POLICE BHAVAN KALABURAGI

POLICE BHAVAN KALABURAGI

07 December 2017

KALABURAGI DISTRICT REPORTED CRIMES

ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿ ಹಲ್ಲೆ ಮಾಡಿದ ಪ್ರಕರಣ :
ರಾಘವೇಂದ್ರ ನಗರ ಠಾಣೆ : ದಿನಾಂಕ 06.12.2017 ರಂದು ಸಾಯಂಕಾಲ 5 ಗಂಟೆಯಿಂದ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗೋವಾ ಹೊಟೇಲ ಹತ್ತಿರ ಮುಖ್ಯ ರಸ್ತೆಯ ಮೇಲೆ ಶ್ರೀಮತಿ ಅಕ್ಕಮಾಹಾದೇವಿ ಪಿ.ಎಸ್.ಐ. ಮತ್ತು , ನಮ್ಮ ಠಾಣೆಯ ಶ್ರೀ ಎ. ಪೌಲ ಎ.ಎಸ್.ಐ. ಶ್ರೀ ಶಿವಪುತ್ತಪ್ಪ ಎ.ಎಸ್.ಐ. ಶ್ರೀ ಮಲ್ಲಿನಾಥ ಹೆಚ್.ಸಿ 355 ಮತ್ತು ಶ್ರೀ ಪ್ರಮೋದ ಪಿಸಿ 249 ರವರನ್ನು ಸಂಗಡ ಕರೆದುಕೊಂಡು ರಸ್ತೆಯ ಮೇಲೆ ಸಂಚರಿಸುವ ವಾಹನಗಳ ದಾಖಲಾತಿಗಳನ್ನು ಪರಿಶಿಲನೆ ಮಾಡಿಕೊಂಡಿದ್ದು ಸಾಯಂಕಾಲ 7:30 ಗಂಟೆಯ ಸುಮಾರಿಗೆ ಮೋಟಾರ ಸೈಕಲ ನಂ ಕೆಎ 32 ಇಎಚ್ 6333 ಪಲ್ಸರ 180 ನೇದ್ದರ ಚಾಲಕನು ಮೋಟಾರ ಸೈಕಲ ತೆಗೆದುಕೊಂಡು ಇಬ್ಬರು ಹುಡುಗರು ಬಂದಿದ್ದು ಆಗ ನಾನು ಸದರಿ ಮೋಟಾರ ಸೈಕಲ ಚಾಲಕನಿಗೆ ಮೊಟಾರ ಸೈಕಲ ದಾಖಲಾತಿಗಳನ್ನು ಹಾಜರ ಪಡಿಸಲು ಸೂಚಿಸಿದ್ದು ಆಗ ಸದರಿ ಮೊಟಾರ ಸೈಕಲ ಮೇಲೆ ಬಂದ ಇಬ್ಬರು ಹುಡುಗರು ಪೊಲೀಸರಿಗೆ ಬೇರೆ ಕೆಲಸ ಇಲ್ಲವೆ ವಿನಾಕಾರಣ ತೊಂದರೆ ಮಾಡುತ್ತಾರೆ. ಅಂತ ಏರು ದ್ವನಿಯಲ್ಲಿ ಅವಾಚ್ಯವಾಗಿ ಮಾತನಾಡುತ್ತಾ ಒಮ್ಮೆಲೆ ನನ್ನ ಮೈ ಮೇಲೆ ಬಂದಿದ್ದು ಆಗ ನನ್ನ ಜೋತೆಯಲ್ಲಿ ಇದ್ದ ಸಿಬ್ಬಂದಿಯವರು ಸದರಿ ಮೋಟಾರ ಸೈಕಲ ಸವಾರರಿಗೆ ನಿಧಾನವಾಗಿ ಮಾತನಾಡು ಏಕೆ ಚಿರಾಡುತ್ತಿ ನಿಮ್ಮ ಮೋಟಾರ ಸೈಕಲ ದಾಖಲಾತಿಗಳು ತೋರಿಸಿ ಅಂತ ಹೇಳಿದ್ದು ಆಗ ಸದರಿಯವರು ನೀವು ಯಾರು ನಮಗೆ ತಡೆಯುವವರು ಅಂತ ನನಗೆ ಮತ್ತು ನಮ್ಮ ಸಿಬ್ಬಂದಿಯವರಿಗೆ ನೂಕಿ ಕೊಟ್ಟು ನಮ್ಮ ಕೈಗಳಲ್ಲಿದ ಪೈನ ಬುಕ್ಕಗಳನ್ನು ಬಿಸಾಡಿ ನಮ್ಮ ಕರ್ತವ್ಯಕ್ಕೆ ಅಡತಡೆ ಮಾಡಿ ತಮ್ಮ ಮೋಟಾರ ಸೈಕಲ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದು ಆಗ ನಾನು ಮತ್ತು ಸಿಬ್ಬಂದಿಯವರು ಸದರಿ ಮೋಟಾರ ಸೈಕಲ ಸವಾರರಿಗೆ ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಲು ಸದರಿಯವರು ತಮ್ಮ ಹೆಸರು 1) ಅಶೋಕ ತಂದೆ ದತ್ತಪ್ಪ ದಯಾಗೊಂಡ ಸಾ: ಪಟ್ಟಣ ತಾ:ಜ: ಕಲಬುರಗಿ 2) ಉದಯ ತಂದೆ ಚಂದ್ರಕಾಂತ ಪಡಸಾವಳೆ ಸಾ: ಝಳಕಿ ಹಾ:ವ: ಹೀರಾಪೂರ ಕಣ್ಣಿ ಮಾರ್ಕೇಟ ಹತ್ತಿರ ಕಲಬುರಗಿ ಅಂತ ತಿಳಿಸಿದ್ದು ಸದರಿಯವರಿಗೆ ಸಿಬ್ಬಂದಿಯವರ ಸಹಾಯದಿಂದ ವಶಕ್ಕೆ ಪಡೆದುಕೊಂಡು ರಾತ್ರಿ 8:30 ಗಂಟೆಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟದರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ 06-12-2017   ರಂದು  ಹೊನಗುಂಟಾ  ಸಿಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ಯಾಕ್ಟರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ  ಕಲ್ಯಾಣಿ  ಎ.ಎಸ್.ಐ ಶಹಾಬಾದ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಡಿ.ಎಸ್.ಪಿ ಸಾಹೇಬರು ಶಹಾಬಾದ ರವರ ಮಾರ್ಗದರ್ಶನದಲ್ಲಿ  ಹೊನಗುಂಟಾ ಗ್ರಾಮದ ಬ್ರೀಡ್ಜ ಕೆಳಗಿನ ಹಳ್ಳದ ರಸ್ತೆಯಲ್ಲಿ 4-00 ಗಂಟೆಗೆ ಹೋದಾಗ ಕಾಗಿಣಾ ನದಿ ಕಡೆಯಿಂದ ಒಂದು ಮರಳು ತುಂಬಿದ ಟ್ಯಾಕ್ಟರ  ಬರುತ್ತಿದ್ದು, ಅದನ್ನು ನೋಡಿ ನಿಲ್ಲಿಸುವಾಗ ಚಾಲಕನು ಟ್ಯಾಕ್ಟರ ನಿಲ್ಲಿಸಿ ಓಡಿ ಹೋದನು.  ಅವನಿಗೆ ನೋಡಿದರೆ ಗುರ್ತಿಸುತ್ತೇನೆ.  ಅದರ ನಂಬರ   ಪರಿಶೀಲಿಸಿ ನೋಡಲಾಗಿ ಮಶಿ ಫರಗೂಷನ ಟ್ಯಾಕ್ಟರ ಮರಳು ತುಂಬಿದ್ದು ಅದರ ನಂಬರ ಕೆ.ಎ. 32 ಟಿ 5411 – 5412 ಇದ್ದು ಅದರ ಅ.ಕಿ 2 ಲಕ್ಷ ರೂ. ಅದರಲ್ಲಿದ್ದ ಮರಳು ಅ.ಕಿ 1000/- ರೂ.  ಮರಳು ತುಂಬಿದ ಟ್ಯಾಕ್ಟರ  ಪಂಚರ ಸಮಕ್ಷಮದಲ್ಲಿ  ಜಪ್ತಿಮಾಡಿಕೊಂಡು ಟ್ಯಾಕ್ಟರ ಚಾಲಕ ಮತ್ತು ಮಾಲಕ ಇಬ್ಬರೂ ಸರಕಾರಕ್ಕೆ ಯಾವುದೇ ರಾಜಧನ ತುಂಬದೆ ಅಕ್ರಮವಾಗಿ ಮರಳು ಕಾಗಿಣಾ ನದಿಯಿಂದ ಕಳ್ಳತನದಿಂದತುಂಬಿಕೊಂಡು ಸಾಗಿಸುತ್ತಿದ್ದರಿಂದ ಸದರಿ ಟ್ರ್ಯಾಕ್ಟರನೊಂದಿಗೆ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ಶ್ರೀ ಅರ್ಜುನ  ತಂದೆ ತಿಮ್ಮಯ್ಯ ಕೇರಮಗಿ ಸಾಃ ಸಿರನೂರ ತಾ.ಜಿಃ ಕಲಬುರಗಿ ರವರ  ತಂಗಿಯಾದ ರೇಣುಕಾ ಇವಳಿಗೆ ಸುಮಾರು 2-3 ದಿವಸಗಳಿಂದ ಆರೋಪಿ ಸಂತೋಷ ಈತನು ಚೂಡಾಸುತ್ತಿದ್ದರಿಂದ ದಿನಾಂಕ 05/12/2017 ರಂದು ಫಿರ್ಯಾದಿದಾರರ ಕೇಳಲು ಹೊದಾಗ ಸಂತೊಷ ಸಂಗಡ ಇನ್ನೂ 07 ಜನರು ಕೂಡಿಕೊಂಡು ಫಿರ್ಯಾದಿದಾರರಿಗೆ ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವದ ಭೇದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