POLICE BHAVAN KALABURAGI

POLICE BHAVAN KALABURAGI

31 March 2013

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಫರತಬಾದ ಪೊಲೀಸ ಠಾಣೆ: ಶ್ರೀ, ಬಾಪುಗೌಡ ತಂದೆ ಶಾಂತಗೌಡ ಪೊಲೀಸ್ ಪಾಟೀಲ ಸಾ: ದಂಡ ಸೊಲಾಪೂರ ತಾ: ಸುರಪೂರ ಜಿ: ಯಾದಗಿರ ರವರು ನಾನು ಜೇವರ್ಗಿ ತಾಲೂಕಿನ ನಾಗರಹಳ್ಳಿ ಗ್ರಾಮದ ಮೈಹಿಬೂಬ ಶೇಖ ಇವರ ಮೋಟಾರ ಸೈಕಲ ಖರೀಸಿದ್ದು, ಮೋಟಾರ ಸೈಕಲ್ ಕಾಗದ ಪತ್ರಗಳನ್ನು ನನ್ನ ಹೆಸರಿಗೆ ಮಾಡಿಕೊಳ್ಳುವ ಸಲುವಾಗಿ ಗುಲಬರ್ಗಾಕ್ಕೆ ದಿನಾಂಕ:30-3-2013 ರಂದು ಬೆಳಿಗ್ಗೆ 7-00 ಗಂಟೆಗೆ ನಮ್ಮೂರಿನಿಂದ ನಾಗರಹಳ್ಳಿ ಗ್ರಾಮಕ್ಕೆ ಬಂದು ಮೈಹಿಬೂಬ ಇತನಿಗೆ ನನ್ನ ಸ್ವಂತ ಮೊಟಾರ ಸೈಕಲ ನಂ: ಕೆಎ-33 ಕೆ-4094 ನೇದ್ದರ ಮೇಲೆ ಗುಲಬರ್ಗಾಕ್ಕೆ ಕರೆದುಕೊಂಡು ಬಂದು ಕೆಲಸ ಮುಗಿಸಿಕೊಂಡು ಮರಳಿ 4-30 ಪಿ,ಎಮಕ್ಕೆ ನಮ್ಮೂರಿಗೆ ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ನಂ.218 ರಸ್ತೆಯ ಗಣೇಶ ಪೆಟ್ರೋಲ ಪಂಪ ದಾಟಿ ಸ್ವಲ್ಪ ಮುಂದೆ ಹೋಗುತ್ತಿರುವಾಗ ಎದುರಿನಿಂದ ಜೇವರ್ಗಿ ಕಡೆಯಿಂದ ಲಾರಿ ನಂ ಕೆಎ-32 ಎ-9380  ನೇದ್ದರ ಚಾಲಕ ಸುಭಾಷ ಇತನು  ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೊಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದರಿಂದ ನನಗೆ ಮತ್ತು ಮೊಟಾರ ಸೈಕಲ ನಡೆಸುತ್ತಿದ್ದ ಮೈಹಿಬೂಬು ಶೇಖ ಇತನಿಗೆ ಭಾರಿ ರಕ್ತಗಾಯಗಳಾಗಿರುತ್ತವೆ ಲಾರಿ ಚಾಲಕನು ತನ್ನ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:40/2013 ಕಲಂ, 279, 337, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ, ಮಹಾದೇವಪ್ಪ ತಂದೆ ಅಣಪ್ಪಾ ಟೆಂಗಳಿ ಬೇಲೂರ ಗ್ರಾಮ ತಾ||ಜಿ|| ಗುಲಬರ್ಗಾ ರವರು ನಾನು ದಿನಾಂಕ:30-03-13 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಗುಲಬರ್ಗಾ-ಹುಮನಾಬಾದ ರೋಡಿಗೆ ಇರುವ ತಾವರಗೇರಾ ಕ್ರಾಸಿನ ಸಮೀಪ ಇರುವ ಬಸವಣ್ಣ ದೇವರ  ಕಮಾನದ ಹತ್ತಿರ ಗುಲಬರ್ಗಾ  ರೋಡ ಕಡೆಯಿಂದ ಲಾರಿ ನಂಬರ ಕೆಎ 32 ಎ 0596 ಚಾಲಕನು ತನ್ನ ಲಾರಿಯನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ನಡೆಸಿಕೊಂಡು  ರೋಡಿನ ಮಧ್ಯದಲ್ಲಿ  ನಡೆಸುತ್ತಾ ಹೊರಟಾಗ ಜೀಪ ನಂಬರ ಕೆಎ 28 ಎಂ 5005 ಚಾಲಕ ವಿಠಲ ತಂದೆ ಶರಣಪ್ಪ ಗೊಲ್ಲರ ಇತನು ತನ್ನ ಜೀಪ ಅತಿವೇಗದಿಂದ  ರೋಡಿನ ಮಧ್ಯದಲ್ಲಿ ನಡೆಯಿಸಿದ್ದರಿಂದ ಲಾರಿ  ಮತ್ತು ಜೀಪಿನ  ಚಾಲಕರು ನಡುವೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದರಿಂದ ಜೀಪ ಚಾಲಕ ಜೀಪಿನಲ್ಲಿ ಸಿಕ್ಕಿ ಬಿದ್ದು ಭಾರಿ ಗಾಯಹೊಂದಿರುತ್ತಾನೆ. ಇದನ್ನು ನೋಡಿ  ಲಾರಿ ಚಾಲಕನು ತನ್ನ  ಲಾರಿ ಬಿಟ್ಟು  ಓಡಿ ಹೋಗಿರುತ್ತಾನೆ. ಹಿಂದೆ ಬರುತ್ತಿರುವ ಕಾರಿನವರು ತಮ್ಮ ಕಾರಿನಲ್ಲಿ ನನಗೆ ಮತ್ತು ರವಿಕುಮಾರ ಇವರಿಬ್ಬರು ನೋಡಿ ಜೀಪಿನಲ್ಲಿದ್ದ ಸಿಕ್ಕಿ ಬಿದ್ದ ವಿಠಲನಿಗೆ ಹೊರೆಗೆ ತೆಗೆದು ಅವನಿಗೆ ಉಪಚಾರ ಕುರಿತು  108 ಅಂಬುಲೈನ್ಸದಲ್ಲಿ  ಹಾಕಿಕೊಂಡು ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ತರುವ ಕಾಲಕ್ಕೆ ಹುಮನಾಬಾದ ರಿಂಗ ರೋಡಿನ ಹತ್ತಿರ ರಾತ್ರಿ 9-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ಇಬ್ಬರು ವಾಹನ ಚಾಲಕರು ತಮ್ಮ ವಾಹನಗಳನ್ನು ಅತಿವೇಗದಿಂದ ಮತ್ತು ಅಲಕ್ಷತನದಿಂದ ಚಲಾಯಿಸಿದ್ದರಿಂದ ಮುಖಾ ಮುಖಿಯಾಗಿ ಡಿಕ್ಕಿ ಪಡಿಸಿಕೊಂಡಿದ್ದರಿಂದ ಈ ಘಟನೆ ಜರೂಗಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ: 164/2013 ಕಲಂ 279, 304 (ಎ) ಐಪಿಸಿ ಸಂಗಡ 187 ಐ.ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.

30 March 2013

GULBARGA DISTRICT



:: ಎಮ್.ಬಿ ನಗರ ವೃತ್ತ ಪೊಲೀಸರ ಕಾರ್ಯಾಚರಣೆ ::
:: ಶರಣಬಸಪ್ಪ ಚಕ್ಕಿ ಪೊಲೀಸ ಕಾನ್ಸಟೇಬಲ್ ಕೊಲೆಗಾರರ ಬಂಧನ ::

          ದಿನಾಂಕ:23-24/10/2012 ರಂದು ರಾತ್ರಿ ವೇಳೆಯಲ್ಲಿ ಅಬಕಾರಿ ಮತ್ತು ಲಾಟರಿ ನಿಷೇದ ದಳದ ವಿಶೇಷ ಪೊಲೀಸ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶರಣಬಸಪ್ಪ ಚಕ್ಕಿ ಪೊಲೀಸ ಕಾನ್ಸಟೇಬಲ್ ಇವನನ್ನು ಬ್ರಹ್ಮಪುರ ಪೊಲಿಸ ಠಾಣೆಯ ಹಿಂಭಾಗದಲ್ಲಿ ಮಾರಾಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಗಂಭಿರತೆ ಮತ್ತು ಪತ್ತೆ ಮಾಡಲು ಶ್ರೀ ಎನ್.ಸತೀಶಕುಮಾರ ಐಪಿಎಸ್ ಜಿಲ್ಲಾ ಪೊಲೀಸ ಅಧೀಕ್ಷಕರು ಗುಲಬರ್ಗಾರವರು ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಈ ತನಿಖಾ ತಂಡದಲ್ಲಿ ಶ್ರೀ ಎಸ್.ಅಸ್ಲಂ ಭಾಷ ಸಿಪಿಐ ಎಂ.ಬಿ ನಗರ ವೃತ್ತ ಗುಲಬರ್ಗಾ, ಶ್ರೀ ಶರಣಬಸವೇಶ್ವರ ಭಜಂತ್ರಿ ಪಿಐ ಬ್ರಹ್ಮಪುರ ಪೊಲೀಸ ಠಾಣೆ, ಶ್ರೀ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಎಂ.ಬಿ ನಗರ ಠಾಣೆ, ಶ್ರೀ ಗೋಪಾಲ ರಾಠೋಡ ಪಿ.ಎಸ್.ಐ ವಿಶ್ವವಿದ್ಯಾಲಯ ಪೊಲೀಸ ಠಾಣೆ ಹಾಗೂ ಸಿಬ್ಬಂದಿಯವರಾದ ಮಾರುತಿ ಎ.ಎಸ್.ಐ, ವೇದರತ್ನಂ, ಶಿವಪ್ಪ ಕಮಾಂಡೋ, ಪ್ರಭಾಕರ, ಬಲರಾಮ, ಅರ್ಜುನ, ಮಸೂದ, ಶ್ರೀನಿವಾಸರೆಡ್ಡಿ, ಸಿದ್ರಾಮಯ್ಯಸ್ವಾಮಿ, ಗಂಗಾಧರ ಸ್ವಾಮಿ, ಶಿವಶರಣಪ್ಪ, ಮಶಾಕ, ಅಶೋಕ, ರಾಜಕುಮಾರ, ಸುಭಾಷ, ವೀರಶೇಟ್ಟಿ ರವರು ಕಾರ್ಯಚರಣೆ ನಡೆಸಿದ್ದು ರಹಸ್ಯವಾಗಿದ್ದ ಈ ಕೊಲೆ ಪ್ರಕರಣವನ್ನು ಭೇದಿಸಿ ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿತರಾದ        1) ಲಕ್ಷ್ಮಣ ತಂದೆ ಮಲ್ಲಪ್ಪ ಇಂಡಿ ಸಾಃ ಕರಜಗಿ ತಾಃ ಅಕ್ಕಲಕೊಟ, 2) ಶಿವಪ್ಪಾ ತಂದೆ ಗುರುಶಾಂತಪ್ಪಾ ಇಂಡಿ ಸಾಃ ಗುಲಬರ್ಗಾ, 3)  ನಾಗರಾಜ @ ನಾಗಪ್ಪಾ ಇಂಡಿ, 4)  ಚನ್ನಮಲ್ಲಪ್ಪ ತಂದೆ ಶಿವಶರಣಪ್ಪ ಕಿರಣಗಿ ಸಾಃ ಗುಲಬರ್ಗಾ ಇವರನ್ನು ಗುಲಬರ್ಗಾ ಮತ್ತು ಅಕ್ಕಲಕೊಟ ತಾಲೂಕಿನ ಕರಜಗಿ ಗ್ರಾಮ ಕಡೆ ದಾಳಿ ಮಾಡಿ ದಸ್ತಗಿರಿ ಮಾಡಿರುತ್ತಾರೆ.
          ಈ ಕೊಲೆಗೆ ಕಾರಣ ಕೊಲೆಯಾದ ಶರಣಬಸಪ್ಪ ಚಕ್ಕಿ ಪೊಲಿಸ ಕಾನ್ಸಟೇಬಲ್ ಇವನು 2001 ನೇ ಸಾಲಿನಲ್ಲಿ ಮಂಜುಳಾ ಸಾಃಸೇಡಂ ಎಂಬುವವಳೊಂದಿಗೆ ವಿವಾಹವಾಗಿದ್ದು, ತದನಂತರ 2003 ನೇ ಇಸವಿಯಲ್ಲಿ ತನ್ನ ಸೊದರ ಮಾವನಾದ ಮಲ್ಲಪ್ಪ ಇಂಡಿ ಮಗಳಾದ ಕವಿತಾಳೊಂದಿಗೆ ಗುಡ್ಡಾಪುರ ಗ್ರಾಮದ ಧಾನಮ್ಮ ದೇವಸ್ಥಾನದಲ್ಲಿ 2 ನೇ ಮದುವೆಯಾಗಿದ್ದು, 2 ತಿಂಗಳ ಕಾಲ ಕವಿತಾಳೊಂದಿಗೆ ಸಂಸಾರ ಮಾಡಿ ನಂತರ ಒಬ್ಬರಿಗೊಬ್ಬರಿಗೆ ಕಲಹ ಉಂಟಾಗಿ ತನ್ನ ತವರು ಮನೆಗೆ ಹೋಗಿದ್ದು, ನಂತರ ಅವಳು, ಕವಿತಾಳ ತಂದೆ ಹಾಗೂ ಕರಜಗಿ ಗ್ರಾಮದವರು ಹಲವಾರು ಸಲ ಶರಣಬಸಪ್ಪ ಚಕ್ಕಿ ಮತ್ತು ಅವನ ತಾಯಿ ಇತರರೊಂದಿಗೆ ಮಾತುಕತೆ ಮಾಡಿ ಕವಿತಾಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿ ಹೇಳಿದರು ಸಹಿತ ಶರಣಬಸಪ್ಪ ಚಕ್ಕಿ ಕವಿತಾಳನ್ನು ಕರೆದುಕೊಂಡಿರುವದಿಲ್ಲ. ಇದೇ ದ್ವೇಷವನ್ನು ಸಾಧಿಸುತ್ತಾ ಮಲ್ಲಪ್ಪ ಇಂಡಿ ಇತನು ತನ್ನ ಮನೆಯ ಸದಸ್ಯರೊಂದಿಗೆ ಈ ವಿಷಯವನ್ನು ಚರ್ಚಿಸುತ್ತಾ ನನ್ನ ಮಗಳ ಜೀವನ ಹಾಳು ಮಾಡಿ ಮೊಸ ಮಾಡಿ ಮದುವೆ ಮಾಡಿಕೊಂಡು ಮೊದಲನೇಯ ಹೆಂಡತಿಯನ್ನು ಬಿಟ್ಟು ತನ್ನ ಮಗಳನ್ನು ಇಟ್ಟುಕೊಂಡು ಸಂಸಾರ ಮಾಡಿಕೊಂಡು ಹೋಗುತ್ತೇನೆ ಅಂತಾ ಹೇಳಿ ಮೊಸ ಮಾಡಿರುತ್ತಾನೆ. ಇದಕ್ಕೆ ಹೇಗಾದರೂ ಮಾಡಿ ಪ್ರತಿಕಾರ ತೀರಿಸಿಕೊಳ್ಳಬೇಕು ಎಂದು ದ್ವೇಷ ಸಾಧಿಸುತ್ತಾ ಬಂದು ಮಲ್ಲಪ್ಪ ಇಂಡಿ ಮತ್ತು ಇತನ ಅಣ್ಣನಾದ ಶಿವಪ್ಪ ಇಂಡಿ, ಅಣ್ಣನ  ಮಗನಾದ ನಾಗರಾಜ @ ನಾಗಪ್ಪ ಇಂಡಿ ಮತ್ತು ಶರಣಬಸಪ್ಪ ಚಕ್ಕಿಯ ಆತ್ಮಿಯ ಗೆಳೆಯನಾದ ಚನ್ನಮಲ್ಲಪ್ಪ ಇವನನ್ನು ಸೇರಿಸಿಕೊಂಡು ಮಲ್ಲಪ್ಪಾ ತಂದೆ ಗುರುಶಾಂತಪ್ಪಾ ಇಂಡಿ, ಶಿವಪ್ಪಾ ತಂದೆ ಗುರುಶಾಂತಪ್ಪಾ ಇಂಡಿ, ನಾಗರಾಜ @ ನಾಗಪ್ಪಾ ಇಂಡಿ ಇವರು ಅಪರಾಧಿಕ ಒಳ ಸಂಚನ್ನು ರಚಿಸಿ ಮಲ್ಲಪ್ಪ ಇಂಡಿ ಮಗನಾದ ಲಕ್ಷ್ಮಣ ಇಂಡಿಯು ಇವರ ಮಾರ್ಗದರ್ಶನ ಮತ್ತು ಸೂಚನೆಯಂತೆ ಹಾಗು ಸಹಾಯದೊಂದಿಗೆ ಶರಣಬಸಪ್ಪ ಚಕ್ಕಿಯನ್ನು ಮಾರಕಾಸ್ತ್ರದಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುತ್ತಾನೆ.           ನಿಗೂಢವಾಗಿದ್ದ ಈ ಕೊಲೆ ರಹಸ್ಯ ಮತ್ತು ಆರೋಪಿತರನ್ನು ಮೇಲ್ಕಂಡ ತನಿಖಾ ತಂಡವು ಬೇಧಿಸುವಲ್ಲಿ ಮತ್ತು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ತನಿಖಾ ತಂಡವು ಶ್ರೀ ಎನ್.ಸತೀಶಕುಮಾರ ಐಪಿಎಸ್ ಜಿಲ್ಲಾ ಪೊಲೀಸ ಅಧೀಕ್ಷಕರು, ಶ್ರೀ ಕಾಶಿನಾಥ ತಳಕೇರಿ ಅಪರ ಎಸ್.ಪಿ, ಶ್ರೀ ತಿಮ್ಮಪ್ಪ ಡಿ.ಎಸ್.ಪಿ ಗ್ರಾಮಿಣ, ಶ್ರೀ ಎ.ಡಿ ಬಸಣ್ಣನವರ ಡಿ.ಎಸ್.ಪಿ (ಬಿ) ಉಪವಿಭಾಗ ಇವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪತ್ತೆ ಮಾಡಲಾಗಿದೆ.  

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀಮತಿ ಗಂಗೂಬಾಯಿ ಗಂಡ ಚಂದ್ರಕಾಂತ ಟೆಳ್ಳೆ ಸಾ|| ಬೆಣ್ಣೆಶಿರೂರ ರವರು ದಿನಾಂಕ:27-03-2013 ರಂದು 23-00  ಗಂಟೆ ಸುಮಾರಿಗೆ ನಮಗೆ  ಮತ್ತು ಲಕ್ಷ್ಮಣ ಚವ್ಹಾಣ ಇಬ್ಬರ ಮಧ್ಯ ಜಗಳವಾಗಿದ್ದು, ನಂತರ 23-30 ಗಂಟೆಗೆ ಲಕ್ಷ್ಮಣ ತಂದೆ ಹೊನ್ನು ಚವ್ಹಾಣ ಸಾ|| ಮಾಡಿಯಾಳ ತಾಂಡಾ, ರಾಜಶೇಖರ ತಂದೆ ಚಂದ್ರಶಾ ಉಪ್ಪಿನ ಸಾ|| ಮಾಡಿಯಾಳಸುನೀಲ ತಂದೆ ರಾಜಶೇಖರ ಉಪ್ಪಿನ ಸಾ|| ಮಾಡಿಯಾಳಅಶೋಕ ತಂದೆ ಹಣಮಂತ ಕೊಂಡಕುಳೆ ಸಾ|| ಮಾಡಿಯಾಳ ನಿರ್ಮಲಾ ಗಂಡ ರಾಜಶೇಖರ ಉಪ್ಪಿನ ಸಾ|| ಮಾಡಿಯಾಳ ಇವರೆಲ್ಲರೂ ದತ್ತಾ ತಂದೆ ತುಕಾರಾಮ ಬಂಡಗಾರಅನ್ನಪೂರ್ಣ ಗಂಡ ದತ್ತಾ ಬಂಡಗಾರ ಮತ್ತು ಭೀಮರಾಯ ತಂದೆ ದತ್ತಾ ಬಂಡಗಾರ  ಇವರ ಪ್ರಚೋದನೆಯಿಂದ ಎಲ್ಲೂರ ನಮ್ಮ ತೋಟದ ಮನೆಯ ಮುಂದೆ ಬಂದು ಅಚಾಚ್ಯ ಶಬ್ದಗಳಿಂದ ಬೈದು ಅವಮಾನಿಸಿ ನನ್ನ ಗಂಡ ಮತ್ತು ಮಕ್ಕಳಿಗೆ ಹೊಡೆ ಬಡೆ ಮಾಡಿ ಸಾದಾ ಮತ್ತು ಗುಪ್ತಗಾಯಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:25/2013 ಕಲಂ, 143, 147, 323, 341, 447, 109, 354, 504, 506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ  ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಮಹ್ಮದ ಆಸೀಫ ತಂದೆ ಅಬ್ದುಲ ರಹೀಮ ಉ:ಜೆಪಿ ಕಂಪನಿಯಲ್ಲಿ ಡ್ರಾಪಮೇನ ಕೆಲಸ ಸಾ:ಮಜೀದ ಚೌಕ ಶಹಾಬಾದ ರವರು ನಾನು ದಿನಾಂಕ:29/03/2013 ರಂದು ಬೆಳಿಗ್ಗೆ 10.30 ಗಂಟೆಗೆ ಸುಮಾರಿಗೆ ನಾನು ರೇಲ್ವೆ ಸ್ಟೇಶನದಿಂದ ಮೊಟಾರ ಸೈಕಲ್  ನಂ.ಕೆಎ-49 ಇ-007 ನೇದ್ದರ ಮೇಲೆ ಮನೆ ಕಡೆಗೆ ಬರುತ್ತಿರುವಾಗ ಶಹಾಬಾದದ ಸರಕಾರಿ ಅಸ್ಪತ್ರೆ ಎದರುಗಡೆ ಸೈಯ್ಯದ ಜಹೀರ ವ:35 ಸಾ:ಮಜೀದ ಚೌಕ ಶಹಾಬಾದ ಇತನು ಅವಾಚ್ಯ ಶಬ್ದಗಳಿಂದ ಬೈದು ಕೈಮುಷ್ಟಿ ಮಾಡಿ ಮುಖಕ್ಕೆ ಹೊಡೆದನು. ಇನ್ನೊಮ್ಮೆ ನನಗೆ ಸಿಟ್ಟಿನಿಂದ ನೋಡಿದರೆ ಜೀವಸಹಿತ ಬಿಡುವದಿಲ್ಲಾ ಅಂತಾ ಬೇದರಿಕೆ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 45/2013 ಕಲಂ, 341, 323, 324, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ದೌಲಸಾಬ ತಂದೆ ಸೂಫಿಸಾಬ ಮುಲ್ಲಾ ವ:70 ಸಾ:ಬಸವೇಶ್ವರ ಚೌಕ ಹತ್ತಿರ ಶಹಾಬಾದ ರವರು ನಾನು ದಿನಾಂಕ:29/03/2013 ರಂದು ಮಧ್ಯಾಹ್ನ 2.00 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ಶಮ್ಮು ತಂದೆ ಮಹಿಬೂಬ, ಮೌಲನಬಿ ರವರು ಕೂಡಿಕೊಂಡು ಬಂದು ನಮ್ಮ ಅಜ್ಜಿ ನಿನ್ನ ಹತ್ತಿರ ಇಟ್ಟಿರುವ ಹಣ ಕೊಡು ಅಂದನು, ನಾನು ನಿಮ್ಮ ಅಜ್ಜಿಯ ಹಣ ನನ್ನ ಹತ್ತಿರ ಇಲ್ಲಾ ಅಂದಿದ್ದಕ್ಕೆ ಸದರಿಯವರು ಹಣ ಇಲ್ಲಾ ಅಂತಿಯಾ ಅವಾಚ್ಯ ಶಬ್ದಗಳಿಂದ ಬೈದು ಕಟ್ಟಿಗೆಯಿಂದ ತಲೆಗೆ ಹೊಡೆದರು ಮತ್ತು ಕೈಯಿಂದ ಬೆನ್ನಿಗೆ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ:46/2013 ಕಲಂ:323,324,504,506 ಸಂ:34 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀಮತಿ ಮೌಲನಬಿ ಗಂಡ ಮಹಿಬೂಬ ಸಾ:ಮೇಸ್ತ್ರೀ ನಗರ ಶಹಾಬಾದ ರವರು ನಾನು ದಿನಾಂಕ:29/03/2013 ರಂದು ಮಧ್ಯಾಹ್ನ 2.00 ಗಂಟೆ ಸುಮಾರಿಗೆ ನಾನು ಹಾಗೂ ನಮ್ಮ ಅತ್ತೆ ಮಹಿಬೂಬಿ ಮಗನಾದ ಶಮ್ಮು ಕೂಡಿ ದೌಲಸಾಬ ಇತನ ಮನೆಗೆ ಮಾತನಾಡಲು ಹೋದಾಗ, ದೌಲಸಾಬ ಇತನು ನಮ್ಮ ಮನೆಗೆ ಯಾಕೆ ಬಂದಿದ್ದಿರಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯಿಂದ ನಮ್ಮ ಅತ್ತೆ ಮಹಿಬೂಬ ಇವಳ ಎಡಕಣ್ಣಿನ ಪಕ್ಕಕ್ಕೆ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 47/2013 ಕಲಂ:323,324,504 ಐಪಿಸಿ   ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ಶ್ರೀ, ನವಾಬ ತಂದೆ ಸೈಯ್ಯದಸಾಬ ಉ:ಲಾರಿ ಕ್ಲಿನರ್‌  ಸಾ:ಮನೆ ನಂ. 80 ಜಬ್ಬಾರ ಬಿಲ್ಡಿಂಗ್‌ 4ನೇ ಬ್ಲಾಕ್‌ 8ನೇ ಕ್ರಾಸ್‌ ಜಯನಗರ ಬೆಂಗಳೂರ ರವರು ನಾನು ದಿನಾಂಕ:28-03-2013 ರಂದು ರಾತ್ರಿ 8:30 ಗಂಟೆಯ ಸುಮಾರಿಗೆ ನಮ್ಮ ಬಿಜಿಟಿ ಕಂಪನಿ ನೆಹರು ಗಂಜ ಗುಲಬರ್ಗಾದಿಂದ ಬೆಂಗಳೂರಿಗೆ ಲಾರಿ ನಂ. ಕೆಎ 01 ಎ-2448 ನೇದ್ದರಲ್ಲಿ  ಹೊರಟಿದ್ದು, ಲಾರಿಯನ್ನು ರಾಜೇಂದ್ರ ಇತನು ಚಲಾಯಿಸುತ್ತಿದ್ದನು. ರಾತ್ರಿ 9:30 ಗಂಟೆಯ ಸುಮಾರಿಗೆ ಫರಹತಾಬಾದ ಕ್ರಾಸ್‌ ಹತ್ತಿರ ಹೊಗುತ್ತಿರುವಾಗ ಲಾರಿ ಚಾಲಕ ಲಾರಿಯನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿ ಒಮ್ಮೇಲೆ ಬ್ರೆಕ್‌ ಹಾಕಿದ್ದರಿಂದ ಹಿಂದಿನಿಂದ ಒಂದು ಪಿಕಪ್ ಗಾಡಿ ಚಾಲಕನು ತನ್ನ ಪಿಕ್ ಅಪ್ ವಾಹನವನ್ನು ಅತಿವೇಗ ಮತ್ತು ಆಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ  ಲಾರಿಯ ಹಿಂದಗಡೆ ಡಿಕ್ಕಿ ಪಡಿಸಿದನು. ನಮಗೆ ಮತ್ತು ನಮ್ಮ ಲಾರಿಯ ಚಾಲಕನಿಗೆ ಯಾವುದೆ ಗಾಯ ವಗೈರೆ ಆಗಿರುವದಿಲ್ಲ. ಆದರೆ, ಪಿಕ್ ಅಪ್ ಚಾಲಕ ಮಹ್ಮದ ಮಜೀದ ಸಾ:ಜಹೀರಾಬಾದ ಆತನಿಗೆ ಹಣೆಯ ಮೇಲೆ ಮತ್ತು ಗದ್ದಕ್ಕೆ ಬಾರಿ ಮತ್ತು ಸಾದಾ, ರಕ್ತಗಾಯವಾಗಿರುತ್ತದೆ. ಪಿಕ್ ಅಪ್ ನಂಬರ ನೊಡಲಾಗಿ ಹೊಸ ಪಿಕ್ ಅಪ್ ವಾಹನವಿದ್ದು ಅದಕ್ಕೆ ನಂಬರ ಇದ್ದಿರುವದಿಲ್ಲ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 38/2013 ಕಲಂ, 279, 337, 338 ಐಪಿಸಿ ಸಂಗಡ 187 ಐ,ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ದೇವಿಂದ್ರಪ್ಪ ತಂದೆ ಧೂಳಪ್ಪ ಪೂಜಾರಿ ವಯಾ||55 ಸಾ|| ಭೀಮಳ್ಳಿ ರವರು ನಮ್ಮ ಅಣ್ಣ ತಮ್ಮಕ್ಕಿಯ ಮಗಳಾದ ಪ್ರಭಾವತಿ ಇವಳು ತಮ್ಮ ಮನೆಯ ಎದುರಿಗೆ ಇರುವ ತಿಪ್ಪೆ ಜಾಗೆಯಲ್ಲಿ ದಿನಾಂಕ 29-03-13 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ  ಫಿರ್ಯಾದಿ ಕಸ ಚೆಲ್ಲುಲ್ಲು ಹೋದಾಗ ಸಾತಪ್ಪ ತಂದೆ ತಿಪ್ಪಣಾ ಸಂಗಡ ಇನ್ನೂ 4 ಜನರು ನಮ್ಮ ಜಾಗದಲ್ಲಿ ಯಾಕೇ ಕಸ ಚೆಲ್ಲುತ್ತೀ ಅಂತಾ ಅವಾಚ್ಯ ಬೈಯ್ಯುತ್ತಿದ್ದಾಗ ನಾನು ಮತ್ತು ನನ್ನ ಮಗ ರವಿ,  ವಿಶ್ವನಾಥ ಕೇಳಲು ಹೋದಾಗ ರಾಡಿನಿಂದ, ಕಲ್ಲಿನಿಂದ, ಕೈಯಿಂದ ಕಾಲಿನಿಂದ ಒದ್ದು ರಕ್ತಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 159/2013 ಕಲಂ 143, 147, 148, 504, 323, 324, 506 (2) ಸಂಗಡ 149 ಐಪಿಸಿ   ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ಶ್ರೀ ತಿಪ್ಪಣ್ಣಾ ತಂದೆ ಪೀರಪ್ಪ ಪೂಜಾರಿ ಸಾ|| ಭೀಮಳ್ಳಿ ರವರ  ನಮ್ಮ ಮನೆ ಎದುರು ಇರುವ ತಿಪ್ಪೆ ಜಾಗದಲ್ಲಿ  ಪ್ರಭಾವತಿ ಇವಳಿಗೆ ಇಲ್ಲಿ ಯ್ಯಾಕೆ ಕಸ ಚೆಲ್ಲುತ್ತಿ ಅಂತಾ ಕೇಳಿದ್ದಕ್ಕೆ ರಾಜಪ್ಪ ತಂದೆ ಮಹಾದೇವಪ್ಪ ಸಮಗಡ ಇನ್ನೂ 5 ಜನರೂ ನಮ್ಮ ತಿಪ್ಪೆ ಜಾಗೆಯಲ್ಲಿ ಕಸ ಹಾಕಬೇಡಾ ಅನ್ನುವವರು ನೀವ್ಯಾರು ಅಂತಾ ಜಗಳಾ ತೆಗೆದು ಅವಾಚ್ಯ ಬೈದು ನನಗೆ ಮತ್ತು ನನ್ನ ಮಕ್ಕಳಾದ ಸಾತಪ್ಪ ಪೀರಪ್ಪ ಅಣ್ಣೆಪ್ಪ  ರವರಿಗೆ ರಾಡಿನಿಂದ, ಕಲ್ಲಿನಿಂದ, ಕೈಯಿಂದ ಹೊಡೆದು  ರಕ್ತಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 160/2013 ಕಲಂ 143, 147, 148, 504, 323, 324, 506 (2) ಸಂಗಡ 149 ಐಪಿಸಿ   ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

29 March 2013

GULBARGA DISTRICT REPORTED CRIMES


ಆಸ್ತಿಗಾಗಿ ತಮ್ಮನ ಕೊಲೆ:
ರೇವೂರ ಪೊಲೀಸ್ ಠಾಣೆ:ಶ್ರೀ, ಬಸವರಾಜ ತಂದೆ ಚನ್ನಬಸಪ್ಪ ಬಣಗಾರ ವ||55 ವರ್ಷ ಜಾ|| ಬಣಗಾರ   || ಎಸ್.ಡಿ.ಎ. ಸಾ|| ಅತನೂರ  ಹಾ|||| ಅಫಜಲಪೂರ  ರವರು ನಾವು 6 ಜನ ಅಣ್ಣ ತಮ್ಮಂದಿರಿದ್ದು 16 ಎಕರೆ ಜಮೀನು ಇರುತ್ತದೆ. ನನ್ನ  4 ನೇ ತಮ್ಮ ಚಂದ್ರಕಾಂತ ತಂದೆ ಚನ್ನಬಸಪ್ಪ ಬಣಗಾರ ವಯಾ||35 ಇತನಿಗೆ ಮದುವೆ ಆಗಿರುವುದಿಲ್ಲ 16 ಎಕರೆ ಜಮೀನಿನಲ್ಲಿ ಎಲ್ಲರು ಪಾಲು ಹಂಚಿಕೊಂಡಿರುತ್ತೆವೆ.  ಶಿವಾನಂದ ಬಣಗಾರನು ವಯಾ|| 35 ವರ್ಷ  ಇತನು ಚಂದ್ರಕಾಂತನ ಪಾಲಿನ ಜಮೀನು ನನಗೆ ಕೊಡು ಅಂತ ಕಳೆದ 4-5 ವರ್ಷಗಳಿಂದ ಜಗಳ ಮಾಡುತ್ತಾ ಬಂದಿರುತ್ತಾನೆ,  ಜಮೀನಿಗೆ ಸಂಬಂಧಿಸಿದಂತೆ ದಿನಾಂಕ: 26-03-2013 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಶಿವಾನಂದ ಇತನು ಚಂದ್ರಕಾಂತ ಇತನ ತಲೆಗೆ ಒನಕೆಯಿಂದ ತಲೆಗೆ ಹೊಡೆದು ನೂಕಿಕೊಟ್ಟಿದ್ದರಿಂದ ತಲೆಗೆ ಬಲವಾದ ಒಳಪೆಟ್ಟಾಗಿ ಮೈಕೈಗಳಿಗೆ ತರಚಿದ ಗಾಯಗಳಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದರಿಂದ ಅಫಜಲಪೂರ ಸರ್ಕಾರಿ ಆಸ್ಪತ್ರೆಗೆ ತಂದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಸವೇಶ್ವರ ಆಸ್ಪತ್ರೆ ವೈಧ್ಯಾಧೀಕಾರಿಗಳು ಹೈದ್ರಾಬಾದಕ್ಕೆ ತೆಗೆದುಕೊಂಡು ಹೋಗುವಂತೆ ಸೂಚಿಸಿದ ಮೇರೆಗೆ ಹೈದ್ರಾಬಾದಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ ದಿನಾಂಕ:28-03-2013 ರಂದು ಬೆಳಿಗಿನ ಜಾವ 3-00 ಗಂಟೆ ಸುಮಾರಿಗೆ ಮಾರ್ಗಮದ್ಯದಲ್ಲಿ ನನ್ನ ತಮ್ಮ ಚಂದ್ರಕಾಂತನು ಮೃತಪಟ್ಟಿರುತ್ತಾನೆ. ಅಂತಾ ಬಸವರಾಜ ರವರು ದೂರು ಸಲ್ಲಿಸಿದರಿಂದ ಠಾಣೆ ಗುನ್ನೆ ನಂ:25/2013 ಕಲಂ, 302 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ವಂಚನೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀ. ಜಿ.ಸೆಲ್ವರಂಗಂ ಪ್ರಾದೇಶಿಕ ಆಡಳಿತ ಅಧಿಕಾರಿಗಳು ಟಿ.ಎನ್.ಹಚ್.ಡಬ್ಲೂ.ಯು.ಸಿ.ಎಸ್.ಲಿ.ಕೋ-ಅಪರೇಟಿವ್ ಅಫೇಕ್ಸ ಪ್ರಾದೇಶಿಕ ಕಛೇರಿ ಬೆಂಗಳೂರು ರವರು ಗುಲಬರ್ಗಾ ಟಿ.ಎನ್.ಹಚ್.ಡಬ್ಲೂ.ಯು.ಸಿ.ಎಸ್.ಲಿ.ಕೋ-ಅಪರೇಟಿವ್ ಅಪೆಕ್ಸ ಸರಕು ಅಂಗಡಿ ಸುಪರ ಮಾರ್ಕೆಟ ಗುಲಬರ್ಗಾದಲ್ಲಿ ಸೇಲ್ಸಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಪ್ರವೀಣಕುಮಾರ ಇತನು ದಾಸ್ತಾನು ಸರಕುಗಳಲ್ಲಿ 2012 ನೇ ಸಾಲಿನ ಅಗಸ್ಟ ತಿಂಗಳಿನಿಂದ 2013 ನೇ ಸಾಲಿನ ಪೆಬ್ರುವರಿ ತಿಂಗಳ ವರೆಗೆ ಅಂದಾಜು 12,30,529-25 ರೂಪಾಯಿಯ ಸರಕಿನ ನಿವ್ವಳ ಮೊತ್ತವನ್ನು ಲೇಕ್ಕ ತೋರಿಸದೆ ನಮ್ಮ ಕಂಪನಿಗೆ ನಷ್ಟ ಮಾಡಿ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 39/2013 ಕಲಂ, 406, 408, 420 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀಮತಿ ಲಲೀತಾ ಗಂಡ ಧರ್ಮಣ್ಣ ಮೇದಾರ ಸಾ:ಲಕ್ಷ್ಮೀ ಟಾಕೀಜಿ ಹತ್ತಿರ ಜೇವರ್ಗಿ ರವರು ನನ್ನ ಗಂಡ ಧರ್ಮಣ್ಣ ತನು ದಿನಾಂಕ:27-03-2013 ರಂದು ಮಧ್ಯಾಹ್ನದ ಸಮಯದಲ್ಲಿ ಮತ್ತು ರಾತ್ರಿ 7-00  ಗಂಟೆಯ ಸುಮಾರಿಗೆ ಸರಾಯಿ ಕುಡಿದು ಬಂದು ನನ್ನ ಮಾವ ರೇವಣಸಿದ್ದ ಇತನಿಗೆ ಆಸ್ತಿಯಲ್ಲಿ ಪಾಲು ಕೋಡು ಅಂತ ಕೇಳಿದಕ್ಕೆ ಕೊಡುವುದಿಲ್ಲ ಅಂತ ಅವನ ಸಂಗಡ ಜಗಳ ಮಾಡಿದ್ದನು. ನಾನು ರಾತ್ರಿ ಮನೆಯಲ್ಲಿ ಮಲಗಿಕೊಂಡಿದ್ದು, ನನ್ನ ಗಂಡ ಧರ್ಮಣ್ಣ ಇತನು ಮನೆಯ ಮುಂದೆ ಇರುವ ಪತ್ರಾಸ ಸೇಡಿ ಕೇಳಗೆ ಮಂಚದ ಮೇಲೆ ಮಲಗಿಕೊಂಡಿದ್ದನು. ನಮ್ಮ ಮಾವ ರೇವಣಸಿದ್ದ ಇತನು ನನ್ನ ಗಂಡ ಸರಾಯಿ ಕುಡಿದು ಬಂದು ಆಸ್ತಿಯಲ್ಲಿ ಪಾಲು ಕೇಳಿದಕ್ಕೆ ದಿನಾಂಕ:28-03-2013 ರ ರಾತ್ರಿಯಲ್ಲಿ ಮಚ್ಚಿನಿಂದ ಹೊಡೆದು ಕೊಲೆ ಮಾಡಿ ಓಡಿ ಹೋಗಿರುತ್ತಾನೆ ಅಂತಾ ಆತನ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:47/2013 ಕಲಂ, 302 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ;
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ, ಅರ್ಜುನ ತಂದೆ ಬಂಡು ಖರಾತ, ವಃ 48 ವರ್ಷ, ಉಃ ಕುರಿ ಕಾಯುವದು,ಜಾಃಕುರಬರ, ಸಾಃರಾಜನಾಳ, ಹತ್ತರಕಿ ಪೊಸ್ಟ, ತಾಃ ಇಂಡಿ, ಜಿಃ ಬಿಜಾಪೂರರವರು ನಾನು 4-5 ತಿಂಗಳಿಂದ ನಮ್ಮೂರಿನಿಂದ ಕುರಿಗಳನ್ನು ಮೇಯಿಸುತ್ತಾ ಗುಲಬರ್ಗಾಕ್ಕೆ ಬಂದ್ದಿದ್ದು, ದಿನಾಂಕ: 28-03-2013 ರಂದು ಕುರಿಗಳನ್ನು ಪಾಳಾ ಗ್ರಾಮದ ಹತ್ತಿರ ಮೇವು ತಿನ್ನುವದಕ್ಕೆ ಬಿಟ್ಟು  ನಾನು ಮತ್ತು ನನ್ನೊಂದಿಗೆ ಇದ್ದ ಕಾರಭಾರಿ ತಂದೆ ಗೇನಪ್ಪಾ ಇಬ್ಬರು ಕೂಡಿ ಗುಲಬರ್ಗಾಕ್ಕೆ ಕುರಿ ಮಾರಲು ಬಂದು ಸೇಡಂ ರಿಂಗ ರೋಡ ಹತ್ತಿರ ಕುರಿ ಮಾರಿಕೊಂಡು ಬಸವೇಶ್ವರ ಆಸ್ಪತ್ರೆಯ ಹತ್ತಿರ ಮಧ್ಯಾಹ್ನ ರೋಡ ದಾಟುತ್ತಿದ್ದಾಗ ಕಾರ ನಂ. ಕೆಎ-32 ಎಮ್-1499 ನೇದ್ದರ ಚಾಲಕನು ತನ್ನ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನಗೆ ಡಿಕ್ಕಿ ಪಡಿಸಿದ್ದರಿಂದ ನನಗೆ ಬಲಗಾಲು ಹಿಂಬಡಿಗೆ ಭಾರಿ ಗುಪ್ತ ಪೆಟ್ಟಾಗಿ ಪಾದದ ಹತ್ತಿರ ತರಚಿದ ಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದರಿಂದ ಠಾಣೆ ಗುನ್ನೆ ನಂ: 19/2013 ಕಲಂ 279, 338 ಐ.ಪಿ.ಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

28 March 2013

GULBARGA DISTRICT REPORTED CRIMES


ಅತ್ಯಾಚಾರ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ದಿನಾಂಕ:27/03/2013 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಝಳಕಿ (ಕೆ) ಗ್ರಾಮದ 35 ವರ್ಷದ ಗೃಹಿಣಿಯು ಅಣ್ಣಪ್ಪ ಐರೊಡಗಿ ರವರ ಹೊಲದ ಮೆಟಗಿಯ ಹಿಂದುಗಡೆಯಿಂದ ಹೋಗುತ್ತಿದ್ದಾಗ ಶಿವಪ್ಪ ತಂದೆ ಅಣ್ಣಪ್ಪ ಐರೊಡಗಿ ಸಾ:ಹಡಲಗಿ ಇತನು ಬಂದು ಜಬರ ದಸ್ತಿಯಿಂದ ಆ ಗೃಹಿಣೆ ಸಂಗಡ  ತೆಕ್ಕೆ ಕುಸ್ತಿಗೆ ಬಿದ್ದು, ನೆಲಕ್ಕೆ ಕೆಡವಿ  ಜಬರಿ ಸಂಭೋಗ ಮಾಡಿರುತ್ತಾನೆ.ಈ ವಿಷಯ ಯಾರಿಗಾದರೂ ಹೇಳಿದರೆ ನೀನ್ನ ಜೀವ ಸಹಿತ ಬೀಡುವುದಿಲ್ಲಾ ಅಂತಾ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿರುತ್ತಾನೆ ಅಂತಾ ಝಳಕಿ (ಕೆ) ಗ್ರಾಮದ ಅತ್ಯಚಾರಕ್ಕೊಳಗಾದ ಗೃಹಿಣಿಯೊಬ್ಬರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 25/2013 ಕಲಂ: 341,376,504,506 ಐಪಿಸಿ ಮತ್ತು 3 (1) (10) ಎಸಸಿ/ಎಸಸಿ ಪಿಎ ಆಕ್ಟ 1989  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ:ದಿನಾಂಕ:27-03-2013 ರಂದು ಮಧ್ಯಾಹ್ನ 1-30 ಗಂಟೆಗೆ ಸುಮಾರಿಗೆ ನಾನು ಹೋಳಿ ಹಬ್ಬ ಆಚರಣೆ ಮಾಡಿ ಮನೆಗೆ ಹೋಗುತ್ತಿರುವಾಗ  ಕಮಲಾಪೂರ ಗ್ರಾಮದ ನಗರೇಶ್ವರ ಪುಂಡಲಿಕ ಮಾಸ್ತರ, ಮತ್ತು ಭೂನೇಶ್ವರ ರವರು ನನಗೆ ಅವಾಚ್ಯವಾಗಿ  ಬೈದು ಬಡಿಗೆಯಿಂದ ಹೋಡೆ ಬಡೆ ಮಾಡಿ ಹಾಗೂ ಬೀಡಿಸಲು ಬಂದ ಸತೀಷ ಇತನಿಗೂ ಸಹ   ಹೋಡೆ ಬಡೆ ಮಾಡಿರುತ್ತಾರೆ ಅಲ್ಲದೇ ಲಲಿತಾಬಾಯಿ ಇತಳಿಗೆ ಕೂದಲು ಹಿಡಿದು ಎಳೆದಾಡಿ ಹೋಡೆ ಬಡೆ ಮಾಡಿರುತ್ತಾರೆ ಅಂತಾ ನವಿಂದ್ರ ತಂದೆ ಗುಂಡಪ್ಪಾ ದೇವರಮನಿ ಸಾ|| ಕಮಲಾಪೂರ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:25/2013 ಕಲಂ.341.323.324.354.504.506 ಸಂಗಡ 34 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ವಿಜಯಕುಮಾರ ತಂದೆ ಅಮಾಂತಪ್ಪ ನಾಟೀಕಾರ               ಉ:ಇಂಜನಿಯರ್  ಸಾ:ಮಾಣಿಕೇಶ್ವರಿ ಗುಡಿ ಎದುರು ಚೌಡೇಶ್ವರಿ  ಕಾಲೋನಿ ಗುಲಬರ್ಗಾರವರು  ದಿನಾಂಕ: 26-03-2013 ರಂದು  ರಾತ್ರಿ 9=45 ಗಂಟೆಗೆ  ಫಿರ್ಯಾದಿಯು ತನ್ನ ಮೋಟಾರ ಸೈಕಲ್ ನಂ:ಕೆಎ-32 ಎಲ್ 2356 ನೇದ್ದರ ಮೇಲೆ ರೈಲ್ವೆ ಸ್ಟೇಶನಗೆ ಹೋಗುವ  ಕುರಿತು ಲಾಲಗೇರಿ ಕ್ರಾಸ್ ದಿಂದ ಎಸ್.ವಿ.ಪಿ.ಸರ್ಕಲ್ ಕಡೆಗೆ ಬರುತ್ತಿದ್ದಾಗ ಎನ್.ವಿ. ಕಾಲೇಜ್ ಕಾಂಪ್ಲೇಕ್ಸನಲ್ಲಿರುವ ಮೇಗಾ ದರ್ಶನಿ ಹೊಟೇಲ ಎದುರು ರೋಡಿನ ಮೇಲೆ ಹಿಂದಿನಿಂದ ಮೋಟಾರ ಸೈಕಲ್ ನಂ:ಕೆಎ 32 ಇಸಿ  5410 ರ ಸವಾರ ವಿರೇಶ ಇತನು ತನ್ನ ಮೋಟಾರ ಸೈಕಲ್ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲ್ ಕ್ಕೆ   ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ಗಾಯಗೊಳಿಸಿ ತಾನು ಗಾಯಹೊಂದ್ದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ:21/2013 ಕಲಂ: 279,338  ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ಶ್ರೀ, ವಿಠಲ್ ತಂದೆ ಗುಂಡಪ್ಪಾ ಕೋಹಿರ ಸಾ|| ಐನೊಳ್ಳಿ ತಾ|| ಚಿಂಚೋಳಿ ರವರು ನಾನು ಸೇಂಟ್ರಿಂಗ್ ಕೆಲಸಕ್ಕೆಂದು ಚಿಂಚೋಳಿಗೆ ಬಂದು ಕೆಲಸ ಮುಗಿಸಿಕೊಂಡು ಸಿಮೆಂಟ್ ಲೋಡ ಇರುವ ಲಾರಿ ನಂ. ಎಮ್.ಎಚ-12, ಹೆಚಡಿ-7321 ನೇದ್ದರಲ್ಲಿ ರಾತ್ರಿ 8-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಪರಿಚಯದವನಾದ ಅಕ್ರಮ್ ತಂದೆ ಅಮೀರ ಅಲಿ , ಜಾಫರಖಾನ ಪಠಾಣ, ಖಾಜಾ ಚಿಟಗುಪ್ಪಾ , ಅರ್ಜುನ ಅಣ್ಣಾಜಿ, ಮನೋಜ ಲೊಂಡೆ, ಎಲ್ಲರೂ ಸದರಿ ಲಾರಿ ಕ್ಯಾಬಿನಲ್ಲಿ ಕುಳಿತುಕೊಂಡು ಹೋರಟಿದ್ದು, ಲಾರಿಯು ಚಿಂಚೋಳಿಯ ಹೊಸ ಊರ ಕ್ರಾಸ್ ದಾಟಿದ ನಂತರ ಲಾರಿ ಚಾಲಕನಾದ ಕಾಶಿನಾಥ ತಂದೆ ಮಲ್ಲೇಶಿ ಸೀರೂರ ಎಂಬುವವನು ಅತೀವೇಗದಿಂದ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ಪ್ರೀನ್ಸ್ ದಾಬಾ ಸಮೀಪ ಪಲ್ಟಿ ಮಾಡಿದನು. ಓಳಗಡೆ ಕುಳಿತವರಿಗೆ ಹಾಗೂ ಲಾರಿ ಕ್ಲಿನರ ಮತ್ತು ಚಾಲಕನಿಗೆ ಸಾದಾ ಭಾರಿ ರಕ್ತ ಮತ್ತು ಗುಪ್ತಗಾಯಗಳಾಗಿರುತ್ತವೆ. ಅಕ್ರಮ ತಂದೆ ಅಮೀರ ಅಲಿ ಕೂಸಗಿ ವ:40 ವರ್ಷ ಸಾ: ನಾಗಾಯಿದ್ಲಾಯಿ ತಾ:ಚಿಂಚೋಳಿ ಎಂಬುವವನಿಗೆ ಉಪಚಾರ ಕುರಿತು ಆಸ್ಪತ್ರೆಗೆ ಕರೆದುಕೊಂಡು ಹೊಗುವಾಗ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ವಿಠಲ್ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 62/2013 ಕಲಂ. 279, 337, 338, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

27 March 2013

GULBARGA DISTRICT REPORTED CRIMES


ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂದನ,
ಒಟ್ಟು 1,50,240 ರೂಪಾಯಿಗಳ ಮೌಲ್ಯದ ಮಧ್ಯ ವಶ
ಬ್ರಹ್ಮಪೂರ ಪೊಲೀಸ್ ಠಾಣೆ:ದಿನಾಂಕ:26/03/2013 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ಮಧ್ಯ ಮಾರಾಟ ಆಗುತ್ತಿರುವ ಬಗ್ಗೆ ಭಾತ್ಜಿ ಬಂದ ಮೇರೆಗೆ ಶ್ರಿ, ಎ.ಡಿ ಬಸಣ್ಣವರ್ ಡಿ.ಎಸ್.ಪಿ 'ಬಿ' ಉಪ-ವಿಭಾಗ ಗುಲಬರ್ಗಾ ರವರ ನೇತ್ರತ್ವದಲ್ಲಿ ಶ್ರೀ.ಶರಣಬಸವೇಶ್ವರ ಬಿ ಪೊಲೀಸ ಇನ್ಸಪೆಕ್ಟರ್ ಬ್ರಹ್ಮಪೂರ ಪೊಲೀಸ ಠಾಣೆ ಗುಲಬರ್ಗಾರವರು ಮತ್ತು ಅವರ ಸಿಬ್ಬಂದಿ ಜನರಾದ ಮಾರುತಿ ಎ.ಎಸ್.ಐ, ನಿಜಲಿಂಗಪ್ಪ, ಅಶೋಕ ರವರು ಬಹುಮನಿ ಹೊಟೇಲದಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದ ಶ್ರೀನಿವಾಸ ತಂದೆ ನಾಗೇಂದ್ರ ರಾಸೂರ, ವಯ|| 33, || ಹೊಟೇಲ ಮ್ಯಾನೇಜರ, ಸಾ|| ಬಿದ್ದಾಪೂರ ಕಾಲೋನಿ ಗುಲಬರ್ಗಾ ಇತನಿಂದ ಓರಿಜಿನಲ್ ಚಾಯ್ಸ್ನ ಬಾಟಲಿಗಳು,  ಓಲ್ಡ ಟಾವರಿನ ಬಾಟಲಿಗಳು ಹೀಗೆ ಇತರೆ ಮಧ್ಯದ ಬಾಟಲಿಗಳು  ||ಕಿ|| 1,50,240/- ರೂಪಾಯಿ ಬೆಲೆ ಬಾಳುವುದವುಗಳು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:38/2013 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ ಮತ್ತು 188 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ಶೃದ್ದಾನಂದ ತಂದೆ ರೇವಣಸಿದ್ದಪ್ಪ ಕಾಳಗಿ ವ:63 ಜಾ: ಲಿಂಗಾಯತ ಸಾ: ಮನೆ ನಂ. 39 ಜನತಾ ಗೃಹ ನಿರ್ಮಾಣ ಹೌಸಿಂಗ ಸೋಸಾಯಿಟಿ ಕರುಣೇಶ್ವರ ನಗರ ಗುಲಬರ್ಗಾ ರವರು ನಾನು ಮತ್ತು ನನ್ನ ಪತ್ನಿ ದಿನಾಂಕ:25/03/2013  ರಂದು ಬೆಳಿಗ್ಗೆ 8-25 ಕ್ಕೆ ಮನೆಯಿಂದ ಕರುಣೇಶ್ವರ ಬಸ್ ನಿಲ್ದಾಣದಕ್ಕೆ ಆಟೋ ಮೂಲಕ ಹೋಗುವ ಸಲುವಾಗಿ ರಾಮ ಮಂದಿರ ಜೇವರ್ಗಿ ಕಾಲನಿ ಮುಖ್ಯ ರಸ್ತೆಯ ಮುಖಾಂತರ ಹೊರಟಾಗ ಮೋಟಾರ ಸೈಕಲ್ ಮೇಲೆ ಇಬ್ಬರು ಕುಳಿತಿದ್ದು, ಕ್ಷಣಾರ್ಧದಲ್ಲಿ ಹಿಂದೆ ಕುಳಿತಿರುವ ವ್ಯಕ್ತಿ ನನ್ನ ಪತ್ನಿಯ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ್ 15 ಗ್ರಾಂ ಮತ್ತು ಚಿನ್ನದ ಲಾಕೇಟ ಸರ್ 14 ಗ್ರಾಂ  ಕಿತ್ತುಕೊಂಡು ಮೋಟರ ಸೈಕಲ್ ನಂಬರ ನೋಡುವಷ್ಟರಲ್ಲಿ ಅತೀವೇಗದಿಂದ ಮೋಟಾರ ಸೈಕಲ್ ಚಲಾಯಿಸಿದರು.ಬಂಗಾರದ ಒಟ್ಟು ಆಭರಣಗಳ ಕಿಮ್ಮತ್ತು 75,000/- ರೂಪಾಯಿಗಳು ಆಗಬಹುದು ಅಂತಾ ಶೃದ್ದಾನಂದ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 46/2013 ಕಲಂ. 392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

25 March 2013

GULBARGA DISTRICT REPORTED CRIMES


ಕೊಲೆಗೆ ಪ್ರಯತ್ನ:
ಚಿಂಚೋಳಿ ಪೊಲೀಸ್ ಠಾಣೆ:ಶ್ರೀ,ಸಂತೋಷ ತಂದೆ ತಿಪ್ಪಯ್ಯಾ ಕಲಾಲ ಸಾ|| ಚಿಮ್ಮಾಯಿದಲಾಯಿ ತಾ|| ಚಿಂಚೋಳಿ ರವರು ನಾನು 2011 ನೇ ಸಾಲಿನಲ್ಲಿ ಶಿವರಾಯ ಕೋಟಗಿ ಮತ್ತು ಅವನ ಮಕ್ಕಳ ಮೇಲೆ ಪ್ರಕರಣ ದಾಖಲಿಸಿದ್ದರಿಂದ ಸಧ್ಯನ್ಯಾಯಾಲಯದವಿಚಾರಣೆಯಲ್ಲಿದ್ದು ಅದನ್ನು ವಾಪಸು ಪಡೆದುಕೊ ಅಂತಾ ಶಿವರಾಯ ಕೋಟಗಿ ಅವನ ಹೆಂಡತಿ ಮಕ್ಕಳು ಕೇಳಿದ್ದು, ಅದಕ್ಕೆ ನಾನು ಕೊಟ್ಟ ದೂರನ್ನು ವಾಪಸು ತಗೆದುಕೊಳ್ಳುವುದಿಲ್ಲಾ ಅಂತಾ ಹೇಳಿದಕ್ಕೆ ದಿನಾಂಕ:24-03-2013 ರಂದು ರಾತ್ರಿ 7-30 ಗಂಟೆಗೆ ಸುಮಾರಿಗೆ ಶಿವರಾಯ ಕೊಟಗಿ ರವರ ಮನೆಯ ಮುಂದೆ ನಡೆದುಕೊಂಡು ಬರುತ್ತಿದ್ದಾಗ ಶಿವರಾಯ ಕೋಟಗಿ, ಅವನ ಹೆಂಡತಿಯಾದ ಕಲ್ಲಮ್ಮ, ಅವನ ಮಕ್ಕಳಾದ ಬಸವರಾಜ ಮತ್ತು ತುಕರಾಮ ನಾಲ್ಕು ಜನರು ಕೂಡಿಕೊಂಡು ಬಂದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ  ನನ್ನನ್ನು ಕೊಲೆ ಮಾಡುವ ಉದ್ದೇಶದಿಂದ ಗುಪ್ತಾಂಗಕ್ಕೆ ಹೊಡೆದು ಗಾಯಗೊಳಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:58/2013 ಕಲಂ, 341, 323, 324, 504, 506, 307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ:
ಶಹಾಬಾದ ನಗರ ಪೊಲೀಸ್ ಠಾಣೆ:ಶ್ರೀಮತಿ ಸುಶೀಲಾ ಗಂಡ ಮಹೇಶಕುಮಾರ ಗಾಯಕವಾಡ ಸಾ:ಮನೆ.ನಂ.45 ರೈಲ್ವೆ ಕ್ವಾಟ್ರಾಸ್ ಶಹಾಬಾದ ರವರು ನಮ್ಮ ಬಾಜು ಮನೆಯವನಾದ ಬಾಲು ತಂದೆ ರಾಜು ಸಾಲುವಾ ಇತನು ಕಳೆದ ಮೂರು ತಿಂಗಳಿಂದ ನನ್ನ ಮನೆಯ ಮೇಲೆ ಕಲ್ಲುಗಳನ್ನು ಎಸೆಯುತ್ತಿದ್ದು ನಾನು ಮತ್ತು ನನ್ನ ಗಂಡ ಕೇಳಲು ಹೋದರೆ ಗಲಾಟೆ ಮಾಡುತ್ತಿದ್ದು, ದಿನಾಂಕ:24/03/2013 ರಂದು ರಾತ್ರಿ 8.45 ಗಂಟೆಯ ಸುಮಾರಿಗೆ ಮನೆಯ ಮೇಲೆ ಕಲ್ಲುಗಳು ಬಿಳುತ್ತಿದ್ದುದ್ದು ನೋಡಿ ಹೊರಗೆ ಬಂದು ನೋಡಿ ಬಾಲು ಮತ್ತು ಆತನ ಹೆಂಡತಿಗೆ ಯಾಕೆ ನಮ್ಮ ಮನೆಯ ಮೇಲೆ ಕಲ್ಲುಗಳನ್ನು ಹಾಕುತ್ತಿದ್ದಿಯಾ ಅಂತಾ ಕೇಳಿದ್ದಕ್ಕೆ ಆವರು ಅವಾಚ್ಯ ಶಬ್ದಗಳಿಂದ ಬೈದು ಬಾಲು ಇತನು ತನ್ನಲ್ಲಿರುವ ಚಾಕುವಿನಿಂದ ನನ್ನ ಗಂಡನ ಮುಖಕ್ಕೆ, ಎಡಗಾಲ ಮೊಳಕಾಲಿಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ ಅಂತಾ ಶ್ರೀಮತಿ ಸುಶೀಲಾ ಗಂಡ ಮಹೇಶಕುಮಾರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 43/2013 ಕಲಂ, 323,504,506,354,307 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.