POLICE BHAVAN KALABURAGI

POLICE BHAVAN KALABURAGI

15 May 2013

GULBARGA DISTRICT REPORTED CRIMES


ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ. ಅಭೀ ಪ್ರಕಾಶ ನಾರಾಯಣ ತಂದೆ ಶಂಬುನಾಥ ಬಿಂದ ಸಾ: ಉತ್ತರ ಪ್ರದೇಶ ರಾಜ್ಯ ಹಾ.ವ:ವಿಶಾಲ ಕೆಲಕರ ಮನೆಯಲ್ಲಿ ಬಾಡಿಗೆ ಸಿ.ಐ.ಬಿ ಕಾಲೋನಿ ಗುಲಬರ್ಗಾ ರವರು ನಾನು ಸೆಂಟ್ರಲ ಯುನಿವರ್ಸಿಟಿಯಲ್ಲಿ ಸಬ್‌ ಕಾಂಟ್ರ್ಯಾಕ್ಟರ ಅಂತಾ ಕೆಲಸ ಮಾಡಿಕೊಂಡು ನಗರದ ಸಿ.ಐ.ಬಿ ಕಾಲೋನಿ ನಿರೀನ ಟ್ಯಾಂಕ ಹತ್ತಿರದ  ವಿಶಾಲ ಕೆಲಕ್‌ರ ರವರ ಮನೆಯಲ್ಲಿ ಎಪ್ರಿಲ್ 2ನೇ ತಾರಿಖಿನಿಂದ ಬಾಡಿಗೆಯಿಂದ ವಾಸವಾಗಿರುತ್ತೆವೆ. ದಿನಾಂಕ 12/05/2013 ರಂದು ಶಶಿ ಮತ್ತು ಅನಿಲ ಅನ್ನುವವರು ನನ್ನ ಹೆಂಡತಿ ಮನೆಯಲ್ಲಿರುವಾಗ  ಬಾಗಿಲು ಬಡೆದಿದ್ದರು, ಯ್ಯಾಕೆ ಬಾಗಿಲು ಬಡೆದಿದ್ದು ಅಂತಾ ಕೇಳಿದಕ್ಕೆನೀವು ಏನು ಮಾಡುತ್ತಿರಿ ಎಷ್ಟು ಸಂಪಾದನೇ ಮಾಡುತ್ತಿ ಅಂತಾ ಕೇಳಿ, ಈ ಕಾಲೋನಿಯಲ್ಲಿರಬೇಕಾದರೆ ನಮಗೆ ಹಣ ಕೊಡಬೇಕಾಗುತ್ತದೆ ಅಂತಾ ಕಿರಿಕಿರಿ ಮಾಡಿದ್ದರಿಂದ ನಾವು ಪೊಲೀಸ ಠಾಣೆಗೆ ಹೋಗಿ ಅರ್ಜಿ ಕೊಟ್ಟಿದ್ದೆವು. ಆಗ  ಕಪೀಲ  ಇತನು ಬಂದು ರಾಜಿ ಮಾಡಿ  ಮುಂದೆ ಏನಾದರೂ ಆದಲ್ಲಿ ಪೋನ ಮಾಡಲು ತಿಳಿಸಿದ್ದನು. ದಿನಾಂಕ:14/05/2013 ರಂದು ರಾತ್ರಿ 10-00 ಗಂಟೆಗೆ ಶಶಿಅನಿಲಕಪೀಲ ಹಾಗು ಅವರ ಸಂಗಡಿಗರು ನಮ್ಮ ಮನೆಗೆ ಬಂದು ನನ್ನ ಹೆಂಡತಿಯ ಕೊರಳಲ್ಲಿಯ ಬಂಗಾರದ ಚೈನಉಂಗರ  ಅಂದಾಜು ಕಿಮ್ಮತ್ತು 45000/- ರೂ ಬೆಲೆವುಳ್ಳದ್ದು ಹಾಗೂ ಕಪಾಟದಲ್ಲಿಟ್ಟಿದ್ದ 2  ಲಕ್ಷ ರೂಪಾಯಿ ತೆಗೆದುಕೊಂಡು ಹೋಗುವಾಗ ತಡೆದಿದ್ದಕ್ಕೆ ನನ್ನ ಹೆಂಡತಿಯ ಮೇಲೆ ಕಪಾಳ ಮೇಲೆ ಹೊಡೆದು ನನ್ನ ಮೇಲು ಸಹ ಹಲ್ಲೆ ಮಾಡಿರುತ್ತಾರೆ. ನಮ್ಮನು ಬೆದರಿಸಿ ಹಣ ಮತ್ತು ಬಂಗಾರ ಕಸಿದುಕೊಂಡು ಹೋಗಿರುವ ಕಪೀಲ ಮತ್ತು ಅವರ ಸಂಗಡಿರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:80/2013 ಕಲಂ.448,392,386,354 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ಮದನ ತಂದೆ ಬಂಡೆರಾವ ಕುಲಕರ್ಣಿ ಸಾ|| ಎನ್.ಜಿ.ಓ ಕಾಲೋನಿ ಜೇವರ್ಗಿ ರೋಡ ಗುಲಬರ್ಗಾ ರವರು ನಾನು ದಿನಾಂಕ:10/05/2013 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ರೇಣುಕಾ ಸುಗರ ಪ್ಯಾಕ್ಟರಿಯಿಂದ ಪಾರ್ಸಲ ಬರುತ್ತಿದ್ದರಿಂದ ಪಾರ್ಸಲ ತೆಗೆದುಕೊಳ್ಳುವ ಕುರಿತು ಗುಲಬರ್ಗಾ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ದ್ವಿಚಕ್ರ ವಾಹನವನ್ನು ಶ್ರೀನಿವಾಸ ಬುಕ್ ಸ್ಟಾಲ್ ಮುಂದುಗಡೆ ನಿಲ್ಲಿಸಿ ಪಾರ್ಸಲ ತೆಗೆದುಕೊಂಡು ಬರುವಷ್ಟರಲ್ಲಿ ನನ್ನ ಹಿರೊಹೊಂಡಾ ಸ್ಪ್ಲೆಂಡರ್ ಪ್ಲಸ ದ್ವಿಚಕ್ರ ವಾಹನ ನಂ. ಕೆಎ-32 ಎಕ್ಸ-1996 ಇಂಜನ ನಂ.HA10EFAHG29811 ಚೆಸ್ಸಿ ನಂ. MBLHA10EZAHG17425 ಮಾಡಲ 2010 ಸಿಲ್ವರ ಕಲರ ಅಂದಾಜು ಕಿಮ್ಮತ್ತು 28630/- ರೂ. ನೇ ದ್ವಿಚಕ್ರ ವಾಹನವನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 81/2013 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀಮತಿ. ಶ್ರೀದೇವಿ ಗಂಡ ಪ್ರಶಾಂತ ಆಲೂರಕರ ಸಾ: ಸಿ.ಐ.ಬಿ ಕಾಲೋನಿ ಗುಲಬರ್ಗಾ ರವರು ನಾನು ಒಂದು ವರ್ಷದ ಹಿಂದೆ ಪ್ರಶಾಂತ ಇತನೊಂದಿಗೆ ವಿವಾಹವಾಗಿರುತ್ತೆನೆ. ನನ್ನ ಗಂಡನಾದ ಪ್ರಶಾಂತ ಇತನು ಬಾಲಾಜಿ(ಚಾಲುಕ್ಯ) ಬಸ್ಸು ನಲ್ಲಿ ಕಂಡಕ್ಟರ ಕೆಲಸ ಮಾಡುತ್ತಾರೆ. ಅವರು ಮನೆಗೆ ಎರಡು ದಿನಕೊಮ್ಮೆ ಮನೆಗೆ ಬರುತ್ತಾನೆ. ಒಂದು ತಿಂಗಳು ಹಿಂದಿನಿಂದ ನಮ್ಮ ಮನೆಯ ಬಾಜು ಮನೆಯಲ್ಲಿ ಉತ್ತರ ಪ್ರದೇಶದ ಹುಡಗರು ಬಾಡಿಗಿಗೆ ಬಂದಿರುತ್ತಾರೆ.  ಅವರು 8 ದಿನಗಳ ನಂತರ ರಾಜು ಸಾಬು ಕಾಂಟಕ್ಟರ ಮತ್ತು ವೈಯುಮ  ಹಾಗು ಅವರ ತಮ್ಮ ಇಬ್ಬರು ಮೂವರು ಕೂಡಿಕೊಂಡು ನಾನು ಹೊರಗಡೆ ಬಂದಾಗ  ಮತ್ತು ಬಟ್ಟೆ ತೊಳಿಯುವಾಗ ಹಾಗು ಹೊರಗಡೆ ಹೋಗುವಾಗ ನನಗೆ ಚುಡಾಯಿಸುವುದು ಮತ್ತು ಅವರ ಬಾಷೆಯಿಂದ ಆಡುವುದು ಕಣ್ಣು ಸೊನ್ನೆ ಮಾಡುತ್ತಿದರು. ಅದಕ್ಕೆ ನಾನು ನನ್ನ ಮೈದುನಿಗೆ ಹೇಳಿದಾಗ ನನ್ನ ಮೈದುನ ನೀವು ಬೇರೆ ರಾಜ್ಯದಿಂದ  ಬಂದು ಯಾಕೆ ಸುಮ್ಮನೆ ಇರುವದಕ್ಕೆ ಆಗುವುದಿಲ್ಲಾ. ಅಂತಾ ಕೇಳಿದಕ್ಕೆ ರಾಜು, ಸಾಬು ಮತ್ತು ವೈಯುಮ ಹಾಗು ಇತರರು ಬಂದು ನನಗೆ ಮತ್ತು ನನ್ನ ಮೈದುನಿಗೆ ಕೈಯಿಂದ ಹೊಡೆದಿರುತ್ತಾರೆ. ದಿನಾಂಕ 14/05/2013 ರಂದು ರಾತ್ರಿ 8-30 ಸುಮಾರಿಗೆ ಬಂದು ಜಗಳ ತೆಗೆದು ನನಗೆ ಮತ್ತು ನಮ್ಮ ಮನೆಯವರಿಗೆ ಅವಾಚ್ಯ ಶಬ್ದಗಳಿಂದ ತಮ್ಮ ಬಾಷೆಯಲ್ಲಿ ಜಾತಿ ನಿಂದನೆ ಮಾಡಿರುತ್ತಾರೆ.  ಅಲ್ಲದೇ ಕಾರ ನಂಬರ ಕೆಎ-05.ಎಂಹೆಚ್.4227 ನೇದ್ದರಲ್ಲಿ ಕಾರಿನಲ್ಲಿ 4 ರಿಂದ 5 ಜನರು  ಸುಮಾರು 25 ರಿಂದ 35  ವರ್ಷದವರು  ಕಾರದ ಪುಡಿ , ತಲವಾರ ಚಾಕು ಮತ್ತು ಮಚ್ಚು ಬಡಿಗೆಳಿಂದ ನಮ್ಮ ಕಾಲೋನಿಗೆ ಬಂದು ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ   ಠಾಣೆ ಗುನ್ನೆ ನಂ. 82/2013 ಕಲಂ. 147, 148, 323, 504, 506, 509 ಸಂ. 149 ಐಪಿಸಿ ಮತ್ತು 3(1)(10) ಎಸ್‌ಸಿ ಎಸ್‌ಟಿ ಪಿಎ ಎಕ್ಟ 1989  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ : ಶ್ರೀ, ಸಿದ್ದಪ್ಪ ತಂದೆ ಫೀರಪ್ಪ ಕೋಳಿ ವ|| 62 ವರ್ಷ ಜಾ|| ಕಬ್ಬಲಿಗ ಉ|| ಕೂಲಿ  ಸಾ|| ಕರಜಗಿ ರವರು ನಾನು ಮತ್ತು ಶಂಕರ ರಾಠೋಡಆತನ ಹೆಂಡತಿ ಮೈನಾಬಾಯಿ, ಮಗಳು ಶ್ರೀದೇವಿಹಾಗೂ ಮಲ್ಲಯ್ಯ ಮುತ್ಯಾ ಎಲ್ಲರೂ ಕೂಡಿಕೊಂಡು ದಿನಾಂಕ:14-05-2013 ರಂದು ಬೆಳಿಗ್ಗೆ 7:00 ಗಂಟೆಗೆ ಕರಜಗಿ ಗ್ರಾಮದಿಂದ ಟಂಟಂ ನಂ ಕೆಎ-32 ಬಿ-8572 ನೇದ್ದನ್ನು ಬಾಡಿಯಿಂದ ನೇಮಕ ಮಾಡಿಕೊಂಡು ದೇಸಾಯಿ ಕಲ್ಲೂರ ಮಾರ್ಗವಾಗಿ ಬಟಗೇರಿ ಗ್ರಾಮಕ್ಕೆ ಹೋಗಿ ಬಟಗೇರಿಯಲ್ಲಿ ಶ್ರೀದೇವಿಗೆ ತೊರಿಸಿಕೊಂಡುಮದ್ಯಾಹ್ನ 3:00  ಗಂಟೆ ಸಮಯಕ್ಕೆ ಕರಜಗಿ ಗ್ರಾಮಕ್ಕೆ ದೇಸಾಯಿ ಕಲ್ಲೂರ ಮಾರ್ಗವಾಗಿ ಹೊರಟಿರುತ್ತೆವೆ.  ದೇಸಾಯಿ ಕಲ್ಲೂರ ತಾಂಡಾ ದರ್ಗಾದ ಹತ್ತಿರ ಬಂದಾಗ ಟಂಟಂ ಚಾಲಕನಾದ ಮೋಹನ ತಂದೆ ನಾಗು ಚವ್ಹಾಣ ಇತನು ಟಂಟಂನ್ನು ಅತೀವೇಗವಾಗಿ ಮತ್ತು ನಿಸ್ಕಾಳಜಿಯಿಂದ ನಡೆಸಿ ಟಂಟಂ ನ್ನು ಪಲ್ಟಿ ಮಾಡಿದನು. ಇದರಿಂದ ನನಗೆ  ಬಲಭಾಗದ ತಲೆಗೆ ಪೆಟ್ಟು ಬಡೆದು ರಕ್ತಗಾಯವಾಯಿತು. ಶ್ರೀದೇವಿಗೆ ಬಲಗೈ ಮುಂಡಿಗೆ ಏದೆಗೆ ಗುಪ್ತ ಪೆಟ್ಟು ಆಗಿರುತ್ತದೆ. ಶಂಕರ ರಾಠೋಡ ಈತನಿಗೆ ಬಲಬಾಗದ ಹಣೆಗೆ ಪೆಟ್ಟು ಬಡೆದು  ರಕ್ತಗಾಯ ಆಗಿರುತ್ತದೆಮಲ್ಲಯ್ಯ ಮುತ್ಯಾ ಇವರಿಗೆ ಏಡಗೈ ಮುಂಡಿಗೆ ಗುಪ್ತ ಪೆಟ್ಟು ಆಗಿರುತ್ತದೆ. ಮೈನಾಬಾಯಿ ರಾಠೋಡ ಇವಳಿಗೆ ಭಾರಿ ಗಾಯವಾಗಿದ್ದರಿಂದ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬಂದು ಸೇರಿಕೆ ಮಾಡಿದಾಕ್ಷಣ ಮೃತ ಪಟ್ಟಿಳು , ಕಾರಣ ಟಂಟಂ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:103/13 ಕಲಂ.279 337 304 (ಎ) ಐ ಪಿ ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಫರೀದಮಿಯ್ಯಾ ತಂದೆ ಸುಲೇಮಾನ ಖರಾದಿ ಸಾ:ಗುಲಶನ ಅರಾಫತ ಕಾಲನಿ ಗುಲ್ಬರ್ಗಾರವರು ನಾನು ದಿನಾಂಕ 14-05-13 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಸ್ಕ್ರಾಪ ಅಂಗಡಿಯಲ್ಲಿ ಕೆಲಸ ಮುಗಿಸಿಕೊಂಡು ಹಾಗರಗಾ ರೋಡಿಗೆ ಇರುವ  ಸಭಾ ಫಂಕ್ಷನ ಪಕ್ಕದಲ್ಲಿ ಇರುವ  ಹಬೀಬ ಇವರ ಹೋಟಲ ಮುಂದೆ ಕುಳಿತುಕೊಂಡಾಗ ನನಗೆ ಪರಿಚಯದ ಸೋನಿಯಾಗಾಂಧಿ ಕಾಲನಿ ಗುಲಬರ್ಗಾ ನಿವಾಸಿಗಳಾದ ಇಮ್ರಾನ ತಂದೆ ಬಾಬುಮಿಯ್ಯಾ   ಮತ್ತು ಬಡೇಶಹಾ ಮತ್ತು ಮದರಶಹಾ ಇವರು ಕೂಡಾ ಬಂದರು. ಅವರು ನನಗೆ ಕುಡಿದು ಕುಳಿತಿರುವ ಬಗ್ಗೆ ಮಾತಾಡಿದರು. ಅದಕ್ಕೆ ನಾನು ಅವರಿಗೆ ನನ್ನ ಹಣದಿಂದ ಕುಡಿದಿದ್ದೀನಿ ಅದನ್ನು ಕೇಳುವವರು ನಿನ್ಯಾರು ಎಂದು ಹೇಳಿದ್ದಕ್ಕೆ ಅವರಿಬ್ಬರೂ ನನಗೆ ಅವಾಚ್ಯವಾಗಿ ಬೈದು ಕೈ ಮುಷ್ಟಿ ಮಾಡಿ ಜೋರಾಗಿ ನನ್ನ ಬಾಯಿ ತುಟಿಯ ಮೇಲೆ ಹೊಡೆದಿದ್ದರಿಂದ ಮುಂದಿನ ಎರಡು ಹಲ್ಲುಗಳು ಬಿದ್ದಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 241/2013 ಕಲಂ, 504, 341,323, 326 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.