POLICE BHAVAN KALABURAGI

POLICE BHAVAN KALABURAGI

27 April 2017

Kalaburagi District Reported Crimes

ಹಲ್ಲೆ ಪ್ರಕರಣಗಳು :
ಗ್ರಾಮೀಣ ಠಾಣೆ : ಶ್ರೀಮತಿ ಮಧುಮತಿ ಗಂಡ ಬೈರವೇಶ ಮಠಪತಿ ಸಾ : ತಾಜಸುಲ್ತಾನಪೂರ ರವರು ದಿನಾಂಕ 25/04/17 ರಂದು ಮಧ್ಯಾಹ್ನ ಸಮಯದಲ್ಲಿ ಬಂಬೂ ಬಜಾರದಲ್ಲಿ ಶಿವಶರಣಪ್ಪ ಇತನು ತನಗೆ ನೋಡಿ ತನ್ನ ಮೇಲೆ ರೇಪ ಕೇಸ ಮಾಡಿಸುತ್ತೀ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ತಕರಾರು ಅರ್ಜಿ ವಿಷಯ ವಿಚಾರಿಸಿಕೊಂಡು ತಾಜ ಸುಲ್ತಾನಪೂರಕ್ಕೆ ಗ್ರಾಮಕ್ಕೆ ಮಧ್ಯಾಹ್ನ 03-30 ಗಂಟೆ ಸುಮಾರಿಗೆ ಶಿವಶರಣಪ್ಪ ತಂದೆ ಗುರುಲಿಂಗಪ್ಪ ಬೆಡಜುರ್ಗಿ ಇತನ ಮನೆಯ ಮುಂದಿನಿಂದ ಹಾಯ್ದು ಹೋಗುತ್ತಿದ್ದನ್ನು  1. ಶಿವಶರಣಪ್ಪ ತಂದೆ ಗುರುಲಿಂಗಪ್ಪ ಬೆಡಜುರ್ಗಿ, 2. ಅಣವೀರಪ್ಪ @ ಅಣ್ಣೆಪ್ಪ ತಂದೆ ಗುರುಲಿಂಗಪ್ಪ ಬೆಡಜುರ್ಗಿ 3. ನಾಗರಾಜ ತಂದೆ ಗುರುಲಿಂಗಪ್ಪ ಬೆಡಜುರ್ಗಿ 4. ಶ್ರವಣಕುಮಾರ ತಂದೆ ಗುರುಲಿಂಗಪ್ಪ ಬೆಡಜುರ್ಗಿ 5. ರೇವಣಸಿದ್ಧಪ್ಪ ತಂದೆ ಗುರುಲಿಂಗಪ್ಪ ಬೆಡಜುರ್ಗಿ 6.  ಶ್ರೀಶೈಲ ತಂದೆ ಗುರುಲಿಂಗಪ್ಪ ಬೆಡಜುರ್ಗಿ, 7. ಶಿವಮ್ಮಾ ಗಂಡ ಗುರುಲಿಂಗಪ್ಪ ಬೆಡಜುರ್ಗಿ, 8. ಲಕ್ಷ್ಮೀ ಗಂಡ ಶ್ರವಣಕುಮಾರ ಬೆಡಜುರ್ಗಿ,  9. ನಾಗಮ್ಮಾ ತಂದೆ ಗುರುಲಿಂಗಪ್ಪ ಬೆಡಜುರ್ಗಿ ಸಾ: ಎಲ್ಲರೂ ತಾಜ ಸುಲ್ತಾನಪೂರ ಗ್ರಾಮ ಕುಡಿಕೊಂಡು ಫಿರ್ಯಾದಿದಾರಳಿಗೆ ನೋಡಿ ಈ ರಂಡಿ ರೇಪ ಮಾಡಿಸಿ ಮತ್ತೆ ನಿನ್ನೆ ನಮ್ಮ ಮೇಲೆ ಚೌಕ ಪೊಲೀಸ ಠಾಣೆಯಲ್ಲಿ ಸುಳ್ಳು ಕಂಪ್ಲೇಟ ಕೊಟ್ಟಿರುತ್ತಾಳೆ ಇವತ್ತು ಇವಳಿಗೆ ಬಿಡಬೇಡರಿ ಖಲಾಷ ಮಾಡಿರಿ ಅಂತಾ ಎಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಡಿಗೆಯಿಂದ, ಬಾರಿಗೆಯಿಂದ ಕೈಯಿಂದ ಫಿರ್ಯಾದಿದಾರಳಿಗೆ ಮತ್ತು ಜಗಳಾ ಬಿಡಿಸಲು ಬಂದ ಅವಳ ತಾಯಿ ಶಂಕ್ರೆಮ್ಮಾ ತಲೆಯ ಮೇಲೆ ಮತ್ತು ಮೈಮೇಲೆ ಹೊಡೆ ಬಡಿ ಮಾಡಿ ಜೀವ ಭಯ ಹಾಕಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮೀಣ ಠಾಣೆ : ಶ್ರೀ ನಾಗರಾಜ ತಂದೆ ಗುರಲಿಂಗಪ್ಪ ಬೆಡಜುರಗಿ ಸಾ : ತಾಜಸುಲ್ತಾನಪೂರ ರವರು ದಿನಾಂಕ:- 26/04/2017 ರಂದು ಮದ್ಯಾಹ್ನ ಎತ್ತುಗಳಿಗೆ ನೀರು ಕುಡಿಸುತ್ತಿದ್ದಾಗ ಅವನ ತಮ್ಮ ಶ್ರವಣಕುಮಾರನ ಹೆಂಡತಿ ಲಕ್ಷ್ಮಿ ಇವಳು ಮನೆಯ ಎದುರು ಕುಳಿತುಕೊಂಡಿದ್ದಳು ಆಗ ನಮ್ಮ ಗ್ರಾಮದ 1) ಮಲ್ಲಯ್ಯಾ ತಂದೆ ಸೋಮಯ್ಯಾ ಮಠಪತಿ, 2) ಮದುಮತಿ ಗಂಡ ಬೈರವೇಶ ಮಠಪತಿ 3) ತಾಯಿ ಶಂಕರೆಮ್ಮಾ ಗಂಡ ಸೋಮಯ್ಯಾ ಮಠಪತಿ 4) ಮಲ್ಲಯ್ಯಾನ ಅಕ್ಕನ ಮಗಳು ಅರ್ಚನಾ ಮತ್ತು 5) ಆಕೆಯ ಗೆಳತಿ ನಾಗಮ್ಮಾ ಎಲ್ಲರೂ ಕೂಡಿಕೊಂಡು ನಮ್ಮ ಮನೆಯ ಎದುರು ಬಂದ್ದಿದ್ದು ಮಲ್ಲಯ್ಯಾ ಇತನು ಕೈಯಲ್ಲಿ ತಲವಾರ ಹಿಡಿದುಕೊಂಡು ಬಂದಿದ್ದನು ಆಗ ಮದುಮತಿ ಇವಳು ಲಕ್ಷ್ಮಿ ಇವಳಿಗೆ ಮದುಮತಿ ಇವಳು ಏ ರಂಡಿ ನಿಮ್ಮ ಮೈದುನ ಎಲ್ಲಿದ್ದಾನೆ ಹೇಳ ನಾವು ಸುಳ್ಳು ಅರ್ಜಿ ಕೊಟ್ಟಿರುತ್ತೇವೆ ಅಂತಾ ಹೇಳುತ್ತಿರಿ ಇವತ್ತು ನಿಮಗೇ ಗತಿ ಕಾಣಿಸುತ್ತೇವೆ ಅಂತಾ ಬೈಯ್ಯುತ್ತಾ ಎಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಂದು ಮಲ್ಲಯ್ಯ ಕೈಯಲ್ಲಿ ತಲವಾರ ಮತ್ತು ಬಡಿಗೆ ಹಿಡಿದುಕೊಂಡು ಬಂದು ಫಿರ್ಯಾದಿಗೆ ಮತ್ತು ಅವನ ಮನೆಯವರಿಗೆ ಕೊಲೆ ಮಾಡುವ ಉದ್ದೇಶದಿಂದ ಶ್ರವಣಕುಮಾರ ಇತನ ಎಡ ತಲೆಯ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿದನು ಅಲ್ಲದೇ ಜಗಳಾ ಬಿಡಿಸಲು ಬಂದ ಫಿರ್ಯಾದಿದಾರನಿಗೆ ಬಡಿಗೆಯಿಂದ ತಲೆ ಮೇಲೆ ಹೊಡೆದು ರಕ್ತಗಾಯಪಡಿಸಿ ಮಾರಣಾಂತಿಕ ಹಲ್ಲೆ ಮಾಡಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸಂಚಾರಿ ಠಾಣೆ : ದಿನಾಂಕ 24/04/2017 ರಂದು ಸಾಯಂಕಾಲ ಗಂಜ ಏರಿಯಾದ  ದರ್ಬಾರ ಹೊಟೇಲ್ ಕ್ರಾಸದಿಂದ ಸಂಜೀವ ನಗರ ರಸ್ತೆಯಲ್ಲಿ ಬರುವ ಪ್ರೇಮಜಿ ದಾಲಮಿಲ್ ಹತ್ತಿರ ಮಲ್ಲಿಕಾರ್ಜುನ ಈತನು ರಸ್ತೆ ಎಡಬದಿಯಿಂದ  ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಟಂ ಟಂ ವಾಹನ ನಂಬರ್ ಕೆಎ 32  ಎ-1416 ನೇದ್ದರ ಚಾಲಕನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮಲ್ಲಿಕಾರ್ಜುನ ಈತನಿಗೆ ಡಿಕ್ಕಿ ಪಡಿಸಿ ತಲೆಗೆ ಭಾರಿ ರಕ್ತ ಗಾಯಗೊಳಿಸಿದ್ದರಿಂದ ಮಲ್ಲಿಕಾರ್ಜುನ ಈತನಿಗೆ ಉಪಚಾರ ಕುರಿತು ಎ ಎಸ್ ಎಂ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಸದರಿಯವನಿಗೆ  ಅಘಾತದಲ್ಲಿ ಆದ ಗಾಯವನ್ನು ಕಲಬುರಗಿ ಎ ಎಸ್ ಎಂ ಆಸ್ಪತ್ರೆಯಲ್ಲಿ ವಾಸಿಯಾಗದೆ ಇದ್ದ  ಕಾರಣ ವೈಧ್ಯರ ಸಲಹೆ ಮೇರೆಗೆ ಗಾಯಾಳು  ಮಲ್ಲಿಕಾರ್ಜುನ ಈತನ ಅಣ್ಣನಾದ ಶೇಖಪ್ಪ ಈತನು ತನ್ನ ತಮ್ಮನಿಗೆ  ಹೆಚ್ಚಿನ ಉಪಚಾರ ಕುರಿತು ದಿನಾಂಕ  25/04/2017 ರಂದು ಕಲಬುರಗಿ ಬಸವೇಶ್ವರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಉಪಚಾರ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ಮಲ್ಲಿಕಾರ್ಜುನ ಈತನಿಗೆ ಅಪಘಾತದಲ್ಲಿ ಆದ ಗಾಯವನ್ನು ವಾಸಿಯಾಗದೆ   ದಿನಾಂಕ 26/04/2017  ರಂದು ಮುಂಜಾನೆ ಮೃತಪಟ್ಟಿದ್ದು ಇರುತ್ತದೆ. ಅಂತಾ ಶ್ರೀ ಶೇಖಪ್ಪ ತಂದೆ ಸೋಮಣ್ಣಾ ಗಡೇಸೂರ ಸಾ : ಸಂಜೀವ ನಗರ ಕಲಬುರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.