POLICE BHAVAN KALABURAGI

POLICE BHAVAN KALABURAGI

07 September 2020

KALABURAGI DISTRICT REPORTED CRIMES

 ಮೋಸ ವಂಚನೆ:-

ಅಫಜಲಪೂರ ಪೊಲೀಸ ಠಾಣೆ 

        ದಿನಾಂಕ: 06-09-2020 ರಂದು 9-00 ಪಿಎಮ್ ಕ್ಕೆ ಶ್ರೀ ಶಿವಾನಂದ ತಂದೆ ಕಾಶಿರಾಯ ಬೋರುಟಿ (ಕಳಸಗೊಂಡ) ಸಾ|| ಮಾಶಾಳ ಇವರು ಠಾಣೆಗೆ ಹಾಜರಾಗಿ ಟೈಪ ಮಾಡಿದ ಅರ್ಜಿಸಲ್ಲಿಸಿದ್ದು ಸಾರಾಂಶವೇನೆಂದರೆ ನಾನು ಅಂದರೆ ಶ್ರೀ ಶಿವಾನಂದ ತಂದೆ ಕಾಶಿರಾಯ ಬೋರುಟಿ (ಕಳಸಗೊಂಡ) ವಯ|| 32 ವರ್ಷ ಜಾ|| ಕುಡ ಒಕ್ಕಲಿಗ ಉ|| ಒಕ್ಕಲುತನ ಸಾ|| ಮಾಶಾಳ ತಾ|| ಅಫಜಲಪೂರ ಆಗಿದ್ದು, ಮಾಶಾಳ ಸೀಮಾಂತರದಲ್ಲಿ ನನ್ನ ಹೆಸರಿಗೆ 520/2 ರಲ್ಲಿ 4 ಎಕರೆ 24 ಗುಂಟೆ ಹಾಗೂ 4 ಎಕರೆ ಒಟ್ಟು 8 ಎಕರೆ ಕೃಷಿ ಭೂಮಿ ಇರುತ್ತದೆ. ಸದರಿ ಜಮೀನಿನ ಮೇಲೆ ನನ್ನ ತಂದೆಯವರಾದ ಕಾಶೀರಾಯ ಇವರು ದಿನಾಂಕ 03-03-2010 ರಂದು ನಮ್ಮೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಮಾಶಾಳ ನೇದ್ದರಲ್ಲಿ 12,100 ರೂ ಕೃಷಿ ಸಾಲ ಪಡೆದುಕೊಂಡಿರುತ್ತಾರೆ. ಅದರಂತೆ ನನ್ನ ತಂದೆಯವರು ದಿನಾಂಕ 25-04-2015 ರಂದು ಅಕಾಲಿಕ ಮರಣದಿಂದ ಮೃತ ಪಟ್ಟಿರುತ್ತಾರೆ. ಆದರೆ ಕೃಷಿ ಫತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ  ಅಧಿಕಾರಿಗಳಾದ ವಿಜಯಕುಮಾರ ತಂದೆ ಸೂರ್ಯಕಾಂತ ಪ್ರಧಾನಿ ಇವರು ನನಗೆ ಗೊತ್ತಿಲ್ಲದ ಹಾಗೆ ನನ್ನ ತಂದೆಯ ಖೊಟ್ಟಿ ಸಹಿ ಮಾಡಿ, ಈ ಹಿಂದೆ ಇದ್ದ ನಮ್ಮ ಸಾಲವನ್ನು ಮರುಪಾವತಿ ಮಾಡಿ, ನಂತರ ದಿನಾಂಕ 01-07-2016 ರಂದು ನನ್ನ ತಂದೆಯ ಹೆಸರಿನಲ್ಲಿದ್ದ ಜಮೀನಿನ ಮೇಲೆ 20,500/- ರೂ ಸಾಲ ಹಾಕಿಕೊಂಡು, ಸದರಿ ಸಾಲದ ಹಣವನ್ನು ನನ್ನ ತಂದೆಯ ಹೆಸರಿನಲ್ಲಿ ಡಿಸಿಸಿ ಬ್ಯಾಂಕ ಅಫಜಲಪೂರ ಶಾಖೆಯಲ್ಲಿ ಖಾತೆ ಸಂಖ್ಯೆ 198000668902 ಖಾತೆಯನ್ನು ತಗೆದಿದ್ದು, ಸದರಿ ಖಾತೆಗೆ ದಿನಾಂಕ 06-06-2018 ರಂದು 20,090/- ರೂ ಸಾಲದ ಹಣ ಜಮಾ ಆಗಿರುತ್ತದೆ. ನನ್ನ ತಂದೆಯು ಮೃತ ಪಟ್ಟ ನಂತರ ನನ್ನ ತಂದೆಯ ಹೆಸರಿನಲ್ಲಿದ್ದ ಸಾಲವನ್ನು