POLICE BHAVAN KALABURAGI

POLICE BHAVAN KALABURAGI

16 February 2015

Kalaburagi District Reported Crimes

ಕೊಲೆ ಪ್ರಕರಣ :
ಗ್ರಾಮೀಣ ಠಾಣೆ : ದಿನಾಂಕ:-15/02/15 ರಂದು ರಾತ್ರಿ 11:30 ಗಂಟೆ ಸುಮಾರಿಗೆ ತನ್ನ ಗಂಡ ವಿಜಯಕುಮಾರ ಇತನು ತನ್ನ ಕೆಲಸ ಮುಗಿಸಿಕೊಂಡು ಮನೆಯ ಕಡೆಗೆ ಬರುತ್ತಿದ್ದಾಗ ಅಂಬಿಕಾ ವೈನ ಶಾಪ ಹಿಂದುಗಡೆ ನಮ್ಮ ಮನೆಯ ಪಕ್ಕದ ಲಕ್ಷ್ಮಣ ತಂದೆ ಗುಂಡಪ್ಪ ಇತನು ಮನೆಗೆ ಹೋಗೋಣಾ ನಡೆ ಅಂತಾ ಕರೆದಾಗ ಬರುದಿಲ್ಲಾ ಅಂತಾ ತನ್ನ ಹತ್ತಿರ ಇದ್ದ ಬಿದಿರನ ಬಡಿಗೆಯಿಂದ ಲಕ್ಷ್ಮಣನಿಗೆ ಹೊಡೆದಿದ್ದು ಲಕ್ಷ್ಮಣ ಇತನು ಅದೇ ಬಿದಿರನ ಬಡಿಗೆಯಿಂದ ವಿಜಯಕುಮಾರನ ತಲೆಯ ಮೇಲೆ 4-5 ಏಟು ಹೊಡೆದು ಕೊಲೆ ಮಾಡಿರುತ್ತಾನೆ ಆಂತಾ ಶ್ರೀಮತಿ ಸಂಪತ್ತಬಾಯಿ ಗಂಡ ವಿಜಯಕುಮಾರ ಕಣ್ಣೂರ ಸಾ:ಭೂಸಣಗಿ ತಾ:ಜಿ:ಕಲಬುರಗಿ ಹಾ:ವ:ಕೆ ಕೆ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ನಿಂಬರ್ಗಾ ಠಾಣೆ : ದಿನಾಂಕ 10-02-2015 ರಂದು ಬೆಳಿಗ್ಗೆ ನನ್ನ ಮಗಳಾದ ಅನುಸುಬಾಯಿ ತಂದೆ ತೇಜಪ್ಪ ಜಾನೆ ವಯ: 19 ವರ್ಷ ಉ: ವಿಧ್ಯಾರ್ಥಿ ಇವಳು ಆಳಂದಿನ  ಬಿ.ಆರ್ ಪಾಟೀಲ  ಡಿ.ಎಡ್ ಕಾಲೇಜಿಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದವಳು ಮನೆಗೆ ಮರಳಿ ಬರದೇ ಇದ್ದುದ್ದರಿಂದ ಕಾಲೇಜಿಗೆ ಹೋಗಿ ವಿಚಾರಿಸಲಾಗಿ ಸದರಿಯವಳು ಕಾಲೇಜಿಗೆ ಬಂದಿಲ್ಲ ಅಂತಾ ತಿಳಿದು ಬಂದಿದ್ದು ದಿನಾಂಕ 15-02-2015 ರಂದು ಶ್ರೀಮತಿ ಸಕ್ಕುಬಾಯಿ ಗಂಡ ಭೀಮಾಶಂಕರ ಸಿಂಗೇ ಇವಳನ್ನು ವಿಚಾರಿಸಿದಾಗಿ ಅವಳು ತಿಳಿಸಿದ್ದೇನೆಂದರೆ ನಿನ್ನ ಮಗಳಾದ ಅನುಸುಬಾಯಿ ನನ್ನ ಮಗನಾದ ಕಾಶಪ್ಪ ತಂದೆ ಭೀಮಾಶಂಕರ ಸಿಂಗೇ ಇವನು ಕಿಡ್ನಾಪ್ ಮಾಡಿಕೊಂಡು ಪುನಾಕ್ಕೆ ಹೋಗಿದ್ದಾನೆ ಇವನ ಸಂಗಡ ಬುದ್ದಪ್ಪ ತಂದೆ ಬಾಬುರಯ ಸಿಂಗೇ, ಸಂತೋಷ ತಂದೆ ದತ್ತಪ್ಪ ಸಿಂಗೇ, ಭೀಮಾಶಂಕರ ತಂದೆ ಹಣಮಂತ ಸಿಂಗೇ, ಇವರೆಲ್ಲರೂ ಇದ್ದಾರೆ ಎಲ್ಲರೂ ಈಗ ಪುನಾದ ಕೋತರೋಡ್ ಎನ್ನುವ ಏರಿಯಾದಲ್ಲಿ ಇದ್ದಾರೆ ಅಂತಾ ತಿಳಿಸಿರುತ್ತಾಳೆ ಅಂತಾ ಶ್ರೀಮತಿ ಮಾಪುರಬಾಯಿ ಗಂಡ  ತೇಜಪ್ಪ ಜಾನೆ ಸಾ: ಭಟ್ಟರಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಕ್ಷಣೆ ಕಿರುಕಳ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀಮತಿ ಶಾಹೀನ್‌ ಗಂಡ ಸುಲ್ತಾನ ಪಟೇಲ  ಕಡಮೊಡ ವ: 22 ವರ್ಷ, ಜಾತಿ: ಮುಸ್ಲೀಂ, ಉ: ಮನೆ ಕೆಲಸ ಸಾ: ಮಾಡ್ಯಾಳ ಹಾ: ವ: ಕವಲಗಾ ( ಕೆ ) ಇವರು ಠಾಣೆಗೆ ಬಂದು ಫಿರ್ಯಾದಿ ಸಲ್ಲಿಸಿದೇನೆಂದೆರೆ, ದಿನಾಂಕ: 21/04/2014 ರಂದು ಸುಲ್ತಾನ ಪಟೇಲನೊಂದಿಗೆ ಮದುವೆಯಾಗಿದ್ದು ಮದುವೆಯಲ್ಲಿ  ನನಗೆ ಒಂದುವರೆ ತೊಲೆ ಬಂಗಾರ ಮತ್ತು ನನ್ನ ಗಂಡನಿಗೆ ಒಂದುವರೆ ತೊಲೆ ಬಂಗಾರ ಮತ್ತು 25,000 /- ರೂ  ಹುಂಡಾ ವರದಕ್ಷಣೆ ನೀಡಿದ್ದು ಇದಾದ 2-3 ತಿಂಗಳವರೆಗೆ ನನ್ನ ಜೊತೆ ಸರಿಯಾಗಿ ಇದ್ದು ನಂತರ ನಿನ್ನ ತವರು ಮನೆಯಿಂದ ಇನ್ನೂ ಹಣ ಮತ್ತು ಬಂಗಾರ ತೆಗೆದುಕೊಂಡು ಬಾ ಅಂತಾ  ಗಂಡನಾದ 1)  ಸುಲ್ತಾನ ತಂದೆ ಮಹಿಬೂಬಸಾಬ  ಕಡಮೊಡ  ಅತ್ತೆಯಾದ 2) ನೂರಜಾ ತಂದೆ ಮಹಿಬೂಬಸಾಬ  ಕಡಮೊಡ .  ಮಾವನಾದ 3)  ಮಹಿಬೂಬ ತಂದೆ ಗೈಹಿಬೂಸಾಬ ಕಡಮೊಡ. ಗಂಡನ ಮುತ್ಯಾ 4) ಗೈಬೂಸಾಬ ಕಡಮೊಡ  ಅಜ್ಜಿಯಾದ 5) ಬೇಗುಂ ಗಂಡ ಗೈಬೂಸಾಬ  ಮೈದುನರಾದ  6) ಸದ್ದಾಂ ತಂದೆ ಮಹಿಬೂಬಸಾಬ 7)  ಮೌಲಾ ತಂದೆ ಮಹಿಬೂಬಸಾಬ ಕಡಮೊಡ ಇವರೆಲ್ಲರೂ ಸೇರಿ  ನನಗೆ ದೈಹಿಕ ಮತ್ತು ಮಾನಸಿಕ ಹಾಗೂ ವರದಕ್ಷಣೆ ತರುವಂತೆ  ಕಿರಕುಳ ನೀಡಿ  ದಿನಾಂಕ: 21/11/2014 ರಂದು 15.00 ಗಂಟೆಗೆ ನನಗೆ ಎಲ್ಲರೂ ಸೇರಿ  ಕೊಡಲಿ, ಬಡಿಗೆ, ಕಬ್ಬಿಣದ ರಾಡುಗಳಿಂದ ಹಲ್ಲೆ ಮಾಡಿ ಜೀವ ಭಯ ಪಡೆಯಿಸಿ ಮನೆಯಿಂದ ಹೊರಗೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ : 15/02/2015 ರಂದು ಸಂಜೆ ನನ್ನ ಅಣ್ಣ ಅಬ್ದುಲ ಸತ್ತಾರ ಈತನು ತನ್ನ ಮೋ.ಸೈ ಬಜಾಜ ಡಿಸ್ಕವರಿ ನಂಕೆಎ-32-ಇಜಿ-3893 ನೇದ್ದನ್ನು ಹರಸೂರದಿಂದ ಕಲಬುರಗಿ ಕಡೆಗೆ ಬರುತ್ತಿರುವಾಗ ಕಲಬುರಗಿಯ ಆಳಂದ ಚೆಕ್ ಪೋಸ್ಟಕ್ಕಿಂತ ಮುಂಚಿತ ರಿಂಗ ರೋಡ ಮೇಲೆ ವೇಗವಾಗಿ & ನಿಸ್ಕಾಳಜಿತನದಿಂದ ನಡೆಸಿಕೊಂಡು ಹೋಗುತ್ತಿರುವಾಗ ಆಯಾ ತಪ್ಪಿ ರೋಡಿನ ತಗ್ಗಿಯಲ್ಲಿ ಬಿದ್ದಿದ್ದರಿಂದ ಅವನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿ ಮೂಗಿನಿಂದ ಎರಡು ಕಿವಿಯಿಂದ ರಕ್ತಸ್ರಾವವಾಗುತ್ತಿದ್ದಾಗ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು , ನಂತರ ಹೆಚ್ಚಿನ ಉಪಚಾರ ಕುರಿತು ಕಲಬುರಗಿಯ ಸತ್ಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು, ಆತನ ತಲೆಗೆ ಆದ ಭಾರಿ ಗಾಯದಿಂದ ಗುಣಮುಖನಾಗದೆ ಇಂದು ದಿನಾಂಕ 16/02/2015 ರಂದು ಬೆಳಗಿನ ಜಾವ ಮೃತ ಪಟ್ಟಿರುತ್ತಾನೆ ಅಂತಾ ಕಾರಣ ಮುಂದಿನ ಕ್ರಮ ಜರುಗಿಸಬೇಕು ಅಂತಾ ಶ್ರೀ ಮಹ್ಮದ ಮಸ್ತಾನ ತಂದೆ ಅಮೀರ ಅಲಿ ಬಾಂಬೆ ಟೇಲರ್ ಸಾ|| ಮಿಸ್ಬ್ಹಾನಗರ ಕಾಲೋನಿ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಹಸಮತ ಬಿ ಗಂಡ ಅಲ್ಲಾವುದ್ದಿನ ಮುಲ್ಲಾಗೊಳ ಸಾ: ಮರತೂರ ತಾ: ಚಿತ್ತಾಪೂರ ಜಿ: ಕಲಬುರಗಿ  ರವರು ದಿನಾಂಕ 16-02-2015 ರಂದು ಬೆಳಿಗ್ಗೆ ನಮ್ಮೂರಿನ ಭಗವಾನ ಇತನು ಚಲಾಯಿಸುತ್ತೀರುವ ಟಾಟಾ ಎಸಿಇ ನಂ ಕೆಎ-32-ಸಿ-0731 ನೇದ್ದರಲ್ಲಿ ನಾನು ಮತ್ತು ನನ್ನ ಮಗ ಹರಬಾಸ ಹಾಗೂ ನನ್ನ ಮಗಳಾದ ಇರ್ಫಾನಾ  ಮತ್ತು ಆಫ್ರೀನಾ ಬೇಗಂ ರವರು ಕುಳಿತು ನೀಲೂರ ಗ್ರಾಮದಿಂದ ನಮ್ಮೂರಿಗೆ ಹೋಗುವ ಕುರಿತು ಆರ.ಪಿ.ಸರ್ಕಲದಿಂಧ ರಾಮ ಮಂದಿರ ರಿಂಗ ರೋಡ ಕಡೆಗೆ ಹೋಗುವಾಗ ರೈಲ್ವೆ ಓವರ ಬ್ರಿಡ್ಜ ದಾಟಿ ಬಂಜಾರ ಕ್ರಾಸ ಸಮೀಪ ರೋಡ ಮೇಲೆ ಎದುರಿನಿಂದ ಬಸ್ಸ ಚಾಲಕ ವೀರಣ್ಣ ಇತನು ತನ್ನ ಎನ,,ಕೆ,ಆರ,ಟಿ,ಸಿ ಬಸ್ಸ ನಂ ಕೆಎ-36-ಎಫ್-1075 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಸಿಕೊಂಡು ಬಂದು ನಾವು ಕುಳಿತ ಟಾಟಾ ಎಸಿಇ ವಾಹನಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ನನ್ನ ಹಣೆಗೆ ರಕ್ತಗಾಯ ಮತ್ತು ಮೈಯಲ್ಲಾ ಒಳಪೆಟ್ಟು ಹಾಗೂ ನನ್ನ ಮಗ ಹರಬಾಸ ಇತನಿಗೆ ಹಣೆಗೆ ಪೆಟ್ಟು ಬಿದ್ದಿದ್ದು ಮತ್ತು ಟಾಟಾ ಎಸಿಇ ಚಾಲಕ ಭಗವಾನ ಇತನಿಗೂ ಪೆಟ್ಟು ಬಿದ್ದಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kalaburagi District Reported Crimes

ಅಪಘಾತ ಪ್ರಕರಣಗಳು :
ಅಫಜಲಪೂರ ಠಾಣೆ : ದಿನಾಂಕ 15/02/2015 ರಂದು ಶ್ರೀ ರಾಜೇಶ ತಂದೆ ರೇಚಣಸಿದ್ದ ಮಜಗೊಂಡ ಸಾ ಲಚ್ಹಾಣ ತಾ : ಇಂಡಿ ಜಿ : ಬಿಜಾಪೂರ ರವರು ತನ್ನ ಗೆಳೆಯನ ಮದುವೆ ನಿಮಿತ್ಯ ಲಚ್ಚಾಣದಿಂದ ಮೋ/ಸೈ ನಂ- ಎಮ್.ಹೆಚ್-13 ಎವಿ-5983 ನೇದ್ದರ ಮೇಲೆ ಫಿರ್ಯಾದಿ ಮತ್ತು ಗಾಯಾಳು ಬರುತ್ತಿದ್ದಾಗ ಸೊನ್ನ ಕ್ರಾಸ್ ಹತ್ತಿರ ಮದ್ಯಾಹ್ನ 12:30 ಗಂಟೆ ಸುಮಾರಿಗೆ ಹಿಂದು ಗಡೆಯಿಂದ ಕಬ್ಬು ತುಂಬಿದ ಟ್ರಾಕ್ಟರ್ ನಂ- ಎಮ್.ಹೆಚ್-13 ಜೆ-6920 ನೇದ್ದರ ಚಾಲಕನು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಫಿರ್ಯಾದಿಯ ಮೋ/ಸೈನ್ನು ಸೈಡ ಹೊಡೆಯುವಾಗ ಮೋ/ಸೈಗೆ ಡಿಕ್ಕಿ ಪಡಿಸಿದನು ಆಗ ಮೋ/ಸೈ ಹಿಂದೆ ಕುಳಿತ ರಾಹುಲ ಇವನು ಟ್ರಾಕ್ಟರ ಟ್ರೈಲಿ ಹಿಂದಿನ ಗಾಲಿಯಲ್ಲಿ ಸಿಕ್ಕಿಬಿದ್ದುದ್ದರಿಂದ ರಾಹುಲ ಇವನಿಗೆ ಕೈಗೆ, ಕಾಲಿಗೆ, ಟೊಂಕಿಗೆ ಮತ್ತು ಇತರೆ ಕಡೆಗೆ ಸಾದಾ ಮತ್ತು ಭಾರಿ ರಕ್ತಗಾಯ ಮತ್ತು ಗುಪ್ತ ಪೆಟ್ಟಾಗಿದ್ದು ಗಾಯಾಳು ರಾಹುಲ ತಂದೆ ಶಿವಪ್ಪ ಬೈರಗೋಂಡ ಸಾ|| ಲಚ್ಚಾಣ ತಾ|| ಇಂಡಿ ಇವರಿಗೆ ಹೆಚ್ಚಿನ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿಗೆ ತೆಗೆದುಕೊಂಡು ಹೋಗಿರುತ್ತಾರೆ. ಜಿಲ್ಲಾ ಸರಕಾರಿ ಆಸ್ಪತ್ರೆ ಕಲಬುರಗಿ ರವರಿಂದ ಸದರಿ ಗಾಯಾಳು ರಾಹುಲ ಬೈರಗೋಂಡ ಇವನು ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ರಫೀಕ ತಂದೆ ಅಬ್ದುಲ ಸಲೀಮ ಸಾ : ರಾಯಚೂರ ಮೊಹಲ್ಲಾ ಯಾದಗೀರ ರವರು ಮತ್ತು ಯಾದಗಿರಿದವರಾದ ರಿಯಾಜ ಅಹ್ಮದ ತಂದೆ ಮೌಲಾಸಾಬ ಕೋಲಿವಾಡೆ ರವರ ಲಾರಿ ಮೇಲೆ ಸುಮಾರು ದಿನಗಳಿಂದ ಕ್ಲೀನರ ಅಂತಾ ಕೆಲಸ ಮಾಡುತ್ತಿದ್ದು ಸದರ ಲಾರಿ ನಂ ಎಮ್.ಎಚ್. 11 ಎಫ್. 5402 ಇದ್ದು ಸದರ ಲಾರಿ ಚಾಲಕ ರಿಯಾಜ ಅಹಮ್ಮದ ಇವನು  ಅಫಜಲಪೂರ ತಾಲೂಕಿನ ಬನ್ನಟ್ಟಿ ಕ್ರಾಸ ಹತ್ತಿರ ಸದರಿ ನಮ್ಮ ಲಾರಿ ಚಾಲಕ ರಿಯಾಜ ರವರು ಅತೀವೇಗವಾಗಿ ಮತ್ತು ನಿಸ್ಕಾಳಜಿತನದಿಂದ ಲಾರಿಯನ್ನು ಚಲಾಯಿಸುತ್ತಾ ರಸ್ತೆ ಎಡಗಡೆ ತೆಗ್ಗಿನಲ್ಲಿ ಹಾಕಿ ಬಲಮಗ್ಗಲಿಗೆ ಪಲ್ಟಿ ಮಾಡಿದನು ಆಗ ನಾನು ಜೋರಾಗಿ ಚೀರಿ ಲಾರಿಯಿಂದ ಹೊರಗೆ ಜಿಗಿದು ಚಾಲಕನ ಹತ್ತಿರ ಹೋಗಿ ನೋಡಲು ರಿಯಾಜ ಇವನು ಲಾರಿ ಪ್ರೇಮ ಕೆಳಗೆ  ಸಿಕ್ಕಿಬಿದ್ದಿದ್ದು ಕೆಲವು ಜನರ ಸಾಹಾಯದಿಂದ ಹೊರಗೆ ತೆಗೆದು ಉಪಚಾರ ಕುರಿತು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಚಾರಿ ಠಾಣೆ : ದಿನಾಂಕ 15-02-2015 ರಂದು ಬೆಳಿಗ್ಗೆ ಶ್ರೀ ಗುಲಾಮ ಹುಸೇನ ತಂದೆ ಅಬ್ದುಲ ಖಾದರ ಸಾ: ಖಮರಕಾಲೋನಿ ಅಕ್ಬರಿಯಾಮಜೀದ ಹತ್ತಿರ ಕಲಬುರಗಿ. ರವರ ಮಗನಾದ ಮಹ್ಮದ ಸುಫಿಯಾನ ಇತನಿಗೆ ಸಂಡಾಸ ಬಂದಿದಕ್ಕೆ ಆತನ ಅತ್ತೆಯಾದ ತಾಹೇರಬೇಗಂ  ಇವಳು ಮಹ್ಮದ ಸುಫಿಯಾನ ಸಂಡಾಸಕ್ಕೆ ಕರೆದುಕೊಂಡು ಹೋಗಿ ರೋಡಿನ ಪಕ್ಕದಲ್ಲಿ ಸಂಡಾಸಕ್ಕೆ ಕೂಡಿಸಿದಾಗ ಆರೋಪಿ ಸೋಹೇಲ ಈತನು ತನ್ನ ಮೋಟಾರ ಸೈಕಲ ನಂ. ಕೆ.ಎ 32 6799 ಖಮರ ಕಾಲೂನಿ ಅಟೋ ಸ್ಟಾಂಡ ಕಡೆಯಿಂದ ತನ್ನ ಮೋಟಾರ ಸೈಕಲ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಸಂಡಾಸಕ್ಕೆ ಕುಳಿತ ಮಹ್ಮದ ಸುಫಿಯಾನ ಈತನಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತ ಪಡಿಸಿದ ಮೋಟಾರ ಸೈಕಲ ಸಿರೀಜ ನೋಡಿರುವುದಿಲ್ಲ. ಅಪಘಾತದಲ್ಲಿ ಮಹ್ಮದ ಸುಫಿಯಾನ ಈತನಿಗೆ ಎಡಗಾಲು ಪಾದಕ್ಕೆ ಎಡಗಡೆ ಸೊಂಟಕ್ಕೆ ಮತ್ತು ತಲೆಗೆ ಗುಪ್ತ ಪೆಟ್ಟಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ದು ಇರುತ್ತದೆ ಅಂತ ಫಿರ್ಯಾದಿ ಹೇಳಿಕೆ ಸಾರಂಶ ಇರುತ್ತದೆ.
ಆಕಸ್ಮಿಕ ಬೆಂಕಿ ಹಾನಿಯಾದ ಪ್ರಕರಣ :

ಚೌಕ ಠಾಣೆ : ಶ್ರೀ ಭಗವಾನ ತಂ ಶಿವಲಿಂಗಯ್ಯ ಅಲಸಳ್ಳಿ ಸಾಃ ಮನೆ  ನಂ. 6 ಮತ್ತು 7 ದೇವನಗರ ಹಳೆ ಜೇವರ್ಗಿ ರಸ್ತೆ ಕಲಬುರಗಿ ಇವರು ಗಂಜನಲ್ಲಿ ರವಿ ರಸಾಳಕರ ರವರ ಅಂಗಡಿಯಲ್ಲಿ ಬಾಲಾಜಿ ಮಾರ್ಕೆಟಿಂಗ ಎಂಬ ಹೆಸರಿನ ಮಶನರಿ ಮಾರಾಟ ಮಾಡುವ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತೇನೆ. ದಿನಾಂಕ 09.02.15 ರಂದು ಬೆಳಗ್ಗೆ 9 ಗಂಟೆಗೆ ನಾನು ಗಾಜಿಪೂರ ಬಡಾವಣೆಯಲ್ಲಿದ್ದಾಗ ನಮ್ಮ ಅಂಗಡಿಯ ಪಕ್ಕದ ಅಂಗಡಿಯವರಾದ ಪಟೇಲ ಮತ್ತು ಅಂಬಣ್ಣ ಇವರು ನನಗೆ ಪೋನ ಮಾಡಿ ನಿಮ್ಮ ಅಂಗಡಿಯ ಒಳಗಡೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಸಾಮಾನುಗಳು ಸುಡುತ್ತಿವೆ ಅಗ್ನಿಶಾಮಕ ವಾಹನ ತರಿಸಿದ್ದೇವೆ ಅಂತ ಹೇಳಿದ್ದರಿಂದ ನಾನು ಗಾಬರಿಯಾಗಿ ಹೋಗಿ ನೋಡಲು ನಮ್ಮ ಅಂಗಡಿಗೆ ಬೆಂಕಿ ಹತ್ತಿ ಉರಿಯುತ್ತಿದ್ದು ಅಗ್ನಿಶಾಮಕ ವಾಹನ ಬೆಂಕಿ ಆರಿಸಿದ್ದರಿಂದ ನಾವು ಪರಿಶೀಲಿಸಲು ಅಂಗಡಿಯಲ್ಲಿದ್ದ ಪಿ.ಯು.ಸಿ ಫಿಟಿಂಗ ಪೈಪ 90 ಎಂ.ಎಂ. ಎಂಟಿಎ, 90 ಎಂ.ಎಂ.ಟಿ, ಎಲಬು ಬೆಂಟ, ಕಾಲರ, ಎಫ್.ಟಿ.ಎ, ಬಾಲವಾಲ, ಫುಟಬಾಲ. ನಳಗಳು. ಹೆಚ್.ಡಿಪಿಸಿ ಪೈಪಗಳು, ಕೇಬಲವಾಯರಗಳು, ಸ್ಟಾಸರ, ಮೋಟಾರ ನೇದ್ದುಗಳು ಆಕಸ್ಮಿಕ ಬೆಂಕಿಯಿಂದ ಸೂಟ್ಟು ಅಂದಾಜ ಕಿಮತ್ತು 5,56,728/- ರೂ. ನೇದ್ದವುಗಳಷ್ಟು ಹಾನಿಯಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.