POLICE BHAVAN KALABURAGI

POLICE BHAVAN KALABURAGI

20 September 2018

KALABURAGI DISTRICT REPORTED CRIMES

ಅಪಹರಣ ಮಾಡಿದ ಪ್ರಕರಣ :
ಜೇವರಗಿ ಠಾಣೆ : ಶ್ರೀ ಮಡಿವಾಳಯ್ಯ ತಂದೆ ನಿಂಗಯ್ಯ ನಂದೂರಮಠ  ಸಾಃ ಕೊಳಕೂರ ತಾಃ ಜೇವರಗಿ  ರವರ ಅಪ್ರಾಪ್ತ ವಯಸ್ಸಿನ ಮಗಳಾದ ಭಾಗ್ಯಶ್ರೀ ಇವಳು ನೀರಿಗೆ ಹೋದಾಗ ಮತ್ತು ಬಟ್ಟೆ ತೊಳೆಯಲು ಒಬ್ಬಳೆ ಹೋಗುವಾಗ ದಾರಿಯಲ್ಲಿ ನಮ್ಮೂರ ಸಲೀಮ ತಂದೆ ಕುತ್ಬುದ್ದೀನ ಮುಲ್ಲಾ ಇತನು ನನ್ನ ಮಗಳಿಗೆ ನೋಡಿ ಸೀಳ್ಳೆ ಹೊಡೆಯುವುದು ಕೈ ಸನ್ನೆ ಮಾಡಿ ಕರೆದು ಚುಡಾಯಿಸುತ್ತಿದ್ದ ವಿಷಯ ನನ್ನ ಮಗಳು ಮನೆಯಲ್ಲಿ ಹೇಳಿದಾಗ  ನಾನು ಸಲೀಮ ಇತನ ಮನೆಗೆ ಹೋಗಿ ಅವನಿಗೆ ಮತ್ತು ಅವನ ತಂದೆ-ತಾಯಿಯವರಿಗೆ ತಿಳಿಸಿ ಬುದ್ದಿ ಮಾತು ಹೇಳಿ ಬಂದಿರುತ್ತೆನೆ. ಆದರೂ ಕೂಡಾ ಸಲೀಮ ಇತನು ನಮ್ಮ ಮನೆಯ ಮುಂದೆ ಬಂದು ನಿಲ್ಲುವುದು ನಮ್ಮ ಮನೆಯ ಕಡೆಗೆ ಓಡಾಡುವುದು ಮಾಡುತ್ತಾ ಮತ್ತು ನನ್ನ ಮಗಳಿಗೆ ನೋಡಿ ಸಿಳ್ಳೆ ಹೊಡೆಯುವುದು ಮಾಡುತ್ತಾ ಬಂದಿರುತ್ತಾನೆ ನಾವು ಮರ್ಯಾದೆಗೆ ಅಂಜೀ ಸುಮ್ಮನಿದ್ದೆವು ದಿನಾಂಕ 25.08.2018 ರಂದು ಸಾಯಂಕಾಲ 6.00 ಗಂಟೆಯ ಸುಮಾರಿಗೆ  ನನ್ನ ಮಗಳಾದ ಬಾಗ್ಯಶ್ರೀ ಇವಳು  ಬರ್ಹಿದೇಶಕ್ಕೆ ಹೋಗುತ್ತೆನೆಂದು ಹೇಳಿ ಮನೆಯಿಂದ ಹೋದವಳು ಬಹಳ ಸಮಯ ಆದರೂ ಅವಳು ಮರಳಿ ಮನೆಗೆ ಬರದೆ ಇದ್ದುದರಿಂದ ನನ್ನ ಹೆಂಡತಿ ಜಗದೇವಿ ಇವಳು ನಮ್ಮೂರಲ್ಲಿ ಹೆಣ್ಣುಮಕ್ಕಳು  ಬಹೀರ್ದೇಶಕ್ಕೆ ಹೋಗುವ ಸ್ಥಳದ ಕಡೆಗೆ ಹೋಗಿ ನೋಡಿ ಬಂದು ಬಾಗ್ಯಶ್ರೀ ಅಲ್ಲಿ ಎಲ್ಲಿಯೂ ಕಾಣಿಸುತ್ತಿಲ್ಲಾ ಎಂದು ಹೇಳಿದಾಗ ನಮ್ಮ ಮಗಳು ಸಿಗದಕ್ಕೆ ನಾನು ಮತ್ತು ನನ್ನ ತಮ್ಮ ಶಿವಶಂಕರಯ್ಯ ನಂದೂರ ಮಠ ಇಬ್ಬರೂ ಕೂಡಿ ನನ್ನ ಮಗಳ ಬಗ್ಗೆ ಅಕ್ಕಪಕ್ಕದ ಮನೆಯವರಿಗೆ ಅವಳ ಗೆಳತಿಯರ ಮನೆಗೆ ಹೋಗಿ ಹುಡುಕಾಣಿದೇವು ಮತ್ತು ಊರಲ್ಲಿ ಹುಡುಕುತ್ತಾ ನಮ್ಮೂರ ಬಸನಿಲ್ದಾಣದಲ್ಲಿ  ಇದ್ದಾಗ ನಮ್ಮ ಸಂಭಂಧಿಕರಾದ ಮಲ್ಲಯ್ಯ ತಂದೆ ಅಂಭರೇಶ ಹಿರೇಮಠ ಇತನು ಎದುರು ಸಿಕ್ಕಾಗ ಅವನಿಗೆ ವಿಷಯ ತಿಳಿಸಿದೇನು. ಮಲ್ಲಯ್ಯ ಇತನು  ಹೇಳಿದ್ದೇನೆಂದರೆ  ಸಾಯಂಕಾಲ 6.30 ಗಂಟೆಯ ಸುಮಾರಿಗೆ ನಮ್ಮೂರ ಸಲೀಮ ತಂದೆ ಕುತ್ಬುದ್ದೀನ ಮುಲ್ಲಾ ಇತನು ಬಾಗ್ಯಶ್ರೀ ಇವಳಿಗೆ ಒಂದು ಮೊಟಾರ್ ಸೈಕಲ ಮೇಲೆ ಕೂಡಿಸಿಕೊಂಡು  ಜೇವರಗಿ ಕಡೆಗೆ ಹೋಗುತ್ತಿದ್ದನು ನಮ್ಮೂರ ಹೊರವಲಯದ ರೋಡಿನಲ್ಲಿ ನೋಡಿರುತ್ತೆನೆ ಬಾಗ್ಯಶ್ರೀ ಚಿರಾಡುತ್ತಾ ಇದ್ದಳು ನಾನು ಕೈ ಮಾಡಿದರೂ  ಮೊಟಾರ್ ಸೈಕಲ ನಿಲ್ಲಿಸದೆ ಹೋಗಿರುತ್ತಾನೆ. ಮೊಟಾರ್ ಸೈಕಲ ನಂಬರ ಸರಿಯಾಗಿ ಕಂಡಿರುವುದಿಲ್ಲಾ ಅದರಿಂದ ಮೊಟಾರ್ ಸೈಕಲ ನಂಬರ ಗೊತ್ತಾಗಿರುವುದಿಲ್ಲಾ  ಎಂದು  ಹೇಳಿದನು.  ನಂತರ  ನಾವು ಸಲೀಮ ಇತನ ಮನೆಗೆ ಹೋಗಿ ಅವರ ತಂದೆ ತಾಯಿಯವರಿಗೆ ವಿಷಯ ತಿಳಿಸಿದಾಗ  ಅವರು ನಮಗೇನು ಗೊತ್ತಿರುವುದಿಲ್ಲಾ ಮತ್ತು ಸಲೀಮ ಮನೆಯಲ್ಲಿ ಇರುವುದಿಲ್ಲಾ ಎಂಧು ಹೇಳಿರುತ್ತಾರೆ. ನಾವು ನಮ್ಮ ಮಗಳ ಬಗ್ಗೆ ಹುಡುಕಾಡಿದರೂ  ಇಲ್ಲಿಯವರೆಗೆ ಸಿಕ್ಕಿರುವುದಿಲ್ಲಾ  ನಾನು ಮರ್ಯಾದೆಗೆ ಅಂಜಿ ಮತ್ತು ನಮ್ಮ ಮಗಳ ಮುಂದಿನ ಭವಿಷ್ಯದ  ಬಗ್ಗೆ ಯೊಚನೆ ಮಾಡಿ  ಸುಮ್ಮನಿದ್ದು,  ಇಲ್ಲಿಯವರೆಗೆ ನಮ್ಮ ಮಗಳಿಗೆ  ಹುಡುಕಾಡಿದರೂ ನಮ್ಮ ಮಗಳು ಸಿಕ್ಕಿರುವುದಿಲ್ಲಾ ನಮೂದಿಸಿದ ಸಲೀಮ ಮುಲ್ಲಾ ಇತನು ಅಪ್ರಾಪ್ತ ವಯಸ್ಸಿನ ನನ್ನ ಮಗಳಾದ ಭಾಗ್ಯಶ್ರೀ ಇವಳಿಗೆ  ಚುಡಾಯಿಸುತ್ತಾ ಬಂದು ದಿನಾಂಕ 25.08.2018 ರಂದು ಸಾಯಂಕಾಲ 6.00 ಗಂಟೆಯ ಸುಮಾರಿಗೆ ನಮ್ಮೂರಲ್ಲಿ ಹೆಣ್ಣುಮಕ್ಕಳು ಬಹಿರ್ದೆಶಕ್ಕೆ ಹೋಗುವ ಸ್ಥಳದಿಂದ ಜಬರದಸ್ತಿಯಿಂದ ತನ್ನ ಮೊಟಾರ್ ಸೈಕಲ ಮೇಲೆ ಕೂಡಿಸಿಕೊಂಡು ಅಪಹರಿಸಿಕೊಂಡು ಹೋಗಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ  ಶಿವಪ್ಪ ತಂದೆ ಮಲಕಾರಿ ಪೂಜಾರಿ ಸಾ: ಅಫಜಲಪೂರ ರವರು ದಿನಾಂಕ  15-09-2018 ರಂದು ಸಾಯಂಕಾಲ 7:00 ಗಂಟೆಗೆ ಫೀರ್ಯಾದಿದಾರನು ಅಮೋಘಸಿದ್ದ ಗುಡಿಯ ಹತ್ತಿರ ನಿಂತಾಗ ಆರೋಪಿತನಾದ ಮಲ್ಲಪ್ಪ ಹುಲ್ಲೂರ ಇತನು ಮೋಟಾರ ಸೈಕಲ್ ತಂದು ಹಾಯಿಸಿದ್ದು ಆಗ ಫೀರ್ಯಾದಿ ಯಾಕೆ ಹಾಯಿಸಿದ್ದಿ ಅಂತಾ ಕೇಳಿದಕ್ಕೆ ಆರೋಪಿತನು ಫೀರ್ಯಾದಿಗೆ ಪುರಸಭೆ ಚುನಾವಣೆಯಲ್ಲಿ ಸೋತರು ಇನ್ನು ನಿಮಗೆ ಬುದ್ದಿ ಬಂದಿಲ್ಲ  ಅಂತಾ ಅಂದು ಅವಾಚ್ಯಶಬ್ದಗಳಿಂದ ಬೈದಿದ್ದು ಅದಕ್ಕೆ ಫಿರ್ಯಾದಿಯು ಯಾಕೆ ಬೈಯುತ್ತಿ ಅಂತಾ ಕೇಳಿದಕ್ಕೆ ಆರೋಪಿತರೆಲ್ಲರೂ ಕೂಡಿಕೊಂಡು ಅವಾಚ್ಯಶಬ್ದಗಳಿಂದ ಬೈದು  ಕಲ್ಲು, ಬಡಿಗೆಗಳಿಂದ ಹೊಡೆ ಬಡೆ ಮಾಡಿ ಜೀವ ಭಯ ಪಡೆಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಟಾಣೆಯಲ್ಲಿ ಪ್ರಕರಣ ದಾಖಲಾಗಿದೆ.