POLICE BHAVAN KALABURAGI

POLICE BHAVAN KALABURAGI

30 April 2012

GULBARGA DIST REPORTED CRIMES


ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ ಶಿವಪುತ್ರ ತಂದೆ ಸಿದ್ರಾಮಪ್ಪ ಪಾಟೀಲ ಸಾ:ಸದಲಾಪೂರ ತಾ:ಅಕ್ಕಲಕೊಟಜಿಲ್ಲೆ :ಸೊಲಾಪೂರರವರುದಿನಾಂಕ:30-04-2012 ರಂದು ಬೆಳಿಗ್ಗೆ:7-00 ಗಂಟೆಯ ಸುಮಾರಿಗೆ ಸದಲಾಪೂರ ಗ್ರಾಮದಿಂದ ನನ್ನ ತಾಯಿಯಾದ ಸುಗಲಬಾಯಿ ಇವಳು ಸರಸಂಬಾ ಗ್ರಾಮಕ್ಕೆ ಹೋದಳು  ನಾನು ಅಕ್ಕಲಕೋಟದಲ್ಲಿದ್ದಾಗ ಸರಸಂಬಾ ಗ್ರಾಮದ ಜಗನಾಥ ಇತನು ಫೋನ ಮುಖಾಂತರ ನಿನ್ನ ತಾಯಿಯಾದ ಸುಗಲಬಾಯಿಗೆ ಸರಸಾಂಬಾ ಗ್ರಾಮದ ಬಸ್‌ ನಿಲ್ದಾಣ ಹತ್ತಿರ ಅಪಘಾತವಾಗಿ ಮೃತ ಪಟ್ಟಿರುತ್ತಾಳೆ ಅಂತಾ ತಿಳಿಸಿದ್ದರಿಂದ ನಾನು ಘಾಬರಿಗೊಂಡು ಸರಸಾಂಬಾಕ್ಕೆ ಬಂದು ನೋಡಲಾಗಿ ನನ್ನ ತಾಯಿಯಾದ ಸುಗಲಬಾಯಿ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾಳೆ ಅಪಘಾತ ಪಡಿಸಿದ ವಾಹನವನ್ನು ಪರಿಶೀಲಿಸಿ ನೋಡಲಾಗಿ  ಅದು 407 ವಾಹನವಿದ್ದು ಅದರ ನಂ: ಎಮ್.ಹೆಚ್04 ಎಫ್.ಡಿ 3169 ಅಂತಾ ಇದ್ದು ಅದರ ಚಾಲಕನು ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ.  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ    ಠಾಣೆ ಗುನ್ನೆ ನಂ: 17/2012 ಕಲಂ: 279. 304() ಐಪಿಸಿ ಸಂ: 187 .ಎಮ್.ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

29 April 2012

GULBARGA DIST REPORTED CRIMES


ಕಾಣೆಯಾದ ಪ್ರಕರಣ:
ನೆಲೋಗಿ ಪೊಲೀಸ್ ಠಾಣೆ:ಶ್ರೀ ರಾಮಚಂದ್ರ ತಂದೆ ಮಂಗು ರಾಠೋಡ ವ: 51 ವರ್ಷ ಸಾ: ನಾಗಾವಿ ತಾಂಡ ತಾ: ಸಿಂದಗಿ ರವರು ನನಗೆ ಸುರೇಶ, ಸುರೇಂದ್ರ, ಮತ್ತು ಸುನಿಲ ಮೂರು 3 ಜನ ಗಂಡು ಮಕ್ಕಳಿದ್ದು, ಸುನಿಲ ಇತನು ಜೇವರ್ಗಿ ಬಸ್ಸ ನಿಲ್ದಾಣದ ಹತ್ತಿರ ಒಂದು ಕಂಪ್ಯೂಟರ ಕೇಂದ್ರ ಪ್ರಾರಂಬಿಸಿ ಕಂಪ್ಯೂಟರ ತರಬೇತಿ ಕೊಡುತ್ತಿದ್ದನು. ನಾನು ದಿನಾಂಕ: 22/03/2012 ರಂದು ಸಾಯಂಕಾಲ ನಾನು ನಮ್ಮ ತಾಂಡಾದಿಂದ ಮಗನ ಹತ್ತಿರ ಜೇರಟಗಿ ಬಂದು ವಿಚಾರ ಮಾಡಲಾಗಿ ಸುನಿಲ್ ಇತನು ಮುಂಜಾನೆ 10 ಗಂಟೆಯ ಸುಮಾರಿಗೆ ಜೇವರ್ಗಿ ಕಡೆ ಹೋಗಿ ಬರುತ್ತೆನೆ ಅಂತಾ ಹೋಗಿದ್ದಾನೆ ಅಂತಾ ತಿಳಿಯಿತು ನಾನು ಸಾಯಂಕಾಲದ ವರೆಗೆ ನೋಡಿದೆ ನನ್ನ ಮಗ ಮರಳಿ ಬರಲಿಲ್ಲ ದಿನಾಂಕ: 23/03/2012 ರಂದು ಕೂಡಾ ಪುನ: ಜೇರಟಗಿ ಬಂದು ನನ್ನ ಮಗನ ಕಂಪ್ಯೂಟರ ಕೇಂದ್ರ ನೋಡಲಾಗಿ ಲಾಕ ಮಾಡಿದ್ದು ಇತ್ತು ಅವನ ಮೋಬೈಲಗೆ  ಪೂನ ಮಾಡಲು ಸ್ವಿಚ್ಚ ಆಪ್ ಬರ ಹತ್ತಿತ್ತು ಅಂದಿನಿಂದ ಇಲ್ಲಿಯವರೆಗೆ  ಹುಡಕಾಡಿದರು ಸಿಕ್ಕಿರುವದಿಲ್ಲ ನನ್ನ ಮಗನ ಚಹರೆ ಪಟ್ಟಿ ಈ ಕೇಳಗಿನಂತೆ ಇರುತ್ತದೆ. ಎತ್ತರ ಅಂದಾಜು 56 ತೆಳ್ಳನೆಯ ಮೈಕಟ್ಟು ಗೋದಿ ಮೈಬಣ್ಣ ತಲೆಯಲ್ಲಿ ಅಂದಾಜು 3 ಇಂಚಿನ ಕೋದಲು ಕಪ್ಪು ಇರುತ್ತವೆ. ಲಮಾಣಿ ಕನ್ನಡ ಇಂಗ್ಲಿಷ, ಹಿಂದಿ ಭಾಷೆಗಳಲ್ಲಿ ಮಾತನಾಡುತ್ತಾನೆ. ವಯಸ್ಸು 21 ವರ್ಷ ಇರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 51/12 ಕಲಂ ಮನುಷ್ಯ ಕಾಣೆಯಾಗಿದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಇತನ ಬಗ್ಗೆ ಸುಳಿವು ಸಿಕ್ಕಲ್ಲಿ ಸಿಪಿಐ ಜೇವರ್ಗಿ ರವರ ಮೋಬಾಯಿಲ್ ನಂ:9480803533 /ನೆಲೋಗಿ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08442225033 ನೇದ್ದಕ್ಕೆ  ಸಂಪರ್ಕಿಸಲು ಕೋರಲಾಗಿದೆ.
ಕಾಣೆಯಾದ ಪ್ರಕರಣ:
ಮಹಿಳಾ ಪೊಲೀಸ್ ಠಾಣೆ: ದಿನಾಂಕ 19-4-2012 ರಂದು  ರಾತ್ರಿ 8-30 ಗಂಟೆಯ ಸುಮಾರಿಗೆ ಬುದ್ದಿ ಮಾಂದ್ಯ ಬಾಲ ಮಂದಿರದಲ್ಲಿರುವ   ಆಸ್ಮಾ  ವಯ|| 18 ವರ್ಷ, ಶಕೀಲಾ ವ|| 15 ವರ್ಷದ ಹುಡುಗಿಯರು ಕರೆಂಟ ಹೋದ ಸಮಯದಲ್ಲಿ    ಬಾಲಮಂದಿರದಿಂದ ಓಡಿ ಹೋಗಿರುತ್ತಾರೆ ಅಂತಾ ರಕ್ಷಿಕಿಯರಾದ ಗಂಗೂಬಾಯಿ ಮತ್ತು ದೇವಕಿ ಇವರು ತಿಳಿಸಿದ್ದರಿಂದ   ಈ ಇಬ್ಬರ ಹುಡುಗಿಯರ ಪತ್ತೆಗಾಗಿ ರೈಲ್ವೇ ಸ್ಟೇಷನ, ಬಸ ಸ್ಟಾಂಡ. ದೇವಸ್ಥಾನಗಳಲ್ಲಿ ಮುಂತಾದ ಕಡೆಗಳಲ್ಲಿ ಹುಡುಕಾಡಿದರು ಇವರು ಪತ್ತೆಯಾಗಿರುವುದಿಲ್ಲಾ ಅಂತಾ ಸುವರ್ಣಲತಾ ತಂದೆ ಯಲ್ಲಪ್ಪ ಚಂದ್ರಗಿರಿ   ಬುದ್ದಿಮಾಂದ್ಯ  ಬಾಲಕಿಯರ ಬಾಲ ಮಂದಿರದ ಮುಖ್ಯಸ್ಥರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 37/2012 ಕಲಂ 366 (ಎ) ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಇವರ ಬಗ್ಗೆ ಸುಳಿವು ಸಿಕ್ಕಲ್ಲಿ ಗುಲಬರ್ಗಾ ಕಂಟ್ರೀಲ್ ರೂಮ ನಂ: 08472-263604/ ಮಹಿಳಾ ಪೊಲೀಸ್ ಠಾಣೆ ದೂ: ನಂ: 08472263620 ನೇದ್ದಕ್ಕೆ ಸಂಪರ್ಕಿಸಲು ಕೋರಲಾಗಿದೆ. 

GULBARGA DIST REPORTED CRIMES


ಮೋಟಾರ ಸೈಕಲ ಕಳ್ಳತನ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀ ಶಿವಕುಮಾರ ತಂದೆ ಶಿವಲಿಂಗಪ್ಪ ಯಾಳೆಗಾಂವ ವ|| 20, ಉ|| ವಿದ್ಯಾರ್ಥಿ, ಸಾ|| ಪ್ಲಾಟ ನಂ 154, ಜೆ.ಆರ್ ನಗರ ಅಳಂದ ರೋಡ ಗುಲಬರ್ಗಾರವರು ನನ್ನ  ಹೀರೊ ಹೊಂಡಾ ಸ್ಪ್ಲೆಂಡರ್ ಮೊಟಾರ್ ಸೈಕಲ್ ನಂ ಕೆಎ-32/ವಿ-1849 ನೇದ್ದನ್ನು ದಿನಾಂಕ 07-04-2012 ರಂದು ಸಾಯಂಕಾಲ ಮನೆಯ ಮುಂದೆ ನಿಲ್ಲಿಸಿ ಊಟ ಮಾಡಿಕೊಂಡು ಹೊರಗೆ ಬಂದಾಗ ನನ್ನ ಮೊಟಾರ್ ಸೈಕಲ್ ಇರಲಿಲ್ಲ. ಯಾರೋ ಕಳ್ಳರು ಮೋಟಾರ ಸೈಕಲ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 28/12 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ಶ್ರೀ ಶಂಕರ ತಂದೆ ನಾಗಪ್ಪಾ ಹಲಗುರ್ಗಿ ಸಾಃ ಹಳ್ಳಿಖೇಡ(ಕೆ) ವಾಡಿ ತಾಃ ಹುಮನಾಬಾದ ಜಿಃ  ಬೀದರ ರವರು  ನನಗೆ ಗುಲಬರ್ಗಾದಲ್ಲಿ ಖಾಸಗಿ ಕೆಲಸವಿದ್ದ ಪ್ರಯುಕ್ತ ದಿನಾಂಕ:28/04/2012 ರಂದು  ಬೆಳಿಗ್ಗೆ ಗುಲಬರ್ಗಾಕ್ಕೆ ಹೋಗಿ, ಕೆಲಸ ಮುಗಿಸಿಕೊಂಡು ಮರಳಿ ನಮ್ಮೂರಿಗೆ  ಬರುತ್ತಿರುವಾಗ,ನನ್ನ ಅಣ್ಣನ ಮಗಳಾದ ಲಕ್ಷ್ಮೀಬಾಯಿ ಗಂಡ ದೇವಪ್ಪಾ ಟಾಕಾಪೂರ ಇವಳು ಸಹ ನನ್ನ ಜೋತೆಯಲ್ಲಿ ಬಸ್ಸ ನಂಬರ ಕೆಎ:32,ಎಫ್:1711 ನೇದ್ದರಲ್ಲಿ ಕುಳಿತುಕೊಂಡು ಕಮಲಾಪೂರಕ್ಕೆ ಬಂದ್ದು ಬಸ್ಸಿನಿಂದ ಇಳಿಯುವಾಗ ಬಸ್ಸ ಚಾಲಕನು ತನ್ನ ಬಸ್ಸನ್ನು ಅಜಾಗುರುಕತೆಯಿಂದ ಒಮ್ಮೇಲೆ ಹಿಂದಕ್ಕೆ ಚಲಾಯಿಸಿದಾಗ ಬಸ್ಸಿನ ಮುಂದಿನ ಟೈಯರ ನನ್ನ ಎಡಗಾಲಿನ ಹಿಮ್ಮಡಿಗೆ ತಾಗಿದ್ದರಿಂದ ನನ್ನ ಎಡಗಾಲಿಗೆ ತರಚಿದ ಗಾಯ ಮತ್ತು ಗುಪ್ತಗಾಯವಾಗಿರುತ್ತದೆ. ಅಪಘಾತ ಪಡಿಸಿದ ಬಸ್ಸ ಚಾಲಕನ ಹೆಸರು ವಿಚಾರಿಸಲಾಗಿ, ಎಸ್.ಜಿ ಅಕ್ಬರ ತಂದೆ ಎಸ್.ಜಿ ಅಬ್ಬಾಸ ಸಾಃಸಂತ್ರಾಸವಾಡಿ ಗುಲಬರ್ಗಾ ಅಂತಾ ತಿಳಿದು ಬಂದಿರುತ್ತದೆ. ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಿರಿ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:46/2012  ಕಲಂ 279.337 ಐಪಿಸಿ ಸಂ. 187 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ
ಕಳ್ಳತನ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ: ಶ್ರೀ ಗೌಡಪ್ಪಗೌಡ ತಂದೆ ದೇವಿಂದ್ರಪ್ಪಗೌಡ ಮಾಲಿಪಾಟೀಲ ಸಾ: ಮಲ್ಲಾಬಾದ ತಾ: ಜೇವರ್ಗಿ ರವರು ನಮ್ಮ ಮನೆಗೆ ದಿನಾಂಕ 27,28-4-12 ರ  ಮಧ್ಯ ರಾತ್ರಿ  ವೇಳೆಯಲ್ಲಿ ಯಾರೋ ಕಳ್ಳರು ಮನೆಗೆ ಹಾಕಿದ ಕೀಲಿ ಮುರಿದು ಮನೆಯಲ್ಲಿದ್ದ  5 ಗ್ರಾಂ ಬಂಗಾರ, ಆಭರಣ , ನಗದು ಹಣ 10,200=00 ಮತ್ತು ಮಲ್ಲಪ್ಪ ಇವರ ಕಾರ್ಬನ್ ಮೊಬಾಯಿಲ್  ಹ್ಯಾಂಡಸೇಟ್  ಹೀಗೆ ಒಟ್ಟು 23,875=00 ರೂಪಾಯಿ ಮೌಲ್ಯದ್ದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ 35/12 ಕಲಂ 475,380 ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

28 April 2012

GULBARGA DIST REPORTED CRIMES


ಹಲ್ಲೆ ಪ್ರಕರಣ:


ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಮೊಹ್ಮದ ಇಕ್ಬಾಲ ತಂದೆ ಮೊಹ್ಮದ ಹುಸೇನ ತರನಳ್ಳಿ ಸಾ: ಟಿಪ್ಪುಸುಲ್ತಾನ ಚೌಕ  ರಾಮಾ ಮೊಹಲ್ಲಾ ಶಹಾಬಾದ ರವರು ದಿನಾಂಕ: 27-04-2012 ರಂದು ನಮ್ಮ ಮನೆಯ ಮುಂದೆ ಕುಳಿತಾಗ ಮುಕ್ತಾರ ಇನಾಮದಾರ ಸಂಗಡ ಮೂರು ಜನರು ಎಲ್ಲರೂ ಸಾ:ಮಜೀದ ಚೌಕ ಶಹಾಬಾದ ರವರು ವಿನಾಃಕಾರಣ ಜಗಳ ತೆಗೆದು, ಅವಾಚ್ಯವಾಗಿ ಬೈದು, ಬಡಿಗೆಯಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 50/2012 ಕಲಂ 323, 324, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:

ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ರಾಜೇಂದ್ರ ತಂದೆ ಹಣಮಂತ ಮೋರೆ ಸಾ:ಪ್ಲಾಟ ನಂ 20/2 ನ್ಯೂ ಗಾಟಗೆ ಲೇಔಟ ಹತ್ತಿರ ಕ್ಯಾಂಬೆಲ ಶಾಲೆ  ಗುಲಬರ್ಗಾರವರು ನಾನು  ದಿನಾಂಕ:25/04/2012 ರಂದು 8.30 ಪಿಎಂ ಸುಮಾರಿಗೆ ಗುಲಬರ್ಗಾದಿಂದ ಇಂಡಿಕಾ ಕಾರ ನಂ.ಕೆಎ-32/ಬಿ5063 ನೇದ್ದನ್ನು ಚಲಾಯಿಸಿಕೊಂಡು ಶಹಾಬಾದಕ್ಕೆ ಬಂದು,ಖಾಸಗಿ ಕೆಲಸ ಮುಗಿಸಿಕೊಂಡು ಗುಲಬರ್ಗಾಕ್ಕೆ ಹೋಗುವಾಗ ಶಹಾಬಾದ ರೇಲ್ವೆ ಬ್ರೀಡ್ಜ ಹತ್ತಿರ ನನ್ನ ಎದುರಿಗೆ ಒಂದು ಲಾರಿ ಚಾಲಕನು ತನ್ನ ಲಾರಿಯ Focus ಲೈಟನ್ನು ಹಾಕಿದ್ದರಿಂದ ನಾನು ಕಾರನ್ನು ಒಮ್ಮೆಲೆ ಬ್ರೇಕ ಹಾಕಿದ್ದರಿಂದ  ನನ್ನ ಕಾರು ರೋಡಿನ ಕೆಳಗೆ ಇಳಿದಿದ್ದರಿಂದ ಕಾರು ಪೂರ್ತಿ ಜಖಂ ಆಗಿರುತ್ತದೆ, ನನಗೆ ಕೇವಲ ಬಲಗಾಲ ಮೊಳ ಕಾಲಿಗೆ ಒಳಪೆಟ್ಟಾಗಿರುತ್ತದೆ. ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 51/2012 ಕಲಂ 279, 337 ಐಪಿಸಿ  ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.


27 April 2012

GULBARGA DIST REPORTED CRIMES


ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಶೇಖದಾವೂರ ತಂದೆ ಶೇಖರಾಜ ಮಹ್ಮದ ಸಾ:ಅಶೋಕನಗರ ಶಹಾಬಾದ ರವರು ನಾನು ದಿನಾಂಕ 26/4/2012 ರಂದು 6-30 ಗಂಟೆ ಸುಮಾರಿಗೆ ಹಸನ ಶೇಟ ಇವರ ಹೊಲದಲ್ಲಿ ಕ್ರೀಕೇಟ ಆಡಲು ನನ್ನ ತಮ್ಮ ಶೇಖ ಇಮಾಮ ಅಲ್ಲಿಗೆ ಹೊದಾಗ ಪಿರೋಜ ತಂದೆ ಹಾಜಿ, ಸಂ 5 ಜನರು ಕೂಡಿವಿನಾಃಕಾರಣ ಜಗಳ ತೆಗೆದಿರುತ್ತಾರೆ,  ನಾನು ಕೇಳಲು ಹೋದರೆ ಅವಾಚ್ಯವಾಗಿ ಬೈದು ಕಲ್ಲಿನಿಂದ ಮತ್ತು ಕೈಯಿಂದ ನನಗೆ ಎಡಗಣ್ಣಿನ ಮೇಲೆ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 48/2012 ಕಲಂ 147 323 324 504 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ದಶರಥ ತಂದೆ ಶರಣಪ್ಪಾ ಶೆಳ್ಳಗಿ  ಸಾಹರಳಯ್ಯಾ ಚೌಕಶಹಾಬಾದ ರವರು ದಿನಾಂಕ:17/04/2012 ರಂದು 6 ಪಿಎಮ್ ಕ್ಕೆ ತರನಳ್ಳಿ ಗ್ರಾಮದ ಶಂಕರ ನಾಟಿಕಾರ ಇವರ ಹೊಲದಲ್ಲಿ ಮಣ್ಣು ತೆಗೆಯುತ್ತಿದ್ದ  ಜೆ.ಸಿ.ಬಿನಂಕೆ.32/5665 ನೇದ್ದರ ಚಾಲಕನಿಗೆ ನಮ್ಮ ಖಣಿಯಲ್ಲಿಕಲ್ಲು ತೆಗೆಯುವ ಕೆಲಸವಿದ್ದ ಕಾರಣ ಜೆ.ಸಿ.ಬಿಚಾಲಕನಿಗೆ ಹೇಳಿ ಜೆ.ಸಿ.ಬಿ ಹಿಂದುಗಡೆ ನಿಂತಿರುವಾಗ,ಜೆ.ಸಿ.ಬಿಚಾಲಕನು ತನ್ನ ಜೆ.ಸಿ.ಬಿಯನ್ನು ನಿಷ್ಕಾಳಜಿತನಿಂದ  ಚಲಾಯಿಸಿ ಹಿಂದಕ್ಕೆ ತೆಗೆದುಕೊಳ್ಳುತ್ತಿರುವಾಗ ನನಗೆ ಡಿಕ್ಕಿ ಪಡಿಸಿಎಡಕಾಲಿಗೆ ಮೊಳಕಾಲ ಮೇಲೆ ತೊಡೆಗೆ ಬಾರಿ ಒಳಪೆಟ್ಟು ಪಡಿಸಿದ್ದು ಇರುತ್ತದೆದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 49/2012 ಕಲಂ; 279 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

26 April 2012

GULBARGA DIST REPORTED CRIME


ಮೋಟಾರ ಸೈಕಲ ಕಳ್ಳತನ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ಶ್ರೀ ಮುಕುಂದಪ್ಪ ತಂದೆ ನಿರಂಜನ  ಸಾ|| ಶೇಖರೋಜಾ  ಶಹಾಬಜಾರ ಗುಲಬರ್ಗಾ ರವರು ನಾನು ದಿನಾಂಕ: 23/04/2012 ರಂದು ಸಾಯಂಕಾಲ 7-20 ಗಂಟೆಗೆ ವೀರಶೈವ ಕಲ್ಯಾಣ ಮಂಟಪ ಎದುರುಗಡೆ ಪಬ್ಲಿಕ ಗಾರ್ಡನದಲ್ಲಿ  ಕೆಎ 32 ಎಸ್ 2743 ದ್ವಿಚಕ್ರ ವಾಹನ ಹೊಂಡಾ ಶೈನ ||ಕಿ|| 20,443/- ನೇದ್ದನ್ನು ನಿಲ್ಲಿಸಿದ್ದು, ನಂತರ   ಮರಳಿ ಬಂದು ನೋಡಲು, ನಿಲ್ಲಿಸಿರುವ ಸ್ಥಳದಲ್ಲಿ  ವಾಹನವು ಇರುಲಿಲ್ಲ ನಾನು ಎಲ್ಲಾ ಕಡೆ ಇಲ್ಲಿಯವರೆಗೆ ಹುಡುಕಾಡಿದರು ಸಿಕ್ಕಿರುವದಿಲ್ಲ.ಯಾರೋ ಕಳ್ಳರು ನನ್ನ ಮೋಟರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ51/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

GULBARGA DIST REPORTED CRIMES


ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ಶಂಕ್ರೆಪ್ಪಾ ತಂದೆ ಮಲ್ಲಪ್ಪಾ ಮಡಿವಾಳ ಸಾ:ಯನಗುಂಟಿ ತಾ:ಜೇವರ್ಗಿರವರು ನನ್ನ ಮಗಳಾದ ಗೀತಾ ಇವಳಿಗೆ ಹೊಸೂರು ಗ್ರಾಮದ ನಾಗಪ್ಪನ ಮಗನಾದ ಸಾಯಿಬಣ್ಣಾ ಇತನ ಮದುವೆ ದಿನಾಂಕ:25/04/2012 ರಂದು 12-30 ಗಂಟೆಗೆ ಅಕ್ಷತೆ ಇದ್ದುದರಿಂದ  ನಾವು ಯನಾಗುಂಟಿಯಿಂದ ಹೊಸುರ ಗ್ರಾಮಕ್ಕೆ ಲಾರಿ ನಂ.ಎಮ್‌ಹೆಚ್‌-12/ಕ್ಯೂಎ-9329 ನೇದ್ದರಲ್ಲಿ ಬರುವಾಗ ಚಾಲಕನಾದ ಚಂದ್ರಕಾಂತ ತಂದೆ ಮಲ್ಲಿಕಾರ್ಜುನ ನೆಲೋಗಿ ಇತನು ತನ್ನ ಲಾರಿಯನ್ನು ಚಲಾಯಿಸುತ್ತಿದ್ದನು.ಅದರಲ್ಲಿ  ನಾನು ಮತ್ತು ನಮ್ಮೂರ ಜನರು  ಸದರಿ  ಲಾರಿಯಲ್ಲಿ ಕುಳಿತು  ಲಾರಿಯು ಜೇವರ್ಗಿ ಮಾರ್ಗವಾಗಿ ತೊನಸಳ್ಳಿ ಹತ್ತಿರ ಬರುವಾಗ ರಾಜು ಮೇಸ್ತ್ರೀ ರವರ ಹೊಲದ ಹತ್ತಿರ ರೋಡಿನ ಮೇಲೆ ಲಾರಿ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಓವರ ಟೇಕ ಮಾಡುತ್ತಿದ್ದಾಗ ರೋಡಿನ ಬಲ ಬದಿಗೆ ಮಣ್ಣಿನ  ದಿಬ್ಬಿಯ ಕಡೆಗೆ ತೆಗೆದುಕೊಂಡಿದ್ದಿರಂದ ಲಾರಿಯಿಂದ ಕೆಳಗೆ ಬಿದ್ದ ಕಾಳಪ್ಪಾ ತಂದೆ ತಿಪ್ಪಣ್ಣಾ ಬಡಿಗೇರ ಇತನಿಗೆ ಬಲ ಹಣೆಗೆ ಒಳಪೆಟ್ಟಾಗಿ ರಕ್ತಗಾಯ ವಾಗಿರುತ್ತದೆ. ಪ್ರಭು ತಂದೆ ಸಾಯಿಬಣ್ಣಾ ಪ್ರಭಾ ಬಲ ಗೈ ಮುಂಗೈ ಗೆ ಭಾರಿ ಒಳಪೆಟ್ಟಾಗಿರುತ್ತದೆ.ಶಿವಾನಂದ ತಂದೆ ನಿಂಗಪ್ಪಾ ಇತನಿಗೆ ತಲೆಗೆ ರಕ್ತಗಾಯ ಮತ್ತು ಎಡಗಾಲ ತೊಡೆಗೆ ಭಾರಿ ರಕ್ತಗಾಯ ಮತ್ತು ಪಾದಕ್ಕೆ ರಕ್ತಗಾಯ ವಾಗಿರುತ್ತದೆ. 4.ನಾಗಪ್ಪಾ ತಂದೆ ಈರಣ್ಣಾ ದೊಡ್ಡಮನಿ ಇತನಿಗೆ ಬಲ ಗೈ ಭುಜಕ್ಕೆ ಒಳಪೆಟ್ಟಾಗಿ ಗುಪ್ತಗಾಯವಾಗಿರುತ್ತದೆ 5.ಶಿವಮ್ಮಾ ಗಂಡ ಹಣಮಂತ ಇವಳಿಗೆ ಬೆನ್ನಿನ ಮಗ್ಗಲಿಗೆ ಒಳಪೆಟ್ಟಾಗಿರುತ್ತದೆ. ಹಾಗೂ ಆನಂದ ತಂದೆ ಶರಣಪ್ಪಾ ಇತನಿಗೆ ಟೊಂಕಕ್ಕೆ ಒಳಪೆಟ್ಟಾಗಿ ಬಲಗಾಲಿಗೆ ತರಚಿದ ಗಾಯವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 47/2012 ಕಲಂ 279,337,338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈ ಕೊಳ್ಳಲಾಗಿದೆ. 

25 April 2012

GULBARGA DIST REPORTED CRIMES


ಕಳ್ಳತನ ಪ್ರಕರಣ:
ನರೋಣಾ ಪೊಲೀಸ್ ಠಾಣೆ :ಶ್ರೀಮತಿ, ರಾಧಾ ಗಂಡ ಅಂಬರಾಯ ಬಾಚಿಂದೆ ಸಾ||ವಿ.ಕೆ.ಸಲಗರ ರವರು ನಾನು ಕಾಟ ಪಿನ್ನು ಮಾರಿಕೊಂಡು ನನ್ನ ಮಕ್ಕಳೊಂದಿಗೆ ಇರುತ್ತೆನೆ. ನನ್ನ ಗಂಡನು ಹೊಟ್ಟೆ ಪಾಡಿಗಾಗಿ ಬಾಂಬೆಗೆ ಹೋಗಿದ್ದು ನನ್ನ ಮೂರು ಜನರ ಸಣ್ಣ ಮಕ್ಕಳಳೊಂದಿಗೆ ಮನೆಯಲ್ಲಿಯೇ ಇರುತ್ತೆನೆ. ದಿನಾಂಕ: 24/04/2012 ರಂದು ರಾತ್ರಿ ನನ್ನ 2 ತಿಂಗಳ ಮಗುವಿಗೆ ಆರಾಮ ಇರದೆ ಇರುವದ್ದರಿಂದ ಮನೆಗೆ ಕೀಲಿ ಹಾಕಿಕೊಂಡು ಅಲ್ಲಿಯೇ ಇರುವ ಅತ್ತೆ ಮಾವರ ಮನೆಗೆ ಹೋಗಿದ್ದು ದಿನಾಂಕ: 25/04/2012 ರಂದು ಬೆಳಿಗ್ಗಿನ ಜಾವ 4-00 ಗಂಟೆಯ ಸುಮಾರಿಗೆ ಎದ್ದು ಮನೆಯ ಕಡೆಗೆ ಹೋದಾಗ ಮನೆಯ ಒಂದು ಬಾಗಿಲು ತೆಗೆದಿದ್ದು ಇನ್ನೊಂದು ಬಾಗಿಲಿಗೆ ಹಾಗೆ ಕೊಂಡಿಗೆ ಕೀಲಿ ಹಾಕಿದ್ದು ಇದ್ದು. ಒಳಗೆ ಹೋಗಿ ನೋಡಲು  ದೇವರ ಮನೆಯ ಎಲ್ಲಾ ಸಾಮಾನುಗಳು ಚಿಲ್ಲಾ ಪಿಲ್ಲಿಯಾಗಿದ್ದವು, ಮನೆಯ ಸಾಮಾನುಗಳು, ½ ತೊಲೆಯ ಬಂಗಾರ ಬೋರಮಳ, ಜುಮ್ಮಕಿ ,ಪದಕಾ ,ತಾಳಿ, ಮುರುಗಳು, ಬೆಳ್ಳಿಯ ಚೈನು , ಬಾದಮ ಗೆಜ್ಜೆ ಮತ್ತು ನಗದು ಹಣ 7,000 ರೂಪಾಯಿಗಳು ಒಟ್ಟು 24,000/- ಮೌಲ್ಯದವುಗಳು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂಬರ್ 43/2012 ಕಲಂ 457 380 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ:ಶ್ರೀ ಗಂಗಾಧರ ತಂದೆ ಗುರುಲಿಂಗಪ್ಪ ನಾಯಕೋಡಿ ಸಾ:ಶೆಟ್ಟ ಹೂಡಾ ಗ್ರಾಮ, ತಾ:ಸೇಡಂ ರವರು ನನ್ನ ತಾತನಾದ (ಅಜ್ಜನಾದ) ಸಾಬಣ್ಣ ತಂದೆ ದೊಡ್ಡಪ್ಪ ನಾಯಕೊಡಿ ವಯ: 70 ವರ್ಷ,  ಇವರು ಮೂತ್ರ ವಿಸರ್ಜನೆ ಮಾಡಿ ಮರಳಿ ಮನೆಗೆ ಬರುತ್ತಿರುವಾಗ ಕಾರ್ ನಂ-ಕೆ.ಎ.09.ಎನ್.-6162 ನೇದ್ದರ ಚಾಲಕ ಅತೀವೇಗ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಮ್ಮ ಅಜ್ಜನಿಗೆ ಡಿಕ್ಕಿ ಪಡಿಸಿದ್ದರಿಂದ ಎಡ ಮುಂಗಾಲು ಮುರಿದಿದ್ದು ಎಡಗೈ ಮುರಿದಿದ್ದು, ಬಲಗಣ್ಣಿನ ಹುಬ್ಬಿಗೆ ಹಾಗೂ ಎಡಗಣ್ಣಿನ ಹುಬ್ಬಿಗೆ ರಕ್ತಗಾಯ ಹಾಗೂ ತಲೆಗೆ ರಕ್ತಗಾಯ ಹಾಗೂ ಬಲಗಾಲ ಮೊಳಕಾಲಿಗೆ ತರಚಿದ ಗಾಯಗಳಾಗಿದ್ದವು, ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು , ಉಪಚಾರ ಫಲಕಾರಿಯಾಗದೇ ಸಾಬಣ್ಣ ಇವರು ಮೃತ ಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 89/2012 ಕಲಂ, 279, 304 (ಎ)  ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ

GULBARGA DIST



ಅಪಜಲಪೂರ ಪೊಲೀಸ್ ರಿಂದ 3 ಜನರ ಬಂದನ, ಎರಡು ನಾಡ ಪಿಸ್ತೂಲ್, ಎರಡು ಜೀವಂತ ಗುಂಡುಗಳು ಜಪ್ತಿ:
ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ್ ಪೊಲೀಸ್ ಅಧೀಕ್ಷಕರು,ಗುಲಬರ್ಗಾ ರವರು ಮತ್ತು ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಗುಲಬರ್ಗಾ ರವರ ಮಾರ್ಗದರ್ಶನದ ಮೇರೆಗೆ  ಶ್ರೀ ಎಸ.ಬಿ.ಸಾಂಬ ಡಿಎಸಪಿ ಆಳಂದ ರವರ ನೇತ್ರತ್ವದಲ್ಲಿ ಶ್ರೀ ಕೆ.ರಾಜೇಂದ್ರ ಸಿಪಿಐ ಅಜಪಲಪೂರ ವೃತ್ತ  ಮತ್ತು ಶ್ರೀ, ಮಂಜುನಾಥ ಎಸ. ಪಿ.ಎಸ.ಐ ರವರು ಹಾಗು ಸಿಬ್ಬಂದಿಯವರಾದ  ರಾಮಚಂದ್ರ, ಜಗನಾಥ, ಅರವಿಂದ , ಶರಣು,  ರಾಜೇಂದ್ರ ರವರು ಸಂಶಯಾಸ್ಪದವಾಗಿ ಪಟ್ಟಣದ ಬ್ರಿಜ್ ಹತ್ತಿರ ಕುಳಿತಿದ್ದ ಇಬ್ಬರು ವ್ಯಕ್ತಿಗಳಾದ ರಪೀಕ @ ಸದ್ದಾಂ ತಂದೆ ಬಾಷಾ ಸಾಬ ಮುಲ್ಲಾ ವ| 20 ವರ್ಷ ಸಾ|| ಗೌರ (ಬಿ) ಅಪಜಲಪೂರ , ಅಶೋಕ ತಂದೆ ಶಿವಪ್ಪಾ ಕೊರಳ್ಳಿ ವ|| 22 ವರ್ಷ ಸಾ|| ಅಪಜಲಪೂರ ರವರನ್ನು ವಿಚಾರಣೆ ಮಾಡಿ ಅಂಗ ಶೋದನೆ ಮಾಡಲಾಗಿ,  ರಪೀಕ @ ಸದ್ದಾಂ ಇತನ ಹತ್ತಿರ ಒಂದು ನಾಡ ಪಿಸ್ತೂಲ್ ಇದ್ದು, ನಾಡ ಪಿಸ್ತೂಲ್ ಇಟ್ಟಿಕೊಂಡಿರುವ ಬಗ್ಗೆ ದಾಖಲಾತಿ ಮತ್ತು ಪರವಾನಿಗೆ ಬಗ್ಗೆ ವಿಚಾರಿಸಲು ಯಾವದೇ ದಾಖಲಾತಿ ನೀಡದೇ ಇರುವದರಿಂದ ನಾಡ ಪಿಸ್ತೂಲ್ ನ್ನು ವಶಕ್ಕೆ ತೆಗೆದುಕೊಂಡು ಹೆಚ್ಚಿನ ವಿಚಾರಣೆ ಮಾಡಲಾಗಿ ಶ್ರೀಶೈಲ ಹರಣಾಳ ಸಾ|| ಗೌರ (ಬಿ) ರವರ ಹತ್ತಿರದಿಂದ ಇನ್ನೂ ಒಂದು ನಾಡ ಪಿಸ್ತೂಲ್ ಎರಡು ಜೀವಂತ ಗುಂಡುಗಳು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಪ್ರಕರಣ ಯಶಸ್ವಿಗೆ ಕಾರಣರಾದ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಎಸ.ಪಿ ಗುಲಬರ್ಗಾ ರವರು ಪತ್ತೆ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ ಇಲಾಖಾ ವತಿಯಿಂದ 5000/- ರೂಪಾಯಿಗಳ ನಗದು ಬಹುಮಾನ ಘೊಷಿಸಿರುತ್ತಾರೆ.

