POLICE BHAVAN KALABURAGI

POLICE BHAVAN KALABURAGI

10 April 2018

KALABURAGI DISTRICT REPORTED CRIMES

ಕೊಲೆ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 09-04-2018 ರಂದು ಬೆಳಿಗ್ಗೆ 07:00 ಗಂಟೆಯ ಸುಮಾರಿಗೆ ನಾನು ನಮ್ಮೂರಿನ ಬಸ್ ನಿಲ್ದಾಣದ ಹತ್ತಿರ ಇದ್ದಾಗ ಜನರು ಮಣೂರ-ಶೇಷಗಿರಿ ರೋಡಿಗೆ ಇರುವ ವರದಾಚಾರ್ಯ ಅಕ್ಕಮಂಚಿ ರವರ ಹೊಲದಲ್ಲಿ ಯಾವುದೊ ವ್ಯಕ್ತಿಯ ಕೊಲೆ ಆಗಿದೆ ಅಂತಾ ಜನರು ಮಾತನಾಡುವುದನ್ನು ಕೇಳಿ ನಾನು ಮತ್ತು ನಮ್ಮ ಪಂಚಾಯತಿಯಲ್ಲಿ ಕೆಲಸ ಮಾಡುವ ಗಣೇಶ ಹಿಳ್ಳಿ, ಮತ್ತು ನಮ್ಮೂರಿನ ದಿನೇಶ ನಾಟೀಕಾರ ಮೂರು ಜನರು ಕೂಡಿಕೊಂಡು ಸದರಿ ವರದಾಚಾರ್ಯ ರವರ ಹೊಲದ ಹತ್ತಿರ ಬಂದು ನೋಡಲಾಗಿ ಸದರಿ ವರದಾಚಾರ್ಯ ರವರ ಹೊಲದಲ್ಲಿ ಶೇಷಗಿರಿ-ಮಣೂರ ರೋಡಿನಿದ ಅಂದಾಜು 50 ಮೀಟರ ಅಂತರದಲ್ಲಿ ಒಂದು ಶವ ವಿದ್ದು ಹತ್ತಿರ ಹೋಗಿ ನೋಡಲಾಗಿ ಅಂದಾಜು 20 ರಿಂದ 25 ವಯಸ್ಸಿನ ಗಂಡು ವ್ಯಕ್ತಿಯ ಶವವಿರುತ್ತದೆ. ಸದರಿ ಶವ ಅರ್ಧ ಮರ್ಧ ಸುಟ್ಟಿದ್ದು ಮುಖ ಗುರುತು ಸಿಗದಂತೆ ಆಗಿರುತ್ತದೆ. ಸದರಿ ಶವದ ಮೇಲೆ ಅರ್ಧ ಮರ್ಧ ಸುಟ್ಟ ಹಳದಿ ಬಣ್ಣದ ಅರ್ಧ ತೋಳಿನ ಟೀ-ಶರ್ಟ ಇರುತ್ತದೆ. ಶವದ ಮೈಮೇಲಿನ ಪ್ಯಾಂಟ್ ಪೂರ್ತಿಯಾಗಿ ಸುಟ್ಟಿದ್ದು ಸುಟ್ಟಿದ ಗುರುತಿನಿಂದ ಪ್ಯಾಂಟ ಅಂದಾಜು ನೀಲಿ ಬಣ್ಣ ಜೀನ್ಸ ಪ್ಯಾಂಟ್ ಇರಬಹುದು ಎಂದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ. ಶವದ ಎಡ ಬುಜಕ್ಕೆ ಹಾಗೂ ತಲೆಯ ಹಿಂಬದಿಯಿಂದ ರಕ್ತ ಸೋರಿದ್ದು ಕಂಡು ಬಂದಿರುತ್ತದೆ. ಮತ್ತು ನಾಲಿಗೆಯೂ ಸಹ ಹೊರಬಂದಿರುತ್ತದೆ. ನಮ್ಮಂತೆ ಅನೇಕ ಜನರು ಸುದ್ದಿ ತಿಳಿದು ಶವವನ್ನು ನೋಡಲು ಬಂದಿರುತ್ತಾರೆ. ಸದರಿ ಅಂದಾಜು 20 ರಿಂದ 25 ವರ್ಷ ವಯಸ್ಸಿನ ಗಂಡು ವ್ಯಕ್ತಿಯನ್ನು ಯಾರೋ ದುಷ್ಕರ್ಮಿಗಳು ಯಾವುದೋ ದ್ವೇಷದಿಂದ ಯಾವುದೋ ಒಂದು ಆಯುಧ ದಿಂದ ತಲೆಗೆ ಹೊಡೆದು ಹಾಗೂ ಕುತ್ತಿಗೆ ಒತ್ತಿ ಕೊಲೆ ಮಾಡಿ ಶವವನ್ನು ಗುರುತು ಸಿಗಬಾರದು ಎಂದು ಶವವನ್ನು ಸುಟ್ಟಿರುತ್ತಾರೆ. ಸದರಿ ಘಟನೆ ಅಂದಾಜು ನಿನ್ನೆ ದಿನಾಂಕ 08-04-2018 ರಂದು ರಾತ್ರಿ 10:30 ಗಂಟೆಯಿಂದ ಇಂದು ದಿನಾಂಕ 09-04-2018 ಬೆಳಿಗಿನ 06:00 ಗಂಟೆಯ ಮಧ್ಯದ ಅವಧಿಯಲ್ಲಿ ಮಣೂರ ಸೀಮಾಂತರದಲ್ಲಿ ವರದಾಚಾರ್ಯ ಅಕ್ಕಮಂಚಿ ಸಾ: ಮಣೂರ ಇವರ ಹೋಲ ಸರ್ವೇ ನಂ 70/ ನೇದ್ದರಲ್ಲಿ ಜರುಗಿರುತ್ತದೆ. ಅಂತಾ ಶ್ರೀ ಬಸವರಾಜ ತಂದೆ ಈರಣ್ಣ ಪಾಟೀಲ ಸಾ: ಮಣೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ವಿಜಯಕುಮಾರ ತಂದೆ ದೊಂಡಿಬಾ ಮಾನೆ ಉ: ಪೊಲೀಸ ಪೇದೆ ಸಾ: ಲಾಲಗೇರಿ ಮಹಾಲಕ್ಷ್ಮಿ ಲೇಔಟ ಬ್ರಹ್ಮಪೂರ ಕಲಬುರಗಿ ಇವರು ದಿನಾಂಕ 01.11.2017 ರಂದು ರಾತ್ರಿ 11:00 ಗಂಟೆಯ ಸುಮಾರಿಗೆ ನಾನು, ಹೆಂಡತಿ ಮಕ್ಕಳು ಮತ್ತು ನಮ್ಮ ತಾಯಿ ಹಾಗೂ ಕುಟುಂಬದ ಸದಸ್ಯರು ಕೂಡಿಕೊಂಡು ನಮ್ಮ ಮನೆಯಲ್ಲಿ ಮಲಗಿಕೊಂಡಿದ್ದು ನಾವು ಮಲಗುವಾಗ ಪ್ರತಿ ದಿವಸ ನಮ್ಮ ಮೊಬೈಲಗಳು ಟಿವಿ ಪಕ್ಕದಲ್ಲಿ ಚಾರ್ಜಗೆ ಹಚ್ಚಿ ಮಲಗಿದ್ದು ಇರುತ್ತದೆ. ದಿನಾಂಕ 02.11.2017 ರಂದು ಬೆಳ್ಳಿಗಿನ ಜಾವ  ನಮ್ಮ ಮನೆಯ ಅಂಗಳದಲ್ಲಿ ಸಪ್ಪಳ ಆಗಿದ್ದು ಮನೆಯ ಸದಸ್ಯರು ಎದ್ದು ನೈಸರ್ಗಿಕ ಕರೆಗೆ ಹೋಗಿರಬಹುದು ಅಂತ ತಿಳಿದು ನಾನು ಹಾಗೆ ಮಲಗಿಕೊಂಡಿದ್ದು ಇರುತ್ತದೆ ಬೆಳ್ಳಿಗ್ಗೆ 6 ಗಂಟೆಯ ಸುಮಾರಿಗೆ ನಾನು ಎದ್ದು ನೋಡಲು ಟಿವಿ ಹತ್ತಿರ ಚಾರ್ಜಗೆ ಹಚ್ಚಿನ ನನ್ನ ತಂದೆಯವರು ಉಪಯೋಗಿಸುತ್ತಿದ್ದ ಮೊಬೈಲ, ನನ್ನ ತಂಗಿ ಉಪಯೋಗಿಸುತ್ತಿದ್ದ ಮೊಬೈಲ ಮತ್ತು ನನ್ನ ತಮ್ಮನ ಮೊಬೈಲ ಹಾಗೂ ನಮ್ಮ ತಾಯಿ ಮೊಬೈಲಗಳು ಹೀಗೆ ಒಟ್ಟು ನಾಲ್ಕು ಮೊಬೈಲಗಳು ಕಾಣೆಯಾಗಿದ್ದು ಆಗ ಗಾಬರಿಗೊಂಡು ನಾನು ನಮ್ಮ ಮನೆಯವರಿಗೆ ಎಬ್ಬಿಸಿ ವಿಚಾರಿಸಲು ಯಾರು ಕೂಡಾ ಮೊಬೈಲಗಳು ನೋಡಿರುವದಿಲ್ಲ ಅಂತ ನಾನು ಮನೆಯಲ್ಲಿ ನೋಡಲು ನಮ್ಮ ತಂದೆಯವರು ಉಟ್ಟಿಕೊಳ್ಳುತ್ತಿದ್ದ ಬಟ್ಟೆಗಳು ಮತ್ತು ಅವರ ಬಟ್ಟೆಯಲ್ಲಿದ್ದ ನಗದು ಹಣ 23,500/- ರೂಪಾಯಿಗಳು ಹಾಗೂ ನಮ್ಮ ತಾಯಿ ಪರ್ಸನಲ್ಲಿ ಇಟ್ಟಿದ 2 ತೋಲೆ ಬಂಗಾರ ಚೈನ ಅ:ಕಿ: 50,000/- ರೂ ನೇದ್ದು ಮನೆಯಲ್ಲಿ ಕಾಣೆಯಾಗಿದ್ದು ನಂತರ ನಾನು ನಮ್ಮ ಮನೆಯವರು ಎಲ್ಲರು ಹುಡುಕಾಡಿ ನಮ್ಮ ವಸ್ತುಗಳು ಪತ್ತೆಯಾಗಿರುವದಿಲ್ಲ. ದಿನಾಂಕ 02.11.2017 ರಂದು ಬೆಳ್ಳಗಿನ ಜಾವ 3:00 ಗಂಟೆಯಿಂದ 3:30 ಗಂಟೆಯ ಮಧ್ಯದಲ್ಲಿ ಯಾರೊ ಕಳ್ಳರು ನಮ್ಮ ಮನೆಯ ಮಾಳಿಗೆಯಿಂದ ಮನೆಯ ಒಳಗೆ ಪ್ರವೇಶ ಮಾಡಿ ನಮ್ಮ ಮನೆಯಲ್ಲಿ ಇಟ್ಟಿದ 4 ಮೊಬೈಲಗಳು ಅವುಗಳ ಅಂದಾಜ ಕಿಮ್ಮತ್ತು 35,000/- ರೂ ನಗದು ಹಣ 23,500/- ರೂ ಹಾಗೂ 2 ತೋಲೆ ಬಂಗಾದ ಚೈನ ಅ:ಕಿ: 50,000/-ಹೀಗೆ ಒಟ್ಟು 1,08,500/-ರೂ ಕಿಮ್ಮತ್ತಿನ ವಸ್ತುಗಳು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ನರೋಣಾ ಠಾಣೆ : ದಿನಾಂಕ: 07/04/2018 ರಂದು ಕಡಗಂಚಿ ಗ್ರಾಮದ ಸರ್ಕಾರಿ ಶಾಲೆಯ ಮುಂದೆ ಸಾರ್ವಜನೀಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಅಂಕಿಸಂಖ್ಯೆಗಳನ್ನು ಬರೆದುಕೊಡುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ನರೋಣಾ ಹಾಗು ಸಿಬ್ಬಂದಿ ಮತ್ತು ಕಡಗಂಚಿ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಸರ್ಕಾರಿ ಶಾಲೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ ಒಂದು ರೂಪಾಯಿಗೆ 08 ರೂಪಾಯಿ ಗೆಲ್ಲಿರಿ, ಜಾಯಿಂಟ್ ನಂಬರ್ ಬಂದರೆ 01 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ, ಅಂತಾ ಕೂಗುತ್ತಾ ಮಟಕಾ ಅಂಕಿ ಸಂಖೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ  ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ದುಬೇಶ ತಂದೆ ರೇವು ಚವ್ಹಾಣ್ ಸಾ || ಕಡಗಂಚಿತಾಂಡಾ ಗ್ರಾಮ ಅಂತಾ ತಿಳಿಸಿದ್ದು ಸದರಿಯವನಿಗೆ ಅಂಗಶೋಧನ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಸಿದ 1] ಒಂದು ಮಟಕಾ ಅಂಕಿಸಂಖ್ಯೆಯುಳ್ಳ ಚೀಟಿ, 2) ಒಂದು ಬಾಲ ಪೆನ್‌ 3) ನಗದು ಹಣ 560/- ರೂಪಾಯಿಗಳು ವಶಕ್ಕೆ ತಗೆದುಕೊಂಡು ಸದರಿಯವನಿಗೆ ವಶಕ್ಕೆ ತೆಗೆದುಕೊಂಡು  ನರೋಣಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ಅಫಜಲಪೂರ ಠಾಣೆ : ದಿನಾಂಕ 08-04-2018 ರಂದು ಮಾಶಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾಶಾಳ ಗ್ರಾಮಕ್ಕೆ  ಹೋಗಿ, ಮಾಶಾಳ ಗ್ರಾಮದ ಬಸ್ ನಿಲ್ದಾಣದಿಂದ ಸ್ವಲ್ಪ ದೂರ ಮರೆಯಾಗಿ ನಿಂತುಕೊಂಡು ನೋಡಲಾಗಿ, ಸದರಿ ಬಸ್ ನಿಲ್ದಾಣ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ರಟ್ಟಿನ ಬಾಕ್ಸ ಇಟ್ಟುಕೊಂಡು  ಹೋಗಿ ಬರುವ ಜನರಿಗೆ ಸಾರಾಯಿ ಮಾರಾಟ ಮಾಡುತ್ತಿದ್ದನು. ಆಗ ದಾಳಿ ಮಾಡಿ  ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಜೋತಿಬಾ ತಂದೆ ರಾಮ ಕ್ಷತ್ರಿ ಸಾ|| ಮಾಶಾಳ ಗ್ರಾಮ ತಾ|| ಅಫಜಲಪೂರ ಅಂತ ತಿಳಿಸಿದ್ದು . ನಂತರ ಸದರಿಯವನ ವಶದಲ್ಲಿದ್ದ ರಟ್ಟಿನ್ ಬಾಕ್ಸನ್ನು ಚೆಕ್ ಮಾಡಲಾಗಿ, ಸದರಿ ಬಾಕ್ಸದಲ್ಲಿ Original Choice ಕಂಪನಿಯ 90 ML ಅಳತೆಯ ಮದ್ಯ ತುಂಬಿದ 102 ರಟ್ಟಿನ ಪೌಚಗಳು ಅಕಿ- 2869/- ರೂ ಕಿಮ್ಮತ್ತಿನವುಗಳು ಇದ್ದವು.  