POLICE BHAVAN KALABURAGI

POLICE BHAVAN KALABURAGI

28 August 2011

GULBARGA DISTRICT REPORTED CRIMES

ಅಪಘಾತ ಪ್ರಕರಣ :-

ಜೇವರ್ಗಿ ಠಾಣೆ :ಶ್ರೀ ಮಲ್ಲಣ್ಣಗೌಡ ತಂದೆ ಗುರಣ್ಣಗೌಡ ಮಾಲಿ ಪಾಟೀಲ ಸಾ: ಸಾಥಖೇಡ ರವರು, ನಾನು ಮತ್ತು ಇತರರೂ ಕೂಡಿ ಜೇವರ್ಗಿಯಿಂದ ಬಸ್ ನಂಬರ ಕೆ.ಎ. 32 ಎಫ 1310 ನೇದ್ದರಲ್ಲಿ ನಮ್ಮೂರಿಗೆ ಹೋಗುತ್ತಿರುವಾಗ 3-00 ಪಿಎಂಕ್ಕೆ ಕೇಲ್ಲೂರ ದಾಟಿ ಬ್ರಡ್ಸ ಹೀಲ್ ಶಾಲೆಯ ಕ್ರಾಸ ಹತ್ತಿರ ಎದುರುನಿಂದ ಇನ್ನೋಂದು ಬಸ ನಂಬರ ಕೆ.ಎ. 32 ಎಫ 1382 ನೇದ್ದರ ಚಾಲಕ ಈರಪ್ಪ ತಂದೆ ಬಸಪ್ಪನು ತನ್ನ ಬಸ್ಸನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ನಾವು ಹೊರಟ್ಟಿದ ಬಸ್ಸಿಗೆ ಜೊರಾಗಿ ಅಪಘಾತ ಪಡಿಸಿದ ಪರಿಣಾಮ ಬಸ್ಸಿನಲ್ಲಿದ್ದ ನನಗೆ ಮತ್ತು ಇನ್ನೂ ಅನೇಕ ಜನರಿಗೆ ಹಾಗೂ ಎರಡು ಬಸ್ಸಿನ ಚಾಲಕರಿಗೆ ಹಾಗೂ ಪ್ರಯಾಣಿಕರಿಗೆ ಸಾದಾ ಮತ್ತು ಭಾರಿಗಾಯಗಳಾಗಿದ್ದು ನಮ್ಮ ಬಸ್ಸಿನಲ್ಲಿಯೇ ಇದ್ದ ನಮ್ಮೂರ ಗೌರಮ್ಮ ಇವಳೂ ಭಾರಿ ಗಾಯ ಹೊಂದಿ ಸ್ಥಳದಲ್ಲಿಯೇ ಸತ್ತಿದ್ದು ನಮ್ಮ ಬಸ್ಸಿಗೆ ಡಿಕ್ಕಿ ಹೊಡೆದ ಬಸ್ಸಿನ ಚಾಲಕ ಈರಪ್ಪನಿಗೆ ಹೆಚ್ಚಿನ ಉಪಚಾರಕ್ಕಾಗಿ ಗುಲಬರ್ಗಾ ಸರಕಾರಿ ಅಸ್ಪತ್ತೆಗೆ ಒಯ್ಯದಾಗ ಆಸ್ಪತ್ರೆಯಲ್ಲಿ ಸತ್ತಿರುತ್ತಾನೆ. ಕಾರಣ ಆತನ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.