GULBARGA DIST REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಮಹ್ಮದ  ನಿಜಾಮೋದ್ದಿನ  ತಂದೆ ಮಹ್ಮದ ಕರಿಮೋದ್ದಿನ   ಸಾ: ಮುಸ್ಲೀಂ ಚೌಕ ಗುಲಬರ್ಗಾರವರು ನನ್ನ ಸಂಬಂಧಿಯಾದ ಮಹಮದ ರಯಾನ ತಂದೆ ಸಲೀಮ ರವರು ಮತ್ತು ರಿಜ್ವಾನ ಖಾನ ರವರು ದಿನಾಂಕ:23-04-2012 ರಂದು  ರಾತ್ರಿ  10=30 ಗಂಟೆಗೆ ಇಬ್ಬರು ಕೂಡಿಕೊಂಡು ಕಣ್ಣಿ ಮಾರ್ಕೇಟ ಹತ್ತಿರ ವಾಕಿಂಗ ಮಾಡುತ್ತಾ  ಎಡಗಡೆಯಿಂದ ಬರುತ್ತಿದ್ದಾಗ  ಮೋಟಾರ ಸೈಕಲ್ ನಂ:ಕೆಎ 33 ಇ 5544 ನೇದ್ದರ ಸವಾರ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಯಾನ ಈತನಿಗೆ ಡಿಕ್ಕಿ ಪಡಿಸಿ  ಭಾರಿಗಾಯ ಮತ್ತು ಗುಪ್ತಗೊಳಿಸಿ ತನ್ನ  ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ  ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:50/2012  ಕಲಂ: 279 ,338 ಐ.ಪಿ.ಸಿ ಸಂ 187 ಐ,ಎಮ್,ವಿ,ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀಮತಿ ಅನ್ನಪೂರ್ಣ ಗಂಡ ಪ್ರಮೋದಕುಮಾರ ರಾಠೋಡ ಸಾ|| ವಿಶಾಲ ನಗರ ತಾರಪೈಲ್ ಗುಲಬರ್ಗಾ ರವರು ನನ್ನ ಮಗನಾದ ಸಾಗರ  ತಂದೆ  ಪ್ರಮೋದಕುಮಾರ ರಾಠೋಡ   ವ:16  ವರ್ಷ ಉ: ವಿಧ್ಯಾರ್ಥಿ ಇತನು ದಿನಾಂಕ: 21-04-2012 ರಂದು ಸಾಯಂಕಾಲ 5 ಪಿ.ಎಮ್.ಕ್ಕೆ ಮನೆಗೆ ಬರುವ ಕುರಿತು ಡಿಪೋ ನಂ: 01 ನೇದ್ದರ ಎದುರಿನ ಬಸ್ ನಿಲ್ದಾಣ ಹತ್ತಿರ ಅಟೋರಿಕ್ಷಾ ಕ್ಕೆ ಹೋಗಲು ಕಾಯುತ್ತಾ ನಿಂತಿರುವಾಗ  ಅಟೋರೀಕ್ಷಾ ನಂ:ಕೆಎ 32- 7119 ರ ಚಾಲಕನು  ಎಸ್.ವಿ.ಪಿ.ಸರ್ಕಲ್ ಕಡೆಯಿಂದ  ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಿಂತ ನನ್ನ ಮಗನಿಗೆ ಡಿಕ್ಕಿ ಪಡಿಸಿ  ಭಾರಿಗಾಯ ಅಟೋರಿಕ್ಷಾ  ಸಮೇತ ಚಾಲಕ ಓಡಿ ಹೋಗಿರುತ್ತಾನೆ ಅಂತಾ  ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:51/2012  ಕಲಂ: 279 ,338 ಐ.ಪಿ.ಸಿ ಸಂ 187 ಐ,ಎಮ್,ವಿ,ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ :ಶ್ರೀಮತಿ  ಅನ್ನಪೂರ್ಣ @ ಅರುಣಾ  ಗಂಡ ಅಡವಯ್ಯಾ ಮಠಪತಿ ಸಾ||ತಾವರಗೇರಾ ತಾ|| ಜಿ||ಗುಲಬರ್ಗಾರವರು ನಾನು ಮತ್ತು ನನ್ನ ಮಗಳು ನಮ್ಮ ಗ್ರಾಮದ ಲಿಂಬಾಜಿ ದಾದಾ ಇವರು  ಮಾಹಾಂತಯ್ಯಾ ಸ್ವಾಮಿ ಹೊಲದಲ್ಲಿ ಬಂದಾರಿ ಸಮೀಪ  ಹೋಗಿ ನೋಡಲು  ಆತನು ನನ್ನ ಗಂಡನಾಗಿದ್ದು, ನನ್ನ ಗಂಡನನ್ನು ಯಾರೋ 3-4 ಜನರು ಸೇರಿಕೊಂಡು ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿ ಮುಖದ ತುಂಬೆಲ್ಲಾ  ಮಣ್ಣು ಹಾಕಿರುತ್ತಾರೆ. ಈ ಕೊಲೆಯು ದಿನಾಂಕ. 23-4-2012 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ. 24-4-2012 ರಂದು 6-00 ಎ.ಎಂ. ಮದ್ಯದ ಅವಧಿಯಲ್ಲಿ ಜರುಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ  ಗುನ್ನೆ ನಂ: 127/2012 ಕಲಂ  302 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀ ಮೌಲಪಟೇಲ ತಂದೆ ಬಾವಾಪಟೇಲ ಸಾ||ಹೀರಾಪೂರ ತಾ: ಗುಲಬರ್ಗಾರವರು ನಮ್ಮ ಮನೆಗೆ ದಿನಾಂಕ: 24/4/2012 ರಂದು ಮುಂಜಾನೆ ನಮ್ಮ ಮನೆಗೆ ಮಹೇಬೂಬಪಟೇಲ ತಂದೆ ಸೈಯ್ಯದ ಪಟೇಲ ಇನ್ನೂ 5 ಜನರು ಸಾ: ಹೀರಾಪೂರ ರವರು  ಬಂದು ನಮ್ಮ ಜಾಗೆಯಲ್ಲಿ ಗೇಟ ಕಟ್ಟುವದಕ್ಕೆ ತಕರಾರು ಮಾಡುತ್ತೀರಿ ಅಂತಾ ಅವ್ಯಾಚ್ಚವಾಗಿ ಬೈದು ಬಡಿಗೆಯಿಂದ ಹೊಡೆ ಮಾಡಿ ಗುಪ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 128/2012 ಕಲಂ 143, 147 148 504 323 324 341 506 ಸಂ/ 149 ಐಪಿಸಿ ಪ್ರಕಾರ  ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀಮತಿ ಆರೀಪ ಬೇಗಂ  ಗಂಡ ಸೈಯದ ಅಮ್ಜದ ಪಟೇಲ ಬಿದ್ದಾಪೂರ ಪಟೇಲ  ಸಾ: ಹೀರಾಪೂರ ತಾ: ಗುಲಬರ್ಗಾರವರು ನಮ್ಮ ಮನೆಯ ಗೋಡೆ ಕಟ್ಟುತ್ತಿದ್ದಾಗ ಮೌಲಾಲಿ ತಂದೆ  ಬಾವಪಟೇಲ ಇನ್ನೂ 6 ಜನರು ಸಾ: ಹೀರಾಪೂರ ರವರು ಗೇಟ ಕೂಡಿಸಬೇಡಿರಿ ಅಂತಾ  ತಕರಾರು ಮಾಡಿ ಅವ್ಯಾಚ್ಚವಾಗಿ ಬೈದು ನಮ್ಮ ಅತ್ತೆಗೆ ಹೊಡೆಯುತ್ತಿದ್ದಾಗ ಬಿಡಿಸಲು ಹೋದ ಕುತ್ತಿಗೆ ಹಿಡಿದು ಹೊಡೆ ಬಡೆ ಮಾಡಿ ಗುಪ್ತಗಾಯ ಮಾಡಿರುತ್ತಾರೆ ಮತ್ತು ತಕರಾರು ಮಾಡುತ್ತಿದ್ದಾಗ 13 ಗ್ರಾಂ  ಬಂಗಾರದ ಮಂಗಳ ಸೂತ್ರ ಕಳೆದು ಹೋಗಿರುತ್ತದೆ ಅಂತಾ  ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 129/2012 ಕಲಂ 143, 147 323  504 506 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

24 April 2012

GULBARGA DIST REPORTED CRIMES


ಕೊಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಶ್ರೀ ಶಿವರಾಮ ತಂದೆ ಚಂದಪ್ಪ ಸೂರ್ಯವಂಶಿ ಸಾ: 14 ನೇ ಕ್ರಾಸ ತಾರಫೈಲ ಗುಲಬರ್ಗಾರವರು ನನಗೆ 3 ಜನ ಗಂಡು ಮಕ್ಕಳಿದ್ದು,  ಒಬ್ಬಳು ಹೆಣ್ಣು ಮಗಳು ಇದ್ದು ರಮೇಶ ಈತನು ಹಿರಿಯವನಾಗಿರುತ್ತಾನೆ. ದಿನಾಂಕ 23-04-12 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ಜೇವರ್ಗಿಯಿಂದ ನನ್ನ ಬಾಳೆ ಹಣ್ಣಿನ ಬಂಡೆಯ ಹತ್ತಿರ ಬಂದು ತನ್ನಲ್ಲಿದ್ದ 1000/- ರೂ ಗಳನ್ನು ನನಗೆ ಇಟ್ಟುಕೊಳ್ಳು ಅಂತಾ ಹೇಳಿದಾಗ ನಾನು ಮನೆಗೆ ಹೋಗಿ ನಿನ್ನ ತಾಯಿಗೆ ಕೊಡುಅಂತಾ ಹೇಳಿದೇನು. ಆಗ ರಮೇಶ ಈತನು ನನ್ನಲ್ಲಿಂದ ಮನೆಗೆ ಹೋಗುವಾಗ ರಾತ್ರಿ 9-00 ಗಂಟೆ ಆಗಿತ್ತು. ದಿನಾಂಕ 24-4-12 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ನನ್ನ ಮೂರನೇ ಮಗನಾದ ಚಂದ್ರಕಾಂತ ಈತನು ಬಂದು ರಮೇಶ ಅಣ್ಣನಿಗೆ ರೈಲ್ವೆ ಕ್ವಾಟರ್ಸ ಹತ್ತಿರ ಯಾರೋ ಹೊಡೆದು ಕೊಲೆ ಮಾಡಿ ರಸ್ತೆಯ ಪಕ್ಕದ ಗಟಾರದಲ್ಲಿ ಬಿಸಾಕಿ ಹೋಗಿರುತ್ತಾರೆ.ಅಂತಾ ಹೇಳಿದ ತಕ್ಷಣ ನಾನು, ನಮ್ಮ ಮನೆಯವರೆಲ್ಲರೂ ಹೋಗಿ ನೋಡಲು ನನ್ನ ಮಗ ರಮೇಶನ ಶವವು ಗಟಾರದಲ್ಲಿ ಬಿದ್ದಿದ್ದು, ಯಾರೋ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಎಳೆದು ಹಾಕಿದ ರಕ್ತದ ಕಲೆಗಳು ಬಿದ್ದಿದ್ದು ಮತ್ತು ಅಲ್ಲೆ ಪಕ್ಕದಲ್ಲಿ ಒಂದು ರಕ್ತ ಹತ್ತಿದ ಪರಸಿ ಕಲ್ಲು ಬಿದ್ದಿರುವದನ್ನು ನೋಡಿರುತ್ತೇನೆ.     ಯಾರೋ ದುಷ್ಕರ್ಮಿಗಳು ಯಾವುದೋ ದುರುದ್ದೇಶದಿಂದ ನನ್ನ ಮಗನಿಗೆ ಕೊಲೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 55/12 ಕಲಂ 302 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಸ ಮಾಡಿದ ಬಗ್ಗೆ:
ಬ್ರಹ್ಮಪೂರ ಪೊಲೀಸ್ ಠಾಣೆ: ಶ್ರೀ.ಕ್ರಿಶ್ನಾಥ ಪವಾರ ವ್ಯವಸ್ಥಾಪಕರು ಲಕ್ಷ್ಮಿ ಭವಾನಿ ವಾಚ್ ಕಂಪನಿ, ಹೆಚ್.ಎಮ್.ಟಿ ಶೋ ರೂಮ್, 12 ಸುಪರ ಮಾರ್ಕೆಟ ಗುಲಬರ್ಗಾ ರವರು ನಮ್ಮ ಅಂಗಡಿಗೆ ದೀಪಕ ಜೈನ ಶ್ರೀನಾಥ ಟ್ರೇಡಿಂಗ, 363/64, ಆಶಾ ಕಾಂಪ್ಲೇಕ್ಸ ರವಿವಾರ ಪೇಠ ಪಿ.ಎಮ್.ಸಿ ಬ್ಯಾಂಕ ಕರಾಡಾ ಜಿ|| ಸತಾರಾ, ಮಹಾರಾಷ್ಟ್ರ ರಾಜ್ಯ ಫೋನ್ ನಂ: 08551024757 ನೇದ್ದವನು ಸುಪರ ಮಾರ್ಕೆಟನಲ್ಲಿರುವ ನಮ್ಮ ಅಂಗಡಿಗೆ ದಿನಾಂಕ: 18/04/2012 ರಂದು ಬಂದು ಟೈಟಾನ ಕೈ ಗಡಿಯಾರಗಳನ್ನು ಪರಿಶೀಲಿಸಿ ಸುಮಾರು 20 ಬೆಲೆಬಾಳುವ ಗಡಿಯಾರಗಳನ್ನು ಅ||ಕಿ|| 1,09,960/- ನೇದ್ದವುಗಳನ್ನು ಸರಿಯಾಗಿವೇ ಅಂಯಾ ಹೇಳಿ ಹೋಗಿ ದಿನಾಂಕ: 21/04/2012 ರಂದು ಸಾಯಂಕಾಲ 6-30 ಗಂಟೆಗೆ ಆ ವ್ಯಕ್ತಿ ನಮ್ಮ ಅಂಗಡಿಗೆ ಬಂದು ತಾನು ಈ ಮೊದಲು ನೋಡಿದ 20 ಗಡಿಯಾರಗಳು ತೆಗೆದುಕೊಂಡು 1,09,960/- ರೂಪಾಯಿಯ  ಡಿಡಿ ಕೊಟ್ಟು ಹೋಗಿದ್ದು, ನಾನು ಸದರಿ ಡಿ.ಡಿ ಯನ್ನು ಕ್ಲೀಯರಿಂಗ ಗೋಸ್ಕರ ದಿನಾಂಕ: 23/04/2012 ರಂದು ಸುಪರ ಮಾರ್ಕೆಟನಲ್ಲಿರುವ ಯೂಕೋ ಬ್ಯಾಂಕಿಗೆ ಹಾಕಿದಾಗ ಸದರಿ ಡಿ.ಡಿಯು ನಕಲಿ (ಫೇಕ) ಡಿ.ಡಿ ಅಂತಾ ಪರಿಗಣಿಸಿ ಯೂಕೋ ಬ್ಯಾಂಕಿನವರು ವಾಪಸ್ಸ ನಮ್ಮ ಅಂಗಡಿಗೆ ಕಳುಹಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 50/2012 ಕಲಂ: 406, 420 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ: ಲೀನಾ ಮುನ್ನಾಡೆ ಭೊರಶಿಯನ್ ಸಾ|| ಮುನಿರ ಪಾಷಾ ಕಟ್ಟಡ ಐವಾನ- -ಶಾಹಿ ಕಾಲೋನಿ ಗುಲಬರ್ಗಾರವರು ದಿನಾಂಕ:08.02.2012 ರಿಂದ ಇಲ್ಲಿಯವರೆಗೆ ಸುವರ್ಣಾ ಗಂಡ ನಾಮದೇವ ಸಾ|| ಶಹಬಾಜ ಕಾಲೋನಿ ಗುಲಬರ್ಗಾ ಇವಳು ಆಗಾಗ ನಮ್ಮ ಮನೆಗೆ ಬಂದು ನಮ್ಮೊಂದಿಗೆ ಸಲುಗೆಯಿಂದ ಇದ್ದು ನಮ್ಮ ಮನೆಯಲ್ಲಿಯ 8000/-ರೂ ಕಳ್ಳತನ ಮಾಡಿಕೊಂಡು ಹೋಗಿದ್ದು, ಆಕೆಯನ್ನು  ವಿಚಾರಿಸಿದಾಗ ಆಕೆಯ ಗಂಡ ಹಾಗೂ ಇನ್ನೂ 4 ಜನರು ಬಂದು ಬೆದರಿಸಿ ಭಯ ಹಾಕಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ 56/12 ಕಲಂ 380, ,506 ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST REPORTED CRIMES

