POLICE BHAVAN KALABURAGI

POLICE BHAVAN KALABURAGI

06 March 2012

GULBARGA DIST REPORTED CRIMES

ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಠಾಣೆ:
ಶ್ರೀ ಬಸವರಾಜ ತಂದೆ ದಸ್ತಯ್ಯ ಗುತ್ತೇದಾರ ಸಾ ಭಟ್ಟರಗಾ, ತಾ ಅಳಂದ, ಹಾ ವ ವಿಶ್ವರಾಧ್ಯ ಕಾಲೋನಿ ಗುಲಬರ್ಗಾರವರು ನಾನು ಗ್ರಾಮ ಪಂಚಾಯತಿಯ ಉದ್ಯೋಗ ಖಾತ್ರಿ ಕೆಲಸ ನಾನು ಮಾಡಿಸಿದ್ದು ನನ್ನಂತೆ ನಮ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ದಂಗಾಪೂರ ಗ್ರಾಮದ ನಾಗರಾಜ ತಂದೆ ಬರಗಾಲಸಿದ್ದ ಈತನು ಸಹ ಉದ್ಯೋಗ ಖಾತ್ರಿ ಕೆಲಸ ನಾನು ಮಾಡಿಸಿದ್ದು, ಇಲ್ಲಿಯವರೆಗೆ ಬಿಲ್ಲುಗಳು ಆಗಿರುವದಿಲ್ಲಾ , ಅದಕ್ಕೆ ನಾನೇ ಕಾರಣ ಅಂತ ಆಗಾಗ ಹೇಳುತ್ತಾ ಬಂದಿದ್ದು ಇರುತ್ತದೆ.ದಿನಾಂಕ 05-03-2012 ರಂದು ರಾತ್ರಿ 8-30 ಗಂಟೆಯ ಸುಮಾರಿಗೆ ಕೆಲಸ ಮುಗಿಸಿಕೊಂಡು ನಾನು ಮಹಾಂತಪ್ಪ ಮತ್ತು ಸಂತೋಷ ಮೂವರು ಕೂಡಿಕೊಂಡು ಡಬರಾಬಾದ ಕ್ರಾಸದಿಂದ ಸಂತೋಷ ಕಾಲೋನಿ ಕಡೆಗೆ ಹೋಗುತ್ತಿರುವಾಗ, ನಾಗರಾಜ್ ಈತನು ತನ್ನ ಜೊತೆಗೆ ಇನ್ನಿಬ್ಬರನ್ನು ಕರೆದುಕೊಂಡು ಬಂದು ಅವಾಚ್ಯವಾಗಿ ಬೈದು ನೀನು ಉದ್ಯೋಗ ಖಾತ್ರಿ ಬಿಲ್ಲು ಆಗಬಾರದೆಂದು ಹೇಳಿದ್ದಿ ಅಂತ ಎದೆಯ ಮೇಲಿನ ಅಂಗಿ ಹಿಡಿದು, ಕೈಯಿಂದ ಹೊಟ್ಟೆಯ ಮೇಲೆ ಹೊಡೆದನು. ಅಲ್ಲಿಯೇ ಬಿದ್ದ ಒಂದು ಕಲ್ಲಿನಿಂದ ಹೊಡೆದಾಗ ಆ ಏಟು ನನ್ನ ಮೂಗಿನ ಮೇಲೆ ಬಿದ್ದು ರಕ್ತಗಾಯವಾಗಿರುತ್ತದೆ. ಅವನ ಜೊತೆಯಲ್ಲಿದ್ದ ಇನ್ನಿಬ್ಬರು ಸಹ ನನಗೆ ಹೊಡೆ ಬಡೆ ಮಾಡಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 17/12 ಕಲಂ 341, 323, 324, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀ ಉಮೇಶ ತಂದೆ ಈರಪಣ್ಣಾ ಬಬಡಿ ಸಾಃಚಿಟಗುಪ್ಪಾ ತಾಃಹುಮನಾಬಾದ ಜಿಃ ಬೀದರ ರವರು ನಾನು ಮತ್ತು ನನ್ನ ಗೆಳೆಯನಾದ ನಾಗರಾಜ ಇಬ್ಬರೂ ಕೂಡಿಕೊಂಡು ದಿನಾಂಕ: 06/03/12 ರಂದು ಮೋಟಾರ ಸೈಕಲ ನಂಬರ ಕೆಎ:39, ಹೆಚ್:2649 ನೇದ್ದರ ಮೇಲೆ ಕುಳಿತುಕೊಂಡು ಖಾಸಗಿ ಕೆಲಸದ ನಿಮಿತ್ಯಾ ಗುಲಬರ್ಗಾಕ್ಕೆ ಬಂದು ಮರಳಿ ಚಿಟಗುಪ್ಪಾಕ್ಕೆ ಹೋಗುತ್ತಿರುವಾಗ ಗುಲಬರ್ಗಾ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ಸಂ. 218 ನೇದ್ದರ ರೋಡಿನ ಕುದುರೆ ಮುಖದ ಹೊಡ್ಡಿನ ಹತ್ತಿರ ಹುಮನಾಬಾದ ಕಡೆಯಿಂದ ಟವೇರಾ ಕಾರ ನಂ. ಕೆಎ:25, ಸಿ:2547 ನೇದ್ದರ ಚಾಲಕನಾದ ಸಂತೋಷ ತಂದೆ ಭೀಮಪ್ಪಾ ಕಾಳೆ ಸಾಃ ಧಾರವಾಡ ಈತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನನಗೆ ಹಣೆಯ ಬಲಭಾಗದ ಹತ್ತಿರ ರಕ್ತಗಾಯ ಹಾಗು ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿದ್ದು. ಮತ್ತು ನಾಗರಾಜ ಈತನಿಗೆ ಅಲ್ಲಲ್ಲಿ ತರಚಿದ ರಕ್ತಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 22/12 ಕಲಂ. 279, 337 ಐಪಿಸಿ ನೇದ್ದರ ಪ್ರಕಾರ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀ ಸುರೇಶ ತಂದೆ ಮಾಧುರಾವ ಘಾಟಗೆ ಸಾಃ ಕಮಲಾಪೂರ ತಾಃಜಿಃ ಗುಲಬರ್ಗಾ ರವರು ನಾನು, ನನ್ನ ಗೆಳೆಯನಾದ ರಾಮಲಿಂಗ ತಂದೆ ಶರಣಯ್ಯಾ ಇಬ್ಬರು ಕೂಡಿಕೊಂಡು ನನ್ನ ಮೋ.ಸೈ ನಂ. ಕೆಎ:32, ಡಬ್ಲೂ:5537 ನೇದ್ದರ ಮೇಲೆ ದಿನಾಂಕ: 06/03/12 ರಂದು ಬೆಳಿಗ್ಗೆ ಖಾಸಗಿ ಕೆಲಸದ ನಿಮಿತ್ಯಾ ಸೊಂತ ಗ್ರಾಮಕ್ಕೆ ಹೋಗಲು ಕಮಲಾಪೂರ ಪೆಟ್ರೋಲ ಪಂಪದಲ್ಲಿ ಪೆಟ್ರೋಲ ಹಾಕಿಸಿಕೊಳ್ಳುತ್ತಿರುವಾಗ ಅದೇ ವೇಳೆಗೆ ನಮ್ಮೂರಿನ ಹಣಮಂತ ತಂದೆ ಭೀಮಣ್ಣಾ ಜಮಾದಾರ ಲೈನಮ್ಯಾನ ಸಾಃಧನ್ನೂರ ಹಾಃವಃ ಕಮಲಾಪೂರ ಈತನು ಕೂಡಾ ತನ್ನ ಮೋ.ಸೈ ಕೆಎ:39, ಈ:6787 ನೇದ್ದರಲ್ಲಿ ಪೆಟ್ರೋಲ ಹಾಕಿಸಲು ಬಂದಾಗ ನಾವು ಆತನಿಗೆ ಎಲ್ಲಿಗೆ ಹೊರಟಿರುವಿ ಅಂತಾ ಮಾತನಾಡಿಸಲು ಆತನು ನಾನು ಡೊಂಗರಗಾಂವ ಗ್ರಾಮಕ್ಕೆ ಹೊರಟಿದ್ದೇನೆ ಅಂತಾ ತಿಳಿಸಿದಾಗ ನಾವು ಮತ್ತು ಹಣಮಂತ ಮೋಟಾರ ಸೈಕಲಗಳಿಗೆ ಪೆಟ್ರೋಲ ಹಾಕಿಸಿಕೊಂಡು ಪೆಂಟೋಲ ಪಂಪ ಮುಂದುಗಡೆ ಇರುವ ಗುಲಬರ್ಗಾ ಹುಮನಾಬಾದ ರಾಷ್ಟ್ರೀಯ ಹೆದ್ದಾರಿ ಸಂ.218 ನೇದ್ದರ ರೋಡಿನ ಮೇಲೆ ಹೋಗುತ್ತಿರುವಾಗ ಹುಮನಾಬಾದ ಕಡೆಯಿಂದ ಮಾರುತಿ ಸ್ವೀಪ್ಟ್ ಕಾರ ನಂ. ಎಪಿ:29, ಬಿಎಫ್:5028 ನೇದ್ದರ ಚಾಲಕ ಸಾಯಿಬಾಲಾಜಿ ತಂದೆ ಭದ್ರರಾವ ಸಾಃಹೈದ್ರಾಬಾದ ಈತನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಹಣಮಂತ ಇತನ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ಹಣಮಂತ ಇತನು ಭಾರಿಗಾಯ ಹೊಂದಿದ್ದು ಎಡಗಾಲಿಗೆ ಭಾರಿ ಒಳಪೆಟ್ಟಾಗಿ ಮುರಿದಂತಾಗಿದ್ದರಿಂದ ಉಪಚಾರ ಕುರಿತು 108 ಅಂಬುಲೇನ್ಸಗೆ ಫೋನ ಮಾಡುತ್ತಿರುವಾಗ ಕಾರ ಚಾಲಕನು ತನ್ನ ಕಾರನ್ನು ನಿಲ್ಲಿಸದೇ ಕಾರ ಸಮೇತ ಓಡಿ ಹೋಗಿರುತ್ತಾನೆ. ಹಣಮಂತ ಈತನಿಗೆ ಉಪಚಾರಕ್ಕಾಗಿ ಗುಲಬರ್ಗಾ ಆಸ್ಪತ್ರೆಗೆ ಕೊಟ್ಟು ಕಳುಸಿರುತ್ತೇವೆ. ಅಪಘಾತ ಪಡಿಸಿದ ಕಾರ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 23/12 ಕಲಂ. 279, 337, 338 ಐಪಿಸಿ ಸಂ. 187 ಐಎಂವಿ ಎಕ್ಟ್ ನೇದ್ದರ ಪ್ರಕಾರ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಕಮಲಾಪೂರ ಠಾಣೆ:
ಶ್ರೀಮತಿ ಅನುಸೊಯಾಬಾಯಿ ಗಂಡ ಪಾಂಡುರಂಗ ಹಳ್ಳಿಖೇಡ ಸಾಃ ಕಾಳಮಂದರಗಿ ರವರು ನಾನು ಮನೆಯಲ್ಲಿದ್ದಾಗ ಲಾಲಪ್ಪಾ ಈತನ ಅಳಿಯನಾದ ದ್ಯಾವಪ್ಪಾ ತಂದೆ ಬಸಣ್ಣ ಹೊಳ್ಕರ ಈತನು ನಮ್ಮ ಮನೆಯ ಮುಂದಿನ ರಸ್ತೆಯ ಮೇಲೆ ನಿಂತುಕೊಂಡು ಹೊಲದ ಬಂದಾರಿಯಲ್ಲಿ ನಮ್ಮ ಮಾವ ಮಲ್ಕಪ್ಪಾ ಹಾಗು ಕಾಂತವ್ವ ಇಬ್ಬರು ಕಟ್ಟಿಗೆ ಕಡಿಯುತ್ತಿದ್ದಾಗ ನೀವು ಬೈಯುದು ಕಳುಹಿಸಿದ್ದಿರಿ ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ನಾನು ಮನೆಯಿಂದ ಹೊರಗೆ ಬಂದು ಈ ರೀತಿ ಬೈಯುವುದು ಸರಿ ಅಲ್ಲಾ ನಾವು ಸಂಬಂಧಿಕರು ಇದ್ದೇವೆ. ನನ್ನ ಗಂಡ ಮನೆಯಲ್ಲಿ ಇಲ್ಲಾ ಹೊಲಕ್ಕೆ ಹೋಗಿದ್ದಾರೆ ಅಂತಾ ಅಂದಾಗ ದ್ಯಾವಪ್ಪಾ ಈತನು ಏ ರಂಡಿ ನೀನು ನನಗೆ ಎದುರು ಮಾತನಾಡುತ್ತಿ ನಾವು ನೀವು ಯಾವ ಸಂಬಂಧಿಕರು ನಿನಗೆ ಸೊಕ್ಕು ಬಂದಿದೆ ಅಂತಾ ಅಂದವನೇ ಅಲ್ಲೇ ಬಿದ್ದಿರುವ ಕಲ್ಲನ್ನು ತೆಗೆದುಕೊಂಡು ಬೆನ್ನ ಮೇಲೆ ಹೊಡೆದನು. ಆಗ ನಾನು ನೆಲದ ಮೇಲೆ ಬಿದ್ದಾಗ ಕಾಲಿನಿಂದ ನನ್ನ ಹೊಟ್ಟೆಯ ಒದ್ದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 24/2012 ಕಲಂ. 323, 324, 504 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.

GULBARGA DIST REPORTED CRIMES

ಕಳ್ಳತನ ಪ್ರಕರಣ:

ಸ್ಟೇಶನ ಬಜಾರ ಠಾಣೆ:ಶ್ರೀ ಮಲ್ಲಿಕಾರ್ಜುನ ತಂದೆ ವಿರಭದ್ರಪ್ಪ ಕುಕುಂಧ ಉ|| ಸೇಡಂದಲ್ಲಿ ಹಾರ್ಡವೇರ್ ವ್ಯಾಪಾರ ಸಾ|| ನಾಗರ ಕಟ್ಟೆ ಸೇಡಂ ಹಾ|| || ಶ್ರೀಕಾಂತ ಪವಾರ ಇವರ ಮನೆಯಲ್ಲಿ ಬಾಡಿಗೆ ವೆಂಕಟೇಶ ನಗರ ಗುಲಬರ್ಗಾ ನಾನು ಸುಮಾರು ವರ್ಷಗಳಿಂದ ಸೇಡಂದಲ್ಲಿ ಶ್ರೀರಾಮಚಂದ್ರ ಮಿಶನ್ ಆಧ್ಯಾತ್ಮಿಕ ಸಂಸ್ಥೆ ಕೇಂದ್ರದಲ್ಲಿ, ಕೇಂದ್ರದ ಸಂಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದೆನೆ. ಸೇಡಂದಲ್ಲಿ ಶ್ರೀರಾಮಚಂದ್ರ ಮಿಶನ್ ಸಂಸ್ಥೆ ಅಡಿಯಲ್ಲಿ ಜ್ಞಾನ ಮಂದಿರ ಕಟ್ಟಡ ರಚನೆಯಾಗುತ್ತಿದ್ದು, ಈ ಕಟ್ಟಡದ ವೆಚ್ಚಕ್ಕಾಗಿ ಕೇಂದ್ರ ಕಛೇರಿ ಚೆನೈದಿಂದ 4,00,000=00 ನಗದು ರೂಪಾಯಿ ಮಂಜೂರಾಗಿದ್ದು, ಈ ಹಣ ಗುಲಬರ್ಗಾ ಕೇಂದ್ರದ ಖಾತೆಗೆ ಜಮಾ ಆಗಿರುತ್ತದೆ. ಡಾ|| ಗಜೇಂದ್ರ ಸಿಂಗ್ ಮತ್ತು ಅಶೋಕ ಬಿರಾದಾರ ಹೆಸರಿನಿಂದ ಜೆಂಟಿ ಖಾತೆ ಇರುತ್ತದೆ. ಚೆಕ್ಕನ್ನು ಅಶೋಕ ಬಿರಾದಾರ ಇವರ ಜೋತೆಗೆ ಸ್ಟೇಟ್ ಬ್ಯಾಂಕ್ ಆಫ್ ಹೈದ್ರಾಬಾದ ಸ್ಟೇಷನ ಬಜಾರ ಶಾಖೆಗೆ ಕಳುಹಿಸಿಕೊಡುತ್ತೆನೆ ನೀವು ಆ ಬ್ಯಾಂಕಿನಲ್ಲಿ ಹೋಗಿ ಅಶೋಕ ಬಿರಾದಾರ ರವರನ್ನು ಕಂಡು ಚೆಕ್ಕ ಡ್ರಾ ಮಾಡಿದ ನಂತರ ಅವರಿಂದ 4,00,000=00 ನಗದು ರೂಪಾಯಿ ಹಣ ಪಡೆದುಕೊಳ್ಳಿ ಅಂತಾ ಹೇಳಿದ್ದರು. ದಿನಾಂಕ : 05/03/2012 ರಂದು 12.15 ಪಿ.ಎಮ್ ಕ್ಕೆ ಬ್ಯಾಂಕಿನಲ್ಲಿ ಚೆಕ್ಕನ್ನು ಡ್ರಾ ಮಾಡಿಕೊಳ್ಳುವಾಗ ಅಂದಾಜು 12.45 ಪಿ.ಎಮ್ ಆಗಿರಬಹುದು. ಹಣ ಡ್ರಾ ಆದ ನಂತರ ನಾನು ಮತ್ತು ಅಶೋಕ ಬಿರಾದಾರ ಇದೆ ಸಂಸ್ಥೆಯಲ್ಲಿ ಕೆಲಸ ಮಾಡುವ ಮನೋಹರ ಸಿಂಗ್ ಕೂಡಿ ಹಣವನ್ನು ಬ್ಯಾಂಕಿನಲ್ಲಿ ಕುಳಿತುಕೊಂಡು ಏಣಿಸಿ ನೋಡಲಾಗಿ ಸರಿ ಇದ್ದವು. 4,00,000=00 ನಗದು ರೂಪಾಯಿಗಳನ್ನು ನಾನು ತೆಗೆದುಕೊಂಡು ಹೋಗಿದ್ದ ದ್ವಿಚಕ್ರ ವಾಹನ ನಂಬರ ಕೆಎ 32 ಡಬ್ಲೂ 3401 ನೇದ್ದರ ಶೀಟಿನ ಕೆಳಗೆ (ಡಿಕ್ಕಿ) ಇಟ್ಟು ಲಾಕ ಮಾಡಿಕೊಂಡು ವಾಹನ ಸಮೇತ ಡಾ|| ಘನಾಟೆ ಆಸ್ಪತ್ರೆಯ ಹಿಂದೆ ಅಪೈರ್ ಲೈನ್ ಕಾಲೋನಿಯಲ್ಲಿರುವ ಕಾಯಿ ಪಲ್ಯ ಅಂಗಡಿಗೆ ಹೋಗಿ ಉಳ್ಳಾಗಡ್ಡಿ ತೆಗೆದುಕೊಂಡು ಮನೆಗೆ ಹೋಗಬೇಕು ಅಂತಾ ನಿರ್ಧರಿಸಿ ತರಕಾರಿ ಅಂಗಡಿ ಹತ್ತಿರ ದ್ವಿಚಕ್ರ ವಾಹನ ನಿಲ್ಲಿಸಿ ವಾಹನದ ಲಾಕ್ ವಾಹನದಲ್ಲಿಯೇ ಬಿಟ್ಟು ಉಳ್ಳಾಗಡ್ಡಿ ಖರೀದಿಮಾಡಿಕೊಂಡು ವಾಹನದ ಹತ್ತಿರ ಬಂದು ನೋಡಲಾಗಿ ವಾಹನದ ಲಾಕ್ ಡಿಕ್ಕಿಗೆ ಇತ್ತು. ಡಿಕ್ಕಿ ತೆಗೆದು ನೋಡಲಾಗಿ ನಾನು ವಾಹನದ ಡಿಕ್ಕಿಯಲ್ಲಿಟ್ಟದ್ದ 4,00,000=00 ನಗದು ರೂಪಾಯಿಗಳನ್ನು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದಾರೆ. ಕಾಯಿ ಪಲ್ಯ ಮಾರಾಟ ಮಾಡುವ ಹೆಣ್ಣು ಮಗಳಿಗೆ ನನ್ನ ಗಾಡಿಯ ಹತ್ತಿರ ಯಾರು ಬಂದಿದ್ದರು ಅಂತಾ ಕೇಳಲಾಗಿ ಎರಡು ಜನ ಹುಡುಗರು ಅದರಲ್ಲಿ ಒಬ್ಬನು ಇನ್ ಶರ್ಟ ಮಾಡಿದ್ದ, ಮತ್ತೊಬ್ಬನ್ನು ನೀಲಿ ಬಣ್ಣದ ಟಿ. ಶರ್ಟ ಹಾಕಿದ್ದ ಅವರಿಬ್ಬರು ಕೂಡಿ ನಿಮ್ಮ ಗಾಡಿಯ ಡಿಕ್ಕಿ ತೆರೆದು ಒಳಗಡೆ ಇದ್ದ ಒಂದು ಕ್ಯಾರಿ ಬ್ಯಾಗನ್ನು ತೆಗೆದುಕೊಂಡು ಅವರು ತಂದಿದ ಮೋಟಾರ ಸೈಕಲ್ ಮೇಲೆ ಕುಳಿತುಕೊಂಡು ಹೋಗಿದ್ದಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 21/12 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಯು.ಡಿ.ಅರ್. ಪ್ರಕರಣ:

ನರೋಣಾ ಪೊಲೀಸ ಠಾಣೆ: ಶ್ರೀ ರಸೂಲ ತಂದೆ ದಸ್ತಗಿರಿ ನಾಗೂರೆ ಸಾ: ಬೆಳಮಗಿ ವರು ನ್ನ ತಂದೆ ದಸ್ತಗಿರಿ ನಾಗೂರೆ ವಯ: 65 ವರ್ಷ ಇತನು ಮನೆಯಿಂದ ಮುಂಜಾನೆ 8-00 ಗಂಟೆಯ ಸುಮಾರಿಗೆ ಕಟ್ಟೆಗೆ ಖರೀದಿಸಲು ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿರುತ್ತಾರೆ. ಆದರೆ ಕಲ್ಯಾಣರಾವ ಸಂಭಾಜಿ ರವರ ತೋಟದ ತಗಡದ ಕೊಟ್ಟಿಗೆಯಲ್ಲಿ ಬಿದ್ದಿರುವದನ್ನು ತಿಳಿದುಕೊಂಡು ಸ್ಥಳಕ್ಕೆ ಹೋಗಿ ನೋಡಲು ತಮ್ಮ ತಂದೆಯವರು ಉತ್ತರ ಕ್ಕೆ ತಲೆ ಮಾಡಿ ಅಂಗಾಂತಾಗಿ ಬಿದ್ದಿದ್ದು ಹತ್ತಿರ ಯಾವುದೋ ಕ್ರಿಮಿನಾಶಕ ಔಷಧಿಯ ವಾಸನೆ ಬರುತ್ತಿದ್ದು ಎಬ್ಬಿಸಲು ಎಳಲಿಲ್ಲ ಬಾಯಿಯಿಂದ ಬಿಳಿಯ ಬೂರುಗು ಬಂದಿದ್ದು ತಂದೆಯವರು ಮೃತ ಪಟ್ಟಿದ್ದು ತಂದೆಯವರು ವಿ ಕೆ ಸಲಗರ ಕೆ ಬಿ ಬ್ಯಾಂಕಿನಲ್ಲಿ 1 ಲಕ್ಷ ರೂಪಾಯಿ ಸಾಲ ಮಾಡಿದ್ದು ಹಾಗೂ ಮನೆಯ ನಡೆಸುವ ಸಮಸ್ಯೆಯಲ್ಲಿ ಮಾನಸಿಕ ಮಾಡಿಕೊಂಡು ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಆತ್ಯ ಹತ್ಯೆ ಮಾಡಿಕೊಂಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಯುಡಿಆರ್ ನಂ 02/2012 ಕಲಂ 174 ಸಿ ಆರ್ ಪಿ ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ರಾಣಪ್ಪ ತಂದೆ ಸಂಬಣ್ಣಾ ದೊಡ್ಡಮನಿ ಸಾ: ಕೆರೆ ಭೋಸಗಾ ಗ್ರಾಮ ತಾ:ಜಿ: ಗುಲಬರ್ಗಾರವರು ನಾನು, ನನ್ನ ಮಗ ಶರಣಬಸಪ್ಪ, ಮತ್ತು ಸಿದ್ರಾಮಪ್ಪ ಮೂರು ಜನರು ಹೊಲದಿಂದ ಕೆಲಸ ಮುಗಿಸಿಕೊಂಡು ಎತ್ತಿನ ಬಂಡಿಯಲ್ಲಿ ಕುಳಿತುಕೊಂಡು ಮನೆಗೆ ಕಡೆ ಹೊರಟಿದ್ದು ಹಿಂದಿನಿಂದ (ಗುಲಬರ್ಗಾ) ಕಡೆಯಿಂದ ಹಿರೋ ಹೊಂಡಾ ಕರಿಶ್ಮಾ ಸವಾರ ಬಾಹು ಬಲಿ ತಂದೆ ಜವಾಹರ ಲಾಲ ಹೊಸಳ್ಳಿ ಸಾ: ಜೈನ ಗಲ್ಲಿ ಆಳಂದ ಇತನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ನಮ್ಮ ಎತ್ತಿನ ಬಂಡಿಗೆ ಡಿಕ್ಕಿ ಹೊಡೆದಿದ್ದರಿಂದ ಡಿಕ್ಕಿ ಹೊಡೆದ ರಭಸಕ್ಕೆ ಬಂಡಿಯ ತೊಟ್ಟಿಲು ಮತ್ತು ಹಂದಿಗೊಡ್ಡ ಜಾಯಿಂಟ ಮುರಿದಿದ್ದು ಇರುತ್ತದೆ. ಅಲ್ಲದೇ ಎತ್ತಿನ ಬಂಡಿಯಲ್ಲಿದ್ದ ಜನರಿಗೆ ಮತ್ತು ಮೋಟಾರ ಸೈಕಲ ಮೇಲೆ ಬಿದ್ದ ಇಬ್ಬರಿಗೂ ಸಾದಾ ಮತ್ತು ಭಾರಿ ರಕ್ತಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 69/2012 ಕಲಂ 279,337,338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಶೈಲೇಸ ತಂದೆ ಸುರೇಶ ಕಾಂಬಳೆ ಸಾ: ಘಾಟಗೇ ಲೇಔಟ್ ಗುಲಬರ್ಗಾರವರು ನಾನು ಮತ್ತು ನನ್ನ ಗೆಳೆಯ ವೆಂಕಟೇಶ ದಿಃ05-03-12 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಶರಣಸಿರಸಗಿ ಹೋಗಿ ಬರುವಾಗ ಅನಿಲ, ಚೇತನ, ಅರುಣ ರವರು ಕೂಡಿಕೊಂಡು ಬಡಿಗೆಯಿಂದ ಪಂಚನಿಂದ ಹೊಡೆದು ರಕ್ತಗಾಯಗೊಳಿಸಿ ಜೀವದ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 70/2012 ಕಲಂ 341, 323,324, 504, 506 (2) ಸಂ.34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಸುಳ್ಳು ಗುನ್ನೆ ದಾಖಲ ಮಾಡಲು ಬಂದು ಸಿಕ್ಕಿ ಬಿದ್ದ ತಂದೆ ಮಗ:

ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಶರಣು ತಂದೆ ಚಂದ್ರಕಾಂತ ಗೋಗಿ ಸಾ|| ಶಹಾಬಜಾರ ಗುಲಬರ್ಗಾರವರು ಮತ್ತು ಆತನ ತಂದೆ ಚಂದ್ರಕಾಂತ ಗೋಗಿ ಇಬ್ಬರೂ ಪೊಲೀಸ್ ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಬರೆದ ದೂರು ಸಲ್ಲಿಸಿದ್ದು, ಅದರ ಸಂಕ್ಷೀಪ್ತ ಸಾರಾಂಶವೇನೆಂದರೆ, ದಿನಾಂಕ 02-03-2012 ರಂದು ನನ್ನ ತಂದೆ ಹೇಳಿದಂತೆ ಶಹಾಬಜಾರ ಬಡಾವಣೆಯ ಕಾರ್ಪೊರೇಷನ ಬ್ಯಾಂಕಕ್ಕೆ ಹೋಗಿ ನನ್ನ ತಂದೆಯ ಬ್ಯಾಂಕ್ ಖಾತೆ ಸಂಖ್ಯೆ 3030 ರಲ್ಲಿಯ 90,000/-ರೂಪಾಯಿ ಮದ್ಯಾಹ್ನ 12 ಗಂಟೆಗೆ ಡ್ರಾ ಮಾಡಿಕೊಂಡು, ಬ್ಯಾಂಕ್ ನಿಂದ ಶಹಾಬಜಾರ ನಾಕಾ ಹತ್ತಿರ ಬಂದು ನನ್ನ ಮೊಬೈಲಕ್ಕೆ ರಿಚಾರ್ಜ ಮಾಡಿಸಿ, ಚೌಡೇಶ್ವರಿ ಕಾಲೋನಿಗೆ ಹೋಗುವ ರೋಡ್ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡಿ ಹಿಂತಿರುಗುವಾಗ ಇಬ್ಬರು ಅಪರಿಚಿತರು ಸ್ಕೂಟರ್ ಮೇಲೆ ಬಂದು, ನನಗೆ ಹಿಡಿದುಕೊಂಡು, ಹೊಡೆಬಡೆ ಮಾಡಿ ಬ್ಯಾಂಕಿನಿಂದ ಡ್ರಾ ಮಾಡಿ ತಂದಿರುವ 90,000/-ರೂಪಾಯಿ ಮತ್ತು ಅವನಲ್ಲಿದ್ದ 10,000/-ರೂಪಾಯಿ ಹೀಗೆ ಒಟ್ಟು 1,00,000/-ರೂಪಾಯಿಗಳು ದೋಚಿಕೊಂಡು ಹೋಗಿರುತ್ತಾರೆ. ಅಂತಾ ದೂರು ದಾಖಲ ಮಾಡಿಕೊಳ್ಳಲು ಲಿಖಿತ ಅರ್ಜಿ ಸಲ್ಲಿಸಿದ ಮೇರೆಗೆ, ದೂರಿನ ಸಾರಾಂಶದ ವಿಷಯ ಮೇಲಾಧಿಕಾರಿಗಳಿಗೆ ತಿಳಿಸಿ, ಪ್ರಕರಣದ ಪತ್ತೆ ಕುರಿತು ನಾನು ಹಾಗು ನಗರದ ಪೊಲೀಸ್ ಅಧಿಕಾರಿಗಳು ಸಾಯಂಕಾಲದವರೆಗೆ ತಿರುಗಾಡಿದರೂ ಯಾವ ಸುಳಿವು ಸಿಗದ ಕಾರಣ, ದಿನಾಂಕ 03-03-2012 ರಂದು ಬ್ಯಾಂಕ ಅವಧಿಯಲ್ಲಿ ಶಹಾಬಜಾರ ಬಡಾವಣೆಯ ಕಾರ್ಪೊರೇಷನ ಬ್ಯಾಂಕಿಗೆ ಹೋಗಿ ಖಾತೆ ಸಂಖ್ಯೆ 3030 ನೇದ್ದನ್ನು ಪರಿಶೀಲನೆ ಮಾಡಲು ಸದರಿಯವರ ಖಾತೆಯಲ್ಲಿ ದೂರಿನಲ್ಲಿ ನಮೂದಿಸಿದ ಮೊತ್ತದ ಹಣ ದಿನಾಂಕ 02-03-2012 ರಂದು ಡ್ರಾ ಮಾಡಿದ ಬಗ್ಗೆ ನಮೂದು ಇದ್ದಿರಲಿಲ್ಲಾ. ಇದರಿಂದ ಫಿರ್ಯಾದಿ ಕೊಟ್ಟ ಲಿಖಿತ ದೂರು ಸತ್ಯಕ್ಕೆ ದೂರವಾದ ವಿಷಯ ಅಂತ ಖಚಿತಪಡಿಸಿಕೊಂಡು, ಫಿರ್ಯಾದಿ ಹಾಗು ಅತನ ತಂದೆಯ ವಿರುದ್ಧ ಕಲಂ 177 ಐಪಿಸಿ ಅಡಿಯಲ್ಲಿ ಕ್ರಮ ಜರುಗಿಸಲು ವರದಿಯನ್ನು ತಯ್ಯಾರಿಸಿ ಮಾನ್ಯ ನ್ಯಾಯಾಲಯಕ್ಕೆ ಕಳುಹಿಸಿದ್ದು, ಮಾನ್ಯ ನ್ಯಾಯಾಲಯವು ಕ್ರಮ ಜರುಗಿಸಲು ಪರವಾನಿಗೆ ನೀಡಿದ ಮೇರೆಗೆ ಸದರಿಯವರಿಬ್ಬರ ವಿರುದ್ಧ ಪಿ.ಎಸ.ಐ ಶ್ರೀ ಬಸವರಾಜ್ ತೇಲಿ ಪಿ.ಎಸ್.ಐ ರಾಘವೇಂದ್ರ ನಗರ ಪೊಲೀಸ್ ಠಾಣೆ ಗುಲಬರ್ಗಾ ರವರು ಗುನ್ನೆ ನಂ 16/12 ಕಲಂ 177 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.