POLICE BHAVAN KALABURAGI

POLICE BHAVAN KALABURAGI

30 August 2013

ಮಾರಣಾಂತಿಕ ಹಲ್ಲೆ ಪ್ರಕರಣ :
ಕಮಲಾಪೂರ ಠಾಣೆ : ಶ್ರೀ ಮೋಯಿನುಲ್ಲಾ  ಹುಸೇನಿ @ ಬಾಬಾ ತಂದೆ ಸೈಯದ್ ಯೂಸೂಫ್ ಸಾ: ರೋಡಕಿಣ್ಣಿ   ಗ್ರಾಮ ಇವರ ಹೊಲ  ಸರ್ವೆ  ನಂ: 1 ನೇದ್ದರ  ಜಮೀನು ಪಕ್ಕದಲ್ಲಿ  ನಮ್ಮ ಸಮಾಜದ ಸ್ಮಶಾನ ಇರುವುದ ರಿಂದ ನಾವು ನಮ್ಮ ಜಮೀನಿಗೆ  ಕಟ್ಟಿಗೆ  ಕಂಬೆಯಿಂದ ಬೇಲಿ ಹಾಕಿ ಕೊಂಡಿದ್ದು  ಇರುತ್ತದೆ. ಹೀಗಿದ್ದು, ದಿನಾಂಕ: 28-08-2013 ರಂದು ನಮ್ಮ ಗ್ರಾಮದ  ಸರದಾರ ಸಾಬ  ತಂದೆ  ಖಾಸಿಮಸಾಬ ಜಮಾದಾರ ಇವರು ತೀರಿಕೊಂಡಿದ್ದು ಅಂತ್ಯಕ್ರೀಯೇ ಮಾಡಲು  ನಮ್ಮ ಹಿರಿಯರ ಆಸ್ತಿ  ಜಮೀನಿನಲ್ಲಿ ಕುಣಿ ಹೊಡೆಯುತ್ತಿದ್ದಾರೆ ಅಂತಾ ಗೊತ್ತಾಗಿ ಮಧ್ಯಾಹ್ನ  02-30 ಗಂಟೆ ಸುಮಾರಿಗೆ  ನಾನು ಮತ್ತು  ನನ್ನ ತಮ್ಮನಾದ ವಲಿವುಲ್ಲಾ ಹುಸೇನಿ ಮತ್ತು ಮಗ ಸೈಯದ್ ಅಲೀಮ್ ಪಾಶಾ ಹಾಗೂ  ನಮ್ಮ ಗ್ರಾಮದ  ಕೆಲವರು ಕೂಡಿಕೊಂಡು  ಅಲ್ಲಿಗೆ ಹೋಗಿ  ನೋಡಲಾಗಿ ನಮ್ಮ  ಜಮೀನಿನಲ್ಲಿ ನಮ್ಮ  ಗ್ರಾಮದ 1.ಮಸ್ತಾನ ಪಾಶಾ  ತಂದೆ ಸರದಾರಸಾಬ ಜಮಾದಾರ ಹಾಗು ಈತರರು ಕೂಡಿ ನಮ್ಮ ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಢಿ  ತಮ್ಮ ಕೈಯಲ್ಲಿ ಬಡಿಗೆಗಳನ್ನು ಹಿಡಿದುಕೊಂಡು ತಮ್ಮ  ಸಂಭಂದಿಕನಿಗೆ ದಫನ್ ಮಾಡಲು ಕುಣಿ ಹೊಡೆಯುತ್ತಿ ರುವದನ್ನು  ಕಂಡು  ನನ್ನ ತಮ್ಮ ವಲಿವುಲ್ಲಾ ಈತನು ನಮ್ಮ ಹಿರಿಯರ  ಆಸ್ತಿ  ಇದ್ದುಸ್ಮಶಾನ  ಸ್ವಲ್ಪ ಮುಂದೆ  ಇದೆನೀವು ಈ ಜಾಗ ಬಿಟ್ಟು ಮುಂದೆ ಕುಣೀ ಹೊಡೆಯಿರಿ ಅಂತಾ ಅನ್ನುತ್ತಿದ್ದಾಗ ಅವರೆಲ್ಲರೂ ಕೂಡಿಕೊಂಡು ಗುಂಪು ಕಟ್ಟಿಕೊಂಡು  ನಮಗೆ ಈ ಜಾಗ ನಮ್ಮದಿದೆಭೋಸಡಿ ಮಕ್ಕಳೆ ಅಂತಾ ಅವಾಚ್ಯವಾಗಿ ಬೈಯುತ್ತಾ ನಮ್ಮ ಹೊಲದಲ್ಲಿ ಕುಣೀ ಹೊಡೆಯಬೇಡಿ ಅಂತಾ  ಹೇಳಲು ಹೋದ  ನಮಗೆ ಬಡಿಗೆಕಲ್ಲುಗಳಿಂದ ಹೊಡೆಯುತ್ತಾ ದುಃಖಾಫತಗೊಳಿಸಿದ್ದು  ಮತ್ತು  ನನ್ನ ಮಗನಾದ  ಅಲೀಮ್  ಪಾಶಾ ಈತನಿಗೆ ಮತ್ತು ನನಗೆ ನೆಲದ ಮೇಲೆ ಹಾಕಿ ಅವರೆಲ್ಲರೂ  ಕಾಲಿನಿಂದ ಒದ್ದು ಹಾಗೂ ಇವತ್ತು  ನಿಮಗೆ  ಮರ್ಡರ ಮಾಡುತ್ತೇವೆ ಅಂತಾ  ನಮ್ಮ  ಮೈ ಮೇಲೆ ನಿಂತು ತುಳಿದು ನನ್ನ ಮಗ  ಅಲೀಮ್ ಪಾಶಾ ಈತನ ತೊಡ್ಡು  ಹಿಡಿದು ಒಡ್ಡು ಮುರಿದು ಕೊಲೆ ಮಾಡಲು ಪ್ರಯತ್ನ ಮಾಡಿದ್ದು ಅಲ್ಲಿಯೇ ಇದ್ದ ನಮ್ಮೂರ ಜಮೀಲೋದ್ದೀನ್ ತಂದೆ ಸಿರಾಜೋದ್ದೀನ್ ಜಮಾದಾರ ಹಾಗು ಈತರರು ಬಂದು ಜಗಳ ನೋಡಿ ಬಿಡಿಸಿ ನಮ್ಮನ್ನು ಖಾಸಗಿ ವಾಹನದಲ್ಲಿ ಉಪಚಾರ  ಕುರಿತು ಕಳುಹಿಸಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   

29 August 2013

ಅನಧಿಕೃತ ಆಯುಧ ಹೊಂದಿದ ಆರೋಪಿತರ ಬಂಧನ :

ಗ್ರಾಮೀಣ ಠಾಣೆ : ದಿನಾಂಕ 28/8/2013 ರಂದು ಮದ್ಯಾಹ್ನ 2 ಗಂಟೆಗೆ ನಮ್ಮ ಠಾಣೆಯ ಡಾ: ರಾಮ.ಎಲ್.ಅರಸಿದ್ಧಿ ಡಿವೈಎಸ್‌ಪಿ ಪ್ರೋಬೆಶನರಿ ರವರು ದಿನಾಂಕ.28-8-2013 ರಂದು 11-45 ಎ.ಎಂ.ಕ್ಕೆ ನನಗೆ ಖಚಿತ ಬಾತ್ಮಿ ಬಂದಿದ್ದು ಏನೆಂದರೆ ಡಬರಾಬಾದ ಕ್ರಾಸ ರಿಂಗರೋಡ ಹತ್ತಿರ  ಮಹಮ್ಮದ ಇಸ್ಮಾಯಿಲ್ @ ಜಗ್ಗು ದಾದಾ ಹಾಗೂ ಇತರರು ಅಕ್ರಮವಾಗಿ ನಾಡ ಪಿಸ್ತೂಲಗಳನ್ನು ಹೊಂದಿ ಯಾವುದೋ ಅಪರಾಧ ವೆಸಗುವ ಕುರಿತು ಯಾವುದೋ ಕೆಲಸಕ್ಕಾಗಿ ಹೋಗುತ್ತಿರುವ ಬಗ್ಗೆ ಬಾತ್ಮಿ ಬಂದಿದಕ್ಕೆ ಅಧಿಕಾರಿ, ಸಿಬ್ಬಂದಿ ಹಾಗೂ ಪಂಚರನ್ನು ಬರಮಾಡಿಕೊಂಡು  ಸ್ಥಳಕ್ಕೆ ಹೋದಾಗ ಒಂದು ಮೋಟಾರ ಸೈಕಲ  ಮೇಲೆ ಇಬ್ಬರು ಜನರು ಬಂದಿದ್ದು ಹಿಡಿದು ಚಕ್ಕ ಮಾಡಲಾಗಿ ಮಹಮ್ಮದ ಇಸ್ಮಾಯಿಲ್ @ ಜಗ್ಗು ದಾದಾ  ತಂದೆ  ತಂದೆ ಅಬ್ದುಲ ಖಾದರ ಸಾ;ಎಂ.ಎಸ್.ಕೆ. ಮಿಲ್ಲ ಗುಲಬರ್ಗಾ  ಇತನ ಕಡೆಯಿಂದ ಒಂದು ನಾಡ ಪಿಸ್ತೂಲ ಮತ್ತು ಇನ್ನೊಬ್ಬ ಇಲಿಯಾಜೊದ್ದಿನ  ತಂದೆ ಖುರ್ಷಿದ ಪಟೇಲ ಸಾ;ಎಂ.ಎಸ್.ಕೆ. ಮಿಲ್ಲ ಗುಲಬರ್ಗಾ ಇತನ ಹತ್ತಿರ ಒಂದು ಹರಿತವಾದ ಚಾಕು ಸಿಕ್ಕಿದ್ದು, ಈ ನಾಡ ಪಿಸ್ತೂಲನ್ನು ಪೈಯೂಮ ಶಾಹಾಪೂರ ಎಂಬುವನು ಮಾರಾಟ ಮಾಡುವದಕ್ಕೆ ಅನಧಿಕೃತವಾಗಿ ಕೊಟ್ಟಿದ್ದಕ್ಕೆ ತಾನು  ಅಕ್ರಮವಾಗಿ ಇಟ್ಟುಕೊಂಡಿರುವದಾಗಿ ತಿಳಿಸಿದನು , ಇಂದು ದಿನಾಂಕ.28-08-2013 ರಂದು 12-30 ಪಿ.ಎಂ.ದಿಂದ 1-30 ಪಿ.ಎಂ.ದವರೆಗೆ ಜಪ್ತಿ ಪಂಚನಾಮೆ ಪ್ರಕಾರ ಜಪ್ತಿ ವಪಡಿಸಿಕೊಂಡಿದ್ದು , ಒಂದು ನಾಡ ಪಿಸ್ತೂಲು, 2 ಜೀವಂತ ಗುಂಡುಗಳು , ಒಂದು ಚಾಕು, ಒಂದು ಬಜಾಜ ಪಲ್ಸರ ಮೋಟಾರ ಸೈಕಲ ಮತ್ತು ಜ್ಞಾಪನಾ ಪತ್ರದೋಂದಿಗೆ ಜೋತೆಗೆ ಠಾಣೆಗೆ ತಂದು ಹಾಜರ ಪಡಿಸಿದ್ದರ ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

28 August 2013

ಅಪಘಾತ ಪ್ರಕರಣ :

