POLICE BHAVAN KALABURAGI

POLICE BHAVAN KALABURAGI

02 April 2013

GULBARGA DISTRICT


::  ಪೊಲೀಸ್ ದ್ವಜಾ ದಿನಾಚರಣೆ::

ಗುಲಬರ್ಗಾ ಜಿಲ್ಲಾ ಸಶಸ್ತ್ರ ಕವಾಯತ್ ಮೈದಾನದಲ್ಲಿ ದಿನಾಂಕ:02-04-2013 ರಂದು ಬೆಳಿಗ್ಗೆ 8-00 ಗಂಟೆಗೆ ಹಮ್ಮಿಕೊಂಡಿದ್ದ ಪೊಲೀಸ್ ದ್ವಜಾ ದಿನಾಚರಣೆ ಕಾರ್ಯಕ್ರಮಕ್ಕೆ ಮಾನ್ಯ ಶ್ರೀ ಮಹಮದ ವಜೀರ್ ಅಹಮದ ಪೊಲೀಸ್ ಮಹಾ ನಿರೀಕ್ಷಕರು ಈಶಾನ್ಯ ವಲಯ ಗುಲಬರ್ಗಾ ರವರು ಅಧ್ಯಕ್ಷತೆ ಹೊಂದಿದ್ದರು. ಪೊಲೀಸ್ ದ್ವಜಾ ದಿನಾಚರಣೆ ಕಾರ್ಯಕ್ರಮಕ್ಕೆ ಶ್ರೀ ವೀರಣ್ಣಾ ಕುಂಬಾರ ನಿವೃತ್ತ ಪಿ.ಎಸ.ಐ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪರೇಡ್ ವಂದನೆ ಸ್ವೀಕರಿಸಿದರು. ಮಾನ್ಯ ಐ.ಜಿ.ಪಿ ಸಾಹೇಬರು ಸಿಬ್ಬಂಧಿಯವರನ್ನು ಉದ್ದೇಶಿಸಿ ಮಾತನಾಡಿ ಪೊಲೀಸ್ ಸಿಬ್ಬಂದಿಯವರು ತಮ್ಮ ಆರೋಗ್ಯದ ಕಡೆ ಗಮನ ಹರಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಕರೆ ನೀಡಿದರು, ಮಾನ್ಯ ಶ್ರೀ,ಎನ್.ಸತೀಷಕುಮಾರ ಐ.ಪಿ.ಎಸ್,.ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು  ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಅಪರಾದದಲ್ಲಿ ನೊಂದವರಿಗೆ ಸಹಾಯ ಮತ್ತು ಸಹಾನುಬೂತಿ ವ್ಯಕ್ತ ಪಡಿಸುವಂತೆ ಕರೆ ನೀಡಿದರು. ಹಾಗು ಪೊಲೀಸ್ ಸಿಬ್ಬಂದಿಯವರಿಗೆ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸೂಚಿಸಿ,  ಸಿಬ್ಬಂದಿಯವರು ತಮ್ಮ ಕುಟುಂಬದ ಕಡೆ ಮತ್ತು ತಮ್ಮ ಮಕ್ಕಳ ವಿಧ್ಯಾಭ್ಯಾಸದ ಕಡೆ ಗಮನ ಹರಿಸುವಂತೆ ಸಲಹೆ ನೀಡಿದರು. ಹಾಗೂ ಜಿಲ್ಲೆಯ ವಿವಿಧ ಕಡೆಗಳಿಂದ ಈ ಕಾರ್ಯಕ್ರಮದಲ್ಲಿ ಹಾಜರಾಗಿರುವವ ನಿವೃತ್ತ ಪೊಲೀಸ್ ಸಿಬ್ಬಂದಿಯವರಿಗೆ ಅಭಿನಂದನೆ ಸಲ್ಲಿಸಿದರು.  ಮಾನ್ಯ ಶ್ರೀ ಕಾಶಿನಾಥ ತಳಕೇರಿ, ಅಪರ್ ಪೊಲೀಸ್ ಅಧೀಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, 

