POLICE BHAVAN KALABURAGI

POLICE BHAVAN KALABURAGI

16 December 2014

Kalaburagi District Reported Crimes



ಕೊಲೆ ಪ್ರಕರಣ :
ಆಳಂದ ಠಾಣೆ : ಶ್ರೀ ಮಹಾದೇವಪ್ಪಾ ತಂದೆ ವೀರಬಸವಂತರಾವ ಪಾಟೀಲ್ ಸಾ|| ಹತ್ಯಾನ ಗಲ್ಲಿ ಆಳಂದ ರವರು  ದಿನಾಂಕ 16/12/2014 ರಂದು ಬೆಳಿಗ್ಗೆ 11;00 ಗಂಟೆಗೆ ಅಂಗಡಿಯಲ್ಲಿ ಇದ್ದಾಗ ಜನರು ಅಂದಾಡುವುದರಿಂದ ನನಗೆ ಗೊತ್ತಾಗಿದ್ದೆನೆಂದರೆ ಎಪಿಎಮ್‌ಸಿ ಯಾರ್ಡದ ಹಿಂದಿನ ಎಪಿಎಮ್‌ಸಿ ಗೆ ಸಂಭಂಧಿಸಿದ ಜಾಗೆಯಲ್ಲಿ ಸರಕಾರಿ ಜಾಲಿ ಕಂಟಿಯಲ್ಲಿ ಒಂದು ಗಂಡಸು ಮನುಷ್ಯನ ಶವ ಬಿದ್ದಿದ್ದು ಗೊತ್ತಾಗಿ ನಾನು ಹಾಗೂ ನನ್ನಂತೆ ಇತರರು ಹೋಗಿ ನೋಡಲಾಗಿ ಎಪಿಎಮ್‌ಸಿ ಯಾರ್ಡದಿಂದ 150 ಫೀಟ್ ಮೇಲೆ ಪೂರ್ವಕ್ಕೆ ಜಾಲಿ ಕಂಟಿಯಲ್ಲಿ ಅಂಗಾತ ಆಗಿ 35 ರಿಂದ 40 ವರ್ಷದ ವಯಸ್ಸಿನ್ ಅಪರಿಚಿತ ಗಂಡಸು ಮನುಷ್ಯನ ಶವ ಬಿದ್ದದ್ದು ನೋಡಿ ಆಳಂದ ಪೊಲೀಸ್  ಠಾಣೆಗೆ  ದೂರವಾಣಿಯ ಮೂಲಕ ತಿಳಿಸಿದಾಗ ಆಳಂದದ ಪಿಎಸ್‌ಐ ಸಾಹೇಬರು ಹಾಗೂ ಸಿಬ್ಬಂದಿಯವರು ಶವ ಬಿದ್ದ  ಸ್ಥಳಕ್ಕೆ ಬಂದು ನೋಡಿ ಅಲ್ಲಿ ನೆರೆದಿದ್ದ ಜನರ ಸಹಾಯದಿಂದ ಶವ ಕಂಟಿಯಿಂದ ಹೊರಗೆ ತೆಗೆದು ನೋಡಿದ್ದು ಸದರಿಯವನು ಅಂದಾಜು 5 ರಿಂದ 5 ½ ಫೀಟ್ ಎತ್ತರವಿದ್ದು ಆತನ ಕುತ್ತಿಗೆಯ ಬಲಭಾಗದ ಮುಂದುಗಡೆ ಒಂದು ಇಂಚಿನಷ್ಟು ರಕ್ತಗಯವಾಗಿದ್ದು & ಎಡಭಾಗದ ಮುಂದುಗಡೆ 1 ½ ಇಂಚು ಸುತ್ತಳತೆಯ ರಕ್ತಗಾಯವಾಗಿದ್ದು ಅದರಿಂದ ರಕ್ತ ಒಂದೆ ಸಮನೆ ಸೋರುತ್ತಿದ್ದು ಹಾಗೂ ಕುತ್ತಿಗೆ ಮೇಲ್ಭಾಗದಲ್ಲಿ 1 ಇಂಚು ಉದ್ದ ಕೊಯ್ದಂತೆ ಗಾಯವಾಗಿದ್ದು ಎಡಗಣ್ಣಿನ ಕೆಳಗೆ ಮೂಗಿನ ಪಕ್ಕ ಹಾಗೂ ಬಾಯಿಯ ಎಡಭಾಗದಲ್ಲಿ ತರಚಿದ ಗಾಯವಾಗಿದ್ದು ಹಾಗೂ ಆತನ ಶರ್ಟ ಹಾಗೂ ಬನಿಯನಗಳಿಗೆ ರಕ್ತ ಆಗಿದ್ದು ಆತನ ಪ್ಯಾಂಟ ಸರಿಸಿ ನೋಡಲು ಅವನ ಶಿಶ್ನದ ಜೋತೆಗೆ ಎರಡು ತೊರಡಿನ ಬಿಜಗಳು ತೊಗಲು ಸುಲಿದು ಕೊಯ್ದಂತೆ ಆಗಿ ಜೋತು ಬಿದ್ದು ರಕ್ತಗಾಯವಾಗಿರುತ್ತದೆ, ಶವದ ಬಲಗಾಲಿನ ಎರಡನೆ ಬೆರಳು ಒಂದಿಚಿನಷ್ಟು ಮೊಂಡಾಗಿದೆ, ಎಡಗೈಯಲ್ಲಿ ಒಂದು ಹೆಚ್‌ಎಮ್‌ಟಿ ಕೈ ಗಡಿಯಾರ (ಗೋಲ್ಡನ್ ಕಲರ್) ಇದೆ, ಸದರಿ ಶವವು ಸಧೃಡ ಮೈಕಟ್ಟು ಹೋದಿದ್ದು