ಹಾಗೂ ಮದ್ಯ ಮಾರಾಟ ಮಾಡಿದ 410/- ರೂ ನಗದು ಹಣ ದೊರೆತವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು  ಹಾಗೂ ಸಾಗಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ನಂತರ ಸದರಿಯವನ ವಶದಿಂದ 102 Original Choice ಕಂಪನಿಯ 90 ML ಮದ್ಯ ತುಂಬಿದ ರಟ್ಟಿನ ಪೌಚಗಳನ್ನು ಮತ್ತು ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಪೂರ ಠಾಣೆ : ದಿನಾಂಕ 08-04-2018 ರಂದು ಜೇವರ್ಗಿ (ಬಿ) ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನದಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಜೇವರ್ಗಿ(ಬಿ) ಗ್ರಾಮಕ್ಕೆ  ಹೋಗಿ, ಜೇವರ್ಗಿ(ಬಿ) ಗ್ರಾಮದ ಬಸ್ ನಿಲ್ದಾಣದಿಂದ ಸ್ವಲ್ಪ ದೂರ ನಮ್ಮ ವಾಹನವನ್ನು ನಿಲ್ಲಿಸಿ, ನಡೆದುಕೊಂಡು ಹೋಗಿ ಮರೆಯಾಗಿ ನಿಂತುಕೊಂಡು ನೋಡಲಾಗಿ, ಸದರಿ ಬಸ್ ನಿಲ್ದಾಣ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ಒಂದು ರಟ್ಟಿನ ಬಾಕ್ಸ ಇಟ್ಟುಕೊಂಡು  ಹೋಗಿ ಬರುವ ಜನರಿಗೆ ಸಾರಾಯಿ ಮಾರಾಟ ಮಾಡುತ್ತಿದ್ದನು. ಆಗ ನಾವು ಪಂಚರ ಸಮಕ್ಷಮ ದಾಳಿ ಮಾಡಿ  ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಚಂದ್ರಕಾಂತ ತಂದೆ ಬಸಣ್ಣ ಕುಂಬಾರ ಸಾ|| ಜೇವರ್ಗಿ(ಬಿ) ತಾ|| ಅಫಜಲಪೂರ ಅಂತ ತಿಳಿಸಿದನು. ನಂತರ ಸದರಿಯವನ ವಶದಲ್ಲಿದ್ದ ರಟ್ಟಿನ್ ಬಾಕ್ಸನ್ನು ಚೆಕ್ ಮಾಡಲಾಗಿ, ಸದರಿ ಬಾಕ್ಸದಲ್ಲಿ Original Choice ಕಂಪನಿಯ 90 ML ಅಳತೆಯ ಮದ್ಯ ತುಂಬಿದ 96 ರಟ್ಟಿನ ಪೌಚಗಳು ಅಕಿ- 2688/- ರೂ ಕಿಮ್ಮತ್ತಿನವುಗಳು ಇದ್ದವು.  ಹಾಗೂ ಮದ್ಯ ಮಾರಾಟ ಮಾಡಿದ 530/- ರೂ ನಗದು ಹಣ ದೊರೆತವು. ಸದರಿಯವನಿಗೆ ಮದ್ಯ ಮಾರಾಟ ಮಾಡಲು  ಹಾಗೂ ಸಾಗಾಟ ಮಾಡಲು ಅನುಮತಿ ಪಡೆದುಕೊಂಡ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಮಾರಾಟ ಮಾಡಲು