POLICE BHAVAN KALABURAGI

POLICE BHAVAN KALABURAGI

24 November 2011

GULBARGA DIST REPORTED CRIMES

ಅಂತ್ಯ ಸಂಸ್ಕಾರ ಮುಗಿಸಕೊಂಡು ಬರುತ್ತಿರುವಾಗ ಅಪಘಾತ ಒಂದು ಸಾವು:

ಸೇಡಂ ಪೊಲೀಸ ಠಾಣೆ: ಶ್ರೀ ಭೀಮಬಾಯಿ ತಂದೆ ಶರಣಪ್ಪ ಭೀಮನಳ್ಳಿ ಸಾ: ಕುರಕುಂಟಾ ತಾ: ಸೇಡಂ ರವರು ನಾನು ಮತ್ತು ನಮ್ಮ ತಾಯಿ ಮಹಾದೇವಮ್ಮ, ನಮ್ಮ ಅಣ್ಣ ಮತ್ತು ನಮ್ಮೂರಿನ ಇತರೆ ಜನರು ಕೂಡಿಕೊಂಡು ನಮ್ಮ ಅಜ್ಜಿಯ ಅಂತ್ಯ ಸಂಸ್ಕಾರ ಮುಗಿಸಿಕೊಂಡು ಭೀಮನಳ್ಳಿಯಿಂದ ಮರಳಿ ನಮ್ಮೂರಿಗೆ ಜೀಪ ನಂ-ಎಮ್ಎಚ್‌-02, ಜೆ-5753 ನೇದ್ದರಲ್ಲಿ ಕುಳಿತುಕೊಂಡು ಬರುತ್ತಿರುವಾಗ ನಾಮವಾರ ಕ್ರಾಸ ಹತ್ತಿರ ಕೊಡ್ಲಾ ಕಡೆಯಿಂದ ಟಾಟಾ ಸುಮೋ ನಂ-ಕೆಎ-05,ಸಿ-6208 ನೇದ್ದರ ಚಾಲಕ ತನ್ನ ಟಾಟಾ ಸುಮೋವನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಮ್ಮ ಜೀಪಿನ ಮದ್ಯದ ಸೀಟಿನ ಬಲಗಡೆ ಕೊನೆಯಲ್ಲಿ ಕುಳಿತಿದ್ದ ತಾಯಿ ಮಹಾದೇವಮ್ಮ ಇವಳಿಗೆ ಟಾಟಾ ಸುಮೋ ಚಾಲಕ ಜೀಪಿಗೆ ಅಫಗಾತ ಪಡಿಸಿದ್ದರಿಂದ ನನ್ನ ತಾಯಿಯ ಬಲಗಾಲಿಗೆ, ಟೊಂಕಕ್ಕೆ ಭಾರಿ ರಕ್ತಗಾಯವಾಗಿ ಬಲಗೈಗೆ ತರಚಿದ ಹಾಗು ಗುಪ್ತ ಗಾಯವಾಗಿರುತ್ತದೆ ಟಾಟಾ ಸುಮೋ ಚಾಲಕ ಅಫಗಾತ ಪಡಿಸಿ ವಾಹನ ಸ್ಳಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು. ಚಾಲಕನ ಹೆಸರು ಅಕ್ಬರ ತಂದೆ ಹುಸೇನಸಾಬ ಸಾ|| ಕೊಡ್ಲಾ ಅಂತಾ ಗೊತ್ತಾಗಿರುತ್ತದೆ, ನಮ್ಮ ತಾಯಿಗೆ ಉಪಚಾರ ಕುರಿತು ಸೇಡಂದ ಸರಕಾರಿ ಅಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು. ಹೆಚ್ಚಿನ ಉಪಚಾರ ಕುರಿತು ಗುಲ್ಬರ್ಗಾ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 207/2011 ಕಲಂ-279,338 ಐಪಿಸಿ ಸಂ,187 ಐ.