POLICE BHAVAN KALABURAGI

POLICE BHAVAN KALABURAGI

10 July 2011

GULBARGA DIST REPORTED CRIMES

ಅಪಘಾತ ಪ್ರಕರಣ :
ಮಾಡಬೂಳ ಠಾಣೆ :
ಶ್ರೀಮತಿ ರಮೀತಾಬಾಯಿ ಗಂಡ ಹಣಮಂತ ಚವ್ಹಾಣ ಸ|| ಮಲಘಾಣ ತಾಂಡಾ ರವರ ರವರು ನಾಣು ಮತ್ತು ಮೃತ್ತ ಸುಧಾಕುಮಾರ ತಂದೆ ಶ್ಯಾಮರಾವ ಹಡಪದ ಮತ್ತು ಹಾಗು ಇನ್ನೂ ತಾಂಡಾದ ಕೆಲವು ಜನರು ಭೀಮಾಶಂಕರ ಗುತ್ತೆದಾರ ಇವರ ಹತ್ತಿರ ಕೆಲಸಕ್ಕೆ ಅಂತಾ ಹೋಗಿ ಕೆಲಸ ಮುಗಿಸಿಕೊಂಡು ಟ್ರಾಕ್ಟರ ನಂ: ಕಎ 32 ಟಿ- 5277 ನೇದ್ದರಲ್ಲಿ ಕಲಗುರ್ತಿ ದಾಟಿ ಬರುತ್ತಿರುವಾಗ ಟ್ರಾಕ್ಟರ ಚಾಲಕ ರವಿ ಇತನು ಟ್ರಾಕ್ಟರನ್ನು ಅತೀ ವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿ ಒಮ್ಮಲೇ ಕಟ್ಟ ಮಾಡಿದರಿಂದ ರೊಡಿನ ಎಡ ಬಾಜು ತೆಗ್ಗೆಗೆ ಬಿದ್ದು ಸುಧಾಕುಮಾರ ಇತನ ತೆಲೆಗೆ ಭಾರಿ ರಕ್ತಗಾಯ ಎದೆ ಹೊಟ್ಟೆ ಬೆನ್ನಿಗೆ ಭಾರಿ ಗುಪ್ತಗಾಯ ವಾಗಿ ಸ್ಥಳದಲ್ಲಿ ಮೃತ ಪಟ್ಟಿರುತ್ತಾನೆ ಉಳಿದ ಜನರಿಗೆ ಸಣ್ಣಪುಟ್ಟ ರಕ್ತಗಾಯ ಗುಪ್ತಗಾಯ ವಾಗಿರುತ್ತವೆ. ಟ್ರಾಕ್ಟರ ಚಾಲಕನು ತನ್ನ ವಾಹನವನ್ನು ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಫರಹತಾಬಾದ ಠಾಣೆ
: ಶ್ರೀ ರಾಘವೇಂದ್ರರಾವ ತಂದೆ ಬಲಬೀಮರಾವ ಆಲಬಾಳ ಸಾ:ಲಕ್ಷ್ಮೀ ಚೌಕ ಜೇವರ್ಗಿ ರವರು ನಾನು ಖಾಸಗಿ ಕೆಲಸ ನಿಮಿತ್ಯ ಕಾರ ನಂ: ಕೆಎ 04 ಎಮ್.ಎಫ್ 2562 ನೇದ್ದರಲ್ಲಿ ನನ್ನ ಗೆಳೆಯರೊಂದಿಗೆ ಕಾರಿನಲ್ಲಿ ಗುಲಬರ್ಗಾದ ಕಡೆಯಿಂದ ಜೇವರ್ಗಿಗೆ ಬರುವಾಗ ರಾಷ್ಟ್ರೀಯ ಹೆದ್ದಾರಿಯ ಗೀತಾಂಜಲಿ ಪ್ಯಾಕ್ಟರಿ ಹತ್ತಿರ ಬರುತ್ತಿದ್ದಾಗ ರಾತ್ರಿ 9-15 ರ ಸುಮಾರಿಗೆ ಎದುರುಗಡೆಯಿಂದ ಒಬ್ಬ ಮೊಟಾರ ಮೊಟಾರ ಸೈಕಲ ನಂ: ಕೆಎ 32 ಆರ್ 1485 ನೇದ್ದರ ಚಾಲಕನು ತನ್ನ ಮೊಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರಸ್ತೆಯ ಎಡಬದಿಗೆ ಬಂದು ಕಾರಿಗೆ ಡಿಕ್ಕಿ ಪಡಿಸಿದ್ದರಿಂದ ಸದರಿ ಮೊಟಾರ ಸೈಕಲ ಚಾಲಕನಿಗೆ ಕೈ ಹತ್ತಿರ ಭಾರಿ ರಕ್ತಗಾಯವಾಗಿದ್ದು, ಸದರಿ ಗಾಯಾಳುಗೆ 108 ಅಂಬ್ಯುಲೇನ್ಸ್ ಕರೆಯಿಸಿ ಉಪಚಾರ ಕುರಿತು ಗುಲಬರ್ಗಾಕ್ಕೆ ಕಳುಹಿಸಿ ಕೊಟ್ಟಿರುತ್ತೇವೆ. ಸದರಿ ಮೊಟಾರ ಸೈಕಲ ಸವಾರನ ಹೆಸರು ಮತ್ತು ವಿಳಾಸ ಗೊತ್ತಾಗಿರುವುದಿಲ್ಲ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಮತ್ತು ಮಾನಭಂಗ ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಲಿಂಗರಾಜ್ ತಂದೆ ಬಸಣ್ಣ ಬಿರಾದಾರ್ ಸಾ|| ಶರಣ ನಗರ ಗುಲಬರ್ಗಾ ರವರು ನಾನು ಮತ್ತು ನನ್ನ ಹೆಂಡತಿ ಸರೋಜಾ ಇಬ್ಬರೂ ಸುಪರ ಮಾರ್ಕಟಿಗೆ ಹೋಗಲು ಗೋವಾ ಹೋಟೆಲ್ ಎದುರಿನ ಚೌದರಿ ಹೋಟೆಲ್ ಹತ್ತಿರ ನಿಂತಾಗ, ಆದಿಶಕ್ತಿ ಫೈನಾನ್ಸದಲ್ಲಿ ಕೆಲಸ ಮಾಡುವ ಶರಣು ಹಾಗು ಶಿವಕುಮಾರ ಗೊಟೂರ ಮತ್ತು ಅವರ ಸಂಗಡ 5 ಜನರು ಸೇರಿಕೊಂಡು
ಬಂದು, ನನಗೆ ತಡೆದು ನಿಲ್ಲಿಸಿ ಹಲ್ಲೆ ಮಾಡಿ, ಹೆಂಡತಿ ಸರೋಜಾ ಇವಳಿಗೆ ಶಿವಕುಮಾರ ಈತನು ಜಗ್ಗಾಡಿ ಮಾನಭಂಗ ಮಾಡಿರುತ್ತಾನೆ ಹಾಗು ಅವರ ಸಂಗಡ ಇದ್ದ 5 ಜನರು ಕೈಯಿಂದ ಹೊಟ್ಟೆಗೆ, ಕಾಲಿನಿಂದ ಮೈಗೆ ಒದ್ದು ಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:

ಚೌಕ ಠಾಣೆ :
ಶ್ರೀ ಆಸೀಫ ತಂದೆ ಅಬ್ದುಲ ಖಲಿಮುದ್ದಿನ ವಯಃ 16 ವರ್ಷ ಸಾಃ ಪಾರಜಿ ಕಾಂಪ್ಲೇಕ್ಸ ಮುಸ್ಲಿಂ ಚೌಕ ಗುಲಬರ್ಗಾ ರವರು ನಾನು ಮನೆಯಲ್ಲಿದ್ದಾಗ ರಿಯು @ ರಿಜಾಜ, ಫೈಯಾಜ, ಅಜ್ಜು ನನ್ನ ಮನೆಯೊಳಗೆ ಬಂದು ನಮ್ಮ ಹುಡಗರಿಗೆ ಯಾಕೆ ಹೊಡೆದಿದ್ದಿ ಅಂತ ಸೂಳೆ ಮಗನೆ ಅಂತ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಯತ್ನ ಪ್ರಕರಣ :

ಚೌಕ ಠಾಣೆ : ಕು|| ಮಹಮದ ತಬರೇಝ ತಂದೆ ಮಹಮದ ನಜರೋದ್ದಿನ ಅಡ್ಡೆವಾಲೆ ಸಾ|| ಖೂನಿ ಅಲಾವಾ ಮೋಮಿನಪೂರ ಗುಲಬರ್ಗಾ ರವರು ನನ್ನ ಸ್ನೇಹಿತ ಅನ್ನು @ ಅನ್ವರ ತಂದೆ ಮಹಮದ ಯೂಸುಪ್ ಖುರೇಸಿ ಇತನು ನೀನು ನನ್ನ ಸಂಗಡ ಯಾಕೆ ತಿರುಗಾಡುವದಕ್ಕೆ ಬರುತ್ತಿಲ್ಲ ಅಂತಾ ತಕರಾರು ಮಾಡಿದ್ದು ಈ ಬಗ್ಗೆ ನನ್ನ ಅಣ್ನ ಮತ್ತು ತಂದೆಯವರ ಹತ್ತಿದ್ದ ಹೇಳಿದ್ದು ಅವರೆಲ್ಲರೂ ಅವನಿಗೆ ಬುದ್ದಿವಾದ ಹೇಳಿದ್ದರು . ಪುನಾಃ ಇವತ್ತು ನಾನು ಮತ್ತು ನನ್ನ ಗೆಳೆಯರಾದ ಮಹಮದ ಆರೀಪ್ , ಮಹಮದ ಅಷರ್, ಮತ್ತು ನೂರ ನಾವೇಲ್ಲರೂ ಆಯುಭ ಹೊಟೆಲ್ ಮುಂದೆ ನಿಂತಾಗ ಅನ್ವರ ಇತನು ಬಂದನವೇ ಅವಾಚ್ಯವಾಗಿ ಬೈದು ಎದೆಯ ಮೇಲಿನ ಆಂಗಿ ಹಿಡಿದು ತನ್ನ ಕಿಸೆಯಲ್ಲಿದ್ದ ಚಾಕುವಿನಂದ ಎರಡು ಕೈಗಳಿಗೆ ಹೊಡೆದಿರುತ್ತಾನೆ ಹೊಟ್ಟೆಯಲ್ಲಿ ಹೊಡೆಯುದಕ್ಕೆ ಬಂದಾಗ ನಾನು ತಪ್ಪಿಕೊಂಡಿರುತ್ತೆನೆ ಇಲ್ಲವಾದರೆ ನನ್ನನ್ನು ಕೊಲೆ ಮಾಡುತ್ತಿದನ್ನು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.