ಅಪಘಾತ ಪ್ರಕರಣ:

ಗ್ರಾಮೀಣ ಪೊಲೀಸ ಠಾಣೆ :ಶ್ರೀ ಕಿಶನ ತಂದೆ ಧಾದರ ಸಾಳುಂಕೆ ಸಾ: ಹೆಬ್ಬಾಳ ರೋಡ ಆಳಂದ ತಾ: ಆಳಂದ ರವರು ನಾನು ಮತ್ತು ಜೈಸಿಂಗ ದಿನಾಂಕ: 23/4/2012 ರಂದು ಮೋಟಾರ ಸೈಕಲ ನಂ ಕೆಎ 32 ಕೆ 7706 ನೇದ್ದರ ಮೇಲೆ ಗುಲಬರ್ಗಾಕ್ಕೆ ಬಂದು ಮದುವೆ ಮುಗಿಸಿ ಕೊಂಡು ಮರಳಿ ಆಳಂದಕ್ಕೆ ಹೋಗುವಾಗ ಕೆರೆ ಬೋಸ್ಗಾ ಕ್ರಾಸ ಹತ್ತಿರ ತಿರುವಿನಲ್ಲಿ ಅತಿವೇಗ ಅಲಕ್ಷತನದಿಂದ ನಡೆಯಿಸಿದ್ದರಿಂದ ನಿಯಂತ್ರಣ ತಪ್ಪಿ ಮೋಟಾರ ಸೈಕಲ ಮೇಲಿಂದ ಬಿದ್ದು ರಕ್ತಗಾಯ ಗುಪ್ತಗಾಯವಾಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 125/2012 ಕಲಂ 279 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:
ಶ್ರೀ ಶಿವಕುಮಾರ ತಂದೆ ವಸಂತರಾವ ಮಾಲಿ ಪಾಟೀಲ & ಬಿರಾದಾರ ಸಾ|| ನಾವದಗಿ (ಬಿ) ತಾ|| ಗುಲಬರ್ಗಾರವರು ನಾನು ದಿನಾಂಕ: 23/4/2012 ರಂದು ಗುಲಬರ್ಗಾ ಕ್ಕೆ ಮೋಟರ ಸೈಕಲ ನಂ ಕೆಎ 32 ಇ 2373 ನೇದ್ದರ ಮೇಲೆ ಬಂದು ಮದುವೆ ಕಾರ್ಡಗಳನ್ನು ಹಂಚಿ ಮರಳಿ 5:30 ಪಿಎಮ ಸುಮಾರಿಗೆ ಸ್ವಾಮಿ, ಸರ್ಮಥ ಗುಡ್ಡದ ಇಳಕಲಿನಲ್ಲಿ ಹೊರಟಾಗ ಇಂಡಿಕಾ ಕಾರ ನಂ ಎಪಿ 28 ಎಎಲ್‌ 3552 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಓವರ ಟೇಕ ಮಾಡಲು ಹೋಗಿ ಮೋಟಾರ ಸೈಕಲಿಗೆ ಡಿಕ್ಕಿ ಪಡಿಸಿದ್ದರಿಂದ ಮೋಟಾರ ಸೈಕಲ ಸಮೇತ ಬಿದ್ದು ಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 126/2012 ಕಲಂ 279 337 ಐಪಿಸಿ ಸಂ/ 187 ಐಎಂವಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕೊಲೆ ಪ್ರಕರಣ:

ರಟಕಲ್ ಪೊಲೀಸ್ ಠಾಣೆ:ಶ್ರೀ ದಶರಥ ತಂದೆ ತುಕಾರಾಮ ಚಿನ್ನಾ ರಾಠೋಡ ಸಾ||ರುಮ್ಮನಗೂಡ ತಾಂಡ ರವರು ನನ್ನ ತಂದೆ ಈಗ ಸುಮಾರು 8 ವರ್ಷದ ಹಿಂದೆ ತೀರಿಕೊಂಡಿದ್ದು, ಆವಾಗಿನಿಂದ ನನ್ನ ತಾಯಿ ಸೀತಾಬಾಯಿ ಇವಳು ನಮ್ಮ ತಾಂಡೆಯ ಉಮ್ಲಾ ತಂದೆ ಪೊಮು ರಾಠೋಡ ಇತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ನಮಗೆ ಸರಕಾರರಿಂದ ಒಂದು ಮನೆ ಮಂಜೂರಾಗಿದ್ದರಿಂದ ಮನೆ ಕಟ್ಟುತ್ತಿದ್ದು ಮೊನ್ನೆ ಮನೆಯ ಬಿಲ್ಲಿನ ಹಣ ಬಂದಿದ್ದರಿಂದ ನನ್ನ ತಾಯಿ ಚಿಂಚೋಳಿ ಬ್ಯಾಂಕಿಗೆ ಹೋಗಿ ಹಣ ತಂದಿದ್ದುದನ್ನು ನೋಡಿ, ಉಮ್ಲಾ ರಾಠೋಡನು ನಮ್ಮ ಮನೆಗೆ ಬಂದು ನನ್ನ ತಾಯಿಗೆ ಹಣ ಕೊಡು ಅಂತ ಜಗಳ ಮಾಡುತ್ತಿದ್ದಾಗ ನನ್ನ ಹೆಂಡತಿ ಯಮುನಾ, ನನ್ನ ತಂಗಿ ಸವಿತಾ ಕೂಡಿ ಸಮಜಾಯಿಸಿರುತ್ತೇವೆ. ದಿನಾಂಕ: 22.04.2012 ರಂದು ಉಮ್ಲಾ ನಾನು ಹೊಲಕ್ಕೆ ನಡೆದಿದ್ದೇನೆ ನೀನು ನಡಿ ಅಂತ ನನ್ನ ತಾಯಿಗೆ ಕರೆದುಕೊಂಡು ಹೋಗಿದ್ದು ರಾತ್ರಿ ಆದರೂ ಮನೆಗೆ ಬರಲಿಲ್ಲಾ ದಿನಾಂಕ:23.04.2012 ರಂದು ಮಧ್ಯಾಹ್ನ 3 ಗಂಟೆಯ ತನಕ ಹುಡುಕಾಡಿ ಉಮ್ಲಾ ರಾಠೋಡನಿಗೆ ಕೇಳಲು ಹೊಲದ ಕಡೆಗೆ ನೋಡೊಣ ಅಂತ ಕರೆದುಕೊಂಡು ಹೋಗಿ ಹುಡುಕಾಡಿದಂತೆ ಮಾಡುತ್ತಿರುವಾಗ ನಮ್ಮ ತಾಯಿ ಕಾಣಿಸಲಿಲ್ಲಾ ನನಗೆ ಸಂಶಯ ಬಂದು ನಿಜ ಹೇಳು ನನ್ನ ತಾಯಿ ನಿನ್ನ ಜೊತೆ ಬಂದವಳು ಮನೆಗೆ ಬಂದಿಲ್ಲಾ ಏನು ಮಾಡಿದ್ದಿ ಅಂದಾಗ, ನಿನ್ನ ತಾಯಿಗೆ ಹಣ ಕೇಳಿದೆ ಕೊಡುವದಿಲ್ಲಾ ಅಂದಿದ್ದಕ್ಕೆ ನನ್ನ ಹತ್ತಿರವಿದ್ದ ಬಂದೂಕಿನಿಂದ ಆಕೆಯ ತಲೆಗೆ ಹೊಡೆದಿದ್ದು ಹೊಲದ ಕೆಳಗೆ ಬಂಡಿಕೊಳ್ಳ ನಾಲಾದಲ್ಲಿ ಸತ್ತು ಬಿದ್ದಿರುತ್ತಾಳೆ, ಏನು ಮಾಡ್ತಿರಿ ಅಂತ ಅನ್ನುತ್ತಾ ಓಡಿಹೋದನು ನಾವು ಹುಡುಕಾಡಲು ಅಲ್ಲಿ ಬಂದಿಕೊಳ್ಳದ ನಾಲಾದ ಕಲ್ಲು ಬಂಡಿಯ ಹತ್ತಿರ ನಮ್ಮ ತಾಯಿಯ ಹೆಣ ಬಿದ್ದಿದ್ದು ಮೋಡಿ ಕಾನೂನು ಕ್ರಮ ಜರೂಗಿಸಲು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 23/12 ಕಲಂ 302, ಐಪಿಸಿ ಸಂ 27 ಆಯುಧ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