ಸಾಧಾರಣ ಗಪ್ಪು ದುಂಡು ಮುಖ ತಲೆಯ ಮೇಲೆ 2 ಇಂಚು ಕಪ್ಪು ಕೂದಲು ಹೊಂದಿದವನಿರುತ್ತಾನೆ,ಸದರಿಯವನಿಗೆ ಯಾವುದೋ ದುರುದ್ದೇಶದಿಂದ ಎಲ್ಲಿಯೋ ಕೊಲೆ ಮಾಡಿ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಸದರಿ ಸ್ಥಳದಲ್ಲಿ ತಂದು ಶವ ಎಸೆದು ಹೋದಂತೆ ಕಂಡು ಬಂದಿರುತ್ತದೆ, ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳವು ಪ್ರಕರಣಗಳು :
ಜೇವರ್ಗಿ ಠಾಣೆ : ದಿನಾಂಕ 15.12.2014 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 16.12.2014 ರ ಮುಂಜಾನೆ ೦5:00 ಗಂಟೆಯ ಅವಧಿಯ ಮಧ್ಯದಲ್ಲಿ ಯಾರೋ ಅಪರಿಚಿತ ಕಳ್ಳರು ಜೇವರ್ಗಿ ಪಟ್ಟಣದ ಬಜಾರ್‌ ರೋಡಿನಲ್ಲಿ ಇರುವ ಫಿರ್ಯಾದಿಯ ಶ್ರೀ. ಬಿ.ಎಸ್ ರಾಮಪೂರ್ ಕಿರಾಣ ಅಂಗಡಿ ಮತ್ತು ವಿಜಯಲಕ್ಷ್ಮಿ ಜ್ಯುವೇಲರ್ಸ ಅಂಗಡಿಯ ಸಟರ್ ನ್ನು ಮೇಲೆ ಎತ್ತಿ ಒಳಗೆ ಪ್ರವೇಶ ಮಾಡಿ ಅಂಗಡಿಗಳಲ್ಲಿದ್ದ ನಗದು ಹಣ ಮತ್ತು ಹಳೆಯ ಬೆಳ್ಳೀಯ ಆಭರಣಗಳು ಸೇರಿ ಒಟ್ಟು ಅ.ಕಿ 8.000/- ರೂ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಬಸವರಾಜ ತಂದೆ ಶರಣಪ್ಪ ರಾಮಪೂರ ಲಕ್ಕಪ್ಪ ಲೇಔಟ್‌ ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಜೇವರ್ಗಿ ಠಾಣೆ : ದಿನಾಂಕ 15.12.2014 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 16.12.2014 ರ ಮುಂಜಾನೆ ೦5:00 ಗಂಟೆಯ ಅವಧಿಯ ಮಧ್ಯದಲ್ಲಿ ಯಾರೋ ಅಪರಿಚಿತ ಕಳ್ಳರು ಜೇವರ್ಗಿ ಪಟ್ಟಣದ ಬಜಾರ್‌ ರೋಡಿನಲ್ಲಿ ಇರುವ ಫಿರ್ಯಾದಿಯ ಶ್ರೀ. ಸಿದ್ದೆಶ್ವರ ಜ್ಯುವೇಲರ್ಸ ಅಂಗಡಿಯ ಸಟರ್ ನ್ನು ಮೇಲೆ ಎತ್ತಿ ಒಳಗೆ ಪ್ರವೇಶ ಮಾಡಿ ಅಂಗಡಿಯಲ್ಲಿದ್ದ ಹಳೆಯ ಬೆಳ್ಳೀಯ ಆಭರಣಗಳು ಒಟ್ಟು 1 ಕೇಜಿ ಅಂ.ಕಿ 19.000/- ರೂ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಮಹೇಶ ತಂದೆ ರಾಮಚಂದ್ರ ಪತ್ತಾರ್ ಸಾ|| ಲಕ್ಷ್ಮಿ ಚೌಕ್‌ ಜೇವರ್ಗೀ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಮಾಹಾಗಾಂವ ಠಾಣೆ : ದಿನಾಂಕ 15-12-2014 ರಂದು ನಾಗೂರ ಗ್ರಾಮದ ಹಳೆ ಕ್ವಾಟರ್ಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆಸುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಮಾಹಾಗಾಂವ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಒಬ್ಬನನ್ನು ಹಿಡಿದು ವಿಚಾರಿಸಲು ಅವನ ಹೆಸರು ನಾಗಯ್ಯಾ ತಂದೆ ಶರಣಯ್ಯಾ ಮಠಪತಿ ಸಾ: ನಾಗೂರ ಅಂತಾ ತಿಳಿಸಿದ್ದು ಸದರಿಯವನ ವಶದಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 350/- ಮತ್ತು ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿ ಹಾಗು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಮಾಹಾಗಾಂವ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ದಿನಾಂಕ : 14-12-14 ರಂದು ರಾತ್ರಿ ಶ್ರೀ ಮಹಮ್ಮದ ನೂರುದ್ದೀನ ತಂದೆ ಮಹ್ಮದ ಖುದ್ಧುಸ ಸಾ : ಬಂದೇನವಾಜ ಮಸೀದಿ ಹತ್ತಿರ ಮಿಲತ ನಗರ ಕಲಬುರಗಿ ರವರು ನ್ನ ಗೆಳೆಯ ಸೈಯ್ಯದ ಆಬೇದ ಹುಸೇನ ಹಾಗೂ ಮಹ್ಮದ ಅಬು ಬಕರ ರವರಿಗೆ ಇನ್ನೊಬ್ಬ ನನ್ನ ಗೆಳೆಯನಾದ ಸೈಯ್ಯದ ಹಬಿಬೋದ್ದಿನ ರವರು ಕುಡಿಕೊಂಡು ಕಾರ ನಂ. ನಂ.ಕೆಎ-32 ಎಂ-6283 ನೇದ್ದರಲ್ಲಿ ಹೈದ್ರಾಬಾದಗೆ ಕೆಲಸದ ನಿಮಿತ್ಯ ಕಾರಿನಲ್ಲಿ ಹೊರಟು ಕಾರನ್ನು ಮಹ್ಮದ ಅಬು ಬಕರ ಇತನೂ ಚಲಾಯಿಸುತ್ತಿದ್ದು ಇಂದು ಬೆಳಗ್ಗಿನ ಜಾವಕ್ಕೆ ಹೈದ್ರಾಬಾದಕ್ಕೆ ತಲುಪಿ ಕೆಲಸ ಮುಗಿಸಿಕೊಂಡು ಅದೇ ಕಾರಿನಲ್ಲಿ ವಾಪಸ್ಸ ಬರುವ ಸಮಯದಲ್ಲಿಯೂ ಸಹ ಮಹ್ಮದ ಅಬು ಬಕರ ಇತನೆ ಕಾರ ನಡೆಸುತ್ತಿದ್ದು ಕಲಬುರಗಿ-ಸೇಡಂ ರಾಜ್ಯ ಹೆದ್ದಾರಿಯಿಂದ ಮಾಡಬೂಳ ಕ್ರಾಸ ಬರುತ್ತಿದಂತೆ ಮಹ್ಮದ ಅಬು ಬಕರ ಇತನೂ ತನ್ನ ಕಾರನ್ನು ಅತಿವೇಗದಿಂದ ಚಲಾಯಿಸುತ್ತಿದ್ದು  ಒಮ್ಮೇಲೆ ಕಾರಿನ ಮುಂಭಾಗದ ಟೈರಗಳು ಒಡೆದು ಕಾರು 2-3 ಬಾರಿ ಪಲ್ಡಿಯಾಗಿದ್ದು ನಾವುಗಳು ಕಾರಿನಿಂದ ಕೆಳಗೆ ಬಿದ್ದೇವು. ಸೈಯ್ಯದ ಆಬೇದ ಹುಸೇನ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮರಣ ಹೊಂದಿದ್ದು, ನನಗೆ  ಎಡ ಹುಬ್ಬಿನ ಹತ್ತಿರ ,ಎಡ ಗಣ್ಣಿನ ಹತ್ತಿರ ರಕ್ತಗಾಯವಾಗಿ ಬೆನ್ನಿನ ಹಿಂದೆ ಗುಪ್ತಗಾಯವಾಗಿ ಅಲಲ್ಲಿ ಮೈ ಮೇಲೆ ರಕ್ತಗಾಯವಾಗಿದ್ದು ಕಾರ ಚಾಲಕ ಮಹ್ಮದ ಅಬು ಬಕರ ಇತನಿಗೂ ಸಹ ಗಾಯವಾಗಿದ್ದು ಕಾರ ಚಾಲಕನು ಅಲ್ಲಿಂದ ಹೇದರಿ ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 15-12-2014 ರಂದು ಸಾಯಂಕಾಲ ಮಾನ್ಯ ಡಿ,ಎಸ,.ಪಿ (ಬಿ) ಉಪ ವಿಭಾಗ ಹಾಗೂ ಶ್ರೀ ಆನಂದರಾವ ಪಿ,ಎಸ,ಐ ಟ್ರಾಫೀಕ ರವರ ಜೋತೆಗೆ ಎಸ.ವಿ.ಪಿ. ಸರ್ಕಲ್ ಹತ್ತೀರ ವಾಹನ ಪರಿಶೀಲನೆ ಮಾಡಿ ದಂಡ ವಿದಿಸುತ್ತಿದ್ದಾಗ ಆಟೋರೀಕ್ಷಾ ನಂಬರ ಕೆಎ-32-ಬಿ-4713 ನೇದ್ದರ ಚಾಲಕನಾದ ಮುಸ್ತಫ ಇತನು ತನ್ನ ಆಟೋರಿಕ್ಷಾವನ್ನು   ಕೇಂದ್ರ ಬಸ ನಿಲ್ದಾಣ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬರುತ್ತಿದ್ದಾಗ  ಫಿರ್ಯಾದಿಯು ಸದರಿ ಆಟೋರಿಕ್ಷಾ ಚಾಲಕನಿಗೆ ಆಟೋ ನಿಲ್ಲುಸುವಂತೆ  ಕೈ ಸನ್ನೇ ಮಾಡಿದರು ಆಟೋವನ್ನುನಿಲ್ಲಿಸಿದೆ ಅದೇ ರೀತಿಯಲ್ಲಿ  ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಅಪಘಾತಪಡಿಸಿ ಗಾಯಗೋಳಿಸಿರುತ್ತಾರೆ ಅಂತಾ ಶ್ರೀ ಗಂಗಾಧರ ತಂದೆ ಗುಂಡಪ್ಪಾ ಬೆಳಮಗಿ ಸಾ: ಡಿ.ಎಸ.ಪಿ. (ಬಿ) ಉಪ ವಿಭಾಗ ಕಲುಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ನಿಂಬರ್ಗಾ ಠಾಣೆ : ಶ್ರೀ ಮಲ್ಲಣ್ಣಾ ತಂದೆ ಗುರಪ್ಪ ಆಳಂದ ಸಾ|| ಮಾಡಿಯಾಳ ಇವರ ಮಗನ ಹೊಲ ಸರ್ವೆ ನಂ. 174 ಇದ್ದು ಸದರಿ ಜಮೀನಲ್ಲಿ ಜೋಳದ ಬೆಳೆ ಇದ್ದು ಈ ಹೊಲದ ಬಾಜು ಹಣಮಂತ ತಂದೆ ಶಿವರಾಯ ಚಿಂಚೋಳಿ ಇವರ ಹೊಲ ಇದ್ದು ಸದರಿ ಹೊಲದಲ್ಲಿದ್ದ ಕಬ್ಬು ಕಡಿಯಲು ಬಂದವರು ಫಿರ್ಯಾದಿಯ ಹೊಲದಲ್ಲಿ ಇಳಿದುಕೊಂಡಿದ್ದು ಹಣಮಂತನಿಗೆ ನನ್ನ ಜೋಳದ ಬೆಳೆ ನಾಶವಾಗುತ್ತದೆ ಬೇರೆ ಕಡೆ ಇಳಿಸು ಅಂತ ಹೇಳಿದ್ದಕ್ಕೆ ದಿನಾಂಕ 14/12/2014 ರಂದು ಬೆಳಿಗ್ಗೆ 0800 ಗಂಟೆಗೆ ಹಣಮಂತನ ಅಣ್ಣನಾದ ಅಮೃತ ತಂದೆ ಶಿವರಾಯ ಚಿಂಚೋಳಿ ಇವನು ಫಿರ್ಯಾದಿಯ ಮಗನ ಹೊಲಕ್ಕೆ ನುಗ್ಗಿ ಫಿರ್ಯಾದಿಗೆ ಕೈಯಿಂದ ತಡೆದು ಏ ರಂಡಿ ಮಗನೆ ನಿನಗೆ ಜೀವ ಸಹಿತ ಇಡಂಗಿಲ್ಲ ಅಂತ ಬೈದು ಕೈಯಿಂದ ಕಪಾಳ ಮೇಲೆ ಹೊಡೆದನು. ಕಾರಣ ತಡೆದು ಹೊಲಸು ಬೈದು ಜೀವ ಹಾಕಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ,