POLICE BHAVAN KALABURAGI

POLICE BHAVAN KALABURAGI

08 June 2011

GULBARGA DIST REPORTED CRIMES

ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ ಪ್ರಕರಣ :-
ಶಹಾಬಾದ ನಗರ ಠಾಣೆ :
ಶ್ರೀ ಗುರುನಾಥ ತಂದೆ ಬಸವಣಪ್ಪಾ ಮೆಡಗುದೇ ಸಾ|| ತೊನಸಳ್ಳಿ [ಎಸ್‌] ರವರು, ದಿ:07-06-11 ರಂದು 11.00 ಎಎಂ ಸುಮಾರಿಗೆ ನಾನು ಸರೋಜಾ ವೈನ ಶಾಪ ಹತ್ತಿರ ಹೋಗುತ್ತಿರುವಾಗ ಮಾಣೆಕರಾವ ಮ್ಯಾನೇಜರ ಸರೋಜಾ ವೈನ ಶಾಪ ಇವನು ಬಂದು ನನಗೆ ತಡೆದು ವಿನಾ ಕಾರಣ ಜಗಳ ತೆಗೆದು ನನಗೆ ಅವಾಚ್ಯ ಶಬ್ದಗಳಿಂದ ಬೈಯ್ದು ನನ್ನ ಕೊಡಬೇಕಾದ ಹಣ ಕೊಡು ಅಂತಾ ಹೇಳಿದೆನು. ನಾನೆಲ್ಲಿ ನಿನಗೆ ದುಡ್ಡು ಕೊಡುವದಿದೆ ಅಂತಾ ಅಂದಿದ್ದಕ್ಕೆ ಸದರಿ ಮಾಣೆಕರಾವ ಇವನು ನನ್ನ ಸಂಗಡ ಜಗಳ ತೆಗೆದು ಒಡೆದ ಬಾಟಲಿಯಿಂದ ನನ್ನ ಹೊಟ್ಟೆಗೆ ಹೊಡೆದನು. ಹಾಗೂ ನನಗೆ ಹಣ ಕೊಡಲಿಲ್ಲ ವೆಂದರೆ ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿರುತ್ತಾನೆ. ಕಾರಣ ಸದರಿಯವನ ವಿರುದ್ದ ಸೂಕ್ತ ಕ್ರಮ ಕೈಕೊಳ್ಳಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆಗೆ ಯತ್ನ :-
ರಾಘವೇಂದ್ರ ನಗರ ಠಾಣೆ :
ಶ್ರೀ ಮಹ್ಮದ ಇರ್ಫಾನ್ ತಂದೆ ಮಹ್ಮದ ಜಾವೀದ ಶೇಖ ಸಾ|| ಹಿರಾಪೂರ ಗುಲಬರ್ಗಾ ರವರು, ನಾನು ಬಹುಮನಿ ಈದಗಾ ಹತ್ತಿರ ಇದ್ದಾಗ 1) ಕಲಿಂ ಮಿರ್ಜಾ, 2) ಫಯ್ಯುಮ ಮಿರ್ಜಾ, 3) ಸೈಬಾಜ ಅಲಿ, 4) ಅಮೀರ, 5) ರಿಯಾಜ್ ಸಾ|| ಎಲ್ಲರೂ ಬಿಲಾಲಬಾದ ಕಾಲೋನಿ ಗುಲಬರ್ಗಾ ಇವರೆಲ್ಲರೂ ನನಗೆ ಖರ್ಚಿಗೆ ಹಣ ಕೊಡು ಅಂತ ಒತ್ತಾಯಪಡಿಸಿದ್ದು, ಅದಕ್ಕೆ ನಾನು ನನ್ನ ಹತ್ತಿರ ಹಣ ಇಲ್ಲಾ ಅಂದಾಗ, ಆರೋಪಿತರೆಲ್ಲರು ಕೂಡಿಕೊಂಡು ತಲವಾರ, ಚಾಕು, ಕೈಯಿಂದ, ಹಾಗು ಕಲ್ಲಿನಿಂದ ಹೊಡೆದು ಭಾರಿ ರಕ್ತಗಾಯಗೊಳಿಸಿ, ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಜೀವದ ಬೆದರಿಕೆ ಹಾಕಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣ :-
ಫರಹತಾಬಾದ ಠಾಣೆ :
ಶ್ರೀ ಅರ್ಜುನ ತಂದೆ ಈರಪ್ಪಾ ಬೆಳಗೇರಿ ಸಾ: ಅಲ್ಲೂರ(ಬಿ), ತಾ: ಚಿತ್ತಾಪೂರ, ಜಿ:ಗುಲಬರ್ಗಾ ರವರು, ನನ್ನ ಮಗಳಾದ ಮಹಾದೇವಿ ಇವಳಿಗೆ ನಡಿವಿನ ಹಳ್ಳಿ ಗ್ರಾಮದ ಬಸವರಾಜ ತಂದೆ ಯಲ್ಲಪ್ಪಾ ಶಹಾಪೂರ ಈತನಿಗೆ 2 ವರ್ಷಗಳ ಹಿಂದೆ ಲಗ್ನ ಮಾಡಿ ಕೊಟ್ಟಿರುತ್ತೇವೆ. ಈಗ ನನ್ನ ಮಗಳಿಗೆ ಒಂದುವರೆ ತಿಂಗಳಿನ ಗಂಡು ಮಗು ಇರುತ್ತದೆ. ಈಗ ಒಂದೂವರೆ ವರ್ಷದಿಂದ ಸದರಿ ನನ್ನ ಮಗಳಿಗೆ ಆಕೆಯ ಗಂಡನಾದ ಬಸವರಾಜ ಈತನು ಸಂಸಾರದ ವಿಷಯದಲ್ಲಿ ಕಿರುಕುಳ ಕೊಟ್ಟು ಹೊಡೆಬಡೆ ಮಾಡುತ್ತಿದ್ದನು. ಈ ವಿಷಯ ನನ್ನ ಮಗಳು ನಮಗೆ ಹೇಳಿದ್ದರಿಂದ ಈಗ 6 ತಿಂಗಳ ಹಿಂದೆ ನಾನು ನನ್ನ ಮಗ ಬಸವರಾಜ ನನ್ನ ಹೆಂಡತಿ ಮೂರು ಜನ ಕೂಡಿಕೊಂಡು ನನ್ನ ಅಳಿಯನಿಗೆ ಚೆನ್ನಾಗಿ ಇರುವಂತೆ ತಿಳಿ ಹೇಳಿದ್ದು ಇರುತ್ತದೆ. ನಂತರ ನನ್ನ ಮಗಳು ಮಹಾದೇವಿ ಹೆರಿಗೆ ಆದ ನಂತರ ನಡವಿನ ಹಳ್ಳಿ ಗ್ರಾಮಕ್ಕೆ ಕಳುಹಿಸಿಕೊಟ್ಟ 3, 4 ದಿನಗಳಲ್ಲಿ ಬಸವರಾಜ ಈತನು ದಿ: 1-6-11 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ನನ್ನ ಮಗಳೊಂದಿಗೆ ಜಗಳ ತೆಗೆದು ಆಕೆಯ ಮೈಮೇಲೆ ಸೀಮೆ ಎಣ್ಣೆ ಹಾಕಿ ಕೊಲೆ ಮಾಡುವ ಉದ್ದೇಶದಿಂದ ಆಕೆಗೆ ಬೆಂಕಿ ಹಚ್ಚಿರುತ್ತಾನೆ. ನನ್ನ ಮಗಳಿಗೆ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಉಪಚಾರ ಪಡೆಯುವ ವೇಳೆಯಲ್ಲಿ ಮೃತಪಟ್ಟಿರುತ್ತಾಳೆ. ಕಾರಣ ನನ್ನ ಮಗಳನ್ನು ಕೊಲೆ ಮಾಡಿದ ಆತನ ಮೇಲೆ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.