ಎಂ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಕಮಲಾಪೂರ ಪೊಲೀಸ್ ಠಾಣೆ: ಶ್ರೀಮತಿ. ಇಂದುಮತಿ ಗಂಡ ಚಂದ್ರಕಾಂತ ಮಾಳಗೆ ಸಾ:ವರನಾಳ ಗ್ರಾಮ ತಾ||ಜಿ|| ಗುಲಬರ್ಗಾ ವರು ನಾನು ಕೂಲಿ ಕೆಲಸಕ್ಕೆಂದು ಬೆಳೆಗ್ಗೆ ಹೋಗಿ ರಾತ್ರಿ ಮನೆಗೆ ಬಂದು ಮನೆಯಲ್ಲಿ ಅಡುಗೆ ಮಾಡಿ ಮಕ್ಕಳೊಂದಿಗೆ ಊಟ ಮಾಡಿಕೊಂಡು ಎರಡೂ ಕೋಣೆಗಳಿದ್ದ ಮನೆಗೆ ಕೀಲಿ ಹಾಕಿ ನಾವೇಲ್ಲರೂ ಇನ್ನೊಂದು ಮನೆಯ ಮಲಗಿಕೊಂಡಿದ್ದು ದಿನಾಂಕ; 23/11/2011 ರಂದು ಬೆಳಿಗ್ಗೆ ಎದ್ದು ನೋಡಲಾಗಿ ಮನೆಗೆ ಹಾಕಿದ ಕೀಲಿ ಮುರಿದು ಮನೆಯಲ್ಲಿದ್ದ ಕಬ್ಬಿಣದ ಪೆಟ್ಟಿಗೆಯ ಕೀಲಿ ಕೈ ಮುರಿದು ಬಂಗಾರದ ಆಭರಣಗಳು ಮತ್ತು ನಗದು ಹಣ ಹಾಗು ಸೀರೆಗಳು ಹೀಗೆ ಒಟ್ಟು 10500/- ರೂಪಾಯಿ ಕಿಮ್ಮತ್ತಿನವುಗಳು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದಠಾಣೆ ಗುನ್ನೆ ನಂ; 144/2011 ಕಲಂ 457. 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಹರಣ ಮತ್ತು ನಿಂದನೆ ಪ್ರಕರಣ:

ಸೇಡಂ ಪೊಲೀಸ ಠಾಣೆ: ಶ್ರೀ ಲಾಲಪ್ಪ ತಂದೆ ನಾಗಪ್ಪ ಮದನಾ ಸಾ||ತುನ್ನೂರ, ತಾ|| ಸೇಡಂ. ರವರು ನಾನು ದುಗನೂರ ಗ್ರಾಮ ಪಂಚಾಯತದಿಂದ ಕಾಂಗ್ರೆಸ ಪಕ್ಷದಿಂದ ಆಯ್ಕೆಯಾಗಿ ಗ್ರಾಮ ಪಂಚಾಯತ ಅಧ್ಯಕ್ಷನಾಗಿದ್ದು ಉಪಾಧ್ಯಕ್ಷರಾಗಿ ಮಹಿಳಾ ಅಭ್ಯರ್ತಿ ಪಾರ್ವತಮ್ಮ ತಿಪ್ಪರೆಡ್ಡಿಕರ್ ಇದ್ದು ನಮ್ಮ ಪಂಚಾಯತ ಕೆಲಸ ಕಾರ್ಯಗಳನ್ನು ಅಲ್ಲದೇ ಯೋಜನೆ ಕಾಮಗಾರಿಗಳನ್ನು ಸುಗಮವಾಗಿ ಮಾಡಿಕೊಂಡು ಬಂದಿರುತ್ತೇವೆ. ನಮ್ಮ ಪಂಚಾಯತ ಕಾರ್ಯಾಲಯದ ಸದಸ್ಯನಾಗಿದ್ದ ಮಹಾದೇವಪ್ಪ ದುಗನೂರ ಹಾಗೂ ವೆಂಕಟಯ್ಯ ದೇವನೂರ ಇವರು ನನಗೆ ಗ್ರಾಮ ಪಂಚಾಯತ ಅಧ್ಯಕ್ಷ ನಾಗುವ ಕಾಲಕ್ಕೆ 15 ತಿಂಗಳು ನನಗೆ ಅಧ್ಯಕ್ಷಸ್ಥಾನ ಮಾಡಿಕೊಂಡು ನಂತರ 15 ತಿಂಗಳ ಅವಧಿ ಬೇರೆಯವರಿಗೆ ಬಿಟ್ಟು ಕೊಡಲು ಕರಾರು ಮಾಡಿಕೊಂಡಿದ್ದು ಇತ್ತು. ನಂತರ 15 ತಿಂಗಳ ಅವಧಿಯಲ್ಲಿ ಕೆಲಸ ಕಾರ್ಯಗಳನ್ನು ಮಾಡಿಕೊಂಡಿದ್ದರಿಂದ ಹಣ ಖರ್ಚ ಆಗಿದ್ದು ಸದರಿ ಹಣ ಕೊಡು ನಾನು ರಾಜಿನಾಮೆ ಮಾಡುತ್ತೇನೆ ಅಂತ ಹೇಳಿದ್ದರಿಂದ ಅವರು ನನ್ನ ಮೇಲೆ ವೈಮಸ್ಸು ಮಾಡಿಕೊಂಡಿದ್ದು ಇತ್ತು ದಿ:23-11-2011 ರಂದು ಬೆಳಗ್ಗೆ ದುಗನೂರ ಪಂಚಾಯತ ಬಾಡಿ ಮೀಟಿಂಗ್ ನಡೆಯುತ್ತಿದ್ದಾಗ ಮದ್ಯಾಹ್ನ ಮಹಾದೇವಪ್ಪ ಕೊಂಡಮ್, ನಾಗರೆಡ್ಡಿ ತಿಪ್ಪರೆಡ್ಡಿಕರ ರವರು ಒತ್ತಾಯ ಪೂರ್ವಕವಾಗಿ ಸಭೆಯಿಂದ ಕಾಲರ ಹಿಡಿದುಕೊಂಡು ಎಳೆದುಕೊಂಡು ಹೊರಗೆ ತಂದು ನಾಗರೆಡ್ಡಿ ತಿಪ್ಪರೆಡ್ಡಿಕರ್ ರವರ ಮೋಟಾರು ಸೈಕಲ್ ಮೇಲೆ ಯಾದಗಿರಿ ವರೆಗೆ ಮೋಟಾರು ಸೈಕಲ್ ಮೇಲೆ ಓಯ್ದು ಬೈದು ಯಾದಗಿರಿಯಲ್ಲಿ ಬಿಟ್ಟು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆನಂ.208/2011 ಕಲಂ. 365, 511 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕಳ್ಳಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ ಒಂದು ಸಾವು:

ಸಂಚಾರಿ ಪೊಲೀಸ್ ಠಾಣೆ : ಶ್ರೀ ಮಹಮ್ಮದ ಅಬ್ದುಲ ಅಲಿಂ ತಂದೆ ಅಬ್ದುಲ್ ಸಮದ ಸಾಃ ಮಿಜ್ಬಾನಗರ ಎಮ್.ಎಸ್.ಕೆ.ಮಿಲ್ ಗುಲಬರ್ಗಾ ರವರು ದಿನಾಂಕ 23-11-2011 ರಂದು 4-20 ಪಿ.ಎಮ್ ಕ್ಕೆ ಮೃತ ಅಬ್ದುಲ್ ಸಮದ ತಂದೆ ಮಹ್ಮದ ಗೌಸ ಇತನು ಗಂಜ ಏರಿಯಾದಲ್ಲಿರುವ ಹೆಚ್.ಕೆ.ಎಮ್.ಎಸ್ ಟ್ರಾನ್ಸ್ಪೋರ್ಟನಲ್ಲಿ ಕೆಲಸ ಮಾಡುತ್ತಿರುವಾಗ ಗ್ರಾಮೀಣ ಪೊಲೀಸ್ ಠಾಣೆಯ ಕಡೆಯಿಂದ ಲಾರಿ ನಂಬರ ಎಮ.ವಾಯ.ಎಲ್ 5280 ನೇದ್ದರ ಚಾಲಕ ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಅಬ್ದುಲ ಸಮದ ಈತನಿಗೆ ಜೋರಾಗಿ ಡಿಕ್ಕಿ ಪಡಿಸಿ ಭಾರಿ ಗಾಯಗೊಳಿಸಿ ಲಾರಿ ಸ್ಥಳದಲಿಯೇ ಬಿಟ್ಟು ಓಡಿ ಹೋಗಿದ್ದು ಗಾಯಾಳುವಿಗೆ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 75/2011 ಕಲಂ 279, 304(ಎ) ಐ.ಪಿ.ಸಿ ಸಂಗಡ 187 ಐ.ಎಮಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ವರದಕ್ಷೀಣೆ ಕಿರುಕುಳ:

