POLICE BHAVAN KALABURAGI

POLICE BHAVAN KALABURAGI

14 June 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ: ಶ್ರೀ ಅಬ್ದುಲ ಹಾದಿ ತಂದೆ ಅಬ್ದುಲ ಅಜೀಜ ಸಾ: ಮನೆ ನಂ 5-960 ಪಾಷಾಪೂರ ರೋಜಾ (ಕೆ) ಗುಲಬರ್ಗಾ ರವರು ನನ್ನ ಮಗ ಮಹ್ಮದ ಆರೀಫ ಎಕ್ಬಾಲ ಮತ್ತು ಮಿರ್ಜಾ ಖದೀರಬೇಗ ಹಾಗು ಮಹ್ಮದ ಸಾದಿಕ ಮೂವರು ದಿನಾಂಕ: 14-06-2012 ರಂದು 10-00 ಗಂಟೆ ಸುಮಾರಿಗೆ ಐಷರ ಗೂಡ್ಸ ವಾಹನ ಸಂಖ್ಯೆ ಎಪಿ 28 ಯು 1185 ನೇದ್ದರಲ್ಲಿದ್ದ ಮಾರಬಲ್ ಸ್ಲ್ಯಾಬಗಳನ್ನು ಇಳಿಸುತ್ತಿರುವಾಗ ವಾಹನ ಚಾಲಕ ಮಹ್ಮದ ಅಹ್ಮದ ತಂದೆ ಮಹ್ಮದ ಜಿಂದಾವಲಿ ಇತನು ನಿರ್ಲಕ್ಷತನದಿಂದ ಒಮ್ಮೇಲೆ ತನ್ನ ವಾಹನವನ್ನು ಮುಂದಕ್ಕೆ ಚಲಾಯಿಸಿ ಬ್ರೇಕ್ ಹಾಕಿದ್ದರಿಂದ ಮಾರ್ಬಲ ಸ್ಲ್ಯಾಬಿಗೆ ಕಟ್ಟಿದ ಹಗ್ಗ ತುಂಡಾಗಿ ಮಾರ್ಬಲ್ ಸ್ಲ್ಯಾಬಗಳು ಮೂವರ ಮೈಮೇಲೆ ಬಿದ್ದು ಭಾರಿಗಾಯಗಳಾಗಿ ಮಿರ್ಜಾ ಖದೀರ ಬೇಗ ಇತನು ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಮಹ್ಮದ ಸಾದೀಕ ಇತನು ಕೆ.ಬಿ.ಎನ್ ಆಸ್ಪತ್ರೆಗೆ ಉಪಚಾರ ಕುರಿತು ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗಮದ್ಯದಲ್ಲಿ ಮೃತ ಪಟ್ಟಿದ್ದು, ಮಹ್ಮದ ಆರೀಫ ಎಕ್ಬಾಲ ಇತನಿಗೆ ಭಾರಿ ರಕ್ತಗಾಯಗಳಾಗಿರುತ್ತವೆ. ಗೂಡ್ಸ ಚಾಲಕನ ಮೇಲೆ  ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಅಬ್ದುಲ ಹಾದಿಯವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 33/2012 ಕಲಂ 279,338, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಬ್ರಹ್ಮಪೂರ ಪೊಲೀಸ ಠಾಣೆ: ಶ್ರೀಮತಿ.ಸುನೀತಾ ಗಂಡ ರಾಜು ಮಾಹೂರಕರ್, ವಯ|| 40 ವರ್ಷ, || ಮನೆ ಕೆಲಸ, ಸಾ|| ಗುಲಬರ್ಗಾರವರು ನನ್ನ ಮಗನಾಧ ಶ್ರೀಧರ ಇವನು ಬಸವರಾಜ ಎಂಬುವವನ ಮಗಳಾದ ಪ್ರಿಯಾಂಕಾ ಎಂಬುವಳೊಂದಿಗೆ 2011 ನೇ ಸಾಲಿನ ನವ್ಹೆಂಬರ ತಿಂಗಳಲ್ಲಿ ರಾಮತೀರ್ಥ ದೇವಾಲಯದಲ್ಲಿ ಮದುವೆ ಮಾಡಿಕೊಂಡಿದ್ದು, ನನ್ನ ಮಗ ಪ್ರಿಯಾಂಕಾ ಇವಳಿಗೆ  ಮದುವೆ ಮಾಡಿಕೊಂಡ ದಿನದಂದು ಅವಳ ತಂದೆ ಬಸವರಾಜ, ಅವಳ ತಾಯಿ ಕರಿಯಮ್ಮ, ಮಕ್ಕಳಾದ ಶಕ್ತಿ ಪ್ರಸಾದ, ಶಿವಕುಮಾರ ಇವರು ನನ್ನ ಮಗನಿಗೆ ಕಿರುಕುಳ ನೀಡುತ್ತಾ ಬಂದಿದ್ದು, ಅಲ್ಲದೆ ದಿನಾಂಕ: 11/06/2012 ರಂದು ರಾತ್ರಿ 8:30 ಗಂಟೆಗೆ ಸುಂದರ ನಗರದಲ್ಲಿರುವ ನಮ್ಮ ಮನೆಗೆ ನಮ್ಮ ಸೊಸೆ ಪ್ರಿಯಾಂಕಾ ಮೇಲ ಮಹಡಿಯಿಂದ ಉಲ್ಟಿ ಮಾಡಿ ಕೆಳಗೆ ಬಿದ್ದು ಭಾರಿ ಗಾಯ ಹೊಂದಿದ್ದನ್ನು ನೋಡಿ ನಾನು ಮತ್ತು ನನ್ನ ಮಗ ಇಬ್ಬರು ಕೂಡಿ ಉಪಚಾರಕ್ಕಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು, ಈ ವಿಷಯ ರಾತ್ರಿ 9:00 ಗಂಟೆಗೆ ಗೊತ್ತಾಗಿ ಪ್ರಿಯಾಂಕಾಳ ತಂದೆ ಬಸವರಾಜ, ಅವಳ ತಾಯಿ ಕರಿಯಮ್ಮ ಅಣ್ಣ ತಮ್ಮಂದಿರರಾದ ಶಕ್ತಿ ಪ್ರಸಾದ, ಶಿವಕುಮಾರ, ಇವರು ಬಂದು ನನ್ನ ಮಗನಿಗೆ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾರೆ. ಜಗಳ ಬಿಡಿಸಲು ಹೋದಾಗ ನನಗೆ ಬಸವರಾಜ, ಶಕ್ತಿ ಪ್ರಸಾದ, ಇವರು ನನಗೆ ಹೊಡೆದು ಕಾಲಿನಿಂದ ಒದ್ದಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:76/2012 ಕಲಂ: 323, 354, 504, 506 ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST


ಅಪಜಲಪೂರ ಪೊಲಿಸ್ ರಿಂದ ನಾಲ್ಕು ದಿವಸಗಳ ಹಿಂದೆ, 5 ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪಿಯ ಬಂದನ:


ದಿನಾಂಕ:-10-06-2012 ರಂದು ಪಿರ್ಯಾದಿ ನಾಗಮ್ಮ ಗಂಡ ಭೀಮರಾಯ ಕಂಬಾರ ಸಾ||ಮಲ್ಲಾಬಾದ ತಾ||ಅಫಜಲಪೂರ ಇವರು ಅಫಜಲಪೂರ ಠಾಣೆಗೆ ಹಾಜರಾಗಿ ಪಿರ್ಯಾದ ಕೊಟ್ಟಿದ್ದೇನಂದರೆ ದಿನಾಂಕ 10-06-2012 ರಂದು ನನ್ನ ಮಗನಾದ ವಿಜಯಕುಮಾರನ 5 ನೇ ವರ್ಷದ ಹುಟ್ಟುಹಬ್ಬ ಇದ್ದುದ್ದರಿಂದ ನಾನು ಬೆಳಿಗ್ಗೆ 11-00 ಗಂಟೆಗೆ ಸುಮಾರಿಗೆ ಮಲ್ಲಾಬಾದ ಗ್ರಾಮದಿಂದ ಅಫಜಲಪೂರಕ್ಕೆ ಹೋಗಿ ಆತನಿಗೆ ಹೊಸ ಬಟ್ಟೆಯನ್ನು ತೆಗೆದುಕೊಂಡು ಬರಲು ಹೋಗಿದ್ದು, ನಂತರ ನಾನು ಸುಮಾರು 2 ಗಂಟೆಗೆ ಅಫಜಲಪೂರದಿಂದ ನನ್ನ ಮನೆಗೆ ಬಂದು ನೋಡಲಾಗಿ, ನನ್ನ ಮಗನು ಇರಲಿಲ್ಲ. 
        ಆಗ ನಾನು ನನ್ನ ಅಕ್ಕನ ಮಗಳಾದ ಕೀರ್ತಿ ಇವಳಿಗೆ ವಿಜಯಕುಮಾರ ಎಲ್ಲಿದ್ದಾನೆ ಅಂತಾ ಕೇಳಿದಾಗ ಆಟ ಆಡಲು ಹೊರಗಡೆ ಹೋಗಿದ್ದಾನೆ ಅಂತಾ ತಿಳಿಸಿದಳು. ಆಗ ನಾನು ನನ್ನ ಮಗನನ್ನು ಲಕ್ಷ್ಮೀ ದೇವರ ಗುಡಿಪಂಚಾಯಿತಿ ಕಟ್ಟೆಮತ್ತು ರೇವಣಸಿದ್ದೇಶ್ವರ ಮಠ ಹೀಗೆ ಇತರೆ ಕಡೆಗಳಲ್ಲಿ ಹುಡುಕಿದರೂ ಸಿಗಲಿಲ್ಲ. ನನ್ನ ಮಗನನ್ನು ನಮ್ಮ ಮನೆಯ ಪಕ್ಕದಲ್ಲಿ ವಾಸವಾಗಿರುವ ಧನಗಳ ಡಾಕ್ಟರ ಕೆಲಸ ಮಾಡುವ  ಮಾದನ ಹಿಪ್ಪರಗಾ ಗ್ರಾಮದ ಮಹಾಂತಪ್ಪ ಕಂಭಾರ ಇವರು ಆಗಾಗ ಆತನನ್ನು ಕರೆದುಕೊಂಡು ಆಟವಾಡುತ್ತಿದ್ದರು ಅದರ ಸಂಬಂಧವಾಗಿ ನಾನು ಅವರಿಗೆ ಫೋನ್ ಮಾಡಿ ವಿಚಾರಿಸಿದಾಗ ಅವರು ನಾನು ಹೊರಗಡೆ ಇದ್ದೇನೆ ನಿನ್ನ ಮಗನನ್ನು ಕರೆದುಕೊಂಡು ಬಂದಿಲ್ಲ  ಅಲ್ಲೇ ಎಲ್ಲೋ ಆಟವಾಡುತ್ತಿರಬೇಕು ನೋಡಿ ಎಂದು ತಿಳಿಸಿದರು.
ನಂತರ ಮದ್ಯಾಹ್ನ 4-30 ಗಂಟೆ ಸುಮಾರಿಗೆ ನಾನು ನನ್ನ ಮನೆಯಲ್ಲಿದ್ದಾಗ ಮಹಾಂತಪ್ಪನವರು ನನ್ನ ಮನೆಯ ಹತ್ತಿರ ಬಂದು ವಿಜಯಕುಮಾರ ಸಿಕ್ಕಿದ್ದಾನಾ ಎಂದು ಕೇಳಲಾಗಿ ಇಲ್ಲ ಎಂದು ತಿಳಿಸಿದೆನು. ಆಗ ಎಲ್ಲರೂ ಸೇರಿ ಹುಡುಕಲು ಪ್ರಾರಂಭಿಸಿದರು. ನಾನು ಮನೆಯಲ್ಲಿ ಇದ್ದಾಗ ನನ್ನ  ಮೊಬೈಲಿಗೆ ಮಹಾತೇಶನು ಪೋನ ಮಾಡಿ ಅಳುತ್ತಾ ನಿನ್ನ ಮಗನನ್ನು ಯಾರೋ ಊರ ಹೊರಗಡೆ ಇರುವ ಹಳ್ಳದಲ್ಲಿ ಯಾರೋ ಕೊಲೆ ಮಾಡಿರುತ್ತಾರೆ. ಎಂದು ತಿಳಿಸಿದ ಮೇರೆಗೆ ನಾನು ಮತ್ತು ನನ್ನ ಅಣ್ಣನಾದ ಚಂದ್ರಶೇಖರ ಮತ್ತು ಇತರರು ಹೋಗಿ ನೋಡಲಾಗಿ, ನನ್ನ ಮಗ ವಿಜಯಕುಮಾರನ ಶವ ಬಿದ್ದಿದ್ದು, ನನ್ನ ಮಗನಿಗೂ, ನನಗೂ ಆಗದವರು ಯಾವುದೊ ದುರುದ್ದೇಶದಿಂದ ನನ್ನ ಮಗನ ಬಲಭಾಗದ ಹಣೆಯ ಮೇಲಿನ ತಲೆಗೆ ಭಾರವಾದ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುತ್ತಾರೆ. ಅಂತ ಸಲ್ಲಿಸಿದ ದೂರಿನ ಮೇರೆಗೆ ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಠಾಣೆ ಗುನ್ನೆ ನಂ 101/12 ಕಲಂ 302 ಐ.ಪಿ.ಸಿ ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿರುತ್ತದೆ.
          ನಂತರ ಗುಲಬರ್ಗಾ ಜಿಲ್ಲೆಯ ಮಾನ್ಯ ಎಸ್.ಪಿ.ಸಾಹೇಬರಾದ ಶ್ರೀ ಪ್ರವೀಣ ಮಧುಕರ ಪವಾರಮಾನ್ಯ ಅಪರ ಎಸ್.ಪಿ.ಸಾಹೇಬರವರಾದ ಶ್ರೀ ಕಾಶಿನಾಥ ತಳಕೇರಿ ಮತ್ತು ಮಾನ್ಯ ಡಿ.ಎಸ್.ಪಿ.ಸಾಹೇಬರು ಆಳಂದ ಶ್ರೀ ಎಸ್.ಬಿ.ಸಂಬಾ ರವರ ಮಾರ್ಗದರ್ಶನದಲ್ಲಿ ಒಂದು ತಂಡವನ್ನು ರಚಿಸಿಕೊಂಡು ಅಫಜಲಪೂರ ವೃತ್ತ ನಿರೀಕ್ಷಕರಾದ ಕೆ.ರಾಜೇಂದ್ರ, ಪಿ.ಎಸ್.ಐ.ಮಂಜುನಾಥ ಮತ್ತು ಸಿಬ್ಬಂದಿಯವರಾದ ರಾಮಚಂದ್ರ, ಅರವಿಂದ, ಜಗನ್ನಾಥ, ರಾಜಶೇಖರ, ತುಳಜಪ್ಪ, ಚಂದ್ರಕಾಂತ, ಶಿವಾನಂದ, ಭೀಮಾಶಂಕರ, ಗುಂಡಪ್ಪರವರು ಒಳಗೊಂಡ ತಂಡವನ್ನು ರಚಿಸಿರುತ್ತದೆ.
ಸದರಿ ತಂಡಗಳು ಚಿಂಚೋಳಿ, ಮಲ್ಲಬಾದ, ಮಾದನ ಹಿಪ್ಪರಗಾ, ಸಿಂದಗಿ ತಾಲೂಕಿನ ಕೊರಳ್ಳಿ, ಅಫಜಲಪೂರ ಗ್ರಾಮಗಳಲ್ಲಿ ತಂಡಗಳು ಬೇಟ್ಟಿ  ನೀಡಿ ಮಾಹಿತಿ ಕಲೆ ಹಾಕಿದ್ದು, ಆನಂತರ ಅಧಿಕಾರಿ ಮತ್ತು ಸಿಬ್ಬಂದಿಗಳು ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಹಗಲಿರಳು ಶ್ರಮ ವಹಿಸಿ ಮಾಹಿತಿಯನ್ನು ಸಂಗ್ರಹಿಸಿ ದಿನಾಂಕ: 13-06-2012 ರಂದು ಮಾತೂಳಿ ಗ್ರಾಮದ ಗೇಟಿ ಬಳಿ ಬರುವದಾಗಿ ಆತನನ್ನು ಬೆಳಿಗ್ಗೆಯಿಂದ ಕಾಯುತ್ತಿದ್ದು, ಸುಮಾರು ಸಂಜೆ 6-30 ಗಂಟೆಯ ಸಮಯಕ್ಕೆ ಆಸಾಮಿ ಬರುತ್ತಿದ್ದನ್ನು ನಮ್ಮ ಜೋತೆಯಲ್ಲಿದ್ದ ಭಾತ್ಮಿ ದಾರರು ಇತನೆ ಮಹಾಂತಪ್ಪಾ ಎಂದು ಗುರಿತಿಸಿದ ಮೇರೆಗೆ ಆತನನ್ನು ಹಿಡಿಯಲು ಪ್ರಯತ್ನಿಸಿದಾಗ ಅವನು ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದು, ಆತನನ್ನು ನಾವುಗಳು ಸಹ ಓಡಿ ಹೋಗಿ ಹಿಡಿದುಕೊಂಡು ದಸ್ತಗಿರಿ ಮಾಡಿ ಆತನ ಹೆಸರು ವಿಳಾಸ ಕೇಳಲಾಗಿ ಮಹಾಂತಪ್ಪ ತಂದೆ ಮಲ್ಲಣ್ಣಪ್ಪ ಕಂಬಾರ ಸಾ||ಮಾದನಹಿಪ್ಪರಗಾ ಹಾ||||ಮಲ್ಲಾಬಾದ ಈತನನ್ನು ದಸ್ತಗಿರಿ ಮಾಡಿ, ವಿಚಾರಣೆಗೆ ಒಳಪಡಿಸಿದಾಗ  ಆತನು ಕೆಳೆದ 15 ದಿವಸಗಳಿಂದ ಮೃತ ವಿಜಯಕುಮಾರನನ್ನು ಕೊಲೆ ಮಾಡಲು ಸಂಚು ರೂಪಿಸಿಕೊಂಡಿದ್ದನು. ನಂತರ ವಿಚಾರಣೆಯಿಂದ ಸದರಿ ಪ್ರಕರಣವು ಪತ್ತೆ ಯಾಗಿರುತ್ತದೆ. ಈ ಕೊಲೆಯ ಉದ್ದೇಶ ಆರೋಪಿತನು ಮೃತನ ತಾಯಿ ನಾಗಮ್ಮ ಕಂಬಾರ ಈಕೆಯೊಂದಿಗೆ  ಸ್ನೇಹ ಸಂಬಂಧವನ್ನು ಬೆಳೆಸಿದ್ದು, ಆಕೆಯ ಗಂಡ ಮೃತಪಟ್ಟಿದ್ದರಿಂದ ಮುಂದೆ ಆಕೆಯೊಂದಿಗೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಮೃತ ವಿಜಯಕುಮಾರನು ಜೀವಂತವಿದ್ದರೆ ಹಾಗು ಬೆಳೆದು ದೊಡ್ಡವನಾದರೆ ಆರೋಪಿ ಮಹಾಂತಪ್ಪನ  ಮೇಲೆ ದ್ವೇಷ ಬೆಳೆಸಿಕೊಂಡು ಆತನಿಗೆ ಮುಂದೆ ತೊಂದರೆಯಾಗುತ್ತದೆ ಎಂದು ಭಾವಿಸಿ ಮೃತನ ತಾಯಿ ನಾಗಮ್ಮ ತನ್ನ ಮಗನ ಹುಟ್ಟುಹಬ್ಬದ ದಿನದಂದು ಮಗನಿಗೆ ಹೊಸ ಬಟ್ಟೆ ತರಲು ಅಫಜಲಪೂರಕ್ಕೆ ಹೋಗಿರುವ ಸಮಯವನ್ನು ಉಪಯೋಗಿಸಿಕೊಂಡು ಮೃತನನ್ನು ಕರೆದು ನಿನಗೆ ಜಿಲೇಬಿ ಕೊಡಿಸುತ್ತೇನೆ ಬಾ ಎಂದು ನಂಬಿಸಿ ಮಲ್ಲಾಬಾದ ಗ್ರಾಮದ ಹೊರಗೆ ಇರುವ ಹಳ್ಳಕ್ಕೆ ಕರೆದೊಯ್ದು, ಬಾಲಕ ವಿಜಯಕುಮಾರನನ್ನು ಕೆಳಗೆ ಬೀಳಿಸಿ ಆತನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುತ್ತಾನೆ. 
ಈ ಪತ್ತೆ ಕಾರ್ಯವನ್ನು ಮಾನ್ಯ ಎಸ್.ಪಿ.ಸಾಹೇಬರು ಶ್ರೀ ಪ್ರವೀಣ ಮಧುಕರ ಪವಾರವರು ಮತ್ತು ಅಪರ ಎಸ್.ಪಿ.ಸಾಹೇಬರು ಶ್ರೀ ಕಾಶಿನಾಥ ತಳಕೇರಿ ರವರು ಅಫಜಲಪೂರ ಠಾಣೆಯ ಪೊಲೀಸರ ಪತ್ತೆ ಕಾರ್ಯವನ್ನು ಪ್ರಶಂಶಿಸಿರುತ್ತಾರೆ.

GULBARGA DIST REPORTED CRIMES

ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಮೋಸಿನ ಖಾನ ತಂದೆ ಹಮೀದ ಖಾನ ಚಿಂಚೋಳಿವಾಲೆ ಸಾ|| ಹುಸೇನಿ ಗಾರ್ಡನ್ ಎಮ್.ಎಸ್.ಕೆ ಮಿಲ್ ಗುಲಬರ್ಗಾರವರು ನಾನು ಅಸ್ಪಾಕ ಈತನಿಗೆ  13,500/-ರೂಪಾಯಿ ಕೊಟ್ಟಿದ್ದರಿಂದ ಮರಳಿ ಕೊಡುವಂತೆ ಕೇಳಿದಾಗ ಅಸ್ಪಾಕ, ಅಲ್ತಾಫ, ಮುಸ್ತಾಕ ಸಾ|| ಮದಿನಾ ಕಾಲೋನಿ ಗುಲಬರ್ಗಾ ಇವರು ದಿನಾಂಕ 13-06-2012 ರಂದು ಖದೀರ ಚೌಕ ಹತ್ತಿರ ನನಗೆ ಅಸ್ಪಾಕ,ಅಲ್ತಾಫ ಮುಸ್ತಾಕ ರವರು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 42/12 ಕಲಂ 341, 323, 324, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ:ಶ್ರೀ ಅಸ್ಪಾಕ ತಂದೆ ಅಬ್ದುಲ ರಜಾಕ ಸಾ|| ಮದಿನಾ ಕಾಲೋನಿ ಎಮ್.ಎಸ್.ಕೆ ಮಿಲ್ ಗುಲಬರ್ಗಾರವರು ನಾನು ಮೋಸಿನಖಾನ ಈತನಿಂದ 3,500/-ರೂಪಾಯಿ ತೆಗೆದುಕೊಂಡಿದ್ದು,  ಹಣ ಮರಳಿ ಕೊಡುವದು ತಡವಾಗಿರುವದರಿಂದ ಮೋಸಿನ ಖಾನ ತಂದೆ ಹಮೀದ ಖಾನ ಚಿಂಚೋಳಿವಾಲೆ ಈತನು ತನ್ನ ಜೊತೆಯಲ್ಲಿ ಮಜ್ಜಿದ ಖಾನ, ಆಸೀಪ ಹುಸೇನ ಹಾಗು ತಜಮಲ್ ಹುಸೇನ ಎಲ್ಲರನ್ನು ಕರೆದುಕೊಂಡು ಬಂದು ಎದೆಯ ಮೇಲಿನ ಅಂಗಿ ಹಿಡಿದುಅವಾಚ್ಯವಾಗಿ ಬೈದು, ಹೊಡೆ ಬಡೆ ಮಾಡಿರುತ್ತಾರೆ.ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 43/12 ಕಲಂ 341, 323, 504, 506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:  ಶ್ರೀ ಗುಂಡು @ ಗುಂಡಪ್ಪಾ ತಂದೆ ಉತ್ತಮ ಚುಬನಕರ ಸಾ:ಇಂದಿರಾ ನಗರ ಗುಲಬರ್ಗಾ ನಾನು, ನನ್ನ ಸ್ನೇಹಿತರಾದ ಕಿಟ್ಟು ತಂದೆ ದಿಗಂಬರ, ಮಲ್ಲು ತಂದೆ ದೌಲಪ್ಪಾ, ಮೂರು  ಜನರು ಮತ್ತು ದಿನಾಂಕ:13/06/2012 ರಂದು ಮದ್ಯಾಹ್ನ 1:30 ಗಂಟೆ ಸುಮಾರಿಗೆ ಕಿಟ್ಟು ಇತನ ಮೋಟಾರ ಸೈಕಲ ಮೇಲೆ ಕಾಕಡೇ ಚೌಕ ಹತ್ತಿರ ಇರುವ ಈಜು ಕೊಳದ ಹತ್ತಿರ  ಹೋಗಿ ನಾವು ಈಜಾಡುತ್ತಿದ್ದಾಗ, ಮಲ್ಲು ತಂದೆ ದೌಲಪ್ಪಾ ಕಿಟ್ಟು ತಂದೆ ದಿಗಂಬರ ಇಬ್ಬರೂ ಕೂಡಿ ನನಗೆ ಅಲ್ಲಿಯೇ ಬಿಟ್ಟು ಮೋಟಾರ ಸೈಕಲ ಮೇಲೆ ಹೊರಟು ಹೋದರು, ಮದ್ಯಾಹ್ನ 2:30 ಗಂಟೆಯ ಸುಮಾರಿಗೆ ಈಜು ಕೊಳದ  ಮಾಲಿಕ ನನಗೆ ಇಲ್ಲಿ ಹೊರಗೆ ಬಾ ಸಮಯ ಮುಗಿದಿದೆ ಅಂತಾ ಅನ್ನಲು ನಾನು ಹೊರಗೆ ಈ ವಿಷಯದ ಬಗ್ಗೆ ನಿಜಲಿಂಗಪ್ಪಾನಿಗೆ ಕೇಳಲು, ಅವನು ಜಾತಿ ಎತ್ತಿ ಬೈದು ಅಲ್ಲಿಯೇ ಬಿದ್ದ ಕಬ್ಬಿಣದ ಪೈಪನಿಂದ ತಲೆಯ ಹಿಂದುಗಡೆ ಮತ್ತು ಬೆನ್ನಿಗೆ ಹೊಡೆದು ರಕ್ತ ಗುಪ್ತಗಾಯ ಗೊಳಿಸಿದನು. ಚಾಕುವಿನಿಂದ ನನ್ನ ಎಡಗೈ ಹಸ್ತಕ್ಕೆ ಹೊಡೆದು ರಕ್ತಗಾಯಗೊಳಸಿರುತ್ತಾನೆ. ನಾನು ಚೀರಾಡುತ್ತಿದ್ದಾಗ ಅಲ್ಲಿಯೇ ಈಜಾಡಲು ಬಂದ ನನಗೆ ಪರಿಚಯದವರಾದ ಚೆನ್ನಪ್ಪಾ ತಂದೆ ಸಿದ್ದಣ್ಣಾ ರಾಮಶೇಟ್ಟಿ,  ಮಲ್ಲಿಕಾರ್ಜುನ ತಂದೆ ಕಾಶಿನಾಥ ಅಲ್ಲಪೂರ ಇಬ್ಬರು ಕೂಡಿ ಬೀಡಿಸಲು ಬಂದವರಿಗೆ  ನಿಜಲಿಂಗಪ್ಪಾನ ಹೋಲದಲ್ಲಿ ಕೆಲಸ ಮಾಡುತ್ತಿದ್ದ 6-7 ಜನರು ನಿಮ್ಮದು  ಬಹಳ ಆಗಿದೆ ಅಂತಾ ಬೈಯ್ದು ಚೆನ್ನಪ್ಪಾ ಮತ್ತು ಮಲ್ಲಿಕಾರ್ಜುನ ಇಬ್ಬರಿಗೆ ಬಡಿಗೆಯಿಂದ ಮತ್ತು ಕಲ್ಲಿನಿಂದ ಹೊಡೆದು ರಕ್ತ ಮತ್ತು ಗುಪ್ತ ಗಾಯಗೊಳಿಸಿರುತ್ತಾರೆ , ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 202/2012 ಕಲಂ 143 147 148 324 504 506 ಸಂ 149 ಐ.ಪಿ.ಸಿ ಮತ್ತು 3 (1) (10)  SC/ST  P.A ACT 1989 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.