಂಗಾರದ ಕಿವಿಯ ಬೆಂಡೋಲಿ .ಕಿ.6800/-ರೂ ಹಾಗೂ ಹಾಲ್‌‌‌ನಲ್ಲಿ ಹಾಕಿದ 01 ಎಲ್‌‌.ಜಿ ಕಂಪನಿಯ ಎಲ್‌‌.ಸಿ.ಡಿ ಟಿ.ವಿ .ಕಿ.8000/-ರೂ ಹಿಂಗೆ ಒಟ್ಟು 24800/-ರೂ ಬೆಲೆವುಳ್ಳ ಸಾಮಾನುಗಳನ್ನು ಯಾರೋ ಕಳ್ಳರು ದಿನಾಂಕ:25/03/2017 ರಂದು ಬೆಳಗ್ಗೆ 8.30 ಗಂಟೆಯಿಂದ ಇಂದು ದಿನಾಂಕ:27/03/2017 ಸಾಯಂಕಾಲ 5.00 ಗಂಟೆಯ ಅವದಿಯೊಳಗೆ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

27 March 2017

Kalaburagi District Reported Crimes

ಅಪಘಾತ ಪ್ರಕರಣಗಳು :
ವಾಡಿ ಪೊಲೀಸ ಠಾಣೆ : ಶ್ರೀಮತಿ ಶಕುಂತಲಾ ಗಂಡ ಉಮೇಶ ಜೈಕರ ಸಾ: ಕೃಷ್ಟಾ ನಗರ ಕೂಸನೂರ ರೋಡ ಕಲಬುರಗಿ. ರವರ ಗಂಡ ಉಮೇಶ ತಂದೆ ರಾಮದಾಸ ಇವರು  ದಿನಾಂಕ:10/02/2017 ರಂದು ಬೆಳ್ಳಿಗ್ಗೆ ಯಾದಗಿರಗೆ ಹೋಗಿ ಬರುವದಾಗಿ ಹೇಳಿ ತನ್ನ ರಾಯಲ ಎನಪೀಲ್ಡ ಮೊ/ಸೈ ನಂ:ಕೆ.ಎ-32/ಇಎಮ್-5053 ನೇದ್ದರ ಮೇಲೆ ಹೊರಟು ಹೊದರು. ನಂತರ ರಾತ್ರಿ 8.30 ಗಂಟೆಯ ಸುಮಾರು ಯಾರೊ ಒಬ್ಬರೂ ನನ್ನ ಗಂಡನ ಮೊಬೈಲ ದಿಂದ  ನನಗೆ ಪೊನ ಮಾಡಿ ಈ ಮೊಬೈಲ ವ್ಯಕ್ತಿಯ ನಾಲವಾರ ಸ್ಷೇಷನ ಆಚೆಗೆ ಒಂದು ಪರ್ಲಾಂಗ ಅಂತರದ ಯಾದಗಿರ ಕಡೆಗೆ ಹೋಗುವ ರೋಡಿನ ಮೇಲೆ ಬಿದಿದ್ದು ಆತನ ಮುಖಕ್ಕೆ , ಕೈಕಾಲುಗಳಿಗೆ ತರಚಿದ ರಕ್ತಗಾಯವಾಗಿ ತಲೆಗೆ ರಕ್ತಗಾಯವಾಗಿ ಭಾರಿ ಒಳಪೆಟ್ಟಾಗಿದ್ದು  ಸದರಿಯವನಿಗೆ ಅಂಬುಲೇನ್ಸದಲ್ಲಿ ಹಾಕಿ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಕಳಹಿಸಿಕೊಡಲಗಿದೆ ಅಂತಾ ಹೇಳಿದ್ದು ನಂತರ ನಾನು ಮತ್ತು ನನ್ನ ಅಳಿಯ ಬಸವವೇಶ್ವರ ಆಸ್ಪತ್ರೆಗೆ ಹೋಗಿ ದಾರಿ ಕಾಯುತ್ತಾ ಇದ್ದಾಗ ಅಂಬುಲೇನ್ಸ ಬಂದಿದ್ದು ಅದರಲ್ಲಿದ್ದ ನನ್ನ ಗಂಡನಿಗೆ ನೋಡಿ ಗುರ್ತಿಸಿ ಆತನಿಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿ ಉಪಚರಿಸಿಕೊಂಡು ಹೆಚ್ಚಿನ ಉಪಚಾರ ಕುರಿತು ಯುನೈಟೆಡ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ. ನನ್ನ ಗಂಡನು ಯಾದಗಿರ ದಿಂದ ಕಲಬುರಗಿಗೆ ಬರುವ ಕಾಲಕ್ಕೆ ಮೊ/ಸೈ ನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಸ್ಕೀಡ ಆಗಿ ಬಿದ್ದಿದ್ದರ ಬಹುದು ಅಥವಾ ಯಾವುದೊ ವಾಹನ ಅಥವಾ  ಮೊ/ಸೈ ಡಿಕ್ಕಿ ಪಡಿಸಿ ಹೋಗಿರಬಹುದು ನನ್ನ ಗಂಡನಿಗೆ  ಪ್ರಜ್ಞೇ ಬಂದಾಗ ಅಥವಾ ಯಾರಾದರೂ ಘಟನೆ ನೋಡಿದವರು ಬಂದು ವಿಷಯ ತಿಳಿಸಿದಾಗ ನಿಜ ಸ್ಥೀತಿ ಗೊತ್ತಾಗುತ್ತದೆ  