POLICE BHAVAN KALABURAGI

POLICE BHAVAN KALABURAGI

25 June 2014

Gulbarga District Reported Crimes

ಅತ್ಯಾಚಾರ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ನಿತೀನ ತಂದೆ ಮಾರುತಿ ವಾಳವೇಕರ ಸಾ ; ಉಪ್ಪಾರ ಹಟ್ಟಿ ತಾ : ಅಫಜಲಪೂರ ರವರ ಅಣ್ಣನಾದ ಬೀರಣ್ಣನು ಸುಮಾರು  04 ವರ್ಷಗಳ ಹಿಂದೆ ಮೃತ ಪಟ್ಟಿರುತ್ತಾನೆ. ಅವರಿಗೆ 4 ಜನ  ಮಕ್ಕಳು ಇರುತ್ತಾರೆ. ನಮ್ಮ ಅಣ್ಣನ 03 ಜನ ಮಕ್ಕಳು  ನಮ್ಮೊಂದಿಗೆ ವಾಸವಾಗಿರುತ್ತಾರೆ. ಸದರಿ ಮನಿಶಾಳ ವಯಸ್ಸು 16 ವರ್ಷ ಇರುತ್ತವೆ. ನಮ್ಮ ಅಣ್ಣನ ಕೊನೆಯ ಮಗಳು  ಮತ್ತು ನಮ್ಮ ಅತ್ತಿಗೆ ಅಂಬವ್ವಾ ಇವರು ಪ್ರತ್ಯೇಕ ಮನೆಯಲ್ಲಿ ವಾಸವಾಗಿರುತ್ತಾರೆ. ಊರಲ್ಲಿ ಒಂದು ಮತ್ತು ಹೊಲದಲ್ಲಿ ಒಂದು ಹೀಗೆ ನಮ್ಮ ಎರಡು ಮನೆಗಳು ಇರುತ್ತವೆ. ಹೊಲದ ಕೆಲಸ ಇದ್ದಾಗ ನಾವು ಹೊಲದ ಮನೆಯಲ್ಲಿ ಇರುತ್ತೇವೆಹೊಲದ ಕೆಲಸ ಇಲ್ಲದಿದ್ದಾಗ ಊರಲ್ಲಿನ ಮನೆಯಲ್ಲಿ ಇರುತ್ತೇವೆ. ಕಳೆದ 4-5 ದಿವಸಗಳಿಂದ ನಮ್ಮ ಹೊಲದಲ್ಲಿ ಕೆಲಸ ನಡೆದಿದ್ದರಿಂದ ನಾನು ಮತ್ತು ನನ್ನ ಹೆಂಡತಿ ಮಕ್ಕಳು ಎಲ್ಲರು ನಮ್ಮ ಹೊಲದಲ್ಲಿನ ಮನೆಯಲ್ಲಿ ಉಳಿದುಕೊಂಡು ಈ ದಿವಸ ಬೆಳಿಗ್ಗೆ ಊರಲ್ಲಿನ ಮನೆಗೆ ಬಂದಿರುತ್ತೇವೆ. ಇಂದು ದಿನಾಂಕ 25-06-2014 ರಂದು ಬೆಳಿಗ್ಗೆ 08;00 ಗಂಟೆ ಸುಮಾರಿಗೆ ನಮ್ಮ ಅಣ್ಣನ ಮಗಳಾದ ಕುಮಾರಿ ಇವಳು ಮನೆಯಲ್ಲಿ ಅಳುತ್ತಾ ಕುಳತಿದ್ದಳು. ಆಗ ನಾನು ಅವಳನ್ನು ವಿಚಾರಿಸಿದಾಗ ಅವಳು ಅಳುತ್ತಾ ತಿಳಿಸಿದ್ದೇನೆಂದರೆದಿನಾಂಕ 21-06-2014 ರಂದು ರಾತ್ರಿ 8;00 ಗಂಟೆಯ ಸುಮಾರಿಗೆ ಮನೆಯಲ್ಲಿ ನಾನೊಬ್ಬಳೆ ಇದ್ದು ನಮ್ಮ ಅಜ್ಜಿ ಪಕ್ಕದವರ ಮನೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋಗಿರುತ್ತಾಳೆ. ನಮ್ಮ ಅಜ್ಜಿ ಹೊರಗಡೆ ಹೋಗುವದನ್ನು ನೋಡಿ ಮತ್ತು ಮನೆಯಲ್ಲಿ ಒಬ್ಬಳೆ ಇರುವುದನ್ನು ತಿಳಿದುಕೊಂಡು ನಮ್ಮ ಓಣಿಯ ನಿತೀನ ತಂದೆ ಮಾರುತಿ ವಾಳವೇಕರ ಎಂಬಾತನು ನಮ್ಮ ಮನೆಯಲ್ಲಿ ಬಂದು ಒಮ್ಮೇಲೆ ಬಾಗಿಲು ಮುಚ್ಚಿದನು. ಆಗ ನಾನು ಆತನಿಗೆ ನಮ್ಮ ನೆಯಲ್ಲಿ ಬಂದು ಬಾಗಿಲು ಏಕೆ ಮುಚ್ಚಿದಿ  ಅಂತಾ ಕೇಳಿದಾಗ ಅವನು ಕೂಗಾಡಿದರೆ ನೋಡು ನಿನ್ನ ಕುತ್ತಿಗೆ ಒತ್ತಿ ಸಾಯಿಸುತ್ತೇನೆ ಅಂತಾ ಭಯ ಹಾಕಿ ತನ್ನ ಪ್ಯಾಂಟನ್ನು ಬಿಚ್ಚಿ ನನ್ನನ್ನು ತಬ್ಬಿಕೊಂಡು ನೆಲದ ಮೇಲೆ ಹಾಕಿದನು, ನಾನು ಎಷ್ಟು ವಿರೋಧ ವ್ಯಕ್ತ ಪಡಿಸಿದರೂ ಸಹ ಅವನು ನನಗೆ ಒತ್ತಾಯಪೂರಕವಾಗಿ ಜಬರಿ ಸಂಭೋಗ ಮಾಡಿ ಲೈಂಗಿಕ ದೌರ್ಜನ್ಯ ವೆಸಗಿರುತ್ತಾನೆ. ನಂತರ ಅವನು ತನ್ನ ಪ್ಯಾಂಟ ಹಾಕಿಕೊಂಡು ಬಾಗಿಲ ತೆಗೆದು ಹೋಗುವಷ್ಟರಲ್ಲಿ ಹೊರಗಡೆ ಹೋಗಿದ್ದ ನಮ್ಮ ಅಜ್ಜಿ ಪಾರ್ವತಿ ಬರುತ್ತಿರುವುದನ್ನು ನೋಡಿ ನಿತಿನ ವಾಳವೆಕರ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಶಂಕರ ತಂದೆ ಮಾಧು ರಾಠೋಡ, ಸಾ|| ಮಾಡಿಯಾಳ ತಾಂಡಾ ದಿನಾಂಕ 24-06-2014 ರಂದು ರಾತ್ರಿ 12 ಗಂಟೆಯಿಂದ ದಿನಾಂಕ 25-06-2014 ರಂದು 5 ಗಂಟೆಯ ಮಧ್ಯದ ಅವಧಿಯಲ್ಲಿ ಫಿರ್ಯಾದಿಯು ಹಾಗೂ ಆತನ ಮನೆಯವರು ಮನೆಯ ಕೀಲಿ ಹಾಕಿ ಮನೆಯ ಮುಂದಿನ ಅಂಗಳದಲ್ಲಿ ಮಲಗಿಕೊಂಡಾಗ ತನ್ನ ಮನೆಯ ಹಿಂದಿನ ಖೋಲಿಯ ಫತ್ರಾ ಎತ್ತಿ ಯಾರೋ ಕಳ್ಳರು ಮನೆಯಲ್ಲಿ ಇಳಿದು ಮನೆಯಲ್ಲಿದ್ದ ಟೀಜೂರಿ ಒಡೆದು ಅದರಲ್ಲಿಟ್ಟಿದ್ದ ನಗದು ಹಣ, ಬಂಘಾರದ ಆಭರಣ ಹೀಗೆ ಒಟ್ಟು 2,13,000/- ರೂಪಾಯಿ ಮೌಲ್ಯದ ಹಣ ಮತ್ತು ಬಂಗಾರದ ಸಾಮಾನುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Gulbarga District Reported Crimes