ಕಮಲಾಪೂರ ಠಾಣೆ : ಶ್ರೀಮತಿ ಅರ್ಚನ ಗಂಡ ಸಿದ್ದಾರ್ಥ ಬೋಮಡ್ಯಾ ಸಾ; ಪ್ಲಾಟ ನಂ.102 ಅನುಶಾರೆಡ್ಡಿ  ಮ್ಯಾಮಿಶನ್ ಬೋಡುಪಲ್ ಜಿಲ್ಲಾ ರಂಗಾರೆಡ್ಡಿ ಹೈದ್ರಾಬಾದ ಇವರು ತಮ್ಮ ಸ್ವಂತ ಹುಂಡೆ ವಿವಾ ಕಾರ್ ನಂ. ಎಪಿ-29 ಎಕ್ಸ್-2199 ನೇದ್ದರಲ್ಲಿ ಗಂಡ ಸಿದ್ಧಾರ್ಥ ಬೋಮಡ್ಯೆ ಹಾಗು ತಮ್ಮ ಅಭಿಶೇಕ್ ಇವರು ಕುಡಿಕೊಂಡು ಹೈದ್ರಾಬಾದದಿಂದ–ಬೀಜಾಪೂರಕ್ಕೆ ಬರುತ್ತಿರುವಾಗ ಸಿದ್ಧಾರ್ಥ ಬೋಮಡ್ಯೆ ಇವರು ಕಾರ ಚಲಾಯಿಸುತ್ತಿದ್ದು, ತನ್ನ ಕಾರನು ಅತಿವೇಗದಿಂದ ಚಲಾಯಿಸುತ್ತಾ ಮುಂದೆ ಬರುವ ವಾಹನಗಳಿಗೆ ಕಟ್ ಹೋಡೆಯುತ್ತಾ ಹೋಗುತ್ತಿರುವಾಗ ನಾವು ನಿಧಾನವಾಗಿ ಚಲಾಯಿಸುವಂತೆ ಹೇಳಿದರು ಕೂಡಾ ಕೇಳದೆ ಹಾಗೆ ಮುಂದುವರಿಸಿ, ದಿನಾಂಕ 27-08-2013 ರಂದು ರಾತ್ರಿ 12-15 ಗಂಟೆ ಸುಮಾರಿಗೆ ಹುಮನಾಬಾದ ಗುಲಬರ್ಗಾ ರಾಷ್ರೀಯ ಹೆದ್ದಾರಿ-218 ರ ಕುದರೆ ಮುಖ ಇಳುಕಿನಲ್ಲಿ ಹೋಗುತ್ತಿರುವಾಗ ಎದುರಿನಿಂದ ಯಾವುದೋ ಒಂದು ವಾಹನ ಬರುತ್ತಿದ್ದು ಅದರ ಫೋಕಶ್ ಲೈಟಿನ ಬೆಳಕಿಗೆ ವಾಹನ ಚಲಾಯಿಸುತ್ತಿದ್ದ ನನ್ನ ಗಂಡನಿಗೆ ದಾರಿ ಕಾಣದೆ ರಸ್ತೆ ಬಲಬದಿಗೆ ಕಟ್ ಹೊಡೆದು ಪಲ್ಟಿ ಮಾಡಿ, ಅಪಘಾತ ಪಡಿಸಿದ್ದರಿಂದ, ಕಾರಿನಲ್ಲಿದ್ದ ಸಿದ್ಧಾರ್ಥನಿಗೆ ತೆಲೆಗೆ, ಗದಕ್ಕೆ ರಕ್ತಗಾಯವಾಗಿ ಸೂಂಟಕ್ಕೆ ಗುಪ್ತಗಾಯಾಗಿದ್ದು, ಅಭಿಶೇಕ್ ಈತನಿಗೆ ನೋಡಲು ತೆಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ಮೃತಪಟ್ಟಿದ್ದು, ನಂತರ 108 ಅಂಬುಲೆನ್ಸ್ ಮುಖಾಂತರ ನನ್ನ ಗಂಡನಿಗೆ ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ತಂದು ಸೇರಿಕೆ ಮಾಡಿದ್ದು , ಕಾರ ಚಾಲಕನ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲೆಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

27 August 2013

ಅಪಘಾತ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ: 25/08/2013 ರಂದು ಬೆಳಿಗ್ಗೆ ಶ್ರೀಮತಿ ಸುವರ್ಣ ಗಂಡ ಈರಣ್ಣಗೌಡ ಸಾಃ ಕಡಿವಾಲ ಗ್ರಾಮ ತಾಃಕುಷ್ಟಗಿ ಜಿಃಕೊಪ್ಪಳ ತನ್ನ ಸಂಬಂಧಿಕರಾದ 1) ಸುವರ್ಣ ಗಂಡ ಈರಣ್ಣಗೌಡ 2), ಮಹಾದೇವಿ ಗಂಡ ಹಣಮಂತ ಹಾಗು ನಮ್ಮ ಪಕ್ಕದ ಮನೆಯವರಾದ 3) ಶಾಂತವ್ವ ಗಂಡ ಕಾಳಪ್ಪಾ 4) ಫಕೀರಮ್ಮಾ ಗಂಡ ಲಕ್ಷ್ಮಣ 5). ಅಡೆವ್ವಾ ಗಂಡ ಶರಣಪ್ಪಾ 6). ಭೀಮವ್ವ 7) ರೇಣುಕಾ ಗಂಡ ಕರಿಯಪ್ಪಾ 8) ಸಂಗವ್ವ ಗಂಡ ಹಣಮಂತ 9) ಯಮನೂರಪ್ಪಾ ತಂದೆ ಬಸಪ್ಪಾ 10) ಪರಸಪ್ಪಾ ತಂದೆ ಬಸೆಟ್ಟೆಪ್ಪಾ ಎಲ್ಲರೂ ಕೂಡಿಕೊಂಡು ಶ್ರಾವಣ ಮಾಸದ ಪ್ರಯುಕ್ತ ಕ್ರೊಜರ ಜೀಪ ನಂ. ಕೆಎ:37, ಎಂ:6205 ನೇದ್ದನ್ನು ತೆಗೆದುಕೊಂಡು ಬಸವಕಲ್ಯಾಣಕ್ಕೆ ಬಂದು ದೇವರ ದರ್ಶನ ಮಾಡಿಕೊಂಡು ಮರಳಿ ನಮ್ಮೂರಿಗೆ ಹುಮನಾಬಾದ ಗುಲಬರ್ಗಾ ಎನ್.ಹೆಚ್.218 ನೇದ್ದರ ಮುಖಾಂತರ ಹೋಗುತ್ತಿದ್ದಾಗ ಮುಂದೆ ಡೊಂಗರಗಾಂವ ಕ್ರಾಸ ದಾಟಿ ಜೀಪ ಚಾಲಕನಾದ ಮುತ್ತಣ್ಣಾ ತಂದೆ ಶಂಕ್ರಗೌಡ ಪಾಟೀಲ ಸಾಃ ಯಲಬುರ್ಗಾ ಕ್ರೊಜರ ಜೀಪ  ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸುತ್ತಿದ್ದಾಗ ರಾತ್ರಿ 9-00 ಗಂಟೆ ಸುಮಾರಿಗೆ ಮರಗುತ್ತಿ ಕ್ರಾಸ ಹತ್ತಿರ ಹೋಗುತ್ತಿದ್ದಂತೆ ಎದುರುನಿಂದ ಅಂದರೆ ಗುಲಬರ್ಗಾ ಕಡೆಯಿಂದ ಮಹೇಂದ್ರ ಪೀಕಪ್ ಕೆಎ: ಕೆಎ:36, ಎ:2882 ನೇದ್ದರ ಚಾಲಕ ಅಬ್ದುಲಸಾಬ ತಂದೆ ಮಹಿಬೂಬಸಾಬ ಸಾಃಗುರಗುಂಟಾ ತಾಃಲಿಂಗಸೂರ ಜಿಃರಾಯಚೂರ ಈತನು ತನ್ನ ವಾಹನವನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಬ್ಬರಿಗೊಬ್ಬರು ಸೈಡ ಕೊಡದೇ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಅಪಘಾತ ಪಡಿಸಿದರು. ಈ ಅಪಘಾತದಲ್ಲಿ ನನಗೆ ಆಸ್ಪತ್ರೆಗೆ ತೋರಿಸುವಂತಹ ಗಾಯಗಳು ಆಗಿರುವುದಿಲ್ಲಾ. ನಮ್ಮ ಜೋತೆಯಲ್ಲಿದ್ದವರಿಗೆ ತರಚಿದ ರಕ್ತಗಾಯ ಮತ್ತು ಗುಪ್ತಗಾಯಗಳಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಆತ್ಮ ಹತ್ಯೆಗೆ ಪ್ರಚೋದನೆ ಮಾಡಿದ ಪ್ರಕರಣ :

