POLICE BHAVAN KALABURAGI

POLICE BHAVAN KALABURAGI

28 February 2014

Gulbarga District Reported Crimes

ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 23.02.2014 ರಂದು ಸಂಜೆ 7-30 ಗಂಟೆ ಸುಮಾರಿಗೆ ಶಿವಾಜಿ ನಗರದಲ್ಲಿರುವ ಪುಜಾರಿ ಕಿರಾಣಿ ಅಂಗಡಿ ಎದುರುಗಡೆ ರೋಡಿನ ಮೇಲೆ ಶ್ರೀಮತಿ ಚಂದ್ರಕಲಾ ಗಂಡ ಸೈದಪ್ಪಾ ಬಿದನೂರ, ಸಾಃ ಶಿವಾಜಿ ನಗರ ಗುಲಬರ್ಗಾ ಮಗನಾದ ವಿಷ್ನೂವರ್ಧನ ವರ್ಷ ಇತನು ನಡೆದುಕೊಂಡು ಹೋಗುತ್ತಿದ್ದಾಗ ಕಾರ ನಂ ಕೆ,32 ಸಿ  0687 ನೆದ್ದರ ಚಾಲಕ ಅಂಭಾ ಭವಾನಿ ಗುಡಿ ರೋಡಿನಿಂದ ಅತೀ ವೇಗ ಮತ್ತು ಆಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಫಿರ್ಯಾದಿ ಮಗನಿಗೆ ಅಪಘಾತ ಪಡಿಸಿ ಭಾರಿ ಗಾಯ ಪಡಿಸಿ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ವರೆಗೆ ತೆಗೆದುಕೊಂಡು ಹೋಗಿ ಅಲ್ಲಿಂದ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಆಳಂದ ಠಾಣೆ : ಶ್ರೀ ಬಾಬುರಾವ ತಂದೆ ರೇವಪ್ಪಾ ಕಟ್ಟಿಕೇರಿ ಸಾ|| ರುದ್ರವಾಡಿ  ರವರು 6 ವರ್ಷದ ಹಿಂದೆ ನನ್ನ ತಮ್ಮ ಶಿವಾನಂದನಿಗೆ 50000/- ರೂ ಹೊಲದ ಸಂಭಂಧ ಮುರುಮ್ ಗ್ರಾಮದ ಬಾಪುಗೌಡಾ ಪಾಟೀಲರು ಹಣ ಕೊಟ್ಟು ಸದರಿ ಹಣ ನನಗೆ ಕೊಡು ಎಂದು ಅವನ ಕೈಯಲ್ಲಿ ಕೊಟ್ಟು ಕಳುಹಿಸಿದ್ದು ಆದರೆ ಸದರಿ 50000/- ರೂ ನನ್ನ ತಮ್ಮ ನನಗೆ ಇಲ್ಲಿಯವರೆಗೆ ಕೊಟ್ಟಿರುವುದಿಲ್ಲ, ಶಿವಾನಂದನಿಗೆ ನಾನು ಮೇಲಿಂದ ಮೇಲೆ ಕೇಳುತ್ತಾ ಹಣ ಕೊಡು ಎಂದರೂ ಹಣ ಕೊಟ್ಟಿರುವುದಿಲ್ಲ, ನಿನಗೆ ಯಾವ ಹಣ ಕೊಡುವುದು ಇಲ್ಲ ಅಂದಿದ್ದಕ್ಕೆ ಸದರಿ ಶಿವಾನಂದನು ತನ್ನ ಹೊಲ ಮಾರಾಟ ಮಾಡುತ್ತಿದ್ದಾಗ ನಾನು ಹೊಲ ಮಾರಾಟ ಮಡದಂತೆ ನ್ಯಾಯಾಲಯದಲ್ಲಿ ದಾವೆ ಹಾಕಿರುತ್ತೇನೆ, ನನ್ನ ತಮ್ಮ ಬಸವರಾಜ ಕಟ್ಟಕೇರಿ, ಈತನು ಅವನ ಪಾಲಿಗೆ ಬಂದ 3 ಎಕರೆ 16 ಗುಂಟೆ ಹೊಲ ಶಿವಾನಂದನೆ ಮಾಡುತ್ತಾ ಬಂದಿದ್ದು ಈ ವರ್ಷ ಅವನಿಗೆ ಬಿಡು ಬೇರೆಯವರಿಗೆ ಹೊಲ ಹಚ್ಚುತ್ತೇನೆಂದಾಗ ಬಸವರಾಜನಿಗೆ ಬೇರೆಯವರಿಗೆ ಹಚ್ಚಲು ಬಿಡುವುದಿಲ್ಲ ಅಂತಾ ಅಂದು ಅವನೊಂದಿಗೂ ಕೂಡಾ ವೈಮನಸ್ಸು ಹೊಂದಿರುತ್ತಾನೆ, ದಿನಾಂಕ 22/02/2014 ರಂದು ಮಧ್ಯಾಹ್ನ 4.30 ಗಂಟೆಯ ಸುಮಾರಿಗೆ ನನ್ನ ತಮ್ಮ ಬಸವರಾಜನ ಹೊಲ ಸರ್ವೆ ಮಾಡಲು ನಾನು ನನ್ನ ತಮ್ಮ ಬಸವರಾಜ ಇನ್ನೊಬ್ಬ ತಮ್ಮ ಶಿವಶರಣ ಹಾಗೂ ಸಂಭಂಧಿ ಸಿದ್ದಪ್ಪಾ ತಂದೆ ಧರ್ಮರಾಯ ಬಿರಾದಾರ ಸಾ|| ಮಂಟಗಿ ಕೂಡಿ ಸರ್ವೆ ಮಾಡಿ ಮರಳಿ ಬರುವಾಗ ಬಸವರಾಜನ ಹೊಲದ ಹತ್ತಿರ ರೋಡಿನ ಮೇಲೆ ಬಂದಾಗ ಸದರಿ ಶಿವಾನಂದ ಹಾಗೂ ಅವನ ಮಗ ಕಿಶೋರ ಇನ್ನೊಬ್ಬ ಮಗ ಸುನೀಲ & ಶಿವಾನಂದನ ಹೆಂಡತಿ ನೀಲಮ್ಮಾ ಕೂಡಿ ಬಂದು ನನಗೆ ತಡೆದು ಶಿವಾನಂದನು ಭೋಸಡಿ ಮಗನೆ ನನ್ನ ಹೊಲದ ಮೇಲೆ ಕೇಸ್ ಹಾಕಿದ್ದರಿಂದ ಹೊಲ ಮಾರಾಟ ಮಾಡಲೂ ಬಿಡುತ್ತಿಲ್ಲ, ಎಂದು ಬೈದು ತನ್ನ ಕೈಯಲ್ಲಿದ್ದ ಬಡಿಗೆಯಿಂದ ಕಲ್ಲಿನಿಂದ ಕೈಯಿಂದ ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

27 February 2014

Gulbarga District Reported Crimes

ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮೋಸಿನ್  ತಂದೆ ಸಾದೋದ್ದಿನ್ ಖುಷೇಷಿ ಸಾ : ಹುಸೇನಿ ಗಾರ್ಡ ಎಂ.ಎಸ್.ಕೆ ಮಿಲ್ ಗುಲಬರ್ಗಾ ರವರ ಹೆಂಡತಿ ಸುಮೆರಾ ಇವಳು ಕಳೆದ 15 ದಿವಸಗಳ ಹಿಂದೆ ಬೆಂಗಳೂರುನಲ್ಲಿ ವಾಸವಿರುವ ತನ್ನ ತಂಗಿ ದೀಪಾ ಇವಳ ಮನೆಗೆ ಹೋಗಿದ್ದು ಮನೆಯಲ್ಲಿ ನಾನು ಒಬ್ಬನೆ ಇರುತ್ತೆನೆ ಇಂದು ದಿನಾಂಕ 26-02-2014 ರಂದು ಎಂದಿನಂತೆ ಬೆಳಗ್ಗೆ 11 ಗಂಟೆಯ ಸುಮಾರಿಗೆ ಎಸ್.ಟಿ.ಬಿ.ಟಿ ಕ್ರಾಸ ಹತ್ತಿರ ಇರುವ ನಮ್ಮ ಹೋಟೆಲಕ್ಕೆ ಹೋಗಿದ್ದು ನಾನು ಹೋಟೆಲದಲ್ಲಿದ್ದಾಗ ಸಾಯಂಕಾಲ 04-15 ಗಂಟೆ ಸುಮಾರಿಗೆ ನನ್ನ ಅಳಿಯ ವಸಿಂ ಈತನು ಕರೆಮಾಡಿ ತಿಳಿಸಿದೇನೆಂದರೆ ಮದಿನಾ ಕಾಲೋನಿಯ ನದೀಮ ತಂದೆ ಮಹ್ಮದ ಹುಸೇನ ಎಂಬ ಹುಡುಗ ನಿಮ್ಮ ಮನೆ ಬಾಗಿಲಿನ ಕೊಂಡಿ  ಮುರಿದು ಒಳಗೆ ಹೊಗಿದ್ದು ಇದನ್ನು ನೋಡಿ ನಾವು ಅವನಿಗೆ ಹಿಡಿಯಲು ಹೋದಾಗ ಅವನ ಮೇಲಿನ ಅಂತಸ್ತಿನಿಂದ ಕೆಳೆಗೆ ಹಾರಿ ಹೋಗುವಾಗ ಹುಸೇನ ಗಾರ್ಡನ ವಾಚ್ ಮ್ಯಾನ್, ಹಾಗೂ ನಾನು, ಗೆಳೆಯರು ಹಿಡಿದು ಕೂಡಿಸಿರುತ್ತೆವೆ ಅಂತಾ ತಿಳಿಸಿದ ಮೇರೆಗೆ ನಾನು ಸಾಯಂಕಾಲ 04-30 ಗಂಟೆಗೆ ಮನೆಗೆ ಬಂದು ನೊಡಲು ನಮ್ಮ ಮನೆಯ ಮುಂದೆ ಜನರು ನೇರೆದಿದ್ದು ನಮ್ಮ ನದೀಮ ಇವನಿಗೆ ನಮ್ಮ ಮನೆಯ ಮುಂದೆ ಹಿಡಿದು ಕೂಡಿಸಿದ್ದು ಅವನು ಒಂದನೆ ಅಂತಸ ದಿಂದ ಕೆಳಗೆ ಹಾರಿದಿದ್ದರಿಂದ ಹಣೆಯ ಮೇಲೆ ಗಾಯವಾಗಿರುತ್ತದೆ ನಾನು,  ನಮ್ಮ ಮನೆಯ ಒಳಗೆ ಹೋಗಿ ನೋಡಲು ಬಾಗಿಲು ತರೆದಿದ್ದು ಇದ್ದು ಬೆಡ್ ರೂಮಿನ ಒಳಗೆ ಹೋಗಿ ನೋಡಲು ಬೆಡ್ ರೂಮಿನಲ್ಲಿದ್ದ ಎರಡು ಅಲಮಾರಿಗಳು ತರೆದಿದ್ದು ಇದ್ದು ಒಳಗಡೆ ಇದ್ದ ಎಲ್ಲಾ ಸಾಮಾನುಗಳು ಚಲ್ಲಪಿಲ್ಲಿ ಆಗಿ ಬಿದಿದ್ದು ಅಲ್ಲಿಂದ ಕೆಳಗೆ ಬಂದು ಕೆಳಗಿನ ರೂಮಿನಲ್ಲಿ ಬಂದು ನೋಡಲು ಅಲ್ಲಿ ಕೂಡ ಅಲಮಾರ ತೆರೆದಿದ್ದು ಎಲ್ಲಾ ಸಾಮಾನುಳು ಚಿಲ್ಲಪಿಲ್ಲಿ ಆಗಿ ಬಿದಿದ್ದು ಇರುತ್ತದೆ ನಾನು ಕೆಳಗೆ ಬಂದು ಅವನಿಗೆ ಒಂದು ಆಟೋರಿಕ್ಷಾದಲ್ಲಿ ತಂದು ಹಾಕಿರುತ್ತೆನೆ ಪೋಲೀಸ್ ಠಾಣೆಯಲ್ಲಿ ಅವನಿಗೆ ನನ್ನ ಮುಂದೆ ಅಂಗ ಶೋಧನೆ ಮಾಡಲು ಅವನ ಪ್ಯಾಂಟಿನಿಂದ ಜೋಬಿನಿಂದ ಒಂದು ಜೊತೆ ಬೆಳ್ಳಿ ಕಾಲು ಜೈನುಗಳು ಸಿಕ್ಕಿದ್ದು ಅವುಗಳು ನಾನು ನೋಡಲಾಗಿ ಅದು ನನ್ನ ಮಗಳು ರಾನಿಯ ಬುಸರಾ ಇವಳ ಕಾಲು ಜೈನು ಅಂದಾಜು 6 ತೋಲೆ ಅ.ಕಿ 3,000/- ರೂ. ಬೆಲೆ ಬಾಳುವದು  ಇರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಫರತಾಬಾದ ಠಾಣೆ :  ಶ್ರೀ ರಮೇಶ ತಂದೆ ಸೋಮಯ್ಯ ಇಂದ್ರಿಲಾ ಸಾ:ಸಂಜಯ ನಗರ ಜನಗಾಂವ ಜಿ:ವರಾಂಗಲ್ಲ  ಆಂದ್ರಪ್ರದೇಶ ರಾಜ್ಯ  ರವರು ದಿನಾಂಕ 25-02-2014 ರಂದು ರಾತ್ರಿ ವೇಳೆಯಲ್ಲಿ ರಾಷ್ಟೀಯ ಹೆದ್ದಾರಿ 218 ರಸ್ತೆಯ ಮೇಲಿಂದ ಫರಹಾತಾಬಾದ ಗ್ರಾಮವನ್ನು ದಾಟಿ ಕೆರೆಯಂಗಳದ ಹತ್ತಿರ ರಾತ್ರಿ 11:30 ಗಂಟೆಯ ಸುಮಾರಿಗೆ ಪೆಟ್ರೊಲ್ ಪಂಪ ಎದರುಗಡೆಯಲ್ಲಿ ಹೋಗುತ್ತಿರುವಾಗ ನಮ್ಮ ಟೆಂಪೊದ ಎಡಗಡೆಯ ಮುಂದಿನ ಟೈರ್ ಮತ್ತು ಹಿಂದಿನ ಟೈರ್‌ ಪಂಕ್ಚರ್‌ ಆಗಿದ್ದು ಇರುತ್ತದೆ. ಸದರಿ ಟೈರಗಳನ್ನು ಬದಲಾಯಿಸಲು ನಾವು ನಮ್ಮ ಟೆಂಪೊವನ್ನು ರೋಡಿನ ಪಕ್ಕದಲ್ಲಿ  ನಿಲ್ಲಿಸಿ  ಹಿಂದಿನ ಮತ್ತು ಮುಂದಿನ ಎರಡು ಇಂಡಿಕೇಟರ್‌ಗಳನ್ನು ಹಾಕಿ ಮೊದಲು ಹಿಂದಿನ ಟೈರನ್ನು ಬದಲಾಯಿಸಿದ್ದು, ನಂತರ ನಾನು ಮತ್ತು ರಮೇಶ ಇಬ್ಬರೂ ಕೂಡಿಕೊಂಡು ಮುಂದಿನ ಟೈರ್‌ನ್ನು ಬದಲಾಯಿಸಲು ನಾನು ಟೆಂಪೊದ ಕೆಳಗಡೆಯಲ್ಲಿ ಹೋಗಿ ಕುಳಿತು ನನ್ನ ಕಾಲುಗಳನ್ನು ಚಾಚಿಕೊಂಡು ಜಾಕನ್ನು ಎರಿಸುತ್ತಿದ್ದೆನು, ಕ್ಲೀನರ ರಮೇಶ ಇತನು ಕೂಡಾ ಹೊರ ಬಾಜು ದಲ್ಲಿ ಕಾಲುಗಳನ್ನು ಚಾಚಿಕೊಂಡು ಟೈರ ಬಿಚ್ಚುತ್ತಿದ್ದನು. ಹೀಗಿರುವಾಗ ದಿನಾಂಕ 26-02-2014 ರಾತ್ರಿ 12-30 ಗಂಟೆಯ ಸುಮಾರಿಗೆ ನಮ್ಮ ಹಿಂದಗಡೆಯಿಂದ ಒಬ್ಬ ವಾಹನ ಚಾಲಕನು ತನ್ನ ವಾಹನವನ್ನು ಅತಿ ವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಟೆಂಪೊಕ್ಕೆ ಜೋರಾಗಿ ಡಿಕ್ಕಿ ಪಡಿಸಿರುತ್ತಾನೆ. ಇದರಿಂದ ನಮ್ಮ ಟೆಂಪೊ ಸ್ತಳದಿಂದ ಮುಂದೆ ಹೋಗಿದ್ದರಿಂದ ನನ್ನ ಎಡಗಡೆಯ ಕಾಲಿನ ಮೇಲಿಂದ ಟೈರ ಹಾಯಿದು ಹೋಗಿರುತ್ತದೆ. ಇದರಿಂದ ನನಗೆ ಎಡಗಾಲಿನ ಮೂಳೆ ಮುರಿದಂತೆ ಆಗಿದ್ದಲ್ಲದೆ ಎಡಗಡೆ ಮೇಲಕಿನ ಮೇಲೆ ರಕ್ತಗಾಯವಾಗಿರುತ್ತದೆ. ನಮ್ಮ ಕ್ಲೀನರ್‌ ರಮೇಶ ಇತನ ಕಾಲಿನ ಮೇಲೆ ಹಾಯಿದು ಹೋಗಿದ್ದು ಆತನಿಗೆ ಬಲಗಡೆಯ ಕಾಲಿನ ಮೋಣಕಾಲು ಕೇಳಗೆ ಮೂಳೆ ಮುರಿದಂತೆ ಆಗಿದ್ದಲ್ಲದೆ, ಎಡಗಡೆಯ ಕಾಲಿನ ಮೋಣಕಾಲು ಕೇಳಗೆ ಬಾರಿ ರಕ್ತಗಾಯ ವಾಗಿರುತ್ತದೆ. ನಂತರ ನಮಗೆ ಡಿಕ್ಕಿ ಪಡಿಸಿದ ವಾಹನವನ್ನು ನೋಡಲಾಗಿ ಅದು ಕೂಡಾ ಹಣ್ಣನ್ನು ತುಂಬಿಕೊಂಡು ಹೊಗುವ ಐಚರ ಗೂಡ್ಸ ಗಾಡಿಯಿದ್ದು ಅದರ ನಂ ಎಪಿ 28 ಟಿಇ5327 ಅಂತಾ ಇರುತ್ತದೆ. ಅದರ ಚಾಲಕನ ಹೆಸರು ನರಸಿಮ್ಲೂ ಅಂತಾ ಗೊತ್ತಾಗಿರುತ್ತದೆ. ಆತನಿಗೆ ಹೊಟ್ಟೆಗೆ, ಎದೆಗೆ,  ಬಲಗಾಲಿಗೆ ಒಳಪೆಟ್ಟಾಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಭಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26 February 2014

Gulbarga District Reported Crimes

ಹುಡುಗಿ ಕಾಣೆಯಾದ ಪ್ರಕರಣ :
ಆಳಂದ ಠಾಣೆ : ಶ್ರೀ  ದಿಲೀಪ ತಂದೆ ಬಸಣ್ಣಾ ನಡಗೇರಿ ಸಾ|| ಖಜೂರಿ ತಾ|| ಆಳಂದ ರವರ ಮೊದಲನೇಯ ಮಗಳಾದ ಕರಬಸವ್ವಾ 14 ವರ್ಷ ಇವಳು  ದಿನಾಂಕ 23-02-2014 ರಂದು ರವಿವಾರ ನಾನು ನನ್ನ ಹೆಂಡತಿ ಕಲ್ಪನಾ ಕೂಡಿ ಕೂಲಿ ಕೆಸಕ್ಕೆಂದು ಮನೆಯಿಂದ ಬೆಳಿಗ್ಗೆ 10 ಗಂಟೆಗೆ ಹೋಗುವಾಗ ನನ್ನ ಮಗಳಾದ ಕರಬಸವ್ವಾ ಇವಳಿಗೆ ತಂಗಿಯರಿಗೆ ತೆಗೆದುಕೊಂಡು ಮನೆಯಲ್ಲಿ ಇರು ಅಂತಾ ಹೇಳಿ ಹೋಗಿರುತ್ತೇವೆ, ನಂತರ ಸಾಯಂಕಾಲ 6 ಗಂಟೆಗೆ ಮನೆಗೆ ಬಂದಾಗ ಮಗಳು ಕರಬಸವ್ವಾ ಕಾಣದಿದ್ದಾಗ ಮಗಳು ಸುನೀತಾ ಇವಳಿಗೆ ಕೇಳಲಾಗಿ ಆಕೆ ತಿಳಿಸಿದ್ದೇನೆಂದರೆ ನಮಗೆ ಹಸಿವೆಯಾಗಿದ್ದು ಅಕ್ಕ ಕರಬಸವ್ವಾ ಇವಳು ಮಧ್ಯಾಹ್ನ 3 ಗಂಟೆಗೆ ಮನೆಯಿಂದ ಹೋದವಳು ಬಂದಿರುವುದಿಲ್ಲ, ಅಂತಾ ತಿಳಿಸಿರುತ್ತಾಳೆ, ನಂತರ ನಾನು ಹಾಗೂ ನನ್ನ ಹೆಂಡತಿ ಹಾಗೂ ನಮ್ಮ ಸಂಭಂಧಿಕರು ಕೂಡಿ ಊರಲ್ಲಿ ಹಾಗೂ ಸಂಭಂಧಿಕರಲ್ಲಿ ಹೋಗಿ ಹುಡುಕಾಡಿ ವಿಚಾರಿಸಿದ್ದು ಆಕೆಯ ಪತ್ತೆಯಾಗಿರುವುದಿಲ್ಲಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ದೇವಲ ಗಾಣಗಾಪೂರ ಠಾಣೆ : ಶ್ರೀಮತಿ ಲಕ್ಷ್ಮಿ ಇಲಕಲ್ ಸಾ|| ಗುಲಬರ್ಗಾ ಇವರು ದಿನಾಂಕ: 24-02-2014 ರಂದು ರಾತ್ರಿ ವೇಳೆಯಲ್ಲಿ ತಮ್ಮ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಜ್ಯುಶ್ಯಾಟ ಮತ್ತು ಕಂಪ್ಯೂಟರ ಕೊಣೆಗಳ ಬಾಗಿಲ ಕೀಲಿ ಕತ್ತರಿಸಿ ಎಜ್ಯುಶ್ಯಾಟ ಕೊಣೆಯಲ್ಲಿ ಅಳವಡಿಸಿದ 1. ಒಂದು ಬ್ಯಾಟ್ರಿ ಅ:ಕಿ: 7000=00, 2. ಸೆಟ್ಟಪ್ ಬಾಕ್ಸ ಅ:ಕಿ: 3000=00, 3. ಚಾರ್ಜ ಕಂಟ್ರೋಲರ್ ಅ:ಕಿ: 2,500=00, 4. 