ವಿಶ್ವ ವಿದ್ಯಾಲಯ ಪೊಲೀಸ ಠಾಣೆ: ಶ್ರೀಮತಿ ಸನ ಫಾತಿಮಾ @ ರಾಘಸಿಂಧೂ ರವರು ದಿನಾಂಕ 05-11-2011 ರಂದು ಬೆಂಗಳೂರ ನಗರ ಗಿರಿನಗರದ ಪೊಲೀಸ ಠಾಣೆಗೆ ಹಾಜರಾಗಿ ಸೈಯ್ಯದ ಮಿಂಗಜುಲ್ಲಾ ಹಸೇನಿ ಎಂಬಾತನು ಫೋನನಲ್ಲಿ ಪರಿಚಯಿಸಿಕೊಂಡು ಸ್ನೇಹಿತನಾಗಿ ತನ್ನ ಹೆಸರು ಇಮ್ರಾನ್ ಎಂದು ನಾನು ಎಂಬಿಎ ಮುಗಿಸಿದ್ದು ಒಳ್ಳೆಯ ಕೆಲಸದಲ್ಲಿದ್ದೆನೆ ಮದುವೆಯಾಗು ಎಂದು ಹೇಳಿ ನನ್ನನ್ನು ನಂಬಿಸಿ ದಿ. 22-10-2009 ರಂದು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸಿ ಹೈದ್ರಾಬಾದ್ ನಲ್ಲಿ ಬಲವಂತದಿಂದ ಮುಸ್ಲಿಂ ಸಂಪ್ರದಾಯದಂತೆ ವಿವಾಹ ಮಾಡಿಕೊಂಡು ನಂತರ ನನ್ನ ತಂದೆಯ ಮನೆಯಿಂದ 50,ಲಕ್ಷ ರೂ ನಗದು ಸುಮಾರು 1 ಕೋಟಿ 38 ಲಕ್ಷ ರೂ ಬೆಲೆಯ ಒಡವೆಗಳು ಷೇರು ಪತ್ರಗಳು ಮತ್ತು 3 ಮೊಬೈಲಳನ್ನು ಆತ ಇತರೆ ಸಂಬಂಧಿಕರಾದ ಜಿಯಾವುಲ್ಲಾ ಹುಸೇನಿ , ಶ್ರೀಮತಿ ಅಮೀನಾ ,ಸೈಯ್ಯದ ಸಂಶಲನ್ ಸಲೀಂ ಎಂಬುವವನೊಂದಿಗೆ ಸೇರಿಕೊಂಡು ಮೋಸ ಮಾಡಿ ನನ್ನನ್ನು ಪೂನಾ ಹಾಗೂ ಉತ್ತರ ಭಾರತದ ಹಲವು ಕಡೆ ಕರೆದುಕೊಂಡು ಓಡಾಡಿ ನನಗೆ ತವರು ಮನೆಯಿಂದ ಹೆಚ್ಚಿನ ಹಣವನ್ನು ತೆಗೆದುಕೊಂಡು ಬಾ ಎಂದು ವರದಕ್ಷಿಣೆ ಕಿರುಕುಳ ಕೊಡುತ್ತಾ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ನೀಡುತ್ತಾ ಹಣವನ್ನು ತರದಿದ್ದರೆ ನಿನ್ನನ್ನು ಮತ್ತು ನಿನ್ನ ಕುಟುಂಬದವರನ್ನು ಕೊಲೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕುತ್ತಿದ್ದು. ಆತನ ತಂದೆಯಿರುವ ಗುಲ್ಬರ್ಗಾದ ಮನೆಗೆ ಕರೆದುಕೊಂಡು ಬಂದು ನನ್ನನ್ನು ಸುಮಾರು 10 ದಿವಸಗಳಿಗಿಂತ ಹೆಚ್ಚು ಕಾಲ ಆಕ್ರಮ ಬಂಧನದಲ್ಲಿಟ್ಟು ಅಲ್ಲಿಯು ಕೂಡ ನನಗೆ ಹಿಂಸೆ ನೀಡುತ್ತಿದ್ದು ಇದರಿಂದ ನಾನು ಬೆಂಗಳೂರಿಗೆ ಬಂದಿರುವುದಾಗಿ ಹೇಳಿ ದೂರು ದಾಖಲ ಮಾಡಿಕೊಳ್ಳಲು ಪಿರ್ಯಾದಿ ಸಲ್ಲಿಸಿದ್ದರಿಂದ ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲ ಆಗಿರುತ್ತದೆ. ಗಿರಿನಗರ ಪೊಲೀಸ ಠಾಣಾ ವ್ಯಾಪ್ತಿಗೆ ಒಳಪಡುವ 1 ನೇ ಇ ಮುಖ್ಯರಸ್ತೆಯ ರಾಘವೇಂದ್ರ ಸ್ವಾಮಿ ಮಠದ ಬಳಿಮನೆ ನಂ.813 ರಲ್ಲಿ ವಾಸವಾಗಿದ್ದು ಕೃತ್ಯ ನಡೆದ ಸ್ಥಳವು ಹೆಚ್.5-995 ಚುನ್ನಭಟ್ಟಿ ಮೀರಜ ಮಸೀದಿಯ ಎದುರು ಮಕ್ಕಾ ಕಾಲೋನಿ ಗುಲಬರ್ಗಾವಾಗಿದ್ದು , ಸದರಿ ಸ್ಥಳವು ವಿಶ್ವವಿದ್ಯಾಲಯ ಪೊಲೀಸ ಠಾಣೆಗೆ ಒಳಪಡುವುದರಿಂದ ಪ್ರಕರಣದ ಕಡತವನ್ನು ಮುಂದಿನ ತನಿಖೆಗಾಗಿ ಮಾನ್ಯ ನ್ಯಾಯಾಲಯದಿಂದ ಆದೇಶ ಪಡೆದು ವರ್ಗಾವಣೆ ಮಾಡಿರುತ್ತಾರೆ. ಠಾಣೆ ವ್ಯಾಪ್ತಿಯ ಆಧಾರದ ಮೇಲಿಂದ ಠಾಣೆ ಗುನ್ನೆ ನಂ 270/11 ಕಲಂ 498(ಎ) , 419, 420, 506, 344, 114, 120(ಬಿ) ಸಂ 34 ಐಪಿಸಿ ಮತ್ತು 3&4 ಡಿ ಪಿ ಎಕ್ಟ ಪ್ರಕಾರ ಪ್ರಕರಕಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ:

ಅಶೋಕ ನಗರ ಪೊಲೀಸ್ ಠಾಣೆ :ಶ್ರೀ ಸೊಮಶೇಖರ ತಂದೆ ವೀರಪ್ಪಾ ಮಸ್ಕಿ ಸಾ: ಮಸ್ಕಿ ಹಾ.ವ: ರಾಮನಗೌಡ ಮುದ್ನಾಳ ರವರು ನನ್ನ ಪರಿಚಯದವರಾದ ಧರ್ಮಣ್ಣಾ ತಂದೆ ಮುರೇಗೇಪ್ಪಾ ಮಾಗಣಗೇರಿ ಇತನು ತನ್ನ ಅರ್ಜಂಟ ಕೆಲಸಕ್ಕಾಗಿ ಹೊಗಲು ದ್ವಿಚಕ್ರ ವಾಹನ ಕೇಳಿದ್ದರಿಂದ ನನ್ನ ಟಿ.ವಿ.