ಮುಧೋಳ ಠಾಣೆ : ಶ್ರೀ ನೀಲ್ಯಾ ನಾಯಕ ತಂದೆ ಗೋಬ್ರಾ ನಾಯಕ ವ: 50, ಸಾ: ನಾಡೇಪಲ್ಲಿ ತಾಂಡಾ ತಾ: ಸೇಡಂ ಇವರು ತಂಗಿ ರಾಮಿ ಬಾಯಿ ಇವಳಿಗೆ 20 ವರ್ಷಗಳಹಿಂದೆ, ಮೇದಕ ತಾಂಡಾದ ಕೀಶಾನ ತಂದೆ ಅರ್ಜ್ಯಾ ನಾಯಕ ಚವಾಣ ಇವರೊಂದಿಗೆ ಮಧುವೆ ಮಾಡಿದ್ದು, ಇವಳು ಗಂಡನಿಗೆ 3 ನೇ ಹೆಂಡತಿ ಇರುತ್ತಾಳೆ, ನಮ್ಮ ತಂಗಿ ರಾಮಿ ಬಾಯಿಗೆ ಮೂರು ಜನ ಮಕ್ಕಳಿದ್ದು ಸದರಿ ನನ್ನ ತಂಗಿಯ ಗಂಡನಾದ ಕೀಶನ ಇತನು 2ನೇ ಹೆಂಡತಿ ಕಮಲಿಬಾಯಿ ಹಾಗು ಅವರ ಮಗ ರಡ್ಡ್ಯಾ ನಾಯಕ ಇವಳ ಜೋತೆಯಲ್ಲಿ ಒಂದು ಮನೆಯಲ್ಲಿ ವಾಸವಾಗಿದ್ದು, ನಮ್ಮ ತಂಗಿ ರಾಮಿಬಾಯಿ ಹಾಗು ಅವರ ಮಕ್ಕಳು ಒಂದು ಮನೆಯಲ್ಲಿ ಬೇರೆ-ಬೇರೆ ಇರುತ್ತಾರೆ. ಸದರಿ ಕೀಶನ ಇತನು, ನಮ್ಮ ತಂಗಿ ರಾಮಿಬಾಯಿ 8-10 ವರ್ಷಗಳಿಂದ ಅವಳ ನಡತೆ ಬಗ್ಗೆ ಶಂಕಿಸಿ ಹೊಡೆ ಬಡೆ ಮಾಡಿ ಕಿರುಕುಳ ಕೊಟ್ಟಿದ್ದನು, ನಾನು ಈಗ ಹಲವಾರು ಬಾರಿ ನಮ್ಮ ತಂಗಿ ಗಂಡನಾದ ಕಿಶನ ಹಾಗು ಅವರ 2ನೇ ಹೆಂಡತಿ ಕಮಲಿಬಾಯಿ ಇವರಿಗೆ ನಾನು ಹಾಗು ಮೇದಕ ತಾಮಡಾದ ಹಿರಿಯರಾದ ನಮ್ಮೂರಿನ ನಾಯಕರು ಇತರರು ಕೂಡಿ ತಾಂಡಾದಲ್ಲಿ ಪಂಚಾಯತಿ ಮಾಡಿ ನಮ್ಮ ತಂಗಿ ಹಾಗು ಅವರ ಮಕ್ಕಳಿಗೆ ತೊಂದರೆ ಕೊಡಬೇಡಿ, ಅಂತಾ ಹೇಳಿದರು, ಕೂಡ, ಸದರಿ ಕೀಶನ ಹಾಗು ಇತನ 2ನೇ ಹಂಡತಿ ಕಮಲಿಬಾಯಿ ಹಾಗು 2ನೇ ಹೆಂಡತಿಯ ಮಗನಾದ ರಡ್ಡ್ಯಾ ನಾಯಕ ಇವಳುಗಳು ನಮ್ಮ ತಂಗಿಗೆ ಜಗಳಾ ತೆಗೆದು, ಹೊಡೆ ಬಡೆ ಮಾಡಿ ತೊಂದರೆ ಕೊಡುತ್ತಿದ್ದರು, ನಮ್ಮ ತಂಗಿ ಕೂಲಿ ನಾಲಿ ಮಾಡಿ ಗಂಡನ ಹಾಗು 2ನೇ ಹೆಂಡತಿಯ ಹಾಗು ಅವಳ ಮಗನ ಕಿರುಕುಳ ಸಹಿಕೊಂಡು ಗಂಡನ ಮನೆಯಲ್ಲಿ ಇದ್ದು ನಿನ್ನೆ ದಿ: 24-08-2013 ರಂದು ಬೆಳಗ್ಗೆ 08-00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿದ್ದಾಗ, ನಮ್ಮ ತಂಗಿ ರಾಮಿಬಾಯಿ ಇವಳು ನನಗೆ ಫೋನ ಮಾಡಿ, ತಿಳಿಸಿದ್ದೇನೆಂದರೆ, ಈಗ ನನಗೆ ನನ್ನ ಗಂಡ ಕೀಶನ ಹಾಗು ಅವನ 2ನೇ ಹೆಂಡತಿ ಕಮಲಿಬಾಯಿ ಮತ್ತು ಅವಳ ಮಗ ರಡ್ಡ್ಯಾ ನಾಯಕ ಇವರು ರಂಡಿ ಬೋಸಡಿ ನೀನು ಕೂಲಿ ಮಾಡಿದ ಹಣ ನಮಗೆ ಕೊಡು, ನಿನ್ನ ನಡತೆ ಸರಿ ಇಲ್ಲಾ. ನೀನು ನಮ್ಮ ಮನೆಯಲ್ಲಿ ಇರಬೇಡಾ ಏಲ್ಲಿಯಾದರು ಬಿದ್ದು ಸಾಯಿ ಅಂತಾ ಹೊಡೆ ಬಡೆ ಮಾಡಿ ಕೀರುಕುಳ ನೀಡಿದ್ದಾರೆ, ಆದ್ದರಿಂದ ನಾನು ಈಗ ಮನೆಯಲ್ಲಿದ್ದ, ಹೆಸರಿಗೆ ಹೊಡೆಯುವ ಪೌಡರ ಕ್ರೀಮಿನಾಶಕ ಔಷದ ಕುಡಿದಿದ್ದೇನೆ, ನಾನು ಸಾಯುತ್ತೇನೆ, ಅಂತಾ ತಿಳಿಸಿದಳು, ಆಗಾ ನಾನು ನಮ್ಮ ತಂಗಿಯ ಮಗನಾದ ರಾಜು ಇತನಿಗೆ ಫೋನ ಮಾಡಿ ನಿಮ್ಮ ತಾಯಿಗೆ ಮುಧೋಳ ದವಾಖಾನೆಗೆ ತೆಗೆದುಕೊಂಡು ಬಾ ನಾನು ಅಲ್ಲಿಗೆ ಬರುತ್ತೇನೆ ಅಂತಾ ಹೇಳಿ ನಾನು ಮುಧೋಳಕ್ಕೆ ಬೆಳಗ್ಗೆ 1000 ಗಂಟೆ ಸುಮಾರಿಗೆ ಬಂದೇನು. ನಮ್ಮ ತಂಗಿ ಅವರ ಮಗ ರಾಜು ಹಾಗು ಅವರ ತಾಂಡಾ ಶ್ರೀನಿವಾಸ ತಂದೆ ಪಾಂಡು ರಾಠೋಡ ಮತ್ತು ಸುಶಿಲಾಬಾಯಿ ಗಂಡ ಧರಿಯಾ ನಾಯಕ ಇವರೇಲ್ಲರೂ, ಆಟೋದಲ್ಲಿ ಹಾಕಿಕೊಂಡು ಮುಧೋಳ ಸರಕಾರಿ ಆಸ್ಪತ್ರೆಗೆ ಬಂದಿದ್ದರು, ಅಲ್ಲಿ ಉಪಚಾರ ಮಾಡಿಸಿ ಅಲ್ಲಿಂದ ಅಂಬೂಲೇನ್ಸದಲ್ಲಿ ನಮ್ಮ ತಂಗಿಗೆ ಹೆಚ್ಚಿನ ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ನಮ್ಮ ತಂಗಿಗೆ ಸೇಡಮ ಆಸ್ಪತ್ರೆಯಲ್ಲಿ ಉಪಚರಿಸಿ ಇಂದು ದಿ: 25-08-2013 ರಂದು ಮಧ್ಯಾಹ್ನ 1200 ಗಂಟೆ ಸುಮಾರಿಗೆ ಆರಾಮ ಆಗದಿದ್ದರಿಂದ ಹೆಚ್ಚಿನ ಉಪಚಾರ ಕುರಿತು ಹೆಚ್ಚಿನ ಉಪಚಾರ ಕುರಿತು ಅಂಬುಲೇನ್ಸದಲ್ಲಿ ಸರಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಹೊಗುತ್ತಿದ್ದಾಗ, ಇಂದು ಮಧ್ಯಾಹ್ನ 1330 ಗಂಟೆ ಸುಮಾರಿಗೆ ಬಸವೇಶ್ವರ ಆಸ್ಪತ್ರೆ ಗುಲಬರ್ಗಾದಲ್ಲಿ ನಮ್ಮ ತಂಗಿ ರಾಮಿಬಾಯಿ ಮೃತ ಪಟ್ಟಳು, ಅಲ್ಲಿ ಡಾಕ್ಟರ್‌ಗೆ ತೋರಿಸಿದಾಗ ಡಾಕ್ಟರ್‌ರವರು ಪರಿಶೀಲಿಸಿ ನಮ್ಮ ತಂಗಿ ಮೃತ ಪಟ್ಟಿರುತ್ತಾಳೆ ಅಂತಾ ತಿಳಿಸಿದರು, ನಂತರ ನಮ್ಮ ತಂಗಿ ರಾಮಿಬಾಯ ಮೃತ ದೇಹ ಅದೆ ಅಂಬುಲೇನ್ಸದಲ್ಲಿ ಹಾಕಿಕೊಂಡು ಇಂದು 03-30 ಗಂಟೆಗೆ ಸರಕಾರಿ ಆಸ್ಪತ್ರೆ ಸೇಡಂದಲ್ಲಿ ತಂದು ಹಾಕಿರುತ್ತೇವೆ . ನಮ್ಮ ತಂಗಿ ರಾಮಿಬಾಯಿ ಗಂಡ ಕಿಶನ ಚವಾಣ ಇವಳಿಗೆ ಅವಳ ಗಂಡ ಕಿಶನ ಚಾವಣ ಹಾಗು 2ನೇ ಹೆಂಡತಿ ಕಮಲಿಬಾಯಿ ಮತ್ತು ಅವಳ ಮಗ ರಡ್ಡ್ಯಾ ನಾಯಕ ಇವರು ನಿನ್ನೆ ದಿ: 24-08-2013 ರಂದು ಬೆಳಗ್ಗೆ 0800 ಗಂಟೆ ಸುಮಾರಿಗೆ ಹೊಡೆ ಬಡೆ ಮಾಡಿದ್ದರಿಂದ ಅವರ ಕಿರುಕುಳ ತಾಳಲಾರದೆ ನಮ್ಮ ತಂಗಿ ಮನೆಯಲ್ಲಿ ಕ್ರೀಮಿನಶಾಕ ಔಷಧ ಕುಡಿದು ದಿ: 25-08-2013 ರಂದು ಮಧ್ಯಾಹ್ನ 01-30 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

26 August 2013

ಕೊಲೆ ಪ್ರಕರಣದ ಆರೋಪಿತನ ಬಂಧನ :
ಅಫಜಲಪೂರ ಠಾಣೆ :  ದಿನಾಂಕ 26-01-2013 ರೆಂದು ಮಣ್ಣೂರ ಅಗರಖೇಡ ಬೀಮಾ ಬ್ರಿಡ್ಜನ ಬಲಭಾಗದಲ್ ದಡದಲ್ಲಿ ಒಂದು ಗೋಣಿ ಚೀಲ ಕಂಡಿದ್ದು ಅದನ್ನು ಕರೆಂಟೆ ವೈರನಿಂದ ಕಟ್ಟಿ ಅದಕ್ಕೆ ಕಲ್ಲು ಕಟ್ಟಿ ನೀರಲ್ಲಿ ಒಗೆದಿದ್ದು ಸದರ ಗೋಣಿ ಚೀಲವನ್ನು ಹೋರಗೆ ತೆಗೆಸಿ ನೋಡಿದಾಗ ಅದರಲ್ಲಿ ಒಂದು ಶವವಿದ್ದು ಸದರ ಶವವನ್ನು  ನೀರಿನಲ್ಲಿ ಇರುವ ಜಲಚರಗಳು ಮುಖ ಖಾಲು, ಕೈ ಅಲ್ಲಲ್ಲಿ ತಿಂದಿದ್ದು ಶವದ ಮೈಮೇಲೆ ಚ್ಯಾಕಲೇಟ ಬಣ್ಣದ ಅಂಡರವೇರ ಬಿಳಿಯ ಶರ್ಟ ಇದ್ದು ಇದರ ಬಗ್ಗೆ ಶ್ರೀ ರಾಮು ತಂದೆ ಬೂತಾಳಿ ನಡುವಿನಕೆರಿ ಗ್ರಾಮ ಪಂಚಾಯತ ಉಪಾಧ್ಯಕ್ಷರು ಮಣ್ಣುರು ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು  ಮುಂದೆ ತನಿಖೆ ಮಾಡುವಾಗ ಶವದ ಶವದ ಮೇಲೆ ಸಿಕ್ಕ ಶರ್ಟಿನ ಕಾಲರ ಮೇಲೆ ಚ್ವಾಯಿಸ ಟೇಲರ ಮಣ್ಣೂರ ಅಂತಾ ಬರೆದಿದ್ದು  ದುರೆತಿದ್ದು ಮಣ್ಣೂರ ಗ್ರಾಮದಲ್ಲಿ ಇರುವ ಶ್ರೀ ಶಣ್ಮೂಖಪ್ಪಾ ತಂದೆ ಶಂಕ್ರೆಪ್ಪಾ ಮಲ್ಲಾಬಾದ ಉ: ಚ್ವಾಯಸ ಟೇಲರ ಸಾ: ಮಣ್ಣೂರ ಇವರನ್ನು ಕರೆಸಿ ಸದರ ಶರ್ಟನ್ನು ತೋರಿಸಿ ವಿಚಾರಿಸಲಾಗಿ ಸದರ ಶರ್ಟನ್ನು ತಾನೆ ಮಣ್ಣೂರ ಗ್ರಾಮದ ಸಂತೋಷ ತಂದೆ ಸುರೇಶ ಸಾ: ಅರ್ಜಣಗಿ ಇವರಿಗೆ ಹೊಲೆದು ಕೊಟ್ಟಿರುವುದಾಗಿ ತಿಳಿಸಿದ್ದು ಇತನಿಗೆ ಯಾರೋ ಆಗದವರು ತಮ್ಮ ದ್ವೇಷ ತಿರೀಸಿಕೊಳ್ಳಲು ಸಮಯ ಸಾಧಿಸಿ ಸದರಿ ವ್ಯಕ್ತಿಗೆ ಯಾವುದೋ ವಸ್ತುವಿನಿಂದ ಹೊಡೆದು ಶವವನ್ನು ಗುರುತಿಸಲಾಗದಂತೆ ಸಾಕ್ಷಿ ಆದಾರಗಳನ್ನು ನಾಶಪಡಿಸುವ ಉದ್ದೇಶದಿಂದ ಶವವನ್ನು ಗೋಣಿ ಚಿಲದಲ್ಲಿ ಹಾಕಿ ಕರೆಂಟ ವೈರನಿಂದ ಬಿಗಿದು ಭಿಮಾ ನದಿ ನೀರಿಗೆ ಬಿಸಾಡಿರುತ್ತಾರೆ ಸದರ ಕೇಸಿನ ಆರೋಪಿ ಪತ್ತೆ ಕುರಿತು ಮಾನ್ಯ ಶ್ರೀ ಕಾಶೀನಾಠ ತಳಕೇರಿ ಹೆಚ್ಚುವರಿ ಪೊಲೀಸ ಅಧೀಕ್ಷಕರು, ಶ್ರೀ ತಿಮ್ಮಪ್ಪಾ ಡಿ ಎಸ್ ಪಿ ಆಳಂದ, ಶ್ರೀ ಕೆ ರಾಜೇಂದ್ರ ಸಿಪಿಐ ಆಫಜಲಪೂರ  ರವರ ಮಾರ್ಗದರ್ಶನದಲ್ಲಿ ಶ್ರೀ ಮಂಜುನಾಥ ಎಸ್. ಪಿ ಎಸ್ ಐ ಅಫಜಲಪೂರ ಹಾಗು ಸಿಬ್ಬಂದಿಯವರು  ದಿನಾಂಕ 26-08-2013 ರಂದು ಬೆಳಗಿನ ಜಾವ 1 ಗಂಟೆಗೆ ಬಾತ್ಮಿ ಮೇರೆಗೆ ಮಣ್ಣೂರ ಗ್ರಾಮದ ಅಂಆಭವಾನಿ ಗುಡಿಯ ಹತ್ತಿರ ಶ್ರೀಶಯಲ ತಂದೆ ಸೂರ್ಯಕಾಂತ ಅರ್ಜಣಗಿ ಸಾ : ಮಣ್ಣೂರ ಇತನ ಮೇಲೆ ದಾಳಿ ಮಾಡಿ ವಶಕ್ಕೆ ತೆಗೆದುಕೊಂಡು ಹಾಜರಪಡಿಸಿದ್ದು ಸದರಿಯನು ಅಪರಾಧ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಕೃತ್ಯಕ್ಕೆ ಬಳಸಿದ ಮೊಟಾರ ಸೈಕಲ್ ನಂ  ಕೆಎ-32 ಡಬ್ಲ್ಯೂ 9802 ನೇದ್ದನ್ನು ವಶಪಡಿಸಿಕೊಂಡು ಸದರಿ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಕಳಹಿಸಿದ್ದು ಕೃತ್ಯಕ್ಕೆ ಸಹಕರಿಸಿದ ಆರೋಪಿತನ ತಾಯಿಯಾದ ಸೂಗಲಾಬಾಯಿ ಇವಳು ನಾಪತ್ತೆಯಾಗಿದ್ದು ಇವಳ ಬಗ್ಗೆ ತನಿಖೆ ಚುರುಕುಗೊಳಿಸಲಾಗಿದೆ. 