ಅಲ್ಲಿಗೆ ಮುಕ್ತಾಯ ಮಾಡದೆ, ಅವರ ಖೋಟ್ಟಿ ಸಹಿಗಳನ್ನು ಮಾಡಿ, ಖೋಟ್ಟಿ ದಾಖಲಾತಿಗಳನ್ನು ಸೃಷ್ಟಿಸಿ ಡಿಸಿಸಿ ಬ್ಯಾಂಕ ಅಫಜಲಪೂರದಲ್ಲಿ ಖಾತೆಯನ್ನು ತೆರೆದು, ನನ್ನ ತಂದೆಯವರು ಮೃತ ಪಟ್ಟದ್ದರು ಸಹ ಸಾಲವನ್ನು ಮರುಪಾವತಿ ಮಾಡಿ, ಸಾಲವನ್ನು ತನ್ನ ಸ್ವಂತ ಲಾಭಕ್ಕಾಗಿ ಮುಂದುವರೆಸಿಕೊಂಡು ಬಂದಿರುತ್ತಾನೆ. ನಮ್ಮಂತೆ ನಮ್ಮೂರಿನ 1) ಶಿವಶರಣಪ್ಪ ತಂದೆ ಮಲ್ಲಪ್ಪ ಹಿಪ್ಪರಗಿ ಇವರ ಹೊಲ ಸವರ್ೆ ನಂ 552/1 ರ 4 ಎಕರೆ 4 ಗುಂಟೆ ಜಮೀನಿನ ಮೇಲೆ ಸದರಿ ಶಿವಶರಣಪ್ಪ ಇವರಿಗೆ 02 ಬೇಳೆ ಸಾಲ ಮಂಜೂರಾತಿ ಮಾಡಿ, ಸದರಿಯವರಿಗೆ ಗೊತ್ತಿಲ್ಲದ ಹಾಗೆ ಡಿಸಿಸಿ ಬ್ಯಾಂಕ ಅಫಜಲಪೂರದಲ್ಲಿ 03 ಖಾತೆಗಳನ್ನು ತೆರೆದು ವಿವಿಧ ಹಂತಗಳಲ್ಲಿ ಸುಮಾರು 21,000/- ರೂ ಹಣವನ್ನು ತನ್ನ ಸ್ವಂತಕ್ಕೆ ಬಳಸಿಕೊಂಡಿರುತ್ತಾನೆ.  2) ಹಣಮಂತ ತಂದೆ ದ್ಯಾವಪ್ಪ ಜವಳಗಿ ಇವರ ಹೊಲ ಸವರ್ೆ ನಂ 701 ನೇದ್ದರ 5 ಎಕರೆ ಜಮೀನಿನ ಮೇಲೆ ಇದ್ದ 10,000/- ರೂ ಸಾಲವನ್ನು ಹಣಮಂತ ಇವರು ಮರುಪಾವತಿ ಮಾಡಿದ್ದು, ನಂತರ ವಿಜಯಕುಮಾರ ಇವರು ಹಣಮಂತ ಇವರಿಗೆ ಗೊತ್ತಿಲ್ಲದ ಹಾಗೆ ಖೊಟ್ಟಿ ದಾಖಲೆಗಳನ್ನು ತಯಾರಿಸಿ ಪುನ ಸದರಿ ಜಮೀನಿನ ಮೇಲೆ 11,250/- ರೂ ಸಾಲವನ್ನು ಪಡೆದುಕೊಂಡು, ಡಿಸಿಸಿ ಬ್ಯಾಂಕ ಅಫಜಲಪೂರದಲ್ಲಿಂದ ಸದರಿ ಹಣವನ್ನು ತಾನೆ ಬಿಡಿಸಿಕೊಂಡು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡಿರುತ್ತಾನೆ. 3) ಮಾಹಾದೇವಯ್ಯ ತಂದೆ ಮಡಿವಾಳಯ್ಯ ದಿಕ್ಸಂಗಿ ಇವರ ಹೊಲ ಸರ್ವೇ ನಂ 17 ನೇದ್ದರ 4 ಎಕರೆ 38 ಗುಂಟೆ ಜಮೀನಿನ ಮೇಲೆ ಎರಡು ಬಾರಿ ಸಾಲ ಪಡೆದುಕೊಂಡಿದ್ದು, ಒಂದು ಬಾರಿ ಸಾಮಾನ್ಯ ವರ್ಗದಲ್ಲಿ ಹಾಗೂ ಇನ್ನೊಂದು ಭಾರಿ ಪರಿಶೀಷ್ಟ ಜಾತಿಯೆಂದು ನಮುದು ಮಾಡಿ 17000/- ರೂ ಸಾಲ ಪಡೆದುಕೊಂಡಿರುತ್ತಾನೆ. 4) ಮಲ್ಲಪ್ಪ ತಂದೆ ನಾಗಪ್ಪ ಗುಜ್ಜಾ ಇವರ ಹೆಸರಿನಲ್ಲಿರುವ ಹೊಲ ಸರ್ವೆ ನಂ 718/4 ರಲ್ಲಿ 5 ಎಕರೆ ಕೃಷಿ ಭೂಮಿ ಮೇಲೆ ಮಲ್ಲಪ್ಪ ಇವರಿಗೆ ಗೊತ್ತಿಲ್ಲದ ಹಾಗೆ ಖೊಟ್ಟಿ ಸಹಿ ಮಾಡಿ ಸದರಿ ಜಮೀನಿನ ಮೇಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಮಾಶಾಳ ದಲ್ಲಿ 42,000/- ರೂ ಸಾಲ ಹಾಕಿಕೊಂಡು, ಹಣವನ್ನು ತಾನೆ ಪಡೆದುಕೊಂಡು ಮೋಸ ಮಾಡಿರುತ್ತಾನೆ. 5) ಬಸಣ್ಣ ತಂದೆ ನಾಗಪ್ಪ ಬರಮಚಿ ಇವರು 2009 ನೇ ಇಸ್ವೀಯಲ್ಲಿ ಮೃತಪಟ್ಟಿದ್ದು, ಸದರಿ ಬಸಣ್ಣ ಇವರ ಹೆಸರಿನಲ್ಲಿ 2016 ನೇ ಸಾಲಿನಲ್ಲಿ 11,550/- ರೂ ಸಾಲವನ್ನು ಪಡೆದುಕೊಂಡು ತನ್ನ ಸ್ವಂತಕ್ಕೆ ಬಳಸಿಕೊಂಡಿರುತ್ತಾನೆ. ಈ ಎಲ್ಲಾ ವಿಷಯವು ನಾನು ಮತ್ತು ಶಿವಶರಣಪ್ಪ ಹಿಪ್ಪರಗಿ, ಹಣಮಂತ ಜವಳಗಿ, ಮಹಾದೇವಯ್ಯ ದಿಕ್ಸಂಗಿ, ಮಲ್ಲಪ್ಪಾ ಗುಜ್ಜಾ, ಚೌಡಪ್ಪ ಬರಮಚಿ ಎಲ್ಲರೂ ಸೋಸೈಟಿಗೆ ವಿಚಾರಣೆ ಮಾಡಲು ಹೋದಾಗ ಈ ವಿಷಯವು ನಮಗೆ ಗೊತ್ತಾಗಿ ನಾವೆಲ್ಲರೂ ಕೂಡಿ ದೂರು ನಿಡಲು ಠಾಣೆಗೆ ಬಂದಿರುತ್ತೇವೆ. ಸದರಿ ವಿಜಯಕುಮಾರ ತಂದೆ ಸೂರ್ಯಕಾಂತ ಪ್ರಧಾನಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಕೃಷಿ ಫತ್ತಿನ ಸಹಕಾರ ಸಂಘ ಮಾಶಾಳ ಇವರು ನನಗೆ ಮತ್ತು ನಮ್ಮೂರಿನ ಇನ್ನು ಅನೇಕ ಜನ ರೈತರ ಜಮೀನಿನ ಮೇಲೆ ಸಾಲವನ್ನು ಎತ್ತಿ ಹಣ ಕೊಳ್ಳೆ ಹೊಡೆದಿರುತ್ತಾನೆ.  ಕಾರಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ) ಮಾಶಾಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ವಿಜಯಕುಮಾರ ತಂದೆ ಸೂರ್ಯಕಾಂತ ಪ್ರಧಾನಿ ಸಾ|| ಮಾಶಾಳ ಇವರು ನಕಲಿ ದಾಖಲೆಗಳನ್ನು ಸೃಷ್ಟಿಸಿ, ನನ್ನ ಖೋಟ್ಟಿ ಸಹಿ ಮಾಡಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರ ಹೆಸರಿನಲ್ಲಿ ಬೇಳೆ ಸಾಲ ಪಡೆದುಕೊಂಡು ಹಣವನ್ನು ತನ್ನ ಸ್ವಂತಕ್ಕೆ ಉಪಯೋಗಿಸಿ ಹಾಗೂ ಮನ್ನಾ ಆದ ಸಾಲದ ಹಣವನ್ನು ಸಹ ನಮಗೆ ಮರಳಿಸದೆ ನಮಗೂ ಮತ್ತು ಸರ್ಕಾರಕ್ಕೂ ಮೋಸ ಮಾಡಿರುತ್ತಾನೆ. ಇವರ ಮೇಲೆ ಹಾಗೂ ಸದರಿ ಅವ್ಯೆವಹಾರದಲ್ಲಿ ಇನ್ನು ಯಾರು ಯಾರು ಬಾಗಿಯಾಗಿದ್ದಾರೆ ಎಂಬ ಬಗ್ಗೆ ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕು ಅಂತಾ ಕೊಟ್ಟ ದೂರಿನ ಸಾರಾಂಶದ ಮೇಲಿಂದ  ಅಫಜಲಪೂರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ.