POLICE BHAVAN KALABURAGI

POLICE BHAVAN KALABURAGI

22 August 2013

Gulbarga District reported crimes

ಮದುವೆ ಮಾಡಿಕೊಳ್ಳತ್ತೆನೆ ಅಂತಾ ನಂಬಿಸಿ ಜಬರಿ ಸಂಬೋಗ ಮಾಡಿದ ಪ್ರಕರಣ :-
ಮಳಖೇಡ ಠಾಣೆ : ಕುಮಾರಿ (ಹೆಸರು ಬದಲಾಯಿಸಲಾಗಿದೆ) ಇವಳಿಗೆ  ಮಾದೇಶಾ ತಂದೆ ಹಣಮಂತ ಮರಪಳ್ಳಿ ಈತನು ತನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನಂಬಿಸಿ ನನಗೆ ಆಗಾಗ ಸಂಭೋಗ ಮಾಡುತ್ತಿದ್ದು , ಮತ್ತು ದಿನಾಂಕ 10-7-2013 ರಂದು ಮಧ್ಯಾನ 2 ಗಂಟೆಗೆ ತಮ್ಮ ಯಂಕಾರೆಡ್ಡಿ ಹೊಲಕ್ಕೆ ಹೋದಾಗ ಸದ್ರಿ ಮಾದೇಶ ಈತನು ಹೊಲದಲ್ಲಿ ಬಂದು ತನಗೆ ಸಂಭೋಗ ಮಾಡಿದ್ದು ಇರುತ್ತದೆ. ಇಂದು ದಿನಾಂಕ 21-8-2013 ರಂದು ತಾನು ಸದ್ರಿ ಮಾದೇಶಾ ಈತನಿಗೆ ನೀನು ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹೇಳಿದ್ದು ನನಗೆ ಮದುವೆ ಮಾಡಿಕೊ ಅಂತಾ ಹೇಳಿದಾಗ ಅವನು ನಿನಗೆ ಯಾರು ಮದುವೆ ಮಾಡಿಕೊಳ್ಳುತ್ತಾರೆ ಹೋಗೆ ಅಂತಾ ಹೇಳಿದ್ದು ಈ ವಿಷಯವನ್ನು ನನ್ನ ತಂದೆ ತಾಯಿಗೆ ತಿಳಿಸಿದ್ದು , ಸದ್ರಿ ಮಾದೇಶಾ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಮೀಣ ಠಾಣೆ : ದಿನಾಂಕ 20-08-2013 ರಂದು ರಾತ್ರಿ ಶ್ರೀ ಅಂಬಾರಾಯ ತಂದೆ ಶರಣಪ್ಪ ಸಿತಾಳಗೇರಿ ಸಾ: ಕುಮಸಿ ವಾಡಿ ತಾ.ಜಿ. ಗುಲಬರ್ಗಾ ರವರು  ಉಟ ಮಾಡಿ ಮನೆಯ ಅಂಗಳದಲ್ಲಿ ಕುಳಿತುಕೊಂಡಾಗ  ಗುಂಡಪ್ಪ ತಂದೆ ಶರಣಪ್ಪ ಸಿತಾಳಗೇರಿ ಇತನು ತನ್ನ ಅಣ್ಣ ತಮ್ಮಂದಿರಾದ ಬಸಣ್ಣಾ, ಮೇಘಣ್ಣಾ ಹಾಗು ಬೀರಣ್ಣ ಎಲ್ಲರು ಸೇರಿಕೊಂಡು ಮನೆಯ ಮುಂದೆ ನೊಡಾಡುವ ರೋಡಿನ ವಿಷಯದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು  ನಮ್ಮ ಪಾಲಿಗೆ ಬರುವ  ರಸ್ತೆ ಬಿಟ್ಟು ಓಡಾಡಿರಿ   ಅಂತಾ ಎಷ್ಟು ಸಾರಿ ಹೇಳಿದರೂ ಕೇಳದೇ ಅದೇ ರಸ್ತೆಯಿಂದ ಓಡಾಡುತ್ತೀ ಮಗನೇ ಎಂದು ಬೈಯ್ಯುತ್ತಾ ಗುಂಡಪ್ಪ ಈತನು ಕೈಯಲ್ಲಿದ್ದ ಕೊಡಲಿಯಿಂದ ನನ್ನ ತಲೆಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಅದೆ. ಜಗಳಾ ಬಿಡಿಸಲು ಬಂದ ನನ್ನ  ಮಗ ಮತ್ತು ಮಗಳಿಗೂ ಕೂಡಾ ಬಡಿಗೆಯಿಂದ ಹೊಡೆ ಬಡೆ ಮಾಡಿರುತ್ತಾರೆ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: