POLICE BHAVAN KALABURAGI

POLICE BHAVAN KALABURAGI

08 June 2016

Kalaburagi District Reported Crimes

ಅಪಘಾತ ಪ್ರಕರಣಗಳು :
ಗ್ರಾಮೀಣ ಠಾಣೆ : ದಿನಾಂಕ 07-06-2016 ರಂದು ರಾತ್ರಿ 09-00 ಗಂಟೆ ಸುಮಾರಿಗೆ ನನ್ನ ಮಗ ಸಿದ್ಧಲಿಂಗ@ ಸಿದ್ಧಪ್ಪ ಉಮ್ಮರಗಿ ಮತ್ತು ನಮ್ಮ ಮನೆಯ ಪಕ್ಕದಲ್ಲಿ ಇರುವ ನಾಗರಾಜ ತಂದೆ ಅಂಬಾರಾಯ ಪರೀಟ್ ಇವರಿಬ್ಬರು ಅಂಬಾರಾಯ ಪರೀಟ ಇತನಿಗೆ ಕಾಮಲೆ ರೋಗ ಆಗಿದ್ದರಿಂದ ಪಟ್ಟಣ ಗ್ರಾಮದಲ್ಲಿ ಕಾಮಲೆ ರೋಗಕ್ಕೆ ಬುಧವಾರ ದಿವಸ ಔಷಧಿ ಕೊಡುವ ಸಂಗಪ್ಪ ಬಿಸಗೊಂಡ ಇವರ ಮನೆಗೆ ಹೋಗಿ ನಾಳೆ ಬೆಳಿಗ್ಗೆ ಔಷಧಿ ಕೊಡುವ ಸಮಯ ತಿಳಿದುಕೊಂಡು ಬರಲು ನಮ್ಮೂರಿನ ರಾಜು ಪಟ್ಟಣ ಇವರ ಹಿರೋ ಹೊಂಡಾ ಸ್ಪೆಂಡರ ಕೆಎ 32 EK 4288 ಮೇಲೆ ಇಬ್ಬರು ಕುಳಿತುಕೊಂಡು ಸುಂಟನೂರದಿಂದ  ಪಟ್ಟಣ ಗ್ರಾಮಕ್ಕೆ ಹೋಗಿ ಬರುತ್ತೇವೆ ಎಂದು ಹೇಳಿ ಹೋದರು. ಮೋಟಾರ ಸೈಕಲ ನನ್ನ ಮಗ ಸಿದ್ಧಲಿಂಗ@ಸಿದ್ಧಪ್ಪ ಇತನು ನಡೆಸುತ್ತಿದ್ದನು. ಅವನ ಹಿಂದೆ ನಾಗರಾಜ ಇತನು ಕುಳಿತುಕೊಂಡಿದ್ದು. ರಾತ್ರಿ 11-30  ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ಆಗ ನಮ್ಮೂರಿನ ಅರ್ಜುನ ವಗ್ಗನ ಇತನು ನಮ್ಮ ಮನೆಗೆ ಬಂದು ನನಗೆ ಮತ್ತು ನಾಗರಾಜನ ಅಣ್ಣ ಶರಣಪ್ಪ ಇಬ್ಬರು ತಿಳಿಸಿದ್ದೆನೆಂದೆರೆ, ನಮ್ಮೂರಿನ ಸೂರ್ಯಕಾಂತ ಪಟ್ಟಣ ಮತ್ತು ನಾಗರಾಜ ಬಿರಾದಾರ ಇವರಿಬ್ಬರು ತನ್ನ ಮೋಬಾಯಿಲಿಗೆ ಪೋನ ಮಾಡಿ,  ನಿಮ್ಮ  ಮಗ ಸಿದ್ಧಪ್ಪ ಇತನು ಹಿರೋ ಹೊಂಡಾ ಸ್ಪೆಂಡರ ಕೆಎ 32 EK 4288 ನೇದ್ದರ ಹಿಂದೆ ನಾಗರಾಜ ಇತನಿಗೆ ಕೂಡಿಸಿಕೊಂಡು ಪಟ್ಟಣದಿಂದ ಸುಂಟನೂರ ಕಡೆಗೆ ಹೊರಟಿದ್ದು, ರಾತ್ರಿ 11-00 ಗಂಟೆ ಸುಮಾರಿಗೆ ಪಟ್ಟಣ ಸೀಮಾಂತರದಲ್ಲಿ ಬರುವ ಜವಳಿ ದಾಬಾ ದಾಟಿ ಇರುವ ಮಹೇಶ್ವರಿ ಗುರುರಾಜ ಪಾಟೀಲ ಇವರ ಹೊಲದ ಎದುರಿನ ಕಲಬುರಗಿ-ಅಳಂದ ರೋಡಿನ ಮೇಲೆ ತಮ್ಮ ಸೈಡ ಹಿಡಿದುಕೊಂಡು ಹೊರಟಾಗ ಅವರ ಹಿಂದಿನಿಂದ ಒಬ್ಬ ಲಾರಿ ಚಾಲಕನು ತನ್ನ ವಶದಲ್ಲಿದ್ದ ಲಾರಿಯನ್ನು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ನಡೆಸುತ್ತಾ ಸಿದ್ಧಲಿಂಗ@ಸಿದ್ಧಪ್ಪ ನಡೆಸುತ್ತಿದ್ದ  ಮೋಟಾರ ಸೈಕಲಿಗೆ ಅತಿವೇಗದಿಂದ ಓವರ ಟೇಕ ಮಾಡಿ ಸ್ವಲ್ಪ ಮುಂದೆ ಹೋಗಿ ಯಾವುದೇ ಮುನ್ಸೂಚನೇ ಮತ್ತು ಇಂಡಿಕೇಟರ ಹಾಕದೇ ವೇಗದಲ್ಲಿ ಒಮ್ಮಿಂದ ಒಮ್ಮೇಲೆ ಬ್ರೇಕ ಹಾಕಿ ಲಾರಿ ನಿಲ್ಲಿಸಿದಾಗ ಲಾರಿ ಹಿಂದೆಯೇ ಮೋಟಾರ ಸೈಕಲ ಮೇಲೆ ಹೊರಟ ಸಿದ್ಧಲಿಂಗ@ಸಿದ್ಧಪ್ಪ ಇತನು ಲಾರಿ ಹಿಂಭಾಗಕ್ಕೆ ಡಿಕ್ಕಿ ಹೊಡೆಯಲು ಲಾರಿಯ ಹಿಂಭಾಗದ ಬಾಡಿ ಸಿದ್ಧಲಿಂಗ@ಸಿದ್ಧಪ್ಪ ಮತ್ತು  ನಾಗರಾಜ ಇವರಿಬ್ಬರ  ತಲೆಗೆ ಮತ್ತು ಮುಖಕ್ಕೆ ಬಡಿದು ಭಾರಿ ರಕ್ತಗಾಯವಾಗಿ ಲಾರಿ ಹಿಂಭಾಗದಲ್ಲಿ ಮೋಟಾರ ಸೈಕಲದೊಂದಿಗೆ ಬಿದ್ದಿರುತ್ತಾರೆ. ಸಿದ್ಧಲಿಂಗ@ಸಿದ್ಧಪ್ಪ ಇತನ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಗಾಯವಾಗಿ ರಕ್ತಸ್ರಾವದಿಂದ ಸ್ಥಳದಲ್ಲಿ ಸತ್ತಿರುತ್ತಾನೆ. ಮತ್ತು ನಾಗರಾಜ ಇತನಿಗೆ ಮುಖಕ್ಕೆ ಭಾರಿ ರಕ್ತಗಾಯವಾಗಿ ಮೂಗಿನಿಂದ ರಕ್ತ ಸೋರಿ ಬೇಹುಷ ಸ್ಥಿತಿಯಲ್ಲಿ ಬಿದ್ದಿರುತ್ತಾನೆ ಅಂತಾ ತಿಳಿಸಿದನು. ಈ ವಿಷಯ ಕೇಳಿ ಗಾಬರಿಗೊಂಡು ನಾನು ಮತ್ತು ನಾಗರಾಜ ಅಣ್ಣ ಶರಣಪ್ಪ ಹಾಗೂ ನಮ್ಮೂರಿನ ಸಂಗಯ್ಯ ಮಠಪತಿ, ವಿಠಲ ತಂದೆ ನಿಂಗಪ್ಪ ತಳವಾರ, ವಿನೋದ ತಂದೆ ಮಲ್ಲಿಕಾರ್ಜುನ ಮುರಬ  ಮತ್ತು ಇತರೇ ಗ್ರಾಮ ಜನರು ಮೋಟಾರ ಸೈಕಲಗಳು ಮೇಲೆ ಕುಳಿತುಕೊಂಡು ಘಟನಾ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಮಗ ಸಿದ್ಧಲಿಂಗ@ಸಿದ್ಧಪ್ಪ ಇತನು ಲಾರಿ ಹಿಂದುಗಡೆ ತಲೆಗೆ ಮತ್ತು ಮುಖಕ್ಕೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀ ದತ್ತಪ್ಪ ತಂದೆ ಧರ್ಮಣ್ಣಾ ಉಮ್ಮರಗಿ ಸಾ: ಸುಂಟನೂರ ಗ್ರಾಮ ತಾ:ಆಳಂದ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೇವರಗಿ ಠಾಣೆ : ಶ್ರೀ ರಾಜು ತಂದೆ ಹಣಮಂತ ನೀಲಗಲ್ಲ ಸಾ|| ನಾಲವಾರ ತಾ|| ಚಿತ್ತಾಪುರ ಇವರು ದಿನಾಂಕ 05.06.2016 ರಂದು ನಾನು ಹಾಗು ನನ್ನ ಹೆಂಡತಿ ರೇಣುಕಾ, ದೊಡ್ಡಮ್ಮ ದ್ಯಾವಮ್ಮ, ಕವಿತಾ ಎಲ್ಲರು ಕೂಡಿಕೊಂಡು ನಾಲವಾರದಿಂದ ಗೈಬಸಾಬ ಈತನು ನಡೆಸುವ ಟಂಟಂ ನಂ ಕೆ.ಎ32 ಬಿ 9367 ನೇದ್ದರಲ್ಲಿ ಕುಳಿತುಕೊಂಡು ನಾಲವಾರಕ್ಕೆ ಹೋಗಿ ಅಲ್ಲಿ ದೇವರ ದರ್ಶನ ಮುಗಿಸಿಕೊಂಡು ದಿನಾಂಕ 06.06.2016 ರಂದು ಗೈಬಸಾಬ ಈತನು ನಡೆಸುವ ಟಂಟಂ ನೇದ್ದರಲ್ಲಿ ಕುಳಿತುಕೊಂಡು ವಾಪಸ ನಮ್ಮೂರಿಗೆ ಬರುತ್ತಿದ್ದಾಗ ಇಜೇರಿ ಸಮೀಪ ಇಜೇರಿ ಯಡ್ರಾಮಿ ರಸ್ತೆಯ ಮೇಲೆ ರಾತ್ರಿ 08:45 ಗಂಟೆಯ ಸುಮಾರಿಗೆ ಬರುತ್ತಿದ್ದಾಗ ಅದೇ ವೇಳೆಗೆ ಎದುರುಗಡೆಯಿಂದ 108 ಅಂಬ್ಯುಲೇನ್ಸ ನಂ ಕೆ.ಎ40 ಜಿ168 ನೇದ್ದರ ಚಾಲಕ ರಾಜಶೇಖರ ಎಮ್. ಬಡಿಗೇರ ಈತನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಾವು ಕುಳಿತುಕೊಂಡು ಹೋಗುತಿದ್ದ ಟಂಟಂ ಗೆ ಡಿಕ್ಕಿ ಪಡಿಸಿದಾಗ ನಮ್ಮೆಲ್ಲರಿಗೆ ಸಾದಾ ಮತ್ತು ಭಾರಿ ಗಾಯಗೊಳಿಸಿದ್ದು ನಂತರ ತನ್ನ ಅಂಬ್ಯೂಲೆನ್ಸನ್ನು ಸ್ಥಳದಲ್ಲಿಯೆ ಬಿಟ್ಟು ಓಡಿ ಹೋಗಿದ್ದು ನಾವೇಲ್ಲರು ಉಪಚಾರ ಕುರಿತು ಸರಕಾರಿ ಆಸ್ಪತ್ರೆ ಕಲಬುರಗಿಗೆ ಹೋಗುವಾಗ ಮಾರ್ಗದ ಮಧ್ಯ ಹಸನಾಪುರ ಕ್ರಾಸ್ ಹತ್ತಿರ ರಾತ್ರಿ 11:45 ಗಂಟೆಗೆ ನಮ್ಮ ದೊಡ್ಡಮ್ಮ ದ್ಯಾವಮ್ಮ ಇವಳು ಮೃತಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಲುಗೆ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮನೋಹರ ತಂದೆ ಬಸವಣಪ್ಪಾ ಪ್ಯಾಟಿ ಸಾ:ಮಾಣಿಕೇಶ್ವರಿ ಕಾಲೋನಿ ಕಲಬುರಗಿ ಇವರು ದಿನಾಂಕ: 07-06-2016 ರಂದು ಬೆಳಗ್ಗೆ ರಾತ್ರಿ 10.00 ಗಂಟೆಗೆ ನನ್ನ ಅಂಗಡಿಯ ಬೀಗ ಹಾಕಿ ನಾನು ಮತ್ತು ನನ್ನ ಗೆಳೆಯನಾದ ಸಂತೋಷ ತಂದೆ ಸಿದ್ದಾರೂಢ ಸಂಗೋಳಗಿ ಇಬ್ಬರೂ ಕೂಡಿಕೊಂಡು ಹೇರಿಟೇಜ ಹೊಟೇಲಕ್ಕೆ ಹೋಗಿ ಅಲ್ಲಿ ಊಟ ಮಾಡಿಕೊಂಡು ಮೋಟಾರ ಸೈಕಲ ಮೇಲೆ ಮನೆಗೆ ಹೋಗುತ್ತಿರುವಾಗ ಕಾಳೆ ಲೇ ಔಟದಲ್ಲಿ ಲೆಂಗಟೆ ಮನೆಯ ಮುಂದುಗಡೆ ರಾತ್ರಿ 11.00 ಗಂಟೆ ಸುಮಾರಿಗೆ ಇಬ್ಬರು ಅಪರಿಚಿತ ಮೋಟಾರ ಸವಾರರು ನಮ್ಮ ಮುಂದೆ ಬಂದು ಮೋಟಾರ ಸೈಕಲ ಅಡ್ಡ ನಿಲ್ಲಿಸಿ ನಮಗೆ ಅವರು ಹೇಳಿದೆನೆಂದರೆ, ಏ ಕಹಾ ಜಹಾರಹೆ ಹೈ ಕೇಳಿದಾಗ ನಾವು ಅವರಿಗೆ ನಮ್ಮ ಮನೆಗೆ ಹೋಗುತ್ತಿದ್ದೇವೆ ಅಂತಾ ಹೇಳಿದಾಗ ಅವರು ಕೆಳಗೆ ಇಳಿದು ನಮ್ಮ ಪ್ಯಾಂಟಿನ ಜೇಬ ಮತ್ತು ಶರ್ಟ ಜೇಬಿನಲ್ಲಿ ಕೈ  ಹಾಕುತ್ತಿದ್ದರು ಆಗ ನಾವು ಅವರಿಗೆ ಏ ಈ ರೀತಿ ಯಾಕೆ ಮಾಡುತ್ತಿದ್ದಿರಿ ಅಂತಾ ಹೇಳಿದಾಗ ಒಬ್ಬನು ಕೈಯಲ್ಲಿ ಪಂಚಹಾಕಿಕೊಂಡು ನನ್ನ ಮುಖಕ್ಕೆ ಎರಡು ಮೂರು ಏಟು ಹೊಡೆದಿದ್ದರಿಂದ ನನ್ನ ಕೇಳ ತುಟಿ ಒಡೆದು ರಕ್ತಗಾಯ ಆಗಿರುತ್ತದೆ. ನನ್ನ ಪ್ಯಾಂಟಿನ ಜೇಬಿನಲ್ಲಿ 20000/-ರೂ ದೋಚಿಕೊಂಡಿರುತ್ತಾನೆ. ಅವರಲ್ಲಿ ಇನ್ನೊಬ್ಬ ಹುಡುಗ ಸಂತೋಷನಿಗೆ ಕೈಯಲ್ಲಿ ಪಂಚಹಾಕಿಕೊಂಡು ಬಲ ಕಣ್ಣಿನ ಹುಬ್ಬಿನ ಮೇಲೆ ಮತ್ತು ಮುಖದ ಮೇಲೆ ಹೊಡೆದು ರಕ್ತಗಾಯ ಪಡಿಸಿ ಕೊರಳಲಿದ್ದ 30 ಗ್ರಾಂ ಬಂಗಾರದ ಲಾಕೇಟ ಅದರ ಅ.ಕಿ.70000/-ರೂ ಮತ್ತು ಒಂದು ಪರ್ಸ ತೆಗೆದುಕೊಂಡಿದ್ದು ಅದರಲ್ಲಿ ಅ.ಕಿ.2500/-ರೂ ಇದ್ದಿತ್ತು ಅವರಿಬ್ಬರೂ ಒಂದು ಒಂದು ಪಲ್ಸರ್‌‌‌ ಕಪ್ಪು ಬಣ್ಣದ ಮೋಟಾರ ಸೈಕಲ ಮೇಲೆ ಬಂದಿದ್ದು ನಾವು ಮೋಟಾರ ಸೈಕರ ನಂಬರ ನೋಡಿರುವದಿಲ್ಲಾ ಅವರಿಬ್ಬರ ಅಂದಾಜು ವಯಸ್ಸು 25 ರಿಂದ 27 ಇರಬಹುದು  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 07.06.2016 ರಂದು  ಮದ್ಯಾಹ್ನ ಜೇವರಗಿ ಪಟ್ಟಣದ ಜೊಪಡ ಪಟ್ಟಿ ಏರಿಯಾದ ಸೀತಾರ ಟೇಲರ್ ಅಂಗಡಿಯ  ಹತ್ತಿರ ಸಾರ್ವಜನಿಕ ರೋಡನಲ್ಲಿ ಒಬ್ಬ ಮನುಷ್ಯನು ರೋಡಿನಲ್ಲಿ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ. ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮೀ ಇದ್ದ ಸ್ಥಳಕ್ಕೆ ಹೋಗಿ ಗೊಡೆ  ಮರೆಯಲ್ಲಿ ನಿಂತು ನೋಡಲಾಗಿ ಜೊಪಡಪಟ್ಟಿ ಸಿತಾರಾ ಟೇಲರ್ ಅಂಗಡಿಯ  ಹತ್ತಿರ  ಸಾರ್ವಜನಿಕ ರಸ್ತೆ ಮೇಲೆ ಒಬ್ಬ ಮನುಷ್ಯನು ಸಾರ್ವಜನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ ಅಂತಾ ಹೋಗಿ ಬರುವ ಸಾರ್ವಜನಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆ ಚೀಟಿ ಬರೆದು ಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ದಾವೂದ ಅಹೇಮದ್ ತಂದೆ ಮಹಿಬೂಬಸಾಬ ಕಾಸರಬೊಸಗಾ ಸಾಃ ಜೊಪಡ ಪಟ್ಟಿ ಜೇವರಗಿ ಅಂತಾ ತಿಳಿಸಿದನು. ನಂತರ ಅವನಿಗೆ ಅಂಗ ಶೋಧ ಮಾಡಲು ಅವನ ಹತ್ತಿರ ನಗದು ಹಣ 45540/-ರೂ. ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು, ಒಂದು ಮೊಬೈಲ್ ಅಂ.ಕಿ 500/- ರೂ ನೇದ್ದವುಗಳು ಸಿಕ್ಕಿರುತ್ತವೆ. ನಂತರ ಸದರಿ ಮಟಕಾ ಹಣ ಯಾರಿಗೆ ಕೊಡುತ್ತಿ ಅಂತಾ ಕೇಳಿದಾಗ  ಪೀರೊಜ ತಂದೆ ಶರ್ಮೊದ್ದೀನ್ ಚಿಕ್ಕಜೇವರಗಿ ಇತನಿಗೆ ಕೊಡುತ್ತೆನೆ ಅಂತಾ ತಿಳಿಸಿದನು. ನಂತರ ಸದರಿಯವನ ಹತ್ತಿರ ಇದ್ದ ಹಣ ಮತ್ತು ಮಟಕಾ ಚೀಟಿ, ಪೆನ್ನು, ಹಾಗೂ ಮೊಬೈಲ್  ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡು ಸದರಿಯವನೊಂದಿಗೆ ಜೇವರಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಜೇವರಗಿ ಠಾಣೆ : ದಿನಾಂಕ 07.06.2016 ರಂದು ಮುಂಜಾನೆ  ಚಿಗರಳ್ಳಿ ಕ್ರಾಸ್  ಹತ್ತಿರ ಸಾರ್ವಜನಿಕ ರೋಡನಲ್ಲಿ ಒಬ್ಬ ಮನುಷ್ಯನು ರೋಡಿನಲ್ಲಿ ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾರನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಜೇವರಗಿ ಪೊಲೀಸ್ ಠಾಣೆ, ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಬಾತ್ಮೀ ಇದ್ದ ಕಡೆಗೆ ನಡೆದುಕೊಂಡು ಹೋಗಿ ಒಂದು ಹೊಟೇಲ ಗೊಡೆ  ಮರೆಯಲ್ಲಿ ನಿಂತು ನೋಡಲಾಗಿ ಚಿಗರಳ್ಳಿ ಕ್ರಾಸ್ ಹತ್ತಿರ  ಸಾರ್ವಜನಿಕ ರಸ್ತೆ ಮೇಲೆ ಒಬ್ಬ ಮನುಷ್ಯನು ಸಾರ್ವಜನಿಕರಿಗೆ 1-00 ರೂಪಾಯಿಗೆ 80-00 ರೂಪಾಯಿ ಕೊಡುತ್ತೇನೆ ಅಂತಾ ಹೋಗಿ ಬರುವ ಸಾರ್ವಜನಕರಿಂದ ಹಣ ಪಡೆದುಕೊಂಡು ಮಟಕಾ ಅಂಕಿ ಸಂಖ್ಯೆಯ ಚೀಟಿ ಬರೆದು ಕೊಳ್ಳುತ್ತಿರುವದನ್ನು ನೋಡಿ ಖಚಿತ ಪಡಿಸಿಕೊಂಡು ದಾಳಿ ಮಾಡಿ ಅವನಿಗೆ ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಭೀಮರಾಯ ತಂದೆ ಶಿವಪ್ಪ ಮೂಡಬೂಳ  ಸಾ: ಸೋಮನಾಥಹಳ್ಳಿ ತಾಃ :ಜೇವರ್ಗಿ ಅಂತಾ ತಿಳಿಸಿದನು. ನಂತರ ಅವನಿಗೆ ಅಂಗ ಶೋಧ ಮಾಡಲು ಅವನ ಹತ್ತಿರ ನಗದು ಹಣ 2600/-ರೂ. ಒಂದು ಮಟಕಾ ಚೀಟಿ, ಒಂದು ಬಾಲ ಪೆನ್ನು ನೇದ್ದವುಗಳು ವಶಪಡಿಸಿಕೊಂಡು ಸದರಿಯವನೊಂದಿಗೆ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಕಮಲಾಪೂರ ಠಾಣೆ :ಶ್ರೀ ದಯಾನಂದ ತಂದೆ ಗುಲಾಬರಾವ ದುರುವೆ ಇವರ ನಮ್ಮ ಮನೆಗೆ ಬಂದು ತಿಳಿಸಿದ್ದೆನೆಂದರೆ ತಮ್ಮ ಮನೆಯಗೆ ಯಾರೊ ಕಳ್ಳರು ಬಂದು ಮನೆಯ ಮುಂದಿನ ನಮ್ಮ ಕಾರ ಡ್ಯಾಮೇಜ ಮಾಡಿ ಮನೆಯಲ್ಲಿ ಇಟ್ಟಿದ ಅಂಗಿಯ ಜೇಬಿನಿಂದ ನಗದು ಹಣ 5 ಸಾವೀರ ರೂಪಾಯಿ ಕಳ್ಳತನ ಮಾಡಿಕೊಂಡು ಹೊಗಿದ್ದಾರೆ ಅಂತ ತಿಳಿಸಿದ್ದು ಅದರಂತೆ ನಾನು ಸದರಿಯವರ ಮನೆಗೆ ಹೋಗಿ ನೋಡಲು ಅವರ ಮನೆಯ ಮುಂದೆ ನಿಲ್ಲಿಸಿದ ಅವರ ಕಾರ ನಂ ಎಮ್ ಹೆಚ್. 15 ಇಬಿ 7103 ನೇದ್ದ ಶೀಟ ಹರಿದು ಕಾರ ಮೇಲೆ ಉಗಳಿದ್ದು ಅವರ ಮನೆಯಲ್ಲಿ ಹೋಗಿ ನೋಡಲು ಯಾರೊ ಕಳ್ಳರು ಅವರ ಮನೆ ಮಾಳಿಗೆಯಿಂದ ಒಳಗೆ ಪ್ರವೇಶ ಮಾಡಿ ಅವರ ಮನೆಗೆ ಗೂಟಕ್ಕೆ ಸಿಗಿಸಿದ ಅಂಗಿಯ ಜೇಬಿನಲ್ಲಿ ಅವರು ಇಟ್ಟಿದ ನಗದು ಹಣ 5 ಸಾವೀರ ರುಪಾಯಿ ಮತ್ತು ಒಂದು ಮೋಬೈಲ ಅ:ಕಿ: 1000/- ರೂ ನೇದ್ದು ಯಾರೊ ಕಳ್ಳರು ಕಳ್ಳತ ಮಾಡಿಕೊಂಡು ಹೋಗಿದ್ದು ನಂತರ ನಾವು ಎಲ್ಲಾ ಕಡೆಗೆ ಹುಡುಕಾಡಿದ್ದು ಯಾರು ಪತ್ತೆ ಯಾಗಿರುವದಿಲ್ಲ ಬೆಳ್ಳಿಗ್ಗೆ 4 ಗಂಟೆಯ ಸುಮಾರಿಗೆ ನಾನು ಮರಳಿ ನಮ್ಮ ಮನೆಗೆ ಬಂದು ನೋಡಲು ನಮ್ಮ ಮನೆಯಲ್ಲಿ ಸಾಮಾನುಗಳೂ ಅಸ್ತವೇಸ್ತವಾಗಿ ಬಿದ್ದಿದ್ದು ಗಾಬರಿಗೊಂಡು ನಾನು ನಮ್ಮ ಮನೆಯ ಒಳಗೆ ಹೋಗಿ ನೋಡಲು ಮನೆಯಲ್ಲಿ ಇಟ್ಟಿದ ನನ್ನ ಅಂಗಿಯ ಜೇಬಿನಲ್ಲಿ ಇಟ್ಟಿದ ನಗದು ಹಣ 4 ಸಾವೀರ ರುಪಾಯಿ ಮತ್ತು ಬ್ಯಾಗಿನಲ್ಲಿ ಇಟ್ಟಿದ 11 ಸಾವೀರ ರುಪಾಯಿ ಹಾಗೂ ಕೇನರ ಬ್ಯಾಂಕ ಬದಲಾಪೂರ ಖಾತೆ ನಂ 0215101039714 ನೇದ್ದರ ಎಟಿಎಮ್ ಮತ್ತು ಸಿಡಿಕೇಟ ಬ್ಯಾಂಕ ಕಲಬುರಗಿ ಖಾತೆ ನಂ 13002010015031 ನೇದ್ದರ ಎಟಿಎಮ್ ಕಾರ್ಡಗಳು ಕಾಣುತ್ತಿಲ್ಲ ಎಲ್ಲಾ ಕಡೆಗೆ ಹುಡುಕಾಡಿದ್ದು ಸದರಿ ನನ್ನ ಹಣ ಮತ್ತು ಎಟಿಎಮ್ ಕಾರ್ಡಗಳು ಪತ್ತೆಯಾಗಿರುವದಿಲ್ಲ ಯಾರೊ ಕಳ್ಳರುನಮ್ಮ ಮನೆಯ ಒಳಗೆ ಪ್ರವೇಶ ಮಾಡಿ ಹಣ ಮತ್ತು ಎಟಿಎಮ್ ಕಾರ್ಡಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.