POLICE BHAVAN KALABURAGI

POLICE BHAVAN KALABURAGI

11 June 2011

ಕಳ್ಳತನ ಪ್ರಕರಣ :

ಅಶೋಕ ನಗರ ಠಾಣೆ : ಶ್ರೀ ರಾಜು ತಂದೆ ಕೃಷ್ಣಾಜಿ ಪತಂಗೇ ಸಾ: ಪ್ಲಾಟ ನಂ. 58 ಸಿ.ಐ.ಬಿ ಕಾಲೋನಿ ಗುಲಬರ್ಗಾ ರವರು ನನ್ನ ಮೋಟಾರ ಸೈಕಲ್ ನಂ. ಕೆ.ಎ-32 ಎಲ್-5006 ಬಜಾಜ ಪ್ಲಸರ್ 150 ಸಿ.ಸಿ. ಕಂದು ಬಣ್ಣದ ವಾಹನ ಅ.ಕಿ. 25000/- ರೂ ಬೇಲೆವುಳ್ಳದ್ದು ಜಿ.ಡಿ.ಎ ಲೇಔಟದ ಅಲಾಟೇ ಕಾಂಪ್ಲೇಕ್ಸದ ಮುಂದುಗಡೆ ನಿಲ್ಲಿಸಿದ ಮೋಟರ ಸೈಕಲ್ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಗ್ರಾಮೀಣ ಠಾಣೆ : ಶ್ರೀ ಮಲ್ಲಣ್ಣ ತಂದೆ ಭೀಮಶ್ಯಾ ಮೇಳಕುಂದಿ ಸಾ:ಹೀರಾಪೂರ ತಾ: ಜಿ: ಗುಲಬರ್ಗಾ ರವರು ನಾನು ಮನೆಯ ಬಾಗಿಲು ಖುಲ್ಲಾ ಇಟ್ಟು ಮಲಗಿಕೊಂಡಿದ್ದು ಮನೆಯಲ್ಲಿಟ್ಟ 4 ಮೋಬೈಲ ಹಾಗೂ ಸೋನಾಟಾ ಕೈಗಡಿಯಾರ ಹಾಗೂ ನನ್ನ ತಮ್ಮ ಸಂಗಣ್ಣ ಇತನ ಜೇಬಿನಲ್ಲಿದ್ದ 16000/- ರೂಪಾಯಿ ನಗದು ಹಣವನ್ನು ಯಾರೂ ಕಳ್ಳರು ಕಳವು ಮಾಡಿ ಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.