POLICE BHAVAN KALABURAGI

POLICE BHAVAN KALABURAGI

30 March 2012

GULBARGA DIST REPORTED CRIMES

ಆಳಂದ ಪೊಲೀಸ್ ರಿಂದ ಕೊಲೆ ಕೇಸಿನ ಆರೋಪಿಗಳ ಬಂಧನ:
ಆಳಂದ ಪೊಲೀಸ್ ಠಾಣೆ ಹದ್ದಿಯ ಪೈಕಿ ಹೊದಲೂರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಒಬ್ಬ ಅನಾಮದೇಯ 30 ವರ್ಷ ವಯಸ್ಸಿನ ಮನುಷ್ಯನನ್ನು ಕೊಲೆ ಮಾಡಿ ಬಿಸಾಡಿದ್ದು, ಈ ಪ್ರಕರಣ ತನಿಖೆ ಕುರಿತು ಜಿ.ಎಸ್. ಉಡಗಿ ಸಿಪಿಐ ಆಳಂದ ಇವರು ತನಿಖೆಯನ್ನು ಕೈಗೊಂಡಿದ್ದು, ಮೃತನಾದ ಭೀಮಾಶಂಕರ ತಂದೆ ಗುರುಲಿಂಗಪ್ಪ ಗಂಟೆ ಸಾ: ದರ್ಗಾ ಶಿರೂರ ಅಂತಾ ಗೊತ್ತಾಗಿದ್ದು, ಡಿ.ಎಸ.ಪಿ ಆಳಂದ ಎಸ್. ಬಿ. ಸಾಂಭ ರವರ ಮಾರ್ಗದರ್ಶನದಲ್ಲಿ ಒಂದು ತನಿಖಾ ತಂಡ ರಚಿಸಿದ್ದು, ಅದರಲ್ಲಿ ವಿಜಯಕುಮಾರ ಪಿ.ಎಸ್.ಐ ಆಳಂದ, ಮೈನೋದ್ದಿನ ಹೆಚ.ಸಿ. 134, ಚಂದ್ರಶೇಖರ, ಮಹಿಬೂಬಶೇಖ ಸಿಪಿಸಿ ರವರೆಲ್ಲ ಮುಂಬೈಯಲ್ಲಿರುವ ಗಂಗಾರಾಮ ಚವ್ಹಾಣ ಸಾ: ಮೋಘಾ, ಮತ್ತು ಸುನೀಲ ಕಾಳೆ ಸಾ: ರಾಜವಾಳ, ಇವರಿಬ್ಬರನ್ನು ದಸ್ತಗಿರಿ ಮಾಡಿ ಕೊಲೆ ಮಾಡಲು ಉಪಯೋಗಿಸಿದ ಆಯುಧಗಳನ್ನು ವಶಪಡಿಸಿಕೊಂಡಿರುತ್ತಾರೆ.ಆರೋಪಿತರು ಮೃತ ಭೀಮಾಶಂಕರ ಇವರಿಗೆ 20 ಸಾವಿರ ರೂಪಾಯಿ ಕೊಡುವುದು ಇದ್ದು, ಹಣ ಕೊಡುತ್ತೇವೆ ಎಂದು ಹೇಳಿ ಆಳಂದ ಪಟ್ಟಣಕ್ಕೆ ಕರೆಯಿಸಿ, ಭೀಮಾಶಂಕರ ಇವನನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿ ಗೊಣಿ ಚೀಲದಲ್ಲಿ ಹಾಕಿ ಕೊಲೆ ಮುಚ್ಚಿ ಹಾಕುವ ಉದ್ದೇಶದಿಂದ ಹೊದಲೂರ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಒಗೆದು ಬಂದಿದ್ದರು. ಕೊಲೆ ಆರೋಪಿಗಳನ್ನು ಪತ್ತೆ ಮಾಡಿದಕ್ಕೆ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಇಲಾಖಾ ವತಿಯಿಂದ ಬಹುಮಾನವನ್ನು ಘೋಸಿಸಲಾಗಿದೆ.
ನಿಂಬರ್ಗಾ ಪೊಲೀಸ್ ಠಾಣೆ ಗುನ್ನೆ ನಂ: 23/2012 ನೇದ್ದರ ರ ಕೋಲೆ ಆರೋಪಿ ಬಂದನ: ನಿಂಬರ್ಗಾ ಠಾಣೆ ಗುನ್ನೆ ನಂ. 23/2012 ಕಲಂ. 302, 201 ಐಪಿಸಿ ಕೇಸಿನಲ್ಲಿ ಭೀಮರಾಯ ತಂದೆ ವೀರಭದ್ರಪ್ಪ ಮಲಶೆಟ್ಟಿ ಇತನಿಗೆ ದಿನಾಂಕ:26/3/2012 ರಂದು ರಾತ್ರಿ ಕೊಲೆ ಮಾಡಲಾಗಿದ್ದು, ಸದರಿಯವನಿಗೆ ಅದೇ ಊರಿನ ಭೀಮರಾಯ ಪೊಲೀಸ ಪಾಟೀಲ ಇವರ ಎರಡನೆಯ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆಂದು ಸಂಶಯಪಟ್ಟು ಸದರಿ ಭೀಮರಾಯ ಪೊಲೀಸ್ ಪಾಟೀಲ ತನ್ನ ಸಂಗಡಿಗರೊಂದಿಗೆ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಿದ್ದಾನೆಂದು ದಸ್ತಗಿರಿ ಮಾಡಲಾಗಿದೆ, ನಿಂಬರ್ಗಾ ಪೊಲೀಸ್ ಠಾಣೆಯ ಪಿ.ಎಸ.ಐ ಎಸ್.ಎಸ್. ದೊಡ್ಡಮನಿ ಹಾಗು ಅವರ ಸಿಬ್ಬಂದಿ ವರ್ಗದವರಿಗೆ ಮತ್ತು ಸಿಪಿಐ ಆಳಂದ ಜಿ.ಎಸ್. ಉಡಗಿ ರವರಿಗೆ ಇಲಾಖಾ ವತಿಯಿಂದ ಶ್ಲಾಘಿಸಲಾಗಿದೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:
ಶ್ರೀ ಮಹಮದ ವಾಸಿಮ ಆಕ್ರಮ ತಂದೆ ಶೇಖ ಅಲಿ ಸಾ ರಹಿಮತ ನಗರ ಮಜೀದ ಹತ್ತಿರ ಹಳೆ ಜೇವರ್ಗಿ ರಸ್ತೆ ಗುಲಬರ್ಗಾ ರವರು ನಾನು ದಿನಾಂಕ: 30-03-2012 ರಂದು ಮಧ್ಯರಾತ್ರಿ 00=30 ಗಂಟೆಯ ಸುಮಾರಿಗೆ ಹಳೆ ಜೇವರ್ಗಿ ಅಂಡರ ಬ್ರೀಜ ದಿಂದ ಹನುಮಾನ ತಾಂಡಾ ರೋಡಿನಲ್ಲಿ ಬರುವ ಆರ್ಮಿ ಕ್ವಾಟರ್ಸ ಹತ್ತಿರ ನನ್ನ ಮೋಟಾರ ಸೈಕಲ ನಂ: ಕೆಎ 32 ವಿ-6897 ನೇದ್ದರ ಮೇಲೆ ಹೋಗುತ್ತಿದ್ದಾಗ ಎದುರಿನಿಂದ ಒಬ್ಬ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಗಾಯ ಗೊಳಿಸಿ ಮೋಟಾರ ಸೈಕಲ್ ಸಮೇತ ಹೊರಟು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 38/2012 ಕಲಂ 279, 337, ಐಪಿಸಿ ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIME

ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ದಿನಾಂಕ 29-03-12 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಮಾನ್ಯ ಎಸ್.ಪಿ. ಗುಲಬರ್ಗಾ ರವರ ಆದೇಶ ಪ್ರಕಾರ ನಗರದ ಹಮಾಲ ಕಾಲೋನಿ ಸುಲ್ತಾನಪೂರ ರೋಡಿಗೆ ಇರುವ ಬಾಬುರಾವ ಜಾಧವ ಶೆಡ್ಡನಲ್ಲಿ ಶ್ರೀ ಚೇತನಕುಮಾರ ಪ್ರೊ. ಐ.ಪಿ.ಎಸ್. ರವರು ಮತ್ತು ಶ್ರೀ ಅಸ್ಲಂ ಬಾಷಾ ಪೊಲೀಸ ಇನ್ಸಪೆಕ್ಟರ ಡಿ.ಎಸ್.ಬಿ.ಘಟಕ ಗುಲಬರ್ಗಾರವರು ಮತ್ತು ಪಂಚ ಜನರು ಹಾಗೂ ಸಿಬ್ಬಂದಿ ಜನರು ಕೂಡಿಕೊಂಡು ದಾಳಿ ಮಾಡಿ ಅಂದರ ಬಾಹರ ಇಸ್ಪೇಟ ಜೂಜಾಟ್ ಆಡುತ್ತಿದ್ದ ಶ್ರೀಶೈಲ ತಂದೆ ರಾಮಚಂದ್ರಪ್ಪ ಗುಬ್ಬಿ ಸಾ ಕಪನೂರ ಸಂಗಡ ಇನ್ನೂ 37 ಜನರು ಒಟ್ಟು 38 ಜನರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ಇಸ್ಪೇಟ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 1, 61, 723-50 ಪೈಸೆ 52 ಇಸ್ಪೇಟ ಎಲೆಗಳು ಹಾಗೂ ನಾಲ್ಕು ಪ್ಲಾಸ್ಟಿಕ ಟೇಬಲಗಳನ್ನು ಜಪ್ತಿ ಮಾಡಿಕೊಂಡಿರುತ್ತಾರೆ, ಜಪ್ತಿ ಪಂಚನಾಮೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 98/2012 ಕಲಂ 79, 80 ಕೆ.ಪಿ. ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.