POLICE BHAVAN KALABURAGI

POLICE BHAVAN KALABURAGI

29 November 2018

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ : ಶ್ರೀಮತಿ ಉತ್ತುಮ್ಮಬಾಯಿ ಗಂಡ ಹುಸನಪ್ಪಾ ಬಡಿಗೇರ ಸಾ: ಬೇಲೂರ (ಜೆ) ತಾ:ಜಿ: ಕಲಬುರಗಿ ರವರ ಗಂಡ ಹುಸನಪ್ಪ ಇತನು KIDB ದಲ್ಲಿ ವೈರ ಮೇನ ಅಂತ ಸುಮಾರು 18 ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಕೆಸಲ ಮಾಡುತ್ತಾ ಬಂದಿರುತ್ತಾನೆ. ದಿನಾಂಕ 28/11/2018 ರಂದು ನನ್ನ ಗಂಡ ಎಂದಿನಂತೆ KIDB ಬೇಲೂರ ಇಂಡಸ್ಟ್ರೀಯಲ್ ಏರಿಯಾದಲ್ಲಿ ಕೆಲಸ ಮಾಡಲು ಹೋಗಿದ್ದು  ಮಧ್ಯಾಹ್ನ 02-30 ಘಂಟೆ ಸುಮಾರಿಗೆ ಇವನೊಂದಿಗೆ ಇದ್ದ ಬಾಬು ತಂದೆ ಅರ್ಜುನ ಕ್ಷೇತ್ರಿ ಇವರು ತಿಳಿಸಿದ್ದೆನೆಂದೆರೆ, ನಿಮ್ಮ ಗಂಡ ಹುಸನಪ್ಪ ಹಾಗೂ ನಾವು ಕೂಡಿಕೊಂಡು ಸಹರ ದಾಲಮಿಲ್ಲ ಹತ್ತಿರ ಇರುವ  ಒಂದು ವಿದ್ಯುತ ಕಂಬದ ಕೆಲಸ ಮಾಡುವಾಗ ಹುಸನಪ್ಪಾ ಇತನು ಭಾರವಾದ ಸಲಕರಣೆ ತೆಗೆದುಕೊಂಡು ಸಿಡಿ ಏರುವಾಗ  ಕೆಳಗಡೆ ಬಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಬೇಹೋಸ ಆಗಿ ಬಿದ್ದಿರುತ್ತಾನೆ ಅಂತಾ ತಿಳಿಸಿದಾಗ ನಾನು ಹಾಗೂ ನನ್ನ ಮೈದನ ಹಾಗೂ ಇತರರು ಕೂಡಿಕೊಂಡು ಘಟನೆ ಸ್ಥಳಕ್ಕೆ ಹೋಗಿ ನೋಡಲು ಘಟನೆ ನಿಜ ಇದ್ದು, ನನ್ನ ಗಂಡನಿಗೆ ತಲೆಗೆ ರಕ್ತಗಾಯವಾಗಿ  ರಕ್ತ ಬರುತ್ತಿದ್ದು ಮತ್ತು ಬಲಗೈ ಅಂಗೈ ಮೇಲ್ಬಾಗದಲ್ಲಿ ಬಡೆದು ಗಾಯವಾಗಿದ್ದು ಇದಕ್ಕೆ KIDB ಅಧಿಕಾರಿಗಳಾದ ಸುಭಾಷ ನಾಯ್ಕ AW DO   ಪ್ರಕಾಶ ಗುತ್ತಿಗೆದಾರ ನಾಗಪ್ಪ ಬಿದಿರಿ ಇವರು ನನ್ನ ಗಂಡ ದಲಿತನಾಗಿದ್ದರಿಂದ ಅವನನ್ನು ಯಾವುದೇ ಸಲಕರಣೆಗಳು ಕೊಡದೇ ಮುಂಜಾಗ್ತುತೆ ವಹಿಸದೇ ಹಾಗೂ LC  ತೆಗೆದುಕೊಳ್ಳದೇ ನಿರ್ಲಕ್ಷತನ ವಹಿಸಿದ್ದರಿಂದ ಈ ಘಟನೆ ಜರುಗಿರುತ್ತದೆ. ನಂತರ ನಾವು ನನ್ನ ಗಂಡನನ್ನು ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು ಚಿಕಿತ್ಸೆ ಫಲಕಾರಿ ಆಗದೇ ಮಧ್ಯಾಹ್ನ 03-40 ಗಂಟೆಗೆ ಮೃತಪಟ್ಟಿರುತ್ತಾನೆ.      ಕಾರಣ ನನ್ನ ಗಂಡ ಹುಸನಪ್ಪ ಇತನು ವಿದ್ಯುತ ಕಂಬಕ್ಕೆ ಹತ್ತಿ ಕೆಲಸ ಮಾಡಲು ಹೋಗಿ ಸಿಡಿಯಿಂದ ಬಿದ್ದು ಭಾರಿ ಗಾಯ ಹೊಂದಿ ಮರಣ ಹೊಂದಲು ಯಾವುದೇ ಸೂಕ್ತ ಸಲಕರಣೆಗಳು ಕೊಡದೇ ಮುಂಜಾಗ್ರತೆ ವಹಿಸದೇ ದಲಿತನ ಮೇಲೆ ದೌರ್ಜನ್ಯ ಎಸಗಿದ್ದರಿಂದ ಸದರಿ 3 ಜನರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಸ್ವಾಭಾವಿಕ ಸಾವು ಪ್ರಕರಣ :