ಎಸ್‌ ಹೇವಿಡ್ಯೂಟಿ ದ್ವಿಚಕ್ರ ವಾಹನ ನಂ. ಕೆಎ 32- JPïì 9679 ನೇದ್ದನ್ನು ಕೊಟ್ಟಿದ್ದು ದಿನಾಂಕ 05/09/2011 ರಂದು ತನ್ನ ಕೆಲಸ ಮುಗಿಸಿಕೊಂಡು ಘಾಟಗೇ ಲೇಔಟ ಬಡಾವಣೆಯಲ್ಲಿಯ ತಮ್ಮ ಮನೆಯ ಮುಂದೆ ಗಾಡಿಯನ್ನು ನಿಲ್ಲಿಸಿ ಮಲಗಿರುವಾಗ ದಿ: 06/09/2011 ರಂದು ಬೆಳಿಗ್ಗೆ ಎದ್ದು ನೊಡಲು ಗಾಡಿ ಇರಲಿಲ್ಲ. ಆಗ ಈ ವಿಷಯವನ್ನು ನನಗೆ ತಿಳಿಸಿದರು. ಆ ದಿನದಿಂದ ಇಲ್ಲಿಯ ವರೆಗೆ ನಾನು ಮತ್ತು ಧರ್ಮಣ್ಣ ಇಬ್ಬರು ಗುಲಬರ್ಗಾದಲ್ಲಿ ಹುಡುಕಾಡುತ್ತಿದ್ದು ಸಿಕ್ಕಿರುವುದಿಲ್ಲಾ. ಯಾರೋ ಕಳ್ಳರು ಮನೆಯ ಮುಂದೆ ನಿಲ್ಲಿಸಿದ ನನ್ನ ದ್ವಿಚಕ್ರ ವಾಹನ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 126/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತ ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ರಾಜು ತಂದೆ ಸಿದ್ಧಣ್ಣಾ ಕುಂಬಾರ ಸಾ: ಶಿವಾಜಿ ನಗರ ಗುಲಬರ್ಗಾ ರವರು ನಾನು ಮತ್ತು ನನ್ನ ತಮ್ಮ ಶ್ರೀಶೈಲ ಗೆಳೆಯ ಪುಂಡಲೀಕ ರವರೆಲ್ಲರೂ ಕೂಡಿಕೊಂಡು ನನಗೆ ಆರಾಮ ಇಲ್ಲದ ಕಾರಣ ಕಪನೂರ ಗ್ರಾಮದಲ್ಲಿರುವ ಡಾ:ಎ.ಎಸ್. ಪಾಟೀಲ ಆಸ್ಪತ್ರೆಗೆ ತೋರಿಸುವ ಕುರಿತು ಸಾಯಂಕಾಲ ಕೆಎ 32 ಎ 3124 ನೇದ್ದರಲ್ಲಿ ರಾಮ ನಗರ ಕ್ರಾಸಿನಲ್ಲಿ ಕುಳಿತುಕೊಂಡು ಹೊರಟಿದ್ದಾಗ ಅಟೋ ಚಾಲಕನು ತನ್ನ ಆಟೋವನ್ನು ಅತಿವೇಗ ಮತ್ತು ನಿರ್ಲಕ್ಷತನದಿಂದ ನಡೆಸುತ್ತಾ ಹುಮನಾಬಾದ ರಿಂಗ ರೋಡಿನ ವಿ.ಕೆ.ಜಿ. ಶೋ ರೂಮ್ ಎದುರಿನ ರೋಡಿನ ಮೇಲೆ ಬಂದಾಗ ಎದುರುನಿಂದ ಯಾವುದೋ ವಾಹನ ಬರುತ್ತಿರುವಾಗ ವೇಗದಲ್ಲಿ ಕಟ್ ಹೊಡೆದಾಗ ಆಟೋ ಪಲ್ಟಿಯಾಗಿದ್ದರಿಂದ ಆಟೋದಲ್ಲಿದ್ದ ನನಗೆ ಮತ್ತು ಚಾಲಕ ಪ್ರಭು ಇಬ್ಬರು ರಕ್ತಗಾಯ ಮತ್ತು ಭಾರಿ ರಕ್ತಗಾಯಗಳಾಗಿದ್ದು ಇನ್ನಿಬ್ಬರಿಗೆ ಯಾವುದೇ ಗಾಯ ಆಗಿರುವುದಿಲ್ಲಾವೆಂದು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 349/2011 ಕಲಂ 279,337 ,338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.