POLICE BHAVAN KALABURAGI

POLICE BHAVAN KALABURAGI

24 June 2016

Kalaburagi District Reported Crimes

ಕಳವು ಪ್ರಕರಣ :
ಫರತಾಬಾದ ಠಾಣೆ : ಶ್ರೀ ಜಗನ್ನಾಥ ತಂದೆ ಬಸವಣಪ್ಪಾ ಕೋಣಿನ ಸಾ: ಖಣದಾಳ ದಿನಾಂಕ 09/01/2011 ರಂದು ಬೆಳ್ಳಿಗ್ಗೆ ಹೊಲಕ್ಕೆ ಹೋಗಿ ಹೊಲದ ಕೆಲಸ ಮುಗಿಸಿಕೊಂಡು  ವಾಪಸ ಮನೆಗೆ ಬಂದು ರಾತ್ರಿ 9 ಗಂಟೆಯ ಸುಮಾರಿಗೆ  ನನ್ನ ಮನೆಯಲ್ಲಿ ಊಟ ಮಾಡಿಕೊಂಡು ನಾನು ನನ್ನ ಹೆಂಡತಿ ಮಕ್ಕಳೊಂದಿಗೆ ಮನೆಯಲ್ಲಿ ಮಲಗಿಕೊಂಡಿರುತ್ತೇನೆ.  ನಾನು ಮಲಗಿಕೊಂಡ ಪಕ್ಕದ  ರೂಮಿನ ಕೀಲಿ ಮುರಿದು ಬಿದ್ದು ಬಾಗಿಲ ಖುಲ್ಲಾ ಆಗಿದ್ದನ್ನು  ಬೆಳ್ಳಿಗ್ಗೆ  7 ಗಂಟೆಯ ಸುಮಾರಿಗೆ ನೋಡಿ ನನ್ನ ಅಣ್ಣನಾದ ವಿಶ್ವನಾಥ  ದಳಪತಿ  ಶಿವಪುತ್ರ ಕೋಣಿನ ಹಣಮಂತ್ರಾಯ  ಕೋಣಿನ ಇವರನ್ನು  ಕರೆದು ನಮ್ಮ ಮನೆಯ ಬಾಗಿಲ ತೆರಿದಿದೆ ಬನ್ನಿರಿ ಅಂತಾ ಗಾಬರಿಗೊಂಡು ಒಳಗೆ ಹೋಗಿ ನೋಡಲಾಗಿ  ಮನೆಯಲ್ಲಿದ್ದ ಎರಡು ಪೆಟ್ಟಿಗೆಗಳು ಕಾಣಲಿಲ್ಲ ನಂತರ ಎಲ್ಲರೂ ಕೂಡಿ ಹುಡುಕಾಡಲಾಗಿ  ಸದರಿ ಪೆಟ್ಟಿಗೆಗಳು ಊರ ಹೊರಗೆ ಗುರಲಿಂಗಪ್ಪಾ ಪಾಟೀಲ ಇವರ ಹೊಲದಲ್ಲಿ  ಬಿಸಾಕಿದ್ದು ಸದರಿ ಪೆಟ್ಟಿಗೆಯಲ್ಲಿದ್ದ  ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಒಟ್ಟು 46,000/- ರೂ ಕಿಮ್ಮತ್ತಿನ ಆಭರಣಗಳನ್ನು ಯಾರೋ ಅಪರಿಚಿತ ಕಳ್ಳರು  ನಮ್ಮ ಮನೆಯ ಬಾಗಿಲದ ಕೀಲಿ ರಾತ್ರಿ ಹೊತ್ತಿನಲ್ಲಿ ಮುರಿದು ದಿನಾಂಕ 09-10/01/11 ರಂದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ .ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಥಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :
ಚೌಕ ಠಾಣೆ : ಶ್ರೀಮತಿ ಕಲಾವತಿ ಗಂಡ ದಿಃ ಶ್ರೀಕಾಂತ ಮಿರಜಕರ ಸಾಃ ದೋಬಿಗಲ್ಲಿ ಶಹಾಬಜಾರ ಕಲಬುರಗಿ ಇವರ ಮಗಳಾದ ಉಮಾ ಇವಳಿಗೆ  ರಾಜು ಚೌರಶಿಯಾ (ಉತ್ತರಪ್ರದೇಶ) ಗೋರಕಪೂರ ಇತನೊಂದಿಗೆ ಸುಮಾರು 3 ವರ್ಷಗಳ ಹಿಂದೆಮದುವೆ ಮಾಡಿಕೊಟ್ಟಿದೇವು, ನನ್ನ ಮಗಳು ಹಾಗು ಅಳಿಯನು ಸೇರಿಕೊಂಡು ಶಹಾಬಜಾರದ ಕಟಗರಪೂರದ ಏರಿಯಾದ ಶುಕ್ಲಾ ಸಾಮಿಲ್ ಹತ್ತೀರ ಶುಕ್ಲಾ ಇವರ ಮನೆಯಲ್ಲಿ ಬಾಡಿಗೆಯಿಂದ ವಾಸವಾಗಿದ್ದರು. ಇವರ ಜೋತೆಯಲ್ಲಿ ರಾಜುವಿನ ಮೋದಲನೇ ಹೆಂಡತಿಯ 2 ಮಕ್ಕಳು ಕೂಡಾ ವಾಸವುರುತ್ತಾರೆ  ನನ್ನ ಮಗಳಾದ ಉಮಾ ಗಂಡ ರಾಜು ಇವಳಿಗೆ ಅವಳ ಗಂಡ ರಾಜು ಇತನು ಯಾವಾಗಲೂ ಸುಮಾರು ಸಲ ಅವಳ ಮೇಲೆ ಸಂಶಯ ಪಟ್ಟು ಸಿಕ್ಕಾಪಟ್ಟೆಯಾಗಿ ಹೊಡೆಬಡೆ ಮಾಡುತ್ತೀದ್ದನು, ಆದರೂ ಸಹ ನನ್ನ ಮಗಳು ಅವನೊಂದಿಗೆ ಸಂಬಾಳಿಸಿಕೊಂಡು ಇರುತ್ತಿದ್ದಳು, ಹೀಗಿದ್ದು ನಿನ್ನೆ ದಿನಾಂಕಃ 22.06.2016 ರಂದು ಸಾಯಂಕಾಲ 07.00 ಪಿ.ಎಮ್ ಸುಮಾರಿಗೆ ನನ್ನ ಮಗಳಾದ ಉಮಾ ಇವಳಿಗೆ ಅವಳ ಗಂಡ ರಾಜು ಚೌರಶಿಯಾ ಇವನು ಇವಳಿಗೆ ಸಂಶಯಪಟ್ಟು ಮನೆಯಲ್ಲೀಯೆ ಮತ್ತೆ ಹೊಡೆಬಡೆ ಮಾಡಿ ಕುತ್ತೀಗೆಗೆ ವೈರ್ ಹಾಕಿ ಎಳೆದು ಮತ್ತು ರಾಡಿನಿಂದಲೂ ಸಹ ಹೊಡೆದು ಕೊಲೆ ಮಾಡಿ ನಂತರ ಅವನ ಸಮೀಪದ ಬಂದುಗಳ ಕಾರ್ ನಂ ಕೆಎ 03 5005 ನೇದ್ದರಲ್ಲಿ ಮನೆಯ ಬಾಜು ಮನೆಯಲ್ಲಿ ವಾಸವಿರುವ ಒಬ್ಬ ಕಾರ್ ಚಾಲಕನಿಗೆ ಹೇಳಿ ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ತೆಗೆದುಕೊಂಡು ಹೋಗಿರುವಾಗ ಅವಳ ಜೀವ ಆಗಲೇ ಹೋಗಿರುವುದು ಎಂದು ವೈಧ್ಯರು ತಿಳಿಸಿದಾಗ ಇದನ್ನು ಖಚಿತಪಡಿಸಿಕೊಂಡು ವೈಧ್ಯರು  ತಿಳಿದು ಅವನು ಕಾರ್ ಚಾಲಕನಿಗೆ ಅಲ್ಲೀಯೆ ಕಾರನ್ನು ಪಾರ್ಕಿಂಗ್ ಮಾಡು, ನಾನು ಹಣ ತೆಗೆದುಕೊಂಡು ಬರುತ್ತೇನೆ ಎಂದು ಅವನಿಗೆ ಹೇಳಿ ತನ್ನ ಮನೆಗೆ ಬಂದು ತನ್ನ ಮೋದಲನೆ ಹೆಂಡತಿಯ ಇಬ್ಬರೂ ಮಕ್ಕಳನ್ನು ಕರೆದುಕೊಂಡು ನಾಪತ್ತೆಯಾಗಿರುತ್ತಾನೆ  ಕಾರು ಮನೆಯ ಮುಂದೆಯೆ ಇರುವುದು ಅದರಲ್ಲಿ ನನ್ನ ಮಗಳ ಡೆಡ್ ಬಾಡಿ ಸಹ ಇರುವುದು, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಯಡ್ರಾಮಿ ಠಾಣೆ : ಶ್ರೀಮತಿ ಪಾರ್ವತಿ ಗಂಡ ಬಸವಂತಪ್ಪ ಅಂಕಲಗಿ ಸಾ|| ಕಾಚಾಪೂರ ತಾ|| ಜೇವರಗಿ ಇವರು  ದಿನಾಂಕ 23-06-2016 ರಂದು ಹಂಗರಗಾ(ಬಿ) ಗ್ರಾಮದಲ್ಲಿ ನಮ್ಮ ಸಂಬಂದಿಕರ ಮನೆಯಲ್ಲಿ ಕಾರ್ಯಕ್ರಮ ಇದ್ದಿದ್ದರಿಂದ ನಾನು ಮತ್ತು ನನ್ನ ಕೊನೆ ಮಗಳಾದ ದೊಡ್ಡಮ್ಮ ಮತ್ತು ನಮ್ಮ ಅಣ್ಣತಮ್ಮಕಿಯ ಅಕ್ಕ ತಾಯಮ್ಮ ಗಂಡ ಮಹಾಂತಪ್ಪ ಅಂಕಲಗಿ ರವರು ಕೂಡಿ ನ್ಮಮೂರಿನ ಮಲ್ಕಪ್ಪ ತಂದೆ ನಿಂಗಪ್ಪ ತಳವಾರ ರವರ ಟಂಟಂ ನಂ ಕೆ.-32/ಸಿ-3654 ನೇದ್ದರಲ್ಲಿ ನಾವೆಲ್ಲರು ಕುಳಿತುಕೊಂಡು ಸಾಯಂಕಾಲ ಹಂಗರಗಾ(ಬಿ) ಗ್ರಾಮಕ್ಕೆ ಹೋಗಿ ಅಲ್ಲಿ ಕಾರ್ಯಕ್ರಮವನ್ನು ಮುಗಿಸಿಕೊಂಡು ಮರಳಿ ಅದೇ ಟಂಟಂ ನಲ್ಲಿ ನಾವೆಲ್ಲರು ಬರುತ್ತಿದ್ದಾಗ ಅಂದಾಜ 8;45 ಪಿ.ಎಂ ಸುಮಾರಿಗೆ ಸೈದಾಪೂರ ಕ್ರಾಸ್ ಹತ್ತಿರ ಬರುತ್ತಿದ್ದಂತೆ ಎದುರಿನಿಂದ ಟ್ರ್ಯಾಕ್ಟರ್ ಚಾಲಕನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಒಮ್ಮೇಲೆ ಕಟ್ ಹೊಡೆದಿದ್ದರಿಂದ ಟ್ರ್ಯಾಕ್ಟರ್ ಹಿಂದಿನ ಟ್ರಾಯಲಿಯ್ನನು ನಮ್ಮ ಟಂಟಂ ಬಲಗಡೆ ಕುಳತಿದ್ದ, ದೊಡ್ಡಮ್ಮ ಮತ್ತು ತಾಯಮ್ಮಳಿಗೆ ಬಡಿದ್ದಿದ್ದರಿಂದ ಅವರಿಬ್ಬರು ಟಂಟಂ ನಿಂದ ಕೆಳಗೆ ಬಿದ್ದರು, ನಂತರ ನಾವು ಟಂಟಂ ನಿಲ್ಲಿಸಿ ನೋಡಲಾಗಿ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರನ್ನು ನಿಲ್ಲಿಸದಂತೆ ಮಾಡಿ ಓಡಿಸಿಕೊಂಡು ಹೋದನು. ಸದರಿ ಟ್ರ್ಯಾಕ್ಟರ ಸ್ವರಾಜ ಕಂಪನಿದಿದ್ದು, ನೀಲಿ ಬಣ್ಣದ ಟ್ರಾಯಲಿ ಇರುತ್ತದೆ. ನಂತರ ನಾನು ನೋಡಲಾಗಿ ನನ್ನ ಮಗಳಾದ ದೊಡ್ಡಮ್ಮ ಇವಳಿಗೆ ತಲೆಯ ಮೇಲ್ಭಾಗದಲ್ಲಿ ಮತ್ತು ಬಲಗಾಲಿನ ತೊಡೆಗೆ, ಎರಡು ಚೆಪ್ಪೆಗಳಿಗೆ ಹಾಗು ಹೊಟ್ಟೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೇ ಮೃತ ಪಟ್ಟಿರುತ್ತಾಳೆ, ತಾಯಮ್ಮ ಇವಳಿಗೆ ನೋಡಲಾಗಿ ಅವಳ ಬಲಗಾಲಿಗೆ ಮತ್ತು ಬಲಗೈಗೆ ಭಾರಿ ರಕ್ತಗಾಯವಾಗಿ ರಕ್ತ ಸೋರುತ್ತಿತ್ತು. ನಂತರ ನನ್ನ ಮಗಳಿಗೆ ಮತ್ತು ತಾಯಮ್ಮಳನ್ನು ಅದೇ ಟಂಟಂನಲ್ಲಿ ಹಾಕಿಕೊಂಡು ಯಡ್ರಾಮಿ ಸರಕಾರಿ ಆಸ್ಪತ್ರೆಗೆ ತಂದಿದ್ದು, ನನ್ನ ಮಗಳ ಶವವನ್ನು ಯಡ್ರಾಮಿ ಶವಗಾರ ಕೋಣೆಯಲ್ಲಿಟ್ಟು, ನಂತರ ಅಂಬರೀಶ ತಂದೆ ಲಕ್ಷ್ಮಣ ಅಂಕಲಗಿ ರವರು ತಾಯಮ್ಮಳಿಗೆ ಹೆಚ್ಚಿನ ಉಪಚಾರಕುರಿತು 108 ಅಂಬೂಲೆನ್ಸನಲ್ಲಿ ಕಲಬುರಗಿಗೆ ತೆಗೆದುಕೊಂಡು ಹೋಗಿರುತ್ತಾರೆ. ನನಗೆ ಮತ್ತು ಮಲ್ಕಪ್ಪನಿಗೆ ಯಾವುದೆ ಗಾಯಗಳು ಆಗಿರುವುದಿಲ್ಲ. ನಾನು ಸದರಿ ಟ್ರ್ಯಾಕ್ಟರ್ ಚಾಲಕನಿಗೆ ನೋಡಿದಲ್ಲಿ ಗೊರುತಿಸುತ್ತೇನೆಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 23-06-2016 ರಂದು ಮದ್ಯಾಹ್ನ ಎಸ.ವಿ.ಪಿ. ಸರ್ಕಲ ಹತ್ತೀರ ಇರುವ ಮೇಡಿಪ್ಲಸ ಔಷಧ ಅಂಗಡಿಗೆ ಹೋಗುವ ಕುರಿತು ನನ್ನ ಗಂಡನಾದ ಅಬ್ದುಲ ಜಬ್ಬಾರ ಇವರು ಚಲಾಯಿಸುತ್ತಿರುವ ಮೋಟಾರ ಸೈಕಲ ನಂ ಎಮ್,ಹೆಚ್,-43ಟಿ-8396 ನೇದ್ದರ ಹಿಂದುಗಡೆ ನನಗೆ ಕೂಡಿಸಿಕೊಂಡು ಮನೆಯಿಂದ ಮೋಟಾರ ಸೈಕಲನ್ನು ಟೌನ ಹಾಲ ಕ್ರಾಸ ಮುಖಾಂತರವಾಗಿ ರೋಡ ಎಡಗಡೆಯಿಂದ ಎಸ.,ವಿ.ಪಿ, ಸರ್ಕಲ ಕಡೆಗೆ ಚಲಾಯಿಸಿಕೊಂಡು ಹೋಗುವಾಗ ದಾರಿ ಮದ್ಯ ಪರಿವಾರ ಹೊಟೇಲ ಎದುರು ರೋಡ ಮೇಲೆ ಟಂ ಟಂ ನಂ ಕೆಎ-56-2098 ನೇದ್ದರ ಚಾಲಕನಾದ ಖಾಜಾ ಇತನು ತನ್ನ ಟಂ ಟಂ ವಾಹನವನ್ನು ಜಗತ  ಸರ್ಕಲ ಕಡೆಯಿಂದ ಎಸ.ವಿ.ಪಿ. ಸರ್ಕಲ ಕಡೆಗೆ ಹೋಗುವ ಕುರಿತು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಹಿಂದಿನಿಂದ ಡಿಕ್ಕಿಪಡಿಸಿ ಅಪಘಾತ ಮಾಡಿ ನನ್ನ ಎಡ ಹುಬ್ಬಿನ ಮೇಲೆ ತರಚಿದಗಾಯ ಮತ್ತು ಒಳಪೆಟ್ಟು ಎಡ ಕಣ್ಣಿನ ರೆಪ್ಪೆಗೆ ಪೆಟ್ಟು ಬಿದ್ದು ಬಾವು ಬಂದಿದ್ದು ಎಡ ಕಣ್ಣಿನ ಎಡಬಾಗದ ಹತ್ತಿರ ತರಚಿದಗಾಯ ಗದ್ದಕ್ಕೆ ಹರಿದ ರಕ್ತಗಾಯ ತೆಲೆಯ ಹಿಂಭಾಗಕ್ಕೆ ಗುಪ್ತಗಾಯ ಮತ್ತು ಎಡ ಮುಂಗೈಗೆ ಭಾರಿ ಗುಪ್ತಗಾಯವಾಗಿ ಮೈಯಲ್ಲಾ  ಒಳಪೆಟ್ಟಾಗೊಳಿಸಿದ್ದು ಆತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟಕಾ ಜೂಜಾಟದಲ್ಲಿ ತೊಡಗಿದವರ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 23/06/2016 ರಂದು ಮಾನ್ಯ ಎಸ್.ಎಸ್ ಹುಲ್ಲೂರ ಡಿ.ಎಸ್.ಪಿ ಸಾಹೇಬ ಡಿ.ಸಿ.ಆರ್.ಬಿ ಘಟಕ ಕಲಬುರಗಿ ರವರ ಮಾರ್ಗದರ್ಶನದಲ್ಲಿ ಮಾಡಿಯಾಳ ಗ್ರಾಮದ ಬಸ ನಿಲ್ದಾಣದ ಹತ್ತಿರ ಡಾಂಬರ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಯುತ್ತಿದೆ ಅಂತ ಮಾಹಿತಿ ಬಂದ ಮೇರೆಗೆ ನಾನು ಮತ್ತು ಸಿಬ್ಬಂಧಿಯವರಾದ 01] ಚಂದ್ರಕಾಂತ ಸಿಹೆಚ್.ಸಿ 287, 02] ಆನಂದ ಪ್ರಸಾದ ಸಿಹೆಚ್.ಸಿ 198 ,ರವರೊಂದಿಗೆ ನಿಂಬರ್ಗಾ ಪೊಲೀಸ ಠಾಣೆಗೆ ಬಂದು ಪಂಚರೊಂದಿಗೆ ಮಾಡಿಯಾಳ ಗ್ರಾಮಕ್ಕೆ ಹೋಗಿ ಎಲ್ಲರೂ ಸೇರಿ ಬಸ ನಿಲ್ದಾಣದ ಮರೆಯಲ್ಲಿ ನಿಂತು ನೋಡಲಾಗಿ ಬಸ  ನಿಲ್ದಾಣದ ಮುಂದೆ ಡಾಂಬರ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನಿಗೆ ವಿಚಾರಿಸಲು ಆತನು ತನ್ನ ಹೆಸರು ಪ್ರಭಾಕರ ತಂದೆ ಬಾಬು ಬೆಣ್ಣೆಶಿರೂರ ಸಾ|| ಮಾಡಿಯಾಳ ಅಂತ ತಿಳಿಸಿದ್ದು ಇತನನ್ನು ಚಕ್ ಮಾಡಲಾಗಿ ಇತನ ಹತ್ತಿರ ನಗದು ಹಣ 6620/- ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ ನೇದ್ದವುಗಳನ್ನು ಪಂಚರ ಸಮಕ್ಷಮ ಜಪ್ತಿಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ನಿಂಬರ್ಗಾ ಠಾಣೆ : ಧುತ್ತರಗಾಂವ ಗ್ರಾಮದಲ್ಲಿ ಭೀಮಶಾ ರಾಜೋಳ ಇವರ ಹೊಟೇಲ ಮುಂದುಗಡೆ ಸಾರ್ವಜನಿಕ ರೋಡಿನ ಮೇಲೆ ಮಟಕಾ ಜೂಜಾಟ ನಡೆಯುತ್ತಿದೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀ ಮಲ್ಲಿಕಾರ್ಜುನ ಎ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಧತ್ತರಗಾಂವ ಗ್ರಾಮದ ಭೀಮಶಾ ರಾಜೋಳ ಇವರ ಹೊಟೇಲ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಹೊಟೇಲ ಮುಂದುಗಡೆ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಅವನಿಗೆ ವಿಚಾರಿಸಲು ಆತನು ತನ್ನ ಹೆಸರು ಶಿವಲಿಂಗಪ್ಪಾ ತಂದೆ ಶರಣಪ್ಪ ಮಲಶೇಟ್ಟಿ ಸಾ|| ಧುತ್ತರಗಾಂವ ಅಂತ ತಿಳಿಸಿದ್ದು ಇತನನ್ನು ಚಕ್ ಮಾಡಲಾಗಿ ಇತನ ಹತ್ತಿರ ನಗದು ಹಣ 480/- ರೂಪಾಯಿ ಮತ್ತು ಒಂದು ಮಟಕಾ ನಂಬರ ಬರೆದ ಚೀಟಿ, ಒಂದು ಬಾಲ ಪೆನ ಜಪ್ತಿಪಡಿಸಿಕೊಂಡು ಸದರಿಯವನೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಇಸ್ಪೀಟ ಜೂಜಾಟದಲ್ಲಿ ನಿರತವರ ಬಂಧನ :
ದೇವಲಗಾಣಗಾಪೂರ ಠಾಣೆ : ದಿನಾಂಕ 23-06-2016 ರಂದು ದೇವಲಗಾಣಗಾಪೂರದ ಚಕ್ಲೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ ಜೂಜಾಟ ಆಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಶ್ರೀ ಶಕೀಲ ಐ ಅಂಗಡಿ ಪಿಎಸ್ಐ ದೇವಲಗಾಣಗಾಪುರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಮರೆಯಲ್ಲಿ ನಿಂತು ಜೂಜಾಟದ ಬಗ್ಗೆ ಖಚಿತಪಡಿಸಿಕೊಂಡು ದಾಳಿ ಂಆಡಿ 5 ಜನರನ್ನು ಹಿಡಿದು ಅವರ ಹೆಸರು ವಿಳಾಸ ವಿಚಾರಿಸಲು  1] ಬಸಲಿಂಗಪ್ಪ ತಂದೆ ಶರಣು 2] ಹುಸೇನಿ ತಂದೆ ಮಹಿಬೂಬ ತಾಂಬೋಳಿ 3) ಭೀಮರಾಯ ತಂದೆ ಶ್ರೀಮಂತ ನರೋಟಿ 4) ಲಕ್ಷ್ಮೀಕಾಂತ ತಂದೆ ಲಕ್ಕಪ್ಪ ಪಟ್ಟೇದಾರ  5) ದತ್ತಪ್ಪ ತಂದೆ ಚಂದ್ರಕಾಂತ ಡಾಂಗೆ   ಸಾ|| ಎಲ್ಲರೂ ದೇವಲಗಾಣಗಾಫೂರ ಬಂತಾ ತಿಳಿಸಿದ್ದು ಸದರಿಯವರಿಂದ ಜೂಜಾಟಕ್ಕೆ ಬಳಸಿದ ನಗದು ಹಣ 2116 ಹಾಗು 52 ಇಸ್ಪೀಟ ಎಲೆಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವರೊಂದಿಗೆ ದೇವಲಗಾಣಗಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.