23 April 2012

GULBARGA DIST


ಜಿಲ್ಲಾ ಪೊಲೀಸ ವಿಶೇಷ ಘಟಕ ಅಧಿಕಾರಿಗಳಿಂದ, ಸೇಡಂ ಪಟ್ಟಣದಲ್ಲಿ ಅಂದರ ಬಹಾರ ಜೂಜಾಟ ನಿರತರ ಮೇಲೆ ದಾಳಿ, 1,43,450/- ರೂಪಾಯಿಗಳು ಜಪ್ತಿ.


ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ ಜಿಲ್ಲಾ ಪೊಲೀಸ್ ಅಧೀಕ್ಷಕರು ಗುಲಬರ್ಗಾರವರ ಮಾರ್ಗದರ್ಶನದಲ್ಲಿ ದಿನಾಂಕ: 22-04-2012 ರಂದು ಸೇಡಂ ಪಟ್ಟಣದಲ್ಲಿ ಅಂದರ ಬಾಹರ ಜೂಜಾಟ ನಡೆಯುತ್ತಿದೆ ಅಂತಾ ಖಚಿತ ಭಾತ್ಮಿ ಮೇರೆಗೆ ಶ್ರೀ ಚೇತನ ಆರ. ಐಪಿಎಸ್ (ಪ್ರೋ) ಮತ್ತು ಶ್ರೀ ಅಸ್ಲಾಂ ಬಾಶ ಪೊಲೀಸ್ ಇನ್ಸಪೇಕ್ಟರ ಜಿಲ್ಲಾ ವಿಶೇಷ ಶಾಖೆ ಗುಲಬರ್ಗಾ ರವರು  ಹಾಗು ಸಿಬ್ಬಂದಿಯವರಾದ  ಶಿವಪ್ಪಾ ಕಮಾಂಡೊ, ರಾಘವೇಂದ್ರ, ಈರಣ್ಣಾ, ಜಯಪಾಲ್ ಸಿಂಗ್, ಸಂತೋಷ, ವಿಠಲರೆಡ್ಡಿ, ವಿಜಯಕುಮಾರ, ಹೀರೆಮಾನ ಪೋಟೊ ಗ್ರಾಪರ್, ರವಿ ಚಾಲಕ ಮತ್ತು ಸೇಡಂ ವೃತ್ತ ನಿರೀಕ್ಷಕರು ಶ್ರೀ ಸಂತೋಷ ಬನಹಟ್ಟಿ ರವರೊಂದಿಗೆ, ಸೇಡಂ ಪಟ್ಟಣದ ಪ್ರೇಮಶೇಠ ರವರ ಎಮ್.ಆರ್.ಎಫ್ ಶೋ ರೂಮದ ಮೊದಲನೆ ಮಹಡಿ ಕಟ್ಟಡದಲ್ಲಿ ಅಂದರ ಬಹಾರ ಜೂಜಾಟ್ ಕೇಂದ್ರದ ಮೇಲೆ ದಾಳಿ ಮಾಡಿ ಈ ಕೆಳಕಂಡ ಆರೋಪಿತರಾದ 1. ಶಿವಶರಣಪ್ಪಾ ತಂದೆ ರೇವಣಸಿದ್ದಪ್ಪಾ ನಾಶೀ ವ|| 45 ಉ| ಟ್ರಾನ್ಸಪೋರ್ಟ ಸಾ||ಉಡಗಿ ರೋಡ ಸೇಡಂ, 2. ನಾಗೇಶ ತಂದೆ ಚಂದ್ರಶೇಟ್ಟಿ ಔರಾದಿ ವ|| 42 ಜ|| ಲಿಂಗಾಯತ ಸಾ|| ಬಸವನಗರ ಸೇಡಂ, 3. ಸಂಗಮೇಶ ತಂದೆ ಬಸವರಾಜ ಅಣಿಕೆರಿ ವ|| 38 ವರ್ಷ, ಸಾ|| ಬಸವನಗರ ಸೇಡಂ, 4. ಶಿವಕುಮಾರ ತಂದೆ ವೀರಶೇಟ್ಟಿ ಪಾಟೀಲ ವಯ 40 ಸಾ|| ವಿದ್ಯಾನಗರ ಸೇಡಂ, 5.ಬಂಡೆಪ್ಪಾ ತಂದೆ ಕಂಟೆಪ್ಪಾ ಚಿಂಚೋಳಿ ಸಾ|| ವಿವೇಕಾನಂದ ಶಾಲೆ ಹತ್ತಿರ ಸೇಡಂ, 6. ಭೀಮರಾಯ ತಂದೆ ಶರಣಪ್ಪಾ ರಟಕಲರ್ ವಯ|| 24 ಸಾ|| ಆಶ್ರಯ ಕಾಲೋನಿ ಸೇಡಂ, 7.ಜಗದೀಶ ತಂದೆ ಶಂಕರಪ್ಪಾ ಪಾಟೀಲ್ ವಯ|| 34 ಸಾ|| ವಿದ್ಯಾನಗರ ಸೇಡಂ, 8. ಭೀಮರೆಡ್ಡಿ ತಂದೆ ಶರಣರೆಡ್ಡಿ ನಾಗರೆಡ್ಡಿ ವಯ|| 42 ಸಾ|| ವಿದ್ಯಾ ನಗರ ಸೇಡಂ, 9. ರಾಜೇಂದ್ರಯ್ಯ ತಂದೆ ನರಸಯ್ಯ ಬಂಡಾರಿ  ವಯ|| 57 ಸಾ|| ಕೊಂತಂಪಲ್ಲಿ ಸಾ|| ಸೇಡಂ ರವರಿಂದ ಅಂದರ ಬಹಾರ ಜೂಜಾಟಕ್ಕೆ ಬಳಸಿದ ನಗದು ಹಣ 1,43,450/- ರೂಪಾಯಿಗಳು ಮತ್ತು ಇಸ್ಪೇಟ ಎಲೆಗಳು ಜಪ್ತಿ ಮಾಡಿದ್ದು ಮೇಲ್ಕಂಡ 9 ಜನ ಆರೋಪಿತರನ್ನು ದಸ್ತಗಿರಿ ಮಾಡಲಾಗಿದೆ ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

GULBARGA DIST

ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:
ಶ್ರೀ ಪಾರ್ವತಿ ಗಂಡ ದೇವಿಂದ್ರಪ್ಪ ರಾಮಕೋಟಿ ವ: 48 ವರ್ಷ ಸಾ: ಶರಣಸಿರಸಗಿ ತಾ: ಜಿ: ಗುಲಬರ್ಗಾ ರವರು ನಾನು ಮತ್ತು ನನ್ನ ತಾಯಿ ದಿ: 21-04-2012 ರಂದು ಮಧ್ಯಾಹ್ನ 1-30 ಗಂಟೆಗೆ ಸುಮಾರಿಗೆ ಇಬ್ಬರೂ ಕೂಡಿಕೊಂಡು ಅಮವಾಸ್ಯೆ ಇರುವ ಪ್ರಯುಕ್ತ ರಾಣಜೀಪೇರ ದರ್ಗಾಕ್ಕೆ ಹೋಗುವ ಕುರಿತು ದರ್ಗಾದ ಕ್ರಾಸ ಹತ್ತಿರ ನಿಂತಾಗ ಆಳಂದ ರಸ್ತೆಯ ಕಡೆಯಿಂದ ಮೋಟಾರ ಸೈಕಲ ನಂ ಕೆಎ 32 ವಾಯ-4824 ನೇದ್ದರ ಸವಾರನು ತನ್ನ ಮೋಟಾರ ಸೈಕಲ ನೇದ್ದನ್ನು ವೇಗದಿಂದ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಮೋಟಾರ ಸೈಕಲ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಈ ಮೊದಲು ದೂರು ಸಲ್ಲಿಸಿದ್ದರು, ನಂತರ ದಿನಾಂಕ 22/4/2012 ರಂದು ಮಧ್ಯಾಹ್ನ 3.15 ಪಿಎಮ ಸುಮಾರಿಗೆ ಉಪಚಾರ ಹೊಂದುತ್ತಾ ಉಪಚಾರ ಫಲಕಾರಿಯಾಗದೇ ಅಶ್ವೀನಿ ಆಸ್ಪತ್ರೆಯಲ್ಲಿ ಸುಗಲಭಾಯಿ ಯವರು ಮೃತಪಟ್ಟಿರುತ್ತಾಳೆ ಅಂತಾ ಮೃತಳ ಮಗ ಮಲ್ಲಿಕಾರ್ಜುನ ರವರ ಹೇಳಿಕೆ ಮೇಲಿಂದ ಕಲಂ 304 (ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

22 April 2012

GULBARGA DIST REPORTED CRIMES


ವರದಕ್ಷಿಣೆ ಪ್ರಕರಣ:
ಮಹಿಳಾ ಪೊಲೀಸ ಠಾಣೆ
:
 ರಾಜೇಶ್ರಿ ಗಂಡ ಸತೀಶ ಸಾ||ಮನೆ ನಂ 11-1872/27-ಎ ವಸಂತ ನಗರ ಗುಲಬರ್ಗಾರವರು ನನ್ನ ಮದುವೆಯು ಸತೀಶ ತಂದೆ ವಿನಾಯಕರಾವ ರವರೊಂದಿಗೆ ಸಂಪ್ರದಾಯದಂತೆ ಮದುವೆಯಾಗಿದ್ದು ನನಗೆ 2 ಜನ ಮಕ್ಕಳಿರುತ್ತಾರೆ. ನನ್ನ ಗಂಡನು ನನ್ನ ಜೊತೆ ಜಗಳ ತೆಗೆದು ಹೊಡೆ-ಬಡೆ  ಮಾಡುವುದು ಮಾನಸಿಕ ಹಾಗೂ ದೈಹಿಕ ಕಿರುಕುಳ ಕೊಡುತ್ತಾ ಬಂದಿರುತ್ತಾನೆ. ದಿನಾಂಕ20.04.2012 ರಂದು ರಾತ್ರಿ 10 ಗಂಟೆ ಸುಮಾರಿ ನನ್ನ ಗಂಡ ಇತನು ಕುಡಿದು ಬಂದು ಮನಬಂದಂತೆ ಹೋಡೆದು ಅವಾಚ್ಯವಾಗಿ ಬೈದು ಜಗಳ ಬಿಡಿಸಲು ಬಂದ ನನ್ನ ಅಕ್ಕನಿಗೆ ಕೂಡ ಹೊಡೆದಿದ್ದಾನೆ ಮತ್ತೆ ನನಗೆ ಇಂದು ಬೆಳಗ್ಗೆ 7.30 ಸುಮಾರಿಗೆ ಹೊಡೆಯಲು ಬಂದಾಗ ನನ್ನ ಮಗ ಸುಶಾಂತ, ಮಗಳು ಸ್ವೂರ್ತಿ ಅಕ್ಕ ಮಂದಾಕಿನಿ ಮತ್ತು ಅಕ್ಕನ ಮಗ  ವಲ್ಲಬ್ ಅವರಿಗೂ   ಸಹ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ 34/12 ಕಲಂ 498(ಎ).504.506 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:
ಶ್ರೀ. ಶರಣಬಸಪ್ಪ ತಂದೆ ಬಸವಂತರಾಯ ಘಟ್ಟಗೊಂಡ ಸಾ||ಜೀವಣಗಿ ತಾ:ಗುಲಬರ್ಗಾ ರವರು ನಾನು ದಿನಾಂಕ: 11/04/2012 ರಂದು ರಾತ್ರಿ  11-30 ಗಂಟೆ ಸುಮಾರಿಗೆ ಮನೆಯ ಮುಂದೆ ಮೋಟರ್ ಸೈಕಲ್ ನಂ:ಕೆಎ-32-ಡಬ್ಲೂ-4243 ನೇದ್ದನ್ನು ನಿಲ್ಲಿಸಿದ್ದು, ದಿನಾಂಕ: 12/04/2012 ರ ಬೆಳೆಗ್ಗೆ 6-00 ಎದ್ದು ನೋಡಲಾಗಿ ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಮುಂದುಗಡೆ ನಿಲ್ಲಿಸಿದ ನನ್ನ ಕಪ್ಪು ಬಣ್ಣದ ನೀಲಿ ಪಟ್ಟಿಗಳುಳ್ಳ ಹಿರೋಹೊಂಡಾ ಸ್ಲೇಂಡರ್ ಪ್ಲಸ್ ಮೋಟರ್ ಸೈಕಲ್ ನಂ: ಕೆಎ-32-ಡಬ್ಲೂ-4243 ನೇದ್ದು ಅಂದಾಜು ಕಿಮ್ಮತ್ತು 20,000/- ರೂಪಾಯಿ ನೇದ್ದನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:45/2012 ಕಲಂ:379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ಶ್ರೀ ರಫೀಕ ತಂದೆ ಮಹಮ್ಮದ ಉಸ್ಮನ ಶೇಖ ಸಾ:ತೊನಸಳ್ಳಿ ರವರು ನಾನು ಮತ್ತು ನನ್ನ ತಮ್ಮ ಶಫಿ. ಇಬ್ಬರೂ ಕೂಡಿಕೊಂಡು ದಿನಾಂಕ: 20-04-2012 ರಂದು 8 ಪಿ.ಎಂ ಸುಮಾರಿಗೆ ತೊನಸಹಳ್ಳಿಯಿಂದ ಶಹಾಬಾದಕ್ಕೆ ಟಂ ಟಂ ನಂ ಕೆ.ಎ. 32 ಎ 3092 ನೇದ್ದರಲ್ಲಿ ಕುಳಿತಿದ್ದು ಅದರಲ್ಲಿ ನಮ್ಮೂರವರಾದ ಲಕ್ಷ್ಮಿಕಾಂತ ,ಇನ್ನೂ 3 ಜನರು ಕುಳಿತು ಬರುತ್ತಿರುವಾಗ ದಾದೀಪೀರ ದರ್ಗಾದ ಹತ್ತಿರ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಸಿ ಪಲ್ಟಿ ಮಾಡಿದನು. ನನ್ನ ತಮ್ಮನಿಗೆ ತಲೆಗೆ, ಎಡಮೋಳಕಾಲ ಕೆಳಗಿ ಭಾರಿ ರಕ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 41/2012 ಕಲಂ 279 337 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ್ ಠಾಣೆ:
ಶ್ರೀ ಬಾಬು ತಂದೆ ಮಹಿಬೂಬಸಾಬ ಶೇಖ ಸಾ:ಮರತೂರ ರವರು ನನ್ನ ಅತ್ತಿಗೆಯಾದ ಶಬಾನಾ ಗಂಡ ಚಾಂದಶೇಖ ಇವಳು ದಿನಾಂಕ:21/04/2012 ರಂದು 7.00 ಪಿಎಂ ಸುಮಾರಿಗೆ  ಮನೆಯ ಮುಂದೆ ಕುಳಿತಾಗ ತಾರಾ ಇವಳು ಬಂದು ವಿನಾಕಾರಣ ಜಗಳ ತೆಗೆದು   ನಮ್ಮ ತಿಪ್ಪೆಯಲ್ಲಿ ಕಸ ಚಲ್ಲುತ್ತೇವೆ ನಿನ್ನ ದೇನು ಅಂತಾ ಜಗಳ ತೆಗೆದು ಕೈಯಿಂದ ಹೊಡೆದಳು ಅಪ್ಸನಾ ಇವಳು ಬಿಡಿಸಲು ಬಂದಾಗ ಮಹ್ಮದ ರಫೀಕ ಇತನು ಕಲ್ಲಿನಿಂದ ತಲೆಯ ಎಡಭಾಗಕ್ಕೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ. ಜಗಳದ ಸಪ್ಪಳ ಕೇಳಿ ಸಂತೋಷ ತಂದೆ ಪರಮೇಶ್ವರ ಬರುತ್ತಿದ್ದಾಗ ಮೈನೋದ್ದಿನ ಇತನು ತಡೆದು ನಿಲ್ಲಿಸಿ ಚಾಕು ಹಿಡಿದು ನನಗೆ ಬಾಯಿಗೆ ಹೊಡೆದಾಗ ತರಚಿದ ಗಾಯ ಆಗಿರುತ್ತದೆ ರಫೀಕ, ಶಫೀಕ ಹಾಗೂ ತಾರಾ ಇವಳು ಕೈಯಿಂದ ಹೊಡೆದಿರುತ್ತಾರೆ. ಮತ್ತು ಸಂತೋಷ ಇತನಿಗೆ ಮೈನೋದ್ದಿನ ಇತನು ಕೈಯಿಂದ ಮುಷ್ಠಿಮಾಡಿ ಎಡಗಣ್ಣೆಗೆ & ಬಲಗಣ್ಣೆನ ಕೆಳಗೆ ಬಲವಾಗಿ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 42/2012 ಕಲಂ 147 341 323 324 504 506 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀ ಮಹ್ಮದ ಶಫೀಕ ತಂದೆ ಗಫೂರ ಸಾಬ ಮೌಜಿನ  ಸಾ:ಮರತೂರ ರವರು ಅಕ್ಕಳಾದ ತಾಹೇರ @ ತಾರಾ ಇವಳು ಬಾಬುರವರ ಮನೆಯ ಮುಂದೆ ಹೋಗಿ ತಿಪ್ಪೆ ಕಸ ಸಂಬಂಧವಾಗಿ ಕೇಳಲು ಹೋಗಿದ್ದು  ಶಬಾನಾ, ಅಪ್ಸನಾ ಮಹೆಬೂಬಿ ಇವರು ನನ್ನ ಅಕ್ಕಳನ್ನು ತಡೆದು ನಿಲ್ಲಿಸಿ  ಅವಾಚ್ಯ ಶಬ್ದಗಳಿಂದ ಬೈದು ಅಪ್ಸನಾ,ಮಹೇಬೂಬಬಿ ಹೊಡೆದಿರುತ್ತಾರೆ. ನನ್ನ ತಮ್ಮ ರಫೀಕ ಬಿಡಿಸಲು ಬಂದಾಗ ನನಗೆ ಬಾಬು ಮತ್ತು ರಫೀಕ ಇವರು ಕೈಯಿಂದ ತಲೆಯ ಹಿಂದೆ ಹೊಡೆರು ತರಚಿದ ಗಾಯಗಳಾಗಿರುತ್ತವೆ. ನಮ್ಮೆಲರಿಗೆ ಸಂತೋಷ, ಉಲ್ಲಾಸ ಇವರು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:43/2012 ಕಲಂ 147 323 234 504 354 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.