POLICE BHAVAN KALABURAGI

POLICE BHAVAN KALABURAGI

19 November 2016

Kalaburagi District Reported Crimes

ಬಾಲ್ಯ ವಿವಾಹ ಮಾಡುತ್ತಿದ್ದವರ ಬಂಧನ :
ಮಹಿಳಾ ಠಾಣೆ : ಶ್ರೀ ಚಿಕ್ಕವೇಂಕಟರಮಣಪ್ಪ ಜಿಲ್ಲಾ ಮಕ್ಕಳ ರಕ್ಷಣಾಧೀಕಾರಿಗಳು (ಪ್ರಭಾರ) ಜಿಲ್ಲಾ ಮಕ್ಕಳ ರಕ್ಷಣಾ ಘಟಕ  ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕಲಬುರಗಿರವರು ದಿನಾಂಕ: 17/11/2016 ಸಂಜೆ 8 ಗಂಟೆಗೆ ಕರೆ ಬಂದ ಹಿನ್ನೆಯಲ್ಲಿ ಎಸ್.ಟಿ.ಬಿ.ಟಿ ಬಳಿಯ ಆಶ್ರಯ ಕಾಲೋನಿಯಲ್ಲಿ ಸುಮಾರು 15 ರಿಂದ 16 ವರ್ಷದೊಳಗಿನ ಬಾಲಕಿಯಾದ ಕುಮಾರಿ ಶರಣಮ್ಮಾ ತಂದೆ ದಿ|| ಶರಣಪ್ಪಾ ಯಡ್ರಾಮಿ ತಾಯಿ ಲಕ್ಕಮ್ಮಾ ಇವಳ  ಮದುವೆಯನ್ನು ಗುಜರಾತಿನ ಜಾಮ ನಗರದ ರಾಕೇಶ ಜೊತೆ ಈತನ ಜೊತೆ ದಿನಾಂಕ: 18/11/2016 ಮದುವೆ ಏರ್ಪಡಿಸಲಾಗಿತ್ತು  ಸದರಿ ಮದುವೆಯು ಬಾಲ್ಯ ವಿವಾಹವಾಗಿದ್ದಲ್ಲದೇ 30 ಸಾವಿರ ರೂಪಾಯಿ ಕೊಟ್ಟು ದೈಹಿಕ ಸಂಬೋಗ ಮಾಡುವ ಉದ್ದೇಶದಿಂದ ಅಪ್ರಾಪ್ತಬಾಲಕಿಯನ್ನು ಅನೈತಿಕವಾಗಿ ಬೇರೆ ರಾಜ್ಯಕ್ಕೆ ಸಾಗಣಿಕೆ ಮಾಡುವುದು ಕಂಡು ಬಂದಿದೆ ಹಾಗು ಇದಕ್ಕೆ ಮದ್ಯವರ್ತಿಯಾಗಿ ಶಾಹೇದಾ ಗಂಡ ಶೇಖ ದಸ್ತಗಿರ ಈಕೆ ಮದ್ಯಸ್ಥಿಕೆಯಿಂದ   ಗುಜರಾತಿನ ರಾಕೇಶ 1) ಉಮೇದ 2) ಚೆಕ್ಕುದಾಸ 3) ಕಾಂಜಿ 4) ಶಾಂತಲಾಲ ಇವರು ಈ ಒಂದು ಅಪರಾಧದಲ್ಲಿ ಬಾಗಿಯಾಗಿ ಇವರ ಮದ್ಯವರ್ತಿಯಾದ ಶಾಹೇದಾ ಗಂಡ ದಸ್ತಿಗಿರ ಸಹಾಯ ಎಸ್.ಟಿ.ಪಿ.ಬಿ  ಸಂತ್ರಾಸವಾಡಿ ಆಶ್ರಯ ಕಾಲೋನಿಯಿಂದ ಬಾಲಕಿಯನ್ನು ರಕ್ಷಿಸಿ ನೇರವಾಗಿ ರಾಣೇಶಪೀರ ದರ್ಗಾಬಳಿಯಿಂದ ಬಾಲಕಿಯ ತಾಯಿಯನ್ನು ಕರೆದುಕೊಂಡು ಅಲ್ಲಿಂದ ದರ್ಗಾಬಳಿಯ ಕೆ.ಬಿ.ಎನ್. ಮದ್ಯವರ್ತಿಯ ಮನೆಗೆ ತೆರಳಿ ಆಕೆಯನ್ನು ಕರೆದುಕೊಂಡು ಗುಜರಾತಿನ 5 ಜನರನ್ನು ಕೆ.ಬಿ.ಎನ್ ದರ್ಗಾ ಬಳಿಯ ನೂರ ಲಾಡ್ಜದಿಂದ ಇವರನ್ನು ಕರೆದುಕೊಂಡು ಬರಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡಿಸಿ ವಿಷಯವನ್ನು ಪರಿಶೀಲಿಸಿ ಸೂಕ್ತ ಕಾಯ್ದೆ ಅಡಿ ದೂರು ದಾಖಲಿಸಿಕೊಳ್ಳಲು ಹಾಗೂ ಅದರ ಜೊತೆ ಸದರಿ ಬಾಲಕಿ ಅಪ್ರಾಪ್ತ ಹಾಗು ಪರಿಶೀಷ್ಟ ಜಾತಿಯವಳಾಗಿದ್ದು ಎಸ್.ಸಿ./ಎಸ್.ಟಿ ಕಾಯ್ದೆ ಪೋಸ್ಕೋ ಕಾಯ್ದೆ ಬಾಲ್ಯ ವಿವಾಹ ನಿಷೇದ ಕಾಯ್ದೆ ಹಾಗು ಮಹಿಳಾ ಮತ್ತು ಮಕ್ಕಳ ಅನೈತಿಕ ಸಾಗಣಿಕೆ ತಡೆ ಕಾಯ್ದೆ ಪ್ರಕರಣ ದಾಖಲಿಸಿಕೊಳ್ಳಲು ಕೊರಿರುವದಂದ ಸದರಿ ಪಿರ್ಯಾದಿ ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೃಹಿಣಿಗೆ ಕಿರುಕಳ ನೀಡಿದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ ಸ್ವಪ್ನಾ ಗಂಡ ರಾಜಶೇಖರ ಮಂಗಲಗಿ ಸಾ: ವಿಜಯ ನಗರ ಕಾಲನಿ ಆಳಂದ ರೋಡ ಕಲಬುರಗಿ ಇವರನ್ನು ದಿನಾಂಕ 28.12.2013 ರಂದು ನಮ್ಮ ತಂದೆ ತಾಯಿಯವರು ಕಲಬುರಗಿಯ ರಾಜಶೇಖರ ಇವರೊಂದಿಗೆ ಸಂಪ್ರದಾಯದಂತೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ನಂತರ ನನ್ನ ಗಂಡ ನನಗೆ ತಾನು ಕೆಲಸ ಮಾಡುವ ಗುಜರಾತಿನ ವಡೋದರಾಗೆ ಕರೆದುಕೊಂಡು ಹೋಗಿದ್ದು ಇರುತ್ತದ.ಅಲ್ಲಿ ನನ್ನ ಗಂಡ ನನಗೆ ವಿನಾಕಾರಣ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಡುತ್ತಿದ್ದರು.ನನ್ನ ಗಂಡ ರಾಜಶೇಖರ  ಕುಟುಂಬದ ಸದಸ್ಸರಾದ ಮಾವ ಶಿವಶರಣಪ್ಪ ಅತ್ತೆ ಪುಷ್ವಾವತಿ ಭಾವಂದಿರಾದ ಶಿವರಾಜ,ಶಶಿಧರ ನಾದಿನಿಯರಾದ ರಾಜೇಶ್ವರಿ,ಶೀಲಾ ಸುನಂದಾ,ಸರು ಹಾಗೂ ನಾದಿನಿಯ ಗಂಡಂದಿರಾದ ಕರಬಸಪ್ಪ,ಸತೀಶ, ರಾಜು ಸಿದ್ದು ಹಾಗೂ ನಾದಿನಿಯರ ಮಕ್ಕಳಾದ ಅಭೀಷೇಕ ಮತ್ತು ವಿನಿತಾ ಇವರೆಲ್ಲರೂ ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ನನ್ನ ಗಂಡ ರಾಜಶೇಖರ ಇತನು ಕಲಬುರಗಿಯಲ್ಲಿದ್ದಾಗ ನನ್ನ ಗಂಡ ನನಗೆ ಮನ ಬಂದಂತೆ ಹೊಡೆಯುತ್ತಿದ್ದರು. ನನ್ನ ಅತ್ತೆ ಪುಷ್ಪಾವತಿ ನನ್ನ ಗಂಡ ರಾಜಶೇಖರ 1 ವರೆ ವರ್ಷದಿಂದ ಅವರು ಎಲ್ಲಿ ಇರುತ್ತಾರೆ ಎಂಬುವುದು ನನಗೆ ಗೊತ್ತಿರುವದಿಲ್ಲ ನನ್ನ ಗಂಡ ನನಗೆ ಓನವೆ ಡಿವರ್ಸ (ವಿವಾಹ ವಿಚ್ಚೇದನ) ಮಾಡಿದ್ದಾರೆ. 9 ತಿಂಗಳಿಂದ ನನ್ನ ಮಾವ ಶಿವಶರಣಪ್ಪ ಇವರು ಕೂಡ ಮನೆ ಬಿಟ್ಟು ಹೋಗಿರುತ್ತಾರೆ, ದಿನಾಂಕ 16.11.2016 ರಂದು ರಾತ್ರಿ 11 ಗಂಟೆಯ ಸುಮಾರಿಗೆ ಯಾರೋ 3,4 ಜನರು ಬಂದು ನಮ್ಮ ಮನೆಯ ಕಂಪೌಂಡ ಜಿಗಿದು ನನಗೆ ಕೇಸ್ ವಾಪಾಸ್ಸು ತೆಗೆದುಕೋ ಅಂತಾ ಬೆದರಿಕೆ ಹಾಕಿ ಮನೆಯ ಬಾಗಿಲು ಮುರಿದು ಅಲ್ಲಿಂದ ಪರಾರಿಯಾದರು. ಕಾರಣ ಮದುವೆ ಆದಾಗಿನಿಂದ ನನಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟ ಮೇಲೆ ನಮೂದ ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ದಿನಾಂಕ:- 17/11/2016 ರಂದು ಗುರುವಾರದಂದು ಆಳಂದ ಪಟ್ಟಣದ ಸಂತೆ ಇರುವುದರಿಂದ ಸಂತೆ ಮಾಡಲು ನಾನು ಮತ್ತು ನಮ್ಮೂರಿನ ಶಿವಲಿಂಗಪ್ಪ ತಂದೆ ಮಹಾಂತಪ್ಪ ಇಂಬ್ರಾಂಪೂರ, ಗುಂಡಪ್ಪ ತಂದೆ ಶ್ರೀಮಂತರಾಯ ಕೊಗನೂರ, ಹಣಮಂತ ತಂದೆ ಬಸಣ್ಣ ಟೆಂಗಳಿ ಕೂಡಿಕೊಂಡು ನಮ್ಮೂರಿನ ಶಾಬುದ್ದಿನ್ ತಂದೆ ಫತ್ರುಸಾಬ ಕುಮಸಿ ಈತನಿಗೆ ಸಂಬಂಧಿಸಿದ ಗುಡ್ಸ್ ಟಂ.ಟಂ ವಾಹನ ಸಂ. ಕೆಎ32 ಬಿ-2453 ಇದರಲ್ಲಿ ನಾವೆಲ್ಲರು ಕುಳಿತು ನಮ್ಮೂರಿನಿಂದ ಆಳಂದಕ್ಕೆ ಇಂದು ಬೆಳಿಗ್ಗೆ 9 ಗಂಟೆಗೆ ಹೋಗಿದ್ದು ಆಗ ಟಂ.ಟಂ ಚಾಲಕ ಆದ ಶಾಬುದ್ದಿನ್ ಕುಮಸಿ ಈತನು ತನ್ನ ಫೈಜಾನ ಎಂಬ ಮಗನಿಗೆ ಸಂಗಡ ವಾಹನದಲ್ಲಿ ಕರೆದುಕೊಂಡು ಬಂದಿದ್ದನು ಆಳಂದಲ್ಲಿ ನಮ್ಮೆಲ್ಲರ ಸಂತೆ ಮುಗಿದ ನಂತರ ಮತ್ತೆ ಮರಳಿ ಅದೇ ಟಂ.ಟಂ ವಾಹನದಲ್ಲಿ ನಾವೆಲ್ಲರೂ ಕುಳಿತು ಆಳಂದ ದಿಂದ ಸುಮಾರು 12:45 ಗಂಟೆ ಸುಮಾರಿಗೆ ಆಳಂದ ಬಿಟ್ಟು ಆಲೂರ(ಬಿ)ಗೆ ಬರುವಾಗ ಆಳಂದ ಬಸ್ ನಿಲ್ದಾಣದ ಹತ್ತಿರ ಸುಂಟನೂರ ಗ್ರಾಮದ ಸಿದ್ದಮಲ್ಲಪ್ಪ ಎಂಬುವವರು ನಮ್ಮೊಂದಿಗೆ ನಮ್ಮ ವಾಹನದಲ್ಲಿ ಕುಳಿತುಕೊಂಡರು ನಮ್ಮ ಟಂ.ಟಂ ವಾಹನವು ಶಾಬುದ್ದಿನ್ ಕುಮಸಿ ಈತನು ಚಲಾಯಿಸಿಕೊಂಡು ಆಳಂದ ಕಲಬುರಗಿ ರೋಡಿನಲ್ಲಿ ಬರುತ್ತಿದ್ದಾಗ ಲಾಡ ಚಿಂಚೋಳಿ ಕ್ರಾಸ್ ದಾಟಿ ಮುಂದೆ ನೆಲ್ಲೂರ ಗ್ರಾಮದ ಕ್ರಾಸ್ ದಾಟಿದ ನಂತರ ನಮ್ಮ ಎದರುಗಡೆಯಿಂದ ಅಂದರೆ ಕಲಬುರಗಿ ಕಡೆಯಿಂದ ಒಂದು ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯ ಉಂಟು ಮಾಡುವ ಹಾಗೇ ಚಲಾಯಿಸಿಕೊಂಡು ಬಂದು ಎಡಬದಿಯಿಂದ ಹೋಗುತ್ತಿದ್ದ ನಮ್ಮ ಟಂ.ಟಂ ವಾಹನಕ್ಕೆ ಒಮ್ಮೆಲೇ ಡಿಕ್ಕಿ ಪಡಿಸಿದನು ಅದರಿಂದ ನಮ್ಮ ಟಂ.ಟಂ ವಾಹನ ಪಲ್ಟಿಯಾಗಿ ಬಿದ್ದುದ್ದರಿಂದ ನನಗೆ ಬೆನ್ನಿಗೆ, ಬಲಗೈಗೆ ರಕ್ತ ಮತ್ತು ಗುಪ್ತ ಗಾಯವಾಗಿರುತ್ತದೆ, ನನ್ನಂತೆ ವಾಹನದಲ್ಲಿದ್ದ ಶಿವಲಿಂಗಪ್ಪ ಇಂಬ್ರಾಂಪೂರ ಇವರ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ, ಮತ್ತು ಗುಂಡಪ್ಪ ಕೊಗನೂರ ಹಣಮಂತ ಟೆಂಗಳಿ ಸಿದ್ದಮಲ್ಲಪ್ಪ ಹಾಗೂ ಟಂ.