2 ರಿಮೋಟಗಳು ಅ:ಕಿ: 700=00, ಹಾಗೂ ಕಂಪ್ಯೂಟರ ಕೊಣೆಯಲ್ಲಿದ್ದ 5. ಒಂದು ಸಿಪಿಯು ಅ:ಕಿ: 5500=00, 6. ಕಂಪ್ಯೂರ ಮೌಸ ಅ:ಕಿ: 200=00, 7. 2 ಕಂಪ್ಯೂಟರ ಸ್ಪೀಕರಗಳು ಅ:ಕಿ: 1,100=00 ರೂಪಾಯಿ ಹೀಗೆ ಒಟ್ಟು  20,000=00 ರೂಪಾಯಿ ಕಿಮ್ಮತಿನ ಸಾಮಾನುಗಳು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲ ಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ : 26-02-2014 ರಂದು ಮಧ್ಯಾಹ್ನ 01-30 ಗಂಟೆಗೆ ಶ್ರೀ ಅಲೀಮೋದ್ದಿನ ಪಟೇಲ  ತಂದೆ ಖಯ್ಯುಮ್ ಪಟೇಲ ಸಾ|| ಎಂ.ಎಸ್.ಕೆ ಮಿಲ್ ಮದಿನಾ ಕಾಲೋನಿ, ಗುಲಬರ್ಗಾ ಇವರು ಬಡಾವಣೆಯ ಪಕ್ಕದ ರಿಂಗ ರೋಡಿನ ಆಚೆ  ನಮ್ಮ ಒಂದು ಖಾಸಗಿ ನ್ಯೂಟನ್ ಕೀರಿಯ ಪ್ರಥಾಮಿಕ ಶಾಲೆ ಇದ್ದು ಮತ್ತು ಅಲ್ಲೆ ನಮ್ಮ ಭುಮಿ ಇದ್ದು ಅದರಲ್ಲಿ ಕಬ್ಬಿನ ತೋಟ ಮಾಡಿರುತ್ತೆವೆ ದಿನಾಂಕ|| 20-02-14 ರಂದು ಬೆಳಗ್ಗೆ 11-00 ಸುಮಾರಿಗೆ ನಮ್ಮ ತೋಟದ ಹತ್ತಿರ ನಾನು ಮತ್ತು ನಮ್ಮ ತಂದೆ ಖಯ್ಯುಮ್ ಪಟೇಲ ನಮ್ಮ ತಮ್ಮಂದಿರಾದ ಅಜೀಮ ಪಟೇಲ, ಮತ್ತು ವಾಸಿಂ ಪಟೇಲ, ಹಾಗೂ ನನ್ನ ಗೆಳೆಯರಾದ ಮೈನೋದ್ದಿನ ಸಿಮ್ಲಾ, ಹಾಗೂ ಅರೀಫ ನಾವೆಲ್ಲರೂ ಹೊಲದಲ್ಲಿದ್ದಾಗ ಅಲ್ಲೆ ಪಕ್ಕದಲ್ಲಿ ರಿಂಗ ರೋಡಿನ ಆಚೆ ಬಹಳಷ್ಟು ಜನರು ನೆರೆದಿದ್ದು ನಾವೆಲ್ಲರೂ ರಿಂಗ ರೋಡಿನ ಆಚೆ ನಿಂತು ನೋಡುತ್ತಿದ್ದು ಅಲ್ಲಿ ಪತ್ರಾಸ ಹಾಕಿದ ಶಡ್ಡಗಳನ್ನು ಹಾಗೂ ಮನೆ ಕೇಡವುತ್ತಿದ್ದರು ಮನೆ ಕಡವಿದ್ದ ಬಗ್ಗೆ ಅಸ್ಲಂ ಕಲ್ಯಾಣಿರವರು ಆರ್.ಜಿ. ನಗರ ಪೊಲೀಸ್ ಠಾಣೆಯಲ್ಲಿ ಖಯ್ಯುಮ ಪಟೇಲ ಮತ್ತು ಇತರರ ಮೇಲೆ ಪ್ರಕರಣ ದಾಖಲಾಗಿದ್ದ ಬಗ್ಗೆ ನಾನು ದಿನಪತ್ರಿಕೆಯಲ್ಲಿ ನೋಡಿ ಈ ವಿಷಯದ ಬಗ್ಗೆ ಅಸ್ಲಂ ಕಲ್ಯಾಣಿ ಇವರು ಮಾತನಾಡಿಸಬೇಕೆಂದು ನಿನ್ನೆ ದಿನಾಂಕ || 25/02/2014 ರಂದು ಬೆಳಗ್ಗೆ 11-00 ಗಂಟೆಯ ಸುಮಾರಿಗೆ ನಾನು,  ಅಸ್ಲಾಂ ಕಲ್ಯಾಣಿ ಹತ್ತಿರ ಹೋಗಿ ಈ ವಿಷಯದ ಬಗ್ಗೆ ವಿಚಾರಿಸಲು ನಾವು ನಿಮ್ಮ ಮನೆ ಕೆಡವಿಲ್ಲಾ ನಮಗೆ ಯಾವುದೆ ಸಂಬಂಧ ಇಲ್ಲಾ ಅಂತಾ ಹೇಳಿದ್ದರಿಂದ ಸ್ವಲ್ಪ ಸಮಯದ ನಂತರ ಮಧ್ಯಾಹ್ನ 12-00 ಗಂಟೆಯ ನಾನು ಪಕ್ಕದಲ್ಲಿ ಅಸ್ಲಂ  ಕಲ್ಯಾಣಿ ಇವರ ಕೆಡವಿದ ಮನೆಯ ಎದುರಿನಿಂದ ಹೋಗುತ್ತಿರುವಾಗ ಅದೇ ವೇಳೆಯಲ್ಲಿ ಅಸ್ಲಾಂ ಕಲ್ಯಾಣಿ ಇವನು ಅವನ ಜೋತೆಯಲ್ಲಿ ದಿಲಶ್ಯಾದ್ ಕಲ್ಯಾಣಿ, ಶಾಫೀಕ ಕಲ್ಯಾಣಿ, ವಾಜೀದ ಕಲ್ಯಾಣಿ,  ಮತ್ತು ಸಾಜೀದ ಕಲ್ಯಾಣಿ,  ರವರೊಂದಿಗೆ ಬಂದು ನನಗೆ ತಡೆದು ನಿಲ್ಲಿಸಿ ಅವಾಚ್ಯ ಶಭ್ದಗಳಿಂದ ಬೈದು ಕೈಯಿಂದ ಕಾಲಿನಿಂದ ಹೋಡೆದು ಗಾಯಗೋಳಿಸಿ ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 25-02-2014 ರಂದು ಹಡಲಗಿ ಗ್ರಾಮದ ಹನುಮಾನ ದೇವರ ಗುಡಿಯ ಕಟ್ಟೆಯ ಮೇಲೆ  ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಸಿಬ್ಬಂಧಿ ಹಾಗೂ ಪಂಚರೊಂದಿಗೆ  ಬಾತ್ಮಿ ಬಂದ ಸ್ಥಳವಾದ ಹಡಲಗಿ ಗ್ರಾಮದ ಶ್ರೀ ಹನುಮಾನ ದೇವರ ಗುಡಿಯ ಮರೆಯಾಗಿ ನಿಂತು ನೋಡಲಾಗಿ ಶ್ರೀ ಹನುಮಾನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಕುಳಿತು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಹಿಡಿದು ವಿಚಾರಿಸಲು ರಾಜೇಶ ತಂದೆ ಮಾಣಿಕರಾವ ಮರಬೆ ಸಾ|| ದರ್ಗಾ ಶಿರೂರಹಾ|| ||ಹಡಲಗಿ ಗ್ರಾಮ ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ ನಗದು ಹಣ 300/-ಒಂದು ಮಟಕಾ ಅಂಕಿ ಸಂಖ್ಯೆ ಹಾಳೆ ಒಂದು ಬಾಲ ಪೆನ್ನ ಒಂದು ಕಪ್ಪು ಬಣ್ಣದ ನೋಕಿಯಾ ಮೋಬೈಲ ಅದರಲ್ಲಿ ಐಡಿಯಾ ಕಂಪನಿಯ ಸಿಮ ನಂ. 9164180504 ಅ.ಕಿ 500/- ನೇದ್ದವುಗಳನ್ನು ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 25-02-2014 ರಂದು 1600 ಗಂಟೆಗೆ ನಿಂಬರ್ಗಾ ಗ್ರಾಮದ ಮೌಲಾ ನಗರದ ಮಲ್ಲಿಕಾರ್ಜುನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ನಡೆಯುತ್ತಿದೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆರವರು, ಠಾಣೆಯ ಸಿಬ್ಬಂಧಿ ಮತ್ತು ಪಂಚರೋಂದಿಗೆ  ನಿಂಬರ್ಗಾ ಗ್ರಾಮದ ಮೌಲಾ ನಗರದ  ಮಲ್ಲಿಕಾರ್ಜುನ ದೇವರ ಗುಡಿಯ ಹಿಂದುಗಡೆ ಮರೆಯಾಗಿ ನಿಂತು ನೋಡಲಾಗಿ 06 ಜನ ವ್ಯಕ್ತಿಗಳು ಮಲ್ಲಿಕಾರ್ಜುನ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ  06 ಆಸಾಮಿ ಜನರನ್ನು ಹಿಡಿದು ವಿಚಾರಿಸಲಾಗಿ 01.ನಾಗಪ್ಪ ತಂದೆ ಚಂದ್ರಾಮಪ್ಪ ಪೂಜಾರಿ 02. ಧರ್ಮರಾಯ ತಂದೆ ಮಹಾದೇವ ಗೋಣಿ 3. ಪಿಂಟು ತಂದೆ ಬಸವರಾಜ ಅಮಾನೆ 04. ಬಸವರಾಜ ತಂದೆ ಮಾಣಿಕಪ್ಪ ಬುಳ್ಳಾ 05. ಚಂದ್ರಕಾಂತ ತಂದೆ ಕಲ್ಯಾಣಿ ಮಾನೆ 06. ಯಲ್ಲಾಲಿಂಗ ತಂದೆ ಸೂರ್ಯಕಾಂತ ಭಾಸಗೆ ಸಾ|| ಎಲ್ಲರು ನಿಂಬರ್ಗಾ ಸದರಿಯವ ರಿಂದ ನಗದು ಹಣ ಒಟ್ಟು 3080/- ರೂಪಾಯಿ ಹಾಗೂ 52 ಇಸ್ಪೀಟ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿಮಾಡಿಕೊಂಡು ಮರಳಿ ಠಾಣೆಗೆ ಬಂದು ಸದರಿಯವರ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.    
ದ್ವೀಚಕ್ರ ವಾಹನ ಕಳವು ಪ್ರಕರಣ :
ಮಾಹಾತ್ಮ ಬಸವೇಶ್ವರ ನಗರ ಠಾಣೆ : ಶ್ರೀ ವಿಶ್ವನಾಥ ಶಿಂಧೆ ಸಾಃ ಸರಸ್ವತಿ ಗೋದಾಮ್ ಗುಲಬರ್ಗಾ ಇವರು ದಿನಾಂಕ 22-02-2014 ರಂದು 02:00 ಪಿ.ಎಂ. ಸುಮಾರಿಗೆ ವಿರೇಂದ್ರ ಪಾಟೀಲ್ ಬಡಾವಣೆಯಲ್ಲಿದ್ದ ಸಂಬಂಧಿಕರ ವಾಸ್ತು ಕಾರ್ಯಕ್ರಮವಿದ್ದ ಪ್ರಯುಕ್ತ ಮತ್ತು ಆತನ ಹೆಂಡತಿ ಇಬ್ಬರೂ ಕೂಡಿಕೊಂಡು ಹೊಂಡಾ ಆಕ್ಟಿವಾ ಮೋ.ಸೈಕಲ ನಂ. KA 32 Y 4242 ನೇದ್ದರ ಮೇಲೆ ಹೋಗಿ ಮನೆಯ ಮುಂದೆ ಸೈಡ್ ಲಾಕ್ ಹಾಕಿ ನಿಲ್ಲಿಸಿದ್ದು ನಂತರ ಕಾರ್ಯಕ್ರಮ ಮುಗಿಸಿಕೊಂಡು 02:30 ಪಿ.ಎಂ. ಕ್ಕೆ ಬಂದು ನೋಡಲಾಗಿ ಮೋಟಾರ ಸೈಕಲ ಇರಲಿಲ್ಲಾ. ಎಲ್ಲಾ ಕಡೆಗೆ ಹುಡುಕಾಡಿದರೂ ಮೋಟಾರ ಸೈಕಲ ಪತ್ತೆಯಾಗಿರುವುದಿಲ್ಲಾ. ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 19-02-2014 ರಂದು ಬೆಳಿಗ್ಗೆ 8-30 ಗಂಟೆಗೆ ಶ್ರೀ ಚಂದ್ರಕಾಂತ ತಂದೆ ಶಾಂತಪ್ಪ ಕಲ್ಲೂರ  ಸಾ: ಸಂತೋಷ ಕಾಲೋನಿ ಗುಲಬರ್ಗಾ  ರವರು ತಮ್ಮ ಮೋಟಾರ ಸೈಕಲ ನಂಬರ ಕೆಎ-32 ಎಕ್ಸ-5383 ರ ಮೇಲೆ ತಾನು ಕೆಲಸ ಮಾಡುತ್ತಿರುವ ಆಫೀಸಿಗೆ ಹೋಗುವ ಕುರಿತು ಖಾದ್ರಿ  ಚೌಕ ಮುಖಾಂತರ ಶಹಾಬಜಾರ ನಾಕಾ ಕಡೆಗೆ ಹೋಗುತ್ತಿದ್ದಾಗ ಶೆಟ್ಟಿ ಕಾಂಪ್ಲೆಕ್ಸ ಎದುರಿನ ರೋಡ ಮೇಲೆ ಹಿಂದಿನಿಂದ ಮೋಟಾರ ಸೈಕಲ ನಂಬರ ಕೆಎ-32 ಇಡಿ-3472 ರ ಸವಾರನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿ ಭಾರಿಗಾಯಗೊಳಿಸಿ ಮೋಟಾರ ಸೈಕಲ ಸಮೇತ ಹೊರಟು ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ 25-02-2014 ರಂದು ಶ್ರೀ ನಿಹಾಲ ತಂದೆ ಚಂದ್ರಶೇಖರ ಪ್ರಸಾದ  ಸಾ:ಬಾಲಾಜಿ ಆಸ್ಪತ್ರೆ ರಾಜಾಪುರ ರೋಡ ಗುಲಬರ್ಗಾ  ರವರ ಗೆಳೆಯನಾದ ಬಸವಂತರಾಯ ಪಾಟೀಲ ಇವರು ಒಂದು ಹೊಸ ಜೀಪ ಖರೀದಿಸಿದ್ದು ಪೂಜೆಗಾಗಿ ಕೊರಂಟಿ ಹನುಮಾನ ಗುಡಿ ಹತ್ತಿರ ಬರಲು ಹೇಳಿ ದಾಗ  ತನ್ನ ಇತರೆ ಗೆಳೆಯ ರೊಂದಿಗೆ ಗುಡಿಯ ಹತ್ತಿರ ಬಂದು ಪೂಜೆ ಮುಗಿಸಿಕೊಂಡು ನಂತರ ಊಟ ಮಾಡಲು ಜೈಲ ಹತ್ತಿರ ಇರುವ ಇಕೋ ಗಾರ್ಡನಗೆ ಹೊರಟೇವು, ಇಕೋ ಗಾರ್ಡನ ಹತ್ತಿರ ಬಂದಾಗ ಪಿರ್ಯಾದಿಯ ಮನೆಯಿಂದ ಪೋನ ಬಂದಿದ್ದು, ಆಗ ಪಿರ್ಯಾದಿ ಇನ್ನೊಮ್ಮೆ ಊಟ ಮಾಡೋಣಾ ಅಂತ ಹೇಳಿದ್ದರಿಂದ ಆರೋಪಿಯು  ಜೀಪನ್ನು ತಿರುಗಿಸಿ ಕೊಂಡು ಗುಲಬರ್ಗಾ ಕಡೆಗೆ ಬರುವಾಗ  ನಂದಿಕೂರ ತಾಂಡಾ ದಾಟಿ ಬರುವ ಮೃತ್ಯೂಂಜಯ ಗೋಡಾನ ಹತ್ತಿರ ಅವರುಗಳು ಕುಳಿತ ಜೀಪನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿ ಕೊಂಡು ಬಂದ ಅವರ ಗೆಳೆಯ ಆಶೀಷಕುಮಾರ ಶೃಂಗೇರಿ ಇತನು ರಸ್ತೆಯ ಬಲಗಡೆಗೆ ಜೀಪನ್ನು ಪಲ್ಟಿ ಗೊಳಿಸಿರುತ್ತಾನೆ. ಸದರಿ ಜೀಪಿನಲ್ಲಿ ಕುಳಿತವರಿಗೆ ಸಾದಾ ಹಾಗೂ ಭಾರಿ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 25-02-2014 ರಂದು ಬೆಳಿಗ್ಗೆ ಬೆಳಿಗ್ಗೆ 10;00 ಗಂಟೆಗೆ ಶ್ರೀಮತಿ ವಿಜಯಲಕ್ಷ್ಮಿ ಗಂಡ ನಾರಾಯಣ ಅಂಬುರೆ ಸಾ : ಇಂದಿರಾ ನಗರ ಅಫಜಲಪೂರ ರವರು ಮನೆಯ ಅಂಗಳದಲ್ಲಿ ಬಟ್ಟೆ ಒಗೆಯುತ್ತಿದ್ದೆ. ಅದೆ ಸಮಯಕ್ಕೆ ನಮ್ಮ ಮನೆಯ ಬಾಜು ಇದ್ದ ರಫೀಕ ಮತ್ತು ಅವನ ಸಂಗಡ ಇನ್ನು ಇಬ್ಬರು ಕೂಡಿ ತಮ್ಮ ಕೈಯಲ್ಲಿ ಕೊಡ್ಲಿಗಳನ್ನು  ಹಿಡಿದುಕೊಂಡು ನಮ್ಮ ಮನೆ ಹತ್ತಿರ ಬಂದು ಅಂಗಳದಲ್ಲಿ ಇದ್ದ  ನಮ್ಮ ಟೆಂಗಿನ ಮರವನ್ನು ಕಡಿಯುತ್ತಿದ್ದರು. ಆಗ ನಾನು ಅವರನ್ನು ತಡೆಯಲು ಹೋದೆ ಅವರು ನನಗೆ ತಡೆದು ನಿಲ್ಲಿಸಿ ಏ ಭೋಸಡಿ ನಿನಗ ಎಷ್ಟಸಲ ಹೇಳಿದರು ಕೇಳುತ್ತಿಲ್ಲಾ, ಇವತ್ತ ಈ ಗಿಡ ಕಡದೆ ಬಿಡತಿವಿ ಅಂತಾ ಅಂದರು ಆಗ ನಾನು ನನ್ನ ಗಂಡ ಬರುವರೆಗೆ ನಿಲ್ಲರಿ ಅಂತಾ ಅಂದಿದ್ದಕ್ಕೆ ರಪೀಕ ಇವನು ಪಹಲೆ ಏ ಛಿನಾಲಕೋ ಖಲಾಸ ಕರೋರೆ ಅಂತಾ ಅಂದರು ನಂತರ ಸದರಿ ಗಿಡವನ್ನು ಕಡೆದು ಅವಾಚ್ಯವಾಗಿ ಬೈದು ಜೀವ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 February 2014

