POLICE BHAVAN KALABURAGI

POLICE BHAVAN KALABURAGI

19 March 2012

Gulbarga Dist Reported Crimes

ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಮದುಸೂಧನ ತಂದೆ ನಾಗಪ್ಪ ಸಾ: ದೇವಾ ನಗರ ಗುಲಬರ್ಗಾರವರು ನಾನು ದಿನಾಂಕ 17.03.2012 ರಂದು ರಾತ್ರಿ ದ್ವಿ ಚಕ್ರ ವಾಹನ ನಂ ಕೆ ಎ 39 ಇ 100 ಹೀರೊ ಹೊಂಡಾ ಸಿಡಿ 100 ಅಕಿ 15,000/- ರೂ ನೇದ್ದನ್ನು ನಿಲ್ಲಿಸಿದ ಬೇಳಿಗ್ಗೆ ಎದ್ದು ನೋಡಲು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ದ್ವಿ-ಚಕ್ರ ವಾಹನ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ 32/12 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಾರಣಾಂತಿಕ ಹಲ್ಲೆ ಪ್ರಕರಣ:
ರೇವೂರ ಪೊಲೀಸ್ ಠಾಣೆ:
ಶ್ರೀ ಸಿದ್ದರಾಮ ತಂದೆ ಭೀಮಶ್ಯಾ ಬಿಲ್ಕರ ಸಾ ನೀಲೂರ ಗ್ರಾಮ ರವರು ನನ್ನ ತಮ್ಮನಾದ ಕೃಷ್ಣಾ ಇತನಿಗೆ ದಿನಾಂಕ:18-03-2012 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಹಳೆಯ ವೈಷ್ಯಮದಿಂದ ಪ್ರಭುರಾವ ತಂದೆ ಪರಶುರಾಮ ತೋಳೆ ಸಂಗಡ 18 ಜನರು ಮತ್ತು ಗುಲಬರ್ಗಾ ಹೀರಾಪೂರ ಏರಿಯಾದ 2-3 ಜನರು ಗಂಭೀರವಾಗಿ ಹೊಡೆ ಬಡೆ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 30/2012 ಕಲಂ 143,147, 148, 341, 323, 324, 504, 506, 307 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ :
ಶ್ರೀ. ಬೇನಕಪ್ಪ ತಂದೆ ಅಣ್ಣಪ್ಪ ಸೂಸೈಟಿ ಸಾ: ಸರಸಂಬಾ ರವರು ನಾನು ದಿನಾಂಕ 17/03/2012 ರಂದು ರಾತ್ರಿ ನಮ್ಮ ಅಣ್ಣ ತಮ್ಮಕಿಯವರಾದ ಸಿದ್ದಲಿಂಗಪ್ಪ ತಂದೆ ರೇವಪ್ಪ ಸೂಸೈಟಿ ಮತ್ತು ಸಂಜುಕುಮಾರ ತಂದೆ ಸಿದ್ದಲಿಂಗಪ್ಪ ಸೂಸೈಟಿ ಹಾಗೂ ರಾಜಕುಮಾರ ತಂದೆ ಸಿದ್ದಲಿಂಗಪ್ಪ ಸೂಸೈಟಿ ಸಾ: ಎಲ್ಲರೂ ಸರಸಂಬಾ ಗ್ರಾಮದವರು ಇವರು ನಮ್ಮ ಮನೆಯಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ ಹೊಲದ ಬಾಂದಾರಿಯ ವಿಷಯದ ಸಂಬಂದವಾಗಿ ತಕರಾರು ಮಾಡಿ ನನಗೆ ಮತ್ತು ನನ್ನ ಹೆಂಡತಿ ಪಾರ್ವತಿಗೂ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದಠಾಣೆ ಗುನ್ನೆ ನಂ: 8/2012 ಕಲಂ 323, 448, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮುದೋಳ ಠಾಣೆ:
ನರಸಿಂಹಲು ತಂದೆ ನರಸಪ್ಪಾ ಮಡಿವಾಳ ಸಾ ಪಾಕಾಲ ಗ್ರಾಮ ಈತನು ಮೇದಕ ಬಸ್ಟಾಂಡ ಎದುರುಗಡೆ ಕೋಡಂಗಲ ಯಾದಗಿರಿ ರಸ್ತೆಯಲ್ಲಿ ನಿಲ್ಲಿಸಿದ ಟ್ರಾಕ್ಟರ ನಂ. ಎಪಿ-07 ವೈ-2173/ಎಪಿ-29 ಜಿ 8950 ನೇದ್ದರಿಂದ ಇಳಿದು ಮೂತ್ರ ವಿಸರ್ಜನೆ ಮಾಡಲು ರಸ್ತೆ ದಾಟುವ ಕಾಲಕ್ಕೆ ಯಾನಾಗುಂದಿ ಕಡೆಯಿಂದ ಹೊರಟಿದ್ದ ಬುಲೆರೋ ನಂಬರ. ಎಪಿ-22-ಎಎ 8900 ನೇದ್ದರ ಚಾಲಕನಾದ ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸುತ್ತಾ ಬಂದು ರಸ್ತೆ ದಾಟುತ್ತಿದ್ದ ನರಸಿಂಹಲು ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದು ಈ ಅಪಘಾತದಲ್ಲಿ ನರಸಿಂಹಲುಗೆ ಭಾರಿಗಾಯವಾಗಿ ಕೋಡಂಗಲ ಸರಕಾರಿ ಆಸ್ಪತ್ರೆಯಲ್ಲಿ ಉಪಚರಿಸುತ್ತಿರುವಾಗ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ ದೊಡ್ಡ ಸಾಯಪ್ಪಾ ತಂದೆ ಕಾಶಪ್ಪಾ ಮಡಿವಾಳ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 27/2012 ಕಲಂ: 279,304 (ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.