25 August 2013

ಕಳವು ಪ್ರಕರಣ :

ನೆಲೋಗಿ ಠಾಣೆ : ಶ್ರೀಮತಿ ವೀಣಾ. ಶರಣಗೌಡ ಬಾಚವಾರ  ಸಿಂಗನಳ್ಳಿ ತಾ: ಶಹಾಪೂರ ಹಾ:ವ: ಸಾ/21/75 ಖಾಜಾ ಕಾಲೋನಿ ಜೇವರರ್ಗಿ  ರವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾಳವಾರದಲ್ಲಿ ಸಹಶಿಕ್ಷಕಿಯಾಗಿ   ಕೆಲಸ ಮಾಡಿಕೊಂಡು ಇದ್ದು. ದಿನಾಂಕ: 18/08/2013 ರಂದು ಬಿಜಾಪೂರದಲ್ಲಿ ವಾಸವಾಗಿರುವ ನನ್ನ ಅಣ್ಣನಾದ ವಿಜಯ ಮಾಹಾಂತೇಶ ತಂ/ ಬಸವರಾಜ ಐನಾಪೂರ ಇವರ ವಿವಾಹ ನಿಶ್ಚಿತಾರ್ತ ಇದ್ದ ಕಾರಣ ದಿನಾಂಕ: 16/08/2013 ರಂದು ಬೆಳಿಗ್ಗೆ 10 ಗಂಟೆಗೆ ಕೆ ಎಸ್ ಆರ್ ಟಿ ಸಿ ಬಸನಲ್ಲಿ ಜೇವರ್ಗಿ ಯಿಂದ ಹೊರೆಟೆನು. ಸದರಿ ಬಸ್ಸ್ ಬಿಜಾಪೂರಕ್ಕೆ ಮದ್ಯಾಹ್ನ 01;00 ಗಂಟೆಗೆ ತಲುಪಿತು. ನಂತರ ನಾನು ಅಟೋ ರಿಕ್ಷಾದಲ್ಲಿ ಬಿಜಾಪೂರದಲ್ಲಿರುವ ನಮ್ಮ ಮನೆಗೆ ಹೋದೆನು. ಹೋದ ತಕ್ಷಣ ಮುಖ ತೊಳೆದು ಬಟ್ಟೆ ಬದಲಾಯಿಸಲು ಬ್ಯಾಗನ್ನು ನೋಡಲಾಗಿ, ಸದರಿ ಬ್ಯಾಗಿನಲ್ಲಿ ಇಟ್ಟಿದ್ದ ನನ್ನ 150 ಗ್ರಾಂ ಬಂಗಾರದ ಆಭರಣಗಳು ಹಿಗೆ ಒಟ್ಟು 3,61,150/- ರೂ ಆಭರಣಗಳು ಇರಲಿಲ್ಲಾ. ಕೂಡಲೆ ಬ್ಯಾಗನ್ನು ಪೂರ್ತಿ ಹೂಡಕಾಡಿದ್ದು ಆಬರಣಗಳಿಟ್ಟ ಟಿಪಿನ್ ಬಾಕ್ಸ ಇರಲ್ಲಿಲ್ಲಾ. ಇವುಗಳನ್ನು ಬಸ್ಸನಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿದ್ದು ನಮ್ಮ ವಸ್ತುಗಳನ್ನು ಪತ್ತೆ ಮಾಡಿಕೊಡ ಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 August 2013

ಅಪಘಾತ ಪ್ರಕರಣ :
ನೆಲೋಗಿ ಠಾಣೆ : ದಿನಾಂಕ: 22-08-2013 ರಂದು ಬೆಳಿಗ್ಗೆ ಶ್ರೀ ಕೇರನಾಥ ತಂದೆ ಬಾಗವಾನ ಜೊಗೇರ   ಸಾ: ಜೇವರ್ಗಿ  ರವರು ತಮಗೆ ಪರಿಚಯ ಇದ್ದ ಮಾರುತಿ ಸುಜುಕಿ ಕಾರ ನಂ ಕೆಎ-36 ಎಮ್-7765 ನೇದ್ದರಲ್ಲಿ ತಮ್ಮ ಸಂಬಂಧಿಕರ ಬದಾಮಿ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ತೀರಿಕೊಂಡಿದ್ದರಿಂದ 5 ಜನರು ಕೂಡಿಕೊಂಡು ಸದರ ಕಾರಿನಲ್ಲಿ ಹೋಗುವಾಗ ಎಸ್ ಎನ್ ಹಿಪ್ಪರಗಾ ಕ್ರಾಸ ಹತ್ತೀರ 09.45 ಎ ಎಮ್ ಕ್ಕೆ ಬಂದಾಗ ಎದುರಿನಿಂದ ಒಂದು ಕೆ ಎಸ್ ಆರ್ ಟಿ ಸಿ ಬಸ್ ನಂ ಕೆಎ-32 ಎಫ್- 1770 ನೇದ್ದರ ಚಾಲಕನು ಅತೀ ವೇಗ ಮತ್ತು ನೀರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಕಾರಿಗೆ ಢಿಕ್ಕಿ ಹೊಡೆದಾಗ ಕಾರಿನಲ್ಲಿದ್ದ 1. ನಬಿ ತಂದೆ ಕೋನಮೀಯಾರ   ವ;30  ಉ: ಕಾರ ಡ್ರಾವರ್   ಸಾ; ಜೇವರ್ಗಿ 2.ಮಚೇಂದ್ರನಾಥ ತಂದೆ ಪವನಾಥ ಜೊಗೇರ ವ: 45 ಉ: ಹಿಟ್ಟಿನ ಗಿರಣಿ ಮೇಕ್ಯಾನಿಕ್ ಇಬ್ಬರು ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಇನ್ನೂ 3 ಜನರಿಗೆ ಭಾರೀ ಗಾಯಗಳಾಗಿದ್ದು, ಸದರಿ ಚಾಲಕನ ವಿರುದ್ದ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :

ನಿಂಬರ್ಗಾ ಠಾಣೆ : ಶ್ರೀಮತಿ ಯಲ್ಲವ್ವ ಗಂಡ ಸಿದ್ದಪ್ಪಾ ಕಾಳೆ ಸಾ|| ಆಲಮೇಲತಾ|| ಸಿಂದಗಿ ಇವರು ಗಂಡನನ್ನು ದಿನಾಂಕ 19/08/2013 ರಂದು ಸಾಯಂಕಾಲ 0400 ಪಿ.ಎಮ ಕ್ಕೆ ರೇಲಪೂತ @ ಬಾಬು ಕಾಳೆಮುಕೇಶ ತಂದೆ ರೇಲಪೂತ ಕಾಳೆಶಮ್ಯಾ ತಂದೆ ರೇಲಪೂತ ಕಾಳೆರವ್ಯಾ ತಂದೆ ಗೊವಿಂದ ಸಿಂಧೆಬಪ್ಯಾ ತಂದೆ ಶ್ರೀಮಂತಕುನ್ಯಾಬಾಯಿ ಗಂಡ ರೇಲಪೂತ @ ಬಾಬು ಕೂಡಿ ಗುಲಬರ್ಗಾದಿಂದ ಒಂದು ಕ್ರೂಸನ ವಾಹನ ಅದರ ಚಾಲಕ ಮತ್ತು ಅದರ ನಂಬರ ಗೊತ್ತಿಲ್ಲ ಅದನ್ನು ತೆಗೆದುಕೊಂಡು ಆಲಮೇಲಕ್ಕೆ ಬಂದು ಫಿರ್ಯಾದಿಗೆ ಮತ್ತು ಮೃತ ಸಿದ್ದಪ್ಪನಿಗೆ ಜಬರದಸ್ತಿಯಿಂದ ದೇವರ ಮಾಡೋದಿದೆ ನಡೆಯಿರಿ ಅಂತ ಕ್ರೂಸರ ವಾಹನದಲ್ಲಿ ಫಿರ್ಯಾದಿಗೂ,ಸಿದ್ದಪ್ಪ ಹಾಗೂ ಅವರ ಮಕ್ಕಳಿಗೂ ಹಾಕಿಕೊಂಡು ವೈಜಾಪೂರ ಗ್ರಾಮದ ಸೀಮಾಂತರದಲ್ಲಿರುವ ವಾರಿ ಹಳ್ಳದ ಹತ್ತಿರ ರಾತ್ರಿ ಕರೆದುಕೊಂಡು ಹೋಗಿ ಅಲ್ಲಿ ಅವರು ಠಿಕಾಣಿ ಹೂಡಿದ ಜಾಗೆಯಲ್ಲಿ ಇದ್ದುದಿನಾಂಕ 20/08/2013 ರಂದು ರಾತ್ರಿ 1000 ಗಂಟೆ ಸುಮಾರಿಗೆ ಮೃತ ಸಿದ್ದಪ್ಪನು ನನಗೆ ಊರಿಗೆ ಬಿಡಿ ಅಂತಾ ಅಂದಾಗ ಆರೋಪಿತರೆಲ್ಲರೂ ಅಕ್ರಮ ಕೂಟ ರಚನೆ ಮಾಡಿಕೊಂಡು ಅವರು ಫಿರ್ಯಾದಿಯ ಗಂಡನಿಗೆ ಎಲ್ಲಿಗೂ ಹೋಗದಂತೆ ತಡೆದು ಕೈಯಲ್ಲಿ ಚಾಕು ಮತ್ತು ಬಡಿಗೆ ಹಿಡಿದುಕೊಂಡು ಭೋಸಡಿ ಮಗನೆ ನಮಗೆ ಹಣ ಕೇಳುತ್ತಿಯಾ ಅಂತಾ ಅಂದು ಮುಕೇಶ ಇತನು ಚಾಕುವಿನಿಂದ ಬಲಗಡೆ ಹೊಟ್ಟೆಗೆ ಮತ್ತು ಬಲಗಡೆ ಬೆನ್ನಿಗೆ ತಿವಿದಿದ್ದು ಇದರಿಂದ ಆತನಿಗೆ ತೀವೃ ಸ್ವರೂಪದಗಾಯವಾಗಿದ್ದು ಉಪಚಾರ ಕುರಿತು ದಿನಾಂಕ 21/08/2013 ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆಯಾಗಿದ್ದು ಗಾಯದ ಬಾಧೇಯಿಂದ ದಿನಾಂಕ 22/08/2013 ರಂದು ಮಧ್ಯಾಹ್ನ 0140 ಪಿ.ಎಮ ಕ್ಕೆ ಮೃತಪಟ್ಟಿರುತ್ತಾನೆ ಅವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

22 August 2013

Gulbarga District reported crimes

ಮದುವೆ ಮಾಡಿಕೊಳ್ಳತ್ತೆನೆ ಅಂತಾ ನಂಬಿಸಿ ಜಬರಿ ಸಂಬೋಗ ಮಾಡಿದ ಪ್ರಕರಣ :-
ಮಳಖೇಡ ಠಾಣೆ : ಕುಮಾರಿ (ಹೆಸರು ಬದಲಾಯಿಸಲಾಗಿದೆ) ಇವಳಿಗೆ  ಮಾದೇಶಾ ತಂದೆ ಹಣಮಂತ ಮರಪಳ್ಳಿ ಈತನು ತನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನಂಬಿಸಿ ನನಗೆ ಆಗಾಗ ಸಂಭೋಗ ಮಾಡುತ್ತಿದ್ದು , ಮತ್ತು ದಿನಾಂಕ 10-7-2013 ರಂದು ಮಧ್ಯಾನ 2 ಗಂಟೆಗೆ ತಮ್ಮ ಯಂಕಾರೆಡ್ಡಿ ಹೊಲಕ್ಕೆ ಹೋದಾಗ ಸದ್ರಿ ಮಾದೇಶ ಈತನು ಹೊಲದಲ್ಲಿ ಬಂದು ತನಗೆ ಸಂಭೋಗ ಮಾಡಿದ್ದು ಇರುತ್ತದೆ. ಇಂದು ದಿನಾಂಕ 21-8-2013 ರಂದು ತಾನು ಸದ್ರಿ ಮಾದೇಶಾ ಈತನಿಗೆ ನೀನು ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹೇಳಿದ್ದು ನನಗೆ ಮದುವೆ ಮಾಡಿಕೊ ಅಂತಾ ಹೇಳಿದಾಗ ಅವನು ನಿನಗೆ ಯಾರು ಮದುವೆ ಮಾಡಿಕೊಳ್ಳುತ್ತಾರೆ ಹೋಗೆ ಅಂತಾ ಹೇಳಿದ್ದು ಈ ವಿಷಯವನ್ನು ನನ್ನ ತಂದೆ ತಾಯಿಗೆ ತಿಳಿಸಿದ್ದು , ಸದ್ರಿ ಮಾದೇಶಾ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಮೀಣ ಠಾಣೆ : ದಿನಾಂಕ 20-08-2013 ರಂದು ರಾತ್ರಿ ಶ್ರೀ ಅಂಬಾರಾಯ ತಂದೆ ಶರಣಪ್ಪ ಸಿತಾಳಗೇರಿ ಸಾ: ಕುಮಸಿ ವಾಡಿ ತಾ.ಜಿ. ಗುಲಬರ್ಗಾ ರವರು  ಉಟ ಮಾಡಿ ಮನೆಯ ಅಂಗಳದಲ್ಲಿ ಕುಳಿತುಕೊಂಡಾಗ  ಗುಂಡಪ್ಪ ತಂದೆ ಶರಣಪ್ಪ ಸಿತಾಳಗೇರಿ ಇತನು ತನ್ನ ಅಣ್ಣ ತಮ್ಮಂದಿರಾದ ಬಸಣ್ಣಾ, ಮೇಘಣ್ಣಾ ಹಾಗು ಬೀರಣ್ಣ ಎಲ್ಲರು ಸೇರಿಕೊಂಡು ಮನೆಯ ಮುಂದೆ ನೊಡಾಡುವ ರೋಡಿನ ವಿಷಯದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು  ನಮ್ಮ ಪಾಲಿಗೆ ಬರುವ  ರಸ್ತೆ ಬಿಟ್ಟು ಓಡಾಡಿರಿ   ಅಂತಾ ಎಷ್ಟು ಸಾರಿ ಹೇಳಿದರೂ ಕೇಳದೇ ಅದೇ ರಸ್ತೆಯಿಂದ ಓಡಾಡುತ್ತೀ ಮಗನೇ ಎಂದು ಬೈಯ್ಯುತ್ತಾ ಗುಂಡಪ್ಪ ಈತನು ಕೈಯಲ್ಲಿದ್ದ ಕೊಡಲಿಯಿಂದ ನನ್ನ ತಲೆಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಅದೆ. ಜಗಳಾ ಬಿಡಿಸಲು ಬಂದ ನನ್ನ  ಮಗ ಮತ್ತು ಮಗಳಿಗೂ ಕೂಡಾ ಬಡಿಗೆಯಿಂದ ಹೊಡೆ ಬಡೆ ಮಾಡಿರುತ್ತಾರೆ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

21 August 2013

Gulbarga district reported crimes

ಅಪಘಾತ ಪ್ರಕರಣ :

ಶಾಹಾಬಾದ ನಗರ ಠಾಣೆ : ಶ್ರೀ ಬಸವರಾಜ ತಂದೆ ಕಾಮಣ್ಣಾ ದಂಡಗೊಂಡ ಸಾ: ಹರಳಯ್ಯಾ ನಗರ ಶಹಾಬಾದ ರವರು ದಿನಾಂಕ 18-08-2013 ಮುಂಜಾನೆ ದೇವನ ತೇಗನೂರ ಗ್ರಾಮದಲ್ಲಿರುವ ತನ್ನ ಹೊಲಕ್ಕೆ ಹೋಗುವ ಸಲುವಾಗಿ ನಾನು ಕೃಷರ ಜೀಪ ನಂ: ಕೆ.ಎ-32/ಎ-2725 ನೇದ್ದರಲ್ಲಿ ಕುಳಿತುಕೊಂಡು ಹೊರಟಾಗ ಸದರಿ ಜೀಪ ಚಾಲಕನು ತನ್ನ ಜೀಪನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಒಮ್ಮೇಲೆ ಕಟ್ ಹೊಡೆದರಿಂದ ಸದರಿ ಜೀಪ ಶಹಾಬಾದದ ರೈಲ್ವೆ ಬ್ರಿಡ್ಜದ ಹತ್ತಿರ ಕೆಳಗೆ ಬಿದ್ದು ಅದರಲ್ಲಿದ್ದ ಪಿರ್ಯಾದಿಗೆ ಟೊಂಕಕ್ಕೆ , ಎಡಗಾಲು ಚಪ್ಪೆಗೆ ಬಾರಿ ಒಳಪೆಟ್ಟು ಮತ್ತು ಎಡಗಡೆ ತಲೆಗೆ ಒಳಪೆಟ್ಟಾಗಿರುತ್ತದೆ. ಸದರಿ ಜೀಪ ಚಾಲಕನು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ. ಜೀಪನಲ್ಲಿದ್ದ ಗಾಯಾಳು ಆನಂದ ತಂದೆ ಶಂಕರ ಚವ್ಹಾಣ  ಸಾ:ಶಾಂತನಗರ ಭಂಕೂರ ಇತನಿಗೆ ತಲೆಯ ಹಿಂದೆ ಬಾರಿ ರಕ್ತಗಾಯವಾಗಿ ಒಳಪೆಟ್ಟಾಗಿರುತ್ತದೆ. ಮತ್ತು ಮುಖಕ್ಕೆ, ಬಾಯಿಗೆ, ಕಿವಿಯಿಂದ  ರಕ್ತ ಬಂದಿರುತ್ತದೆ. ಸದರಿ ಆನಂದನಿಗೆ ಉಪಚಾರ ಕುರಿತು ಗುಲ್ಬರ್ಗಾ ಕ್ಕೆ  ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಉಪಚಾರ ಕುರಿತು ಹೈದ್ರಾಬಾದ ಕ್ಕೆ ಕರೆದುಕೊಂಡು ಹೋಗುವಾಗ . ಮಾರ್ಗ ಮದ್ಯದಲ್ಲಿ ದಿನಾಂಕ 19-08-2013 ರಂದು ಪಟ್ಟಿರುತ್ಥಾನೆ.ಅಂತಾ ಗೊತ್ತಾಗಿ ಇಂದು ದಿನಾಂಕ 20-08-2013 ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.                                       

19 August 2013

ಕಳವು ಪ್ರಕರಣಗಳು :
ಕಮಲಾಪೂರ ಪೊಲೀಸ ಠಾಣೆ :ದಿನಾಂಕ: 17/08/2013 ರಂದು ಮಧ್ಯಾಹ್ನ 01-00 ಗಂಟೆಗೆ ಶ್ರೀ.ಕಲ್ಯಾಣರಾವ ತಂದೆ ಗುಂಡಪ್ಪ ಶೇರಿ ಜಿ: ಗುಲಬರ್ಗಾ ಇವರು ಸುಮಾರು 10 ವರ್ಷಗಳಿಂದ ಕಮಲಾಪೂರದ ಮಾಟೂರ ಕಾಂಪ್ಲೇಕ್ಸ್ ದಲ್ಲಿ ಬಂಗಾರದ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು ದಿನಾಂಕ 17-08-2013 ರಂದು ಸಾಯಂಕಾಲ 05-00 ಗಂಟೆಗೆ ಅಂಗಡಿ ಬಂದ ಮಾಡಿಕೊಂಡು ಹೋಗುದ್ದು ಮರು ದಿನ ಬೆಳಗ್ಗೆ 10-00 ಗಂಟೆಗೆ ನಾನು ನನ್ನ ಅಂಗಡಿಗೆ ಬಂದು ಕೀಲಿ ತೆಗೆಯಲು ಹೋದಾಗ ನನ್ನ ಅಂಗಡಿಯ ಶೇಟರದ ಬಾಗಿಲು ತೆರೆದೇ ಇದ್ದು, ಬಾಗಿಲು ಮಣಿದಿತ್ತು, ಒಳಗೆ ಹೋಗಿ ನೋಡಲಾಗಿ ನನ್ನ ಅಂಗಡಿಯಲ್ಲಿದ್ದ ಬೆಳ್ಳಿಯ ಸಾಮಾನುಗಳು ಇರಲಿಲ್ಲ. ಸಾಮಾನುಗಳ ಒಟ್ಟು ಅಂದಾಜು ಮೊತ್ತ 1,14,500/- ರೂಪಾಯಿಗಳ ಕಿಮ್ಮತ್ತಿನ ವಸ್ತುಗಳನ್ನು ಯಾರೋ ಅಪರಿಚಿತ ಕಳ್ಳರು ರಾತ್ರಿ 10-00 ಗಂಟೆಯಿಂದ ದಿನಾಂಕ: 17/08/2013 ರ ಬೆಳಗಿನ ಜಾವ  5-00 ಗಂಟೆಯ ಮಧ್ಯದ ಅವಧಿಯಲ್ಲಿ ನಮ್ಮ ಅಂಗಡಿಯ ಶೇಟರದ ಬಾಗಿಲು ಮುರಿದು ಒಳಗೆ ಪ್ರವೇಶ ಮಾಡಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ ನಗರ ಠಾಣೆ : ಶ್ರೀ ಗಾಂಧಿ ತಂದೆ ಚನ್ನಬಸಪ್ಪ ಕಿಣಗಿ ಸಾ: ಲೋಹಾರಗಲ್ಲಿ ಗುಲಬರ್ಗಾ  ರವರು   ದಿನಾಂಕ:16/08/2013 ರಂದು ಸಾಯಂಕಾಲ 6:00 ಗಂಟೆ ಸುಮಾರಿಗೆ ನನ್ನ ಹೊಂಡಾ ಆ್ಯಕ್ಟಿವ ದ್ವೀಚಕ್ರ ವಾಹನ ನಂ: ಕೆಎ-32 ಆರ್-2460 ನೇದ್ದನ್ನು ಸಾಯಿಮಂದಿರ ಹತ್ತಿರ ನಿಲ್ಲಿಸಿ ಸರ್ವಜ್ಞ ಕಾಲೇಜ ಕ್ಯಾಂಟಿನದಲ್ಲಿ ಕೆಲಸಕ್ಕೆ ಹೋಗಿದ್ದು ರಾತ್ರಿ 7:00 ಪಿಎಮ್ ಸುಮಾರಿಗೆ ಹೋರಗಡೆ ಬಂದು ನೋಡಲಾಗಿ ನನ್ನ ಗಾಡಿ ಕಾಣಿಸಲಿಲ್ಲ. ಆಗ ಸರ್ವಜ್ಞ ಕಾಲೇಜದಲ್ಲಿ ಕೆಲಸ ಮಾಡುವವರಿಗೆ ಮತ್ತು ಸಾಯಿ ಮಂದಿರ ಹತ್ತಿರ ಅಂಗಡಿಯವರಿಗೆ ನನ್ನ ಗಾಡಿ ಬಗ್ಗೆ ವಿಚಾರಿಸಿದ್ದು ಮತ್ತು ರಾಮಮಂದಿರ ಕರುಣೇಶ್ವರ ನಗರ ಕಡೆ ಗಾಡಿ ಹುಡಕಾಡಿದ್ದು ಗಾಡಿ ಸಿಕ್ಕಿರುವದಿಲ್ಲ. ನನ್ನ ಹೊಂಡಾ ಆಕ್ಟಿವ  ದ್ವಿಚಕ್ರ ವಾಹನದ ನಂ: ಕೆಎ-32 ಆರ್- 2460 ಚಿಸ್ಸಿ ನಂ: ME4JF082K58032059 ಇಂಜಿನ ನ:JF08E8210890 ಅ.ಕಿ. 40,000=00 ರೂ ಕಿಮ್ಮತ್ತಿನದ್ದನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಪತ್ತೆಹಚ್ಚಿ ಕೊಡಬೇಕಾಗಿ ವಿನಂತಿ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :

ಗ್ರಾಮೀಣ ಠಾಣೆ : ದಿನಾಂಕ 1808-2013 ರಂದು ಶ್ರೀ ಬಾಬುರಾವ  ತಂದೆ ಗೋವಿಂದರಾವ ಮೋರೆ ಸಾ: ಸೈಯ್ಯದ ಚಿಂಚೋಳಿ ತಾ: ಜಿ: ಗುಲಬರ್ಗಾ  ರವರು ಹೊಲದಿಂದ ಎತ್ತುಗಳನ್ನು ಹೊಡೆದುಕೊಂಡು ತಮ್ಮ ಖುಲ್ಲಾ ಜಾಗೆಯಲ್ಲಿ ಎತ್ತುಗಳನ್ನು ಕಟ್ಟುತ್ತಿದ್ದಾಗ, ತಮ್ಮನಾದ  ಚಿತಂಬರಾಯ ಮತ್ತು ಅವನ ಹೆಂಡತಿ ಕಲಾವತಿ  ಮತ್ತು ಮಗ ಜೈರಾಮ ಕೂಡಿಕೊಂಡು ಬಂದು ನಮ್ಮ ಜಾಗೆಯಲ್ಲಿ ಏಕೆ ಎತ್ತುಗಳನ್ನು ಕಟ್ಟುತ್ತಿದಿ ಅಂತ ಜಗಳ ತೆಗೆದು ಆರೋಪಿ ಹೆಂಡತಿ ಮತ್ತು ಮಗ ಇಬ್ಬರು ಪಿರ್ಯಾದಿ ಒತ್ತಿ  ಹಿಡಿದು  ಮುಂದೆ ಹೋಗದಂತೆ ತಡೆದು ನಿಲ್ಲಿಸಿದ್ದು  ಆಗ ಆರೋಪಿತನು ಚಿತಂಬರಾಯ ಬಂದು ಹಲ್ಲಿನಿಂದ ಎಡಕಿವಿಗೆ  ಜೋರಾಗಿ ಹಲ್ಲಿನಿಂದ ಕಚ್ಚಿ ರಕ್ತಗಾಯ ಮಾಡಿದ್ದು ಆಗ ಚೀರಾಡಲು ಪಿರ್ಯಾದಿ ಹೆಂಡತಿ ಬಿಡಿಸಲು ಬಂದಾಗ ಆರೋಪಿತನು ಹೆಂಡತಿಗೆ ಅವ್ಯಾಚ್ಛವಾಗಿ ಬೈದು ಹೊಡೆಯುತ್ತಿದ್ದಾಗ ಪಿರ್ಯಾದಿ ಬಿಡಿಲು ಹೋದಾಗ ಆರೋಪಿ ಜೈರಾಮ ಇವನು ಕಲ್ಲಿನಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

17 August 2013

ಆಶೋಕ ನಗರ ಪೊಲೀಸ ಠಾಣೆ :
ಹಲ್ಲೆ ಪ್ರಕರಣ:  ಶ್ರೀ ಗಜೇಂದ್ರ ತಂದೆ ನಂಜುಂಡಪ್ಪ ನಾಯ್ಡು ಸಾ|| ಮ.ನಂ. 1/1827 ಎನ್.ಜಿ.ಓ ಕಾಲೋನಿ ಗುಲಬರ್ಗಾ ರವರು ದಿನಾಂಕ : 16/08/2013 ರಂದು ತಮ್ಮ ಮ್ಯಾರೆಜ ಎನ್ಯುವರ್ಸರಿ ದಿನ ಇರುವದರಿಂದ ರಾತ್ರಿ 8-30 ಗಂಟೆ ಸುಮಾರಿಗೆ ನಾನು ಎನ್.ಜಿ.ಓ ಕಾಲೋನಿಯ ನಮ್ಮ ಮನೆಯ ಮುಂದೆ ನನ್ನ ಹೆಂಡತಿ ಸುಜಾತ ಇವಳಿಗೆ ಹೊಟೆಲ ಊಟಕ್ಕೆ ಕರೆದುಕೊಂಡು ಹೊಗಲು ರಡಿ ಆಗುತ್ತಿರುವಾಗ 5-6 ಮೊಟಾರ ಸೈಕಲ ಮೇಲೆ 8-10 ಜನರು ಕೈಯಲ್ಲಿ ತಲವಾರ, ಮಚ್ಚು, ಬಡಿಗೆಗಳನ್ನು ಹಿಡಿದುಕೊಂಡು ನನ್ನ ತಮ್ಮ ಮಹೆಂದ್ರನಿಗೆ ಹೊಡೆಯಲು ಬರುತ್ತಿರುವಾಗ ಅವನು ತಪ್ಪಿಸಿಕೊಂಡು ಓಡಿ ಹೊದನು ಆಗ ನಾನು ಏ ಯಾಕರೋ ಮನೆಗೆ ಬಂದು ಗುಂಡಾಗಿರಿ ಮಾಡುತ್ತಿದ್ರಿ ಅಂತಾ ಹೇಳಿದ್ದಕ್ಕೆ  ನಿನ್ನೆ ಮದುವೆಯಲ್ಲಿ ಜಗಳ ಮಾಡಿದ್ರಿ ಇವತ್ತು ನಿಮ್ಮನ್ನು ಬಿಡುವದಿಲ್ಲ ಕೊಲೆ ಮಾಡೆ ತಿರುತ್ತೆವೆ ಅಂತಾ ಬೈದವರೆ ಅವರಲ್ಲಿ ಒಬ್ಬನು ಹೊಡೆಯಿರಿ ಅಂತಾ ಕುಮ್ಮಕ್ಕು ನೀಡಿದಾಗ ಭೀಮು ಎನ್ನುವವನು ತನ್ನ ಕೈಯಲ್ಲಿದ್ದ ಮಚ್ಚಿನಿಂದ ನನ್ನ ಕುತ್ತಿಗೆಗೆ ಹೊಡೆಯಲು ಯತ್ನಿಸಿದಾಗ ನಾನು ಕೈ ಅಡ್ಡ ಪಡಿಸಿದ್ದಕ್ಕೆ ಏಟು ನನ್ನ ಎಡಗೈ ಹಸ್ತದ ಬೆರಳುಗಳಿಗೆ ಹತ್ತಿ ಭಾರಿ ರಕ್ತ ಗಾಯಗಳಾಗಿರುತ್ತದೆ. ನಾನು ಕೈ ಅಡ್ಡಪಡಿಸದಿದ್ದರೆ ಮಚ್ಚಿನ ಏಟು ನನ್ನ ಕುತ್ತಿಗೆಗೆ ಹತ್ತಿ ಜೀವ ಹೊಗುವ ಸಂಭವವಿತ್ತು. ಮತ್ತು ಹಿಂದಿನಿಂದ ಅಪ್ಪಣ್ಣ ಎನ್ನುವವನು ತಲವಾರದಿಂದ ನನ್ನ ಬಲಗೈ ರಟ್ಟೆ ಹತ್ತಿರ ಹೊಡೆದಿದ್ದರಿಂದ ರಕ್ತಗಾಯವಾಗಿರುತ್ತದೆ. ಆಗ ನಾನು ಚಿರಾಡಲಿಕ್ಕೆ ಹತ್ತಿದಾಗ ಆ 8-10 ಜನರು  ಬೈಯುತ್ತಾ ನಮ್ಮ ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುತ್ತಾರೆ. ಮತ್ತು ಮನೆ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನಗಳ ಮೇಲೆ ಕಲ್ಲು ಎತ್ತಿಹಾಕಿ ಡ್ಯಾಮೆಜ ಮಾಡುತ್ತಿದ್ದಾಗ ನಮ್ಮ ತಾಯಿ ಸುಧಾ, ನನ್ನ ಹೆಂಡತಿ ಸುಜಾತಾ ಹಾಗೂ ಗೆಳೆಯರಾದ ರಾಖೇಶ, ಅಜಯ ರವರು ಚಿರಾಡಲಿಕ್ಕೆ ಹತ್ತಿದಾಗ ಹಾಗೂ ಪೊಲೀಸರಿಗೆ ಪೊನ್ ಮಾಡುತ್ತಿರುವದನ್ನು ಗಮನಿಸಿದ ಆ ಹುಡುಗರು ಅಲ್ಲಿಂದ ಓಡಿ ಹೊಗಿರುತ್ತಾರೆ. ಆ ಹುಡುಗರಲ್ಲಿ ಕೆಲವು ಜನರ ಹೆಸರು ಗೊತ್ತಿದ್ದು 1) ಭೀಮು 2) ಅಪ್ಪಣ್ಣ 3) ಕಿಶನ 4) ಓಂ 5) ರವಿ ಬೈರಾಮಡಗಿ ಇವರ ಸಂಗಡ ಇನ್ನು 5-6 ಜನರು ಹುಡುಗರು ಇದ್ದು ಅವರ ಹೆಸರು ಗೊತ್ತಿರುವದಿಲ್ಲ ನೋಡಿದರೆ ಗುರುತ್ತಿಸುತ್ತೆನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

