POLICE BHAVAN KALABURAGI

POLICE BHAVAN KALABURAGI

08 February 2013

GULBARGA DISTRICT REPORTED CRIMES


ಜೂಜು ಅಡ್ಡೆಯ ಮೇಲೆ ದಾಳಿ 14 ಜನರ ಬಂಧನ, 3.5 ಲಕ್ಷ್ಯ ರೂಪಾಯಿಗಳ ಮೌಲ್ಯದ ನಗದು ಹಣ, ಬಂಗಾರದ ಆಭರಣಗಳು, ಮೊಬೈಲ್ ಮತ್ತು ಮೋಟಾರ ಸೈಕಳಗಳ ಜಪ್ತಿ.
ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ: ದಿನಾಂಕಃ 07/02/2013 ರಂದು ಗುಲಬರ್ಗಾ ನಗರದ ಎಂ.ಬಿ ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಬಸವೇಶ್ವರ ಆಸ್ಪತ್ರೆಯ ಮುಂದುಗಡೆ ಕನಿಷ್ಕಾ ಬಾರ್ & ರೆಸ್ಟೋರೆಂಟ್ ನಲ್ಲಿ ಜೂಜಾಟ ನಡೆದಿರುವ  ಬಗ್ಗೆ ಖಚಿತ ಮಾಹಿತಿ ಅನ್ವಯ ಮಾನ್ಯ ಎಸ್.ಪಿ ಸಾಹೇಬರು ಗುಲಬರ್ಗಾರವರು, ಮತ್ತು ಡಿ.ಎಸ್.ಪಿ ಬಿ ಉಪ ವಿಭಾಗ ಪ್ರಭಾರಿ ಗ್ರಾಮಾಂತರ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಶ್ರೀ ಎಸ್. ಅಸ್ಲಾಂ ಬಾಷಾ ಸಿ.ಪಿ.ಐ ಎಂ.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಎಂ.ಬಿ ನಗರ ಠಾಣೆ ಹಾಗು ಸಿಬ್ಬಂದಿ ಜನರಾದ ಶ್ರೀಮಂತ ಹೆಚ್.ಸಿ, ಮತ್ತು ಪಿಸಿ ಜನರಾದ  ಶ್ರೀನಿವಾಸರೆಡ್ಡಿ,ಗಂಗಾಧರ,ಸಿದ್ರಾಮಯ್ಯ, ಪಂಡಿತರಾವ,ಮಸೂದ ಅಹ್ಮದ,ಸಿದ್ದಲಿಂಗಪ್ಪ ರವರೆಲ್ಲರೂ ಕನಿಷ್ಕಾ ಬಾರ್ & ರೆಸ್ಟೋರೆಂಟ್ ನಲ್ಲಿ ಜೂಜಾಟದಲ್ಲಿ ತೊಡಗಿದ ಜೂಜುಕೋರ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ  ವಿಶೇತ ತಂದೆ ಶಿವಲಾಲಸಿಂಗ್ ಸಾಃ ಪ್ರಗತಿ ಕಾಲೋನಿ ಗುಲಬರ್ಗಾ, ವರ್ಧನ ತಂದೆ ಮಾರುತಿ ಹಡಗಿಲ ಸಾಃ ರಾಜಾಪೂರ ಗುಲಬರ್ಗಾ, ಶಕೀಲ ಅಹ್ಮದ ತಂದೆ ಶಫಿಯೂದ್ದಿನ ಅಹ್ಮದ ಸಾಃ ಆದರ್ಶ ನಗರ ಗುಲಬರ್ಗಾ, ಬಸವರಾಜ ತಂದೆ ಯಮನಪ್ಪಾ ಪಾಟೀಲ ಸಾಃ ಬಡೆಪೂರ ಕಾಲೋನಿ ಗುಲಬರ್ಗಾ, ಅಮಿತ ತಂದೆ ಶೇಖರ ಪಾಟೀಲ ಸಾಃಬ್ರಹ್ಮಪೂರ ಲಾಲಗಿರಿ ಗುಲಬರ್ಗಾ, ವಿಕಾಸ ತಂದೆ ಸುಭಾಷ ನೌರಂಗ ಸಾಃ ನೌರಂಗದಾಳ ಜಗತ್ ಗುಲಬರ್ಗಾ,ಮಂಜಲೆ ಸಾಬ ತಂದೆ ಚಾಂದಸಾಬ ಹಿರನಾಗಾಂವ್ ಸಾಃ ಹೆಬ್ಬಾಳ ಚಿಂಚೋಳಿ,ಚಂದ್ರಕಾಂತ ತಂದೆ ನಿಂಗಯ್ಯ ಗುತ್ತೆದಾರ ಸಾಃ ಹೆಬ್ಬಾಳ ಚಿಂಚೋಳಿ,ವಿರೇಶ ತಂದೆ ಜಗದೇವ ಪಾಟೀಲ ಸಾಃ ಬಡೆಪೂರ ಕಾಲೋನಿ ಗುಲಬರ್ಗಾ, ಸಿದ್ರಾಮಪ್ಪ ತಂದೆ ಜಗದೇವಪ್ಪ ಪಾಟೀಲ ಸಾಃ ಭಕ್ತಂಪೂರ ಗುಲಬರ್ಗಾ, ಕಲ್ಯಾಣಿ ತಂದೆ ಭಗವಂತಪ್ಪ ಸ್ವಂತ ತಾಃ ಗುಲಬರ್ಗಾ,  ಮಲ್ಲಿಕಾರ್ಜುನ, ತಂದೆ ಬಡೆಪ್ಪ ಜೀವಣಗಿ ಸಾಃ ಶಹಬಜಾರ ನಾಕಾ ಗುಲಬರ್ಗಾ, ವಿನೋದ ತಂದೆ ರಾಮಚಂದ್ರ ಸೇಡಂ ಸಾಃ ಸುಂದರ ನಗರ ಗುಲಬರ್ಗಾ, ಅನೀಲಕುಮಾರ ತಂದೆ ಶಿವಲಿಂಗಪ್ಪ ಬೊಮ್ಮ ಸಾಃ ಪ್ರಗತಿ ಕಾಲೋನಿ ಗುಲಬರ್ಗಾ,ರವರನ್ನು ದಸ್ತಗಿರಿ ಮಾಡಿ ಜೂಜಾಟದ ಪಣಕ್ಕೆ ಹಚ್ಚಿದ ನಗದು ಹಣ 92,054/- ರೂಪಾಯಿಗಳು, ಇಸ್ಪೇಟ್ ಎಲೆಗಳು,ಜೂಜಾಟಕ್ಕೆ ಉಪಯೋಗಿಸಿದ ಬಂಗಾರದ ಉಂಗುರ ಮತ್ತು ಚೈನ್ ಗಳು ಒಟ್ಟು ನಾಲ್ಕುವರೆ ತೊಲೆ ಅಃಕಿಃ 1,15,000/- ರೂ. 18 ಮೊಬೈಲ್ ಗಳು ಹಾಗೂ 5 ಮೋಟಾರ ಸೈಕಗಳು ನೇದ್ದವುಗಳು ಜಪ್ತಿ ಮಾಡಿಕೊಂಡಿದ್ದರಿಂದ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂ:21/2013 ಕಲಂ, 79, 80 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಪರವಾನಿಗೆ ಪಡೆಯದೆ ಕೇಬಲ್ ಚಾಲನಗಳ ಸಂಪರ್ಕ ಕಲ್ಪಿಸಿದ ಬಗ್ಗೆ:
ದೇವಲ ಗಾಣಗಾಪೂರ ಪೊಲೀಸ್ ಠಾಣೆ: ಶ್ರೀ ಸಂತೋಷ ತಂದೆ ಸುಭಾನರಾವ ಸಾ||ಬೆಳಗಾವ ರವರು  ನಾನು 3 ತಿಂಗಳನಿಂದ ಎಸ್.ಸಿ ಎಂಟರ ಪ್ರೇಸ್ಸನಲ್ಲಿ ಮ್ಯಾನೇಜರ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ. ನಮ್ಮ ಕಂಪನಿಯ ಅಧೀಕೃತ ವಿತರಕರಾಗಿರುತ್ತೇವೆ, ಎಂಟರ ಪ್ರೇಸ್ಸ್ ವ್ಯಾಪ್ತಿ ಬೆಳಗಾವ, ಬಿಜಾಪೂರ, ಬಾಗಲಕೋಟ, ಗುಲಬರ್ಗಾ, ಬೀದರ ಜಿಲ್ಲೆಗಳು ಬರುತ್ತವೆ. ಈ ಜಿಲ್ಲೆಗಳ ಕೇಬಲ್ ನೇಟ್ವರ್ಕ ಬಳಕೆದಾರರು ಮೇಡಿಯಾ ಪ್ರೋ ಕಂಪನಿಯಿಂದ ಟಿವ್ಹಿ ಚಾನಲ್ ಗಳ ಪರವಾನಿಗೆಗಾಗಿ ಹಣ ಪಾವತಿ ಮಾಡಿ ಬಿತ್ತರಿಸಲು ಪರವಾನಿಗೆ ಪಡೆದುಕೊಳ್ಳುತ್ತಾರೆ, ಶಿವಾನಂದ ತಂದೆ ಬಸಪ್ಪ ಮಾಳಿ ಶ್ರೀ ಭಾಗ್ಯವಂತಿ ಕೇಬಲ ನೇಟ್ ವರ್ಕ ಇವನು ಗೊಬ್ಬೂರ[ಬಿ] ಗ್ರಾಮದಲ್ಲಿ ಮಾತ್ರ ಸುವರ್ಣ, ಸ್ಟಾರ ಗೋಲ್ಡ, ಜಿ ಕನ್ನಡ, ಸ್ಟಾರ ಪ್ಲಸ್, ಜಿ ಸಿನಿಮಾ, ಜಿ ಟಿವ್ಹಿ, ಚಲನಗಳನ್ನು ಬಿತ್ತರಿಸಲು ಮೇಡಿಯಾ ಪ್ರೋ ಕಂಪನಿಯಿಂದ ಪರವಾನಿಗೆ ಪಡೆದುಕೊಂಡಿದ್ದು ಇರುತ್ತದೆ. ದಿನಾಂಕ:28-01-2013 ರಿಂದ ಇವತ್ತಿನವರೆಗೆ ಗುಲಬರ್ಗಾ ಪಟ್ಟಣದ 17 ಕೇಬಲ್ ಆಪರೇಟರಗಳಿಗೆ ಗೊಬ್ಬೂರ[ಬಿ] ದಿಂದ ಮೇಡಿಯಾ ಪ್ರೋ ಪೇ ಚಲನಗಳಾದ ಸುವರ್ಣ, ಸ್ಟಾರ ಗೋಲ್ಡ, ಜಿ ಕನ್ನಡ, ಸ್ಟಾರ ಪ್ಲಸ್, ಜಿ ಸಿನಿಮಾ, ಜಿ ಟಿವ್ಹಿ, ಚಲನಗಳನ್ನು ಬಿತ್ತರಿಸುತಿದ್ದು, ಅವುಗಳಲ್ಲಿ ಗುಲಬರ್ಗಾ ಪಟ್ಟಣದ ಐವನಶಾಹಿ, ಬ್ರಹ್ಮಪೂರ, ಪಿ.ಎನ್.ಟಿ ಹೌಸಿಂಗ್ ಬೋಡ್, ಗಾಂಧಿ ನಗರ, ಎಮ್.ಬಿ.ನಗರ ಏರಿಯಾಗಳಲ್ಲಿ ಬಿತ್ತರಿಸಿದ ಬಗ್ಗೆ ವಿಡಿಯೋ ರಿಕಾರ್ಡ ಮಾಡಿಕೊಂಡಿದ್ದು ಇರುತ್ತದೆ. ಈ ಬಗ್ಗೆ ಮೇಡಿಯಾ ಪ್ರೊ ಕಂಪನಿಯವರು ಶಿವಾನಂದ ಮಾಳಿ ಇವನಿಗೆ ನೋಟಿಸ ನೀಡಿ, ಗೊಬ್ಬೂರ[ಬಿ] ಗ್ರಾಮದಿಂದ ಗುಲಬರ್ಗಾ ಪಟ್ಟಣಕ್ಕೆ ಬಿತ್ತರಿಸುವುದು ಕಾನೂನು ಪ್ರಕಾರ ಅಪರಾದವಾಗುತ್ತದೆ ಅಂತಾ ತಿಳಿಸಿದರು ಸಹ ಶಿವಾನಂದ ಮಾಳಿ ಕಂಪನಿಯವರಿಂದ ಯಾವುದೆ ಪರವಾನಿಗೆ ಪಡೆಯದೆ ಗೊಬ್ಬೂರ[ಬಿ] ಗ್ರಾಮದಿಂದ ಮೇಡಿಯಾ ಪ್ರೊ ಕಂಪನಿಯ ಪೇ ಚಲನಗಳಾದ ಸುವರ್ಣ, ಸ್ಟಾರ ಗೋಲ್ಡ, ಜಿ ಕನ್ನಡ, ಸ್ಟಾರ ಪ್ಲಸ್, ಜಿ ಸಿನಿಮಾ, ಜಿ ಟಿವ್ಹಿ, ಚಲನಗಳನ್ನು ಪ್ರಸಾರ ಮಾಡಿ ಮೇಡಿಯಾ ಪ್ರೊ ಕಂಪನಿಗೆ ಮೋಸ ಮಾಡಿದ್ದು ಇರುತ್ತದೆ. ಆತನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 14/2013 ಕಲಂ.66(B), 66(E) IT Act and 420 IPC ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.   

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಎಚ್.ವೀರಭದ್ರಪ್ಪ ಮುಖ್ಯೋಪಾಧ್ಯಯರು ಸರಕಾರಿ ಪ್ರೌಢ ಶಾಲೆ ಭೀಮಳ್ಳಿ ರವರು ನಾನು ಶಾಲೆಯ ಎಲ್ಲಾ ಕೋಣೆಗಳಿಗೆ ದಿನಾಂಕ:06/02/2013 ರಂದು ಕೀಲಿ ಹಾಕಿಕೊಂಡು ಮನೆಗೆ ಹೋಗಿರುತ್ತೆನೆ. ದಿನಾಂಕ:07/02/2013 ರಂದು ಬೆಳಿಗ್ಗೆ 9:30 ಗಂಟೆಗೆ ಶಾಲೆ ಬಂದು ಕಾರ್ಯಾಲಯದ ಕೋಣೆ ತೆಗೆಯಲು ಹೋದಾಗ ಕಾರ್ಯಾಲಯದ ಕೊಂಡಿ ಮುರಿದಿದ್ದು, ಒಳಗೆ ಹೋಗಿ ನೋಡಲಾಗಿ ಗಣಯಂತ್ರದ ಕೊಣೆಯಲ್ಲಿರುವ ಕಂಪ್ಯೂಟರ್ ಹಾಗೂ ಬಿಸಿ ಊಟದ ಸಾಮಾಗ್ರಿಗಳು ಇರಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಇದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:84/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ದಿನಾಂಕ:07-02-2013 ರಂದು ಸಾಯಂಕಾಲ 7-15  ಗಂಟೆಗೆ ನನ್ನ ತಮ್ಮ ಕಾಶಪ್ಪ ತಂದೆ ನರಸಪ್ಪ ಜೋಗಿ @ ಡಬ್ಬಾ ಇತನು ತನ್ನ ಅತ್ತಿ-ಮಾವನ ಊರಾದ ಮುಗನೂರ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತ ಮೋಟಾರು ಸೈಕಲ್ ನಂ-KA-05-EU-4529 ಬಜಾಜ್ ಪಲ್ಸರ್ ವಾಹನದ ಮೇಲೆ ಹೋಗಿದ್ದನು. ರಾತ್ರಿ ಸುಮಾರು 9-00 ಗಂಟೆಗೆ ಯಾರೋ ಫೋನ ಮಾಡಿ, ನನ್ನ ತಮ್ಮನಾದ ಕಾಶಪ್ಪ ಜೋಗಿ ಇತನು ಮುಗನೂರಕ್ಕೆ ಹೋಗುವಾಗ ರಂಜೋಳ ಕ್ರಾಸ್ ಹತ್ತಿರದಲ್ಲಿ ರಿಬ್ಬನಪಲ್ಲಿ-ವಾಘ್ದಾರಗಿ ಮುಖ್ಯ ರಸ್ತೆಯ ಮೇಲೆ ತನ್ನ ಮೋಟಾರ ಸೈಕಲ್ ಅಪಘಾತವಾಗಿ ರಸ್ತೆಯ ಮೇಲೆ ರೋಡಿನ ಎಡಗಡೆ ಬಿದ್ದು, ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಯಾವುದೊ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮುಗನೂರ ಗ್ರಾಮಕ್ಕೆ ಹೋಗುತ್ತಿದ್ದ ಕಾಶಪ್ಪನ ವಾಹನಕ್ಕೆ ಡಿಕ್ಕಿ ಪಡೆಸಿದ್ದರಿಂದ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ನನ್ನ ತಮ್ಮ ನಡೆಸುತ್ತಿದ್ದ  ಮೋಟಾರು ಸೈಕಲ್ ನಂ-KA-05-EU-4529 ನೇದ್ದಕ್ಕೆ ಡಿಕ್ಕಿಪಡಿಸಿದ್ದರಿಂದ  ಮುಂದಿನ ಗಾಲಿ ಮತ್ತು ಪೆಟ್ರೊಲ್ ಟ್ಯಾಂಕ ಒಡೆದು ಅದರಲ್ಲಿದ್ದ ಪೆಟ್ರೊಲ್ ಸಿಡಿದು ಮುಂದಿನ ಗಾಲಿಗೆ ಮತ್ತು ಪೆಟ್ರೊಲ್ ಟ್ಯಾಂಕಿಗೆ ಬೆಂಕಿ ಹತ್ತಿ ಸುಟ್ಟಿದ್ದು ಇರುತ್ತದೆ. ಕಾರಣ ಈ ಅಪಘಾತ ಪಡಿಸಿದ ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಿ ಕ್ರಮ ಜರುಗಿಸಬೇಕು ಅಂತ ನರಸಪ್ಪ ತಂದೆ ನರಸಪ್ಪ ಜೋಗಿ @ ಡಬ್ಬು ಸಾ:ಅಡಕಿ ಗ್ರಾಮ, ತಾ:ಸೇಡಂ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಸೇಡಂ ಠಾಣೆ ಗುನ್ನೆ ನಂ:33/2013 ಕಲಂ-279, 304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ. ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:

ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀಮತಿ, ಶೆಟಬಾಯಿ ಗಂಡ ಅಂದಪ್ಪ ಬಾಸಗಿ ಸಾ: ಕೇರೂರ ತಾ:ಆಳಂದ   ರವರು ನಾನು ಹಾಗೂ ನಮ್ಮ ಮನೆಯವರು ಮನೆಯಲ್ಲಿದ್ದಾಗ ಬಾಬುರಾವ ಹಾಗೂ ಆತನ ಹೆಂಡತಿ ಮಡೆವ್ವ ಇವರು ಬಂದು ಅವಾಚ್ಯವಾಗಿ ಬೈಯುತ್ತಿರುವಾಗ ಯ್ಯಾಕೆ ಬೈಯುತ್ತಿ ಅಂತಾ ಕೇಳಲು ಮತ್ತೆ ಅವಾಚ್ಯವಾಗಿ ನಿಂದನೇ ಮಾಡಿ ನನ್ನ ಗಂಡನಿಗೆ ರಸ್ತೆಯ ಮೇಲೆ ಕರೆದುಕೊಂಡು ಹೋಗಿ ಬಾಬುರಾವ ಇತನು ನನ್ನ ಗಂಡನ ಎದೆಯ ಮೆಲಿನ ಅಂಗಿ ಹಿಡಿದು ಕೈಯಿಂದ ಕಪ್ಪಾಳದ ಮೇಲೆ ಹೊಡೆದನು. ಬೀಡಿಸಲು ಹೋದ ನನಗೂ ಸಹ ಹಲ್ಲೆ ಮಾಡಿರುತ್ತಾನೆ. ಕಾರಣ ನಮಗೆ  ಹೊಡೆದು ಅವಾಚ್ಯ ಶಬ್ಬಗಳಿಂದ ನಿಂದಸಿರುವವರ ಮೇಲೆ ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:16/2013 ಕಲಂ: 323,325,354,504,506 ಸಂಗಡ 34 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.