POLICE BHAVAN KALABURAGI

POLICE BHAVAN KALABURAGI

19 January 2016

Kalaburagi District Reported Crimes

ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ಜೇವರಗಿ ಠಾಣೆ : ದಿನಾಂಕ 18.01.2016 ರಂದು ಜೇವರಗಿ ಪಟ್ಟಣದ ಬಿ.ಸಿ.ಮ್ ವಸತಿ ಗೃಹದ ಹತ್ತಿರ ಬಿಲಾಲ ಕಾಲೋನಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಇಸ್ಪಿಟ್‌ ಎಲೆಗಳ ಸಹಾಯದಿಂದ ಅಂದರ್-ಭಾಹರ್ ಜುಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ ವಿಧ್ಯಾಸಾಗರ ಎ.ಸ್.ಐ ಜೇವರಗಿ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ಜೂಜಾಟದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಮಾಡಿ 5 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು 1. ಮಲ್ಲು @ ಮಲ್ಲಿಕಾರ್ಜುನ ತಂದೆ ಈರಣ್ಣ ತಳವಾರ ಸಾ : ಬುಟ್ನಾಳ   2. ಮಹ್ಮದ್ ಪಟೇಲ್ ತಂದೆ ಖಾಸೀಂ ಪಟೇಲ್ ಸಾ : ಜೇವರಗಿ  3. ಸಿದ್ದಣ್ಣಗೌಡ ತಂದೆ ಬಸಣ್ಣಗೌಡ ಬುಟ್ನಾಳ ಸಾ : ಬುಟ್ನಾಳ  4. ಸುಲ್ತಾನ ತಂದೆ ಅಮೀನಸಾಬ್ ಇಜೇರಿ ಸಾ : ಕಟ್ಟಿ ಸಂಗಾವಿ  5. ಭೀಮರಾಯಗೌಡ ತಂದೆ ಸಂಗಣ್ಣಗೌಡ ಪೊಲೀಸ್ ಪಾಟೀಲ ಸಾ : ಬುಟ್ನಾಳ ಅಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ  ನಗದು ಹಣ 4.010/- ರೂ ಗಳು ಮತ್ತು 52 ಇಸ್ಪೀಟ್‌ ಎಲೆಗಳನ್ನು ಜಪ್ತಿ ಮಾಡಿಕೊಂಡು ಸದರಿಯವರೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಮಾಡಬೂಳ ಠಾಣೆ : ನನ್ನ ಗಂಡ ಗಾಲಿಬಸಾಬ ಈತನು ಈಗ ಸುಮಾರು 7 ತಿಂಗಳಿಂದ ನಮಗೆ ಪರಿಚಯದವರಾದ ನಮ್ಮೋರಿನ ಮರೆಪ್ಪಾ ತಂದೆ ಶಿವಶರಣಪ್ಪಾ ಬರಾಟಿ ಇವರು ತಮ್ಮ ಒಕ್ಕಲತನ ಕೆಲಸಕ್ಕೆ ಮಲ್ಲಿಕಾರ್ಜುನ ಸ್ವಾಮಿ ಮಳಖೇಡ ಇವರ ಕಡೆಯಿಂದ ಫರ್ಗೊಶನ್ ಕಂಪನಿಯ ಟ್ರಾಕ್ಟರ್ ನಂಬರ ಕೆಎ-32 ಟಿಎ-0761 ನೇದ್ದನ್ನು ಖರೀದಿಸಿಕೊಂಡು ಸದರಿ ಟ್ರಾಕ್ಟರ ಮೇಲೆ ನನ್ನ ಗಂಡ ಚಾಲಕ ಅಂತಾ ಕೆಲಸ ನಿರ್ವಹಿಸಿಕೊಂಡಿರುತ್ತಾನೆ. ಹೀಗಿದ್ದು ಇಂದು ದಿನಾಂಕ-18/01/2016 ರಂದು ಬೆಳ್ಳಿಗೆ 11 ಗಂಟೆ ಸುಮಾರಿಗೆ ನನ್ನ ಗಂಡ ಚಲಾಯಿಸುತ್ತಿದ್ದ ಟ್ರಾಕ್ಟರ ಮಾಲಿಕರಾದ ನಮ್ಮೋರಿನ ಮರೆಪ್ಪಾ ತಂದೆ ಶಿವಶರಣಪ್ಪಾ ಇವರು ನಮ್ಮ ಮನೆಗೆ ಬಂದು ನನ್ನ ಗಂಡನಿಗೆ ಹೇಳಿದ್ದೇನೆಂದರೆ ಟ್ರಾಕ್ಟರ ತೆಗೆದುಕೊಂಡು ನಡಿ ನಮ್ಮ ಹೊಲದಲ್ಲಿ ಟ್ರಾಕ್ಟರ ನೆಗಿಲು ಹೊಡೆಯುವುದಿದೆ ಅಂತಾ ಹೇಳಿ ನನ್ನ ಗಂಡ ಮತ್ತು ಟ್ರಾಕ್ಟರ ಮಾಲಿಕರು ತಮ್ಮ ಟ್ರಾಕ್ಟರ ತೆಗೆದುಕೊಂಡು ಹೊಲಕ್ಕೆ ಹೋದರು. ನಂತರ ನಾನು ಮತ್ತು ನನ್ನ ಮಕ್ಕಳು ಮದ್ಯಹ್ನ 2-30 ಪಿ.ಎಮ್ ಕ್ಕೆ ಮನೆಯಲ್ಲಿದ್ದಾಗ ಟ್ರಾಕ್ಟರ ಮಾಲಿಕರಾದ ಮರೆಪ್ಪಾ ಇವರು ನಮ್ಮ ಮನೆಗೆ ಬಂದು ವಿಷಯ ತಿಳಿಸಿದೆನೆಂದರೆ ನಿನ್ನ ಗಂಡನಿಗೆ ನಮ್ಮ ದಂಡೋತಿ ಗ್ರಾಮದ ಸಿಮಾಂತರದಲ್ಲಿದ ನಮ್ಮ ಹೊಲದಲ್ಲಿ ಮದ್ಯಹ್ನ ವೇಳೆಗೆ ಟ್ರಾಕ್ಟರ ನೆಗಿಲು ಹೊಡೆದುಕೊಂಡು ನಂತರ ನಮ್ಮ ಹೊಲದ 2-3 ಹೊಲ ಬಿಟ್ಟು ರಶೀದ ಯಾದಗಿರ ಇವರ ಹೊಲದ ಸಿಮಾಂತರದಲ್ಲಿರುವ ಕಾಗಿಣಾ ಹಳ್ಳಕ್ಕೆ ಹೋಗಿ ನೀರು ತೆಗೆದುಕೊಂಡು ಬರುತ್ತೇನೆ ಅಂತಾ ಟ್ರಾಕ್ಟರ ಚಲಾಯಿಸಿಕೊಂಡು ಹೋದನು. ನಂತರ ಅಲ್ಲೆ ಹಳ್ಳದ ಪಕ್ಕದಲ್ಲಿ ಕೆಲಸ ಮಾಡುತ್ತಿರುವ ಜಗನಾಥ ತಂದೆ ನಾಗಣ್ಣಾ ಇವರು ನನಗೆ ಓಡಿ ಬಂದು ತಿಳಿಸಿದೆನೆಂದರೆ. ಗಾಲಿಬಸಾಬ ಈತನು ಟ್ರಾಕ್ಟರ ಸಮೇತ ಹಳ್ಳದ ದಡೆಯ ಮೇಲಿಂದ ಕೆಳಗೆ ಬಿದ್ದು ಇಂಜನಲ್ಲಿ ಸಿಕ್ಕಾಕ್ಕಿಕೊಂಡು ಒದ್ದಾಡುತ್ತಿದ್ದಾನೆ ಆತನಿಗೆ ಹೊರಗಡೆ ತಗೆಯುವುದಿದೆ ಬೇಗನೆ ನಡಿ ಅಂತಾ ತಿಳಿಸಿದ ಮೇರಗೆ ನಾವುಬ್ಬರೂ ಸೇರಿ ಹಳ್ಳಕ್ಕೆ ಹೋಗಿ  ನೋಡಿ ಗಾಲಿಬಸಾಬ ಈತನಿಗೆ ಇಂಜನ ಒಳಗಡೆಯಿಂದ ಹೊರಗೆ ತೆಗೆಯಲು ಸದರಿಯವನಿಗೆ ಬಾಯಿ ಹಾಗೂ ಮುಗಿಗೆ ಭಾರಿರಕ್ತಗಾಯವಾಗಿದ್ದು ದೇಹದ ಇತರ ಕಡೆ ತರಚಿದ ಗಾಯಗಳಾಗಿದ್ದು ಚಿಕಿತ್ಸೆ ಕುರಿತು ನಾನು ಮತ್ತು ಜಗನಾಥ ಇಬ್ಬರೂ ಕೂಡಿ ಒಂದು ಮೋಟಾರ ಸೈಕಲ ಮೇಲೆ ಹಾಕಿಕೊಂಡು ದಂಡೋತಿ ಸರಕಾರಿ ಆಸ್ಪತ್ರೆಗೆ ಉಪಚಾರ ಕುರಿತು ತೆಗೆದುಕೊಂಡು ಬರುತ್ತಿರುವಾಗ ಮಾರ್ಗಮದ್ಯದಲ್ಲಿ ಗಾಲಿಬಸಾಬ ಈತನು ಮೃತ ಪಟ್ಟಿದ್ದು ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತೇವೆ ಅಂತಾ ತಿಳಿಸಿದ ಮೇರೆಗೆ ನಾನು ಗಾಬರಿಗೊಂಡು ನನ್ನ ಮಕ್ಕಳಾದ ಶಮಶೇರ ಮತ್ತು  ಆಶಪಾಕ್ ಹಾಗೂ ನನ್ನ್ ಮಾವ ಮಹೆಬೂಬ ಅಲಿ , ಭಾವ ಮಹ್ಮದ ಹನೀಫ್ ಇವರಿಗೆ ತಿಳಿಸಿ ನಾವೆಲ್ಲರೊ ಆಸ್ಪತ್ರೆಗೆ ಹೋಗಿ ನನ್ನ ಗಂಡನಿಗೆ ನೋಡಲು ಬಾಯಿ ಹಾಗೂ ಮೂಗಿಗೆ ಭಾರಿರಕ್ತಗಾಯವಾಗಿ ಇತರ ಕಡೆ ತರಚಿದ ಗಾಯವಾಗಿ ಮೃತ ಪಟ್ಟಿದ್ದು ನಿಜವಿರುತ್ತದೆ ಅಂತಾ ಶ್ರೀಮತಿ ಜರಿನಾಬೇಗಂ ಗಂಡ ಗಾಲಿಬಸಾಬ ಸಾ: ದಂಡೋತಿ ತಾಃ ಚಿತ್ತಾಪುರ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕಸ್ಮಿಕವಾಗಿ ಬೆಂಕಿ ತಗುಲಿ ಮಹಿಳೆ ಸಾವು ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ :- 17-01-2016 ರಂದು ಸಾಯಂಕಾಲ ನಮ್ಮ ಅಕ್ಕನ ಮಗನಾದ ನಾಗರಾಜ ಈತನು ನನಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ ನಮ್ಮ ತಾಯಿ ಮನೆಯಲ್ಲಿ ಅಡುಗೆ ಮಾಡುವಾಗ ಆಕಸ್ಮಿಕವಾಗಿ ಸೀರಿಯ ಸೇರಗಿಗೆ ಬೆಂಕಿ ತಗುಲಿ ಮೈ ಸುಟ್ಟಿರುತ್ತದೆ ಈಗ ಚಿಕಿತ್ಸೆಗಾಗಿ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಬಂದು ಚಿಕಿತ್ಸೆ ಕುರಿತು ದಾಖಲು ಮಾಡಿರುತ್ತೇವೆ ಅಂತ ತಿಳಿಸಿದರ ಮೇರೆಗೆ ನಾನು ಮತ್ತು ನನ್ನ ತಮ್ಮನಾದ ಶಿವರಾಜ ಇಬ್ಬರು ಆಸ್ಪತ್ರೆಗೆ ಹೋಗಿ ನಮ್ಮ ಅಕ್ಕಳಿಗೆ ನೋಡಲಾಗಿ ನಮ್ಮ ಅಕ್ಕಳ ಮೈ ಸಂಪೂರ್ಣ ಸುಟ್ಟಿದ್ದು ಸದರಿ ಘಟನೆ ಬಗ್ಗೆ ನಮ್ಮ ಅಕ್ಕಳಿಗೆ ವಿಚಾರಿಸಿದಾಗ ತಿಳಿಸಿದ್ದೇನೆಂದರೆ ನಾನು ಇಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಮನೆಯಲ್ಲಿ ಯಾರು ಇಲ್ಲದಿರುವಾಗ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ನನ್ನ ಸಿರೆಯ ಸೇರಗಿಗೆ ಆತಸ್ಮಿಕವಾಗಿ ಬೆಂಕಿ ಹತ್ತಿ ಸದರಿ ಬೆಂಕಿ ಒಮ್ಮೆಲೆ ನನ್ನ ಮೈಗೆ ಹತ್ತಿದಾಗ ನಾನು ಚಿರಾಡುತ್ತಾ ಮನೆಯಿಂದ ಬಂದಾಗ ಚನ್ನಣಗೌಡ ಪಾಟೀಲ, ಚನ್ನಬಸಪ್ಪ ಶೇಖದಾರ ಇವರು ಬಂದು ಬೆಂಕಿ ನಂದಿಸಿದರು ನಂತರ ವಿಷಯ ತಿಳಿದು ನಾಗರಾಜ ಬಸವರಾಜ ಬಂದು ಎಲ್ಲರು ಕೂಡಿ ನನಗೆ ಚಿಕಿತ್ಸೆಗಾಗಿ ಕರೆದುಕೊಂಡು ಬಂದಿರುತ್ತಾರೆ ಅಂತ ತಿಳಿಸಿದ್ದು ನಂತರ ಚಿಕಿತ್ಸೆ ಫಲಕಾರಿಯಾಗದೆ ಇಂದು ದಿನಾಂಕ  18-01-2016 ರಂದು ಬೆಳಗಿನ ಜಾವ 05:00 ಗಂಟೆಗೆ ಮೃತಪಟ್ಟಿರುತ್ತಾರೆ. ಅಂತಾ ಶ್ರೀ ವಿಜಯಕುಮಾರ ತಂದೆ ಮಾಣಿಕರಾವ ಪಾಟೀಲ ಸಾ : ದೇಸಾಯಿ ಕಲ್ಲುರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.