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಮಾದನ ಹಿಪ್ಪರಗಾ ಠಾಣೆ : ದಿನಾಂಕ: 25-02-2014 ರಂದು ಸರಸಂಬಾ ಗ್ರಾಮದಲ್ಲಿ ಮಟಕಾ ಜೂಜಾಟದ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಿ.ಎಸ್.ಐ. ಮಾದನಹಿಪ್ಪರಗಾ ಮತ್ತು ಸಿಬ್ಬಂದಿ ಹಾಗು ಪಂಚರೋಂದಿಗೆ ಸದರ ಗ್ರಾಮಕ್ಕೆ ಹೋಗಿ ಮರೆಯಲ್ಲಿ ನಿಂತು ಮಟಕಾ ಜೂಜಾಟದ ಬಗ್ಗೆ ಖಚಿತಪಡಿಸಿಕೊಂಡು ಮಟಕಾ ಬರೆದುಕೊಳ್ಳುತ್ತಿದ ರಾಮು ತಂದೆ ಭವಾನೇಪ್ಪ ಜಮಾದಾರ ಸಾ: ಸರಸಂಬಾ ಇವನಿಗೆ ಹಿಡಿದು ಅವನ ಹತ್ತಿರ ನಗದು ಹಣ 461=00 ರೂಪಾಯಿಒಂದು ಬಾಲ ಪೇನ್ನು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಜಪ್ತ ಮಾಡಿಕೊಂಡ ಜಪ್ತಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಸದರಿಯವನ ವಿರುದ್ಧ ಮಾದನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಸೇಡಂ ಠಾಣೆ : ಶ್ರೀ ಮೊಹ್ಮದ್ ಬಶೀರುಲ್ಲಾ ಸಿದ್ದಿಕಿ ತಂದೆ ಬರಕತುಲ್ಲಾ ಸಿದ್ದಿಕಿ ಅಸ್ಲಂ, ಸಾ:ಮನೆ ನಂ-8-1-363/136 ಆದಿತ್ಯಾ ನಗರ ಕಾಲೋನಿ, ಟೋಲಿ ಚೌಕಿ, ಹೈದ್ರಾಬಾದ ರವರ ಮಾವನವರಾದ  ಮಹ್ಮದ  ಹನೀಫ ಮಸೂದ ರವರು ಪ್ರಯಾಣಿಸುತ್ತಿದ್ದ ಕಾರ ದಿನಾಂಕ 25-02-2014 ರಂದು ಅಪಘಾತವಾಗಿದ್ದು ಅದರಲ್ಲಿ ನನ್ನ ಮಾವ ಮಹ್ಮದ  ಹನೀಫ ಮಸೂದ ರವರಿಗೆ  ಭಾರಿ ರಕ್ತ ಗಾಯಗಳಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮತ್ತು  ಅವರ ಗೇಳೆಯ ಕುತುಬುದ್ದಿನ ರವರಿಗೆ ಆಸ್ಪತ್ರೆಗೆ ದಾಖಲಿಸಿರುತ್ತಾರೆ  ಅಂತಾ ಗೊತ್ತಾಗಿ ಗುಲಬರ್ಗಾ ನಗರದ ಕಾಮರಡ್ಡಿ ಆಸ್ಪತ್ರೆಗೆ ಬೇಟ್ಟಿ ಕೊಟ್ಟು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಕುತುಬುದ್ದಿನರವರಿಗೆ ಬೆಟ್ಟಿಯಾಗಿ ವಿಚಾರಿಸಿದಾಗ ಅವರು ತಿಳಿಸಿದ್ದೆನೆಂದರೆ, ನಿನ್ನೆ ದಿನಾಂಕ 24.02.2014 ರಂದು ಬೆಳಿಗ್ಗೆ 11 .ಎಂ.ಕ್ಕೆ ಕೊರ್ಟ ಕೆಲಸಕ್ಕೆ ಅಂತಾ ತನ್ನ ಗೆಳೆಯ ಮಹ್ಮದ ಹಫೀಜ ಮಸೂದ ಇವರನ್ನು ಹೈದ್ರಾಬಾದದಿಂದ ಕೂಡಿಕೊಂಡು Hundai ಕಾರ ನಂ AP-12/H-8341 ನೇದ್ದನ್ನು ತಗೆದುಕೊಂಡು ಗುಲಬರ್ಗಾಕ್ಕೆ ಹೋಗಿ ಗುಲಬರ್ಗಾದಲ್ಲಿ ಕೋರ್ಟ ಕೆಲಸ ಮುಗಿಸಿಕೊಂಡು ಮರಳಿ  ಹೈದ್ರಾಬಾದಕ್ಕೆ ಬರುವ ಕುರಿತು ಗುಲಬರ್ಗಾದಿಂದ ದಿನಾಂಕ 25.02.2014 ರಂದು ರಾತ್ರಿ 00.30 ಎಎಂಕ್ಕೆ ನಮ್ಮ ಕಾರ ನಂ AP-12/H-8341 ನೇದ್ದು ತಗೆದುಕೊಂಡು ಮೇಲ್ಕಂಡ ಚಾಲಕನೊಂದಿಗೆ ಸೇಡಂ ಮಾರ್ಗವಾಗಿ ಹೈದ್ರಾಬಾದಕ್ಕೆ ಹೋಗುತ್ತಿರುವಾಗ ಸೇಡಂ ಸಮೀಪ ಬರುವಾಗ ನಮ್ಮ ಮುಂದೆ ಹೋಗುತ್ತಿದ್ದ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ತಗೆದುಕೊಂಡು ಹೋಗುತ್ತಿದ್ದು ಆಗ ನಮ್ಮ ಕಾರ ಚಲಾಯಿಸುತ್ತಿದ್ದ ಮಹ್ಮದ ಹನೀಫ್ ಮಸೂದರವರು ತಮ್ಮ ಕಾರನ್ನುಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಮುಂದೆ ಹೋಗುತ್ತಿದ್ದ ಲಾರಿಯ ಹಿಂದೆ ಒಳಗಡೆ ಹೋಗಿ ಸಿಕ್ಕಿ ಬಿದ್ದಾಗ ಲಾರಿ ಚಾಲಕನು ಅದನ್ನುಗಮನಿಸದೆ ಹಾಗೆ ಓಡಿಸಿಕೊಂಡು ಸೇಡಂ ಪಟ್ಟಣದ ಚಿಂಚೋಳಿ ಕ್ರಾಸಿನವರೆಗೆ ಎಳೆದುಕೊಂಡು ಬಂದು ಚಿಂಚೋಳಿ ಕ್ರಾಸ ಹತ್ತಿರ ವಿರುವ ಪೆಟ್ರೊಲ ಬಂಕನ ಮುಂದೆ ಜಂಪನಲ್ಲಿ ಓಡಿಸಿದಾಗ ಲಾರಿ ಜಂಪಾಗಿ ಸಿಕ್ಕಿಬಿದ್ದ ನಮ್ಮ ಕಾರ ಲಾರಿಯಿಂದ ಉಚ್ಚಿಬಿದ್ದಿರುತ್ತದೆ. ಆಗ ಸದರಿ ಲಾರಿ ಚಾಲಕನು ತನ್ನ ಲಾರಿಯನ್ನು ನಿಲ್ಲಿಸದೆ ಹಾಗೆ ಓಡಿಸಿಕೊಂಡು ಹೋಗಿದ್ದು ಇರುತ್ತದೆ. ಲಾರಿ ಚಾಲಕನ ಹೆಸರು ಮತ್ತು ಲಾರಿ ನಂಬರ್ ಗೊತ್ತಿರುವದಿಲ್ಲ. ಅಂತಾ ತಿಳಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫರತಾಬಾದ ಠಾಣೆ : ದಿನಾಂಕ: 25/02/2014 ರಮದು ಬೇಳಗ್ಗೆ 9:30 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯಲ್ಲಿ ಇದ್ದಾಗ ನಮ್ಮ ಮಾವನಾದ ಅಣ್ಣರಾಯ ಇತನು ನನಗೆ ಫೊನ್‌‌ ಮಾಡಿ ತಿಳಿಸಿದ್ದೆನಂದರೆ. ನಿನ್ನ ಮಗಳಾದ ಅನನ್ಯ ಇವಳಿಗೆ ಇಂದು ಮುಂಜಾನೆ 9:00 ಗಂಟೆಯ ಸುಮಾರಿಗೆ ನಮ್ಮ ಮನೆಯ ಮುಂದೆ ಆಟವಾಡುತ್ತಿದ್ದಾಗ ನಮ್ಮೂರಿನೊಳಿಗಿನ ಅಗಸಿ ಬಾಗಿಲದಿಂದ ಒಬ್ಬ ಟ್ರ್ಯಾಕ್ಟರ ಚಾಲಕನು ತನ್ನ ಟ್ರ್ಯಾಕ್ಟರನ್ನು ಅತೀವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಚಲಾಯಿಸಿಕೊಂಡು ಬಂದು ಅನನ್ಯ ಇವಳಿಗೆ ಡಿಕ್ಕಿ ಪಡಿಸಿದ್ದರಿಂದ ಅನನ್ಯ ಇವಳು ರೋಡಿನ ಮೇಲೆ ಬಿದ್ದಾಗ ಟ್ಯ್ರಾಕ್ಟರನ ಮುಂದಿನ ಗಾಲಿ ತಲೆಯ ಮೇಲೆ ಹಾಯ್ದು  ತಲೆಗೆ ಬಾರಿ ರಕ್ತಗಾಯವಾಗಿದ್ದಲ್ಲದೆ ಬಲ ಭುಜಕ್ಕೆ ಎಡಗೈಗೆ ತರಚಿದ ಗಾಯವಾಗಿರುತ್ತದೆ ಆದ್ದರಿಂದ ಅವಳನ್ನು ಆಸ್ಪತ್ರೆಗೆ ತೆಗೆದುಕೊಂದು ಹೊಗಲು ಬಂದು ನಿಮ್ಮೂರಿನ ಬಸ್‌ ನಿಲ್ದಾಣದ ಹತ್ತಿರ ನಿಂತಿರುತ್ತೆವೆ ನೀನು ಬಾಗನೆ ಬಾ ಅಂತಾ ತಿಳಿಸಿದ್ದರಿಂದ ನಾನು ಕೂಡಲೆ ಅಲ್ಲಿಗೆ ಹೋಗಿ ನೋಡಲಾಗಿ ನನ್ನ ಮಗಳಾದ ಅನನ್ಯ ಇವಳಿಗೆ ತಲೆಗೆ ಬಾರಿ ರಕ್ತಗಾಯಗಳಾಗಿದ್ದು  ನಂತರ ಸದರಿ ನನ್ನ ಮಗಳನ್ನು ಗುಲಬರ್ಗಾದ ಸರಕಾರಿ ಆಸ್ಪತ್ರೆಗೆ ತಂದು ಉಪಚಾರ ಕುರಿತು ಸೇರಿಕೆ ಮಾಡಿದಾಗ ಅವಳನ್ನು ಪರಿಕ್ಷಿಸಿದ ವೈದ್ಯರು ಸದರಿಯವಳು ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾಳೆ ಅಂತಾ ತಿಳಿಸಿರುತ್ತಾರೆ. ನಂತರ ಸದರಿ ಅಪಘಾತ ಪಡಿಸಿದ ಟ್ರ್ಯಾಕ್ಟರ್‌ ನಂಬರ ಮತ್ತು ಚಾಲಕನ ಹೆಸರು ವಿಚಾರಿಸಲಾಗಿ ನಮ್ಮೂರಿನ ರವಿ ಮಡಿವಾಳ ಇತನು ಚಲಾಯಿಸುತ್ತಿದ್ದು ಅದರ ಇಂಜೀನ್‌ ಹೊಸದು ಇದ್ದು ನಂಬರ ಇರುವುದಿಲ್ಲ ಮತ್ತು ಟ್ರೈಲಿ ನಂ. ಕೆಎ 32 ಟಿಎ-2534 ನೇದ್ದು ಇರುತ್ತದೆ ಮತ್ತು ರವಿ ಮಡಿವಾಳ ಇತನು ಅಪಘಾತ ಪಡಿಸಿ ಟ್ರಾಕ್ಟರವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ತಿಳಿಸಿದರು.. ಅಂತಾ ಶ್ರೀ ಶ್ರೀಶೈಲ್‌ ತಂದೆ ಶಿವಶರಣಪ್ಪ ಹೂನಳ್ಳಿ  ಸಾ:ಶರಣಶಿರಸಗಿ ತಾ:ಜಿ:ಗುಲಬರ್ಗಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Gulbarga District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಗಳ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 24-02-2014 ರಂದು 0915 ಗಂಟೆಗೆ ಹಿತ್ತಲಶಿರೂರ ಗ್ರಾಮದ ಶ್ರೀ ಕಲ್ಮೇಶ್ವರ ಗುಡಿಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ., ಸಿಬ್ಬಂದಿ ಹಾಗು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಶ್ರೀ ಕಲ್ಮೇಶ್ವರ ದೇವರ ಗುಡಿಯ ಮುಂದೆ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತು ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ಶಿವಯೋಗಿ ತಂದೆ ಶಿವಲಿಂಗಪ್ಪ ಹುಗ್ಗಿ  ಸಾ|| ಹಿತ್ತಲಶಿರೂರ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01. ನಗದು ಹಣ 1390/- 02.ಒಂದು ಮಟಕಾ ಅಂಕಿ ಸಂಖ್ಯೆ ಹಾಳೆ03. ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 22-02-2014 ರಂದು 4;30 ಪಿ.ಎಮ್ ಕ್ಕೆ ಅಫಜಲಪೂರ ಪಟ್ಟಣದ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ ಅಫಜಲಪೂರ ಮತ್ತು ಸಿಬ್ಬಂದಿ ಪಂಚರೊಂದಿಗೆ ಮಲ್ಲಿಕಾರ್ಜುನ ಚೌಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಯನ್ನು ಕೊಟ್ಟು, ಮಟಕಾ ಬರೆದು ಕೋಳ್ಳುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಪ್ರಕಾಶ ತಂದೆ ರೇವಪ್ಪ ಕಂಬಾರ ಸಾ|| ಅಫಜಲಪೂರ ಎಂದು ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 2100/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಮರಳಿ ಠಾಣೆಗೆ ಬಂದು ಸದರಿಯವನ ವಿರುದ್ಧ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :            
ವಾಡಿ ಠಾಣೆ : ಶ್ರೀ ಪ್ರಕಾಶ ತಂದೆ ಅನಂತರಾವ ಕುಲಕರ್ಣೀ ಸರಕಾರಿ ಹಿರಿಯ ಪ್ರೌಢ ಶಾಲೆ ಕೊಲ್ಲುರ ಇವರು ದಿನಾಂಕ 19-02-2014 ರಂದು ಸಂಜೆ 5-30 ಗಂಟೆಗೆ ಎಲ್ಲಾ ಶಾಲೆಯ ಕೊಣೆಗಳ ಬಿಗವನ್ನು ಹಾಕಿಕೊಂಡು ಹೊಗಿದ್ದು ರಾತ್ರಿ ವೆಳೆಯಲ್ಲಿ ನಮ್ಮ ಶಾಲೆಯಲ್ಲಿನ ಅಡುಗೆ ಕೊಣೆಯ ಬಾಗಿಲಿಗೆ ಹಾಕಿದ ಬಿಗವನ್ನುಯಾರೊ ದುಷ್ಕರ್ಮಿಗಳು ಮುದಿರು 5 ಸಿಲೆಂಡರಗಳಲ್ಲಿ ಒಂದು ಇಂಡೆನ ಕಂಪನಿಯ ಸಿಲೆಂಡರನ್ನು ಕಳವುಮಾಡಿಕೊಂಡು ಹೊಗಿತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಮಾಹಾಗಾಂವ ಠಾಣೆ : ಶ್ರೀ ಸತೀಶ ಕುಮಾರ ತಂದೆ ಶ್ರೀಕರ ಪಾರಾ ಸಾ : ಮಾಹಾಗಾಂವ ರವರು ದಿನಾಂಕ 24-02-14 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಮುಖ್ಯ ಬಾಗಿಲು ಕೊಂಡಿ ಮುರಿದು ಒಳಗೆ ಪ್ರವೇಶ ಮಾಡಿ, ಮನೆಯಲ್ಲಿದ್ದ ಕಬ್ಬಿಣದ ಅಲಮಾರಿ ಮುರಿದು ಒಳಗಿದ್ದ ಬಟ್ಟೆ ಬರೆಗಳು ಚೆಲ್ಲಾ ಪಿಲ್ಲಿ ಮಾಡಿ ಅಲಮಾರಿಯಲ್ಲಿದ್ದ ನಗದು ಹಣ ಬಂಗಾರದ ಮತ್ತು ಬೆಳ್ಳಿ ಆಭರಣಗಳು ಹೀಗೆ ಒಟ್ಟು 2,06,500/- ರೂ ವಸ್ತಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

24 February 2014

Gulbarga Dist Reported Crimes

ಮಟಕಾ ಜೂಜಾಟ ಪ್ರಕರಣಗಳು:
ಅಫಜಲಪೂರ ಪೊಲೀಸ್ ಠಾಣೆ:ದಿನಾಂಕ 23-02-2014 ರಂದು ಶ್ರೀ ಸುರೇಶ ಬೆಂಡೆಗುಂಬಳ ಪಿ.ಎಸ್.ಐ ಅಫಜಲಪೂರ ಠಾಣೆ ರವರು ಅಫಜಲಪೂರ ಪಟ್ಟಣದಲ್ಲಿ ಸಿಬ್ಬಂದಿಯವರೊಂದಿಗೆ ಗಸ್ತಿನಲ್ಲಿದ್ದಾಗ ಪಟ್ಟಣದ ಅಮೋಘ ಸಿದ್ದ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ಜೂಜಾಟ ಆಡುತ್ತಿರುವ ಬಾತ್ಮಿ ಬಂದ ಮೇರೆಗೆ ಠಾಣೆಯ ಸಿಬ್ಬಂದಿ ಜನರಾದ ತಸ್ಲೀಮ, ನಿಂಗಣ್ಣ ಇವರವರೊಂದಿಗೆ ಅಮೋಘ ಸಿದ್ದ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ 5 ಜನರು ದುಂಡಾಗಿ ಕುಳಿತುಕೊಂಡು ಪಣಕ್ಕೆ ಹಣ ಹಚ್ಚಿ ಇಸ್ಪೆಟ ಎಲೆಗಳ ಸಹಾಯದಿಂದ ಅಂದರ ಬಾಹರ ಎಂಬ ದೈವದ ಜೂಜಾಟ ಆಡುತ್ತಿದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ಜುಜಾಟವಾಡುತ್ತಿದ್ದ ಅಫಜಲಪೂರ ಪಟ್ಟಣದ 1. ಸೋಮಲಿಂಗ ತಂದೆ ಅಮೋಘಿ ಒಡೇಯರ, 2. ವಿಠ್ಠಲ ತಂದೆ ಮಾಳಪ್ಪ ತೇಗ್ಗಳ್ಳಿ, 3. ಶ್ರೀಮಂತ ತಂದೆ ಅಮೋಘ ಹಿರೆಕುರುಬರ, 4.  ಬಸವರಾಜ ತಂದೆ ಕಲ್ಲಪ್ಪ ಶಿನ್ನೂರ, 5. ಭೂತಾಳಿ ತಂದೆ ಕಲ್ಲಪ್ಪ ಹಿರೇಕುರುಬರ ಇವರನ್ನು ದಸ್ತಗೀರ ಮಾಡಿ  ಜೂಜಾಟಕ್ಕೆ ಬಳಸಿದ 52 ಇಸ್ಪೆಟ ಎಲೆಗಳು ಮತ್ತು ನಗದು ರೂ  990/- ಜಪ್ತಿ ಮಾಡಿಕೊಂಡು ಆರೋಪಿತರ ವಿರುದ್ದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ನಿಂಬರ್ಗಾ ಪೊಲೀಸ ಠಾಣೆ :ದಿನಾಂಕ 23/02/2014 ರಂದು ಮಾಡಿಯಾಳ ಗ್ರಾಮದ ಮರಗಮ್ಮ ದೇವರ ಗುಡಿಯ ಕಟ್ಟೆಯ ಮೇಲೆ ಇಸ್ಪೀಟ ಜೂಜಾಟ ನಡೆಯುತ್ತಿದೆ ಅಂತ ಬಾತ್ಮಿ ಬಂದ ಮೇರೆಗೆ ಶ್ರೀ ಕೆ.ಎಸ್. ಹಟ್ಟಿ ಸಿಪಿಐ ರವರ ನೇತೃತ್ವದಲ್ಲಿ ಶ್ರೀ ಸಂತೋಷ ಎಸ್. ರಾಠೋಡ  ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ರವರು ಠಾಣೆಯ ಸಿಬ್ಬಂದಿ 01. ಶ್ರೀ ಹಜರತ ಅಲಿ, 2. ಶ್ರೀ ಬಾಬುರಾಯ, 3.ಶ್ರೀ ರಾಜಕುಮಾರ, ರವರೊಂದಿಗೆ ಮಾಡಿಯಾಳ ಗ್ರಾಮಕ್ಕೆ ಹೋಗಿ ಇಬ್ಬರು ಪಂಚರು ಬರಮಾಡಿಕೊಂಡು ಎಲ್ಲರೂ ಸೇರಿ ಮಾಡಿಯಾಳ ಗ್ರಾಮದ ಮರಗಮ್ಮ ದೇವರ ಗುಡಿಯ ಮರೆಯಲ್ಲಿ ನಿಂತು ನೋಡಲಾಗಿ ಅಲ್ಲಿ 08 ಜನ ಮರಗಮ್ಮ ದೇವರ ಗುಡಿಯ ಕಟ್ಟೆಯ ಮೇಲೆ ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕಿಟ್ಟು ಅಂದರ ಬಹಾರ ಇಸ್ಪೀಟ ಜೂಜಾಟ ಆಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ  ಜೂಜಾಟ ವಾಡುತ್ತಿದ್ದ ಮಾಡಿಯಾಳ ಗ್ರಾಮದ 1. ನಿಂಗಪ್ಪಾ ತಂ. ಶಂಕ್ರೆಪ್ಪಾ ಖೈನ, 2.ರಾಜು ತಂ. ಗುರುಬಸಪ್ಪಾ ಮಡ್ಡಿತೋಟ, 3. ಬಸವರಾಜ ತಂ. ಹಮಂತ್ರಾಯ ಮಡ್ಡಿತೋಟ, 4. ಗುರುಪಾದಪ್ಪ ತಂ. ಪ್ರಭು ಮಡ್ಡತೋಟ, 5. ಕಲ್ಯಾಣಿ ತಂ. ಸಿದ್ದಪ್ಪ, 6. ಶ್ರೀಮಂತ ತಂದೆ ರೇವಣಸಿದ್ದಪ್ಪ, 7. ಮರೆಪ್ಪ ತಂ. ಪ್ರಭು ಇಕ್ಕಳಕಿ, 8. ಪ್ರಭು ತಂ. ಶರಣಪ್ಪ ವಾಡಿ, ದಸ್ತಗೀರ ಮಾಡಿ ಅಲ್ಲಿದ್ದ 52 ಇಸ್ಪಿಟ ಎಲೆಗಳು ಮತ್ತು ಜೂಜಾಟದಲ್ಲಿ ತೊಡಗಿಸಿದ ನಗದು ರೂ 13090/- ಜಪ್ತಿ ಮಾಡಿಕೊಂದು ಆರೋಪಿತರ ವಿರುದ್ದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಬಕಾರಿ ದಾಳಿ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ :ದಿನಾಂಕ 23/02/2014 ರಂದು ಶ್ರೀ ಸಂತೋಷ ಎಸ್. ರಾಠೋಡ ಪಿ.ಎಸ್.ಐ ನಿಂಬರ್ಗಾ ಠಾಣೆ ರವರು ಠಾಣೆಯ ಸಿಬ್ಬಂಧಿಯವರಾದ ಶ್ರೀ ರಾಜಶೇಖರ ಸಿಪಿಸಿ 778, ಶ್ರೀ ಸತೀಶ ಸಿಪಿಸಿ 851 ರವರೊಂದಿಗೆ ಪೆಟ್ರೊಲಿಂಗ ಕರ್ತವ್ಯದಲ್ಲಿದ್ದಾಗ ಸುಂಟನೂರ ಗ್ರಾಮದ ಕುರುಬರ ಓಣಿಯಲ್ಲಿ ಸಾರ್ವಜನಿಕ ರಸ್ತೆಯ ಮೇಲೆ ಮೇಲೆ ಅಕ್ರಮವಾಗಿ ಯಾವುದೆ ಲೈಸನ್ಸ ಇಲ್ಲದೆ ಕೈ ಚೀಲದಲ್ಲಿ ಮಧ್ಯದ ಪಾಕೇಟಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ ಚಂದ್ರಕಾಂತ ತಂದೆ ಲಾಡಪ್ಪ ನೀಲೂರ ಸಾ: ಸುಂಟನೂರ ಈತನನ್ನು ದಸ್ತಗೀರ ಮಾಡಿ ಆತನಿಂದ 180 ಎಮ್.ಎಲ್ ನ .ಕಿ ರೂ 1,300/- ಮೌಲ್ಯದ 26 ಮದ್ಯದ ಮಧ್ಯದ ಬಾಟಲಿಗಳು, ಮತ್ತು ಮಧ್ಯ ಮಾರಿದ ನಗದು ಹಣ 450/- ರೂಪಾಯಿಗಳನ್ನು ಜಪ್ತಿ ಮಾಡಿಕೊಂಡು ಆರೋಪಿತನ ವಿರುದ್ದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಕಳವು ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ.ವಿಜಯಕುಮಾರ ತಂದೆ ಮಲ್ಲಿನಾಥ ಗುಂಜೋಟಿ ಸಾ:ಸರಸಂಬಾರವರು ದಿನಾಂಕ:23-02-14 ರ ರಾತ್ರಿ 01:30 ಗಂಟೆಯಿಂದ ದಿನಾಂಕ:23/02/2014  ರ ಬೆಳಗಿನ 5 ಗಂಟೆಯ ಮಧ್ಯದ ಅವಧಿಯಲ್ಲಿ. ತನ್ನ ಮನೆಯ ಮುಂದೆ ನಿಲ್ಲಿಸಿದ ಹೀರೋ ಕಂಪನಿಯ ಮೋಟರ್ ಸೈಕಲ್ ನಂಬರ ಕೆಎ32/ಇಬಿ9559 ನೇದ್ದನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡನ ಹಿಪ್ಪರಗಾ ಠಾಣೆಯಲ್ಲಿ ಪ್ರಕರಣ ದಾಖಲಿಸ ತನಿಖೆ ಕೈಕೊಳ್ಳಲಾಗಿದೆ.