ಯಡ್ರಾಮಿ ಠಾಣೆ : ಶ್ರೀಮತಿ ಶರಣಮ್ಮ ಗಂಡ ಗೋವಿಂದಪ್ಪ ಅರಳಗುಂಡಗಿ ಸಾ|| ಜಂಬೇರಾಳ ಗ್ರಾಮ ತಾ|| ಜೇವರ್ಗಿ ರವರು ಊರ ಸಿಮಾಂತರದಲ್ಲಿ ನಮ್ಮ ಮಾವ ಶರಣಪ್ಪ ರವರ ಹೆಸರಿಗೆ ಹೊಲ ಇದ್ದು, ಅದರ ಸರ್ವೆ ನಂ 48 ನೇದ್ದರಲ್ಲಿ 3 ಎಕರೆ 30 ಗುಂಟೆ ಜಮೀನು ಇರುತ್ತದೆ, ಆ ಹೊಲವನ್ನು ನಮ್ಮ ಪಾಲಿಗೆ ಬಂದಿದ್ದು ನಾವೇ ಸಾಗುವಳಿ ಮಾಡುತ್ತಾ ಬಂದಿರುತ್ತೇವೆ, ಹೊಲದ ಸಲುವಾಗಿ ಮತ್ತು ಮಕ್ಕಳ ಮದುವೆ ಸಲುವಾಗಿ ನನ್ನ ಗಂಡ ಅರಳಗುಂಡಗಿ ಕೆ.ಜಿ.ಬಿ ಬ್ಯಾಂಕನಲ್ಲಿ ಅಂದಾಜು 40,000/-ರೂ, ಹಾಗು ಖಾಸಗಿಯಾಗಿ 10 ಲಕ್ಷ ರೂಪಾಯಿಗಳು ಸಾಲ ಮಾಡಿಕೊಂಡಿದ್ದನು, ನನ್ನ ಗಂಡ ಆಗಾಗ ನನಗೆ ಸಾಲ ಬಹಳಾಗಿದೆ, ನಾನು ಜನರಲ್ಲಿ ತಲೆ ಎತ್ತಿ ತಿರುಗಾಡಲು ಆಗುತ್ತಿಲ್ಲಾ ನಾನು ಸತ್ತರೆ ಎಲ್ಲಾ ಸರಿ ಹೋಗುತ್ತೇ ಅಂತಾ ಅನ್ನುತ್ತಿದ್ದರು, ಈ ಬಗ್ಗೆ ನನ್ನ ಗಂಡನಿಗೆ ನಾನು ಸಮಾಧಾನ ಹೇಳುತ್ತಾ ಬಂದಿರುತ್ತೇನೆ. ದಿನಾಂಕ 26-11-2018 ರಂದು ರಾತ್ರಿ 9;00 ಗಂಟೆಗೆ ನಾನು ನನ್ನ ಗಂಡ ಇಬ್ಬರು ಊಟ ಮಾಡಿ ಮಲಗಿಕೊಂಡೆವು, ನಂತರ 10;00 ಪಿ.ಎಂ ಸುಮಾರಿಗೆ ಯಾರೋ ಚೀರಿದ ಸಪ್ಪಳ ಕೇಳ ಎದ್ದು ನೋಡಿದಾಗ ನನ್ನ ಗಂಡ ನೇಣು ಹಾಕಿಕೊಂಡಿದ್ದನು, ನಾನು ಜೋರಾಗಿ ಚಿರಾಡಿದ್ದರಿಂದ ಅಲ್ಲೇ ಬಾಜು ಇದ್ದ ನಮ್ಮ ಅಣ್ಣತಮ್ಮಂದಿರಾದ ಶಂಕ್ರೆಪ್ಪ ತಂದೆ ಶರಣಪ್ಪ ಅರಳಗುಂಡಗಿ, ಮಲ್ಲನಗೌಡ ತಂದೆ ಮಡಿವಾಳಪ್ಪಗೌಡ ಪೊಲೀಸ ಪಾಟೀಲ, ಏಸಪ್ಪ ತಂದೆ ಚಂದಪ್ಪ ಅರಳಗುಂಡಗಿ ರವರು ಬಂದು ನನ್ನ ಗಂಡನಿಗೆ ಕೇಳಗೆ ಇಳಿಸಿ ನಂತರ ಉಪಚಾರ ಕುರಿತು ಆಸ್ಪತ್ರೆಗೆ ಒಯುವಾಗ ಮಾರ್ಗಮದ್ಯದಲ್ಲಿ ಕಡಕೋಳ ಹತ್ತಿರ 10;30 ಪಿ.ಎಂ ಕ್ಕೆ ನನ್ನ ಗಂಡ ಮೃತ ಪಟ್ಟನು, ನಂತರ ನನ್ನ ಗಂಡನ ಶವವನ್ನು ಮನೆಗೆ ತೆಗೆದುಕೊಂಡು ಹೋಗಿ ಹಾಕಿರುತ್ತೇವೆ, ನನ್ನ ಗಂಡ ಸಾಲದ ಬಾಧೇಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ  26-10-2018 ರಂದು 10;00 ಪಿ.ಎಂ ಸುಮಾರಿಗೆ ನಮ್ಮ ಮನೆಯಲ್ಲಿ ಕಬ್ಬಿಣದ ಪೈಪಿನ ಅಡ್ಡಿಗೆ ಪ್ಲಾಸ್ಟೀಕ ಹಗ್ಗದಿಂದ ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾರೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.