POLICE BHAVAN KALABURAGI

POLICE BHAVAN KALABURAGI

31 October 2012

GULBARGA DISTRICT REPORTED CRIMES


: ಪತ್ರಿಕಾ ಪ್ರಕಟಣೆ:
ಗುಲಬರ್ಗಾ ನಗರದ ರೋಜಾ ಪೊಲೀಸ ಠಾಣೆ ಗುನ್ನೆ ನಂ:77/2012 ಕಲಂ,406,419,420 ಸಂ. 149 ಐಪಿಸಿ ನೇದ್ದರಲ್ಲಿ 395 ಜನರ ಪಾಸ್ ಪೋರ್ಟಗಳನ್ನು ತೆಗೆದು ಕೊಂಡು ಹೊರದೇಶಕ್ಕೆ (ಹಜ್ ಯಾತ್ರೆಗೆ) ಹೋಗಲು ಪರವಾನಿಗೆ ಕೊಡಿಸುತ್ತೇವೆಂದು,  ಐದು ಜನರಾದ  ಮಹ್ಮದ ಜಾಫರ ತಂದೆ ಮಹ್ಮದ ಶಲಾರೋದ್ದೀನ್, ಮಹ್ಮದ ರಹೀಮತುಲ್ಲಾ ತಂದೆ ಮಹ್ಮದ ಅಸಾದುಲ್ಲಾ, ಶೇಖ ಅಕ್ತರ ಫಾತೀಮಾ ಗಂಡ ಶೇಖ ಮಹ್ಮದ ಸಲೀಂ ಇವರುಗಳನ್ನು ದಿನಾಂಕ:21.09.2012 ರಂದು ದಸ್ತಗಿರ ಮಾಡಿ ಅವರಿಂದ 19 ಮೂಲ ಪಾಸಪೋರ್ಟಗಳು ಹಾಗೂ ಅವರಿಂದ 6,69,500/- ರೂಪಾಯಿಗಳ ನಗದು ಹಣ ವಶಪಡಿಸಿಕೊಳ್ಳಲಾಗಿತ್ತು. ದಿನಾಂಕ:08.10.2012 ರಂದು ಶೇಖ ಮಹ್ಮದ ಸಲೀಮ ಇತನಿಗೆ  ದಸ್ತಗಿರ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿ ಕೊಡಲಾಗಿರುತ್ತದೆ. ಸದರಿ ಪ್ರಕರಣದಲ್ಲಿ  ಗುಲಬರ್ಗಾ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಾದ ಶ್ರೀ ಪ್ರವೀಣ ಮಧುಕರ ಪವಾರ ಐಪಿಎಸ್, ಅಪರ ಪೊಲೀಸ್ ಅಧೀಕ್ಷಕರು, ಶ್ರೀ ಕಾಶಿನಾಥ ತಳಕೇರಿ, ಗುಲಬರ್ಗಾ (ಬಿ) ಉಪ-ವಿಭಾಗದ ಡಿ.ಎಸ್.ಪಿ.ರವರಾದ ಶ್ರೀ, ಎ.ಡಿ.ಬಸಣ್ಣವರ ರವರ ಮಾರ್ಗದರ್ಶನದಲ್ಲಿ  ತನಿಖಾಧಿಕಾರಿ ಶ್ರೀ ಎಂ.ನಾರಾಯಣಪ್ಪ ಪಿ.ಐ. ರೋಜಾ ಪೊಲೀಸ ಠಾಣೆ ಹಾಗೂ ತನಿಖಾ ತಂಡದಲ್ಲಿರುವ ಡಾ:ಸುಧಾಕರ್ ಪಿ.ಎಸ್.ಐ. ಡಿ.ಸಿ.ಆರ್.ಬಿ. ರವರು ಮತ್ತು  ಅವರ ಸಿಬ್ಬಂದಿಯವರು ಸದರಿ ಪ್ರಕರಣದಲ್ಲಿಯ 336 ಮೂಲ ಪಾಸಪೋರ್ಟಗಳನ್ನು ಮುಂಬೈ ನಗರದ ಶಿವಾಜಿ ನಗರ ಪೊಲೀಸ ಠಾಣೆ ರವರು ತಮ್ಮ ಪ್ರಕರಣದಲ್ಲಿ ಜಪ್ತ  ಮಾಡಿ ತಾಬಾಕ್ಕೆ ತೆಗೆದು ಕೊಂಡು ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಅವುಗಳನ್ನು ನ್ಯಾಯಾಲಯದಿಂದ ಮುಂದಿನ ತನಿಖೆಗಾಗಿ ತಂದು ಹಾಜರ ಪಡಿಸಿದ್ದು ಈಗಾಗಲೆ ತನಿಖೆಯಲ್ಲಿ 355 ಪಾಸಪೋರ್ಟ ಹಾಗೂ 6,69,500/- ರೂಪಾಯಿಗಳನ್ನು ವಶಪಡಿಸಿಕೊಂಡಿದ್ದು ಇವುಗಳನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಲಾಗುವುದು ಸಂಬಂಧ ಪಟ್ಟವರು ತಮ್ಮ ಮೂಲ ದಾಖಲಾತಿಗಳನ್ನು ವಕೀಲರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿ ನ್ಯಾಯಾಲಯದಿಂದ ಪಡೆದು ಕೊಳ್ಳಬಹುದು. 
ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:30-10-2012 ರಂದು ಸಾಯಂಕಾಲ 6-30 ಗಂಟೆ ಸುಮಾರಿಗೆ ನಾನು ನನ್ನ ಖಾಸಗಿ ಕೆಲಸದ ನಿಮಿತ್ಯ ನಮ್ಮೂರಿನಿಂದ ಕಮಲಾಪೂರಕ್ಕೆ ಬಂದಿದ್ದು, ಗುಲಬರ್ಗಾದಲ್ಲಿರುವ ಮ್ಮ ಸಂಭಂದಿಕರನ್ನು ಮಾತನಾಡಿಸಿಕೊಂಡು ಕ್ರೂಜರ್ ಜೀಪ್ ನಂ: ಎಪಿ-11ಡಬ್ಲೂ-8061 ನೇದ್ದರಲ್ಲಿ ಕುಳಿತುಕೊಂಡಿದ್ದು ತನ್ನಂತೆ ಈ ಮೊದಲು ಕ್ರೂಜರ್ ಜೀಪಿನಲ್ಲಿ ಕೆಲವು ಪ್ರಯಾಣಿಕರು ಕುಳಿತಿದ್ದರು. ರಾತ್ರಿ 7-45 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 218 ಸಾನದಗಿ ಸೇತುವೆ ಸಮೀಪ ಹೋಗುತ್ತಿರುವಾಗ ಜೀಪ ಚಾಲಕನು ತನ್ನ ಜೀಪನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸುತ್ತಾ ಎದುರುಗಡೆಯಿಂದ ಟಿಪ್ಪರ್ ವಾಹನ ನಂ:ಕೆಎ-56-0133 ನೇದ್ದರ ಚಾಲಕನು ತನ್ನ ಟಿಪ್ಪರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾವು ಕುಳಿತ ಕ್ರೂಜರ್ ಜೀಪ್ ಮತ್ತು ಟಿಪ್ಪರ್ ವಾಹನ ಒಂದಕ್ಕೊಂದು ಡಿಕ್ಕಿ ಹೊಡೆದು ಜೀಪಿನಲ್ಲಿ ಕುಳಿತ ನನಗೆ ಮತ್ತು ಕಲ್ಯಾಣಿ ತಂದೆ ಸಂಭಣ್ಣ ಮಾಂಗ ಸಾ||ತಡಕಲ್ ಮತ್ತು ಶ್ರೀಮಂತರಾವ ತಂದೆ ಯಶ್ವಂತರಾವ ಪಟ್ಟಣಕರ ಕಮಲಾಪೂರ ಎ.ಎಸ್.ಐ ಎಲ್ಲರಿಗೂ  ಭಾರಿ ರಕ್ತಗಾಯ ಮತ್ತು ಗುಪ್ತಗಾಯಗಳಾಗಿದ್ದು ಅಲ್ಲದೇ ಕ್ರೂಜರ್ ಜೀಪಿನಲ್ಲಿ ಕುಳಿತ ಇತರ ಪ್ರಯಾಣಿಕರಿಗೆ ಗಾಯಗಳಾಗಿರುತ್ತವೆ. ಕಾರಣ ವಾಹನಗಳ ಚಾಲಕರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದಶರಥ ತಂದೆ ದೇವಪ್ಪ ಜಾನ್ ಸಾ:ಜೀವಣಗಿ ಗ್ರಾಮ ತಾ:ಜಿ: ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:113/2012 ಕಲಂ, 279, 337, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DISTRICT REPORTED CRIMES


ಹಲ್ಲೆ ಮಾಡಿ ಕೊಲೆಗೆ ಪ್ರಯತ್ನ:
ಕಮಲಾಪೂರ ಪೊಲೀಸ್ ಠಾಣೆ: ಶ್ರೀಮತಿ, ಕಾಶಿಬಾಯಿ ಗಂಡ ಸುನೀಲ್ ಗೌರ ವ:20 ವರ್ಷ ಸಾ; ನವನಿಹಾಳ ತಾ;ಜಿ;ಗುಲಬರ್ಗಾ ನನಗೆ ಒಂದೂವರೆ ವರ್ಷದ ಹಿಂದುಗಡೆ ಸುನೀಲ ತಂದೆ ಶಂಕರ ಗೌರೆ ಸಾ: ನವನಿಹಾಳ ಇತನೊಂದಿಗೆ ನವನಿಹಾಳ ಗ್ರಾಮದಲ್ಲಿ ಗುರುಹಿರಿಯರ ಸಮಕ್ಷಮ ಬಂಗಾರ ಮತ್ತು ನಗದು ಹಣ ಮನೆಯ ಸಾಮಾನುಗಳನ್ನು ಕೊಟ್ಟು ಮದುವೆ ಮಾಡಿ ಕೊಟ್ಟಿದ್ದು, ಮದುವೆಯಾಗಿ 2 ತಿಂಗಳ ನಂತರ ಮನೆಯಲ್ಲಿ ಅತ್ತೆಯಾದ ಗುಂಡಮ್ಮ, ಮೈದುನರಾದ ಸಂಜೀವ, ಮತ್ತು ವಿಜಯ ಇವರೆಲ್ಲರೂ ಕೂಡಿಕೊಂಡು ನನಗೆ ತವರು ಮನೆಯಿಂದ ಬಂಗಾರ ಮತ್ತು ಖರ್ಚು ಮಾಡಲು ಹಣ ತೆಗೆದುಕೊಂಡು ಬಾ ಅಂತಾ ಕಿರಿಕಿರಿ ಮಾಡುತ್ತಾ ಅವಾಚ್ಯ ಶಬ್ದಗಳಿಂದ ಬೈಯುತ್ತಾ ತೊಂದರೆ ನೀಡುತ್ತಿದ್ದರು.ಈ ವಿಷಯವನ್ನು ನನ್ನ ತವರು ಮನೆಯಲ್ಲಿ ತನ್ನ ಅಣ್ಣ ತಮ್ಮಂದಿರಿಗೆ ಮತ್ತು ಸಂಭಂದಿಕರಿಗೆ ತಿಳಿಸಿದ್ದು, ಅವರೆಲ್ಲರೂ ಕೂಡಿಕೊಂಡು ನನ್ನ ಗಂಡ, ಅತ್ತೆ ಮತ್ತು ಮೈದುನರನ್ನು ಊರಿಗೆ ಕರೆಯಿಸಿ ಬುದ್ದಿಮಾತು ಹೇಳಿ ನನ್ನ ಗಂಡನ ಮನೆಗೆ ಕೊಟ್ಟು ಕಳುಹಿಸಿರುತ್ತಾರೆ. ದಿನಾಂಕ:29/10/2012 ರಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಮನೆಯಲ್ಲಿದ್ದಾಗ ನನ್ನ ಗಂಡ, ಅತ್ತೆ ಗುಂಡಮ್ಮ ಹಾಗೂ ಮೈದುನರಾದ ಸಂಜೀವ ಮತ್ತು ವಿಜಯ ಇವರೆಲ್ಲರೂ ಕೂಡಿಕೊಂಡು ವಿನಾಃಕಾರಣ ಅವಾಚ್ಯವಾಗಿ ಬೈದು ಅತ್ತೆ ಗುಂಡಮ್ಮ ಇವಳು ಮನೆಯಲ್ಲಿದ್ದ ಸೀಮೇ ಎಣ್ಣೆಯನ್ನು ತಂದು ನನ್ನ ಮೈ ಮೇಲೆ ಹಾಕಿದ್ದು, ನಾನು ಅವರಿಂದ ತಪ್ಪಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮೈದುನರಾದ ಸಂಜೀವ ಮತ್ತು ವಿಜಯ ಇವರೂ ಕೂಡ ಅಲ್ಲಿಗೆ ಬಂದು ಮನೆಯ ಬಾಗಿಲು ಹಾಕಿದ್ದು, ನನ್ನ ಗಂಡ ಸುನೀಲ್ ಇತನು ಒಂದು ಕಡ್ಡಿ ಪೆಟ್ಟಿಗೆಯಿಂದ ಬೆಂಕಿ ಕೊರೆದು ನನ್ನ ಮೈಗೆ ಬೆಂಕಿ ಹಚ್ಚಿ ಕೊಲೆ ಮಾಡಲು ಪ್ರಯತ್ನ ಮಾಡುತ್ತಿದ್ದಾಗ ನಾನು ಚಿರಾಡುತ್ತಾ ಮನೆಯ ಹೊರಗಡೆ ಬಂದಾಗ ಜನರು ಜಮಾವಣೆಗೊಂಡು ಉಪಚಾರ ಕುರಿತು ಹುಮನಾಬಾದಕ್ಕೆ ಕರೆ ತಂದು ನಂತರ ಹೆಚ್ಚಿನ ಉಪಚಾರ ಕುರಿತು ಬೀದರ ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ, ಸದರಿಯವರ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:111/2012 ಕಲಂ 498 (ಎ), 307, 504.506.ಸಂಗಡ 34 ಐ.ಪಿ.ಸಿ ಸಂಗಡ ಕಲಂ 3 ಮತ್ತು 4 ಡಿ.ಪಿ. ಆಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ಆಳಂದ ಪೊಲೀಸ್ ಠಾಣೆ:ಶ್ರೀ, ತಾನಾಜಿ ತಂದೆ ಸಂಬಾಜಿ ಜಾಧವ ಉ||ಲಾರಿ ಡ್ರೈವರ ಸಾ; ಮಂಗಲವೇಡ ಜಿ||ಸೋಲಾಪೂರ ರವರು ನನ್ನ ಲಾರಿ ನಂ ಎಮ್ ಹೆಚ್ 13 ಆರ್ 4363 ನೇದ್ದು ನಾನೆ ಚಲಾಯಿಸುತ್ತಾ ಬಾಡಿಗೆ ಹೊಡೆಯುತ್ತಾ ನನ್ನ ಹೆಂಡತಿ ಮಕ್ಕಳೊಂದಿಗೆ ಜೀವಸುತ್ತೇನೆ ದಿನಾಂಕ:30/10/2012 ರಂದು ಸಾಯಂಕಾಲ 5.00 ಗಂಟೆಗೆ ರಾವೂರ ಗ್ರಾಮದಲ್ಲಿ ಪರ್ಸಿ ಲೋಡ ತುಂಬಿಕೊಂಡು ಬರುವಾಗ ಆಳಂದ ಮಾರ್ಗವಾಗಿ ಮಂಗಲಮೇಡ ಗ್ರಾಮಕ್ಕೆ ಹೋಗುತ್ತಿರುವಾಗ ರಾತ್ರಿ 10-00 ಗಂಟೆ ಸುಮಾರಿಗೆ ಆಳಂದ ಪಟ್ಟಣದ ಸಮೀಪದಲ್ಲಿಯ ಡೋಗಿ ನಾಲಾ ಚಡಾಣದಲ್ಲಿ ನನ್ನ ಲಾರಿ ಆಕಸ್ಮಿಕವಾಗಿ ಕೆಟ್ಟ ನಿಂತಿತು ನಾನು ಲಾರಿಯಿಂದ ಕೆಳಗೆ ಇಳಿದು ನೋಡುತ್ತಿದ್ದಾಗ 6 ಜನರ ಗುಂಪು ನನ್ನ ಬಳಿ ಬಂದವರೇ ನನಗೆ ಹಿಡಿದು ಪಕ್ಕದ ಸೂರ್ಯಪಾನ ಬೆಳೆ ಇರುವ ಹೊಲದಲ್ಲಿ ಒಯ್ದು ನನ್ನ ಮೈಲೆಲಿನ ಅಂಗಿ ಪ್ಯಾಂಟ ಕಳಚಿ ಅಂಗಿ ಜೇಬಿನಲ್ಲಿದ್ದ 2000/- ರೂ ನಗದು ಹಣ ಹಾಗೂ ಒಂದು ಹಳೆಯ ಮೋಬೈಲ್  ಅ||ಕಿ|| 1000 ರೂ ಇದ್ದು ಜಬರ ದಸ್ತಿಯಿಂದ ತಗೆದುಕೊಂಡು ಹೋದರು ಸದರಿಯವರು ಮುಖಕ್ಕೆ ಮತ್ತು ತಲೆಗೆ ಕಪ್ಪು ಬಟ್ಟೆ ಕಟ್ಟಿಕೊಂಡಿದ್ದರು ನಂತರ ನಾನು ನನ್ನ ಲಾರಿಗೆ ನೋಡಲಾಗಿ ಲಾರಿಯ ಡೀಜಲ್ ಪೈಪ ಲಿಕೇಜ ಆಗಿದ್ದು ನೋಡಿ ಸರಿಪಡಿಸಿಕೊಂಡು ಆಳಂದಕ್ಕೆ ಬಂದಿದ್ದೇನೆ. ಆದಕಾರಣ ನನ್ನಿಂದ ಹಣ ಮತ್ತು ಮೋಬೈಲ ಆಲ್ಲದೇ ನನ್ನ ಮೈಮೇಲಿನ ಬಟ್ಟೆಗಳು ತಗೆದುಕೊಂಡು ಕಸಿದುಕೊಂಡು ಹೋದವರ ವಿರುದ್ದ ಕಾನೂನು ಕ್ರಮ ಜರೂಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 211/2012 ಕಲಂ ಐಪಿಸಿ 395 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.