POLICE BHAVAN KALABURAGI

POLICE BHAVAN KALABURAGI

15 March 2013

GULBARGA DISTRICT


ಪತ್ರಿಕಾ ಪ್ರಕಟಣೆ
ಇತ್ತಿಚಿಗೆ ಜರುಗಿದ ಮಹಾನಗರ ಪಾಲಿಕೆಯ ಚುನಾವಣೆ ಹಿನ್ನಲೆಯಲ್ಲಿ ಸುಗಮ ಸಂಚಾರ ದೃಷ್ಠಿಯಿಂದ ಹಾಗೂ ರಸ್ತೆ ಕಾಮಗಾರಿ ಇದ್ದುದ್ದರಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆ ವೃತ್ತದಿಂದ ಪೊಲೀಸ ಭವನದ ಮೂಲಕ ಹಾದು ಹೋಗುವ ಮಾರ್ಗವನ್ನು ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ಉಪಯೋಗಿಸಲು ಬಂದ ಮಾಡಲಾಗಿತ್ತು. ಸದ್ಯಕ್ಕೆ ಮಹಾನಗರ ಪಾಲಿಕೆ ಚುನಾವಣೆಗಳು ಶಾಂತಿಯುತವಾಗಿ ಮುಕ್ತಾಯಗೊಂಡಿದ್ದರಿಂದ ಮತ್ತೆ ಈ ಮಾರ್ಗವನ್ನು ಸಾರ್ವಜನಿಕರ ಸಂಚಾರ ಕುರಿತು ಮುಕ್ತಗೊಳಿಸಲಾಗಿದೆ. 
          ಮುಂಬರುವ ವಿಧಾನಸಭಾ ಚುನಾವಣೆ ನಿಮಿತ್ಯ ಹಾಗೂ ಡಿ.ಎ.ಆರ್ ಕೇಂದ್ರ ಸ್ಥಾನದಲ್ಲಿರುವ ಶಸ್ತ್ರಾಸ್ತ್ರ ಸಂಗ್ರಹ ಭದ್ರತೆ ದೃಷ್ಠಿಯಿಂದ ಈ ಮಾರ್ಗವನ್ನು ಏಕ ಮುಖ ರಸ್ತೆ ಅಂತ ಘೋಷಿಸಲು ಹಾಗೂ ರಾತ್ರಿ 10-00 ಗಂಟೆಯಿಂದ ಬೆಳಿಗ್ಗೆ 06-00 ಗಂಟೆಯವರೆಗೆ ಸಾರ್ವಜನಿಕರ ಸಂಚಾರಕ್ಕೆ ನಿರ್ಭಂಧ ಮಾಡುವ ಕುರಿತು ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ಮಾನ್ಯ ಜಿಲ್ಲಾಧಿಕಾರಿಗಳಲ್ಲಿ ವರದಿ ಸಲ್ಲಿಸಿ ಕ್ರಮ ಜರುಗಿಸಲಾಗುವದು.  ಅಲ್ಲದೇ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಸುಗಮ ಸಂಚಾರ ಕುರಿತು ಕುಳಗೇರಿ ಕ್ರಾಸ ಹತ್ತಿರ ಇರುವ ಕೆ.ಇ.ಬಿ ಟ್ರಾನ್ಸಫಾರ್ಮರನ್ನು ತೆರೆವುಗೊಳಿಸಿ ಸದರಿ ವೃತ್ತವನ್ನು ಅಗಲಿಕರಣ ಮಾಡಿ ಐವಾನ-ಈ-ಶಾಹಿ ಕಡೆ ಹೋಗುವ ರಸ್ತೆಯನ್ನು ದುರಸ್ತಿ ಹಾಗೂ ಡಾಂಬರಿಕರಣ ಮಾಡಲು ಮಹಾನಗರ ಪಾಲಿಕೆಯವರಿಗೆ ತಿಳಿಸಲಾಗುವುದು ಅಂತಾ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಪ್ರಕಟಣೆ ಮೂಲಕ ಕೋರಿರುತ್ತಾರೆ.

                                                       ಸಹಿ/-
                                                ಪೊಲೀಸ್ ಅಧೀಕ್ಷಕರು,
                                                    ಗುಲಬರ್ಗಾ. 