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ: 24-06-2014  ರಂದು  1-45 ಪಿಎಮ್ ಸುಮಾರಿಗೆ ಮೃತ ವಾಜಿದ ಇತನು ತನ್ನ ಮೋಟಾರ್ ಸೈಕಲ್ ನಂ ಕೆಎ-34 ಎಸ್-7043ನೇದ್ದು ಆಳಂದ ಚೆಕ್ ಪೊಸ್ಟ್ ಕಡೆಯಿಂದ ಬಂದು ಆಟೋ ನಗರಕ್ಕೆ ಹೋಗುವ ಸಂಬಂಧ ರೋಡ ಕ್ರಾಸ್ ಮಾಡುವ ಕುರಿತು ಉಮಾಕಾಂತ ಅಮ್ಮಾನ ಇವರ ಮನೆಯ ಹತ್ತಿರ ರೋಡಿನ ಎಡಗಡೆ ಡಿವೈಡರ್ ಹತ್ತಿರ ನಿಂತಾಗ ಎದುರುಗಡೆಯಿಂದ ಹುಮನಾಬಾದ ರಿಂಗರೋಡ ಕಡೆಯಿಂದ ಆಳಂದ ಚೆಕ್ ಪೊಸ್ಟ್  ಕಡೆಗೆ ಕಮಾಂಡರ್ ಜೀಪ ನಂ ಕೆಎ-32 ಎಮ್ 2014 ನೇದ್ದರ ಚಾಲಕನು ತನ್ನ ಜೀಪನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ವಾಜೀದ ಈತನ ಮೋಟಾರ ಸೈಕಲಗೆ ಡಿಕ್ಕಿಹೋಡೆದು ಅಪಘಾತ ಪಡಿಸಿದ್ದರಿಂದ ಹಣೆಗೆ, ಬಲಗೈ ಮೋಳಕೈಗೆ ಹಾಗೂ ಬಲಗಾಲಿಗೆ ಭಾರಿ ರಕ್ತಗಾಯ ಹಾಗೂ ತಲೆಗೆ ಎದೆಗೆ ಹೊಟ್ಟೆಗೆ ಭಾರಿ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ²æà ಸಾಜೀದ್ ತಂದೆ ಅಲ್ಲಾಭಕ್ಷ ಅಬ್ದುಲ್ ಹೋಟೆಲ್ ವಾಲೆ  ಸಾ: ಎಮ್.ಎಸ್,ಕೆ ಮಿಲ್ ಜಿಲಾನಾಬಾದ ಶಹಾ ಜೀಲಾನಿ ದರ್ಗಾ ಹತ್ತಿರ ಗುಲ್ಬರ್ಗಾ  ರವರು ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀ ರೇವಣಸಿದ್ದಪ್ಪಾ ತಂದೆ ರೋಮಣ್ಣಾ ಪಾಟೀಲ ಗಿಲಕಿ ಸಾ ; ಜಂಬಗಾ (ಬಿ) ತಾ;ಜಿ;ಗುಲಬರ್ಗಾ. ಇವರು ದಿನಾಂಕ. 23-06-2014 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ನಮ್ಮ ಆಳು ಮನುಷ್ಯನಾದ ಸಿದ್ರಾಮಪ್ಪಾ ಸಾವಳಗಿ ಇತನು ನಾವು ಪಾಲಿಗೆ ಮಾಡಿದ ಯಶ್ವಂತರಾವ ಕಾಳೆ ಇವರ ತೋಟದಲ್ಲಿ ನಮ್ಮ  ಎರಡು ಖಿಲಾರಿ ಎತ್ತುಗಳು ಅಕಿ.1,25,000/- ರೂಪಾಯಿ ಬೆಲೆಬಾಳುವವು ಕಟ್ಟಿ ಊರಲ್ಲಿ ಲಕ್ಷ್ಮೀ ಜಾತ್ರೆ ಇದ್ದ ಪ್ರಯುಕ್ತ ಎಲ್ಲರೂ ಊರಲ್ಲಿ ಇದ್ದೇವು ಇಂದು ದಿನಾಂಕ. 24-06-2014 ರಂದು ಬೆಳಗ್ಗೆ ನಾನು ಮತ್ತು ಸಿದ್ರಾಮಪ್ಪಾ ಸಾವಳಗಿ ಇಬ್ಬರು ಕೂಡಿಕೊಂಡು ತೋಟಕ್ಕೆ ಹೋಗಿ ನೋಡಲಾಗಿ ದಾವಣಿಗೆ ಕಟ್ಟಿದ್ದ ನಮ್ಮ ಎರಡು ಎತ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಗ್ರಾಮೀಣ ಠಾಣೆ : ಶ್ರೀ ಶಿವಶರಣಪ್ಪ ತಂದೆ ಭಗವಂತ್ರಾವ ಬಿರಾದಾರ ಮ್ಯಾನೇಜರ್ ಪಿ.ಎಲ್‌.ಡಿ ಬ್ಯಾಂಕ್‌ ಚಿತಾಪೂರ ಸಾ: ಗುಡುರು ತಾ: ಅಫಜಲಪೂರ ಹಾವ: ಪ್ಲಾಟ್‌ ನಂಬರ್‌ 22, ಶರಣ ನಿವಾಸ ರಾಮತೀರ್ಥ ನಗರ ಆಳಂದ ರೋಡ ಗುಲಬರ್ಗಾ ಇವರ ಮೊಮ್ಮಗ ಕು.ಬಿಪಿನ್‌ ತಂದೆ ವೀರ್‌ಕುಮಾರ್‌‌ ಈತನಿಗೆ ಆರಾಮ ಇಲ್ಲದ ಕಾರಣ ನೋಡಿಕೊಂಡು ಬರಲು ದಿನಾಂಕ: 21/06/2014 ರಂದು ಬೆಂಗಳೂರಿಗೆ ಹೋಗಿದ್ದು ಹೋಗುವಾಗ ಮನೆಯಲ್ಲಿ ಯಾರೂ ಇಲ್ಲದ ಕಾರಣ ಬೀಗ ಹಾಕಿಕೊಂಡು ಹೋಗಿದ್ದು ನಿನ್ನೆ ದಿನಾಂಕ: 23/06/2014 ರಂದು ಮುಂಜಾನೆ 8-00 ಗಂಟೆಗೆ ಸುಮಾರಿಗೆ ತನ್ನ ಸಡ್ಡಕನಾದ ಶ್ರೀ ಕಲ್ಯಾಣ ರಾವ್ ಬುರಡೆ ನಿವೃತ್ತ ಪಿ.ಎಸ್‌.ಐ ರವರು ಮೋಬೈಲ್‌ ಗೆ ಪೋನ್‌ ಮಾಡಿ ಯಾರೋ ಕಳ್ಳರು ಮನೆ ಕಳವು ಮಾಡಿರುತ್ತಾರೆ ಅಂತಾ ತಿಳಿಸಿದ ತಕ್ಷಣ ಬೆಂಗಳೂರಿನಿಂದ ಇಂದು ಗುಲಬರ್ಗಾಕ್ಕೆ ಬಂದು ನೋಡಲಾಗಿ ಯಾರೋ ಕಳ್ಳರು ಮನೆಗೆ ಹಾಕಿದ ಬೀಗವನ್ನು ಮುರಿದು ಇಂಟರ್ ಲಾಕ್‌ ಮಣಿಸಿ ಮನೆಯಲ್ಲಿ ಪ್ರವೇಶ ಮಾಡಿ ಮನೆಯಲ್ಲಿದ್ದ ಬಂಗಾರದ ಆಭರಣಗಳೂ, ಬೆಳ್ಳಿಯ ಸಾಮಾನುಳು ಮತ್ತು ನಗದು ಹಣ ಸೇರಿದಂತೆ ಒಟ್ಟು 4,81,500/- ರೂ ಬೆಲೆ ಬಾಳುವುದನ್ನು ಕಳವು ಮಾಢಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಮರಣ ಪ್ರಕರಣ :
ಅಫಜಲಪೂರ ಠಾಣೆ : ಶ್ರೀಮತಿ ವಿಠಾಬಾಯಿ ಗಂಡ ಚಂದಪ್ಪ ತಳವಾರ ಸಾ : ದೇವಣಗಾಂವ ತಾ : ಸಿಂದಗಿ ರವರ  ಗಂಡ ಈಗ ಸುಮಾರು 25 ವರ್ಷದಿಂದ ಕುಷ್ಟರೋಗದಿಂದ ಬಳಲುತ್ತಿದ್ದನು. ಮೊಂಚೆ ನನ್ನೊಂದಿಗೆ ನನ್ನ ತವರೂರಾದ ದೇವಣಗಾಂವ ಗ್ರಾಮದಲ್ಲಿ ವಾಸವಿದ್ದು, ಈಗ ಸುಮಾರು 6 ವರ್ಷದಿಂದ ಆಸ್ಪತ್ರೆ ಸೌಲಭ್ಯದ ಸಲುವಾಗಿ ಅಫಜಲಪೂರದಲ್ಲಿ ಒಂದು ಜೋಪಡಿ ಹಾಕಿಕೊಂಡು ಒಬ್ಬರೆ ವಾಸವಾಗಿರುತ್ತಾರೆ. ನಮಗೆ ಯಾರು ಮಕ್ಕಳು ಇರುವುದಿಲ್ಲ. ನಾನು ವಾರಕ್ಕೊಮ್ಮೆ ಅಫಜಲಪೂರ ಪಟ್ಟಣ್ಣಕ್ಕೆ ಬಂದು ಅವರ ಯೋಗಕ್ಷೇಮ ನೋಡಿಕೊಂಡು ಹೋಗುತ್ತಿರುತ್ತೇನೆ.  ದಿನಾಂಕ  24-06-2014 ರಂದು 6 ಪಿ.ಎಂ ಸುಮಾರಿಗೆ ಅಫಜಲಪೂರ ಪಟ್ಟಣದಿಂದ ಯಾರೋ ಒಬ್ಬರು ನನ್ನ ತಮ್ಮನಾದ ಲವಪ್ಪ ತಂದೆ ರಾಮಣ್ಣ ಕಲಬಾ ರವರಿಗೆ ಪೋನ ಮಾಡಿ ಕುಷ್ಟರೋಗದಿಂದ ಬಳಲುತ್ತಿದ್ದ ನಿಮ್ಮ ಮಾವ ಮೃತ ಪಟ್ಟಿರುತ್ತಾರೆ ಅಂತಾ ಹೇಳಿದರು, ಆಗ ನಾನು ಮತ್ತು ನಮ್ಮ ತಮ್ಮ ಹಾಗು ನನ್ನ ತಂಗಿ ಮಗ ವಿಠ್ಠಲ ತಂದೆ ಶಂಕರ ಯರಗಲ್ ರವರು ಕೂಡಿಕೊಂಡು ಒಂದು ಖಾಸಗಿ ವಾಹನದೊಂದಿಗೆ ಅಫಜಲಪೂರ ಪಟ್ಣಕ್ಕೆ ಬಂದು ನನ್ನ ಗಂಡ ಇದ್ದ ಜೋಪಡಿಗೆ ಹೋಗಿ ನೋಡಲು ನನ್ನ ಗಂಡ ಮೃತ ಪಟ್ಟು ಬಿದ್ದಿದನು. ನನ್ನ ಗಂಡ ಸುಮಾರು 25 ವರ್ಷದಿಂದ ಕುಷ್ಟರೋಗದಿಂದ ಬಳಲುತ್ತಿದ್ದರಿಂದ ಸದರಿ ರೋಗದ ಭಾದೆಯಿಂದಲೆ ನನ್ನ ಗಂಡ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.