GULBARGA DISTRICT REPORTED CRIMES

ಅಪಘಾತ ಪ್ರಕರಣ:
ವಾಡಿ ಪೊಲೀಸ್ ಠಾಣೆ: ಶ್ರೀ, ಮೋಹನ ತಂದೆ ಮೇಘು ಚವ್ಹಾಣ ವಯಾ||| 35 ಸಾ|| ಬಾಚವಾರ ಹೊಸ ತಾಂಡಾ ದಿನಾಂಕ 01-04-2013 ರಂದು ಮಧ್ಯಾಹ್ನ 2-00  ಗಂಟೆಯ ಸುಮಾರಿಗೆ ಮೋತಿಲಾಲ ಇತನು ಮೊಟರ ಸೈಕಲ ನಂ ಕೆಎ-33 ಎಲ್- 4636 ನೇದ್ದರ ಮೇಲೆ ಕೀಶನ ತಂದೆ ಯಮಕಾ ಚೌವ್ಹಾಣ ಇತನೊಂದಿಗೆ ಯರಗೊಳದಿಂದ ತಮ್ಮ ಊರಿಗೆ ಹೊಗುವ ಕಾಲಕ್ಕೆ ಲಕ್ಷ್ಮಿ ಗುಡಿ ಸಮೀಪ ರೋಡಿಗೆ ಮೋತಿಲಾಲ ಇತನು ಮೋಟರ ಸೈಕಲನ್ನು  ಅತೀವೇಗ ಹಾಗು ಅಲಕ್ಷತನದಿಂದ ನಡೆಯಿಸಿ ರೋಡಿನ ಎಡಗಡೆ ಇರುವ ಗಿಡಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಮೋತಿಲಾಲ ಇತನಿಗೆ ಬಲ ತಲೆಯ ಹತ್ತಿರ ಬಡೆದು ಭಾರಿ ರಕ್ತಗಾಯವಾಗಿರುತ್ತದೆ. ಹಾಗೂ ಕೀಶನ ಇತನಿಹೂ ಸಹ ಬಲಗೈ ಹಾಗು ಬಲಗಾಲಿಗೆ ಭಾರಿ ರಕ್ತಗಾಯವಾಗಿರುತ್ತದೆ. ಉಪಚಾರ ಕುರಿತು ಯಾದಗಿರಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಉಪಚಾರ ಹೊಂದುತ್ತಾ ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಮೋತಿಲಾಲ ಇತನು ಮೃತ ಪಟ್ಟಿರುತ್ತಾನೆ ಅಂತಾ ಮೋಹನ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:52/2013 ಕಲಂ 279,338,304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಅಪಘಾತ ಪ್ರಕರಣ
ಸಂಚಾರಿ ಪೊಲೀಸ್ ಠಾಣೆ: ಕೀಶನ ರಾವ ತಂದೆ ನರಸಿಂಗ ರಾವ ಪೂಕಾಳೆ ಸಾ|| ಆದರ್ಶ ನಗರ ಗುಲಬರ್ಗಾ ರವರು ದಿನಾಂಕ:01-04-2013 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ನಾನು ಮದನ ಟಾಕೀಜದಿಂದ ಚೌಕ ಸರ್ಕಲ ಕಡೆ ಹೋಗುವ ಕುರಿತು ನಂದಿ ವೈನ ಶಾಪ ಎದರುಗಡೆಯ ರಸ್ತೆ ದಾಟುತ್ತಿದ್ದಾಗ ಕಾರ ನಂ:ಕೆಎ-32/ 0966 ನೇದ್ದರ ಚಾಲಕನು ತನ್ನ ಕಾರನ್ನು ಚೌಕ ಸರ್ಕಲ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನ್ನ  ಬಲ ಗಾಲಿಗೆ ಡಿಕ್ಕಿ ಪಡಿಸಿ  ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಕೀಶನ ರಾವ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ 21/2013 ಕಲಂ 279, 337 ಐ.ಪಿ.ಸಿ, ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,