ಅಂತಾ ತಿಳಿಸಿದ್ದು ಗಾಯಾಳು ಉಮೇಶ ತಂದೆ ರಾಮದಾಸ ಜೈಕಾರ ಇತನು ಉಪಚಾರ ಕುರಿತು ಆಸ್ಪತ್ರೆಯಲ್ಲಿ ಸೇರಿಕೆ ಆಗಿ ಉಪಚಾರ ಪಡೆಯುತ್ತಿದ್ದು ಇರುತ್ತದೆ. ನಂತರ ನನ್ನ ಗಂಡ ಉಮೇಶ ಇತನು ಮೊ/ಸೈ ಮೇಲೆ ಯಾದಗಿರ ದಿಂದ ವಾಡಿ ಕಡೆಗೆ ಬರುವ ಕಾಲಕ್ಕೆ ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮೊ/ಸೈ ಮೇಲಿಂದ ಬಿದ್ದು ತಲೆಗೆ ಭಾರಿ ಗಾಯವಾಗಿ ಅಲ್ಲದೇ ಮೈಕೈಗೆ ಅಲ್ಲಲ್ಲಿ ಗಾಯವಾಗಿದ್ದು ಉಪಚಾರ ಕುರಿತು ಆಸ್ಪತ್ರೆಯಲ್ಲಿ ದಾಖಲಾಗಿದ್ದು ದಿನಾಂಕ : 16/03/2017  ರಂದು ಕಲಬುರಿಯ ಯುನೈಟೆಡ ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಅಲ್ಲಿಂದ ಜಿಲ್ಲಾ ಆಸ್ಪತ್ರೆ ಕಲಬುರಿಯಲ್ಲಿ ಸೇರಿಕೆ ಮಾಡಿ ಅಲ್ಲಿಯೂ ಸಹ ಉಪಚಾರ ಪಡಿಸಿಕೊಂಡು ದಿನಾಂಕ:22/03/2017 ರಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಿಕೊಂಡು ಮನೆಗೆ ತಂದು ಮನೆಯಲ್ಲಿ ಉಪಚರಿಸುವ ಕಾಲಕ್ಕೆ ನಿನ್ನೆ ದಿನಾಂಕ;25/03/2017 ರಂದು ರಾತ್ರಿ 11.00 ಗಂಟೆಯ ಸುಮಾರಿಗೆ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಹುಸೇನ ಪಟೇಲ ತಂದೆ ಖಾದರ ಪಟೇಲ ಸಾ: ಮಾತೋಳ್ಳಿ ರವರು ದಿನಾಂಕ 25-03-2017 ರಂದು ನಾನು ಮತ್ತು ನನ್ನ ಕಾಕನ ಮಗನಾದ ಖಾದರಸಪಟೇಲ ತಂದೆ ಹಸನಪಟೇಲ ಇಬ್ಬರು ಕೂಡಿಕೊಂಡು ನಮ್ಮ ಮೋಟಾರ ಸೈಕಲ್ ನಂ  ಕೆಎ-32-.ಜೆ-2041 ನೇದ್ದರ ಮೇಲೆ ಕುಳಿತು ಕೊಂಡು ಖಾಸಗಿ ಕೇಲಸದ ನಿಮಿತ್ಯ ಅಫಜಲಪೂರಕ್ಕೆ ಹೋಗಿ ವಾಪಸ ಮಾತೋಳ್ಳಿ ಕಡೆಗೆ ಬರುತ್ತಿದ್ದೇವು ಮೋಟಾರ ಸೈಕಲ ಖಾದರಪಟೇಲ ನಡೆಸುತ್ತಿದ್ದನು ಸರಸಾಂಬಾ ರವರ ಹೊಲ ದಾಟಿ ಸ್ವಲ್ಪ ಮುಂದೆಕ್ಕೆ ಹೋಗುತ್ತಿದ್ದಾಗ ಹಿಂದೆ ಗಡೆಯಿಂದ ಒಂದು ಬಸ್ಸ ಚಾಲಕನು ತನ್ನ ಬಸ್ಸನ್ನು ಅತೀವೇಗ ಮತ್ತು ಅಲಕ್ಷತನದಿಂದ ಒಮ್ಮೆಲೆ ಬೇಜವಾಬ್ದಾರಿಯಿಂದ ಓವರ ಟೇಕ್ ಮಾಡಲು ಹೋಗಿ ನಮ್ಮ ಮೋಟಾರ ಸೈಕಲಗೆ ಹಿಂದಿನಿಂದ ಡಿಕ್ಕಿ ಪಡೆಸಿದ್ದು ನಾನು ಮತ್ತು ಖಾದರಪಟೇಲ ಕೆಳಗೆ ಬಿದ್ದೇವು ಬಸ್ಸ ಚಾಲಕನು ತನ್ನ ಬಸ್ಸನ್ನು ನಿಲ್ಲಿಸದ ಹಾಗೆ ಓಡಿಸಿಕೊಂಡು ಹೋಗುತ್ತಿರುವಾಗ ಹಿಂದಿನಿಂದ ಅದರ ನಂಬರ ನೋಡಲು ಕೆಎ-32-ಎಫ್-1728 ನೇದ್ದು ಇತ್ತು ನನಗೆ ತಲೆಗೆ ಒಳಪೆಟ್ಟು ಗಾಯವಾಗಿದ್ದು ಖಾದರ ಪಟೇಲನಿಗೆ ತಲೆಗೆ ಭಾರಿ ರಕ್ತ ಪೆಟ್ಟು ಗಾಯವಾಗಿದ್ದು ನಾನು ಹಿಂದುಗಡೆಯಿಂದ ಬರುತ್ತಿದ್ದ ಚಾಂದ ಪಟೇಲ ತಂದೆ ಸೈಯದ ಪಟೇಲ ಕೂಡಿಕೊಂಡು ಅಂಬುಲೇನ್ಸ ನಲ್ಲಿ ಹಾಕಿಕೊಂಡು ಸರಕಾರಿ ದವಾಖಾನೆ ಅಫಜಲಪೂರದಲ್ಲಿ ತೋರಿಸಿ ಹೆಚ್ಚಿನ ಉಪಚಾರ ಕುರಿತು ಯುನೈಟೇಡ್ ಆಸ್ಪತ್ರೆ ಕಲಬುರಗಿಗೆ ಒಯ್ಯೂತ್ತಿರುವಾಗ ಮಾರ್ಗಮಧ್ಯ 6 ಪಿ.ಎಮ್ ಕ್ಕೆ ಖಾದರ ಪಟೇಲ ನಿದನ ಹೊಂದಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಹಳ್ಳೆಪ್ಪ ತಂದೆ ಬೀಮಶ್ಯಾ ದಿವಂಟಗಿ ಸಾ: ಮಂದರವಾಡ ತಾ: ಜೇವರಗಿ ಇವರ ಹೊಲ ಸರ್ವೆ ನಂ 141 ಆಕಾರ 3 ಎಕರೆ ಇರುತ್ತದೆ. ನಮ್ಮ ಹೊಲವು ಬೀಮಾ ನದಿ ದಂಡೆಗೆ ಹತ್ತಿಕೊಂಡು ಇರುತ್ತದೆ. ಈಗ ಸುಮಾರು 6 ತಿಂಗಳಿಂದ ನಮ್ಮೂರ ಮಾಳಪ್ಪ ತಂದೆ ಬಸಪ್ಪ ಪೂಜಾರಿ, ಮುತ್ತಪ್ಪ ತಂದೆ ಶರಣಪ್ಪ ಪೂಜಾರಿ, ಶರಣಪ್ಪ ತಂದೆ ನಿಂಗಪ್ಪ ಪೂಜಾರಿ ಹಾಗೂ  ವಿಜಯಕುಮಾರ ತಂದೆ ಬಾಬುರಾಯ ಪೂಜಾರಿ ಇವರು ಕಳುವಿನಿಂದ ಟ್ರ್ಯಾಕ್ಟರಗಳ ಮೂಲಕ ರಾತ್ರಿ ವೇಳೆಯಲ್ಲಿ ಉಸುಕು ತೆಗೆದುಕೊಂಡು ಹೋಗುವದು ಮಾಡುತ್ತಿದ್ದರು ನಾನು ಮತ್ತು ನನ್ನ ಅಣ್ಣ ನಿಂಗಪ್ಪ ಇಬ್ಬರು ಅವರಿಗೆ ಇಲ್ಲಿಂದ ಉಸುಕು ತೆಗೆದುಕೊಂಡು ಹೋಗ ಬೇಡರಿ ಅಂತ ನಮ್ಮ ಹೊಲ ಹಾಳು ಆಗುತ್ತದೆ ಅಂತ ಸುಮಾರು ಸಲ ಹೇಳಿದರು ಹಾಗೆ ಮಾಡುತ್ತಿದ್ದರು ಅಲ್ಲದೇ ನಮ್ಮ ಸಂಗಡ ತಂಟೆ ತಕರಾರು ಕೂಡಾ ಮಾಡುತ್ತಾ ಬಂದಿರುತ್ತಾರೆ ಆದರೂ ನಾವು ಎಲ್ಲಿ ಆವರ ಸಂಗಡ ಜಗಳ ಮಾಡುವದು ಅಂತ ಸುಮ್ಮನಿದ್ದೇವು. ದಿನಾಂಕ: 24.03.2017 ರಂದು ರಾತ್ರಿ ನಾವು ಮನೆಯಲ್ಲಿದ್ದಾಗ ನನ್ನ ಅಣ್ಣ ನಿಂಗಪ್ಪ ಇತನು ನಮ್ಮ ಹೊಲದ ಕೆಳಗೆ ಇರುವ ಬೀಮಾ ನದಿಯಲ್ಲಿಂದ ನಮ್ಮೂರ ಮಾಳಪ್ಪ ತಂದೆ ಬಸಪ್ಪ ಪೂಜಾರಿ, ಮುತ್ತಪ್ಪ ತಂದೆ ಶರಣಪ್ಪ ಪೂಜಾರಿ, ಶರಣಪ್ಪ ತಂದೆ ನಿಂಗಪ್ಪ ಪೂಜಾರಿ ಹಾಗೂ  ವಿಜಯಕುಮಾರ ತಂದೆ ಬಾಬುರಾಯ ಪೂಜಾರಿ ಉಸುಕು ಟ್ರ್ಯಾಕ್ಟರಗಳಲ್ಲಿ ತುಂಬುತ್ತಿದ್ದಾರೆ ಅಂತ ನಾನು ಹೋಗಿ ಅವರಿಗೆ ತುಂಬುವದು ಬೇಡ ಅಂತ ಹೇಳುತ್ತೇನೆ ಅಂತ ಹೇಳಿ ಹೋದನು. ಅವನು ಹೋದ ಸ್ವಲ್ಪ ಹೊತ್ತಿನಲ್ಲಿ ನಾನು ಮತ್ತು ನನ್ನ ಹೆಂಡತಿ ಜಕ್ಕಮ್ಮ ಇಬರು ಕೂಡಿ ಅಲ್ಲಿಗೆ ಹೊದೆವು. ನಮ್ಮ ಹೊಲದ ಕೆಳಗೆ ನದಿಯ ಪಕ್ಕದಲ್ಲಿ ದಂಡೆಯಲ್ಲಿ ನಮ್ಮೂರ ಮಾಳಪ್ಪ ಪೂಜಾರಿ, ಮುತ್ತಪ್ಪ ಪೂಜಾರಿ, ಶರಣಪ್ಪ ಪೂಜಾರಿ ಹಾಗೂ ವಿಜಯಕುಮಾರ ಪೂಜಾರಿ ಇವರು ನನ್ನ ಅಣ್ಣ ನಿಂಗಪ್ಪನ ಸಂಗಡ ತಕರಾರು ಮಾಡುತ್ತಿದ್ದರು ನಾವು ಅವರಿಗೆ ಯಾಕೆ ಸುಮ್ಮನೆ ತಕರಾರು ಮಾಡುತ್ತಿದ್ದಿರಿ ಅಂತ ಅಂದಿದಕ್ಕೆ ಅವರು ರಂಡಿ ಮಗ ನಿಂಗ್ಯಾ ಮಾದಗ ಸೂಳ್ಯಾ ಮಗನದು ಬಹಳ ಆಗ್ಯಾದ ಊರಲ್ಲಿ ಯಾರು ನಮಗೆ ಕೇಳಲು ಇವನೆ ಬಹಳ ನಮ್ಮ ಸಂಗಡ ಗಂಟ ಬಿದ್ದಾನ ಅಂತ ಬೈದಾಗ ನನ್ನ ಅಣ್ಣ ನಿಂಗಪ್ಪನು ನಿವು ನನಗೆ ಬೈರಿ ಅದರೆ ಜಾತಿ ಎತ್ತಿ ಬೈದರೆ ಸುಮ್ಮನಿರುವದಿಲ್ಲಾ, ಅಂತ ಅಂದಿದಕ್ಕೆ ವಿಜಯಕುಮಾರನು ತನ್ನ ಕೈಯಲ್ಲಿದ್ದ ಸಲಕಿ ತುಂಬಿನಿಂದ ನನ್ನ ಅಣ್ಣನ ತಲೆ ಮೇಲೆ ಮತ್ತು ಬಲಗಾಲ ಮೊಳಕಾಲದ ಮೇಲೆ ಜೋರಾಗಿ ಹೋಡೆದಾಗ ಅವನು ಕೇಳಗೆ ಬಿದ್ದು ಬಿಟ್ಟನು ಆ ಉಳಿದ ಮೂರು ಜನರು ಅವನಿಗೆ ಬಿಡಬ್ಯಾಡ ಹೋಡಿರಿ ಅಂತ ಅನ್ನುತ್ತಿದ್ದಾಗ ನಾನು ಮತ್ತು ನನ್ನ ಹೆಂಡತಿ ಇಬ್ಬರು ಕೂಡಿ ನಮ್ಮ ಅಣ್ಣನಿಗೆ ಹೊಡೆಯುವದನ್ನು ಬಿಡಿಸಿದೇನು ನಂತರ ಆ ನಾಲ್ಕು ರಂಡಿ ಮಗನೆ ನಿಂಗ್ಯಾ ಇವತ ಉಳಿದಿದ್ದಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ನಿನ್ನ ಜೀವ ಸಹಿತ ಬಿಡುವದಿಲ್ಲಾ ಅಂತ ಜೀವದ ಭಯ ಹಾಕಿ ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

26 March 2017

Kalaburagi District Reported Crimes

ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದವರ ಬಂಧನ :
ಶಾಹಾಬಾದ ನಗರ ಠಾಣೆ : ಶ್ರೀ ನಾಗೇಂದ್ರ ಪಿಸಿ 651 ಶಹಾಬಾದ  ರವರು ದಿನಾಂಕ 24/03/17 ರಂದು ರಾತ್ರಿ 11 -00 ಪಿ.ಎಂ ದಿಂದ 5-00 ಪಿ.ಎಂ ಎ ವರಗೆ ರಾತ್ರಿ ವಿಶೇಷ ಗಸ್ತು ಕರ್ತವ್ಯದ್ದಲಿದ್ದಾಗ ಬೆಳಗಿನ ಜಾವ 3-15 ಎ.ಎಂ ಕ್ಕೆ ಕೆ.ಇ.ಬಿ ಹೋಟೇಲ ಹತ್ತಿರ ಇಬ್ಬರೂ ಕವಿ ನೆರಳಿನಲ್ಲಿ ನಿಂತಿದ್ದು, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದು, ಕೈಯಲ್ಲಿ ಒಂದು ರಾಡು ಹಿಡಿದುಕೊಂಡಿದ್ದು ನಮಗೆ ನೋಡಿ ಮರೆ ಮಾಚುತ್ತಿರುವಾಗ ಸದರಿಯವರಿಗ ಬೆನ್ನು ಹತ್ತಿ ಹಿಡಿದು ವಿಚಾರಿಸಲು ತಮ್ಮ ಹೆಸರು 1]ದಿನೇಶ ತಂದೆ ರಾಮಕೀಶನ ರಾಠೋಡ 2] ರಾಘವೇಂದ್ರ ತಂದೆ ಭೀಮಾಶಂಕರ ಸಾ: ಇಬ್ಬರೂ ಮರತೂರ ಅಂತ ತಿಳಿಸಿದರು. ಸದರಿಯವರಿಗೆ ಹಿಡಿದುಕೊಂಡು ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣಗಳು :
ರಾಘವೇಂದ್ರ ನಗರ ಠಾಣೆ : ಶ್ರೀ ಸಂಗಮೇಶ ತಂದೆ ಗಂಗಾಧರ ಹುಂಡೇಕಾರ ಸಾ|| ಸ್ವಾಮಿ ವಿವೇಕಾನಂದ ನಗರ ವೀರಭದ್ರೇಶ್ವರ ಮಂದಿರ ಹತ್ತಿರ ಕಲಬುರಗಿ ಇವರು ದಿನಾಂಕ:25/03/2017 ರಂದು ಬೆಳಗ್ಗೆ ನಾವೇಲ್ಲರು ನಮ್ಮ ನಮ್ಮ ಕೆಲಸಕ್ಕೆ ಹೋಗಿರುತ್ತೆವೆ ನಮ್ಮ ತಾಯಿಯವರು ಮಾತ್ರ ಮನೆಯಲ್ಲಿ ಇರುತ್ತಿದ್ದರು, ನಮ್ಮ ತಾಯಿಯವರು ಮದ್ಯಾಹ್ನ 12-00 ಗಂಟೆಗೆ ಮನೆ ಕೀಲಿ ಹಾಕಿಕೊಂಡು ನಮ್ಮ ಮನೆ ಹತ್ತಿರ ಇರುವ ಶಾಂತಪ್ಪ ಕೊರಳ್ಳಿಯವರ ಮನೆಗೆ ಹೋಗಿದ್ದು ನಮ್ಮ ತಮ್ಮ ಜಗಧೀಶ ಇತನು ಮದ್ಯಾಹ್ನ 1-30 ಗಂಟೆಗೆ ಆಟೋ ತೆಗೆದುಕೊಂಡು ಮನೆಗೆ ಬಂದು ನೋಡಲು ಮನೆಯ ಬಾಗಿಲು ಖುಲ್ಲಾ ಇದ್ದು ನಮ್ಮ ತಮ್ಮ ನನಗೆ ಫೋನ್ ಮಾಡಿ ತಿಳಿಸಿದಾಗ ನಾನು ಮನೆಗೆ ಬಂದು ನೋಡಲು ಮನೆ ಬಾಗಿಲು ಕೀಲಿ ಮುರಿದಿದ್ದು ಒಳಗೆ ಹೋಗಿ ನೋಡಲು ಅಲಮಾರದ ಚಾವಿ ಮುರಿದು ನಮ್ಮ ತಾಯಿಯವರಿಗೆ ಕರೇಯಿಸಿ ವಿಚಾರ ಮಾಡಲು ಲಾಕರನಲ್ಲಿ ಇಟ್ಟಿದ್ದ ಹತ್ತು ವರ್ಷ ಹಿಂದೆ ಖರಿದಿ ಮಾಡಿದ 10 ಗ್ರಾಂ ಬಂಗಾರದ ಕರಿಮಣಿ ತಾಳಿ .ಕಿ 20,000/-ರೂ ಹಾಗೂ ಬೆಳ್ಳಿ ಲಕ್ಷ್ಮಿ ಮುರ್ತಿ , ಬೆಳಿಯ ನಾಣ್ಯ, ಬೆಳ್ಳಿಯ ಚೈನ್ ಹೀಗೆ ಒಟ್ಟು ತುಕ 150 ಗ್ರಾಂ ಅದರ .ಕಿ 4,500/- ರೂ ಹೀಗೆ ಒಟ್ಟು 24,500/-ರೂ ಬೇಲೆಯ ಬಂಗಾರದ ಹಾಗೂ ಬೆಳ್ಳಿಯ ಆಭರಣಗಳು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜೇವರಗಿ ಠಾಣೆ : ಶ್ರೀ ವಿಶ್ವಭೂಷಣ ತಂದೆ ಚಂದ್ರಕಾಂತ ಪೋಸ್ತೆ ಉ: ಅಸಿಸ್ಟೇಂಟ ಬ್ಯಾಂಕ ಮಾನೆಂಜರ ಸಾ:ಬಸವೇಶ್ವರ ನಗರ ಜೇವರಗಿ ರವರು ಆಂದೋಲಾ ಪಿ.ಕೆ.ಜಿ ಬ್ಯಾಂಕದಲ್ಲಿ ಸುಮಾರು 2 ವರ್ಷಗಳಿಂದ ಅಸಿಸ್ಟೇಂಟ ಬ್ಯಾಂಕ ಮಾನೆಂಜರ ಕೆಲಸ ಮಾಡಿಕೊಂಡಿರುತ್ತೇನೆ. ನಿನ್ನೆ ದಿನಾಂಕ: 24.03.2017 ರಂದು ಎಂದಿನಂತೆ ನಾನು ಮತ್ತು ನಮ್ಮ ಬ್ಯಾಂಕಿನಲ್ಲಿ ಕೆಲಸ ಮಾಡುವ ಸಿಬ್ಬಂದಿ ಜನರಾದ ಮಲ್ಲಣ್ಣಾ ತಂದೆ ಹೊನ್ನಪ್ಪ ನಾಟಿಕರ್ ಹಾಗೂ ಖಾಸಗಿಯಾಗಿ ಕೆಲಸ ಮಾಡುವ ರಿಯಾಜ ತಂದೆ ಚಾಂದಸಾಬ ಕಟ್ಟಿಮನಿ, ಬಾಬಣ್ಣಾ ತಂದೆ ಶಂಕರೆಪ್ಪ ಬರ್ಮಶೆಟ್ಟಿ ಎಲ್ಲರೂ ಸಾಯಾಂಕಾಲ 6.00 ಗಂಟೆಯ ವರೆಗೆ ಕೆಲಸ ಮಾಡಿ ಬ್ಯಾಂಕಿನ ಬಾಗಿಲು ಕೀಲಿ ಹಾಕಿ ಮನೆಗೆ ಬಂದಿದ್ದು ದಿನಾಂಕ: 25.03.2017 ರಂದು ಮುಂಜಾನೆ 10.00 ಗಂಟೆ ಸುಮಾರಿಗೆ ನಮ್ಮ ಬ್ಯಾಂಕಿನಲ್ಲಿ ಕೆಲಸ ಮಾಡುವ ಮಲ್ಲಣ್ಣಾ ನಾಟಿಕರ್ ಇವರು ಫೋನ ಮಾಡಿ ನಮ್ಮ ಪಿಕೆಜಿ ಬ್ಯಾಂಕಿನ ಕೀಲಿ ಮುರಿದಿರುತ್ತದೆ ಅಂತ ತಿಳಿಸಿದ ಕೂಡಲೆ ನಾನು ಆಂದೋಲಾದ ನಮ್ಮ ಪಿಕೆಜಿ ಬ್ಯಾಂಕಿಗೆ ಹೋಗಿ ನೋಡಲು ಬ್ಯಾಂಕಿನ ಮುಂದಿನ ಕಬ್ಬಿಣದ ಗೀರಿಲ್ ಗೇಟ ಖುಲ್ಲಾ ಆಗಿ ಒಳಗಿನ ಬಾಗಿಲು ಕೂಡಾ ಖುಲ್ಲಾ ಇತ್ತು. ನಾನು ಮತ್ತು ಮಲ್ಲಣ್ಣಾ, ಶ್ರೀಕಾಂತ ಬಿರಾಜದಾರ ಹಾಗೂ ಬಾಬಣ್ಣ ಬರ್ಮಶೇಟ್ಟಿ ಎಲ್ಲರೂ ಕೂಡಾ ಒಳಗೆ ಹೋಗಿ ನೋಡಲು ಕ್ಯಾಶ ಕೌಂಟರದ ಡ್ರಾಗಳು ಖುಲ್ಲಾ ಆಗಿದ್ದವು. ಯಾವುದೇ ಹಣ ವಗೃರೆ ವಸ್ತುಗಳು ಕಳ್ಳತನ ಆಗಿರಲಿಲ್ಲಾ. ಯಾರೋ ಕಳ್ಳರು ದಿನಾಂಕ: 24.03.2017 ಮತ್ತು 25.03.2017ರ ಮದ್ಯ ರಾತ್ರಿಯಲ್ಲಿ ನಮ್ಮ ಪಿಕೆಜಿ ಬ್ಯಾಂಕಿನ ಕಬ್ಬೀಣದ ಗೇಟು ಮತ್ತು ಒಳಗಿನ ಬಾಗಿಲು ಕೀಲಿ ಮುರಿದು ಒಳಗೆ ಪ್ರವೇಶ ಮಾಡಿ ಕಳ್ಳತನ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 March 2017

