POLICE BHAVAN KALABURAGI

POLICE BHAVAN KALABURAGI

27 January 2017

Kalaburagi District Reported Crimes

ವರದಕ್ಷಣೆ ಕಿರುಕಳ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀಮತಿ  ಮೋನಿಕಾ ಗಂಡ ದತ್ತಾತ್ರೇಯ ಮುನಗಾ ಪಾಟೀಲ ಸಾ:ಶಹಾಬಾದ. ರವರು ತಾನು & ತನ್ನ ಗಂಡ ದತ್ತಾತ್ರೇಯ ಇಬ್ಬರೂ ಒಬ್ಬರಿಗೋಬ್ಬರು ಪ್ರಿತಿಸಿ ದಿನಾಂಕ 14/11/2014 ರಂದು ಮದುವೆಯಾಗಿದ್ದು, ನಂತರ 6-7 ತಿಂಗಳವರೆಗೆ ಪಿರ್ಯಾಧಿ ಗಂಡ, ಅತ್ತೆ, ಬಾವ, ನೆಗಣಿ ಇವರೆಲ್ಲರೂ ಚನ್ನಾಗಿ ನೋಡಿಕೊಂಡು ನಂತರ ಎಲ್ಲರೂ ಕೂಡಿಕೊಂಡು ನನಗೆ ಮದುವೆಯಲ್ಲಿ ಬಂಗಾರ & ವರದಕ್ಷಿಣೆ ನೀಡಿರುವುದಿಲ್ಲಾ ಪುಕ್ಕಟಿಯಾಗಿ ಖರ್ಚು ವೆಚ್ಚ ಎಲ್ಲದೆ ಮದುವೆಯಾಗಿದಿ. ತವರು ಮನೆಯಿಂದ ಹಣ & ಬಂಗಾರ ತೆಗೆದುಕೊಂಡು ಬಾ ಅಂತಾ ಕಿರುಕುಳ ಕೊಟ್ಟಿದ್ದರಿಂದ ನಾನು ನನ್ನ ಗಂಡನಿಗೆ ಒಂದು ಲಕ್ಷ ರೂ ತಂದು ಕೊಟ್ಟಿದ್ದರೂ ಸಹ ಇನ್ನೂ ಹಣ ಬಂಗಾರ ವರದಕ್ಷಿಣೆ ತೆಗೆದುಕೊಂಡು ಬರಬೇಕು ಎಂದು ಮಾನಸಿಕ & ದೈಹಿಕ ಕಿರುಕುಳ ಕೊಡುತ್ತಿದ್ದರು ನಾನು ಸಹಿಸಿಕೊಂಡು ಬಂದಿರುತ್ತೇನೆ.  ಒಂದು ವೇಳೆ ನೀನು ಹಣ ಬಂಗಾರ ತರದಿದ್ದರೆ ನಿನಗೆ ಖಲಾಸ ಮಾಡುತ್ತೇವೆ. ಅಂತಾ ಜೀವದ ಭಯ ಹಾಕಿ ಅವಾಚ್ಯವಾಗಿ ಬೈದಿರುತ್ತಾರೆ.  ನಾನು ದಿನಾಂಕ 17/1/16 ರಂದು ಕಲಬುರಗಿಯಿಂದ ಶಹಾಬಾದಕ್ಕೆ ಬಂದು ಮನೆಗೆ ಹೋಗುವ ಸಂದರ್ಭದಲ್ಲಿ ನನ್ನ ಗಂಡ ಕೈಯಿಂದ ಹೊಡೆಬಡೆ ಮಾಡಿರುತ್ತಾನೆ.  ಕಾರಣ ನನಗೆ ವರದಕ್ಷಿಣೆ ತರುವಂತೆ ಮಾನಿಕ & ದೈಹಿಕ ಕಿರುಕುಳ ಕೊಟ್ಟು ಅವಾಚ್ಯವಾಗಿ ಬೈದು ಜೀವದ ಭಯ ಹಾಕಿ ಹೊಡೆ ಬಡೆ ಮಾಡಿರುತ್ತಾನೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಶಿವಪುತ್ರ ತಂದೆ ಸಾಯಿಬಣ್ಣ ಸಾ: ದೇವನ ತೆಗನೂರ ಇವರು ಅದೇ ಗ್ರಾಮದ ಭೀಮರಾಯ ತಂದೆ ನಾಗಪ್ಪ ಇತನ ಮಗನಾದ ರಾಕೇಶ ಇತನಿಗೆ ವೈಯಕ್ತಿಕ ಸಾಲದ ಸಲುವಾಗಿ ಒಂದು ತೊಲೆ ಬಂಗಾರ ಕೊಟ್ಟಿದ್ದು ಅದನ್ನು ವಾಪಸ ಕೊಡಲು ಕೇಳಿದರೆ ಅರೋಪಿತರಾದ ಭೀಮರಾಯ ,ಅವನ ಹೆಂಡತಿ ತಾರಾಬಾಯಿ , ಅವನ ಮಗ ಸತೀಶ ರವರೆಲ್ಲರು ಕೂಡಿ ಪಿರ್ಯಾದಿಗೆ ದಿನಾಂಕ: 02/08/2016 ರಂದು ಮದ್ಯಾಹ್ನ 12-30 ಗಂಟೆಗೆ ದೇವನ ತೆಗನೂರ ಗ್ರಾಮದ ಕರಿಗೂಳಿಶ್ವರ ಗುಡಿಯ ಹತ್ತಿರ ತಡೆದು ನಿಲ್ಲಿಸಿ ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.