ಸರಗಳ್ಳತನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ದಿನಾಂಕ||  23/02/2014 ರಂದು ರಾತ್ರಿ 09-00 ಗಂಟೆಗೆ ಶ್ರೀಮತಿ ರೋಹಿಣಿ ಗಂಡ ರಮೇಶ ಯಳಸಂಗಿಕರ ಠಾಣೆಗೆ ಆಗ್ರಿಕಲ್ಚರ್ ಲೇಔಟದಲ್ಲಿರುವ ತನ್ನ ಸಂಬಂಧಿಕರಾದ ಉದಯಕುಮಾರ ಯಳಸಂಗಿಕರ ಮತ್ತು ಕಲ್ಯಾಣರಾವ ವರ ಮನೆಗೆ ಹೊಗಿ ಅಲ್ಲಿಂದ ಉದಯಕುಮಾರ ಯಳಸಂಗಿಕರ  ಇವರ ಮನೆಗೆ ನಡೆದುಕೊಂಡು ಹೊಗುವಾಗ ಬಡಾವಣೆಯಲ್ಲಿರುವ ದತ್ತು ಪೊಲೀಸರ ಮನೆಯ ಮಂದೆ ರಸ್ತೆಯ ಮುಂಚೆ ಹೋಗುತ್ತಿರುವಾಗ ಎದುರುನಿಂದ ಬಂದ ಒಬ್ಬ ಮೋಟಾರ ಸೈಕಲ ಸವಾರ ತನ್ನ ಕೊರಳಿಗೆ  ಕೈ ಹಾಕಿ ಕೊರಳಲ್ಲಿದ್ದ 30 ಗ್ರಾಂ ಬಂಗಾರದ ಮಂಗಳ ಸೂತ್ರ ಅ.ಕಿ ರೂ 90,000 ದೋಚಿಕೊಂಡು ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣಗಳು:
ಫರಹತಾಬಾದ ಪೊಲೀಸ್ ಠಾಣೆ : ದಿನಾಂಕ: 23-2-2014 ರಂದು ಶ್ರೀ ದಶರಥ ತಂದೆ ರಾಜಪ್ಪಾ ಜೀವಣಗಿ
ಸಾ|| ರಾಮನಗರ ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ತಾನು ಕರ್ನಾಟಕ ಕೈಮಗ್ಗ ಅಭಿವೃದಿ ನಿಗಮ ಇಲಾಖೆ ಗುಲಬರ್ಗಾದಲ್ಲಿ ಗೂಡ್ಸ ವಾಹನದ ಚಾಲಕ ಎಂದು ಕಳೆದ 15 ವರ್ಷಗಳಿಂದ ಕರ್ತವ್ಯ ನಿರ್ವಹಿಸುದ್ದು ದಿ: 19-02-13 ರಂದು ಇಲಾಖೆಯ ಸಾಮಾನುಗಳನ್ನು ತೆಗೆದುಕೊಂಡು ಬನಹಟ್ಟಿಯಿಂದ ಗುಲಬರ್ಗಾಕ್ಕೆ ಬರುತ್ತಿರುವಾಗ ಸಿರನೂರ ದಾಟಿ ಭಾರತೀಯ ವಿದ್ಯಾ ಮಂದಿರ ಹತ್ತಿರ ಬರುತ್ತಿರುವಾಗ ಗುಲಬರ್ಗಾ ಕಡೆಯಿಂದ ಬರುತ್ತಿದ್ದ ಟಿಪ್ಪರ ಚಾಲಕನು ಟಿಪ್ಪರನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಗೂಡ್ಸ ವಾಹನ ನಂ ಕೆಎ25/ಡಿ3924 ನೆದ್ದಕ್ಕೆ ಅಪಘಾತಪಡಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕಯಕೊಳ್ಳಲಾಗಿದೆ.
ವಿದ್ಯುತ್ ತಂತಿ ತಗುಲಿ ಸಾವು ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ: 23/02/2014 ರಂದು ಶ್ರೀ ದಿಲೀಪ್ ತಂ. ನೊರಂಜನಪ್ಪಾ ಕೊಡಂಬಲ್ ಸಾ: ಪಟವಾದ ರವರು ಠಾಣೆಗೆ ಹಾಜರಾಗಿ ತಮ್ಮ ತಂದೆ ನಿರಂಜಪ್ಪಾ ರವರವರಿಗೆ ಗ್ರಾಮದ ಜಗನ್ನಾಥ ಇವರ ಹೊಲದಲ್ಲಿ  ವಿದ್ಯುತ್ ಕಂಬದ ವೈರಿನಿಂದ ವಿದ್ಯುತ್ ತಗುಲಿ ಮೃತಪಟ್ಟಿದ್ದು. ಜಗನ್ನಾಥ ರವರ ಹೊಲದಲ್ಲಿ ಕಡಿದು ಬಿದ್ದ ವಿದ್ಯುತ್ ಕಂಬದ ವೈರಗಳನ್ನು ದುರಸ್ತಿ ಮಾಡುವಂತೆ ಹಲವು ಬಾರಿ ದೂರು ನೀಡಿದ್ದರೊ ಸಹ ಜೇಸ್ಕಾಂನ ಸೇಕ್ಷನ ಆಫೀಸರ್ ಸಿದ್ದಿರಾಜು ಮತ್ತು ಲೈನಮ್ಯಾನ ನಾಗಣ್ಣಾ ರವರು ನಿರ್ಲಕ್ಷ ಮಾಡಿ ಕಡಿದು ಬಿದ್ದ ವಿದ್ಯುತ್ ಕಂಬದ ವಾಯರ್ ದುರಸ್ತಿ ಮಾಡದ ಕಾರಣ ತಮ್ಮ ತಂದೆ ಮೃತಪಟ್ಟಿದ್ದು ಅವರ ವಿರುದ್ದ ಕ್ರಮ ಕಯಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:

ಆಳಂದ ಪೊಲೀಸ ಠಾಣೆ: ದಿನಾಂಕ 23/02/2014 ರಂದು ಸಾಯಂಕಾಲ ಶ್ರೀ ಕಾಶಿನಾಥ ತಂದೆ ಚಂದ್ರಶಾ ಲಾವಣಿ ಸಾ|| ಜಿಡಗಾ ರವರು ತಮ್ಮ ಮನೆಯ ಮುಂದೆ ಇದ್ದಾಗ ಹಳೆಯ ವೈಮನಸ್ಸಿನಿಂದ ಅಲ್ಲಿಗೆ ಸಾರಾಯಿ ಕುಡಿದು ಬಂದ ಗುರುಶಾಂತ ತಂದೆ ಗಣಪತಿ ಜಮಾದಾರ, ಪ್ರಕಾಶ ತಂದೆ ಗುಂಡಪ್ಪಾ ಜಮಾದಾರ ಇವರು ವಿನಾ: ಕಾರಣ ಅವಾಚ್ಯ ಶಬ್ದಗಳಿಂದ ನಿಮಗೆ ಖಲಾಸ್ ಮಾಡುವ ಸಲುವಾಗಿ 25 ಸಾವಿರ ರೂಪಾಯಿ ಕೊಟ್ಟಿರುತ್ತೇವೆ ಎಂದು ಅಂದಾಗ ಸುಮ್ಮನೆ ಯಾಕೆ ಬೈಯುತ್ತಿರಿ ಎಂದಾಗ ಗುರುಶಾಂತನು ಒಮ್ಮೇಲೆ ನನ್ನ ಮೇಲೆ ಬಂದು ಅಲ್ಲಿಯೇ ಬಿದ್ದ ಹಿಡಿಗಲ್ಲು ತೆಗೆದುಕೊಂಡು ನನ್ನ ಎಡಗೈ ಮುಂಗೈ ಮೇಲೆ ಹೊಡೆದಾಗ ಪ್ರಕಾಶನು ಕೈ ಮುಷ್ಟಿ ಮಾಡಿ ಹೊಡೆಯುವಾಗ ನನ್ನ ಮಗ ಗುರುಶರಣ, ಮಗಳು ರೇವಮ್ಮಾ ಬಿಡಿಸಲು ಬಂದಾಗ ಅವರಿಗೆ ನೂಕಿಸಿಕೊಟ್ಟು ನನ್ನ ಮಗಳ ಎಡಗೈ ಮೇಲೆ ಚಿವುಟಿ ಗಾಯಗೊಳಿಸಿ ಮಾನಭಂಗ ಉಂಟು ಮಾಡಿದ್ದು ಆಗ ಅಲ್ಲಿಯೇ ಇದ್ದ ಗ್ರಾಮದ ಮಹಾಂತೇಶ ಹಾಗೂ ಅಪ್ಪಾಜಿ ತಂದೆ ಶರಣಬಸಪ್ಪಾ ಲಾವಣಿ ಶಿವರಾಯ ರಾಮಲಿಂಗಪ್ಪಾ ಪಾಟೀಲ ಬಿಡಿಸುವಾಗ ಮಹಾಂತೇಶನಿಗೆ ಸಹ ಜೀವದ ಬೆದರಿಕೆ ಹಾಕಿದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಪಾದಿತರ ವಿರುದ್ದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.