ಯಾವುದೆ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿದನು. ನಂತರ ಸದರಿಯವನ ವಶದಿಂದ 96 Original Choice ಕಂಪನಿಯ 90 ML ಮದ್ಯ ತುಂಬಿದ ರಟ್ಟಿನ ಪೌಚಗಳನ್ನು ನಗದು ಹಣ ಮತ್ತು ಸದರಿಯವನನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ  ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮಳಖೇಡ ಠಾಣೆ : ಶ್ರೀ ಸಚಿನ ತಂದೆ ಸತೀಷ ಹೊಸುರ ಸಾ: ಹಂಗನಳ್ಳಿ ಇವರು ದಿನಾಂಕ 07-04-2018 ರಂದು  ಸಾಯಂಕಾಲ ನಮ್ಮ ತಾಯಿಯಾದ ಕವಿತಾ ಇವರು ನನಗೆ ಸ್ಟೇಷನತಾಂಡಾಕ್ಕೆ ಹೋಗಿ ತರಕಾರಿ ಹಾಗು ಇತರೆ ಸಾಮಾನು ತೆಗೆದುಕೊಂಡು ಬಾ ಅಂತಾ ಹೇಳಿದ್ದರಿಂದ ನಾನು ನಮ್ಮೂರಿನ ಒಬ್ಬ ವ್ಯಕ್ತಿಯ ಮೋಟಾರ ಸೈಕಲ ಮೇಲೆ ಕುಳಿತುಕೊಂಡು  ಸ್ಟೇಷನತಾಂಡಾಕ್ಕೆ ಹೋಗಿ ಸಾಮಾನು ಖರೀದಿ ಮಾಡಿಕೊಂಡು 07-45 ಪಿ, ಎಮ್ ಸುಮಾರಿಗೆ ನಡೆದುಕೊಂಡು ಹೋಗುತ್ತಿದ್ದಾಗ ಸ್ಟೇಷನತಾಂಡಾದಿಂದ ಸ್ವಲ್ಪ ದೂರ ಬಂದಾಗ ನನ್ನ ಹಿಂದಿನಿಂದ ಒಂದು ಮೋಟಾರ ಸೈಕಲ ನಮ್ಮೂರ ಕಡೆಗೆ ಬರುತ್ತಿರುವುದನ್ನು ಅದರ ಲೈಟಿನ ಬೆಳಕು ಬಿದ್ದಿದ್ದರಿಂದ ನಾನು ರೋಡ ಪಕ್ಕ ನಿಂತು ಆ ಮೋಟಾರ ಸೈಕಲ ಚಾಲಕನಿಗೆ ಡ್ರಾಪ್ ಕೇಳಲು ಕೈ ಸನ್ನೆ ಮಾಡಿದಾಗ ಸದರಿ ಮೋಟಾರ ಸೈಕಲ ಚಾಲಕ ನಿಲ್ಲಿಸಿದಾಗ ನಾನು ಅವನಿಗೆ ನೋಡಲಾಗಿ ಆತ ನಮ್ಮೂರಿನ ನಮ್ಮ ಪೈಕಿಯವನಾದ ಹಣಮಂತ ತಂದೆ ಗಿರಿಮಲ್ಲಪ್ಪ ಹದಗಲ್ ಇದ್ದನು ನಾನು ಆತನ ಮೋಟಾರ ಸೈಕಲ ಮೇಲೆ ಹಿಂದುಗಡೆ ಕುಳಿತುಕೊಂಡು ಕುಳಿತ್ತಿದ್ದೆನು ನಾವಿಬ್ಬರು ಮೋಟಾರ ಸೈಕಲ ಮೇಲೆ ನಮ್ಮೂರಿನ ಕಡೆಗೆ ಹೋಗುತ್ತಿದ್ದಾಗ ಕೋಳಿ ಫಾರ್ಮ ದಾಟಿ ಹೋಗುತ್ತಿದ್ದಾಗ ಹಣಮಂತ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲ ನಂ;ಕೆಎ-32,ವ್ಹಿ-4886 ನೇದ್ದನ್ನು ರಸ್ತೆಯ ಎಡಭಾಗದಿಂದ ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ 08-00 ಪಿ,ಎಮ್ ಸುಮಾರಿಗೆ ನಮ್ಮ ಎದುರುಗಡೆಯಿಂದ ಒಬ್ಬ ಟ್ರಾಕ್ಟರ ಚಾಲಕ ತನ್ನ ವಶದಲ್ಲಿದ್ದ ಟ್ರಾಕ್ಟರನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದವನೆ ನಮ್ಮ ಮೋಟಾರ ಸೈಕಲಗೆ ಬಲಗಡೆ ಡಿಕ್ಕಿ ಪಡಿಸಿ ಅಫಗಾತ ಪಡಿಸಿದ್ದರಿಂದ ನನಗೆ ಬಲಗಾಲಿನ ತೊಡೆಗೆ ಭಾರಿ ಗಾಯವಾಗಿ ಕಾಲು ಮುರಿದಿದ್ದು  ಹಾಗು ಹೋಗಿ ಬರುವ ವಾಹನಗಳ ಬೆಳಕಿನಲ್ಲಿ ಹಣಮಂತ ಈತನಿಗೆ ನೋಡಲಾಗಿ ಆತನ ಬಲತಲೆಗೆ ಭಾರಿ ರಕ್ತಗಾಯ,ಬಲಗೈ ಭುಜದ ಹತ್ತಿರ ಭಾರಿ ಗಾಯವಾಗಿ ಮುರಿದಿದ್ದು , ಬಲಗಾಲಿನ ಮೊಳಕಾಲಿನ ಹತ್ತಿರ ಮುರಿದಿದ್ದು  ಹಾಗು ಕಿವಿ ಮತ್ತು ಮೂಗಿನಿಂದ ರಕ್ತ ಸ್ರಾವವಾಗಿರುತ್ತದೆ ಆತ ಮಾತಾಡುವ ಸ್ಥಿತಿಯಲ್ಲಿ ಇರಲಿಲ್ಲ ನಂತರ ನಾನು ನಮಗೆ ಅಫಗಾತ ಪಡಿಸಿದ ಟ್ರಾಕ್ಟರ ನೋಡಲಾಗಿ ಕೇವಲ ಇಂಜಿನ ಮಾತ್ರ ಇದ್ದು  ಅದಕ್ಕೆ ಟ್ರಾಲಿ ಇರಲಿಲ್ಲ, ಸದರಿ ಟ್ರಾಕ್ಟರ ಚಾಲಕನಿಗೆ ಹಾಗು ಟ್ರಾಕ್ಟರ ನಂಬರ ನೋಡಲಾಗಿ ಅದರ ನಂಬರ ಮತ್ತು ಚಾಲಕನ ಹೆಸರು ಗೊತ್ತಾಗಿರುವುದಿಲ್ಲ ನೋಡಿದರೆ ಗುರುತಿಸುತ್ತೆನೆ, ಅಪಘಾತ ಪಡಿಸಿದ ಟ್ರಾಕ್ಟರ ಚಾಲಕ ತನ್ನ ಟ್ರಾಕ್ಟರ ಸಮೇತ ಓಡಿ ಹೋಗಿರುತ್ತಾನೆ, ನಂತರ ರಸ್ತೆಯಿಂದ ಹೋಗುವವರು ನಮಗೆ ಸಹಾಯ ಮಾಡಿದ್ದು  ಅವರ ಹೆಸರು ವಿಳಾಸ ಗೊತ್ತಾಗಿಲ್ಲ ಅಫಗಾತದ ವಿಷಯ ಹಣಮಂತನ ತಂಧೆ ಗಿರಿಮಲ್ಲಪ್ಪ ಹಾಗು ಅಣ್ಣ ತಮ್ಮಕಿಯವನಾದ ಶ್ರೀಮಂತ ನಮ್ಮ ಕಾಕಾ ಈಶಪ್ಪ ಇವರು ಬಂದು ನಮಗೆ ಉಪಚಾರ ಕುರಿತು ಸೇಡಂ ಸರಕಾರಿ ಆಸ್ಪತ್ರೆಗೆ ಒಯ್ದು ಸೇರಿಕೆ ಮಾಡಿ ನಂತರ ಹೆಚ್ಚಿನ ಉಪಚಾರ ಕುರಿತು ಸೇಡಂದಿಂದ ಕಲಬುರಗಿಗೆ ಹೋಗುತ್ತಿದ್ದಾಗ ಮಾಡಬೂಳ ಟೋಲ ಗೇಟ ಹತ್ತಿರ ಹಣಮಂತ ಈತನು ಮೃತ ಪಟ್ಟಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.