GULBARGA DISTRICT


: ಗುಲಬರ್ಗಾ ಜಿಲ್ಲಾ ಪೊಲೀಸ್ ಕಾರ್ಯಚರಣೆ:
2 ಜನ ಕಳ್ಳರ ಬಂಧನ, ಬಂಧಿತ ಆರೋಪಿತರಿಂದ 90 ಗ್ರಾಂ ಬಂಗಾರದ ಆಭರಣ, 260 ಗ್ರಾಂ ಬೆಳ್ಳಿಯ ಸಾಮಾನುಗಳು ಹೀಗೆ ಒಟ್ಟು 1,75,000/- ರೂಪಾಯಿಗಳ ಮಾಲು ಜಪ್ತಿ.

 ಮಾನ್ಯ ಶ್ರೀ ಎನ್. ಸತೀಶಕುಮಾರ್. ಐ.ಪಿ.ಎಸ್.. ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಮಾನ್ಯ ಶ್ರೀ ಕಾಶಿನಾಥ ತಳಕೇರಿ ಅಪರ ಪೊಲೀಸ್ ಅಧೀಕ್ಷಕರು, ಗುಲಬರ್ಗಾರವರು ಹಾಗೂ ಶ್ರೀ ಹೆಚ್ ತಿಮ್ಮಪ್ಪಾ ಡಿ.ಎಸ್.ಪಿ ಗ್ರಾಮಾಂತರ ಉಪ-ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ  ಶ್ರೀ ಕೆ.ಎಮ್. ಸತೀಶ ಪೊಲೀಸ್ ವೃತ್ತ ನಿರೀಕ್ಷಕರು ಗ್ರಾಮೀಣ ವೃತ್ತ ರವರ  ನೇತ್ರತ್ವದಲ್ಲಿ ಸಿದ್ದಾರಾಯ ಬಳೂರ್ಗಿ ಪಿ.ಎಸ.ಐ (ಅಪರಾಧ ವಿಭಾಗ) ಮತ್ತು ಶ್ರೀ ಆನಂದರಾವ ಪಿ.ಎಸ.ಐ (ಕಾ&ಸು) ಗ್ರಾಮೀಣ ಠಾಣೆ ರವರು ಹಾಗೂ ಸಿಬ್ಬಂದಿಯವರಾದ ಮೋಹಿಜೋದ್ದಿನ, ಸಂಜೀವರೆಡ್ಡಿ, ಕೇಶವ ಬಿರಾದಾರ, ನರಸಿಂಹ, ರಾಜಕುಮಾರ, ಸಲೀಮೋದ್ದಿನ, ಬಂಡೆಪ್ಪಾ, ಮಲ್ಲಿಕಾರ್ಜುನ  ರವರು  ದಿನಾಂಕ:14-03-2013 ರಂದು ಮಧ್ಯಾಹ್ನ ಆಳಂದ ಚೆಕ್ಕ ಪೋಸ್ಟ ಹತ್ತಿರ ಪೆಟ್ರೋಲಿಂಗ್ ಕರ್ತವ್ಯದಲ್ಲಿದ್ದಾಗ 2 ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಲು 1)ಪ್ರವೀಣ @ ಪವ್ಯಾ ತಂದೆ ಶಿವಶಂಕ್ರಯ್ಯ ಮಠಪತಿ ವ|| 20 , ಉ|| ಕೂಲಿಕೆಲಸ ಸಾ|| ಮಿರಿಯಾಣ, ತಾ||ಚಿಂಚೋಳಿ, ಹಾ||ವ|| ಬಸವೇಶ್ವರ ಕಾಲೋನಿ ಗುಲಬರ್ಗಾ, 2)ಮಲ್ಲು @ ಮಲ್ಯಾ ತಂದೆ ಸುಭಾಶ ಕಟಬರ ವ|| 20, ಉ|| ಕೂಲಿಕೆಲಸ ಸಾ|| ಕುಮಸಿ ತಾ|| ಗುಲಬರ್ಗಾ ರವರನ್ನು ವಿಚಾರಣೆಗೊಳಪಡಿಸಿದಾಗ ಗುಲಬರ್ಗಾ ನಗರದ ಬಿದ್ದಾಪೂರ ಕಾಲೋನಿ, ಸಂಚಾರಿ ಹೈಕೊರ್ಟ ಪೀಠದ ಹತ್ತಿರ ಹಾಗೂ ಕುಮಸಿ. ಅವರಾಧ (ಬಿ) ಗ್ರಾಮಗಳಲ್ಲಿ ಒಟ್ಟು 6 ಮನೆಗಳಲ್ಲಿ ಕಳ್ಳತನ ಮಾಡಿದ ಬಂಗಾರದ ಆಭರಣ 90 ಗ್ರಾಂ ಮತ್ತು ಬೆಳ್ಳಿಯ ಸಾಮಾನುಗಳು 260 ಗ್ರಾಂ ಹೀಗೆ ಒಟ್ಟು 1, 75, 000/- ಮೌಲ್ಯದ್ದು ಆರೋಪಿತರಿಂದ ವಶಪಸಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂದನಕ್ಕೆ ಕಳುಹಿಸಲಾಗಿದೆ.

