POLICE BHAVAN KALABURAGI

POLICE BHAVAN KALABURAGI

07 September 2016

Kalaburagi District Reported Crimes

ಅಪಘಾತ ಪ್ರಕರಣ :
ನೆಲೋಗಿ ಠಾಣೆ : ಶ್ರೀ ರಾಜಶೇಖರ ತಂದೆ ಬಸವರಾಜ ನಿಷ್ಠಿದೇಶಮುಖ ಸಾ|| ಜೇರಟಗಿ ಇವರು ದಿನಾಂಕ: 06-09-2016 ರಂದು ಸಾಯಂಕಾಲ 6-45 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರ ರೇವಣಸಿದ್ದ ಪೂಜಾರಿ ಇಬ್ಬರೂ ನಮ್ಮ ಹೊಲದಿಂದ ನಡೆದುಕೊಂಡು ಜೇರಟಗಿಗೆ ಜೇವರ್ಗಿ ಸಿಂದಗಿ ರೋಡ ಮುಖಾಂತರ ಗಿರೀಶ ತಂದೆ ಶಿವಲಿಂಗಪ್ಪ ಬಿಜಾಪೂರ ಇವರ ಹೊಲದ ಹತ್ತಿರ ಹೊರಟಿದ್ದೆವು, ಆಗ ನಮ್ಮೂರಿನ ಗಂಗಾಧರ ತಂದೆ ಮಲ್ಲಪ್ಪ ಬಿಜಾಪೂರ ಇತನು ತನ್ನ ಮೋಟಾರ ಸೈಕಲ ಮೇಲೆ ನಮ್ಮೂರ ಕಡೆಗೆ ಹೊರಟಿದ್ದನು, ಅದೆ ವೇಳೆಗೆ ಎದುರಿನಿಂದ  ಅಂದರೆ ಜೇರಟಗಿ ಕಡೆಯಿಂದ ಒಂದು ಮೋಟಾರ ಸೈಕಲ್ ಮೇಲೆ 3 ಜನ ಕುಳಿತು ಬರುತಿದ್ದು ಆ ಮೋಟಾರ ಸೈಕಲ  ನಡೆಸುತ್ತಿದ್ದವನು ಮೋಟಾರ ಸೈಕಲ ಅನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಅವನ ಮುಂದೆ ಹೊರಟಿದ್ದ ವಾಹನಕ್ಕೆ ಓರಟ್ಯಾಕ್ ಮಾಡಲು ಹೋಗಿ ಗಂಗಾಧರ ನಡೆಸುತಿದ್ದ ಮೋಟಾರ ಸೈಕಲ್ ಗೆ ಎದುರಿನಿಂದ ಜೋರಾಗಿ ಡಿಕ್ಕಿ ಹೊಡೆದನು, ನಾವು ಅವರ ಹತ್ತಿರ ಹೋಗಿ ನೋಡಲು ಗಂಗಾಧರನ ತೆಲೆಗೆ ಬಾರಿ ರಕ್ತಗಾಯ ಮತ್ತು ಅಲ್ಲಲ್ಲಿ ಚರಚಿದ ಗಾಯಗಳಾಗಿದ್ದವು, ಇನ್ನೊಂದು ಮೋಟಾರ ಸೈಕಲ ಮೇಲೆ ಇದ್ದ 3 ಜನರಿಗೆ ಕೂಡ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದವು, ಗಂಗಾಧರನ ಮೋಟಾರ ಸೈಕಲಗೆ ಡಿಕ್ಕಿ ಹೊಡೆದ ಮೋಟಾರ ಸೈಕಲ ಸವಾರನ ಹೆಸರು ಶಿವರಾಜ ಕುಳೆಕಮುಟಗಿ ಸಾ|| ಮಯೂರ ಅಂತಾ ಹೇಳಿದನು, ಹಿಂದೆ ಕುಳಿತವರ ಹೆಸರು 1] ಹುಲೆಪ್ಪಾ ಅರಳಗುಂಡಗು ಸಾ|| ಹೇರೂರ , 2] ಸಿದ್ದಲಿಂಗ ತಂದೆ ಶರಣಪ್ಪ ಸಾ|| ಕುರನಳ್ಳಿ ಅಂತಾ ಹೇಳಿದರು, ಗಂಗಾಧರನ ಮೋಟಾರ ಸೈಕಲ ನಂ.  ಕೆಎ-32 ಆರ್-3035   ಇದ್ದು. ಶಿವರಾಜನ ಮೋಟಾರ ಸೈಕಲ  ನಂ. ಕೆಎ-32 ಇಎಫ್-2087 ಇದ್ದು 2 ವಾಹನ ಜಕಂ ಆಗಿದ್ದವು. ನಂತರ ನಾನು ಮತ್ತು ರೇವಣಸಿದ್ದ ಇಬ್ಬರೂ ಕೂಡಿ ಗಾಯಗೊಂಡ 4 ಜನರಿಗೂ ಒಂದು ವಾಹನದಲ್ಲಿ ಜೇರಟಗಿ ಸರಕಾರಿ ದಾವಾಖಾನೆಗೆ ತಂದಾಗ ಗಂಗಾಧರನು 7-00 ಪಿ.ಎಮ್ ಕ್ಕೆ ದಾವಾಖಾನೆಯ ಹತ್ತಿರ ಮೃತಪಟ್ಟಿರುತ್ತಾನೆ.