POLICE BHAVAN KALABURAGI

POLICE BHAVAN KALABURAGI

28 September 2012

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ: ವಿರೇಶ ತಂದೆ ಅಮೃತರಾವ ಪಂಗರಗಿ ಉದ್ಯೋಗ: ವ್ಯಾಪಾರ ಸಾ: ಮನೆ ನಂ-1/730 ಸಿದ್ದೇಶ್ವರ ಕಾಲೋನಿ ಸೇಡಂ ರೋಡ ಗುಲಬರ್ಗಾರವರು  ನನ್ನ  ಟಿಪ್ಪರ ನಂ-ಕೆಎ 32 ಬಿ-2812 ವಾಹನವನ್ನು  ದಿನಾಲು  ಸಿದ್ದೇಶ್ವರ ಕಾಲೋನಿಯಲ್ಲಿಯ ಮನೆ ಮುಂದೆ ನಿಲ್ಲಿಸುತ್ತಿದ್ದು, ಎಂದಿನಂತೆ ದಿನಾಂಕ 25-09-2012 ರಂದು ರಾತ್ರಿ 9-00 ಗಂಟೆಗೆ ವಾಹನದ ಚಾಲಕ ಬಸವರಾಜ ತಂದೆ ಸಾಯಬಣ್ಣ ಇತನು ನಮ್ಮ ಟಿಪ್ಪರನ್ನು ನಮ್ಮ ಮನೆಯ ಮುಂದೆ ನಿಲ್ಲಿಸಿ ಮನಗೆ ಹೋಗಿರುತ್ತಾನೆ. ನಾವು ಊಟ ಮಾಡಿಕೊಂಡು ಮಲಗಿಕೊಂಡಿರುತ್ತೆವೆ, ದಿನಾಂಕ 26-09-2012 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ನೋಡಲಾಗಿ ಮನೆಯ ಮುಂದೆ ನಿಲ್ಲಸಿದ ನಮ್ಮ ಟಿಪ್ಪರ ನಂ-ಕೆಎ 32 ಬಿ 2812 ನೇದ್ದು ಕಾಣಲಿಲ್ಲ ಆಗ ನಾನು ಗಾಬರಿಗೊಂಡು ನಮ್ಮ ಚಾಲಕ ಬಸವರಾಜ ಇತನಿಗೆ ಫೋನ್ ಮಾಡಿ ವಿಚಾರಿಸಲಾಗಿ ಅವನು ನಾನು ತೆಗೆದುಕೊಂಡು ಹೋಗಿರುವದಿಲ್ಲ ಅಂತಾ ತಿಳಿಸದನು.  ಸದರಿ ಟಿಪ್ಪರ ನಂ-ಕೆಎ-32 ಬಿ-2812 ವಾಹನವನ್ನು ಯಾರೋ ಕಳ್ಳರು ಮನೆಯ ಮುಂದೆ  ನಿಲ್ಲಿಸಿದ್ದನ್ನು ರಾತ್ರಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 220/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಸ್ಟೇಶನ ಬಜಾರ ಪೊಲೀಸ್ ಠಾಣೆ: ಶ್ರೀ ವಿಜಯಕುಮಾರ ತಂದೆ ಚಂದಾರಾವ ಪಾಟೀಲ ವಯ|| 60 ವರ್ಷ ಉ|| ನಿವೃತ್ತ ಸರಕಾರಿ ನೌಕರ ಸಾ|| ಸೇಡಂ ರವರು ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದೆನೆಂದರೆ, ದಿನಾಂಕ:18/03/2012 ರಂದು ಸ್ಟೇಷನ ಬಜಾರ ರಸ್ತೆಯಲ್ಲಿರುವ ಕಾಳಿಂಗ ಲಾಡ್ಜ ರೂಮ ನಂ: 107 ರಲ್ಲಿದ್ದಾಗ  ಬೆಳಿಗ್ಗೆ 9-00 ಸುಮಾರಿಗೆ ಮಾದೇವಪ್ಪ ಬಿರಾದಾರ ಲಾರಾ ಟೇಲರ್ ಗುಲಬರ್ಗಾ ಸಂಗಡ ಮೂರು ಜನರು ಕೂಡಿಕೊಂಡು ಮಾರಾಕಾಸ್ತ್ರಗಳನ್ನು ಹಿಡಿದುಕೊಂಡು ಪ್ಲಾಟ ನಂ: 49 ನೇಧ್ದನ್ನು ಬೇರೆಯವರಿಗೆ ಮಾರಿದಿಯ್ಯಾ ಅಂತಾ ಹೊಡೆಬಡೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿ ಕಾರಿನಲ್ಲಿ ಹಾಕಿಕೊಂಡು ಪಿಸ್ತೂಲ್ ದಿಂದ ಜೀವದ ಬೆದರಿಕೆ ಹಾಕಿ ಖಾಲಿ ಪೇಪರಗಳ ಮೇಲೆ ರುಜು ಪಡೆದು ಮರಳಿ ಕಾಳಿಂಗ ಲಾಡ್ಜ ಹತ್ತಿರ ತಂದು ಬಿಟ್ಟು ಹೋಗಿದ್ದಾರೆ ಅಂತಾ ಮಾನ್ಯ ನ್ಯಾಯಾಲಯದ  ಆದೇಶದ ಮೇರೆಗೆ ಠಾಣೆ ಗುನ್ನೆ ನಂ 123/2012 ಕಲಂ 147,148,473,307,348,363,468,506,34,ಐ,ಪಿ.ಸಿ & 25(3) ಇಂಡಿಯನ್‌ ಆರ್ಮ್ಸ ಆಕ್ಟ್  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ : ದಿನಾಂಕ:28/09/2012 ರಂದು  ಮಧ್ಯರಾತ್ರಿ 2-30 ಗಂಟೆಯಿಂದ ಬೆಳಗಿನ ಜಾವ 5-00 ಗಂಟೆಯ ಅವದಿಯಲ್ಲಿ ರಾಜಹಂಸ್ ಬಸ್ ನಂ ಕೆ.ಎ-25-ಎಫ-2595 ನೇದ್ದರ ಲಗೇಜ ಇಡುವ ಸ್ಥಳದಲ್ಲಿ ವಿ.ಐ.ಪಿ ಸೂಟಕೇಸದಲ್ಲಿ 30 ಗ್ರಾಂ ಬಂಗಾರದ ಚೈನ್ ಅ.ಕಿ-75,000/- ರೂ,  5 ಸೀರೆಗಳು 8,000/- ರೂ,  ಪ್ಯಾಂಟ ಶರ್ಟ ಅ.ಕಿ 2000/- ರೂ ಹೀಗೆ ಒಟ್ಟು 85 ಸಾವಿರ ಬೇಲೆ ಬಾಳುವ ಮೌಲ್ಯದ್ದು ವಸ್ತುಗಳು ಸೂಟಕೇಸದಲ್ಲಿಟ್ಟಿದ್ದು ಜೇವರ್ಗಿ ಬಸ್ಸ  ನಿಲ್ದಾಣದಲ್ಲಿ ನಿಂತಾಗ ಯಾರೋ ಕಳ್ಳರು ಸೂಟಕೇಸ ಸಮೇತ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ: 146/12 ಕಲಂ 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ.ಸಂಜೋಗ ಕೆ ರಾಠಿ, ಸಾ|| ಪ್ಲಾಟ ನಂ:6 ಗಜಾನನ ಕುಂಜ, ಆನಂದ ನಗರ, ಎಸ್.ಬಿ ಕಾಲೇಜ ರೋಡ ಗುಲಬರ್ಗಾ ರವರು ನಾನು ದಿನಾಂಕ 27-09-2012  ರಂದು ನಗರದ ಸುಪರ ಮಾರ್ಕೆಟ ಬಡಾವಣೆ ಕಾಮತ ಹೊಟೇಲ ಆಟೋ ಸ್ಟ್ಯಾಂಡ ಹತ್ತಿರ ನನ್ನ ಜೇಬಿನಲ್ಲಿದ್ದ ಒಂದು ಬಿ-9300 ಬ್ಲಾಕಬೇರಿ ಸ್ಮಾರ್ಟ ಪೋನ್ ಅ||ಕಿ|| 15,046/- ಬೆಲೆಬಾಳುವ ಮೊಬೈಲ ಪೋನನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 109/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ : ಶ್ರೀ ಚನ್ನವೀರಪ್ಪ ತಂದೆ ಕಲ್ಲಪ್ಪ ಗುಮ್ಮಾ  ಉ: ವಕೀಲ ವೃತ್ತಿ ಸಾ: ಕಲ್ಯಾಣ ನಗರ  ಗುಲಬರ್ಗಾರವರು ನನ್ನ ತಾಯಿಯಾದ ರೇವಮ್ಮ ರವರು  ದಿನಾಂಕ:27-09-2012 ರಂದು ಸಾಯಂಕಾಲ 4-00 ಗಂಟೆಯ ಸುಮಾರಿಗೆ ಸಿದ್ದಿ ಪಾಷಾ ದರ್ಗಾಕ್ಕೆ ಬಂದು ದರ್ಶನ ಮಾಡಿಕೊಂಡು ಮರಳಿ ಮನೆಗೆ ಬರುತ್ತಿದ್ದಾಗ ಮೊಟಾರ ಸೈಕಲ್ ನಂ: ಕೆಎ 32 ಡಬ್ಲೂ 2848 ನೇದ್ದರ ಚಾಲಕ ರಿಜ್ವಾನ ಈತನು ತನ್ನ ಮೋಟಾರ ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಹಳೆ ಎಸ್.ಪಿ.ಆಫೀಸ್ ಕಡೆಯಿಂದ ಚಲಾಯಿಸಿಕೊಂಡು ಬಂದು ನನ್ನ ತಾಯಿಗೆ ಹಿಂದಿನಿಂದ ಡಿಕ್ಕಿ ಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 100/2012 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಶೇಕ ಫಯಾಜ ತಮದೆ ಶೇಕ ಮಹೆಬೂಬ ವಕ್ಯಾನಿಕ ಕೆಲಸ ಸಾ: ತಾಜ ನಗರ ಮುಸ್ಲಿಂ ಸಂಘ ಎಕಖಾನ ಮಜೀದ ಹಿಮದೆ ಗುಲಬರ್ಗಾ ರವರು ನಾನು ಮತ್ತು ನನ್ನ ಗೆಳೆಯರಾದ ಮೋಸಿನ, ವಸೀಮ ರವರು ಕೂಡಿಕೊಂಡು ದಿನಾಂಕ 27-09-2012 ರಂದು ರಾತ್ರಿ 8-15 ಗಂಟೆ ಸುಮಾರಿಗೆ ಮೆಕ್ಯಾನಿಕ ಕೆಲಸ ಮುಗಿಸಿಕೊಂಡು ಮನೆಯ ಕಡೆಗೆ  ಮಾತಾಡುತ್ತಾ  ಬರುತ್ತಿರುವಾಗ ಎಡಕ್ಕೆ ಮೋಸಿನ ಮತ್ತು ವಸೀಮ ಇದ್ದರು.  ರೋಡ ಎಡ ಬದಿಯಿಂದ ನಾನು ನನ್ನ  ಸೈಕಲ ಹಿಡಿದುಕೊಂಡು ಹೊರಟಾಗ  ಹಿಂದಿನಿಂದ ಅಂದರೆ ಹುಮನಾಬಾದ ರಿಂಗ ರೋಡ ಕಡೆಯಿಂದ ಒಬ್ಬ ಮೋಟಾರ ಸೈಕಲ ಸವಾರನು ಅತಿವೇಗ ಮತ್ತು ಅಲಕ್ಷತನ ನಡೆಸುತ್ತಾಬಂದು  ನನಗೆ  ಮತ್ತು ನನ್ನ ಸೈಕಲಿಗೆ ಡಿಕ್ಕಿ ಹೊಡೆದು  ಸ್ಥಳದಲ್ಲಿ ಮೋಟಾರ ಸೈಕಲ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 310/12 ಕಲಂ 279 337  ಐಪಿಸಿ  ಸಂ. 187 ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.