16 August 2013

GULBARGA DIST REPORTED CRIMES

ರೋಜಾ ಪೊಲೀಸ್ ಠಾಣೆ:
ಕಾಣೆಯಾದ ಪ್ರಕರಣ:
ದಿನಾಂಕ:15/08/2013 ಫಿರ್ಯಾದಿ ಶ್ರೀಮತಿ ಯಾಸ್ಮೀನ ಬೇಗಂ ಗಂಡ ಮಹ್ಮದ ಹನೀಫ ವಯ: 36, ಉ: ನ್ಯೂ ಲೈಫ ಆಸ್ಪತ್ರೆಯಲ್ಲಿ ಆಯಾ ಕೆಲಸ ಸಾ:ಮನೆ ನಂ.5-993/181/4ಎ ಅಲ್  ಉಮರ ಮಂಜಿಲ್ ನಾಗೈ ಮಹಿಬೂಬ ನಗರ ರಿಂಗ ರೋಡ ಗುಲಬರ್ಗಾ ಇವರು ಠಾಣೆಗೆ ಹಾಜರಾಗಿ ಒಂದು ಕನ್ನಡದಲ್ಲಿ ಗಣಕೀಕೃತಮಾಡಿದ ಫಿರ್ಯಾದಿ ಅರ್ಜಿ ಹಾಜರು ಪಡೆಸಿದ್ದು ಸಂಕ್ಷಿಪ್ತ ಸಾರಾಂಶ ಏನೆಂದರೆ ನಾನು ನ್ಯೂ ಲೈಫ ಖಾಸಗಿ ಆಸ್ಪತ್ರೆ ಎಮ.ಎಸ್.ಕೆ.ಮಿಲ್ ಹತ್ತಿರ ಆಯಾ ಅಂತಾ ಕೆಲಸ ಮಾಡಿಕೊಂಡು ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ನನ್ನ ಗಂಡ ಮಹ್ಮದ ಹನೀಫ ಇವರು ತೀರಿಕೊಂಡಿರುತ್ತಾರೆ ನನಗೆ ಒಟ್ಟು 6 ಜನ ಮಕ್ಕಳಿದ್ದು ಅದರಲ್ಲಿ 3 ಜನ ಗಂಡು ಮತ್ತು 3 ಜನ ಹೆಣ್ಣು ಮಕ್ಕಳು ಇರುತ್ತಾರೆ ಗಂಡು ಮಕ್ಕಳಲ್ಲಿ ಕೊನೆಯ ಮಗ ಮಹ್ಮದ ಇರ್ಫಾನ ತಂದೆ ಮಹ್ಮದ ಹನೀಫ ವಯ: 8 ವರ್ಷ, ಇರುತ್ತಾನೆ. ಇವನು ಶಾಲೆಗೆ ಹೋಗದೆ ಮನೆಯಲ್ಲಿಯೇ ಇರುತ್ತಾನೆ.ಹೀಗಿದ್ದು ನಾನು ಮನೆಯಲ್ಲಿ ಇದ್ದಾಗ ನನ್ನ ಕೊನೆಯ ಮಗ ಮಹ್ಮದ ಇರ್ಫಾನ ಈತನು ನಾನು ಸಪ್ನಾ ಬೇಕರಿ ಹತ್ತಿರ ಹೋಗಿ ಬರುತ್ತೇನೆ ಅಂತಾ ನನಗೆ ಹೇಳಿ ಮನೆಯಿಂದ ಹೋದವನು ಸಂಜೆಯ ವರೆಗೆ ಆದರೂ ಮನೆಗೆ ಬಂದಿರುವದಿಲ್ಲ ಮಗ ಮನೆಗೆ ಬರಲಾರದಕ್ಕೆ ನಾನು ಎಲ್ಲಾ ಕಡೆ ನಮ್ಮ ಸಂಬಂದಿಕರಲ್ಲಿ ಬಂದು ಬಳಗದಲ್ಲಿ ಬಡಾವಣೆಗಳಲ್ಲಿ ಹುಡುಕಾಡಿದರೂ ಸಹ ನನ್ನ ಮಗ ಮಹ್ಮದ ಇರ್ಫಾನ ಈತನು ಸಿಕ್ಕಿರುವದಿಲ್ಲಾ ದಿನಾಂಕ: 12/08/2013 ರಿಂದ ಇಲ್ಲಿಯವರೆಗೆ ನನ್ನ ಮಗನ ಬಗ್ಗೆ ಹುಡುಕಾಟ ಮಾಡಿರುತ್ತೇವೆ ನನ್ನ ಮಗ ಸಿಕ್ಕಿರುವದಿಲ್ಲಾ ಮನೆಯಿಂದ ಕಾಣೆಯಾಗಿರುತ್ತಾನೆ.ಕಾರಣ ಕಾಣೆಯಾದ ನನ್ನ ಮಗ ಮಹ್ಮದ ಇರ್ಫಾನ ಈತನಿಗೆ ಪತ್ತೆಹಚ್ಚಿಕೊಡಲು ವಿನಂತಿ ಅವನ ಚೆಹರಾ ಪಟ್ಟಿ ಈ ಕೆಳಗಿನಂತೆ ಇರುತ್ತದೆ. ಹೆಸರು :-ಮಹ್ಮದ ಇರ್ಫಾನ, ತಂದೆ :-ಮಹ್ಮದ ಹನೀಫ, ವಯಸ್ಸು :-8 ವರ್ಷ, 25/05/2004, ಜಾತಿ :-ಮುಸ್ಲಿಂ, ವಿದ್ಯಾಬ್ಯಾಸ :-ಇಲ್ಲಾ,ಎತ್ತರ :-3 ಫೀಟ್ 6 ಇಂಚು , ಮೈಬಣ್ಣ :- ಸಾಧಾರಣ ಗೋಧಿ ಮೈಬಣ್ಣ , ಸಾಧಾರಣ ಮೈಕಟ್ಟು, ಎಡಗಾಲ ಹಿಮ್ಮಡಿಯ ಮೇಲೆ ಹೊಸ ಬಿದ್ದ ಗಾಯವಾಗಿದ್ದು ಸ್ವಲ್ಪ ಕುಂಟುತ್ತಾನೆ. , ಉಡುಪು :- ಕಪ್ಪು ಬಣ್ಣದ ಪ್ಯಾಂಟು, ಹಸಿರು ಕಪ್ಪು ಲೈನಿಂಗ ಟಿ ಶರ್ಟು , ಮಾತನಾಡುವ ಭಾಷೆ:-ಹಿಂದಿ,ಕಾರಣ ಕಾಣೆಯಾದ ನನ್ನ ಮಗನ ಪತ್ತೆಹಚ್ಚಿ ಅನೂಕೂಲ ಮಾಡಿಕೊಡಬೇಕು ಅಂತಾ ತಮ್ಮಲ್ಲಿ ವಿನಂತಿಸಿಕೊಳ್ಳುತ್ತಾ ನನ್ನ ಮಗನ ಭಾವಚಿತ್ರಗಳನ್ನು ಸಹ  ಕೂಡಾ ತಮ್ಮ ದಯಾಪರ ಮಾಹಿತಿಗಾಗಿ ಸಲ್ಲಿಸಲಾಗಿದೆ. ಅಂತಾ ವಗೈರೆ ಕೊಟ್ಟ ಫಿರ್ಯಾದಿ ಅರ್ಜಿಯ ಸಾರಾಂಶದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.            
 ನೆಲೋಗಿ ಪೊಲೀಸ ಠಾಣೆ:
ಹಲ್ಲೆ ಪ್ರಕರಣ:
ದಿನಾಂಕ: 30/06/2013 ರಂದು ಬೆಳಿಗ್ಗೆ ಸುಮಾರಿಗೆ ನಾನು ನಮ್ಮ ಹೊಲದಲ್ಲಿ ಕೆಲಸ ಮಾಡುವ ಸಮಯಕ್ಕೆ ನಮ್ಮ ಊರಿನವರಾದ ಗುಂಡಯ್ಯ ಸ್ವಾಮಿ ಮತ್ತು ಶಿವಯ್ಯ ಸ್ವಾಮಿ ಇವರಿಬ್ಬರೂ ಸೇರಿಕೊಂಡು ನಮ್ಮ ಹೊಲಕ್ಕೆ ಬಂದು ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಮತ್ತು ನನಗೆ ಬಾಯಿಗೆ ಬಂದ ಹಾಗೆ ಬೈಯುತ್ತಾ ಎಲೆ ಮಾದಿಗ ಸೂಳೆ ಮಗನೇ ನಿನ್ನನ್ನು ಖಲಾಸ ಮಾಡಿ ಬಿಡುತ್ತೇವೆ ಅಂತಾ ಹೇಳಿ ನನ್ನನ್ನು ಮನಬಂದಂತೆ ಹೊಡೆದಿದ್ದಾರೆ. ಮತ್ತು ನನ್ನನ್ನು ಸುಟ್ಟು ಹಾಕುತ್ತೇವೆ ಅಂತಾ ಹೇಳಿ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ. ಮತ್ತು ನಾನು ಅಂಜುತ್ತಾ ಕುಂತಾಗ ನನಗೆ ಏನೋ ದೋಚದೆ ಇದ್ದಾಗ, ನಾನು ಕಾನೂನಿನ ಮೊರೆ ಬಂದಿದ್ದೇನೆ. ಕಾರಣ ತಾವು ನನಗೆ ಕಾನೂನಿನ ರಕ್ಷಣೆ ನೀಡಿ ನನಗೆ ಹಲ್ಲೆ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ಲಿಖಿತ ಅರ್ಜಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.


ಶಹಾಬಾದ ನಗರ ಪೊಲೀಸ ಠಾಣೆ:
ಹಲ್ಲೆ ಪ್ರಕರಣ:


 ದಿನಾಂಕ:14/08/2013ರಂದು ಪಿರ್ಯಾದಿದಾರರಾದ ಶ್ರೀ ಬಾಬಾ ಪಟೇಲ ತಂದೆಲಾಡ್ಲೇಪಟೇಲಇವರುಠಾಣೆಗೆ ಹಾಜರಾಗಿ ಪಿರ್ಯಾದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಾನು ಮತ್ತು ಅಳಿಯ ಮಹ್ಮದ ವಸೀಂ ಹಾಗೂ ವಾಚಮನರಾದ ವಿಠ್ಠಲರಾವ, ಬಸಪ್ಪಾ ಕೂಡಿ ಮಾತನಾಡುತ್ತಾ ಕುಳಿತಿದ್ದಾಗ ಆರೋಪಿತರಾದ 1)ಮಹ್ಮದ ಸಲಾವುದ್ದೀನ 2)ಸೈಯದ ಟಮಕಿ ಗುಲಬರ್ಗಾ ಇಬ್ಬರೂ ಕೂಡಿಕೊಂಡು ಬಂದು ನಮ್ಮ ಮಾವ ಪಾಶಾ ಪಟೇಲ ಎಲ್ಲಿದ್ದಾನೆ ಅಂತಾ ಕೇಳಿದಾಗ ಗೊತ್ತಿಲ್ಲ ಅಂದಿದ್ದಕ್ಕೆ ಸದರಿಯವರು ಕೂಡಿ ಅವಾಚ್ಯ ಶಬ್ಗಗಳಿಂದ ಬೈದು ಕೈಯಿಂದ ಮತ್ತು ಕಟ್ಟಿಗೆಯಿಂದ ನನಗೆ ಮತ್ತು ನಮ್ಮ ಅಳಿಯನಿಗೆ ಹೊಡೆದು ನಂತರ ನಮ್ಮ ಆಫೀಸಗೆ ನುಗ್ಗಿ ಆಫೀಸನಲ್ಲಿದ್ದ ಅಂದಾಜು 1,97,000/-ರೂ ಕಿಮ್ಮತ್ತಿನ ಸಾಮಾನುಗಳಾದ ಎಲ್‌‌ಸಿಡಿ ಮಾನಿಟರ, ಸಿಪಿಯು, ಪ್ರೀಂಟರ, ಕೀಬೋರ್ಡ, ಕಂಫ್ಯೂಟರ ಟೇಬಲ, ಎಲ್‌‌ಸಿಡಿ ಟಿವಿ, ಸಾಗವಾನಿ ಟೇಬಲ, 8 ಕುರ್ಚಿಗಳು,ಕೂಲಿಂಗ ಗ್ಲಾಸ ಬಾಗಿಲು,ಗೋಡೆ ಗಡಿಯಾರ, 2 ಮೊಬೈಲಗಳು, ಎಸಿ ಅಸೆಂಬ್ಲೀಬಾಕ್ಸ್‌ ಮುಂತಾದ ಸಾಮಾನುಗಳನ್ನು ಹೊಡೆದು ಲುಕಸಾನಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಪಿರ್ಯಾದಿ. ಅರ್ಜಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

13 August 2013

GULBARGA DIST REPORTED CRIMES

ಕಳ್ಳ ಸಾಗಾಣಿಕೆ:
ಶಹಾಬಾದ  ಪೊಲೀಸ ಠಾಣೆ:
ದಿನಾಂಕ:12/08/2013  ರಂದು ಶ್ರೀ ಕಾಶಿನಾಥ ಎಎಸ್‌ಐ ರವರು ವರದಿ ಹಾಜರಪಡಿಸಿದ್ದು ಸಾರಾಂಶವೇನಂದರೆ,  ನಿನ್ನೆ ರಾತ್ರಿ ಗಸ್ತು ಚೆಕಿಂಗ್ ಕರ್ತವ್ಯ ಸಂಗಡ ಸಿಪಿಸಿ.306 ರವರೊಂದಿಗೆ ಮುಗಿಸಿಕೊಂಡು ಮರಳಿ ಠಾಣೆಗೆ 5 ಎಎಮ್‌ ಸುಮಾರಿಗೆ ಬಂದು ಠಾಣೆಯಲ್ಲಿದ್ದಾಗ ಬಾತ್ಮಿ ಬಂದಿದ್ದೇನಂದರೆ,ಕಾಗೀಣಾ ಮತ್ತು ಇತರೆ ನದಿ ಪ್ರದೇಶಗಳಿಂದ ಟ್ರಾಕ್ಟರಗಲ್ಲಿ ಮರಳನ್ನು ತುಂಬಿಕೊಂಡು ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಮತ್ತು ಮರಳು ಸಾಗಾಣಿಕೆ ಪರವಾನನಿಗೆ ಇಲ್ಲದೇ ಕಳ್ಳ ಸಾಗಾಣೆ ಮಾಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ನಾನು ಹಾಗೂ ಸಿಬ್ಬಂದಿಯವರಾದ ರವರೊಂದಿಗೆ ಮಾನ್ಯ ಡಿಎಸ್‌ಪಿ ಸಾಹೇಬರು ಶಹಾಬಾದ ಮತ್ತು ಮಾನ್ಯ ಪಿಐ ಶಹಾಬಾದ ರವರಿಗೆ ಸದರಿ ವಿಷಯವನ್ನು ತಿಳಿಸಿ ಠಾಣೆಯಿಂದ ವಾಡಿ ಕ್ರಾಸ ಹತ್ತಿರ ಬಂದಾಗ ಚಿತ್ತಾಪೂರ ಕಡೆಯಿಂದ ಒಂದರ ಹಿಂದೆ ಒಂದು ಮೂರು ಟ್ರ್ಯಾಕ್ಟರಗಳು  ಮತ್ತು ಒಂದು ಲಾರಿ ಬರುತ್ತಿದ್ದುದ್ದನ್ನು ನಾನು ಮತ್ತು ಸಿಬ್ಬಂದಿಯವರು ಸದರಿ ವಾಹನಗಳನ್ನು ನಿಲ್ಲಿಸಿ ನೋಡಲಾಗಿ ಟ್ರಾಕ್ಟರಗಳಲ್ಲಿ ಮತ್ತು ಲಾರಿಯಲ್ಲಿ ಉಸಕು ತುಂಬಿದ್ದು ಕಂಡುಬಂದಿದ್ದು, ಸದರಿ ಟ್ರ್ಯಾಕ್ಟರ  ಮತ್ತು ಲಾರಿ ನಂಬರ ನೋಡಲಾಗಿ 1] ಟಾಟಾ ಲಾರಿ ನಂ.ಕೆಎ-23/5438 ಲಾರಿಯ ಅಂದಾಜು ಕಿಮ್ಮತ್ತು 2,50,000/- ಅದರಲ್ಲಿಯ ಉಸಕಿನ ಕಿಮ್ಮತ್ತು. 8,000/- ರೂಪಾಯಿ  2] ಟ್ರ್ಯಾಕ್ಟರ ನಂ. ಕೆಎ-32 / 5495 ನೇದ್ದರ ಕಿಮ್ಮತ್ತು. 2,00000/- ಅದರಲ್ಲಿ ಉಸಕಿನ ಕಿಮ್ಮತ್ತು. 2500/-  3] ಟ್ರ್ಯಾಕ್ಟರ ನಂ. ಕೆಎ-32 ಟಿಎ-3144 ನೇದ್ದರ ಟ್ಯಾಕ್ಟರ5 ಕಿಮ್ಮತ್ತು. 2,00000/- ಅದರಲ್ಲಿಯ ಉಸಕಿನ ಕಿಮ್ಮತ್ತು. 2.500/- 4] ಟ್ರ್ಯಾಕ್ಟರ ನಂ. ಕೆಎ-32 ಟಿಎ-5297  ನೇದ್ದರ ಟ್ಯಾಕ್ಟರ್ ಅ.ಕಿ. 2,00000/- ಅದರಲ್ಲಿ ಉಸಕಿನ ಕಿಮ್ಮತ್ತು. 2500/-  ಇದ್ದು ಸದರಿ ವಾಹನಗಳ ಚಾಲಕರ ಹೆಸರು ಕ್ರಮವಾಗಿ  1] ಅರುಣ ತಂದೆ ಅಂಬಣ್ಣಾ ಮಹಾಗಾಂವ ವ:25 ಜಾ:ಹರಿಜನ ಉ:ಟಾಟಾ ಲಾರಿ ನಂ.ಕೆಎ-23 / 5438 ನೇದ್ದರ ಚಾಲಕ ಸಾ:ಹುಳಗೇರಾ ತಾ:ಚಿತ್ತಾಪೂರ ಹಾ:ವ: ವಿಶ್ವವಿದ್ಯಾಲಯ ಎದರುಗಡೆ ಗುಲಬರ್ಗಾ ಅಂತಾ ಹೇಳಿದನು.ಮತ್ತು ಟ್ರ್ಯಾಕ್ಟರ ಚಾಲಕರಾದ 2] ಆನಂದ ತಂದೆ ಶಂಕ್ರೆಪ್ಪಾ ಪೂಜಾರಿ ವ:28 ಜಾ:ಕುರುಬರು ಉ:ಟ್ರ್ಯಾಕ್ಟರ ನಂ. ಕೆಎ3-32 / 5495 ನೇದ್ದರ ಚಾಲಕ 3] ಬಾಬು ತಂದೆ ರಾಮು ಮಡಿವಾಳ ವ:19 ಜಾ:ಮಡಿವಾಳ ಉ:ಟ್ರ್ಯಾಕ್ಟರ ನಂ. ಕೆಎ-32 ಟಿಎ-3144 ನೇದ್ದರ ಚಾಲಕ 4] ರೇವಣಸಿದ್ದ ತಂದೆ ನಾಗಣ್ಣಾ ಪೂಜಾರಿ ವ:18 ಜಾ:ಕುರುಬರು ಉ:ಟ್ರ್ಯಾಕ್ಟರ ನಂ. ಕೆಎ-32 ಟಿಎ-5297 ನೇದ್ದರ ಚಾಲಕ ಸಾ:ಮೂವರುಶಂಕರವಾಡಿ ಗ್ರಾಮ ಅಂತಾ ಹೇಳಿದರು. ಸದರಿವರಿಗೆ ಉಸುಕು ತೆಗೆದುಕೊಂಡು ಹೋಗಲು ಸರಕಾರದ ವತಿಯಿಂದ ಪರವಾನಿಗೆ ಇದೆಯೇ ಅಂತಾ ಕೇಳಲಾಗಿ ತಮ್ಮ ಹತ್ತಿರ ಯಾವುದೇ ಸರಕಾರದ ವತಿಯಿಂದ ಉಸುಕು ತೆಗೆದುಕೊಂಡು ಹೋಗಲು ಯಾವುದೇ ಪರವಾನಿಗೆ ಪತ್ರ ಇರುವದಿಲ್ಲಾ ಅಂತಾ ತಿಳಿಸಿದರು.ಸದರಿ ಈ ಮೇಲೆ ನಮೂದಿಸಿದ ಎಲ್ಲಾ ಟ್ರ್ಯಾಕ್ಟರಗಳಿಗೆ ಮತ್ತು ಲಾರಿಗೆ ಉಸುಕು ತುಂಬಿದ ಸದರಿ 4 ವಾಹನಗಳಲ್ಲಿ ತುಂಬಿದ ಒಟ್ಟು ಉಸಕಿನ ಕಿಮ್ಮತ್ತು, 15,500/- ನೇದ್ದು ಆಗುತ್ತಿದ್ದು ಸದರಿ ಮರಳಿನ ಬಗ್ಗೆ ಸರ್ಕಾರದ ವತಿಯಿಂದ ಉಸುಕು ತುಂಬಿ ಸಾಗಿಸಲು ಯಾವುದೇ ದಾಖಲಾತಿಗಳು ಇರುವದಿಲ್ಲಾ. ಇವರೆಲ್ಲರೂ ಸರಕಾರದ ಸ್ವತ್ತನ್ನು ಕಾನೂನು ಬಾಹಿರವಾಗಿ ಕಳ್ಳ ಸಾಗಾಣಿಕೆ ಮಾಡಿರುತ್ತಾರೆ ಅಂತಾ ಕಂಡುಬಂದಿರುತ್ತದೆ.ಕಾರಣ ಮಾನ್ಯರವರ ಮುಂದೆ ಒಂದು ಲಾರಿ ಮತ್ತು 3 ಟ್ರ್ಯಾಕ್ಟರಗಳು  ಹಾಗೂ ಸದರಿ ವಾಹನಗಳ ಚಾಲಕರನ್ನು ತಂದು ಮುಂದಿನ ಕ್ರಮಕ್ಕಾಗಿ ತಮ್ಮ ಮುಂದೆ ಹಾಜರಪಡಿಸಿದ್ದರ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಅದೆ.

ನಿಂಬರ್ಗಾ ಪೊಲೀಸ ಠಾಣೆ
ಬೆಂಕಿ ಪ್ರಕರಣ:
ದಿನಾಂಕ 12/08/2013 ರಂದು  ಯಾರೋ ದುಷ್ಕರ್ಮಿಗಳು ಗ್ರಾಮ ಪಂಚಾಯತ ಸುಂಟನೂರದ ಸಭಾಂಗಣದಲ್ಲಿರುವ ಬಿಲ ಕಲೆಕ್ಟರ ಅಲಮಾರಿಯಲ್ಲಿದ್ದ ರಜಿಸ್ಟರ ಮತ್ತು ದಾಖಲಾತಿಗಳನ್ನು ಅಲಮಾರಿ ಕೀಲಿ ಮುರಿದು ಹೊರಗಡೆ ಹಾಕಿ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿದ್ದು ಇದರಿಂದ ಅಲಮಾರಿ ಸುಟ್ಟಿದ್ದು ಅದರಲ್ಲಿದ್ದ ದಸ್ತಾವೇಜು ಸುಟ್ಟಿದ್ದು ಅಲ್ಲದೆ ಸಭಾಂಗಣದಲ್ಲಿದ್ದ ಫೋಟೊ,ಗಡಿಯಾರ, ಟೇಬಲ ಮತ್ತಿತರ ವಸ್ತುಗಳು ಸುಟ್ಟಿದ್ದು ಇದರಿಂದ ಸುಮಾರು 5,000/-ರೂಪಾಯಿಯಷ್ಟು ಲುಕ್ಸಾನ ಆಗಿರುತ್ತದೆ. ಆರೋಪಿತರ ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಅಂತ ವಗೈರೆ ಫಿರ್ಯಾದಿ ನೀಡಿದ್ದು ಅದರ ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆ ಪ್ರಕರಣ ದಾಖಲು ಮಾಡಿಕೊಂಡು  ತನಿಖೆ ಕೈ ಕೊಂಡಿದ್ದು  ಇರುತ್ತದೆ.