POLICE BHAVAN KALABURAGI

POLICE BHAVAN KALABURAGI

29 March 2012

GULBARGA DIST REPORTED CRIMES

ಮನೆ ಕಳ್ಳತನ ಮಾಡಿದ ಕಳ್ಳರ ಬಂದನ

ಗುಲಬರ್ಗಾ ನಗರದ ಎಮ್.ಆರ್.ಎಮ್.ಸಿ ಎದುರುಗಡೆ ಸುಂದರ ನಗರ ಬಡಾವಣೆಯ ಮನೆ ನಂ:8-611/1, ಸುಂದರ ನಗರ ಬಢಾವಣೆಯ ಮನೆ ನಂ:2-811/6ಎ ಸುಂದರ ನಗರ ಢೋರ ಗಲ್ಲಿ ಗುಲಬರ್ಗಾ, ನಗರ ಆರೋಗ್ಯ ಕೇಂದ್ರ ಮಕ್ತಂಪೂರ ಗುಲಬರ್ಗಾದಲ್ಲಿ ಕಳ್ಳತನವಾಗಿದ್ದರಿಂದ ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ ನಂ: ಗುನ್ನೆ ನಂ: 294/10 ಕಲಂ: 454, 457, 380 ಐ.ಪಿ.ಸಿ, ಗುನ್ನೆ ನಂ: 224/11 ಕಲಂ: 457, 380 ಐ.ಪಿ.ಸಿ, 208/11 ಕಲಂ: 457, 380 ಐ.ಪಿ.ಸಿ ಮತ್ತು ಗುನ್ನೆ ನಂ: 184/11 ಕಲಂ: 457 380 ಐ.ಪಿ.ಸಿ ಪ್ರಕರಣಗಳು ದಾಖಲಾಗಿರುತ್ತವೆ. ತನಿಖೆಯ ಕಾಲಕ್ಕೆ ಮಾನ್ಯ ಪ್ರವೀಣ ಮಧುಕರ ಪವಾರ ಐ.ಪಿ.ಎಸ್ ಎಸ್.ಪಿ ಗುಲಬರ್ಗಾ, ಮಾನ್ಯ ಕಾಶಿನಾಥ ತಳಕೇರಿ ಹೆಚ್ಚುವರಿ ಎಸ್.ಪಿ ಗುಲಬರ್ಗಾ ಹಾಗೂ ಮಾನ್ಯ ಭೂಷಣ ಜಿ ಬೊರಸೆ ಐ.ಪಿ.ಎಸ್ ಸಹಾಯಕ ಪೊಲೀಸ ಅಧೀಕ್ಷಕರು () ಉಪ-ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಶರಣಬಸವೇಶ್ವರ ಪಿ.ಐ ಬ್ರಹ್ಮಪೂರ ಪೊಲೀಸ ಠಾಣೆ ರವರು, ಅಪರಾಧ ವಿಭಾಗದ ಸಿಬ್ಬಂದಿಯವರಾದ ಮಾರುತಿ ಎ.ಎಸ್.ಐ, ಬಸವರಾಜ ಹೆಚ್.ಸಿ, ಗಜೇಂದ್ರ, ಮಹಾಂತೇಶ, ರಾಜಕುಮಾರ, ಸುಧಾಕರ ಸಿಪಿಸಿ ರವರು ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ ನಂ: 224/11 ರಲ್ಲಿ ಕಳೆದು ಹೋದ ಒಂದು ನೋಕಿಯಾ ಮೊಬೈಲನ ಕಾಲ ಡಿಟೇಲ್ಸ ಸಹಾಯದಿಂದ ಆರೋಪಿತರಾದ ಶ್ರೀನಿವಾಸ ತಂದೆ ಸಿದ್ರಾಮ ಉಪಾದ್ಯ, ವಯ|| 19 ವರ್ಷ, || ಮಹಾನಗರ ಪಾಲಿಕೆಯಲ್ಲಿ ಕೆಲಸ, ಸಾ|| ಬಾಪೂನಗರ ಗುಲಬರ್ಗಾ, ಅರ್ಜುನ ತಂದೆ ವಿಜಯ ಕಾಂಬಳೆ, ವಯ|| 18 ವರ್ಷ, || ಪಾರಿವಾಳ ಸಾಕಣೆ ಕೆಲಸ, ಸಾ|| ಬಾಪೂನಗರ ಗುಲಬರ್ಗಾ ರವರನ್ನು ಬಂದಿಸಿರುತ್ತಾರೆ. ಆರೋಪಿತರಿಂದ ಮೇಲೆ ದಾಖಲಾದ ಗುನ್ನೆಗಳಲ್ಲಿ ಕಳೆದು ಹೋದ 14 ಗ್ರಾಂ ಬಂಗಾರದ ಚೈನ ಅ||ಕಿ|| 20,000/-, 5 ಗ್ರಾಂ ಬಂಗಾರದ ಹರಳಿನ ಉಂಗುರ ಅ||ಕಿ|| 10,000/-, 4.5 ಗ್ರಾಂ ಬಂಗಾರದ ಉಂಗುರ ಅ||ಕಿ|| 10,000/-, ಒಂದು ನೊಕಿಯಾ ಮೊಬೈಲ ಅ||ಕಿ|| 3000/-, ಅರ್ದ ಗ್ರಾಂ ಬಂಗಾರದ 6 ಉಂಗುರ ಮತ್ತು 1 ಮಾಸಿಯ ಎರಡು ಉಂಗುರ ಅ||ಕಿ|| 10,000/-, 6) ಬೆಳ್ಳಿಯ ಬಳೆ, ಚೈನ್, ಮತ್ತು ಲಿಂಗದ ಕಾಯಿ ಅಂದಾಜು 3 ತೊಲೆ ಅ||ಕಿ|| 1000/- ಹಾಗೂ ಒಂದು ಕುಕ್ಕರ ಅ||ಕಿ|| 150/- ಬೆಳೆವುಳ್ಳ ವಸ್ತುಗಳನ್ನು ಜಪ್ತ ಮಾಡಿಕೊಂಡು ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುತ್ತಾರೆ.

ಅಪಘಾತ ಪ್ರಕರಣ:

ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಶಿವಕುಮಾರ ತಂದೆ ಅಣವೀರಪ್ಪಾ ಕುಸನೂರ ಸಾ: ದೇವನ ತೇಗನೂರ ರವರು ನಾನು ಮತ್ತು ನಮ್ಮೂರ ಶಿವರಾಜ ತಂದೆ ಮಹಾಂತಪ್ಪಾ ಚಿತ್ತಾಫೂರ ಇಬ್ಬರು ಕೂಡಿಕೊಂಡು ದಿನಾಂಕ: 28/03/2012 ರಂದು ಹೀರೊ ಹೊಂಡಾ ಸ್ಪ್ಲೇಂಡರ ಆರ್.ಟಿ. ಓ ಆಫೀಸ ಗುಲ್ಬರ್ಗಾ ದಲ್ಲಿ ಪಾಸಿಂಗ ಮಾಡಿಸಲು ಹೋಗಿ ಮರಳಿ ಊರಿಗೆ ಬರುತ್ತಿರುವಾಗ ಭಂಕೂರ ಎ.ಬಿ.ಎಲ್. ಬಸ ನಿಲ್ದಾಣ ಹತ್ತಿರ ಶಿವರಾಜ ಇತನು ದ್ವಿ-ಚಕ್ರ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿದ್ದರಿಂದ ಮೋಟಾರ ಸೈಕಲ ಸ್ಕೀಡ್ ಆಗಿ ಬಿದ್ದಿದ್ದರಿಂದ ನನಗೆ ರಕ್ತಗಾಯವಾಗಿದ್ದು ಮತ್ತು ಶಿವರಾಜ ಎಡ ಕಪಾಳಕ್ಕೆ ಮತ್ತು ಎಡಗಣ್ಣಿಗೆ , ಎಡಗೈಗೆ , ತುಟಿಗೆ ರಕ್ತಗಾಯವಾಗಿದ್ದು ಇರುತ್ತದೆ. ದ್ವಿ-ಚಕ್ರ ವಾಹನದ ಟೆಂಪರರಿ ನಂಬರ ಕೆ.ಎ-32/ಟಿಆರ್-5998 ನೀಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 31/2012 ಕಲಂ 279,337 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕಳ್ಳತನ ಪ್ರಕರಣ:

ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀಮತಿ ಸತ್ಯಮ್ಮ ಗಂಡ ಬಕ್ಕಣ್ಣ ರೆಡ್ಡಿ ಸಾ|| ಇಂದಿರಾ ನಗರ ಗುಲಬರ್ಗಾ ರವರು ನಾನು ದಿನಾಂಕ:15.03.2012 ರಂದು ರಾತ್ರಿ ನಮ್ಮ ಮನೆ ಕೀಲಿ ಹಾಕಿಕೊಂಡು ನಮ್ಮ ಮನೆಯವರೆಲ್ಲರೂ ಅಂಗಡಯಲ್ಲಿಯೆ ಇದ್ದೆವು ಬೆಳಿಗ್ಗೆ ಮನೆಗೆ ಬಂದು ನೋಡಲು ಯಾರೋ ಕಳ್ಳರೂ ಮನೆಗೆ ಹಾಕಿದ ಕಿಲಿ ಮುರಿದು ಮನ್ನೆಯಲ್ಲಿಟ್ಟದ್ದ ಬಂಗಾರ, ಬೆಳ್ಳಿ ಆಣರಣಗಳು, ದೇವಿ ನಗರದ ಪ್ಲಾಟಿನ ದಾಖಲಾತಿಗಳು (ಕಿವಾಲ) ನಗದು ಹಣ 500/- ರೂಪಾಯಿಗಳು, ಮತ್ತು ಹಳೆ ಮೋಬಾಯಿಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ಗುನ್ನೆ ನಂ: 37/2012 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:
ಶ್ರೀಮತಿ ದೇವಮ್ಮ ಗಂಡ ಅಮೃತಪ್ಪಾ ಸಾವಳಗಿ ಸಾ ಕಪನೂರ ರವರು ನಾನು ದಿನಾಂಕ: 28-03-2012 ರಂದು 4=00 ಗಂಟೆಗೆ ಸುಮಾರಿಗೆ ಜಗತ ಸರ್ಕಲ್ ದಿಂದ ಎಸ್.ವಿ.ಪಿ.ಪಟೇಲ ಸರ್ಕಲ್ ಮೇನ್ ರೋಡಿನಲ್ಲಿ ಬರುವ ಲಾಹೋಟಿ ಪೆಟ್ರೋಲ್ ಪಂಪ ಹತ್ತಿರ ರೋಡಿನ ಮೇಲೆ ಅಟೋರೀಕ್ಷಾ ನಂ: ಕೆಎ-32 ಬಿ-2239 ನೇದ್ದರ ಚಾಲಕ ಸಲೀಮಮಿಯಾ ಇತನು ತನ್ನ ಅಟೋವನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿ ಅಟೋರೀಕ್ಷಾ ಪಲ್ಟಿಮಾಡಿ ಅಟೋದಲ್ಲಿ ಪ್ರಯಾಣ ಮಾಡುತ್ತಿದ್ದ ನನಗೆ ಭಾರಿಗಾಯ ಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 38/2012 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಂಗಳ ಸೂತ್ರ ದರೋಡೆ ಪ್ರಕರಣ:
ಸ್ಟೇಶನ ಬಜಾರ ಠಾಣೆ:
ಶ್ರೀಮತಿ ವಿನೋದಾ ಗಂಡ ಬಕ್ಕಾರೆಡ್ಡಿ ಸಾ: ಆನಂದ ನಗರ ಗುಲಬರ್ಗಾ ರವರು ನಾನು ದಿನಾಂಕ 28-03-12 ರಂದು 2000 ಗಂಟೆಗೆ ಮನೆಯಿಂದ ಕಸ ಚೆಲ್ಲಲು ಹೊರಗಡೆ ಬಂದಾಗ ಒಬ್ಬ ಮನುಷ್ಯನು ಮೊಟರ ಸೈಕಲ ಮೇಲೆ ಬಂದವನೆ ಕೊರಳಿಗೆ ಕೈ ಹಾಕಿ ಮಂಗಳ ಸೂತ್ರ ಕಿತ್ತುಕೊಂಡಿದ್ದು ಅದರಲ್ಲಿಯ ತಾಳಿಗಳು ಮಾತ್ರ ಕೆಳಗೆ ಬಿದ್ದಿದ್ದು ಉಳಿದ ಮೂರು ತೊಲಿ ಬಂಗಾರದ ಚೈನು ದೋಚಿಕೊಂಡು ಹೋಗಿರುತ್ತಾನೆ, ಅದರ ಅ.ಕಿ 84,000=00 ರೂಪಾಯಿ ಆಗುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂ 36/12 ಕಲಂ 392 ಐಪಿಸಿ ಪ್ರಕಾರ ಪ್ರಕರಣ ದಾಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಸೇಡಂ ಪೊಲೀಸ ಠಾಣೆ:
ಶ್ರೀಮತಿ, ಗೋದಾವರಿ ಗಂಡ ನರಸಪ್ಪ ಜೋಗಿ ಸಾ ರಂಜೋಳ ಇವರು ನಾನು ಮನೆಯಲ್ಲಿದ್ದಾಗ ನನ್ನ ಮೂರನೆಯ ಮಗಳಾದ ನರಸಮ್ಮ ವ 15 ವರ್ಷ ಇವಳು ತನ್ನ (ಅಜ್ಜಿ) ಆಯಿ ಬಾಲಮ್ಮ ನ ಮನೆಗೆ ಹೋಗಿ ವಾಪಸ ಓಡುತ್ತಾ ನಮ್ಮ ಮನೆಗೆ ಬಂದು ತಿಳಿಸಿದ್ದೆನಂದರೆ, “ ನಾನು ನಮ್ಮ ಆಯಿ ಬಾಲಮ್ಮ ಇವರ ಮನೆಗೆ ಈಗ ಮಧ್ಯಾನ ಮೂರು ಗಂಟೆಯ ಸುಮಾರಿಗೆ ಹೋದಾಗ (ಅಜ್ಜಿ) ಆಯಿ ಮನೆಯ ಹೊರಗೆ ಕಟ್ಟೆಯ ಮೇಲೆ ಕುಳಿತಾಗ ಮಾವನಾದ ಬಾಬು ತಂದೆ ಕಾಶಪ್ಪ ಜೋಗಿ ಸಾ ಕಸ್ತೂರಿಪಲ್ಲಿ ಇವನು ನನ್ನ ಹೆಸರಿಗೆ ಮನೆ ಮಾಡು ಅಂತಾ ಜಗಳ ತೆಗೆದು ನಾನು ಅಜ್ಜಿಯ ಮನೆಯ ಹತ್ತಿರ ಇದ್ದಾಗ ನನಗೆ ನೋಡಿ ಅಜ್ಜಿಗೆ ಮನೆಯೊಳಗೆ ಎಳೆದುಕೊಂಡು ಹೋಗಿ ಬಾಗಿಲು ಮುಚ್ಚಿರುತ್ತಾನೆ ನಾನು ಎಷ್ಟು ಒದರಿದರೂ ಬಾಗಿಲು ತೆರೆದಿರುವುದಿಲ್ಲ ಆದ್ದರಿಂದ ನೀನು ಬಾ ಅಂತಾ ನನಗೆ ತಿಳಿಸಿದ್ದರಿಂದ ನಾನು ಮತ್ತು ನನ್ನ ಮಗಳಾದ ನರಸಮ್ಮ ಹೋಗಿ ನೋಡಲಾಗಿ ನಮ್ಮ ಅಳಿಯ ಬಾಬು ಇತನು ಬಾಗಿಲು ತೆರೆದು ಹೊರಗೆ ಬಂದು ಅಲ್ಲಿಂದ ಓಡಿ ಹೋದನು, ಎಲ್ಲರೂ ಕೂಡಿ ಮನೆಯೊಳಗೆ ಹೋಗಿ ನೋಡಲಾಗಿ ನಮ್ಮ ಅತ್ತೆ ಮನೆಯಲ್ಲಿ ಎಲ್ಲಾ ಕಡೆ ಹುಡುಕಾಡಿದರೂ ಸಹ ಕಾಣಲಿಲ್ಲ. ಆಗ ನಾನು ಪಡಸಾಲೆಯಲ್ಲಿದ್ದ ಕಟ್ಟಿಗೆಯ ಮಂಚದ ಕೆಳಗೆ ನೋಡಲಾಗಿ ನಮ್ಮ ಅತ್ತೆ ಬಾಲಮ್ಮ ಇವಳ ಶವ ಇತ್ತು, ಅವಳ ಬಲಗೈ ಮುಂಗೈಗೆ ರಕ್ತಗಾಯ,ಎಡಗಾಲಿನ ಮೊಳಕಾಲಿಗೆ,ಎಡ ಕುತ್ತಿಗೆಯ ಹತ್ತಿರ ತರಚಿದ ಗಾಯ ಹಾಗು ಕುತ್ತಿಗೆಗೆ ಸುತ್ತಲು ಕಂದು ಗಟ್ಟಿದ ಗಾಯ ಕಂಡು ಬಂತು, ನಮ್ಮ ಅಳಿಯನಾದ ಬಾಬು ಇತನು ತನಗೆ ಊರಲ್ಲಿದ್ದ ಮನೆ ಹೆಸರಿಗೆ ಮಾಡಿಕೊಡಬೇಕು ಅಂತಾ ಆಗಾಗ ಬಂದು ಜಗಳ ಮಾಡುತ್ತಿದ್ದನು.ಅದಕ್ಕೆ ನಮ್ಮ ಅತ್ತೆ ಒಪ್ಪದ ಕಾರಣ ಅವಳಿಗೆ ಜಗಳ ತೆಗೆದು ಮನೆಯೊಳಗೆ ಒಯ್ದು ಕೈಯಿಂದ ಕುತ್ತಿಗೆ ಹಿಚುಕಿ,ಉಸಿರು ಗಟ್ಟಿಸಿ ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂಧ ಮಂಚದ ಕೆಳಗೆ ಹಾಕಿ ಕೌದಿ ಮುಚ್ಚಿ ಹೋಗಿರುತ್ತಾನೆ.ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 68/2012 ಕಲಂ, 302,201 ಐ,ಪಿ,ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.