ಟಂ ವಾಹನದ ಚಾಲಕನಾದ ಶಾಬುದ್ದಿನ್ ಕುಮಸಿ ಮತ್ತು ಅವನ ಮಗ ಫೈಜಾನ ಕುಮಸಿ ಇವರೆಲ್ಲರಿಗು ಭಾರಿ ರಕ್ತ ಮತ್ತು ಗುಪ್ತ ಗಾಯಗಳಾಗಿರುತ್ತವೆ,  ಅಂತಾ ಶ್ರೀ ಖಾಸಿಂ ಸಾಬ @ ಬಾಬು ತಂದೆ ಅಬ್ದುಲ ಸಾಬ ಮುಲ್ಲಾ ಸಾ: ಆಲೂರ(ಬಿ)  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ದಿನಾಂಕ  17-11-16 ರಂದು ಮುಂಜಾನೆ ನಾನು ಮತ್ತು ನನ್ನ ತಮ್ಮ ಅನೀಲ, ತಂಗಿ ಭಾಗಮ್ಮ, ಮೂವರು ಕೂಡಿಕೊಂಡು ರೋಡಿನ ಸೈಡಿನಿಂದ ನಡೆದುಕೊಂಡು ನನ್ನ ತಂಗಿಯಾದ  ಭಾಗಮ್ಮಳಿಗೆ ಶಾಲೆಗೆ ಬಿಡಲು ಹೋಗುತ್ತಿದ್ದೇವು. ಮುಂಜಾನೆ 9-30 ಗಂಟೆಗೆ ಸಿಂದಗಿ-ಜೇವರಗಿ ಮೇನ ರೋಡ  ಜೇವರಗಿ ಹೋರವಲಯದ ಎನ್.ಬಿ.ಲೇಔಟ್ ಹತ್ತಿರ ರೋಡಿನ ಸೈಡಿನಿಂದ ನಡೆದುಕೊಂಡು ಹೋಗುತ್ತಿದ್ದಾಗ ನಮ್ಮ ಹಿಂದುಗಡೆ ಅಂದರೆ ಸಿಂದಗಿ ರೋಡಿನ ಕಡೆಯಿಂದ ಒಂದು ಬಿಳಿ ಬಣ್ಣದ ಕಾರಿನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನನ್ನ ತಮ್ಮನಾದ ಅನೀಲ ಇತನಿಗೆ ಡಿಕ್ಕಿ ಪಡಿಸಿದ್ದರಿಂದ ನನ್ನ ತಮ್ಮ ಕೆಳಗೆ ಬಿದ್ದನು, ನಂತರ ಅಲ್ಲಿಯೇ ಇದ್ದ ಗಂಗಾರಾಮ ಇತನು ಓಡಿ ಬಂದಾಗ ನಾನು ಮತ್ತು ನನ್ನ ತಂಗಿ ಹಾಗೂ ಗಂಗಾರಾಮ ಮೂವರು ಕೂಡಿ ನನ್ನ ತಮ್ಮನಿನೆ ನೋಡಲಾಗಿ ಅಪಘಾತದಲ್ಲಿ ಅವನಿಗೆ ಎಡ ಮೇಲಕಿಗೆ, ಕಣ್ಣಿಗೆ, ಗದ್ದಕ್ಕೆ, ಎಡಕಪಾಳ ಮೇಲೆ ಎಡಭುಜದ ಮೇಲೆ, ಟೊಂಕದ ಮೇಲೆ ರಕ್ತಗಾಯವಾಗಿ ತಲೆಗೆ ಭಾರಿ ಗುಪ್ತಪೆಟ್ಟಾಗಿ ಮೂಗಿನಿಂದ ರಕ್ತ ಬರುತ್ತಿತ್ತು, ನಂತರ ಕಾರ ನಂಬರ ನೋಡಲಾಗಿ ಕೆಎ-32,ಸಿ-5714 ನೇದ್ದು ಇತ್ತು. ಅದರ ಚಾಲಕನಿಗೆ ನೋಡಲಾಗಿ ನಮ್ಮೂರ ಶಾಂತವೀರ ಪಾಟೀಲಿ ಇದ್ದು ಜನರು ಸೇರು ತ್ತಿದ್ದ ಹಾಗೆ ಅವನು ತನ್ನ ಕಾರನೊಂದಿಗೆ ಓಡಿ ಹೋದನು. ನಂತರ ನಾನು ಮತ್ತು ಗಂಗಾರಾಮ ಹಾಗೂ ಇತರರೂ ಕೂಡಿ ನನ್ನ ತಮ್ಮನಿಗೆ  ರೋಡಿನಲ್ಲಿ ಬರುತ್ತಿದ್ದ ಒಂದು ಅಟೋದಲ್ಲಿ ಹಾಕಿಕೊಂಡು ಉಪಚಾರ ಕುರಿತು ಜೇವರಗಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದೇವು ಆಸ್ಪತ್ರೆಯಲ್ಲಿ 10-15 .ಎಮ್ ಕ್ಕೆ ನನ್ನ ತಮ್ಮ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ಶಿವುಕುಮಾರ ತಂದೆ ರಾಜು ಕಲ್ಲೂರ ಸಾ:ಓಂ ನಗರ ಜೇವರಗಿ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ನಾಗಯ್ಯ ತಂದೆ ಶಿವಶರಣಯ್ಯಾ ಮಟಪತಿ ಸಾ ದೇವಿ ನಗರ ಕಲಬುರಗಿ ರವರು ದಿನಾಂಕ:08/11/2016 ರಂದು ಟಿ.ವಿ.ಎಸ್‌‌ ಜುಪೀಟರ್‌‌ ಡಿಸ್ಕ್‌‌ ಮೋಟಾರ ಸೈಕಲ ಕಲಬುರಗಿ ನಗರದ ಎಸ್‌‌.ಕೆ ಆಟೋಮೊಬೈಲ್ಸ್‌ದಲ್ಲಿ ಖರೀದಿ ಮಾಡಿರುತ್ತೇನೆ. ಇನ್ನೂ ಅದಕ್ಕೆ ಆರ್‌‌.ಟಿ.ಓ ಆಫೀಸನಲ್ಲಿ ನೊಂದಣಿ ಮಾಡಿಸಿರುವದಿಲ್ಲಾ.ಅದರ TP NO.KA32TP024635 ನೇದ್ದು ಇದ್ದು ಅದರ CHASSIS NO.MD626BG46G1K15049, ENGINE NO.BG4KG1708851 ಇರುತ್ತದೆ. ದಿನಾಂಕ:14/11/2016 ರಂದು ಸಾಯಂಕಾಲ 3.00 ಗಂಟೆ ಸುಮಾರಿಗೆ ನಾನು ಈ ಮೋಟಾರ ಸೈಕಲನ್ನು ನನ್ನ ಮನೆಯ ಕಂಪೌಂಡ ಒಳಗಡೆ ನಿಲ್ಲಿಸಿ ನಮ್ಮ ಸ್ವಂತ ಊರಾದ ಆಳಂದ ತಾಲ್ಲೂಕಿನ ಕಣಮಸ ಗ್ರಾಮಕ್ಕೆ ಜಾತ್ರೆ ಸಂಬಂಧ ನನ್ನ ಕುಟುಂಬದೊಂದಿಗೆ ಹೋಗಿರುತ್ತೆನೆ. ದಿನಾಂಕ:17/11/2016 ರಂದು ಮಧ್ಯಾನ 12.00 ಗಂಟೆಗೆ ನಾನು ಮನೆಗೆ ಬಂದು ನೋಡಲು ನನ್ನ ಮೋಟಾರ ಸೈಕಲ ಇರಲಿಲ್ಲಾ ನಾನು ಅಲ್ಲಲ್ಲಿ ಹುಡುಕಾಡಿದರು ನನ್ನ ಮೋಟಾರ ಸೈಕಲ ಸಿಕ್ಕಿರುವದಿಲ್ಲಾ. ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.