GULBARGA DISTRICT REPORTED CRIMES


ಹಲ್ಲೆ ಜಾತಿ ನಿಂದನೆ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ: ಶ್ರಿ ಬಾಬುರಾವ ತಂದೆ ಗುಂಡಪ್ಪ ಗಂಗನಪಳ್ಳಿ  ಜಾ|| ಪರಿಶಿಷ್ಟ  ಸಾ||ಅಣವಾರ ಗ್ರಾಮ ತಾ||ಚಿಂಚೋಳಿ ಜಿ||ಗುಲ್ಬರ್ಗಾ ರವರು ದಿನಾಂಕ:14-03-2013 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ನಾನು ನನ್ನ ಹೆಂಡತಿ ಮನೆಯಲ್ಲಿದ್ದಾಗ ಮಲ್ಲಪ್ಪ ತಂದೆ ಹನಮಂತ ಘಾಳನೋರ, ಹನಮಂತ ತಂದೆ ಸಾಯಬಣ್ಣ ಘಾಳನೋರ, ಶ್ರೀದೇವಿ ಗಂಡ ಮಲ್ಲಪ್ಪ ಘಾಳನೋರ, ಯಲ್ಲಮ್ಮ ಗಂಡ ಹನಮಂತ ಘಾಳನೋರ ಎಂಬುವವರು ಎಲ್ಲರೂ  ಕುರುಬ ಜಾತಿಗೆ ಸೇರಿದವರು ನಮ್ಮ ಮನೆಯ ಮುಂದೆ ಬಂದು ನಿಂತು ಜಾತಿ ನಿಂದನೆ ಮಾಡಿ ಮಲ್ಲಪ್ಪಾ ಅನ್ನುವವನು ನನ್ನ ತಾಯಿಗೆ ಬಿಸಿಯೂಟದ ಅಡಿಗೆ ಕೆಲಸದಿಂದ ತೆಗೆದು ಹಾಕುತ್ತಿ ಅಂತಾ ನಿಂದನೆ ಮಾಡಿ ಹೊಡೆ ಬಡೆ ಮಾಡಿದ್ದಾರೆ. ಜಗಳ ಬಿಡಿಸಲು ಬಂದ ನನ್ನ ಹೆಂಡತಿಗೆ ಬಳೆಗಳು ಒಡೆದು ಗುಪ್ತಗಾಯ ಪಡಿಸಿರುತ್ತಾರೆ. ಅಂತಾ ಬಾಬುರಾವ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:53/2013 ಕಲಂ, 323 354 504 506 ಸಂಗಡ 34 ಐಪಿಸಿ ಹಾಗೂ 3 (i) (x) (xi) SC/ST PA ACT 1989 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ: ಶ್ರೀಮತಿ ದೀವಾ ಗಂಡ ಮಹೇಶ ಕೋತ್ಲಿ ಸಾ||ವಿದ್ಯಾ ನಗರ ಬಡೆಪೂರ ಸೇಡಂ ರೋಡ ಗುಲಬರ್ಗಾರವರು ನನ್ನ ಮದುವೆಯು ದಿನಾಂಕ:13-05-2009  ರಂದು ಹಿಂದು ಸಂಪ್ರದಾಯದಂತೆ ಡಾ|| ಮಹೇಶ ತಂದೆ ಬಾಬುರಾವ ಕೊತ್ಲಿ ಎಂಬುವರ ಜೊತೆ ಹಿರಿಯರ ಸಮ್ಮುಖದಲ್ಲಿ ನೇರವೇರಿಸಲಾಗಿರುತ್ತದೆ. ಮದುವೆ ಕಾಲಕ್ಕೆ ಹಿರಿಯರ ಸಮ್ಮುಖದಲ್ಲಿ ಗಂಡನ ಮನೆಯವರು ರೂ.10, 00,000/- ಮತ್ತು 150 ಗ್ರಾಂ ಬಂಗಾರ ವರದಕ್ಷಿಣೆಯಾಗಿ ಹಾಗೂ ಗೃಹ ಬಳಕೆಯ ಬೆಳ್ಳಿ ಸಾಮಾನುಗಳೊಂದಿಗೆ, ವರೋಪಚಾರವಾಗಿ ಕೊಡಲು ಬೇಡಿಕೆ ಇಟ್ಟರು. ಸದರಿ ಬೇಡಿಕೆ ಈಡೇರಿಸಲು ಸಾಧ್ಯವಾಗದಿದ್ದರು ಪರಸ್ಥಿತಿಯ ಒತ್ತಡಕ್ಕೆ ಮಣಿದು ನನ್ನ ತಂದೆ ತಾಯಿ ನಿವೇಶನ ಮಾರಾಟ ಮಾಡಿ ನಾಲ್ಕು ಲಕ್ಷ ರೂಪಾಯಿ ಹಾಗೂ 150 ಗ್ರಾಂ ಬಂಗಾರ ವರದಕ್ಷಿಣೆ ರೂಪದಲ್ಲಿ ನನ್ನ ಗಂಡನ ಮನೆಯವರಿಗೆ ಕೊಟ್ಟಿರುತ್ತಾರೆ. ಅದಲ್ಲದೆ 25 ತೊಲೆ ಬಂಗಾರದ ಆಭರಣಗಳು ನನ್ನ ಜೀವನ ಸಂರಕ್ಷಣೆಗಾಗಿ ನನ್ನ ಮೈಮೇಲೆ ಹಾಕಿ ಮದುವೆ ಮಾಡಿರುತ್ತಾರೆ. ಮದುವೆಯಾದ ಕೆಲವೇ ದಿನಗಳಲ್ಲಿ ನನ್ನ ಗಂಡನ ಮನೆಯವರು ವರದಕ್ಷಿಣೆ  ಕಡಿಮೆ ತಂದಿರುತ್ತಿ ಅಂತಾ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಲು ಪ್ರಾರಂಭಿಸಿದರು. ನನ್ನ ಗಂಡ ನನ್ನನ್ನು ಬಿಟ್ಟು ತಾನು ಕೆಲಸ ಮಾಡುವ ಇಂಗ್ಲೆಂಡಿಗೆ ಹೋರಟು ಹೋದನು. ನಾನು ಕೂಡ ದಿನಾಂಕ:28-06-2009 ರಂದು ಇಂಗ್ಲೆಂಡಿಗೆ ದೇಶಕ್ಕೆ ಹೋಗಿದ್ದು, ನಾನು ಹೋಗುವಾಗ ನನ್ನ ಮೈಮೇಲೆ ಇದ್ದ 25 ತೊಲೆ ಬಂಗಾರದ ಆಭರಣಗಳು ನನ್ನ ಅತ್ತೆಯ ಕೈಗೆ ಕೊಟ್ಟು ಹೋಗಿರುತ್ತೆನೆ, ನಾನು ಇಂಗ್ಲೆಂಡಿನಲ್ಲಿರುವ ನಾಲ್ಕು ತಿಂಗಳು ನನ್ನ ಗಂಡನು ಚಿತ್ರಹಿಂಸೆ ಕೊಟ್ಟು ಸರಿಯಾದ ಊಟಕೊಡಲಿಲ್ಲ. ಬೇರೊಂದು ಹೆಂಗಸಿನ ಜೊತೆ ಸಂಬಂಧ ಇಟ್ಟುಕೊಂಡು ಅವನು ನನಗೆ ಹೊಡೆ-ಬಡೆ ಮಾಡಿ  2009 ರ ಅಕ್ಟೋಬರ ತಿಂಗಳಲ್ಲಿ ನನಗೆ ಏನು ಹೇಳದೆ ಕೇಳದೆ ಗ್ಲಾಸಗೋ ನಗರಕ್ಕೆ ಹೋರಟು ಹೋದನು. ನಾನು ಅಲ್ಲಿಂದ ಮರಳಿ ಬಂದು  ನನ್ನ ಗಂಡನ ಮನೆಯಲ್ಲಿಯೇ ವಾಸವಾಗಿದ್ದಾಗ ದಿನಾಂಕ: 14-03-2013 ರಂದು ಮುಂಜಾನೆ 7-30 ಗಂಟೆ ಸುಮಾರಿಗೆ  ಒಂದು ಟಾಟಾ ಸುಮೊ ವಾಹನದಲ್ಲಿ ನಮ್ಮ ಅತ್ತೆ ರತ್ನಾ, ಮಾವ ಬಾಬುರಾವ, ನಾದನಿ ಸೋನಾಬಾಯಿ, ಮೈದುನರಾದ ರಾಕೇಶ, ಉಮೇಶ ಹಾಗೂ ಅವರ ಹೆಂಡಂದಿರಾದ ಚೇತನ, ಅರ್ಚನಾ ಇವರೆಲ್ಲ ಇಳಿದು ಬರುವದು ನೋಡಿ ನಾನು ಬಾಗಿಲು ತೆಗೆದು ಒಳಗೆ ಬಂದು ಅವರೆಲ್ಲ ಒಂದು ಕ್ಷಣ ಸುಮ್ಮನೆ ನನ್ನ ಮುಖ ನೋಡುತ್ತಿರುವಾಗ ನಾನು ಭಯವಾಗಿ ಜೋರಾಗಿ ಚೀರಿದೆ. ತಕ್ಷಣ ಉಮೇಶ ನನ್ನ ಬಾಯಿ ಒತ್ತಿ ಹಿಡಿದು ಮುಚ್ಚಿಸಿದರು. ರಾಕೇಶ ನನ್ನ ಎರಡು ಕೈಗಳು ಹಿಂದೆ ಮಾಡಿ ಹಿಡಿದುಕೊಂಡ ಕೂಡಲೇ ನಮ್ಮತ್ತೆ ನನ್ನ ಕುತ್ತಿಗೆ ಹಿಸುಕುತ್ತಿರುವಾಗ ಉಳಿದವರು ರಂಡಿಗೆ ಒಂದೇ ಸಲಕ್ಕೆ ಮುಗಿಸಿ ಬಿಡಿರಿ ಎಂದು ಚೀರಾಡುತ್ತಿದ್ದರು. ಅಷ್ಟರಲ್ಲೆ ಡುಗೆ ಮನೆಯಲ್ಲಿದ್ದ ನಮ್ಮ ತಾಯಿ ಚೀರಾಡುತ್ತಾ ರೋಡಿನ ಕಡೆಗೆ ಓಡಿ ಹೋದಳು. ನ್ನ ಮಗ ಕಟ್ಟಿಸಿದ ಮನಿ ಇದೆ.  ನಿಮ್ಮಪ್ಪನ ಮನೆಗೆ ಹೋಗು ಇಲ್ಲ ಅಂದರೆ  ಉಳಿದ ವರದಕ್ಷಣಿ ಹಣ ಮೂರು ಲಕ್ಷ ರೂಪಾಯಿಗಳು ಒಂದು ಘಂಟೆಯಲ್ಲಿ ತಂದು ಕೊಡಲು ಹೇಳು ಅಂತಾ ಹೇಳಿ ಹೋಗಿರುತ್ತಾರೆ ಅಂತಾ ಶ್ರೀಮತಿ ದಿವಾ ಗಂಡ ಮಹೇಶ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:14/2013 ಕಲಂ, 498 (ಎ) 324, 504, 506, ಸಂಗಡ 34 ಐಪಿಸಿ  3 ಮತ್ತು 4 ಡಿಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.