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತವನ ಬಂಧನ :
ಶಾಹಾಬಾದ ನಗರ ಠಾಣೆ : ದಿನಾಂಕ 24/03/2017 ರಂದು ಸಾಯಂಕಾಲ ಶಹಾಬಾದ ಪಟ್ಟಣದ ಮಿಲತ್ ನಗರ ಮಜೀದ ಹತ್ತಿರ ಮಟಕಾ ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಶ್ರೀ ಎಸ್ ಅಸ್ಲಾಂ ಬಾಷ ಪಿ ಐ ಶಹಾಬಾದ ನಗರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಧಾಳಿ ಮಾಡಿ ಮಟಕಾ ಬರೆದುಕೊಳ್ಳುತ್ತಿದ್ದ ಶ್ರೀಧರ ತಂದೆ ನಾಗಪ್ಪಾ ಅಲಬನೂರು ಈತನಿಗೆ ಹಿಡಿದು ಅವನಿಂದ ಮಟಕಾ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 1820 - 00 ರೂ,  ಒಂದು ಮಟಕಾ ನಂಬರ್ ಬರೆದ ಚೀಟಿ , ಒಂದು ಬಾಲ್ ಪೆನ್ ಜಪ್ತಿಪಡಿಸಿಕೊಂಡು ಸದರಿಯವನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಲಕ್ಷ್ಮಣ ಮಾಲಿಪಾಟೀಲ ಸಾ|| ಮೋಗನಟಗಾ ಇವರ ಅಣ್ಣತಮ್ಮಕಿಯ ಸಿದ್ದಪ್ಪ ತಂದೆ ಪಂಡೆಪ್ಪ ಮಾಲಿ ಪಾಟೀಲ ಇವರ ಹೊಲ ಹೋಳೆಗೆ ಹೋಗುವ ದಾರಿಯಲ್ಲಿ ಇರುತ್ತದೆ ಅವರ ಹೊಲದಲ್ಲಿ ಕೆನಲ ಹಾಯಿದಿದ್ದು ಅದರ ಪಕ್ಕದಲ್ಲಿ ರಸ್ತೆಯ ಮೇಲೆ ನಮ್ಮೂರ ಹೊಳೆಯಿಂದ ಉಸುಕು ತುಂಬಿದ ವಾಹನಗಳು ಹಾಯಿದು ಹೋಗುತ್ತಿದ್ದರಿಂದ ಕಾಲುವೆ ಮುಚ್ಚಿದ್ದು ನಂತರ ಆ ಕಾಲುವೆ ರಿಪೇರಿ ಮಾಡಿದ್ದು ಇರುತ್ತದೆ. ಆದರೆ ಅದೇ ದಾರಿಯಲ್ಲಿ ಪೈಪಲೈನ ಪೈಪಗಳು ಹಾಳಾಗಿದ್ದು ಅದಕ್ಕೆ ರಿಪೇರಿ ಮಾಡಿಸಿರುದಿಲ್ಲಾ ಈ ವಿಚಾರದಲ್ಲಿ ನಾನು ಊರಲ್ಲಿ ಉಸುಕು ಹೊಡೆವರಿಗೆ ಪೈಪು ರಿಪೇರಿ ಮಾಡಿಸಿರಿ ಅಂದಿದಕ್ಕೆ ದಿನಾಂಕ: 22/03/2017 ರಂದು ರಾತ್ರಿ 9:00 ಗಂಟೆಯ ಸುಮಾರಿಗೆ ನಮ್ಮೂರ ಕನಕದಾಸ ಚೌಕ ಹತ್ತಿರ ನಿಂತಾಗ ನಮ್ಮೂರ ದ್ಯಾವಪ್ಪ ತಂದೆ ಶಿವರಾಯ ಮಾಲಿಪಾಟೀಲ, ಚಂದ್ರಶ್ಯಾ ತಂದೆ ಶಿವರಾಯ ಮಾಲಿಪಾಟೀಲ, ಹಣಮಂತ ತಂದೆ ದ್ಯಾವಪ್ಪ ಮಾಲಿಪಾಟೀಲ ಇವರೆಲ್ಲರೂ ನನ್ನ ಹತ್ತಿರ ಬಂದು ಏ ರಂಡಿ ಮಗನೆ ಏ ಲಚ್ಯಾ ಊರ ಮುಸಾಬರಿ ಮಾಡಬೇಕಲೆ ಅಂತ ಬೈದು ಹಣಮಂತನು ಬಡಿಗೆಯಿಂದ ಹೊಟ್ಟೆಗೆ ಹೋಡೆದನು ದ್ಯಾವಪ್ಪ ಬೆನ್ನ ಮೇಲೆ ಕೈಯಿಂದ ಹೋಡೆದನು. ಕಾಲಿನಿಂದ ಟೊಂಕಕ್ಕೆ ಒದ್ದನು. ಚಂದ್ರಶ್ಯಾ ಇವನು ನನಗೆ ಈ ರಂಡಿ ಮಗನಿಗೆ ಬಿಡಬ್ಯಾಡ್ರಿ ಹೋಡೆದು ಖಲಾಸ ಮಾಡಿರಿ ಅಂತ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ನೀಡಿ ಕೊಲೆ ಮಾಡಿದ ಪ್ರಕರಣ :
ಯಡ್ರಾಮಿ ಠಾಣೆ : ಶ್ರೀ ಸಿದ್ರಾಮಪ್ಪ ತಂದೆ ಸಿದ್ದಪ್ಪ ಪೊಲೀಸ್ ಬಿರಾದರ ಸಾ|| ಕೂಕನೂರ ತಾ|| ಜೆವರ್ಗಿ ರವರ ಮಗಳಾದ ದೇವಕ್ಕಿ ವಯಸ್ಸು 22 ವರ್ಷ ಇವಳಿಗೆ ಅರಳಗುಂಡಗಿ ಗ್ರಾಮದ ಶಂಕ್ರೆಪ್ಪ ಮುದಬಸಪ್ಪಗೋಳ ಇವರ ಮಗನಾದ ಮಲ್ಲು @ ಮಲ್ಲಿನಾಥ ಇವನಿಗೆ ಮದುವೆ ಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ಊರಿನ ಹಿರಿಯರ ಪ್ರಕಾರ ಮಾತುಕತೆ ಮಾಡಿ 9 .1/2 ಬಂಗಾರ ಮಾತಾಡಿ ಮದುವೆಯ ಕಾಲಕ್ಕೆ 9.1/2 ಬಂಗಾರ , ಹಾಗು ಗೃಹ ಬಳಕೆ ಸಾಮಾನುಗಳು ಮತ್ತು ಬಟ್ಟೆ-ಬರೆ ಇತ್ಯಾದಿ  ಕೊಟ್ಟು ಮದುವೆಯನ್ನು ದಿನಾಂಕ 01-05-2014 ರಲ್ಲಿ ಅರಳಗುಂಡಗಿ ಗ್ರಾಮದ ವರನ ಮನೆಯ ಮುಂದೆ ಮದುವೆ ಮಾಡಿಕೊಟ್ಟಿರುತ್ತೆವೆ. ನಂತರ ನನ್ನ ಮಗಳಾದ ದೇವಕ್ಕಿ ಇವಳಿಗೆ ಮದುವೆಯಾದ 1 ವರ್ಷದ ವರೆಗೆ ಆಕೆಯ ಗಂಡ ಮತ್ತು ಮನೆಯವರೆಲ್ಲರೂ ಅನ್ಯೋನ್ಯವಾಗಿದ್ದರು. ತದನಂತರ ನನ್ನ ಮಗಳಾದ ದೇವಕ್ಕಿ ಇವಳಿಗೆ 1) ಮಲ್ಲಿನಾಥ @ ಮಲ್ಲು ತಂದೆ ಶೆಂಕ್ರೆಪ್ಪ ಮುದಬಸಪ್ಪಗೋಳ, 2) ಭಾವ ಧರೆಪ್ಪ ತಂದೆ ಶೆಂಕ್ರೆಪ್ಪ ಮುದಬಸಪ್ಪಗೋಳ, 3) ಮಾವ ಶೆಂಕ್ರೆಪ್ಪ ತಂದೆ ಧರೆಪ್ಪ ಮುದಬಸಪ್ಪಗೋಳ, 4) ಅತ್ತೆ ಕಸ್ತೂರಿಬಾಯಿ ಗಂಡ ಶೇಂಕ್ರೆಪ್ಪ ಮುದಬಸಪ್ಪಗೋಳ, 5) ನೇಗೆಣಿ ಮಲ್ಲಮ್ಮ ಗಂಡ ಧರೆಪ್ಪ ಮುದಬಸಪ್ಪಗೋಳ ಹೀಗೆಲ್ಲರೂನಾವು ಹೊಲದಲ್ಲಿ ಬಾವಿ ಹೊಡಿಸಬೇಕಾಗಿದೆ ನೀನು ನಿನ್ನ ತವರು ಮನೆಯಿಂದ 5 ಲಕ್ಷ ರೂಪಾಯಿ ಹಣ ತೆಗೆದುಕೊಂಡು ಬಾ”  ಅಂತಾ ಎಲ್ಲರೂ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಾ ಬಂದಿದ್ದ ಬಗ್ಗೆ ನನ್ನ ಮಗಳು ಊರಿಗೆ ಬಂದಾಗ ನನಗೂ ನನ್ನ ಹೆಂಡಿತಿಯಾದ ಮಹಾಂತಮ್ಮ, ಹಾಗು ನನ್ನ ಮಕ್ಕಳಾದ ಶರಣಗೌಡ, ನಾನಾಗೌಡ ಹೀಗೆಲ್ಲರ ಎದುರಿಗೆ ನೆಡೆದ ಘಟನೆಯ ಬಗ್ಗೆ ಹೇಳುತ್ತಿದ್ದಾಗ ನಾನು ನನ್ನ ಮಗಳಿಗೆ ಈಗಾಗಲೆ ಎಲ್ಲ ಮಕ್ಕಳಿಗೆ ಮದುವೆ ಮಾಡಿಕೊಟ್ಟು ಖಾಲಿಯಾಗಿದ್ದೆನೆ ಅವರೂ ಕೆಳಿದಷ್ಟು ಹಣ ನಾನು ಎಲ್ಲಿಂದ ತಂದು ಕೊಡಲಿ ಅಂತಾ ಸಮಾಧಾನ ಪಡಿಸಿದೆನು ಈ ಬಗ್ಗೆ ಕೊಣಸಿರಸಗಿ ಗ್ರಾಮದ ಚೆಂದಪ್ಪಗೌಡ ಹಾಗು ಅರಳಗುಂಡಗಿ ಗ್ರಾಮದ ಹುಲಿಕಂಠರಾಯಗೌಡ ಮತ್ತು ನಾನು, ನನ್ನ ಮಗಳಾದ ದೇವಕ್ಕಿ ಹಿಗೇಲ್ಲರೂ ಕೂಡಿಕೊಂಡು ಬೀಗರ ಮನೆಗೆ ಹೋಗಿ ಆಕೆಯ ಗಂಡ ಹಾಗು ಮನೆಯವರೆಲ್ಲರಿಗೂ ಇನ್ನು ಮುಂದೆ ದೇವಕ್ಕಿ ಇವಳಿಗೆ ಸರಿಯಾಗಿ ನೆಡೆಸಿಕೊಂಡು ಹೋಗುವಂತೆ ತಿಳುವಳಿಕೆ ಹೇಳಿ ನನ್ನ ಮಗಳಿಗೆ ಅಲ್ಲಿಯೇ ಬಿಟ್ಟು ಬಂದಿರುತ್ತೆವೆ. ದಿನಾಂಕ 23-03-2017 ರಂದು ನಾನು ನನ್ನ ಹೆಂಡತಿ ಮಕ್ಕಳು  ಮದ್ಯಾನ 2 ಗಂಟೆಗೆ ಮನೆಯಲ್ಲಿದ್ದಾಗ, ನಮ್ಮ ಅಣ್ಣ ತಮ್ಮಕೀಯಾ ಬಾಪುಗೌಡ ತಂದೆ ಸಾಯಬಣ್ಣಗೌಡ ಪೊಲೀಸ್ ಪಾಟೀಲ್ ಇತನು ನಮ್ಮ ಮನಗೆ ಬಂದು ಹೇಳಿದ್ದೆನೆಂದರೆ ನಿಮ್ಮ ಮಗಳಾದ ದೇವಕ್ಕಿ ಇವಳು ಶರಣಗೌಡ ಹಿರೇಗೌಡರ ಇವರ ಹೊಲದ ಬಾವಿಯಲ್ಲಿ ಬಿದ್ದಿರುತ್ತಾಳೆ ಅಂತಾ ಹೇಳಿದ ಕೂಡಲೆ ಗಾಭರಿಗೊಂಡು ನಾನು, ನನ್ನ ಹೆಂಡಿತಿಯಾದ ಮಹಾಂತಮ್ಮ, ಹಾಗು ನನ್ನ ಮಗನಾದ ನಾನಾಗೌಡ ಮತ್ತು ನನ್ನ ಅಣ್ಣತಮ್ಮಕೀಯಾ ಶರಣಗೌಡ, ಊರಿನ ಜನರೊಂದಿಗೆ ಅರಳಗುಂಡಗಿ ಗ್ರಾಮದ ಶರಣಗೌಡ ಹಿರೇಗೌಡ ಇವರ ಹೊಲದ ಬಾವಿ ಹತ್ತಿರ ಹೋಗಿ ನೋಡಲಾಗಿ ಬಾವಿಯ ನೀರಲ್ಲಿ ಶವವು ಮುಳಿಗಿದ್ದು ನನ್ನ ಮಗನಾದ ನಾನಾಗೌಡ ಹಾಗು ಕೊಣಶಿರಸಗಿ ಗ್ರಾಮದ ಮಡಿವಾಳಪ್ಪಗೌಡ ತಂದೆ ಚೆಂದಪ್ಪಗೌಡ ಮಾಲಿ ಪಾಟೀಲ್ ಇಬ್ಬರು ಕೂಡಿಕೊಂಡು ಬಾವಿಯಿಂದ ಶವವನ್ನು ಮೇಲೆ ತಂದು ಹಾಕಿದರು. ಆಗ ನಾನು ನೋಡಲಾಗಿ ನನ್ನ ಮಗಳಿಗೆ ಮುಖಕ್ಕೆ ಗುದ್ದಿದ್ದರಿಂದ ಅಲ್ಲಲ್ಲಿ ಗಾಯಗಳಾಗಿ ಹಲ್ಲಿನಿಂದ ರಕ್ತ ಸೊರುತ್ತಿತ್ತು, ಕೀವಿಯಲ್ಲಿ ರಕ್ತ ಹೆಪ್ಪು ಗಟ್ಟಿತ್ತು, ತೆಲೆಯ ಮೇಲೆ ಭಾವು ಬಂದಿತ್ತು. ನನ್ನ ಮಗಳಿಗೆ ಮೇಲ್ಕಂಡ 1) ಮಲ್ಲಿನಾಥ @ ಮಲ್ಲು ತಂದೆ ಶೆಂಕ್ರೆಪ್ಪ ಮುದಬಸಪ್ಪಗೋಳ, 2) ಭಾವ ಧರೆಪ್ಪ ತಂದೆ ಶೆಂಕ್ರೆಪ್ಪ ಮುದಬಸಪ್ಪಗೋಳ, 3) ಮಾವ ಶೆಂಕ್ರೆಪ್ಪ ತಂದೆ ಧರೆಪ್ಪ ಮುದಬಸಪ್ಪಗೋಳ, 4) ಅತ್ತೆ ಕಸ್ತೂರಿಬಾಯಿ ಗಂಡ ಶೇಂಕ್ರೆಪ್ಪ ಮುದಬಸಪ್ಪಗೋಳ, 5) ನೇಗೆಣಿ ಮಲ್ಲಮ್ಮ ಗಂಡ ಧರೆಪ್ಪ ಮುದಬಸಪ್ಪ ಗೋಳ ಹೀಗೆಲ್ಲರೂ ವರದಕ್ಷಣೆ ರೂಪದಲ್ಲಿ ಹಣ ತರುವಂತೆ ಪೀಡಿಸಿ ನನ್ನ ಮಗಳಿಗೆ ಈಜು ಬರುತ್ತಿದ್ದು ಅವರಿಗೆ ಗೊತ್ತಿದ್ದರಿಂದ ಅವಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟು ಕೈಯಿಂದ ಮತ್ತು ಯಾವುದೋ ವಸ್ತುವಿನಿಂದ ಎಲ್ಲಿಯೋ ಹೊಡೆದು ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಬಾವಿಯಲ್ಲಿ ಒಗೆದಿರುತ್ತಾರೆ. ಸದರಿ ಘಟನೆಯು ಬೆಳ್ಳಿಗ್ಗೆ 10 ಗಂಟೆಯಿಂದ 11 ಗಂಟೆಯ ಅವಧಿಯಲ್ಲಿ ಆಗಿರಬಹುದು.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.