POLICE BHAVAN KALABURAGI

POLICE BHAVAN KALABURAGI

10 January 2017

Kalaburagi District Reported Crimes

ಕೊಲೆ ಪ್ರಕರಣ :
ಮುಧೋಳ ಠಾಣೆ : ಶ್ರೀ ದೊಡ್ಡ ಹುಸೇನಪ್ಪ ತಂದೆ ಯಂಕಪ್ಪಾ ಬ್ಯಾಡರ್ ಸಾ: ಕೋನಾಪೂರ ತಾ: ಸೇಡಂ ಇವರ ತಮ್ಮ ಹುಸೇನಪ್ಪ ಇತನಿಗೆ ಈಗ 3 ವರ್ಷಗಳ ಹಿಂದೆ ಶಾಂತಮ್ಮ ಇವಳೊಂದಿಗೆ ಮದುವೆ ಮಾಡಿದ್ದು, ಇತನಿಗೆ 10 ತಿಂಗಳ ಒಂದು ಗಂಡು ಇರುತ್ತದೆ. ನಮ್ಮ ತಮ್ಮ ಸಣ್ಣ ಹುಸೇನಪ್ಪ ಇತನು ನಮ್ಮೂರ ಈರಪ್ಪ ತಂದೆ ನರಸಪ್ಪ ಮದ್ದೇಲಬೀಡ ಇತನ ಹೆಂಡತಿಯಾದ ಮೊಗಲಮ್ಮ ಇವಳೊಂದಿಗೆ ಅಕ್ರಮ ಸಂಬಂದ ಇಟ್ಟಿಕೊಂಡಿದ್ದು, ಈ ವಿಷಯವು ಈಗ ಕೆಲ ದಿನಗಳ ಹಿಂದೆ ಮೊಗಲಮ್ಮನ ಗಂಡನಾದ ಈರಪ್ಪನಿಗೆ ತಿಳಿದಿದ್ದು ದಿನಾಂಕ: 04-01-2017 ರ ಬುಧವಾರದಂದು ಮುಂಜಾನೆ ನಮ್ಮ ತಮ್ಮನಾದ ಸಣ್ಣ ಹುಸೇನಪ್ಪ ತಂದೆ ಯಂಕಪ್ಪ ಇತನು ಮನೆಯಿಂದ ಹೊರಗಡೆ ಹೋಗಿದ್ದು ರಾತ್ರಿಯಾದರು ಮನೆಗೆ ಬಂದಿರುವದಿಲ್ಲಾ. ಆಗ ನಾನು ಮತ್ತು ನಮ್ಮ ತಂದೆ ಯಂಕಪ್ಪ ಹಾಗು ತಾಯಿ ಕಾಶಮ್ಮ ಮತ್ತು ನಮ್ಮ ತಮ್ಮನ ಹೆಂಡತಿಯಾದ ಶಾಂತಮ್ಮ ಎಲ್ಲರೂ ಕೂಡಿ ನಮ್ಮ ತಮ್ಮನಿಗೆ ಊರಲ್ಲಿ ಹುಡುಕಾಡುತ್ತಿದ್ದಾಗ ತಿಳಿದು ಬಂದಿದೆನೆಂದರೆ, ನಮ್ಮ ತಮ್ಮ ಅಲ್ಲೇ ಊರ ಹತ್ತಿರ ಇರುವ ದತ್ತು ಇಳಿಗೇರ ಇವರ ಶೆಂಗಾದ ಹೊಲದಲ್ಲಿ ಬಿದ್ದಿರುತ್ತಾನೆ ಅಂತಾ ನಮ್ಮ ತಮ್ಮನ ಜೋತೆ ಅಕ್ರಮ ಸಂಬಂದ ಹೊಂದಿರುವ ಮೊಗಲಮ್ಮ ಇವಳು ಊರಲ್ಲಿ ಯಾಮರೆಡ್ಡಿ ಕಬ್ಬಲಿಗೇರ ಇತನ ಮುಂದೆ ತಿಳಿಸಿದ ಬಗ್ಗೆ ಗೊತ್ತಾಗಿ ನಾವು ರಾತ್ರಿ ಸದರಿ ದತ್ತು ಇಳಿಗೇರ ಇವರ ಹೊಲದಲ್ಲಿ ಹೋಗಿ ನೋಡಲಾಗಿ ಅಲ್ಲಿ ನಮ್ಮ ತಮ್ಮ ಕಾಣಿಸಲಿಲ್ಲಾ. ನಂತರ ನಾವು ರಾತ್ರಿ 08-09 ಗಂಟೆ ಸುಮಾರಿಗೆ ಸದರಿ ಮೊಗಲಮ್ಮ ಇವಳ ಮನೆಗೆ ಹೋಗಿ ವಿಚಾರಿಸಲು ಅವಳು ನಾನು ನಿಮ್ಮ ತಮ್ಮನಿಗೆ ನೋಡಿರುವದಿಲ್ಲಾ ಅಂತಾ ಹೇಳಿ ಮನೆಯಲ್ಲಿ ಹೋದಳು, ನಾವು ರಾತ್ರಿ ಎಲ್ಲಾ ನಮ್ಮೂರ ಸೂತ್ತ ಮುತ್ತಲ ಹೋಲಗಳಲ್ಲಿ ತಿರುಗಾಡಿ ನಮ್ಮ ತಮ್ಮನಿಗೆ ಹೂಡುಕಾಡಲು ಸಿಕ್ಕಿರುವದಿಲ್ಲಾ. ನಂತರ ನಾವು ನಮ್ಮ ಸಂಬಂದಿಕರಲ್ಲಿ ಎಲ್ಲಾ ಕಡೆ ಹುಡುಕಾಡಿದರು ನಮ್ಮ ತಮ್ಮ ಸಿಕ್ಕಿರುವದಿಲ್ಲಾ.  ದಿನಾಂಕ: 09-01-2017 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾನು ನಮ್ಮೂರ ನಮ್ಮ ಮಾವನಾದ ಶ್ರೀನಿವಾಸ ತಂದೆ ಲಕ್ಷ್ಮಣ ಬ್ಯಾಡರ್ ಇವರ ಅಂಗಡಿಯ ಹತ್ತಿರ ಇದ್ದಾಗ ನಮ್ಮೂರ ರಾಜಪ್ಪ ತಂದೆ ರಾಮಪ್ಪ ಕಬ್ಬಲಿಗೇರ ಇತನು ನಮ್ಮ ಮಾವನದ ಶ್ರೀನಿವಾಸ ಇತನಿಗೆ ಫೋನ ಮಾಡಿ ನಿಮ್ಮ ಅಳಿಯ ಸಣ್ಣ ಹುಸೇನಪ್ಪ ಇತನು ನಮ್ಮೂರ ರಾಮದೇವರ ಹಳ್ಳದಲ್ಲಿ ಸತ್ತು ಬಿದ್ದಿರುತ್ತಾನೆ. ಅಂತಾ ತಿಳಿಸಿದ್ದು ತಕ್ಷಣ ನಾನು ಹಾಗು ನಮ್ಮ ತಂದೆ-ತಾಯಿ ಇತರೆ ಎಲ್ಲರೂ ಕೂಡಿ ನಮ್ಮೂರ ಶಿವಪ್ಪ ಅಂಬಟ್ಟಿ ಇವರ ಹೊಲದ ಹತ್ತಿರ ಇರುವ ಸಣ್ಣದಾದ ರಾಮದೇವರ ಹಳ್ಳದ ಹತ್ತಿರ ಹೋಗಿ ನೋಡಲಾಗಿ ಅಲ್ಲಿ ಹಳ್ಳದಲ್ಲಿ  ನಮ್ಮ ತಮ್ಮನ ಶವ ಬಿದ್ದು ಸದರಿ ಹಳ್ಳದಲ್ಲಿ ಸುಮಾರು 1 ಅಡಿಯಷ್ಟು ನೀರಿದ್ದು ಹೇಣವು ಅಂಗಾತವಾಗಿ ತೆಲುತ್ತಿದ್ದು, ಕೈಯು ದಡದ ಮೇಲೆ ಬಿದಿದ್ದು ಇರುತ್ತದೆ. ಸದರಿ ನಮ್ಮ ತಮ್ಮನ ಮೃತ ದೇಹವು ಉಬ್ಬಿ ಪೂರ್ತಿಯಾಗಿ ಕೊಳೆತು ವಾಸನೆ ಬರುತ್ತಿದ್ದು, ಇತನ ಬಾಯಿಯಿಂದ, ಮೂಗಿನಿಂದ ರಕ್ತಬಂದತ್ತೆ ಕಂಡು ಬಂದಿರುತ್ತದೆ.       ನಮ್ಮ ತಮ್ಮ ಸಣ್ಣ ಹುಸೇನಪ್ಪ ತಂದೆ ಯಂಕಪ್ಪ ಇತನು ನಮ್ಮೂರ ಈರಪ್ಪ ಇತನ ಹೆಂಡತಿಯ ಜೋತೆ ಅನೈತಿಕ ಸಂಬಂದವನ್ನು ಹೊಂದಿದ್ದರಿಂದ ನಮ್ಮ ತಮ್ಮನಿಗೆ ಅದೇ ವೈಮನಸ್ಸಿನಿಂದ ಸದರಿ ಈರಪ್ಪ ತಂದೆ ನರಸಪ್ಪ ಮದ್ದೇಲಬೀಡ ಜಾ: ಕಬ್ಬಲಿಗೇರ ಇತನು ಈಗ 3-4 ದಿನಗಳ ಹಿಂದೆ ಯಾವುದೊ ಒಂದು ಬಲವಾದ ವಸ್ತುವಿನಿಂದ ಹೊಡೆದು ಕೊಲೆ ಮಾಡಿ ಹಳ್ಳದ ದಂಡೆಯಲ್ಲಿ ಹಾಕಿದಂತೆ ಕಂಡು ಬಂದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಸೇಡಂ ಠಾಣೆ : ದಿನಾಂಕ: 31-12-2016 ರಂದು ಕೊಂಕನಳ್ಳಿ ಗ್ರಾಮದಲ್ಲಿ ನಮ್ಮ ಅಜ್ಜಿಯು ಮೃತಪಟ್ಟಿದ್ದರಿಂದ ನಾನು ಮತ್ತು ನಮ್ಮ ತಮ್ಮನಾದ ಸುರೇಶ ತಂದೆ ಯಂಕಪ್ಪ ಇಬ್ಬರೂ ಕೂಡಿ ಅಂತ್ಯಸಂಸ್ಕಾರ ಕುರಿತು ಕೊಂಕನಳ್ಳಿ ಗ್ರಾಮಕ್ಕೆ ಹೋಗಿ, ಅಂತ್ಯಸಂಸ್ಕಾರ ಮುಗಿಸಿಕೊಂಡು ನಂತರ ವಾಪಸ್ ಮೊಟಾರು ಸೈಕಲ್ ನಂ ಕೆಎ 32 ಇಸಿ-9720 ನೇದ್ದರ ಮೇಲೆ ಕುಳಿತು ಕಲಬುರಗಿ-ಸೇಡಂ ರೋಡಿನ ಮೇಲೆ ದಿನಾಂಕ 31-12-2016 ರಂದು ಸೇಡಂ ಕಡೆಗೆ ಹೋಗುತ್ತಿರುವಾಗ ನಮ್ಮ ಮೊಟಾರು ಸೈಕಲ್ ಸುರೇಶ ಇತನು ನಡೆಸುತ್ತಿದ್ದನು, ಕೊಂಕನಳ್ಳಿ ಗೇಟ್ ದಾಟಿ ಸ್ವಲ್ಪ ಮುಂದುಗಡೆ ರೋಡಿನ ಮೇಲೆ ಹೊರಟಾಗ ಸೇಡಂ ಕಡೆಯಿಂದ ಒಬ್ಬ ಕಾರ ನಂ ಎಮ್ಎಚ್ 13 ಬಿಎನ್ 8057 ನೇದ್ದರ ಚಾಲಕ ತನ್ನ ಕಾರನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನಮ್ಮ ಮೊಟಾರು ಸೈಕಲಗೆ ಡಿಕ್ಕಿ ಪಡೆಯಿಸಿದನು ಸುರೇಶನಿಗೆ ತಲೆಗೆ ಭಾರಿ ಗಾಯವಾಗಿ ಕಿವಿಗಳಿಂದ ರಕ್ತ ಸೋರುತ್ತಿದ್ದು ಮತ್ತು ಅಲ್ಲಲ್ಲಿ ಮೈಗೆ ಭಾರಿ ರಕ್ತಗಾಯಗಳಾಗಿ ಅಲ್ಲಿಯೇ ಭೇಹೋಶ ಆದನು. ಇದನ್ನು ನೋಡಿ ಕಾರ ಚಾಲಕ ತನ್ನ ಕಾರ ತೆಗೆದುಕೊಂಡು ಅಲ್ಲಿಂದ ಓಡಿ ಹೋದನು. ನಂತರ ನಾವು ಉಪಚಾರ ಕುರಿತು ಇಲ್ಲಿಗೆ ತಂದು ಸೇರಿಕೆ ಮಾಡಿದ್ದು ದಿನಾಂಕ:09-01-2016 ರಂದು ಯುನೈಟೆಡ್ ಆಸ್ಪತ್ರೆ ಕಲಬುರಗಿಯಲ್ಲಿ  ಉಪಚಾರ ಪಡೆಯುತ್ತಿದ್ದ   ಸುರೇಶ ತಂದೆ ಯಂಕಪ್ಪ ಬಡಿಗೇರ, ಸಾ:ಚಿಂತಕುಂಟಾ, ತಾ:ಚಿಂಚೋಳಿ, ಇವರು ಆಸ್ಪತ್ರೆಯಲ್ಲಿ ಉಪಚಾರ ಕಾಲಕ್ಕೆ ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ  ಅಂತಾ ಶ್ರೀ. ಚಂದ್ರಶೇಖರ ತಂದೆ ಯಂಕಪ್ಪ ಬಡಿಗೇರ, ಸಾ:ಚಿಂತಕುಂಟಾ, ತಾ:ಚಿಂಚೋಳಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.