POLICE BHAVAN KALABURAGI

POLICE BHAVAN KALABURAGI

24 September 2013

ಅಪಘಾತ ಪ್ರಕರಣ :
ನೆಲೋಗಿ ಠಾಣೆ : ಶ್ರೀ ನಿಂಗಪ್ಪ ತಂದೆ ಶರಣಪ್ಪ ಅಪ್ಪಾಜಿ ರವರ ಮಾಳಪ್ಪ ನಾಯ್ಕೋಡಿ ಇವನ ಪಾನ ಡಬ್ಬಾಗೆ ಬಂದು ನನ್ನ ಮಗನಿಗೆ ಚಾಕಲೇಟ್ ಕೊಡಿಸಿ ಮರಳಿ ನಮ್ಮ ಮನೆಗೆ ಹೊರಟಿದ್ದೇವು. ಆಗ ನಮ್ಮ ಹೊಸ ಊರಿನ ಕಡೆಯಿಂದ ಒಂದು ಟ್ರ್ಯಾಕ್ಟರ್ ನಮ್ಮೂರಿನವರೇದೆಯಾದ ಮಾಳಪ್ಪ ಕೋಳಕೂರ ಇವ ಟ್ರ್ಯಾಕ್ಟರ ಚಾಲಕನಾದ ಸಿದ್ದಪ್ಪ ಯಲಗೋಡ್ ಇತನು ತಾನು ನಡೆಸುತ್ತಿದ್ದ ಟ್ರ್ಯಾಕ್ಟರನ್ನು ಅತಿವೇಗ ಹಾಗೂ ನಿಷ್ಕಳಾಜಿತನದಿಂದ ನಡೆಯಿಸಿಕೊಂಡು ಬಂದವನೇ ನನ್ನ ಹಿಂದೆ ಬರುತ್ತಿದ್ದ ನನ್ನ ಮಗ ಮಲ್ಲೇಶನಿಗೆ ಡಿಕ್ಕಿ ಹೊಡೆಸಿದನು. ಆಗ ನನ್ನ ಮಗ ಕೆಳಗೆ ಬಿದ್ದು ನಡುವಿನ ಟಾಯರ್ ದಲ್ಲಿ ಸಿಕ್ಕು ಬಿದ್ದನು ಆಗ ಅವನಿಗೆ ಬಲಗಡೆ ಮೆಲಕಿಗೆ ಭಾರಿ ಪೆಟ್ಟಾಗಿದ್ದು ಮತ್ತು ಎಡಗಾಲಿನ ಪಾದದ ಹತ್ತಿರ ಗಾಯವಾಗಿದ್ದು ನಂತರ ನನ್ನ ಮಗನಿಗೆ ನೋಡಲಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ನಂತರ ಟ್ರ್ಯಾಕ್ಟರ್ ನಂಬರ ನೋಡಲಾಗಿ ಕೆಎ-32-ಟಿಎ-1642, ಟ್ರ್ಯಾಲಿ ನಂ ಕೆಎ-32-ಟಿಎ-1643 ಅಂತಾ ಇತ್ತು. ಅತಿವೇಗ  ಹಾಗೂ ನಿಷ್ಕಳಾಜಿತನದಿಂದ ನಡೆಯಿಸಿಕೊಂಡು ಬಂದು ನನ್ನ ಮಗನಿಗೆ ಡಿಕ್ಕಿ ಪಡಿಸಿದ ಟ್ರ್ಯಾಕ್ಟರ್ ಚಾಲಕನ ಮೇಲೆ ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಕಮಲಾಪೂರ ಠಾಣೆ : ಶ್ರೀಮತಿ ಲಲಿತಾಬಾಯಿ ಗಂಡ ರವೀಂದ್ರ ಮೋಗಾ ಸಾ:ಕಿಣ್ಣಿ ಸಡಕ ರವರು ಗಂಡ ಮತ್ತು ಅತ್ತೆ ಪಾರ್ವತಿ ಹಾಗೂ ಮಾವ ಶರಣಪ್ಪ ಮತ್ತು ನನ್ನ ಮಕ್ಕಳು ಕೂಡಿಕೊಂಡು ನಮ್ಮ ಮನೆಯಲ್ಲಿ ಊಟಕ್ಕೆ ಕುಳಿತುಕೊಂಡಿದ್ದಾಗ ಶಿವಕುಮಾರ ತಂದೆ ಮಾರುತಿ ಹೋಳ್ಕರ್ ಈತನು ನಮ್ಮ ಮನೆಯ ಮುಂದೆ ಬಂದು ನಿಂತುಕೊಂಡು ತನ್ನ ಮೊಬೈಲದಲ್ಲಿ ಜೋರಾಗಿ ಹಾಡುಗಳನ್ನು ಹಚ್ಚಿ ನನ್ನ ಮಗಳಾದ ರೇಷ್ಮಾ ಇವಳ ಹೆಸರು ಹಿಡಿದು ಕೂಗೂತ್ತಾ ನಮ್ಮ ಮನೆಯ ಕಡೆಗೆ ಹಳ್ಳಗಳನ್ನು ಹೊಡೆಯುತ್ತಿದ್ದಾಗ ನಾನು ನಮ್ಮ ಮನೆಯಿಂದ ಹೊರಗೆ ಬಂದು ರಸ್ತೆಯಲ್ಲಿ ನಿಂತಿದ್ದ ಶಿವಕುಮಾರನಿಗೆ ಅಲ್ಲಿಂದ ಹೋಗಲು ಹೇಳುತ್ತಿದ್ದಾಗ ಶಿವಕುಮಾರನು ನನಗೆ ಈ ರಸ್ತೆ ನಿಮ್ಮದಲ್ಲ, ನಾನು ಇಲ್ಲಿಯೇ ನಿಲ್ಲುತ್ತೇನೆ ಅಂತಾ ಜೋರ ದ್ವನಿಯಲ್ಲಿ ಮಾತನಾಡುತ್ತಿದ್ದಾಗ ನಾನು ಅವನು ನಿಂತಲ್ಲಿಗೆ ಹೋಗಿ ನನ್ನ ಮಗಳಿಗೆ ವಿನಾಕಾರಣ ಯಾಕೆ ತೊಂದರೆ ನೀಡುತ್ತಿದ್ದೀ ಇದು ಸರಿ ಅಲ್ಲ ಅಂತಾ ಹೇಳಿ ಅಲ್ಲಿಂದ ನನ್ನ ಮನೆಯ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ ಅಷ್ಟರಲ್ಲಿ ನಮ್ಮ ಬಾಯಿ ಸಪ್ಪಳ ಕೇಳಿ ಶಿವಕುಮಾರ ತಂದೆ ಮಾರುತಿ ಹೋಳ್ಕರ್ ಇವರೊಂದಿಗೆ ಇನ್ನು ಕೆಲವರು ಗುಂಪು ಕಟ್ಟಿಕೊಂಡು ಬಂದವರೇ ನನಗೆ ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು  ನಿನ್ನ ಮಗಳಿಗೆ ಶಿವಕುಮಾರನಿಗೆ ಕೊಟ್ಟು ಮದುವೆ ಮಾಡು ಅಂತಾ ಹೇಳಿದರೂ ಕೇಳುತ್ತಿಲ್ಲ, ನಿನಗೆ ಸೊಕ್ಕು ಬಹಳ ಬಂದಿದೆ ಅಂತಾ ಕಲ್ಲಿನಿಂದ ಮತ್ತು ಚಾಕುವಿನಿಂದ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದುರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರೋಜಾ ಠಾಣೆ : ಶ್ರೀ ಪ್ರಭು ತಂದೆ ಭೀಮರಾವ ಮರಗುತ್ತಿ ಸಾ: ಶಿವಾಜಿ ನಗರ ಗುಲಬರ್ಗಾ ಇವರು ದಿನಾಂಕ: 23-09-2013 ರಂದು 19:00 ಗಂಟೆ ಸುಮಾರಿಗೆ ಲಾಹೋಟಿ ಪೆಟ್ರೋಲ ಬಂಕ ಹತ್ತಿರ ನಿಂತಾಗ ಇದೇ ವೇಳೆಗೆ ನನಗೆ ಪರಿಚಯದವನಾದ ರಾಮ ನಗರ ನಿವಾಸಿ ಉಮಾಕಾಂತನ ಸಂಬಂದಿ ರಮೇಶ ಎಂಬುವವನು ವಿನಾ ಕಾರಣ ನನ್ನ ಸಂಗಡ ತಕರಾರು ಮಾಡ ಹತ್ತಿದನು ಅದಕ್ಕೆ ನಾನು ಯಾಕೆ ನನ್ನ ಸಂಗಡ ತಕರಾರು ಮಾಡುತ್ತಿದ್ದಿಯಾ ಸುಮ್ಮನೆ ಹೋಗು ಅಂತಾ ಹೇಳಿದಕ್ಕೆ ಸದರಿಯವನು ತನ್ನ ಹತ್ತಿರ ಇದ್ದ ಕಬ್ಬಿಣದ ಪಾನಾದಿಂದ ನನ್ನ ತಲೆಯ ಹಿಂಬಾಗಕ್ಕೆ ಹೊಡೆದು ಭಾರಿ ರಕ್ತಗಾಯ ಪಡೆಸಿ ಅವಾಚ್ಯ ಶಬ್ದಗಳಿಂದ ಬೈದು ರಕ್ತಗಾಯ ಗುಪ್ತ ಗಾಯಪಡಿಸಿ ನಂತರ ತನ್ನ ಆಟೋದಲ್ಲಿ ಹಾಕಿಕೊಂಡು ಸುಲ್ತಾನಪೂರ ರಿಂಗ ರೋಡಿನ ಕಡೆಗೆ ತೆಗೆದುಕೊಂಡು ಹೋಗಿ ರೋಡಿನ ಪಕ್ಕದಲ್ಲಿ ನಾಲಿಯಲ್ಲಿ ಹಾಕಿ ಹೋಗಿದ್ದು ಇರುತ್ತದೆ  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.